ವಿಶೇಷವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಸಾಧಲಿ ಹೋಬಳಿಯ ಗ್ರಾಮ ಪಂಚಾಯ್ತಿಗಳಿಗೆ ಸಂಬಂಧಿಸಿದಂತೆ.
-ನಾರಾಯಣ ಸ್ವಾಮಿ, ಪ್ರಶಿಕ್ಶಣಾರ್ಥಿ, ಸಮಾಜಕಾರ್ಯ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ.
ಅಧ್ಯಾಯ-೧. ಪ್ರಸ್ತಾವನೆ
ಸರ್ಕಾರದ ಆಡಳಿತದಲ್ಲಿ ಸುಧಾರಣೆ ಅಥವಾ ಆಡಳಿತದಲ್ಲಿ ದಕ್ಷತೆ, ಪಾರದರ್ಶಕತೆ, ಪ್ರಾಮಾಣಿಕತೆ ಮತ್ತು ಸೇವಾ ನಿಷ್ಠೆ ಹೆಚ್ಚಿಸುವುದರ ಜೊತೆಗೆ ನಾಗರಿಕರಿಗೆ ನಿಗದಿತ ಸಮಯದಲ್ಲಿ ನಾಗರಿಕ ಸೇವೆಗಳನ್ನು ಒದಗಿಸಿಕೊಡುವುದಕ್ಕಾಗಿ ರಾಜ್ಯ ಸರ್ಕಾರವು ದಿನಾಂಕ:-೦೨ ಏಪ್ರಿಲ್ ೨೦೧೨ರಂದು ಮಹಾತ್ವಾಕಾಂಷೆಯ ನಾಗರಿಕ ಸೇವಾ ಖಾತರಿ ಕಾಯಿದೆ ರಾಜ್ಯದೆಲ್ಲೆಡೆ ಪ್ರಾಮಾಣಿಕವಾಗಿ ಅನುಷ್ಠಾನಗೊಂಡಲ್ಲಿ ನಾಗರಿಕರ ಜೀವನದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ನಾಂದಿಯಾಗುತ್ತದೆ.
ಕರ್ನಾಟಕ ನಾಗರಿಕ ಸೇವೆಗಳ ಖಾತರಿ ಅಧಿನಿಯಮ-೨೦೧೧, ಇದು ನಾಗರಿಕರಿಗೆ ಮೂಲಭೂತ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ದಕ್ಷತೆ ಪಾರದರ್ಶಕತೆ ಕಾಲಬದ್ದತೆ ಮತ್ತು ಜವಾಬ್ದಾರಿಯನ್ನು ಖಚಿತಪಡಿಸುವ ದೃಡ ಬದ್ದತೆಯನ್ನು ಸೂಚಿಸುತ್ತದೆ. ಈ ಅದ್ಯಯನ ಕೈಗೊಳ್ಳುವಾಗ ಸದರಿ ಕಾಯ್ದೆಯಲ್ಲಿ ೩೦ ಇಲಾಖೆಗಳು ೨೬೫ ಸೇವೆಗಳು ಒಳಪಟ್ಟಿದ್ದು ರಾಜ್ಯದಾದ್ಯಂತ ಈ ಕಾಯಿದೆಯನ್ನು ಸೂಚಿತ ಎಲ್ಲಾ ಇಲಾಖೆಗಳಲ್ಲಿಯು ಜಾರಿಗೆ ತರಲಾಗಿದೆ. ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ಸಕಾಲದಲ್ಲಿ ದೊರೆಯಬೇಕು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಪ್ರಯೋಜನ ದೊರೆಯಬೇಕು.ಅಭಿವೃದ್ದಿಯ ವೇಗ ಹೆಚ್ಚಿಸುವುದರ ಜೊತೆಗೆ ಎಲ್ಲಾರನ್ನೂ ಒಳಗೊಂಡ ಅಭಿವೃದ್ಧಿ ಸಾಧ್ಯವಾಗಬೇಕು ಅಭಿವೃದ್ಧಿ ಕೇಂದ್ರಿತ ಆಡಳಿತದ ಜೊತೆಗೆ ಕೆಂಪು ಪಟ್ಟಿಗೆ ಅವಕಾಶವಿಲ್ಲದ ಪಾರದರ್ಶಕ ಆಡಳಿತ ನಮ್ಮ ಗುರಿಯಾಗಿದೆ.ನಮ್ಮ ಈ ಧ್ಯೇಯವನ್ನು ಸಾಕಾರಗೊಳಿಸಲು ಆಡಳಿತ ಶೈಲಿಯಲ್ಲಿ ಬದಲಾವಣೆ ಅನಿವಾರ್ಯ ಸರ್ಕಾರದ ಯಾವುದೇ ಒಂದು ಜನಪರ ಯೋಜನೆ ಯಶಸ್ಸು ಸಾಧಿಸಬೇಕಾದರೆ ಸರ್ಕಾರಿ ನೌಕರರು ಪ್ರಾಮಾಣಿಕವಾಗಿ ಸ್ವಂದಿಸಬೇಕಾಗಿರುವುದು ಮೊದಲು ಅವಶ್ಯಕತೆ ಅಂತೆಯೇ ನಾಗರಿಕರು ಅಂದರೆ ಸಾಮಾನ್ಯ ಜನರು ನಾಗರಿಕ ಸೇವಾ ಖಾತರಿ ಕಾಯಿದೆಯನ್ನು ಸರಿಯಾಗಿ ತಿಳಿದುಕೊಂಡು ಕಾನೂನಿನ ಉಪಯೋಗ ಪಡೆದುಕೊಳ್ಳಬೇಕಾದುದು ಅಷ್ಟೇ ಅವಶ್ಯಕವಾದ ಹೆಜ್ಜೆಯಾಗಿದೆ.
ನಾಗರಿಕರು ಏನು ಮಾಡುವ ಪರಿಸ್ಥಿತಿಯಲ್ಲಿರಲಿಲ್ಲ ನಿಸ್ಸಹಾಯಕರಾಗಿ ನೌಕರರು ಕೆಲಸ ಮಾಡಿಕೊಡುವವರೆಗೆ ಕಾಯಬೇಕಿತ್ತು ಆದರೆ ಈಗ ಅದೆಲ್ಲಾ ಬದಲಾಗಿದೆ. ಸರ್ಕಾರಿ ಕಛೇರಿಗಳಿಗೆ ಭೇಟಿ ನೀಡುವ ಸಾರ್ವಜನಿಕರಿಗೆ ಯಾವುದೇ ಸರ್ಕಾರಿ ಅಧಿಕಾರಿ ಅಥವಾ ಸಿಬ್ಬಂದಿ ಇಂದು ನಾಳೆ ಎನ್ನುವಂತಿಲ್ಲ.ಃಏಳಿದ ಸಮಯಕ್ಕೆ ಸೇವೆ ಮತ್ತು ಸವಲತ್ತುಗಳನ್ನು ಒದಗಿಸುವುದು ಕಡ್ಡಾಯವಾಗಿರುತ್ತದೆ.
ಸಕಾಲ ಕಾರ್ಯಕ್ರಮದ ಅರ್ಥ:-
ಒಟ್ಟಾರೆಯಾಗಿ ನಾಗರಿಕರ ಸೇವೆಗಳ ಖಾತರಿ ಕಾಯಿದೆಯನ್ನು ಹಾಗೂ ಅದರ ಪ್ರಕ್ರಿಯೆಯನ್ನು ಪರಿಗಣಿಸಿದರೆ ಒಂದು ನಿರ್ಧಿಷ್ಟ ಕಾಲಮಿತಿಯಲ್ಲಿ ಸೇವೆಯನ್ನು ಒದಗಿಸಲು ಒತ್ತು ಕೊಡಲಾಗಿದೆ.ಅಂದರೆ ನಾಗರಿಕರಿಗೆ ಸಕಾಲದಲ್ಲಿ ಸೇವೆ ಪಡೆದುಕೊಳ್ಳವುದು ನಾಗರಿಕರ ಹಕ್ಕು ಆಗಿರುತ್ತದೆ ಎಂಬುದು ಸರ್ಕಾರದ ಆಶಯ ಮತ್ತು ನೀತಿಯಾಗಿರುತ್ತದೆ.ಆದ್ದರಿಂದ ಕರ್ನಾಟಕ ಸರ್ಕಾರ ಈ ಕಾಯ್ದೆಯನ್ವಯ ಸೇವಾ ಯೋಜನೆಯನ್ನು ಸಕಾಲ ಎಂದು ಹೆಸರಿಸಿದೆ.
ಸರ್ಕಾರ ಅಂಗೀಕರಿಸಿರುವ ಯೋಜನೆಯ ಲಾಂಛನ ಮತ್ತು ಘೋಷ ವಾಕ್ಯಗಳು ನಾಗರಿಕರ ಸೇವೆಗಳ ಖಾತರಿ ಯೋಜನೆಯನ್ನು ಹಿಡಿದಿಟ್ಟಿವೆ.ಲಾಂಛನ ಗಡಿಯಾರ (ಸಮಯ)ವನ್ನು ಪ್ರತಿನಿಧಿಸುತ್ತದೆ.
ಇಂದು ನಾಳೆ ಇನ್ನಿಲ್ಲ ಹೇಳಿದ ಸಮಯಕ್ಕೆ ತಪ್ಪೀಲ್ಲ ಎಂಬುದು ಧ್ಯೇಯ(ಘೋಷ) ವಾಕ್ಯಗಳಾಗಿವೆ.
ಸಕಾಲ : ಹಿನ್ನೆಲೆ ಮತ್ತು ಉದ್ದೇಶ :-
ಭಾರತದ ಸಂವಿಧಾನ ಪ್ರಜಾಪ್ರಭುತ್ವ ವ್ಯವಸ್ಥೆಯ ಜೀವಾಳವಾಗಿದು, ಎಲ್ಲವೂ ಸಂವಿಧಾನ ಸೂಚಿಸಿದಂತೆ ನಡೆಯಬೇಕು. ಎಲ್ಲಾ ಸಂಸ್ಥೆಗಳು ಎಲ್ಲಾ ಪ್ರಜೆಗಳು ಸಂವಿಧಾನಕ್ಕೆ ಬದ್ದರಾಗಿರಬೇಕು. ಈ ನಿಟ್ಟಿನಲ್ಲಿ ದೇಶದ ವ್ಯವಹಾರಗಳನ್ನು ನಿಭಾಯಿಸಲು ಸಂವಿಧಾನ ನಿರ್ದೇಶಿಸಿದಂತೆ ಶಾಸಕಾಂಗ ಕಾರ್ಯಾಂಗ ಮತ್ತು ನ್ಯಾಯಾಂಗ ವ್ಯವಸ್ಥೆಗಳು ಜಾರಿಯಲ್ಲಿವೆ.
ಪ್ರಜಾಪ್ರಭುತ್ವ ವ್ಯವಸ್ಥೆ ತನ್ನ ಮೂಲಭೂತ ಆಶಯ ಮತ್ತು ತತ್ವಗಳಿಗನುಗುಣವಾಗಿ ಕೆಲಸ ಮಾಡಿದರೆ ಎಲ್ಲವೂ ಸುಲಲಿತ ಮತ್ತು ಸುಮಧುರವಾಗಿರುತ್ತದೆ. ಆದರೆ ಸಮಸ್ಯೆ ಪ್ರಾರಂಭವಾಗುವುದು ಚುನಾವಣೆಗಳ ನಂತರವೇ! ಸರ್ಕಾರ ರಚನೆಯಾಗಿ ಆಡಳಿತ ಕೈಗೆ ಬರುತ್ತಿದ್ದಂತೆ ಜನ ಪ್ರತಿನಿಧಿಗಳ ವರ್ತನೆ ಬದಲಾಗಿ ಬಿಡುತ್ತದೆ ಅವರು ಪ್ರಭುಗಳಾಗಿ ಬಿಡುತ್ತಾರೆ ಅವರು ಆಳಿ ದ ಹಾಗೆ ಜನ ಆಳಿಸಿ ಕೊಳ್ಳಬೇಕಾಗುತ್ತದೆ ಸರ್ಕಾರವನ್ನು ರಚಿಸುವ (ಪರೋಷವಾಗಿ) ಅಧಿಕಾರ ಜನರಿಗಿದ್ದರೂ, ಸರ್ಕಾರದ ಮಂತ್ರಿ/ನೌಕರರ ಮೇಲೆ ಜನರಿಗೆ ಯಾವುದೇ ನಿಯಂತ್ರಣ ಇರುವುದಿಲ್ಲ ಹಾಗಾಗಿ ದಿನನಿತ್ಯದ ವ್ಯವಹಾರಗಳಲ್ಲಿ ಸರ್ಕಾರಿ ಆಡಳಿತದಲ್ಲಿ ಸಾಮಾನ್ಯ ಜನರು ದಿನಗಟ್ಟಲೆ ಕಛೇರಿಗಳಿಗೆ ಅಲೆದಾಡಬೇಕಾದ , ಸರ್ಕಾರಿ ನೌಕರರ ಮರ್ಜಿಗೆ ಕಾಯಬೇಕಾಗಿ ಬಂದಿರುವ ಪರಿಸ್ಥಿತಿ ಉದ್ಭವವಾಗಿದೆ.
ಅದಕ್ಷ ಹಾಗೂ ಭ್ರಷ್ಟ ಆಡಳಿತ ಏರ್ಪಟ್ಟಾಗ ಜನರಿಗೆ ಕಷ್ಟ ನಷ್ಟ ಕಟ್ಟಿಟ್ಟ ಬುತ್ತಿ ಇದು ಅಸಹನೆ, ಅಸಮಧಾನ ಹಾಗೂ ಅಂತಿಮವಾಗಿ ಜನರ ಪ್ರತಿರೋದಕ್ಕೆ ದಾರಿಮಾಡಿಕೊಡುತ್ತದೆ. ಈ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಎಚ್ಚೆತ್ತು ಕೆಲವು ರಚನಾತ್ಮಕ ಕ್ರಮಗಳನ್ನು ತೆಗೆದುಕೊಂಡಿದೆ. ಅದರಲ್ಲಿ ಬಹಳ ಮುಖ್ಯವಾದ್ದು ನಾಗರಿಕ ಸನ್ನದು ಅಥವಾ ನಾಗರಿಕ ಸೇವೆಗಳ ಖಾತರಿ ಎಂಬ ಜನಪರ ಸುಧಾರಣೆ ಅಗತ್ಯವಾದ ನಾಗರಿಕ ಸೇವೆಗಳನ್ನು ಜನರಿಗೆ ಸಕಾಲದಲ್ಲಿ ಒದಗಿಸುವುದು ಈ ಸುಧಾರಣೆಯ ಸರಳ ಉದ್ದೇಶ ಬಿಹಾರ ಮಧ್ಯಪ್ರದೇಶ ದೆಹಲಿ ಸೇರಿದಂತೆ ಕೆಲವು ರಾಜ್ಯಗಳು ಮೊದಲ ಹೆಜ್ಜೆ ತೆಗೆದು ಕಾಯಿದೆ ರೂಪದಲ್ಲಿ ನಾಗರಿಕ ಸೇವೆಗಳ ಸುಧಾರಣೆಯನ್ನು ಜಾರಿಗೆ ತಂದವು ಈಗ ಕರ್ನಾಟಕ ಸರ್ಕಾರ ನಾಗರಿಕರಿಗೆ ಸೇವೆಗಳ ಖಾತರಿ ಕಾಯಿದೆ ಜಾರಿಗೊಳಿಸಿ ರಾಜ್ಯದ ಜನತೆಗೆ ಉತ್ತಮವಾದ ಸೇವೆ ಸಲ್ಲಿಸಲು ಮುಂದಾಗಿದೆ.
ನಾಗರಿಕರಿಗೆ ಸೇವೆಗಳ ಖಾತರಿ ಕಾಯಿದೆಯ ಪ್ರಮುಖ ಅಂಶಗಳು:-
ಈ ಕಾಯಿದೆ ಅನ್ವಯ ಸರ್ಕಾರ ೩೦ ಇಲಾಖೆಗಳನ್ನು ಗುರುತಿಸಿದ್ದು ಈ ೩೦ ಇಲಾಖೆಗಳೂ ಒದಗಿಸುವ ಸೇವೆಗಳ ಪೈಕಿ ಒಟ್ಟು ೨೬೫ ಸೇವೆಗಳನ್ನು ಖಾತ್ರಿಗೊಳಿಸಿದೆ.
ಈ ಕಾಯಿದೆಯನ್ವಯ ನಾಗರಿಕರು ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.
