ಕವಿ/ಲೇಕಕ/ಹಾಡುಗಾರ… ಇವರು ಯಾವುದರ ಸಲುವಾಗಿ ಇದ್ದಾರೆ? ಒಂದು ತಮ್ಮ ಮನಸ್ಸನ್ನು ಆರೋಗ್ಯದಿಂದ ಇಟ್ಟುಕೊಳ್ಳಲಿಕ್ಕೆ. ಮತ್ತೊಂದು ನೊಂದವರನ್ನು/ಸಮಾಜವನ್ನು ಸ್ಪೂರ್ತಿಯಾಗಿಸಲಿಕ್ಕೆ ತಾನೆ?
ಇವರು ಮಾಡಿದ ಕೆಲಸ ಎಲ್ಲರಿಗೂ ಮೆಚ್ಚುಗೆಯಾಗಬೇಕೆಂದೇನು ಇಲ್ಲವಲ್ಲ? ಅಶ್ಟಕ್ಕೂ ಕವಿ/ಲೇಕಕ/ಹಾಡುಗಾರ… ಗಳವರು ಮಾಡಿದ ಪ್ರಯತ್ನಗಳನ್ನು ಆಸ್ವಾದಿಸುವವರಿಗೇನೇ ಬಿಡುವಂತೆ ವಿಜ್ಞಾನಿಗಳು ತಮ್ಮ ಪ್ರಯತ್ನದ ಶ್ರಮದ ಒತ್ತಡದಿಂದ ಹೊರಬರಲು ಕಣ್ಣಿಗೆ ಕಾಣದ ಶಕ್ತಿಯ ಮೊರೆ ಹೋಗುವುದರಲ್ಲಿ ತಪ್ಪು ಇಲ್ಲವೇ ಇಲ್ಲ ಮತ್ತು ಆ ತೆರನ ಪ್ರಯತ್ನದ ಹಿಂದಿನ ನಂಬಿಕೆಯನ್ನು ಮೂಡನಂಬಿಕೆ ಎನ್ನಲಾಗದು. ಒಂದು ವೇಳೆ ಹಾಗೆನ್ನುವವರೇ ಮೂಡರು!
ನೀವು ಶಿಕ್ಶಕರಾಗಿ ಈ ಹಿನ್ನಲೆಯಲ್ಲಿ ಯೋಚಿಸಿ ನೋಡಿ. ನೀವು ತರಗತಿಯಲ್ಲಿ ಪಾಟ ಎಶ್ಟೇ ಉತ್ತಮವಾಗಿ ಮಾಡಿರಬಹುದು. ಆದರೆ, ಈ ನಿಮ್ಮ ಪಾಟ ಎಲ್ಲಾ ವಿದ್ಯಾರ್ತಿಗಳ ಮಾನಸಿಕ ವಾತಾವರಣದಲ್ಲಿ ಸಮವಾಗಿ ಉಳಿದುಕೊಳ್ಳುತ್ತದೆಯೇ? ಅದಾಗ್ಯೂ ನೀವು ಕಾಣದ ಶಕ್ತಿಯನ್ನು ಎಲ್ಲರೂ ತೇರ್ಗಡೆಯಾಗುವಂತೆ ಕೇಳಿಕೊಳ್ಳುವುದಿಲ್ಲವೆ? ತರಗತಿಯಲ್ಲಿನ ವಿದ್ಯಾರ್ತಿಗಳ ಓದಿನ ವೈಕರಿ ಸಮವಾಗಿ ಇರಲಾಗದು ಅಲ್ಲವೆ? ಹಾಗೆಯೇ ವಿಜ್ಞಾನಿಗಳೂ ರೂಪಿಸಿದ ಯಾವುದೇ ತೆರನ ಯಂತ್ರಗಳು ಕೈಕೊಡಬಾರದೂ ಅಂತವೇನೂ ಇಲ್ಲವಲ್ಲ?