ಪ್ರತಿ ಇಲಾಖೆಯಲ್ಲಿ ಯಾವ ಅಧಿಕಾರಿಗೆ ಅರ್ಜಿ ಸಲ್ಲಿಸಬೇಕು ಮತ್ತು ಅರ್ಜಿ ಸ್ವೀಕರಿಸಿದೆ ಎಷ್ಟು ಕಲಾವಧಿಯಲ್ಲಿ (ದಿನಗಳಲ್ಲಿ) ಸೇವೆಯನ್ನು ಒದಗಿಸಬೇಕು ಎಂಬುದನ್ನು ನಿಗದಿಪಡಿಸಲಾಗಿದೆ(ಅರ್ಜಿಯನ್ನು ತಿರಸ್ಕರಿಸುವ ಸಂದರ್ಭಗಳಲ್ಲಿ ನಿಯೋಜಿತ ಅಧಿಕಾರಿಯು ತಿರಸ್ಕಾರಕ್ಕೆ ಕಾರಣಗಳನ್ನು ಬರವಣಿಗೆಯಲ್ಲಿ ಕೊಡಬೇಕಾಗುತ್ತದೆ)
ಅರ್ಜಿದಾರ ನಾಗರಿಕನಿಂದ ಅರ್ಜಿ ಸ್ವೀಕರಿಸಿದ್ದಕ್ಕೆ ಸ್ವೀಕೃತಿಯನ್ನು ಕೊಡಬೇಕಾಗುತ್ತದೆ.
ನಿರ್ದಿಷ್ಟ ಕಲಾವಧಿಯಲ್ಲಿ ಸೇವೆಯನ್ನು ಒದಗಿಸಬೇಕಾದ ಅಧಿಕಾರಿಯು ಸೇವೆಯನ್ನು ಒದಗಿಸದಿದ್ದರೆ ಅರ್ಜಿದಾರರು ಮೊದಲ ಮನವಿ ಸಲ್ಲಿಸಬಹುದು.
ಅರ್ಜಿದಾರರು ಮೊದಲ ಮನವಿ ಸಲ್ಲಿಸಬೇಕಾದ ಅಧಿಕಾರಿಯನ್ನು ನಿಗದಿಪಡಿಸಲಾಗಿದ್ದು ಹೀಗೆ ನಿಗದಿತವಾದ ಅಧಿಕಾರಿಗೆ ಅರ್ಜಿದಾರರು ಮೊದಲ ಮನವಿ ಸಲ್ಲಿಸಬೇಕಾಗುತ್ತದೆ.
ಮೊದಲ ಮನವಿಯಲ್ಲಿ ಅರ್ಜಿದರರಿಗೆ ಸೋಲುಂಟಾದರೆ ಮೇಲ್ಮನವಿ ಸಲ್ಲಿಸಬುದಾಗಿದೆ. ಯಾವ ಅಧಿಕಾರಿಗೆ ಮೇಲ್ಮನವಿ ಸಲ್ಲಿಸಬೇಕಾಗುತ್ತದೆ ಎಂಬುದನ್ನು ಸೂಚಿಸಲಾಗಿರುತ್ತದೆ. ಮೊದಲ ಹಾಗೂ ಮೇಲ್ಮನವಿಗಳನ್ನು ಇಂತಿಷ್ಟು ದಿನಗಳಲ್ಲಿ ವಿಲೇವಾರಿ ಮಾಡಬೇಕೆಂದು ಕಾಲಮಿತಿ ನಿಗದಿಪಡಿಸಲಾಗಿದೆ.
ನಿಗದಿತ ಕಾಲಾವಧಿಯಲ್ಲಿ ಅರ್ಜಿದಾರ ನಾಗರಿಕರಿಗೆ ಖಾತ್ರಿಗೊಳಿಸಿದ ಸೇವೆಯನ್ನು ಒದಗಿಸಲಾಗಿದಿದ್ದ ಪಕ್ಷದಲ್ಲಿ ಅರ್ಜಿದಾರರಿಗೆ ಸರ್ಕಾರ ನಿಗದಿಗೊಳಿಸಿರುವ ಪರಿಹಾರ ಮೊತ್ತವನ್ನು ಕೊಡಬೇಕಾಗುತ್ತದೆ.
ಕಾಲಮಿತಿಯೊಳಗೆ ಸೇವೆ ಸಲ್ಲಿಸಲು ವಿಫಲವಾದ ಅಧಿಕಾರಿ ಅಥವಾ ನೌಕರರಿಗೆ ಸರ್ಕಾರ ದಂಡ ವಿಧಿಸಬಹುದು ಮತ್ತು ಪ್ರಕರಣವನ್ನು ಕಪ್ಪು ಚುಕ್ಕೆಯಾಗಿ ಅಧಿಕಾರಿ/ನೌಕರನ ಸೇವಾ ದಾಖಲೆಗಳಲ್ಲಿ ನಮೂದಿಸಬಹುದು.
ಯೋಜನೆಯ ಸಂಕ್ಷಿಪ್ತ ಇತಿಹಾಸ:-
ನಾಗರಿಕ ಸನ್ನದು ಅಂದರೆ ನಾಗರಿಕರು ಪಡೆಯಬೇಕಾದ ಸೇವೆ ಮತ್ತು ಹಕ್ಕು ಈ ಪರಿಕಲ್ಪನೆ ಮೊದಲು ಮೂಡಿ ಬಂದಿದ್ದು ಬ್ರಿಟನ್ ದೇಶದಲ್ಲಿ ಇದು ಸಹಜವೂ ಆಗಿತ್ತು. ಏಕೆಂದರೆ ವಿಶ್ವದ ಮೊತ್ತ ಮೊದಲ ಪ್ರಜಾಪ್ರಭುತ್ವ ವ್ಯವಸ್ಥೆ ರೂಪು ತಾಳಿದ್ದು ಬ್ರಿಟನ್ನಿನಲ್ಲೇ ಪ್ರಜಾಪ್ರಭುತ್ವದಲ್ಲಿ ಸರ್ಕಾರದ ಆಡಳಿತ ತೆರೆದ ಪುಸ್ತಕವಾಗಿರಬೇಕು. ಅಂದರೆ ಸಂಪೂರ್ಣ ಪಾರದರ್ಶಕತೆ ಹೊಣೆಗಾರಿಕೆ (ಉತ್ತರದಾಯಿತ್ವ) ಹಾಗೂ ಸಹ್ನದಯ ಸ್ವಂದನ ಆಡಳಿತದಲ್ಲಿ ಹಾಸು ಹೊಕ್ಕಾಗಿರಬೇಕು ಎಂಬುದು ಜಗತ್ತು ಒಪ್ಪಿರುವ ಸಿದ್ದಾಂತವಾಗಿದೆ ೧೯೯೧ ರಲ್ಲಿ ಅಂದಿನ ಬ್ರಿಟಿಷ್ ಪ್ರಧಾನಮಂತ್ರಿ ಜಾನ್ ಮೇಜರ್ ರವರು ಪ್ರಪ್ರಥಮವಾಗಿ ಇಂತಹ ಒಂದು ನಾಗರಿಕ ಸನ್ನದನ್ನು ಜಾರಿಗೊಳಿಸಿದರು. ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ಕಾಲಕಾಲಕ್ಕೆ ತಕ್ಕಂತೆ ಯೋಜನೆಯನ್ನು ಪರಿಶ್ಕರಿಸಿ ಅನುಶ್ಟಾನಗೊಳಿಸುತ್ತಿವೆ.
ಬ್ರಿಟನ್ ದೇಶದ ನಾಗರಿಕ ಸನ್ನದು ಪರಿಕಲ್ಪನೆ ಕ್ರಮೇಣ ವಿಶ್ವದಲ್ಲಿ ವ್ಯಾಪಿಸಿಕೊಂಡಿತು.ಕಾಮನ್ ವೆಲ್ತ್ ರಾಷ್ಟ್ರಗಳು ತಮ್ಮ ಸನ್ನಿವೇಶಕ್ಕೆನುಗುಣವಾಗಿ ನಾಗರಿಕ ಸನ್ನದು ಯೋಜನೆಗಳನ್ನು ಜಾರಿಗೊಳಿಸಿದವು.ಭಾರತವೂ ಹಿಂದೆ ಬೀಳಲಿಲ್ಲ ! ೧೯೯೭ ರಮೇ ತಿಂಗಳನಲ್ಲಿ ಅಂದಿನ ಪ್ರಧಾನ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಮುಖ್ಯಮಂತ್ರಿಗಳ ಸಮ್ಮೇಳನದಲ್ಲಿ ಪರಿಣಾಮಕಾರಿ ಹಾಗೂ ಸಂವೇದನಾಶೀಲ ಸರ್ಕಾರ ಎಂಬ ಕಾರ್ಯ ಯೋಜನೆಯನ್ನು ಸಿದ್ದಪಡಿಸಲು ತೀರ್ಮಾನಿಸಲಾಯಿತು. ಹೆಸರು ಬದಲಾಗಿದ್ದರೂ ಇದು ಕೊಡ ನಾಗರಿಕರಿಗೆ ಉತ್ತಮ ಸೇವೆ ಒದಗಿಸುವ ನಾಗರಿಕ ಸನ್ನದು.ಕಾರ್ಯಕ್ರಮವಾಗಿತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನೇಕ ಇಲಾಖೆಗಳು ಹಾಗೂ ಸರ್ಕಾರಿ ಸಂಸ್ಥೆಗಳು ನಾಗರಿಕ ಸನ್ನದು ಬಿಡುಗಡೆಗೊಳಿಸಿದವು.ಆದರೆ ಇದು ಯಾವುದೂ ಜನಕ ಗಮನ ಸೆಳೆಯಲಿಲ್ಲ ನಾಗರಿಕ ಸನ್ನದು ಕಾರ್ಯಕ್ರಮ ಒಂದು ಕಾಟಚಾರದ ಪ್ರಕ್ರಿಯೆಯಾಗಿ ವ್ಯರ್ಥವಾಯಿತು. ಇದೆಲ್ಲ ನಡೆದದ್ದು ಸುಮಾರು ೧೫ ವರ್ಷಗಳ ಹಿಂದೆ,ಆದರೆ ಈಗ ಹಾಗಿಲ್ಲ ಈ ಅವಧಿಯಲ್ಲಿ ಕಾಲ ಬದಲಾಗಿದೆ.ಜನ ಜಾಗ್ನತಿಯ ಪ್ರಮಾಣ ಮತ್ತು ವೇಗ ಪ್ರತಿ ವರ್ಷವೂ ಹೆಚ್ಚಾಗುತ್ತಿದೆ. ಮೌನವಾಗಿ ಸಹಿಸಿಕೊಂಡು ಆಳಿಸಿಕೊಳ್ಳಲು ಈಗ ಜನ ಸಿದ್ದರಿಲ್ಲ ಎಂಬುದು ರಾಜಕಾರಣಿಗಳಿಗೆ ಮತ್ತು ಅಧಿಕಾರಿಗಳಗೆ ಮನವರಿಕೆಯಾಗಿದೆ.
ಆದ್ದರಿಂದ ಸರ್ಕಾರಗಳು ನಾಗರಿಕ ಸೇವೆಗಳ ಪಟ್ಟಿ ಮಾಡಿ ಪ್ರಚಾರಕ್ಕಾಗಿ ಬಿಡುಗಡೆ ಮಾಡುತ್ತಿಲ್ಲ ಬದಲಾಗಿ ಸಂವಿಧಾನಕ್ಕೆನುಗುಣವಾಗಿ ಕಾನೂನು ರಚಿಸಿ ಅನುಪ್ಠಾನಗೊಳಿಸುತ್ತಿವೆ. ಈನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಜಾರಿಗೊಳಿಸಿರುವ ನಾಗರಿಕರ ಸೇವೆಗಳ ಖಾತರಿ ಯೋಜನೆ ಸದುದ್ದೇಶದಿಂದ ಕೊಡಿದೆ ಮತ್ತು ಪರಿಣಾಮಕಾರಿಯಾಗಿದೆ.ನಾಗರಿಕರು (ಜನತೆ) ಮಾಡಬೇಕಾದ್ದು ಇಷ್ಠೆ.ಕಾನೂನಿನ ಅಂಶಗಳನ್ನು ಸರಿಯಾಗಿ ತಿಳಿದುಕೊಂಡು ಅದರಂತೆ ಸೇವೆ ಪಡೆದುಕೊಳ್ಳಲು ಕಾರ್ಯೋನ್ಮುಖರಾಗುವುದು.
೨೦೧೧ ರಲ್ಲಿ ಜನಲೋಕಪಾಲ ಪರ ಹೋರಾಟ ನಡೆಸಿದ್ದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರ ಬೇಡಿಕೆಗಳಲ್ಲಿ ನಾಗರಿಕ ಸನ್ನದು ಕೊಡ ಒಂದಾಗಿತ್ತು. ಬಿಹಾರ ಮಧ್ಯಪ್ರದೇಶ ಮುಂತಾದ ರಾಜ್ಯಗಳು ಕೇಂದ್ರಕ್ಕಿಂತಲೂ ಮೊದಲೇ ನಾಗರಿಕ ಸನ್ನದು ಅಳವಡಿಸಿಕೊಂಡಿದ್ದವು.ವಿವಿಧ ರಾಜ್ಯಗಳ ಮಾದರಿ ಬಗ್ಗೆ ಅಧ್ಯಯನ ನಡೆಸಿದ್ದ ಡಿ.ವಿ.ಸದಾನಂದಗೌಡರ ನೇತ್ನತ್ವದ ಸರ್ಕಾರ ೨೦೧೨ ಏಪ್ರಿಲ್ ೦೨ ರಂದು ಸಕಾಲ ಯೋಜನೆ ಜಾರಿಗೆ ತಂದರು ಇದು ಯಶಸ್ವಿಯಾಗಿ ಮುಂದುವರಿಯುತ್ತಿದೆ.
ಮಸೂದೆ ವಿಶೇಷ:-
ಎಲ್ಲ ರಾಜ್ಯಗಳೂ ಇಂಥ ಸೌಲಭ್ಯ ಜಾರಿಗೊಳಿಸುವುದು ಕಡ್ಡಾಯ.
ಈ ಮಸೂದೆಯಿಂದ ರಾಜ್ಯಗಳ ಅಧಿಕಾರಕ್ಕೆ ದಕ್ಕೆ ಬಿಜೆ.ಪಿ. ವಿರೋಧ.
ಕಾಲಮಿತಿಯೊಳಗೆ ಸರ್ಕಾರಿ ಸೇವೆ ಒದಗಿಸುವ ಕಲ್ಪನೆ ಬ್ರಿಟನ್ ದು ೧೯೧೯ ರಲ್ಲಿ ಮೊದಲಬಾರಿಗೆ ಅಲ್ಲಿ ಇದು ಜಾರಿಗೆ ಬಂದಿತ್ತು.
ವಿಧೇಯಕ ಕಾಯ್ದೆಯಾದ ಬಳಿಕ ಕೇಂದ್ರ ಸರ್ಕಾರದ ನಾಗರಿಕ ಸನ್ನದಿನಲ್ಲಿರುವಂತೆ ಎಲ್ಲ ರಾಜ್ಯಗಳೂ ವಿವಿಧ ಸರ್ಕಾರಿ ಸೇವೆಗಳನ್ನು ಕಾಲಮಿತಿಯೊಳಗೆ ಒದಗಿಸಬೇಕಾಗುತ್ತದೆ.
ಪಾಸ್ ಪೋರ್ಟ್,ಪಿಂಚಣಿ,ಜನನ-ಮರಣ ಪ್ರಮಾಣ ಪತ್ರ, ತೆರಿಗೆ ರೀಫಂಡ್, ಜಾತಿ ಪ್ರಮಾಣಪತ್ರ ಮುಂತಾದ ಸರ್ಕಾರಿ ಸೇವೆಗಳು ಇದರಡಿ ಬರುತ್ತವೆ.
ಸೇವೆ ನೀಡಲು ಉದ್ದೇಶ ಪೂರ್ವಕವಾಗಿ ವಿಳಂಬ ಮಾಡುವ ಅಧಿಕಾರಿಗೆ ದಿನಕ್ಕೆ ೨೫೦ ರೂ ಅಥವಾ ಗರಿಷ್ಠ ೫೦ ಸಾವಿರರೂವರೆಗೂ ದಂಡ ವಿಧಿಸುವ ಅವಕಾಶವುಂಟು ಅಲ್ಲದೇ, ಭ್ರಷ್ಟಾಚಾರ ಕುರಿತು ತನಿಖೆ ಹಾಗೂ ಶಿಸ್ತು ಕ್ರಮ ಜರುಗಿಸುವ ಅವಕಾಶವಿದೆ.
ವಿಧೇಯಕ ಕಾಯ್ದುಯಾದ ಬಳಿಕ ಕೇಂದ್ರ ಮಟ್ಟದಿಂದ ಪಂಚಾಯಿತಿವರೆಗೂ ದೂರು ಇತ್ಯರ್ಥ ಅಧಿಕಾರಿಗಳನ್ನು ನೇಮಿಸಬೇಕಾಗುತ್ತದೆ.
ಕಾಲಮಿತಿಯೊಳಗೆ ಸೇವೆ ಒದಗಿಸಬೇಕಾದಾದ ಸಾರ್ವಜನಿಕ ಸಂಸ್ಥೆಗಳ ಪಟ್ಟಿಯಲ್ಲಿ ಸಚಿವಾಲಯಗಳು, ಖಾಸಗಿ, ಸಾರ್ವಜನಿಕ ಸಹಭಾಗಿತ್ವದ ಯೋಜನೆಗಳು ಸರ್ಕಾರದ ಅನುದಾನ ಪಡೆದಿರುವ (ಎನ್.ಜಿ.ಓ) ಸರ್ಕಾರಕ್ಕೆ ಹೊರಗುತ್ತಿಗೆ ಸೇವೆ ಒದಗಿಸುತ್ತಿರುವ ಖಾಸಗಿ ಕಂಪನಿಗಳು ಸೇರಿವೆ.
ಅಣ್ಣಾ ಹಜಾರೆ ಅವರ ಪ್ರಮುಖ ಬೇಡಿಕೆಗಳಲ್ಲಿ ಕಾಲಮಿತಿಯ ಸೇವೆಯೂ ಒಂದಾಗಿತ್ತು.
ಲೋಕ ಸಭೆಯಲ್ಲಿ ೨೦೧೧ ರ ಡಿಸೆಂಬರ್ ನಲ್ಲಿ ಈ ಮಸೂದೆ ಮಂಡನೆಯಾಗಿತ್ತು. ಇದೀಗ ೧೫ ತಿಂಗಳ ಬಳಿಕ ಸಂಪುಟದ ಮುಂದಿಟ್ಟು ಅನುಮತಿ ಪಡೆಯಲಾಗಿದೆ.
ಅಧ್ಯಾಯ-೦೨ ಸಾಹಿತ್ಯ ಪರಾಮರ್ಶೆ
೧) ವೇದ ಮೂರ್ತಿ :- ನಾಗರಿಕ ಸೇವೆಗಳ ಖಾತರಿ ಕಾಯದೆಯನ್ನು ಹಾಗೂ ಅದರ ಪ್ರಕ್ರಿಯೆಯನ್ನುಪರಿಗಣಿಸಿದರೆ ಒಂದು ನಿರ್ದಿಷ್ಟ ಕಾಲಮಿತಿಯಲ್ಲಿ ಸೇವೆಯನ್ನು ಒದಗಿಸಲು ಇತ್ತು ಕೊಡಲಾಗಿದೆ.ಅಂದರೆ ನಾಗರಿಕರಿಗೆ ಸಕಾಲದಲ್ಲಿ ಸೇವೆ ಪಡೆದುಕೊಳ್ಳವುದು ನಾಗರಿಕ ಹಕ್ಕು ಆಗಿರುತ್ತದೆ ಎಂಬುದು ಸರ್ಕಾರದ ಆಶಯ ಮತ್ತು ನೀತಾಯಾಗಿರುತ್ತದೆ,ಆದ್ದರಿಂದ ಕರ್ನಾಟಕ ಸರ್ಕಾರ ಈ ಕಾಯ್ದೆಯನ್ವಯ ಸೇವಾ ಯೋಜನೆಯನ್ನು ಸಕಾಲ ಎಂದು ಹೆಸರಿಸಿದೆ.
೨) ಬಿ.ವಿ. ಚಂದ್ರಖೇಖರ್ .ಎಂ.ಎ.ಎಲ್.ಎಲ್.ಎಂ :- ನಿವೃತ್ತ ನ್ಯಾಯಾಧೀಶರು (ಸುಪ್ರೀಂಕೋರ್ಟ್) ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ನಾಗರಿಕ ಸೇವಾ ಖಾತರಿ ಕಾಯಿದೆ ರಾಜ್ಯಾದ್ಯಂತ ಜಾರಿಗೆ ಬಂದಿದ್ದು ಸರ್ಕಾರದ ಆಡಳಿತದಲ್ಲಿ ಸುಧಾರಣೆ ಮತ್ತು ನಾಗರಿಕರ ಜೀವನದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ನಾಂದಿಯಾಗಿದೆ.ಈ ಕಾಯಿದೆ ರಾಜ್ಯದೆಲ್ಲೆಡೆ ಪ್ರಾಮಾಣಿಕವಾಗಿ ಅನುಷ್ಠಾನಗೊಂಡಲ್ಲಿ ಸಾರ್ವಜನಿಕ ಜೀವನದಲ್ಲಿ ಒಂದು ಕ್ರಾಂತಿ ಜರುಗಿ ಆಡಳಿತದಲ್ಲಿ ದಕ್ಷತೆ,ಪಾರದರ್ಶಕತೆ.ಪ್ರಾಮಾಣಿಕತೆ ಮತ್ತು ಸೇವಾ ನಿಷ್ಠೆ ಹೆಚ್ಚಾಗುವುದರಲ್ಲಿ ಎರಡು ಮಾತಿಲ್ಲ.
೩) ಡಿ.ವಿ. ಸದಾನಂದಗೌಡ:- ಮಾಜಿ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ಸರ್ಕಾರಿ ಯೋಜನೆಗಳ ಫಲ ಫಲಾನುಭವಿಗಳಿಗೆ ವ್ಯಕ್ತಿಗೆ ಪ್ರಯೋಜನ ದೊರೆಯಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಪ್ರಯೋಜನ ದೊರೆಯಬೇಕು.ಅಭಿವೃದ್ಧಿಯ ವೇಗ ಹೆಚ್ಚಿಸುವುದರ ಜೊತೆಗೆ ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ಸಾಧ್ಯಾವಾಗಬೇಕು ನಮ್ಮ ಈ ಧ್ಯೇಯವನ್ನು ಸಾಕಾರಗೊಳಿಸಲು ಆಡಳಿತ ಶೈಲಿಯಲ್ಲಿ ಬದಲಾವಣೆ ಅನಿವಾರ್ಯ ಆದ್ದರಿಂದ ಕರ್ನಾಟಕ ಸರ್ಕಾರ ನಾಗರಿಕ ಸೇವಾ ಖಾತರಿ ಕಾಯಿದೆಯನ್ನು ಜಾರಿಗೆ ತರಲಾಗಿದೆ ಇದರಿಂದ ಸರ್ಕಾರಿ ಕಛೇರಿಗಳಿಗೆ ಭೇಟಿ ನೀಡುವ ಸಾರ್ವಜನಿಕರಿಗೆ ಯಾವುದೇ ಸರ್ಕಾರಿ ಅಧಿಕಾರಿ ಆಥವಾ ಸಿಬ್ಬಂದಿ ಇಂದು ನಾಳೆ ಎನ್ನುವಂತಿಲ್ಲ.ಹೇಳಿದ ಸಮಕ್ಕೆ ಸೇವೆ ಮತ್ತು ಸವಲತ್ತುಗಳನ್ನು ಒದಗಿಸುವುದು ಕಡ್ಡಾಯ
೪) ಸ್ವರ್ಧಾ ಸ್ವೂರ್ತಿ :- ಏಪ್ರಿಲ್ -೨೦೧೩
ಕರ್ನಾಟಕದಲ್ಲಿ ಭರ್ಜರಿ ಯಶಸ್ಸುಗಳಿಸಿರುವ ಸಕಾಲ ಮಾದರಿ ಯೋಜನೆಯನ್ನು ಇದೀಗ ಕೇಂದ್ರ ಸರ್ಕಾರವು ಜಾರಿಗೆ ತರಲು ಮುಂದಾಗಿದೆ.
ಅಧ್ಯಾಯ-೦೩. ಸಂಶೋಧನ ವಿಧಾನ:-
ಪೀಠಿಕೆ
ಯಾವುದೇ ವಿಷಯ ಅಥವಾ ವಸ್ತುವಿನ ಬಗ್ಗೆ ವಿಮಶ್ಮಾತ್ಮಕವಾಗಿ ವಿಚಾರಣೆ ಮಾಡುವುದು. ಹೊಸ ಸಿದ್ದಾಂತಗಳನ್ನು ಬೆಳಕಿಗೆ ತರುವಂತಹ ಪ್ರಕ್ರಿಯೆಯೇ ಸಂಶೋಧನೆ ಅಧ್ಯಯನಕ್ಕಾಗಿ ಆಯ್ಕೆ ಮಾಡಿದ ವಿಷಯದ ಬಗ್ಗೆ ಪ್ರತಿಯೊಂದು ಮೂಲದಿಂದಲೂ ದೊರೆಯತಕ್ಕಂತಹ ಮಾಹಿತಿಯನ್ನು ಸಂಗ್ರಹಿಸುವುದು. ಸಂಶೋಧನೆಯ ಮೊದಲ ಧ್ಯೇಯವಾಗಬೇಕು ಚಲನೆಯಲ್ಲಿರುವ ಸಿದ್ಧಾಂತಗಳನ್ನು ಪ್ರಾಯೋಗಿಕವಾಗಿ ಗುರಿಗಳಲ್ಲಿ ಮುಖ್ಯವಾದವು.
ಸಂಶೋಧನೆ ಎಂಬ ಪದದ ಸೂಕ್ತ ಅರ್ಥ:-
ಪೆಂಡ್ಲಟನ್ ಹೆರಿಂಗ್ ರವರ ಪ್ರಕಾರ ಸಂಶೋಧನೆಯು ಸ್ಪಷ್ಟವಾದ ಕ್ರಿಯೆ ಈಗಾಗಲೇ ಇರುವ ಜ್ಞಾನ ಭಂಡಾರಕ್ಕೆ ಹೆಚ್ಚು ಜ್ಞಾನವನ್ನು ಕೊಡಿಸುವುದೇನೂ ಸರಿ ಆದರೆ,ನಮ್ಮ ಮನಸ್ಸು ಆವರಿಸಿರುವ ಮತ್ತು ಉಪಯುಕ್ತವಲ್ಲದ ಸಿದ್ಧಾಂತಗಳನ್ನು ಶುದ್ಧಿ ಆಡಲು ಸಂಶೋಧನೆಯು ಒಂದು ಒಗ್ಗೂಡಿಸುವ ಪ್ರಕ್ರಿಯೆಯಾಗಿದ್ದು ನಿರಾಕರಿಸುವ ಪ್ರಕ್ರಿಯೆಯು ಹೌದು ಎಂದು ವಿವರಿಸಿದ್ದಾರೆ.
ರೆಡೆ ಮೆನ್ ಮತ್ತು ಮಾರೆರವರ ಪ್ರಕಾರ ಹೊಸ ಜ್ಞಾನವನ್ನು ಪಡೆಯಲು ಕೈಗೊಂಡ ವ್ಯವಸ್ಥಿತ ಪ್ರಯತ್ನವೇ ಸಂಶೋಧನೆ ಎಂದಿದ್ದಾರೆ.
ಸಾಮಾಜಿಕ ಜೀವನದ ವಿವಿಧ ಮುಖಗಳು ಮಾನವ ಸಮಾಜದಲ್ಲಿ ಆಗಿರುತಕ್ಕಂತಹ ಆಗುತ್ತಿರುವ ಅಭಿವೃದ್ಧಿ ಕಾರ್ಯಗಳ ಸಮಾಜದ ವಿವಿಧ ಸಂಸ್ಥೆಗಳಲ್ಲಿ ನಡೆಯುವ ಕಾರ್ಯಚಟುವಟಿಕೆಗಳು ಸಮಾಜದಲ್ಲಿರುವ ಸಮಸ್ಯೆಗಳಿಗೆ ಕಾರಣಗಳನ್ನು ಕಂಡು ಹಿಡಿಯುವುದು. ಅವುಗಳಿಗೆ ಸೂಕ್ತ ಪರಿಹಾರಗಳನ್ನು ಹುಡುಕುವುದು ಇನ್ನು ಮುಂತಾದವು ಸಾಮಾಜಿಕ ಸಂಶೋಧನೆಯ ವಿಷಯಗಳಾಗಿರುತ್ತವೆ.
ಸಂಶೋಧನೆಯ ವಿಶ್ವ:-
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಹೋಬಳಿಯ ಗ್ರಾಮ ಪಂಚಾಯಿತಿಗಳು ಪ್ರಸುತ್ತ ಸಂಶೋಧನೆಯ ಆಧ್ಯಯನ ಜಗತ್ತಾಗಿದೆ.
ಭೌಗೋಳಿಕ ವಿವರ:-
ಸಾದಲಿ ಹೋಬಳಿ ಶಿಡ್ಲಘಟ್ಟ ತಾಲ್ಲೂಕಿ ಕೇಂದ್ರಕ್ಕೆ ಸುಮಾರು ೨೬ ಕಿ.ಮೀ.ಅಂತರದಲ್ಲಿದೆ ಸಾದಲಿ ಹೋಬಖಳಿ ರಾಜ್ಯದ ರಾಜಧಾನಿ ಬೆಂಗಳೂರು ನಗರದಿಂದ ಸುಮಾರು ೮೬ ಕಿ.ಮೀ ದೂರದಲ್ಲಿದೆ.ಭೌಗೋಳಿಕ ಹೋಬಳಿಯು ಸುಮಾರು ೧೯೦೯೫ ಹೆಕ್ಟೇರ್ ವಿಸ್ತೀರ್ಣದಲ್ಲಿ ವ್ಯಾಪಿಸಿದ್ದು ಹೆಚ್ಚಾಗಿ ಬೆಟ್ಟ ಗುಡ್ಡಗಳಿಂದ ಕೂಡಿದೆ.
ಸಾಮಾಜಿಕ ವಿವರ:-
ಸಾದಲಿ ಹೋಬಳಿಯಲ್ಲಿ ೦೪ ಗ್ರಾಮ ಪಂಚಾಯಿತಿಗಳು ಕಾರ್ಯೊಚರಣೆಯಲ್ಲಿದೆ ೦೪ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗೆ ಸುಮಾರು ೬೦ ಗ್ರಾಮ ಸಮುದಾಯಗಳು ಸೇರುತ್ತವೆ ಪ್ರತಿಯೊಂದು ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿರುವ ಗ್ರಾಮಗಳು ಮತ್ತು ವಿಸ್ತೀರ್ಣತೆ ಹಾಗೂ ಸಾಂಸ್ಕತಿಕವಾಗಿ ಭಿನ್ನತೆಯಿಂದ ಕೂಡಿದರೂ ಕೆಲವುಗಳಲ್ಲಿ ಸ್ವಾಮ್ಯತೆಯನ್ನು ಕಾಣಬಹುದಾಗಿದೆ. ಬೆಟ್ಟಗುಡ್ಡಗಳಿಂದ ಮಳೆಗಾಲದಲ್ಲಿ ನೀರು ಹರಿದು ಕೆರೆಗಳಲ್ಲಿ ನೀರು ಶೇಖರಣೆಯಾಗುತ್ತದೆ.ಈ ಭಾಗದ ಮರುಳು ಮತ್ತು ಬಂಡೆಗಳು ಜನತೆಗೆ ಹೆಚ್ಚು ಆರ್ಥಿಕವಾಗಿ ಲಾಭ ದೊರೆಯುವುದು.ವ್ಯವಸಾಯದಿಂದ ಇಲ್ಲ ರೇಷ್ಮ ಬಾಳೆ ತರಕಾರಿ ಬೆಳೆಗಳು ಹೆಚ್ಚಾಗಿ ಬೆಳೆಯುವರು ಗ್ರಾಮ ಸಮುದಾಯದಲಿ ಪ್ರತಿ ವಾರಕೋಮ್ಮ ಒಂದು ದಿನ (ಶನಿವಾರ ) ಸಂತೆ ನಡೆಯುತ್ತದೆ. ಶೈಕಷಣಿಕವಾಗಿಯೂ ಸ್ವಲ್ಪ ಮಟ್ಟಿಗೆ ಹೋಬಳಿಯೂ ಪ್ರಸಿದ್ದಿ ಪಡೆದಿದೆ.