ಮಾನವನ ಮಾನಸಿಕ ಸ್ತಿತಿ ಹೇಗಿದೆ ಎಂದರೆ,
ಯುಕ್ತಿ/ಶಕ್ತಿ /ಇವೆರಡರ ಮೂಲಕ
“ಸಮರ್ತನೆಗೊಂದು ಸಮರ್ತನೆ/ ತೆಗಳಿಕೆಗೊಂದು ತೆಗಳಿಕೆ /ಪ್ರೇರಣೆಗೊಂದು ಪ್ರೇರಣೆ ಇವುಗಳಲ್ಲಿ ಪೈಪೋಟಿಗೆ ಇಳಿಯುವುದೇ ಆಗಿದೆ.”
ಈ ನಿಟ್ಟಿನಲ್ಲಿಯೇ ತನ್ನದೇ ಆದ ಅಹಮ್ಗೆ ಮಾನವ ಒತ್ತು ನೀಡುತ್ತಾ ಬೇರೆಯವರನ್ನು ಹತೋಟಿಗೆ/ಮೆಚ್ಚುಗೆಗೆ ಒಳಪಡಿಸಿಕೊಳ್ಳಲು ಹವಣಿಸುತ್ತಾ ಇರುವುದು.
“ಕಾನೂನು ದರ್ಮವಾಗಿ ರಾಜಕೀಯ ಇದರ ಆದ್ಯಾತ್ಮವಾಗಿರಲಿ” ಎಂದುಕೊಂಡಿರುವವರು ಕಾಣುತ್ತಿರುವ ಸಮಾನತೆಯ ಕಲ್ಪನೆಯೇ ಮೂಡನಂಬಿಕೆ ತಾನೆ? ನಿಗಮ..ಆಯೋಗ ಪರಿಶತ್ತು ಹಾಗೂ ಇಲಾಕೆ ಈ ವ್ಯವಸ್ತೆಯಲ್ಲಿ ತಮ್ಮವರ ಪರವಾಗಿ ಲಾಬಿ ಮಾಡುವ ರೂಡಿ ಇದೆ. ಸರ್ಕಾರದ ವ್ಯವಸ್ತೆಯಲ್ಲಿ ಆಡಳಿತವನ್ನು ನಡೆಸಬೇಕಾಗಿರುವುದು ರಾಜಕೀಯ ಪಕ್ಶ ಇದು ಸರಿಯಾಗಿಯೇ ಇದೆ. ಆದರೆ ನಿಗಮ..ಪರಿಶತ್ತು ಈ ವ್ಯವಸ್ತೆಯನ್ನೇ ನೋಡಿ ಎಶ್ಟು ತಪ್ಪುಗಳಿವೆ. ಮೊದಲು ಅಂತಹ ತಪ್ಪುಗಳನ್ನು ಇಲ್ಲವಾಗಿಸಬೇಕಲ್ಲವೆ?
ದರ್ಮವೇನೋ ಮೊದಲು ಅನಕ್ಶರಸ್ತರಿಂದ ಅಕ್ಶರಸ್ತರಿಗೆ ವರ್ಗಾವಣೆಯಾಗಿದೆ. ಇದರಲ್ಲಿ ತಪ್ಪುಗಳು ಇವೆ. ಆದರೆ ಕಾನೂನು ಅಕ್ಶರಸ್ತರಿಂದ ರೂಪಿಸಲ್ಪಟ್ಟು ಅನಕ್ಶರಸ್ತರಿಗೆ ವರ್ಗಾವಣೆಯಾಗಿದೆ. ಲಿಕಿತದಲ್ಲಿದ್ದಾಗ್ಯೂ ಕಾನೂನನ್ನು ತಮ್ಮವರಿಗೆಂದು ತಿರಿಚಿಕೊಳ್ಳುವ ಹಿಂದಿನ ಗುಟ್ಟು ಕ್ಶಮಿಸಲಾರದ ತಪ್ಪು. ಕಾನೂನು ಹಾಗೂ ದರ್ಮಗಳೆರಡೂ ಹತೋಟಿಯ ತಂತ್ರಗಳೆ ತಾನೆ?
CBI ವಿಚರವನ್ನೇ ನೋಡಿ. ಲಿಕಿತದ ಪುರಾವೆ ಇದ್ದಾಗ್ಯೂ ನ್ಯಾಯಾಲಯಗಳು ಎರಡೆರಡು ತೆರನ ತೀರ್ಪನ್ನು ಕೊಡುತ್ತವೆ.