ಸಾದಲಿ ಹೋಬಳಿಯ ಜನತೆಯು ಕನ್ನಡವನ್ನು ಮಾತೃಭಾಷಯಾಗಿ ಬಳಸುತ್ತಿದದ್ದರೂ ಅಲ್ಪಸ್ವಲ್ಪ ತೆಲುಗು ,ಉರ್ದು, ಭಾಷಯಾಗಿ ಮಾಎನಾಡುತ್ತಾರೆ ಇದರಲ್ಲಿ ತೆಲುಗು ಭಾಷೆ ಹೆಚ್ಚಾಗಿ ಮಾತನಾಡುತ್ತಾರೆ ಎಲ್ಲಾ ಜಾತಿಯ ಜನರು ಸಹ ಇದ್ದು ಸೌಹಾರ್ದಯುತವಾಗಿ ಬಾಳುತ್ತಿದ್ದು ಅಭಿವೃದ್ದಿ ಕಾರ್ಯಗಳಲ್ಲಿ ಪ್ರಗತಿಪರವಾಗಿ ಭಾಗವಹಿಸುತ್ತಿದ್ದಾರೆ.
ಸಾಮಾಜಿಕ ಸಂಶೋಧನೆಯ ಮುಖ್ಯ ಗುರಿಗಳು :-
ವ್ಯವಸ್ಥಿತ ಸಮಾಜವು ಸಾಮಾಜಿಕ ಸಂಸ್ಥೆಗಳ ರಚನೆ ಹಾಗೂ ಕಾರ್ಯಗಳ, ಸಾಮಾಜಿಕ ಜೀವನ-ಗುರಿ ಹಾಗೂ ಸಾಮಾಜಿಕ ಗುಂಪುಗಳ ನಡುವೆ ಇರುವ ಸಂಬಂಧಗಳ ಬಗ್ಗೆ ಮೂಲ ಸಾಮಾಜಿಕ ಸಿದ್ಧಾಂತಗಳನ್ನು ರಚಿಸಿರುವುದರ ಮೂಲಕ ವ್ಯವಸ್ಥಿತ ಜ್ಞಾನವನ್ನು ವೃದ್ಧಿಸುವುದು.ಸಮಾಜವನ್ನು ಕಾಡುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ವೈಜ್ಞಾನಿಕ ಅಧ್ಯಯನವನ್ನು ಕೈಗೊಂಡು ಅಧ್ಯಯನಗಳ ಆಧಾರದ ಮೇಲೆ ಸಾಮಾಜಿಕ ಸಮಸ್ಯೆಗಳ ನಿವಾರಣೆಗೆ ಕ್ರಿಯಾತ್ಮಕವಾದ ಸಿದ್ಧಾಂತಗಳನ್ನು ನವ್ಯ ಸಿದ್ಧಾಂತಗಳ ಸಹಾಯದಿಂದ ಪರೀಕ್ಷಿಸುವುದು.ಪರಿಶೀಲಿಸುವುದು ಹೊಸ ಹೊಸ ಸಂಶೋಧನಾ ತಂತ್ರಗಳನ್ನು, ಭಾವನೆಗಳನ್ನು ರೂಪಿಸುವುದು ಮತ್ತು ಮುಂದಿನ ಸಂಶೋಧಕರ ಪೀಳಿಗೆಗೆ ಮಾರ್ಗದರ್ಶನ ನೀಡುವುದು.
ಯಾವುದೇ ಸಂಶೋಧನಾ ಕಾರ್ಯವು ಒಂದು ಕ್ರಮಬದ್ದ ರೀತಿಯಲ್ಲಿ ಕೈಗೊಳ್ಳಬೇಕಾದಾಗ ಅದನ್ನು ಅನೇಕ ಹಂತಗಳನ್ನಾಗಿ ವಿಂಗಡಿಸಿ.ಪ್ರತಿಯಾಂದು ಹಂತದಲ್ಲಿಯೂ ವಿಶಿಷ್ಟವಾದ ಶ್ರಮ ಹಾಗೂ ಶ್ರದ್ದೆಯನ್ನು ವಹಿಸಿ ಸಂಶೋಧಕರು ಕಾರ್ಯನಿರ್ವಹಿಸಬೇಕಾಗುತ್ತದೆ.
ಸಮಾಜ ಕಾರ್ಯ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿಯಾದ ನಾನು ಸಾಮಾಜಿಕ ಅಭ್ಯುದಯ ಕ್ಷೇತ್ರವನ್ನು ಅಧ್ಯಾಯನ ಮಾಡುತ್ತಿರುವ ವಿದ್ಯಾರ್ಥಿಯಾಗಿರುತ್ತೇನೆ.ಸಾಮಾಜಿಕ ಸಂಶೋಧನೆ ಕೈಗೊಳ್ಳಲು ಯಾವುದಾದರೂ ಒಂದು ಸಾಮಾಜಿಕ ಸಮಸ್ಯೆಗಳನ್ನು ಅಧ್ಯಯನ ಮಾಡುವ ಕುರಿತು ಪ್ರಥಮವಾಗಿ ನನ್ನ ಮನಸ್ಸಿಗೆ ಬಂದಿತು. ಆದರೆ ನಾನು ಸಮಾಜ ಕಾರ್ಯ ವಿಭಾಗದಲ್ಲಿ ಪ್ರಥಮ ಮತ್ತು ದ್ವಿತೀಯ ವರ್ಷದಲ್ಲಿ ಸಮುದಾಯದಲ್ಲಿ ಕ್ಷೇತ್ರ ಕಾರ್ಯ ನಿರ್ವಹಿಸಿರುವುದರಿಂದ ಸಮುದಾಯದ ಜನರ ಸಮಸ್ಯೆಗಳ ಬಗ್ಗೆ ನಮ್ಮಗೆ ಅರಿವುವಾಯಿತು. ಇಂತಹ ಸಮಸ್ಯೆಗಳನ್ನು ಸರ್ಕಾರದ ಅಧಿಕಾರಿಗಳು ಪರಿಹಾರ ನೀಡುತ್ತಿಲ್ಲ ಇದರಿಂದ ಜನರು ಹೆಚ್ಚು ತೊಂದರೆಗೆ ಒಳಗಾಗಿದ್ದಾರೆ.ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಸಕಾಲ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತಂದು ಜನರ ಸಮಸ್ಯೆಗಳಿಗೆ ಅಥವಾ ನಾಗರಿಕ ಸೇವೆಗಳನ್ನು ನಿಗಧಿತ ಸಮುಯದಲ್ಲಿ ಒದಗಿಸಲಾಗುತ್ತದೆ.ಆದರಿಂದಾಗಿ ಸರ್ಕಾರದ ಸಕಾಲ ಕಾರ್ಯಕ್ರಮದ ಬಗ್ಗೆ ಗ್ರಾಮೀಣ ಜನರಿಗೆ ಅರಿವು ಇದೆಯೇ ಎಂಬುವುದರ ಬಗ್ಗೆ ತಿಳಿಯಲು ಸಂಶೋಧನೆಯನ್ನು ಕೈಗೊಳ್ಳಲಾಗಿದೆ.
ಸಾಮಾಜಿಕ ಸಂಶೋಧನೆ ಮೊದಲ ಹಂತವೇ ಅಧ್ಯಯನಕ್ಕೆ ವಿಷಯದ ಆಯ್ಕೆ ಮಾಡುವುದು.ಈ ಅಧ್ಯಯನಕ್ಕೆ ಕೆಲವು ಗುರಿಗಳು ಮತ್ತು ಉದ್ದೇಶಗಳನ್ನು ಸಂಶೋಧನೆಗೆ ಆಧಾರ ಕಲ್ಪನೆಗಳು ಅಥವಾ ಪೂರ್ವ ಸಿದ್ಧಾಂತ, ಸಂಶೋಧನೆಯ ವಿಶ್ವ ಸಂಶೋಧನೆಯ ವಿನ್ಯಾಸ .ಮಾಹಿತಿ ಸಂಗ್ರಹ ಮತ್ತು ವಿಧಾನ-ತಂತ್ರಗಳನ್ನು ಬಳಸಿ ಕೊಳ್ಳುವುದು ಉಪಯುಕ್ತವೆನಿಸುತ್ತದೆ.ಆದ್ದರಿಂದ ಪ್ರಧಮವಾಗಿ ಅಧ್ಯಯನ ಅಧ್ಯಯನ ವಿಷಯವನ್ನು ಆಯ್ಕೆ ಮಾಡಿಕೊಂಡು ಧ್ಯೇಯೋದ್ದೇಶಗಳನ್ನು ಇಟ್ಟುಕೊಂಡು ಸಂಶೋಧನೆಯ ವಿಶ್ವ ಮತ್ತು ಸಂಶೋಧನೆಯ ವಿನ್ಯಾಸವನ್ನುಇ ರಚಿಸಿ ಕೆಲವು ಪ್ರಮೇಯಗಳನ್ನು ಅಥವಾ ಪೂರ್ವ ಸಿದ್ಧಾಂತ ಆಯ್ಕೆ ಮಾಡಿಕೊಂಡು ಪ್ರಶ್ನಾವಳಿಯನ್ನು ರಚಿತ ಸಂಶೋಧನಾ ಕಾರ್ಯದಲ್ಲಿ ಅನುಸರಿಸಿ ಮತ್ತು ಸಂದರ್ಶನದ ತಂತ್ರವನ್ನು ಬಳಸಿಕೊಂಡು ಮಾಹಿತಿ ಸಂಗ್ರಹಿಸಿದೆನು.
ಅಧ್ಯಯನ ಪ್ರೇರಣೆ:-
ಸಂಶೋಧನೆಯ ಪ್ರಸ್ತುತ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿಯಾಗಿದ್ದು ; ಸಾಮಾಜಿಕ ಅಭ್ಯುದಯ ಕ್ಷೇತ್ರದಲ್ಲಿ ವಿಶೇಷ ಆಸಕ್ತನಾಗಿದ್ದು ಸಮುದಾಯ ಅಭಿವೃದ್ಧಿ ಮತ್ತು ಸಾಮಾಜಿಕ ಅಭ್ಯುದಯಕ್ಕೆ ಸಂಬಂಧಿಸಿದಂತೆ ವಿಶೇಷ ವಿಷಯವನ್ನಾಗಿ ಅಭ್ಯಾಸ ಮಾಡುತ್ತಿರುವುದು. ಗ್ರಾಮ ಸಮುದಾಯ ಪ್ರದೇಶದಲ್ಲಿ ಹುಟ್ಟಿ ಪ್ರಾಥಮಿಕ, ಪೌಢ್ರಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿ,ನಂತರ ಹೆಚ್ಚಿನ ವ್ಯಾಸಂಗ ಮಾಡಿದರೂ ಸಹ ಕ್ಟೇತ್ರ ಕಾರ್ಯ ಅಧ್ಯಯನಕ್ಕಾಗಿ ಸಮುದಾಯಗಳನ್ನು ಆಯ್ಕೆ ಮಾಡಿಕೊಂಡು ತಿಳಿದುಕೊಳ್ಳಲಾಯಿತು. ನಾಗರಿಕ ಸೇವೆಗಳನ್ನು ನಾಗರಿಕರಿಗೆ ನಿಗಧಿತ ಸಮಯದಲ್ಲಿ ಒದಗಿಸಿಕೊಡುವುದಕ್ಕಾಗಿ ಕರ್ನಾಟಕ ಸರ್ಕಾರವು ಸಕಾಲ ಕಾರ್ಯಕಜ್ರಮವನ್ನು ಜಾರಿಗೆ ತಂದಿದೆ.ಇದರಿಂದಾಗಿ ನಾಗರಿಕರು ತಮ್ಮ ಸೇವೆಯನ್ನು ಪಡೆಯಲು ಸುಲಭವಾಯಿತು ಹಾಗೂ ಸಮಯ ಉಳಿತಾಯವಾಗುತ್ತದೆ. ಆದರೂ ಸಹ ಈ ಕಾರ್ಯ ಕ್ರಮದ ಬಗ್ಗೆ ಗ್ರಾಮೀಣ ಜನರಿಗೆ ಅರಿವು ಇದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ತಿಳಿಯಲು ಸಂಶೋಧನೆಯನ್ನು ಕೈಗೊಳ್ಳಲಾಯಿತಿ.ಇದರಿಂದಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಹಳ್ಳಿ ಹೋಬಳಿಯ ಗ್ರಾಮ ಪಂಚಾಯ್ತಿಗಳೋಂದಿಗೆ ನಿರಂತರ ಸಂಪರ್ಕ ಹೊಂದಿ ಪಂಚಾಯ್ತಿಯ ಸದಸ್ಯರಿಗೆ ಸಕಾಲ ಕಾರ್ಯಕ್ರಮದ ಬಗ್ಗೆ ಅರಿವು ಇದೆಯೇ ಎಂಬುವುದರ ಬಗ್ಗೆ ತಿಳಿಯಲು ಪ್ರಶ್ನಾವಳಿ ಮುಖಾಂತ ಅವರಿಗೆ ತಿಳಿದ ವಿಚಾರಗಳನ್ನು ಅಧ್ಯಯನ ಮಾಡಲಾಯಿತು. ಬಶೆಟ್ಟಹಳ್ಳಿ ಹೋಬಳಿಯ ಗ್ರಾಮ ಪಂಚಾಯ್ತಿಗಳೊಂದಿಗೆ ನಿರಂತರ ಸಂಪರ್ಕ ಹೊಂದಿರುವುದರಿಂದ ಪ್ರಸ್ತುತ ಅಧ್ಯಯನ ಕೈಗೊಳ್ಳಲು ಪ್ರೇರಣೆ ನೀಡಿದೆ.
ಅಧ್ಯಯನ ಧ್ಯೇಯೋದ್ದೇಶಗಳು:-
ಅಭ್ಯುದಯ:- ಕರ್ನಾಟಕ ರಾಜ್ಯದ ಸಕಾಲ ಕಾರ್ಯಕ್ರಮದ ಬಗ್ಗೆ ಗ್ರಾಮ ಪಂಚಾಯ್ತಿ ಸದಸ್ಯರಿಗೆ ಇರುವ ಅರಿವನ್ನು ಕುರಿತು ಒಂದು ಅಧ್ಯಯನ ವಿಶೇಷವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಹಳ್ಳಿ ಹೋಬಳಿಯ ಗ್ರಾಮ ಪಂಚಾಯ್ತಿ ಸದಸ್ಯರ ಕುರಿತು ಅಧ್ಯಯನದ ಧ್ಯೇಯೋದ್ದೇಶಗಳು.
೧) ಸಕಾಲ ಕಾರ್ಯಕ್ರಮದ ಬಗ್ಗೆ ಗ್ರಾಮೀಣ ಜನರಿಗೆ ಇರುವ ಅರಿವನ್ನು ತಿಳಿಯುವುದು.
೨) ಸಕಾಲ ಕಾರ್ಯಕ್ರಮದ ಬಗ್ಗೆ ಇರುವ ಮಾಹಿತಿಯನ್ನು ಗ್ರಾಮೀಣ ಜನರು ಹೇಗೆ ತಿಳಿದುಕೊಂಡಿದ್ದಾರೆ ಎಂಬುವುದರ ಬಗ್ಗೆ ತಿಳಿಯುವುದು.
೩) ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಗ್ರಾಮೀಣ ಜನರಿಗೆ ಅರಿವುವಿದೆಯೇ ಎಂಬುವುದರ ಬಗ್ಗೆ ತಿಳಿಯುವುದು.
೪) ಸಕಾಲ ಕಾರ್ಯಕ್ರಮದಿಂದ ಗ್ರಾಮೀಣ ಜನರಿಗೆ ಆಗುವ ಅನುಕೂಲಗಳನ್ನು ತಿಳಿಯುವುದು.
೫) ನಾಗರಿಕ ಸೇವೆಗಳ ಖಾತರಿ ಅಧಿನಿಯಮಗಳ ಬಗ್ಗೆ ಗ್ರಾಮೀಣ ಜನರಿಗೆ ಇರುವ ಅರಿವುವನ್ನು ತಿಳಿಯುವುದು.
೬) ಮಾಹಿತಿ ಹಕ್ಕುನ ಕಾಯ್ದೆ ಬಗ್ಗೆ ಗ್ರಾಮೀಣ ಜನರಿಗೆ ಅರಿವು ಇದೆಯೇ ಎಂಬುವುದರ ಬಗ್ಗೆ ತಿಳಿಯುವುದು.
೭) ವೃತ್ತಿಪರ ಸಮಾಜಕಾರ್ಯದ ಬಗ್ಗೆ ಮಾಹಿತಿದಾರರಿಗೆ ಇರುವ ಅರಿವು ಮತ್ತು ಅನಿಸಿಕೆಗಳನ್ನು ತಿಳಿಯುವುದು.
ಪ್ರಮೇಯ ಅಥವಾ ಪೂರ್ವಸಿದ್ಧಾಂತ:-
ಸಾಮಾಜಿಕ ಸಂಶೋಧಕರು ಒಮ್ಮೆ ತನ್ನ ಅಧ್ಯಯನ ವಿಷಯ ಆಯ್ಕೆ ಮಾಡಿದ ಮೇಲೆ ಆ ವಿಷಯದ ಬಗ್ಗೆ ತಾತ್ಕಾಲಿಕ ಆಧಾರ ಪರಿಕಲ್ಪನೆಗಳನ್ನು ರಚಿಸುತ್ತಾನೆ.ಪ್ರಮೇಯ ಸಂಶೋಧನೆಯ ದಾರಿ ದೀಪ ಎನ್ನಬಹುದು.
ವ್ಯಾಖ್ಯೆಗಳು:-
೧) ಲುಂಡ್ಬರ್ಗ್ ಅವರು ಸತ್ಯಾಸತ್ಯತೆಯನ್ನು ಪರೀಕ್ಷಿಸಿಕೊಳ್ಳಬೇಕಾಗಿರುವ ತಾತ್ಕಾಲಿಕ ಸಮರ್ಥನೆಯೇ ಪ್ರಾಕ್ ಕಲ್ಪನೆ ಎಂದು ವ್ಯಾಖ್ಯಾನಿಸಿದ್ದಾರೆ.
೨) ಗೂಡ್ ಅಂಡ್ ಹ್ಯಾಟ್ ಅವರು ಸಾಮಾನ್ಯ ತಿಳುವಳಿಕೆಗೆ ಪೂರಕವಾಗಿ ಅಥವಾ ವಿರುದ್ದಸವಾಗಿರುವ ಮತ್ತು ಸಪ್ರಮಾಣತೆಯನ್ನು ನಿರ್ಧರಿಸಲು ಪರೀಕ್ಷೆಗೊಳಪಡಬೇಕಾದ ಒಂದು ಹೇಳಿಕೆಯೇ ಪ್ರಮೇಯ ಎಂದು ವ್ಯಾಖ್ಯಾನಿಸಿದ್ದಾರೆ.
ಪ್ರಸ್ತುತ ಸಂಶೋಧನೆಯ ಪ್ರಮೇಯಗಳು:
೧) ಕರ್ನಾಟಕ ಸರ್ಕಾರದ ಸಕಾಲ ಕಾರ್ಯಕ್ರಮ ಬಗ್ಗೆ ಗ್ರಾಮೀಣ ಎಲ್ಲಾ ಜನರಿಗೆ ತಿಳುವಳಿಕೆ ಇರುತ್ತದೆ.
೨) ಈ ಕಾರ್ಯಕ್ರಮದಿಂದ ಜನರಿಗೆ ಹೆಚ್ಚು ಅನುಕೂಲುಗಳು ಆಗುತ್ತದೆ.
೩) ಈ ಕಾರ್ಯಕ್ರಮದಿಂದ ನಾಗರಿಕರಿಗೆ ನಾಗರಿಕ ಸೇವೆಗಳು ನಿಗಧಿತ ಕಾಲಾವಧಿಯಲ್ಲಿ ಸೇವೆಗಳು ದೊರಕುತ್ತಿರುತ್ತದೆ.
೪) ಸಕಾಲ ಕಾರ್ಯಕ್ರಮವು ಜನರಿಗೆ ಸರ್ಕಾರ ತಲುಪಿಸಲು ವಿವಿಧ ರೀತಿಯ ಜಾಹೀರಾತುಗಳು ಮತ್ತು ವೃತ್ತ ಪ್ರತಿಕೆಗಳು ಅಥವಾ ಮಾಧ್ಯಮಗಳು ಮೂಲಕ ಮಾಹಿತಿಯನ್ನು ಹರಡಿಸುತಿದೆ,
೫) ಈ ಕಾರ್ಯಕ್ರಮದಿಂದ ಸರ್ಕಾರದ ಆಡಳಿತದ ಸುಧಾರಣೆ ಮತ್ತು ಜನರಿಗೆ ನಿಗಧಿತ ಸಮಯದಲ್ಲಿ ಸೇವೆ ಪಡೆಯುತ್ತಿದ್ದಾರೆ.
೬) ವೃತ್ತಾತ್ಮಕ ಸಮಾಜ ಕಾರ್ಯಕತರ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯರಿಗೆ ಅಲ್ಪಸ್ವಲ್ಪ ತಿಳಿದಿರುತ್ತದೆ.
ಸಂಶೋಧನಾ ವಿನ್ಯಾಸ:-
ಸಂಶೋಧಕರು ತನ್ನ ಸಂಶೋಧನೆಗಾಗಿ ಆಯ್ಕೆ ಮಾಡಲಾಗಿರುವ ಕ್ಷೇತ್ರ ಮತ್ತು ಕ್ಷೇತ್ರಕ್ಕೆ ಅನುಗುಣವಾದ ಮಾದರಿ ಅಥವಾ ನಮೂನೆ ಜೊತೆಗೆ ಮಾಹಿತಿ ಸಂಗ್ರಹಣೆಗಾಗಿ ಬಳಸಲಾಗಿರುವ ಉಪಕರಣಗಳು, ಸಂಶೋಧನೆಗಾಗಿ ಬೇಕಾದ ವೆಚ್ಚ ಮತ್ತು ಸಮಯವನ್ನು ನಿರ್ಧಿರಿಸಿ, ಸಂಶೋಧನಾ ಕಾರ್ಯವನ್ನು ಪ್ರಾರಂಭಿಸಲು ಮಾಡಿಕೊಳ್ಳವ ಯೋಜನೆಯನ್ನು ಸಂಶೋಧನೆ ವಿನ್ಯಾಸ ಎಂದು ಕರೆಯುಲಾಗುವುದು.
ಯಾವುದೇ ಒಂದು ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಬೇಕಾದರೆ ಅದಕ್ನೊಂದು ಪೂರ್ವಯೋಜನೆ ಅತ್ಯವಶ್ಯ.ಈ ಪೂರ್ವ ಯೋಜನೆಯನ್ನು ಸಂಶೋಧನಾ ವಿನ್ಯಾಸ ಒಳಗೊಂಡಿರುತ್ತದೆ. ಈ ಸಂಶೋಧನಾ ವಿನ್ಯಾಸದ ಮುಖ್ಯ ಉದ್ದೇಶವನ್ನು ಸಾಧಿಸಲು ಸಕ್ರಮವಾಗಿ ಸಂಶೋಧನೆಯನ್ನು ನಡೆಸಬೇಕಾಗುತ್ತದೆ.
ಸಮಗ್ರವಾಗಿ ಪರಿಶೋಧಿಸುವ ಸಂಶೋಧನಾ ವಿನ್ಯಾಸ ಎಂದರೆ ಒಂದು ಅಗೋಚರವಾದ ಸಂಗತಿಯ ಬಗ್ಗೆ ಅಮೂಲ್ಯವಾಗಿ ಶೋಧನೆಯನ್ನು ನಡೆಸಿ ಸೂಕ್ಷ್ಮತೆ ಸೂಕ್ಷ್ಮ ಸಂಗತಿಗಳನ್ನು ಅಧ್ಯಯನ ಮಾಡಿ ಸತ್ಯಾನ್ನೇಷಣೆ ಮಾಡುವುದು.ಇದೇ ಅದರ ಗುರಿಯು ಆಗಿರುತ್ತದೆ ಈ ವಿನ್ಯಾಸದ ಮಾರ್ಗವನ್ನು ಅನುಸರಿಸಿ ಸಂಶೋಧನೆಯ ಹಂತವನ್ನು ಪ್ರಾರಂಭಿಸಲಾಗಿದೆ.
ಮಾದರಿ (ನಮೂನೆ) ವಿಧಾನ:-
ಸಾಮಾಜಿಕ ಸಂಶೋಧನಾ ವಿಧಾನಗಳಲ್ಲಿ ಮಾದರಿ ವಿಧಾನವು ಜನಪ್ರಿಯಾಗೊಳ್ಳತ್ತದೆ.ಇದು ಸಂಶೋಧಕನು ತನ್ನ ಸಂಶೋಧನೆಯಲ್ಲಿ ಅನುಕರಿಸುತ್ತಿರುವ ಮುಖ್ಯ ಕ್ರಮಗಳಲ್ಲೊಂದು ಸಂಶೋಧನೆಯಲ್ಲಿ ಕ್ಷೇತ್ರವು ತುಂಬಾ ವಿಶಾಲವಾದದು.ಅದನ್ನು ಒಂದೇ ಬಾರಿಗೆ ಅಧ್ಯಯನ ಮಾಡಲು ಬಹಳ ಕಷ್ಟ ಆದ್ದರಿಂದ ಆ ಕ್ಷೇತ್ರದ ಸಾಮಾನ್ಯ ಗುಣಗಳನ್ನು ಹೊಂದಿರುವುದರೊಂದಿಗೆ ಅದನ್ನು ಪ್ರತಿನಿಧಿಸಬಹುದಾದಂತಹ ಅದರ ಭಾವೊಂದನ್ನು ಅಧ್ಯಯನ ದೃಷ್ಠಿಯಿಂದ ಆಯ್ದುಕೊಳ್ಳವುದಕ್ಕೆ ಮಾದರಿ ವಿಧಾನ ಎಂದು ಕರೆಯುತ್ತಾರೆ.
ವ್ಯಾಖ್ಯೆಗಳು:-
೧) ಕಾಲ್ವಿನ್ ಪ್ರಕಾರ ಮಾದರಿಯ ಆಯ್ಕೆ ಮಾಡಿದ ಸಮಗ್ರ ಗುಂಪಿನ ಒಂದು ಕಿರುಚಿತ್ರವೇ ವಿಭಜಿಸಿದ ಭಾಗ
೨) ಗೂಡ್ ಮತ್ತು ಹ್ಯಾಟ್ ಮಾದರಿಯು ವಿಶಾಲ ಕ್ಷೇತ್ರದ ಪ್ರಾತಿನಿಧಿಕ ಘಟಕ ಎಂದು ವ್ಯಾಖ್ಯಾನಿಸಿದ್ದಾರೆ
೩) ಸಾಮಾನ್ಯವಾದ ಅರ್ಧದಲ್ಲಿ ಕಠಿಣವಾದ ಕೆಲಸವನ್ನು ಸರಳವಾಗಿ ಸಾಧಿಸುವ ಪ್ರಯತ್ನ ಎನ್ನಬಹುದು
ಮಾದರಿ ವಿಧಾನ :-
ಪ್ರಸ್ತುತ ಸಂಶೋಧನೆಯ ಅಧ್ಯಯನ ಜಗತ್ತು ಸಾದಲಿ ಹೋಬಳಿಯ ಗ್ರಾಮ ಪಂಚಾಯಿತಿಗಳು ಒಟ್ಟು ೦೪ ಗ್ರಾಮ ಪಂಚಾಯಿತಿಗಳಲ್ಲಿ ಚುನಾಯಿತ ಸದಸ್ಯರ ೧೧೦ ಪ್ರತಿಯೊಂದು ಗ್ರಾಮ ಪಂಚಾಯ್ತಿಗಳಿಗೆ ಭೇಟಿ ನೀಡಿ ಸದಸ್ಯರ ಸಂಖ್ಯೆ ಹೆಸರು ಪಡೆದುಕೊಂಡು ಒಟ್ಟಿಗೆ ಸೇರಿಸಲಾಯಿತು.ಈ ೧೧೦ ರಲ್ಲಿ ೫೦ ಸದಸ್ಯರುನ್ನು ಯಾದ್ನಚ್ವಿಕ ಮಾದರಿ ವಿಧಾನವನ್ನು ಅನುಸರಿಸಿ ,ಲಾಟರಿ ವಿಧಾನ ( ಐoಣಣeಡಿಥಿ ಒeಣhoಜ ) ಬಳಸಲಾಯಿತು. ಈ ವಿಧಾನದ ಮೂಲಕ ೪ ಗ್ರಾಮ ಪಂಚಾಯ್ತಿಗೆ ಸೇರಿದ ೧೧೦ ಪ್ರತಿಯೊಬ್ಬ ಸದಸ್ಯರ ಹೆಸರನ್ನ ಮತ್ತು ಸಂಖ್ಯೆಯನ್ನು ಒಂದೇ ಬಣ್ಣದ ಚೀಟಿಯಲ್ಲಿ ಬರೆದು ಒಂದೇ ಆಕಾರದಲ್ಲಿ ಸುತ್ತಿ ಒಂದು ಡಬ್ಬಗೆ ಹಾಕಿ ಚನ್ನಾಗಿ ಕಲಕಲಾಯಿತು. ನಂತರ ಒಂದೊಂದಾಗಿ ತೆಗೆದು ಹೆಸರನ್ನು ಮತ್ತು ಸಂಖ್ಯೆಯನ್ನು ಬರೆದು ಕೊಂಡು ಡಬ್ಬದಿಂದ ಹೊರಗಿಡಲಾಯಿತು. ೦೪ ಗ್ರಾಮ ಪಂಚಾಯ್ತಿ ಚುನಾಇತ್ ಸದಸ್ಯರಲ್ಲಿ ೩೦ ಪುರುಷರು ೨೦ ಮಹಿಳಾ ಸದಸ್ಯರನ್ನು ಮಾಹಿತಿದಾರರಾಗಿ ಮಾದರಿ ರಚಿಸಲಾಯಿತು. ಹೀಗೆ ಒಟ್ಟು ೫೦ ಸದಸ್ಯರನ್ನು ಆಯ್ಕೆ ಮಾಡಿಕೊಳ್ಳಲಾಯಿತು.
ಮಾಹಿತಿ ಸಂಗ್ರಹಣೆಯ ಸಾಧನಗಳು:-
ಸಂಶೋಧನೆಯ ಧ್ಯೇಯೋದ್ದೇಶಗಳ ಮತ್ತು ಪ್ರಮೇಯಗಳನ್ನು ಗಮನದಲ್ಲಿರಿಸಿಕೊಂಡು ಮಾಹಿತಿ ಸಂಗ್ರಹಣೆ ಸಾಧನೆಗಳನ್ನು ರಚಿಸಲಾಯಿತು.
ಸಂಶೋಧನೆಯಲ್ಲಿ ನಂಬಲಾರ್ಹವಾದ ಮಾಹಿತಿ ಸಂಗ್ರಹಣೆಯ ಅತ್ಯಂತ ತ್ರಾಸದಾಯಕವಾದ ಆದರೆ ಅಷ್ಟೇ ಮಹತ್ವಪೂರ್ಣವಾದ ಕಾರ್ಯವಾಗಿರುತ್ತದೆ.ಕ್ಷೇತ್ರ ಕಾರ್ಯದ ಮೂಲಕ ಸಾಮಾಜಿಕ ಸಂಶೋಧಕನು ಮಾಹಿತಿ ಸಂಗ್ರಹಣೆಗಾಗಿ ಬಳಸಕೊಳ್ಳುವ ತಂತ್ರ ಸಾಧನಗಳಲ್ಲಿ ಬಹಳ ಮುಖ್ಯವಾದವುಗಳೆಂದರೆ.
೧) ಅವಲೋಕನ
೨) ಸಂದರ್ಶನ
೩) ಪ್ರಶ್ನಾವಳಿ
ಇವುಗಳ ಉಪಯೋಗದಿಂದ ಪ್ರಾಥಮಿಕ ಅಕರವನ್ನು ಪಡೆಯಲಾಯಿತು.ಉಳಿದಂತೆ ಲಭ್ಯವಿರುವ ಸಾಹಿತ್ಯ ಸಕಾಲ ಕಾರ್ಯಕ್ರಮದ ವಿಷಯಗಳು ಮತ್ತು ಪ್ರಕಟಣೆಗಳು ಹಾಗೂ ನಾಗರಿಕ ಸೇವಾ ಕಾಯ್ದೆಯ ಅಧಿನಿಯಮಗಳು ಆಕರವೆಂದು ಪರಿಗಣಿಸಲಾಯಿತು.
ಸಂಶೋಧನೆಯ ಮಿತಿಗಳು:-
ಪ್ರಸ್ತುತ ಸಂಶೋಧನೆಯು ವೈಜ್ಞಾನಿಕವಾಗಿ ರೂಪಗೊಂಡು ವ್ಯವಸ್ಥಿತವಾಗಿ ಮುಂದುವರೆದಿದ್ದಗ್ಯೂ ಕೆಲವು ಅನಿವಾರ್ಯ ಮಿತಿಗಳನ್ನು ಸಂಶೋಧನೆಯಲ್ಲಿ ಅನುಭವಿಸಲಾಯಿತು.
ಕೆಲವು ಈ ಕೆಳಗಿನಂತಿವೆ.