ಹೀಗೇನೆ ದರ್ಮದಲ್ಲೂ ಆಯಾ ಗುಂಪಿನವರಿಗೆ “ಅವರೇ ಹೇಳಿದ್ದು ಅವರಿಗೆ ಸರಿ” ಎನ್ನುವ ಮನಸ್ತಿತಿ ಇದೆ. ಕಾನೂನು ಯಾಕೆ ದೇಶ/ಬಾಶೆ/ವರ್ಗಕ್ಕೆ ಬೇರೆಬೇರೆ ಇದೆ? ಇದರ ರಚನೆಯೂ ಒಂದು ಮಾನಸಿಕ ಸ್ತಿತಿಗನುಗುಣವಾಗಿಯೇ ಇರೋದು ತಾನೆ?
ಗಲ್ಲು ಶಿಕ್ಶೆಗೆ ಸಂಬಂದಪಟ್ಟಂತೆ ಕಾನೂನಿನಲ್ಲಿರುವವರೇ ಬೇರೆಬೇರೆ ನಿಲುವನ್ನು ತಾಳುತ್ತಾರೆ. ಒಂದು ತಪ್ಪು ಆಗಿದೆ ಎಂದ ಮೇಲೆ ಆ ತಪ್ಪನ್ನು ಇಲ್ಲವಾಗಿಸಬೇಕು ಅಲ್ಲವೆ? ಕಂಪ್ಯೂಟರ್ನಲ್ಲಿ ವೈರಸ್ ಇದೆ. ಅದನ್ನು ಡಿಲಿಟ್ ಮಾಡದೆ ಕೇವಲ ಹತೋಟಿ ಮಾಡಿದರೆ ಕಂಪ್ಯೂಟರ್ ಸರಿಯಾಗಿ ಕೆಲಸ ಮಾಡುತ್ತದೆಯೇ?
ಹೀಗೇನೆ, ಸಮಾಜವೆಂಬ ಕಂಪ್ಯೂಟರ್ನಲ್ಲಿ ಡಿಲಿಟ್ ಇರಬೇಕು ಜೊತೆಗೆ ನಿಯಂತ್ರಣವೂ ಇರಬೇಕು.
ಮೂಡನಂಬಿಕೆ ಮತ್ತು ನಂಬಿಕೆಗೆ ಈ ಗಾದೆಮಾತನ್ನು ತುಸು ನೆನಪಿಗೆ ತಂದುಕೊಳ್ಳಿ.
“ಬೆರ್ಕೆ ಸೊಪ್ಪಿನ್ ಸಾರ್ ಚೆಂದ ಬೆರ್ಕೆಗ್ ಹುಟ್ಟಿದ್ ಮಕ್ಳು ಚೆಂದ”
ಇದರಲ್ಲಿ ಎಲ್ಲರೂ
“ಬೆರ್ಕೆ ಸೊಪ್ಪಿನ್ ಸಾರ್ ಚೆಂದ”
ಎಂಬುವುದನ್ನು ಯಾವ ವಾದವಿಲ್ಲದೆ ಒಪ್ಪಿಬಿಡುತ್ತಾರೆ.
ಆದರೆ
“ಬೆರ್ಕೆಗ್ ಹುಟ್ಟಿದ್ ಮಕ್ಳು ಚೆಂದ”
ಎಂಬುವುದನ್ನು ದರ್ಮ ಒಪ್ಪಲಾರದು ಆದರೆ ದರ್ಮದೊಳಗಿರುವ ತೀರಾ ಕಡಿಮೆ ಮಂದಿ ಒಪ್ಪುವರು ಇದ್ದಾರೆ. ಈ ಗಾದೆಯನ್ನು ಒಬ್ಬ ವ್ಯಕ್ತಿ ಆಯಾ ವಯೋಗನುಗುಣವಾಗಿ ಸಮರ್ತನೆ ನೀಡುತ್ತಾನೆ. ಯುವಕರಾದ ನಮ್ಮಂತವರಿಗೆ ಆಶ್ಚರ್ಯ/ಒಪ್ಪಲಾರದ/ೊಪ್ಪುವ/ ನಗೆಯ ಸಾಲು. ಇನ್ನು ಮದುವೆಯಾದವರಿಗೆ ಅನುಮಾನ, ವೃದ್ದರಿಗೆ ಬುದ್ದಿ ಮಾತನ್ನು ಹುಟ್ಟಿಸುವ ಸಾಲು.