೧) ಸರ್ಕಾರದ ಸಕಾಲ ಕಾರ್ಯಕ್ರಮದ ಬಗ್ಗೆ ಗ್ರಾಮ ಪಂಚಾಯಿ ಸದಸ್ಯರಿಗೆ ಹೆಚ್ಚಿನ ತಿಳುವಳಿಕೆ ಇಲ್ಲ ಆದರು ಸಹ ಸಂಶೋಧನೆ ಕೈಗೊಳ್ಳಲಾಯಿದೆ.
೨) ಗ್ರಾಮ ಪಂಚಾಯಿತಿ ಸದಸ್ಯರಿಂದ ಸಕಾಲ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿಲ್ಲ.
ಅಧ್ಯಾಯ:-೦೪ ಮಾಹಿತಿಯ ವರ್ಗೀಕರಣ ಮತ್ತು ವಿಶ್ಲೇಷಣೆ
ಮುನ್ನುಡಿ:-
ಸಂಶೋಧನೆಯಲ್ಲಿ ಅಂಕಿ-ಅಂಶಗಳನ್ನು ಕಲೆಹಾಕುವುದರ ಸಲುವಾಗಿ ಯೋಜನೆಯನ್ನು ಸಿದ್ದಪಡಿಸುವುದು ಸಿದ್ದಪಡಿಸಿದ ಯೋಜನೆಗನುಗುಣವಾಗಿ ಅಂಕಿ-ಅಂಶಗಳನ್ನು ಕಲೆಹಾಕಲಾಗುವುದು ಇಷ್ಟರಿಂದಲೇ ನಿರೀಷತ ಉತ್ತರ ದೊರೆಯಲಾರದು. ಆದುದ್ದರಿಂದ ಕಲೆ ಹಾಕಿದ ಅಂಕಿ-ಅಂಶ ಮತ್ತು ಮಾಹಿತಿಯನ್ನು ವಿಶ್ಲೇಷಿಸುವುದು ಅತ್ಯಗತ್ಯವಾಗುತ್ತದೆ. ಸಂಗ್ರಹಿಸಿ ಮಾಹಿತಿಯನ್ನು ಸೂಕ್ತವಾಗಿ ವಿಶ್ಲೇಷಿಸುವುದು ಈ ವಿಶ್ಲೇಷಣೆಯಿಂದ ಬಂದ ಪರಿಣಾಮಗಳನ್ನು ಸರಿಯಾಗಿ ಅರ್ಥೈಸುವಿಕೆ-ಇವುಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.
ವ್ಯಾಖ್ಯೆಗಳು :-
೧) ಗೂಡ್ ಮತ್ತು ಹ್ಯಾಟ್ ಅವರು ಯಾವ ಸಂಶೋಧಕನು ತನ್ನ ಸಂಶೋಧನೆಯ ವಿಷಯವನ್ನು ಸಾಕಷ್ಟು ತಿಳಿದು ಕೊಂಡಿರುವನ್ನೋ ಅಂತಹ ವ್ಯಕ್ತಿಗೆ ತಾನು ಸ್ವಂತ ಕಲೆಹಾಕಿದ ವಿಷಯವನ್ನು ವಿಶ್ಲೇಷಿಸಲು ಕಠಿಣವೆನಿಸಲಾರದು ಎಂದು ವಿಶ್ಲೇಷಣೆಯ ಬಗ್ಗೆ ವ್ಯಾಖ್ಯಾನಿಸಿದ್ದಾರೆ.
೨) ಜೆ.ಹೆನ್ರಿ ಪೇನ್ ಕೇರ್ ಅವರು ಪಡೆದ ಸತ್ಯಾಂಶಗಳನ್ನು ಸರಿಯಾಗಿ ವಿಶ್ಲೇಷಿಸುವುದೇ ಸಂಶೋಧನೆ ಎಂದು ಕರೆದಿದ್ದಾರೆ.
ಸಂಶೋಧನೆಗಾಗಿ ಸಂಗ್ರಹಿಸಿದ ಮಾಹಿತಿಯನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿದ ಹೊರತು ಸಂಶೋಧನೆಯ ಧೈಯೋದ್ದೇಶಗಳನ್ನು ಈಡೇರಿಸಲಾಗದು ಮತ್ತು ಸಂಋಓಧನೆಯ ಫಲಿತಾಂಶಗಳು ಹೊರ ಬರುವುದಿಲ್ಲ ಫಲಿತಾಂಶ ಹೊರೆ ಬರದೆಯೇ ಸಲಹೆ -ಸೂಚನೆಗಳನ್ನು ಕೊಡುವುದು ಅಸಾಧ್ಯ ಅಂದರೆ ಸಂಶೋಧನೆಗೆ ಸಂಗ್ರಹಿಸಿದ ಮಾಹಿತಿಯ ವೈಜ್ಞಾನಿಕ ವರ್ಗೀಕರಣ ಮತ್ತು ವಿಶ್ಲೇಷಣೆ ಇಡೀ ಸಂಶೋಧನೆಗೆ ಒಂದು ನಿರ್ಧಿಷ್ಟ ಆಕಾರವನ್ನು ನೀಡುತ್ತಾರೆ.
ಈ ಅಧ್ಯಯನದಲ್ಲಿ ಮಾಹಿತಿದಾರ ಮತ್ತು ಆತನ ಕುಟುಂಬದ ಸದಸ್ಯರು ವಯಕ್ತಿಕ ಮಾಹಿತಿದಾರರ ಕುಟುಂಬ ಹೊಂದಿರುವ ವಸತಿ ಸೌಲಭ್ಯ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ ಪಂಚಾಯಿತಿ ರಾಜ್ ವ್ಯವಸ್ಥ, ಚುನಾವಣೆ ಕರ್ತವ್ಯ ಹಾಗೂ ಜವಾಬ್ದಾರಿ ಸರ್ಕಾರ ಯೋಜನೆಗಳ ಬಗ್ಗೆ ತಿಳುವಳಿಕೆ ಮತ್ತು ರಾಜಕೀಯ ಮಹಾತ್ವಾಕಾಂಕೆಗಳ ಬಗ್ಗೆ ಅರಿಯಲು ಸಂಶೋಧಕರನು ಪ್ರಶ್ನಾವಳಿಯನ್ನು ರಚಿತ ಸಂದರ್ಶನದ ಮೂಲಕ ೫೦ ಮಾಹಿತಿದಾರರಿಂದ ಸಂಗ್ರಹಿಸಿದ ಮಾಹಿತಿಯನ್ನು ವರ್ಗೀಕರಿಸಿ ವಿಶ್ಲೇಷಿಸಲಾಗಿದೆ.
ಸಂಶೋಧನಾ ಫಲ ಮತ್ತು ಸಲಹೆಗಳು ಹಾಗೂ ಉಪಸಂಹಾರ:-
ಸಂಶೋಧನಾ ಫಲ
ಅಭ್ಯುದಯ: ಕರ್ನಾಟಕ ರಾಜ್ಯದ ಸಕಾಲ ಕಾರ್ಯಕ್ರಮದ ಗ್ಗೆ ಗ್ರಾಮ ಪಂಚಾಯಿತಿ ಸದಸ್ಯರಿಗೆ ಇರುವ ಅರಿವನ್ನು ಕುರಿತು ಒಂದು ಅಧ್ಯಯನ ವಿಶೇಷವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲ?ಊಕಿನ ಸಾದಲಿ ಹೋಬಳಿಯ ಗ್ರಾಮ ಪಂಚಾಯಿತಿ ಸದಸ್ಯರನ್ನು ಅನ್ವಯಿಸಿ ಗ್ರಾಮ ಪಂಚಾಯಿತಿ ೫೦ ಚುನಾಯಿತ ಪ್ರತಿನಿಧಿಗಳನ್ನು ಮಾಹಿತಿದಾರರನ್ನಾಗಿಸಿಕೊಂಡು ಕೈಗೊಂಡು ಪ್ರಸ್ತುತ ಅಧ್ಯಾಯನದಿಂದ ಹೊರಬಂದಿರುವ ಫಲತಾಂಶಗಳನ್ನು ಈ ಅಧ್ಯಾಯನದಲ್ಲಿ ನೀಡಲಾಗಿದೆ.
ಮಾಹಿತಿದಾರರು:-
೧) ಸಂಶೋಧನೆಯಲ್ಲಿ ಮಾಹಿತಿದಾರರಾಗಿ ಪಾಲ್ಗೊಂಡಿರುವ ೫೦-ಗ್ರಾಮ ಪಂಚಾಯಿತ್ ಚುನಾಯಿತ ಪ್ರತಿನಿಧಿಗಳಲ್ಲಿ ಶೇ೬೦ ಪುರುಷರು ಮತ್ತು ಶೇ೪೦ ಮಹಿಳೆಯರು ಸೇರಿದ್ದು ಎಲ್ಲಾ ಮಾಹಿತಿದಾರರು ವಿವಾಹಿತರಾಗಿದ್ದಾರೆ.
೨) ಶೇ ೨೮.೪೮ಮತು ೨೪ ಮಾಹಿತಿದಾರರು ೨೦,೩೫,೫೦ ಮತ್ತು ೫೧-೬೫ ವರ್ಷಗಳ ವಯಸ್ಸಿನ ಗುಂಪುಗಳಲ್ಲಿ ಹಂಚಿಕೆಯಿದ್ದು ಶೇ ೨೮ ಮಾಹಿತಿದಾರರು ಯುವಕ ಗುಂಪುನ್ನು ಪ್ರತಿನಿಧಿಸಿದ್ದಾರೆ
೩) ಮಾಹಿತಿದಾರರಲ್ಲಿ ಹೆಚ್ಚಾಗಿ ಅನಕ್ಷರಸ್ಥರು ಪ್ರಾತಿನಿಧ್ಯವಿದಾಗ್ಯೂ ಪ್ರಾಥಮಿಕ ಮಾಧ್ಯಮಿಕ ಪ್ರೌಡ ಮತ್ತು ಶಿಕ್ಷಣಕ್ಕೆ ಮೇಲ್ಪಟ್ಟ ಶಿಕ್ಷಣ ಪಡೆದವರೂ ಸಹ ಚುನಾಯಿತಿ ಪ್ರತಿನಿಧಿಗಳಾಗಿರುವುದು
೪) ಶೇ ೯೮ ಮಾಹಿತಿದಾದರು ಹಿಂದೂ ಧರ್ಮ ಅನುಯಾಯಿಗಳಾದ್ದು ಶೇ ೦೫ ಮಾಹಿತಿದಾರರು ಇಸ್ಲಾಂ ಧರ್ಮದವರು ಪ್ರತಿನಿಧಿಸಿದ್ದಾರೆ.
೫) ಶೇ ೮೫ ಮಾಹಿತಿದಾರರ ಮಾತೃಭಾಷೆ ಕನ್ನಡ ಆಗಿದೆ,
೬) ಮಾಹಿತಿದಾರರಲ್ಲಿ ೧೧ ಜಾತಿಗಳಿಗೆ ಸೇರಿದವರಾಗಿದ್ದು ಪ್ರತಿನಿಧಿಸಿದ್ದು ಶೇ ೧೪ ಮಾಹಿತಿದಾರರು ಪರಿಶಿಷ್ಟ ಪಂಗಡವನ್ನು ಪ್ರತಿನಿಧಿಸಿದ್ದಾರೆ.
ಕೌಟುಂಬಿಕ ವಿವರ :
೧) ಅವಿಭಕ್ತ ಮತ್ತು ವಿಭಕ್ತ ಮಾದರಿ ಕುಟುಂಬಗಳನ್ನು ಅನುಕ್ರಮವಾಗಿ ಶೇ ೨೨ ಮತ್ತು ಶೇ ೭೮ ಮಾಹಿತಿದಾರರು ಪ್ರತಿನಿಧಿಸಿದ್ದಾರೆ.
೨) ಶೇ ೫೮ ಮಾಹಿತಿದಾರರು ಕುಟುಂಬದ ಮುಖ್ಯಸ್ಥರಾಗಿದ್ದಾರೆ.
ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿ:-
೧) ಶೇ ೯೮ ಮಾಹಿತಿದಾರರು ಗ್ರಾಮೀಣ ಪ್ರದೇಶದವರಾಗಿದ್ದು ಗ್ರಾಮ ಪಂಚಾಯಿತ್ ಯ ಸದಸ್ಯರಾಗಿರುವುದು.
೨) ಶೇ ೯೮ ಮಾಹಿತಿದಾರರು ಸ್ವಂತ ವಾಸದ ಮನೆಯನ್ನು ಹೊಂದಿದ್ದಾರೆ ಶೇ ೮೮ ಮಾಹಿತಿದಾರರ ಕುಟುಂಬದ ಉದ್ಯೋಗ ಕೃಷಿಯನ್ನು ಆಧರಿಸಿದೆ.
೩) ಮಾಹಿತಿದಾರರು ಕೃಷಿ ಕೂಲಿ ವ್ಯಾಪಾರ ಗ್ರಾಮ ಪಂಚಾಯಿಒತ್ ಕಾಮಗಾರಿ ಗುತ್ತಿಗೆ ಕೃಷಿ ಮತ್ತು ವ್ಯಾಪಾರ ಮತ್ತು ನಿರುದ್ಯೋಗ ಗೃಹಿಣಿ ಇವುಗಳನ್ನು ಅನುಕ್ರಮವಾಗಿ ಶೇ ೫೬,೧೬,೧೨ ಮತ್ತು ೦೨ ರ ಪ್ರಮಾಣದಲ್ಲಿ ಉದ್ಯೋಗಕ್ಕಾಗಿ ಆಶ್ರಯಿಸಿದ್ದಾರೆ.
೪) ಶೇ ೪೬ ಮಾಹಿತಿದಾರರು ಗ್ರಾಮ ಪಂಚಾಯಿತಿ ಸದಸ್ಯತ್ವ ದೊರೆತ ನಂತರದಲ್ಲಿ ತಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿಯಲ್ಲಿ ಪ್ರಗತಿಯಾಗಿರುವುದುನ್ನು ಗುರುತಿಸಿರುವರಾದರೂ, ಪ್ರಗತಿಗೆ ಕಾರಣಗಳನ್ನು ಪ್ರಗತಿಪರ ಕೃಷಿ ಮತ್ತು ವ್ಯಾಪಾರದಲ್ಲಿ ಮುನ್ನಡೆ ಮತ್ತು ಕಾರಣಗಳನ್ನು ಮುಂದೂ ಮಾಡಿದ್ದಾರೆ.
ಸಕಾಲ ಕಾರ್ಯಕ್ರಮ ಮತ್ತು ಮಾಹಿತಿದಾರ :
೧) ಕರ್ನಾಟಕ ಸರ್ಕಾರದ ಸಕಾಲ ಕಾರ್ಯಕ್ರಮ ಬಗ್ಗೆ ತಿಳಿದಿರುವವರು ಶೇ ೭೦೧ ರ ಪ್ರಮಾಣದಲ್ಲಿದೆ.
೨) ಪಂಚಾಯಿತ್ ರಾಜ್ ವ್ಯವಸ್ಥೆಯಲ್ಲಿನ ಮೀಸಲಾತಿಯ ಸವಿವರಗಳನ್ನು ಶೇ ೪೮ ಮಾಹಿತಿದಾರರು ಮಾತ್ರ ತಿಳಿದಿದ್ದಾರೆ.
೩) ಸಕಾಲ ಕಾರ್ಯಕ್ರಮವು ಜನರಿಗೆ ಹೇಗೆ ಉಪಯೋಗವಾಗುತ್ತದೆ. ಎಂಬುವುದರ ಬಗ್ಗೆ ತಿಳಿದಿವರು ಶೇ ೬೦ ರಷ್ಟು ಸದಸ್ಯರು.
೪) ನಾಗರಿಕ ಸೇವಾ ಕಾಯಿದೆಗಳ ಬಗ್ಗೆ ತಿಳಿವಳಿಕೆ ಇರುವರು ಶೇ ೪೦ ರಷ್ಟುರಿದ್ದಾರೆ.
೫) ಈ ಕಾರ್ಯಕ್ರಮವು ಇವರಿಗೆ ಹೆಚ್ಚಿನ ಅನುಕೂಲವಾಗಿದೆ.
೬) ಸಕಾಲ ಕಾರ್ಯಕ್ರಮದ ಬಗ್ಗೆ ಪಂಚಾಯಿತ್ ಜನರಿಗೆ ತಲುಪಲು ಶೇ ೫೦ ರಷ್ಟು ಸದಸ್ಯರು ಪ್ರಯತ್ನಸಿದ್ದಾರೆ.
ಸಲಹೆ:-
೧) ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಕಾಲ ಕಾರ್ಯಕ್ರಮದ ಬಗ್ಗೆ ತಿಳುವಳಿಕೆ ನೀಡಬೇಕು.
೨) ಅಭ್ಯರ್ಥಿಗಳಿಗೆ ಕನಿಷ್ಠಿ ಶಿಕ್ಷಣ ಮಟ್ಟವನ್ನು ನಿಗಧಿಪಡಿಸುವ ಅವಶ್ಯಕತೆ ಇದೆ.
೩) ಚುನಾಯಿತಿ ಸದಸ್ಯರಿಗೆ ವಿವಿಧ ವಿಚಾರಗಳ್ಲಿ ಆಗಾಗ್ಗೆ ತರಬೇತಿ ಮತ್ತು ಪುನರ್ ಮನನ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಮತ್ತು ಸದಸ್ಯರ ಭಾಗವಹಿಸುವಿಕೆಯನ್ನು ಶಾಸನಬದ್ದವಾಗಿ ಕಡ್ಡಾಯಗೊಳಿಸಬೇಕು
೪) ಪಂಚಾಯಿತಿಯ ಎಲ್ಲಾ ಸರ್ವಸದಸ್ಯರ ಸಭೆಗಳಲೂ ಹಾಜರಾತಿ ಮತ್ತು ಪೂರ್ಣ ಪ್ರಮಾಣದ ಭಾಗವಹಿಸುವಿಕೆಯನ್ನು ಕಡ್ಡಾಯಗೊಳಿಸಬೇಕು
೫) ಸರ್ಕಾರಿದಿಂದ ಹೊಸ ಕಾರ್ಯಕ್ರಮಗಳು ಅನುಷ್ಠಾನುವಾದಾಗ ಅದರ ಬಗ್ಗೆ ಪಂಚಾಯಿತಿಯ ಸದಸ್ಯರಿಗೆ ಮತ್ತು ಜನರಿಗೆ ತಿಳುವಳಿಕೆ ನೀಡಬೇಕು ಹಾಗೂ ಅದರ ಬಗೆ ಚರ್ಚಿಸಬೇಕು.
೬) ಪಂಚಾಯಿತಿಯ ಕಾರ್ಯಕ್ರಮಗಳಲ್ಲಿ ಜನರನ್ನು ಭಾಗವಹಿಸಬೇಕಾಗಿದೆ.
೭) ಪಂಚಾಯಿತಿಯ ಜನರಿಗೆ ನಾಗರಿಕ ಸೇವೆಗಳನ್ನು ನಿಗಧಿತ ಸಮಯದಲ್ಲಿ ಪೊರೃಸಲು ಪ್ರಯತ್ನಸಬೇಕು
೮) ಸಕಾಲ ಕಾರ್ಯಕ್ರಮದ ಬಗ್ಗೆ ಜನರಿಗೆ ತಿಳುವಳಿಕೆ ನೀಡುವುದಕ್ಕಾಗಿ ಒಂದು ಸಮತಿಯನ್ನು ಪಂಚಾಯಿತಿಯಲ್ಲಿ ಸೇಮಿಸಬೇಕು.
೯) ಸಕಾಲ ಕಾರ್ಯಕ್ರಮವು ಯಶಸ್ವಿಗೊಳಿಸಲು ಗ್ರಾಮೀಣ ಮಟ್ಟದಿಂದ ಪ್ರಯತ್ನಸಬೇಕಾಗಿದೆ.
೧೦) ಮಹಿಳಾ ಸದಸ್ಯರುಗಳು ಕ್ರಮೇಣವಾದರು ಪುರುಷರು ಮುಷ್ಠಿಯಿಂದ ಹೊರಬಂದು ಸ್ವಂತ ಅಭಿಪ್ರಾಯಗಳನ್ನು ವ್ಯಕ್ತಿ ಪಡಿಸುವ ಮತ್ತು ನಿರ್ಧಾರಗಳನ್ನು ಕೈಗೊಳ್ಳವತ್ತ ಮುನ್ನೆಡೆಯಬೇಕು.
೧೧) ತ್ವರಿತ ಮತ್ತು ಪರಿಣಾಮಕಾರಿಯಾದ ಅಭ್ಯದಯ ಕಾರ್ಯಕ್ರಮ ಗಳ ಅನುಷ್ಠಾನದಲ್ಲಿ ಪಂಚಾಯಿತಿ ಸಂಸ್ಥೆಗಳು ಸ್ವಯಂ ಸೇವಾ ಸಂಸ್ಥೆಗಳೊಡನೆ ಕೈ ಜೋಡಿಸಲು ಮುಂದಾಗಬೇಕು.
೧೨) ಸಕಾಲ ಕಾರ್ಯಕ್ರಮ ಬಗ್ಗೆ ಗ್ರಾಮೀಣ ಜನರಿಗೆ ತಿಳಿಸುವುದಕ್ಕಾಗಿ ವಿವಿಧ ರೀತಿಯ ವಿಧಾನಗಳನ್ನು ಅನುಸರಿಸಬೇಕಾಗಿದೆ.
ಈ ಅಧ್ಯಯನದಲ್ಲಿ ಮಾಹಿತಿದಾರರಾಗಿ ಪಾಲ್ಗೊಂಡಿರುವ ೫೦ ಗ್ರಾಮ ಪಂಚಾಯ್ತಿ ಸದಸ್ಯರನ್ನು ಅವರ ವಯೋಮಾನಕ್ಕೆ ಅನುಗುಣವಾಗಿ ವಯಸ್ಸಿನ ಗುಂಪುಗಳಾಗಿ ವಿಭಾಗಿಸಲಾಗಿದೆ.ಈ ಮೂರು ವಯಸ್ಸಿನ ಗುಂಪುಗಳೆಂದೆರೆ ೨೦-೩೫,೩೬-೫೦,೫೧-೬೫,ಒಳಗೊಂಡ ಗುಂಪು .ಈ ಮೂರು ವಯಸ್ಸಿನ ಗುಂಪುಗಳಲ್ಲಿ ಮಾಹಿತಿದಾರು ಅನುಕ್ರಮವಾಗಿ ಶೇಕಡಾ ೨೮,೪೮ ಹಾಗೂ ೨೪ ರ ಪ್ರಮಾಣದಲ್ಲಿ ಶೇಕಡಾ ಅನ್ವಯ ಪ್ರಾತಿನಿಧ್ಯ ಪಡೆದಿರುವುದು ಮೇಲಿನ ಪಟ್ಟಿಯಲ್ಲಿ ಕಾಣಬಹುದಾಗಿದೆ. ಬಹು ಸಂಖ್ಯೆಲ್ಲದಿದ್ದರೂ ಹಂಚಿಕೆ ಶೇ ೨೮ ಸದಸ್ಯರು ಕಡಿಮೆ ವಯಸ್ಸಿನ ಗುಂಪುನಲ್ಲಿ ಅಂದರೆ ೨೦-೩೫ ವರ್ಷಗಳ ವಯಸ್ಸಿನ ಗುಂಪುನಲ್ಲಿ ಕಂಡು ಬರುವುದು ಯುವ ಶಕ್ತಿ ರಾಜಕೀಯ ಹಾಗೂ ಅಭ್ಯದಯ ಪ್ರಕ್ರಿಯೆಯಲ್ಲಿ ಮಹತ್ವ ಪೂರ್ಣ ವಹಿಸುತ್ತಿದ್ದಾರೆ.
ಸೂಚಿಸಿರುವಂತೆ ಕರ್ನಾಟಕ ರಾಜ್ಯದ ಸಕಾಲ ಕಾರ್ಯಕ್ರಮದ ಬಗ್ಗೆ ೩೫ (೭೦%) ಪ್ರತಿವಾದಿಗೆ ಈ ಕಾರ್ಯಕ್ರಮದ ಬಗ್ಗೆ ಅರಿವುವಿದೆ ಹಾಗೂ ಈ ಕಾರ್ಯಕ್ರಮದ ಬಗ್ಗೆ ೧೫ (೩೦) ರಷ್ಟು ಪ್ರತಿವಾದಿಗಳಿಗೆ ಅರಿವುವಿಲ್ಲ ಎಂಬುದಾಗಿ ತಿಳಿದು ಬಂದಿದೆ. ಬಹು ಪ್ರಾತಿವಾದಿಗಳಗೆ ಕರ್ನಾಟಕ ರಾಜ್ಯದ ಸಕಾಲ ಕಾರ್ಯಕ್ರಮದ ಬಗ್ಗೆ ಅರಿವು ವಿದೆ. ಎಂಬುವುದು ಈ ಮೇಲಿನ ಪಟ್ಟಿಯಿಚಿದ ತಿಳಿದು ಬರುತ್ತದೆ.
ಸಕಾಲ ಕಾರ್ಯಕ್ರಮದ ಬಗ್ಗೆ ಮಾಹಿತಿದಾರ ಕುಡುಂಬಗಳಿಗೆ ಸಕಾಲ ಕಾರ್ಯಕ್ರಮದ ಬಗ್ಗೆ ಅರಿವುವಿದೆ ಎಂಬುದಾಗಿ ೩೪% ರಷ್ಟು ಮಾಹಿತಿದಾರು ತಿಳಿಸಿದ್ದಾರೆ. ಅದೇ ರೀತಿ ಈ ಕಾರ್ಯಕ್ರಮದ ಬಗ್ಗೆ ೬೬% ಪ್ರತಿವಾದಿ ಕುಟುಂಬಗಳಿಗೆ ಅರಿವುವಿಲ್ಲ.
ಬಹು ಪ್ರಾತಿವಾದಿಗಳ ಕುಟುಂಬಗಳಿಗೆ ( ೬೦%) ಈ ಸಕಾಲ ಕಾರ್ಯಕ್ರಮದ ಬಗ್ಗೆ ಅರಿವುದಿಲ್ಲ.
ಬೆಂಗಳೂರು ವಿಶ್ವವಿದ್ಯಾನಿಲಯ ಬೆಂಗಳೂರು ಸಮಾಜ ಕಾರ್ಯಯ ವಿಭಾಗ
ಪ್ರಶ್ನಾವಳಿ:-
ವಿಷಯ:- ಕರ್ನಾಟಕ ರಾಜ್ಯದ ಸಕಾಲ ಕಾರ್ಯಕ್ರಮದ ಬಗ್ಗೆ ಗ್ರಾಮ ಪಂಚಾಯ್ತಿ ಸದಸ್ಯರಿಗೆ ಇರುವ ಅರಿವನ್ನು ಕುರಿತು ಒಂದು ಅಧ್ಯಯನ ವಿಶೇಷವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಹೋಬಳಿಯ ಗ್ರಾಮ ಪಂಚಾಯಿತಿಗಳಗೆ ಸಂಬಂಧಿಸಿದಂತೆ.
ಸಂಧರ್ಶನದ ಮಾರ್ಗಸೂಚಿ-ಗ್ರಾಮ ಪಂಚಾಯ್ತಿ ಸದಸ್ಯರಿಗೆ
ಸದಸ್ಯರ ವೈಯಕ್ತಿಕ ಮಾಹಿತಿ:-
೧) ಸದಸ್ಯರ ಹೆಸರು:-
೨) ಲಿಂಗ ಎ) ಸ್ರ್ತೀ ಬಿ) ಪುರುಷ:-
೩) ವಯಸ್ಸು:- ಎ) ೨೫ ರಿಂದ ೩೦ ಬಿ) ೩೦ರಿಂದ ೩೫ ಸಿ) ೩೫ ರಿಂದ ೪೦ ಡಿ) ೪೦ ಮೇಲ್ಪಟ್ಟು
೪) ವಿದ್ಯಾರ್ಹತೆ:- ಎ) ಪ್ರಾಥಮಿಕ ಬಿ )ಮಾಧ್ಯಮಿಕ ಸಿ) ಪ್ರೌಢ ಡಿ) ಉನ್ನತ
೫) ಧರ್ಮ:- ಎ) ಹಿಂದೂ ಬಿ) ಮುಸ್ಲಿಂ ಸಿ)ಕ್ರೈಸ್ಥ ಡಿ)ಇತರೆ
೬) ತಿಳಿದಿರುವ ಭಾಷೆ ಎ) ಕನ್ನಡ ಬಿ) ಹಿಂದಿ ಸಿ) ಇಂಗ್ಲೀಷ್ ಡಿ) ಇತರೆ
೭) ಉದ್ಯೋಗ:- ಎ)ವ್ಯವಸಾಯ ಬಿ) ವಾಣಿಜ್ಯ ಸಿ)ಖಾಸಿಗಿ ಡಿ) ಇತರೆ
೮) ವೈವಾಹಿಕ ಸ್ಥಿತಿ:- ಎ) ಅವಿವಾಹಿತ ಬಿ) ವಿವಾಹಿತ ಸಿ) ವಿಧವೆ ಡಿ )ವಿಚ್ಛೇಧನ
೯) ವಾರ್ಷಿಕ ಆದಾಯ:- ಎ) ೧೦೦೦೦ ಬಿ)೨೦೦೦೦ ಸಿ)೩೦೦೦೦ ಡಿ)೫೦೦೦೦
೧೦) ಕುಟುಂಬದ ಮಾದರಿ :- ಎ) ಅವಿಭಕ್ತ ಬಿ)ವಿಭಕ್ತ
೧೧) ಕುಟುಂಬದ ಇತರೇ ಸದಸ್ಯರು ವಿವರ :-
ಕ್ರ.ಸಂ ಹೆಸರು ಸಂಬಂಧ ವಯಸ್ಸು ವಿದ್ಯಾರ್ಹತೆ ಉದ್ಯೋಗ
೦೧
೦೨
೦೩
೦೪
೦೫
ಸಕಾಲ ಕಾರ್ಯಕ್ರಮದ ಬಗ್ಗೆ ಗ್ರಾಮ ಪಂಚಾಯ್ತಿ ಸದಸ್ಯರಿಗೆ ಇರುವ ಅರಿವನ್ನು ತಿಳಿಯುವುದು.
೧) ಕರ್ನಾಟಕ ರಾಜ್ಯದ ಸಕಾಲ ಕಾರ್ಯಕ್ರಮದ ಬಗ್ಗೆ ನಿಮಗೆ ಅರಿವಿದೆಯೇ ? ಅ) ಹೌದು ಬಿ) ಇಲ್ಲ
೨) ಈ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದವರು ಯಾರು ?
ಅ) ಗ್ರಾಮ ಪಂಚಾಯಿತಿಯ ಕಾರ್ಯದರ್ಶಿಗಳು
ಆ) ಗ್ರಾಮ ಪಂಚಾಯಿತಿಯ ಅಧ್ಯಕ್ಷರು
ಇ) ವಾರ್ತಾ ಪತ್ರಿಕೆಗಳು
ಈ) ಮೇಲಿನ ಎಲ್ಲಾವೂ
೩) ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಕುಟುಂಬದವರಿಗೆ ಅರಿವು ಇದೆಯೇ ?
ಅ) ಹೌದು ಆ) ಇಲ್ಲ
೪) ಸಕಾಲ ಕಾರ್ಯಕ್ರಮದ ಬಗ್ಗೆ ನಿಮ್ಮ ಪಂಚಾಯಿತಿಯ ಜನರಿಗೆ ಅರಿವು ಇದೆಯೇ ?
ಅ) ಹೌದು ಆ) ಇಲ್ಲ
ಸಕಾಲ ಕಾರ್ಯಕ್ರಮದ ಬಗ್ಗೆ ಇರುವ ಮಾಹಿತಿಯನ್ನು ಜನರು ಹೇಗೆ ತಿಳಿದು ಕೊಂಡಿದ್ದಾರೆ ಎಂಬುದರ ಬಗ್ಗೆ ತಿಳಿಯುವುದು.
೫) ಸಕಾಲ ಕಾರ್ಯಕ್ರಮದ ಬಗ್ಗೆ ಇರುವ ಮಾಹಿತಿಯನ್ನು ನಿಮ್ಮ ಪಂಚಾಯ್ತಿಯ ಜನರಿಗೆ ತಿಳುವಳಿಕೆ ನೀಡಲು ಪ್ರಯತ್ನಸಿದ್ದಿರ?
ಅ) ಹೌದು ಆ) ಇಲ್ಲ
೬) ಸಕಾಲ ಕಾರ್ಯಕ್ರಮ ಬಗ್ಗೆ ಇರುವ ಮಾಹಿತಿಯನ್ನು ಗ್ರಾಮ ಪಂಚಾಯತ್ ಸೂಚನಾ ಫಲಕದಲ್ಲಿ
ಹಾಕಿದ್ದೀರ ? ಅ) ಹೌದು ಆ) ಇಲ್ಲ
೭) ಸಕಾಲ ಕಾರ್ಯಕ್ರಮದ ಬಗ್ಗೆ ಇರುವ ಮಾಹಿತಿಯನ್ನು ಜನರು ಹೇಗೆ ತಿಳಿದುಕೊಂಡಿದ್ದಾರೆ ?
ಅ) ಮಾಧ್ಯiಗಳ ಮೂಲಕ
ಆ) ಗ್ರಾಮ ಪಂಚಾಯಿತ್ ಸೂಚನ ಫಲಕದ ಮೂಲಕ
ಇ) ಸರ್ಕಾರದ ಜಾಹೀರಾತುಗಳ ಮೂಲಕ
ಈ) ಮೇಲಿನ ಎಲ್ಲವೂ
೮) ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಪಂಚಾಯ್ತಿಯ ಜನರಿಗೆ ತಿಳುವಳಿಕೆ ನೀಡಿದ್ದೀರಾ?
ಅ) ಹೌದು ಆ) ಇಲ್ಲ
೯) ಸಕಾಲ ಕಾರ್ಯಕ್ರಮದ ಬಗ್ಗೆ ಪಂಚಾಯ್ತಿಯ ಜನರಿಗೆ ತಿಳುವಳಿಕೆ ನೀಡಲು ಪಂಚಾಯಿತ್ ಕಡೆಯಿಂದ
ಯಾವುದಾದರೂ ಕಾರ್ಯಕ್ರಮ ಹಮ್ಮಿ ಕೊಂಡಿದ್ದೀರಾ ?
ಅ) ಹೌದು ಆ) ಇಲ್ಲ
೧೦ ) ಈ ಕಾರ್ಯಕ್ರಮದ ಬಗ್ಗೆ ತಿಳಿಯಲು ಜನರು ಆಸಕ್ತಿ ವಹಿಸುತ್ತಿದ್ದಾರೆಯೇ ?
ಅ) ಹೌದು ಆ) ಇಲ್ಲ
ಸಕಾಲ ಕಾರ್ಯಕ್ರಮದ ಬಗ್ಗೆ ಪಂಚಾಯಿತ್ ಸದಸ್ಯರಿಗೆ ಯಾವವ ವಿಚಾರಗಳಲ್ಲಿ ತಿಳುವಳಿಕೆವಿದೆ ಎಂಬುವುದರ ಬಗ್ಗೆ ತಿಳಿಯುವುದು
೧೧) ನಿಮ್ಮ ಪಂಚಾಯ್ತಿಯ ವ್ಯಾಪ್ತಿಗೆ ಬರುವ ನಾಗರಿಕ ಸೇವೆಗಳಿಗೆ ಯಾರು ಪರಿಹಾರ ನೀಡುತ್ತಾರೆ ?
ಅ) ಪಂಚಾಯತ್ ಅಭಿವೃದ್ಧಿ ಅಧಿಕಾರಿ/ ಕಾರ್ಯದರ್ಶಿ
ಆ) ಪಂಚಾಯತ್ ಅಧ್ಯಕ್ಷರು
ಇ) ಕಾರ್ಯ ನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ
ಈ) ಪಂಚಾಯತ್ ಸದಸ್ಯರುಗಳು
೧೨) ಸಕಾಲ ಕಾರ್ಯಕ್ರಮ ವ್ಯಾಪ್ತಿಗೆ ಎಷ್ಟು ಇಲಾಖೆಗಳು ಬರುತ್ತವೆ ?
ಅ) ೩೦ ಆ) ೨೮ ಇ) ೩೩ ಈ) ೨೬
೧೩ ) ಈ ಕಾರ್ಯಕ್ರಮ ವ್ಯಾಪ್ತಿಗೆ ಎಷ್ಟು ಸೇವೆಗಳು ಬರುತ್ತವೆ?
ಅ) ೩೦೦ ಆ) ೨೬೫ ಇ) ೨೫೦ ಈ) ೩೫೦
೧೪) ನಿಮ್ಮ ಪಂಚಾಯಿತಿಗೆ ಸಂಬಂಧಪಟ್ಟ ನಾಗರೀಕ ಸೇವೆಗಳ ಬಗ್ಗೆ ನಿಮಗೆ ಅರಿವಿದೆಯೇ ?
ಅ) ಹೌದು ಆ) ಇಲ್ಲ
೧೫) ಬೇರೆ ಇಲಾಖೆಗಳಲ್ಲಿ ಇರುವ ನಾಗರೀಕ ಸೇವೆಗಳ ಬಗ್ಗೆ ತಿಳುವಳಿಕೆ ಇದೆಯೇ ?
ಅ) ಹೌದು ಆ) ಇಲ್ಲ
೧೬) ನಾಗರಿಕರ ಸೇವೆಗಳನ್ನು ನಿಗಧಿತ ಸಮಯದಲ್ಲಿ ಪೊರೈಸದಿದ್ದಲ್ಲಿ ಪ್ರತಿದಿನಕ್ಕೆ ಎಷ್ಟುರಿಂದ ಮತ್ತು ಎಷ್ಟುರವರೆಗೆ ಪರಿಹಾರ ಧನವನ್ನು ಸಂಬಂಧಪಟ್ಟ ಅಧಿಕಾರಿ ನಾಗರಿಕನಿಗೆ ನೀಡುತ್ತಾರೆ ?
ಅ) ೨೦ ರಿಂದ ೫೦೦
ಆ) ೧೦ ರಿಂದ ೩೦೦
ಇ) ೩೦ ರಿಂದ ೨೬೦
ಈ) ೪೦ ರಿಂದ ೬೦೦
೧೭ ) ಈ ಕಾರ್ಯಕ್ರಮವು ಯಾರಿಗೆ ಅನುಕೂಲವಾಗುತ್ತಿದೆ?
ಅ) ಬಡವರಿಗೆ ಆ) ಹಿಂದುಳಿದ ವರ್ಗದವರಿಗೆ
ಇ) ಶ್ರೀಮಂತರಿಗೆ ಈ) ಮೇಲಿನ ಎಲ್ಲಾರಿಗೂ
೧೮) ಕರ್ನಾಟಕ ನಾಗರಿಕ ಸೇವೆಗಳ ಖಾತರಿ ಅಧಿನಿಯಮದ ಬಗ್ಗೆ ತಿಳುವಳಿಕೆ ಇದೀಯೇ ?
ಅ) ಹೌದು ಆ) ಇಲ್ಲ
೧೯) ಮಾಹಿತಿ ಹಕ್ಕು ಕಾಯ್ದೆ (ಆರ್.ಟಿ.ಐ) ಬಗ್ಗೆ ತಿಳುವಳಿಕೆ ಇದೆಯೇ ?
ಅ) ಹೌದು ಆ) ಇಲ್ಲ
೨೦) ಸಕಾಲ ಕಾರ್ಯಕ್ರಮದ ಧ್ಯೇಯ (ಘೋಷ) ವಾಕ್ಯ ಯಾವುದು ?
ಅ) ಇಂದು ನಾಳೆ ಇನ್ನಿಲ್ಲ ಹೇಳಿದ ಸಮಯಕ್ಕೆ ತಪ್ಪೂಲ್ಲ
ಆ) ಅತಿ ಬೇಗನೆ ನಾಗರೀಕರಿಗೆ ಸೇವೆ ಒದಗಿಸುವುದು
ಇ) ನಾಗರಿಕರಿಗೆ ನಿಗಧಿತ ಸಮಯದಲ್ಲಿ ಮಾಹಿತಿ ನೀಡುವುದು
ಈ) ಮೇಲಿನ ಎಲ್ಲಾವೂ
೨೨) ಸಕಾಲ ಕಾರ್ಯಕ್ರಮ ಯಾವಾಗ ಜಾರಿಗೆ ಬಂದಿತು ?
ಅ) ೦೨-೦೪-೨೦೧೨ ಆ) ೦೨-೦೩-೨೦೧೨
ಇ) ೦೨-೦೫-೨೦೧೨ ಈ) ೦೫-೦೪-೨೦೧೨
೨೩) ಜಾತಿ ಪ್ರಮಾಣ ಪತ್ರಗಳು ಯಾರು ನೀಡುತ್ತಾರೆ ?
ಅ) ತಹಿಸೀಲ್ದಾರ್ ಆ) ಜಿಲ್ಲಾಧಿಕಾರಿ ಇ) ಪ್ರಾದೇಶಿಕ ಆಯುಕ್ತರು ಈ) ಪಂಚಾಯಿತಿಯ ಕಾರ್ಯದರ್ಶಿಗ
೨೪) ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರಗಳು ಎಷ್ಟು ದಿನಗಳ ಒಳಗೆ
ಸಂಬಂಧಪಟ್ಟ ಅಧಿಕಾರಿ ನಾಗರಿಕರಿನಿಗೆ ಕೊಡುತ್ತಾರೆ ?
ಅ) ೧೫ ದಿನಗಳ ಒಳಗೆ
ಆ) ೨೧ ದಿನಗಳ ಒಳಗೆ
ಇ) ೩೦ ದಿನಗಳ ಒಳಗೆ
ಈ) ೧೮ ದಿನಗಳ ಒಳಗೆ
೨೫) ನಿರುದ್ಯೋಗ ಪ್ರಮಾಣ ಪತ್ರ ಯಾರು ನೀಡುತ್ತಾರೆ ?
ಅ) ಗ್ರಾಮ ಲೆಕ್ಕಿಗ
ಆ) ಪಂಚಾಯ್ತಿ ಕಾರ್ಯದರ್ಶಿಗಳು
ಇ) ತಹಿಸೀಲ್ದಾರ್
ಈ) ಜಿಲ್ಲಾಧಿಕಾರಿ
೨೬) ಖಾತಾ ಬದಲಾವಣೆ ಯಾರು ಮಾಡುತ್ತಾರೆ ?
ಅ) ಗ್ರಾಮ ಲೆಕ್ಕಿಗ
ಆ) ಪಂಚಾಯ್ತಿ ಕಾರ್ಯದರ್ಶಿಗಳು
ಇ) ತಹಿಸೀಲ್ದಾರ ಈ) ಜಿಲ್ಲಾಧಿಕಾರಿ
೨೭) ಕಟ್ಟಡ ಪರವನಾಗಿ ನೀಡುವರು ಯಾರು ?
ಅ) ಗ್ರಾಮ ಪಂಚಾಯ್ತಿ ಕಾರ್ಯದರ್ಶಿ
ಆ) ಗ್ರಾಮ ಲೆಕ್ಕಿಗ
ಇ) ತಹಿಸೀಲ್ದಾರ್
ಈ) ಜಿಲ್ಲಾಧಿಕಾರಿ
೨೮) ಕುಡಿಯುವ ನೀರಿನ ನಿರ್ವಹಣೆ ಮತ್ತು ಸಣ್ಣ ಪ್ರಮಾಣದ ರಿಪೇರಿಗಳು ಯಾರು ಹತೋಟಿಗೆ
ಬರುತ್ತದೆ ?
ಅ) ಗ್ರಾಮ ಪಂಚಾಯ್ತಿ ಕಾರ್ಯದರ್ಶಿ
ಆ) ತಹಿಸೀಲ್ದಾರ್
ಇ) ಜಿಲ್ಲಾಧಿಕಾರಿ
ಈ) ಎಲ್ಲಾರು
೨೯) ಮಹಾತ್ಮಾಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕಾಮಗಾರಿಗಳಲ್ಲಿ ಕೆಲಸ ಮಾಡಲು ಅರ್ಜಿ ಸಲ್ಲಿಸಿದ ನಿರುದ್ಯೋಗ ಕಾರ್ಮಿಕರ ನೋಂದಣಿ ಮತ್ತು ಉದ್ಯೋಗ ಚೀಟಿಗಳನ್ನು ನೀಡುವರು ಯಾರು ?
ಅ) ಪಂಚಾಯಿತ್ ಅಭಿವೃದ್ಧಿ ಅಧಿಕಾರಿ
ಆ) ಶಾಲೆಯ ಮುಖ್ಯೋಪಾಧ್ಯಾಯರು
ಇ) ತಹಿಸೀಲ್ದಾರ್ ಈ) ಎಲ್ಲಾರು
೩೦) ಅಂಗನವಾಡಿ ಕೇಂದ್ರಗಳಲ್ಲಿ ೦-೦೬ ವಯಸ್ಸಿನ ಮಕ್ಕಳ ನೊಂದಣಿ ಯಾರು ಮಾಡುತ್ತಾರೆ ?
ಅ) ಮಕ್ಕಳ ಅಭಿವೃದ್ಧಿ ಕಾರ್ಯಕ್ರಮ ಅಧಿಕಾರಿ
ಆ) ಉಪ ನಿರ್ದೇಶಕರು
ಇ) ಶಾಲಾ ಮುಖ್ಯೋಪಾದ್ಯಾರು
ಈ) ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳ
೩೧) ಭೂ ರಹಿತ ಪ್ರಮಾಣ ಪತ್ರ ಯಾರು ನೀಡುತ್ತಾರೆ ?
ಅ) ತಹಿಸೀಲ್ದಾರ್
ಆ) ಸಹಾಯಕ ಕಂದಾಯ ಅಧಿಕಾರಿ
ಇ) ಜಿಲ್ಲಾಧಿಕಾರಿ ಈ) ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು
೩೨) ವಿಧವಾ ವೇತನ ಅರ್ಜಿ ಅನುಮೋದನೆ ಮಾಡುವರು ಯಾರು ?
ಅ) ಜಿಲ್ಲಾಧಿಕಾರ ಆ) ತಹಿಸೀಲ್ದಾರ್
ಇ) ಸಹಾಯಕ ಕಂದಾಯ ಅಧಿಕಾರಿ ಈ) ಗ್ರಾಮ ಪಂಚಾಯಿತಿ ಕಾರ್ಯದರ್ಶಿ
ಉಪಸಂಹಾರ
ಅಭ್ಯುದಯ:-
ಕರ್ನಾಟಕ ರಾಜ್ಯದ ಸಕಾಲ ಕಾರ್ಯಕ್ರಮದ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯರಿಗೆ ಇರುವ ಅರಿವನ್ನು ಕುರಿತು ಒಂದು ಅಧ್ಯಯನ ವಿಶೇಷವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಹೋಬಳಿಯ ಗ್ರಾಮ ಪಂಚಾಯಿತಿಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಸಕಾಲ ಕಾರ್ಯಕ್ರಮವು ಯಶಸ್ವಿಯಾಗಿ ಮುಂದುವರಿಯುತ್ತದೆ. ಇದರಿಂದಾಗಿ ಜನ ಸಾಮಾನ್ಯರಿಗೆ ಹೆಚ್ಚು ಅನುಕೂಲವಾಗಿದು ನಾಗರಿಕ ಸೇವೆಗಳನ್ನು ನಿಗಧಿತ ಸಮಯದಲ್ಲಿ ಪಡೆಯುತ್ತಿದ್ದಾರೆ.ಆದರೆ ಗ್ರಾಮೀಣ ಜನರಿಗೆ ಇದರ ಬಗ್ಗೆ ತಿಳುವಳಿಕೆ ಇಲ್ಲದಿರುವುದು ದುರದೃಷ್ಠಕರ ಸಂಗತಿಯಾಗಿದೆ.
ಸಂಶೋಧನೆಯನ್ನು ಕೈಗೊಂಡಾಗ ಗ್ರಾಮೀಣ ಜನರು ಪಂಚಾಯಿತ್ತಿಯಲ್ಲಿ ಯಾವ ರೀತಿಯಲ್ಲಿ ತಮ್ಮ ಅಧಿಕಾರ ಚಲಾಯಿಸುತ್ತಾರೆ ಮತ್ತು ಅವರ ಹಕ್ಕುಗಳು ಕರ್ತವ್ಯಗಳ ಬಗ್ಗೆ ಹಾಗೂ ಸರ್ಕಾರ ಜಾರಿಗೆ ತರುವ ವಿವಿಧ ರೀತಿಯ ಕಾರ್ಯಕ್ರಮಗಳ ಬಗ್ಗೆ ತಿಳುವಳಿಕೆ ಹೊಂದಿರುತ್ತಾರೆ.ಇದರಿಂದಾಗಿ ಗ್ರಾಮೀಣ ಜನರ ಸಮಸ್ಯೆಗಳಿಗೆ ಬೇಗನೇ ಪರಿಹಾರ ನೀಡಲು ಅನುಕೂಲವಾಗುತ್ತದೆ. ಸಕಾಲ ಕಾರ್ಯಕ್ರಮದಿಂದ ಗ್ರಾಮೀಣ ಜನರಿಗೆ ಹೆಚ್ಚು ಅನುಕೂಲವಾಗಿದೆ ಎಂಬುದಾಗಿ ಹೇಳಬಹುದು.
No comments:
Post a Comment