ಕಾನೂನಿನಲ್ಲಂತೂ ಗೊಂದಲ. ಒಂದು ದೇಶದಲ್ಲಿ ನಿಯಂತ್ರಣ ಮತ್ತೊಂದರಲ್ಲಿ ವಯಕ್ತಿಕ ನೆಲೆಯದ್ದು ಆಗಿದೆ.
ಗಾದೆ ಮಾತುಗಳಲ್ಲಿ ಈ ಮೇಲೆ ಬರೆದ ಗಾದೆಯನ್ನು ಸಮರ್ತಿಸುವ ಇನ್ನುಳಿದ ಗಾದೆಗಳು ಇವೆ. ಅಂತೆಯೇ ಈ ಗಾದೆಯನ್ನು ನಿಯಂತ್ರಿಸುವ ಗಾದೆ ಮಾತುಗಳೂ ಇವೆ.
ನನ್ನ ಪ್ರಕಾರ ಮೂಡನಂಬಿಕೆ ಎಂದರೆ,
ಪರ ಹಾಗೂ ವಿರೋದದ ನಂಬಿಕೆಗಳ ಸಂಗರ್ಶದಿಂದ ಹುಟ್ಟುವ ವಿಕೋಪದ ವರ್ತನೆಯೇ ‘ಮೂಡನಂಬಿಕೆ’ ಯಾಗಿದೆ.
ಕೊನೆಯದಾಗಿ,
ಒಂದು ದೃಶ್ಟಿಕೋನವನ್ನು ನಂಬುವುದನ್ನೋ/ಪ್ರಶ್ನಿಸುವುದನ್ನೋ ಯಾರು ಮಾಡುತ್ತಿರುತ್ತಾರೋ ಅವರು ಅಶ್ಟೇ ಬೌದ್ದಿಕ ಕುಬ್ಜರಾಗುತ್ತಾರೆ. ಅಂತವರು ಈ ಬೌದ್ದಿಕ ಕುಬ್ಜರಾಗದಿರಲು ಇರುವ ಒಂದೆ ಮಾರ್ಗವೆಂದರೆ
ಎಲ್ಲಾ ತೆರನ ವೈವಿದ್ಯತೆಗೆ ತೆರೆದುಕೊಳ್ಳಬೇಕು ಮತ್ತು ವಿಶಾಲವಾಗಿ ಯೋಚಿಸುವುದನ್ನು ಮಾಡಬೇಕು. ಅದಕ್ಕೂ ಮುನ್ನ ಸಮಾನತೆಯ ಕಲ್ಪನೆಯನ್ನು ಬಿಟ್ಟು ಅಸಮಾನತೆಯ ನಿಯಂತ್ರಣಕ್ಕೆ ಪ್ರಯತ್ನಿಸುವ ಆಲೋಚನೆಯನ್ನು ಮಾಡಬೇಕು.
‘ಸಮಾನತೆ’ ಇದು ಪರಿಪೂರ್ಣದ ಸಂಕೇತ. ಆದರೆ ಪ್ರಕೃತಿ ನಿರ್ಮಿತದಲ್ಲಿ ಸಮಾನತೆಯೇ ಇಲ್ಲ. ಮಾನವ ಈ ಪ್ರಕೃತಿಯ ಅಸಮಾನತೆಯನ್ನು ತನ್ನ ಜಾಣ್ಮೆಯಿಂದ ಇಲ್ಲವಾಗಿಸಲು ಯತ್ನಿಸುತ್ತಿದ್ದಾಗ್ಯೂ ಪ್ರಾಕೃತಿಕ ಕಾರಣಗಳಿಂದಾಗ್ಇ ಸಮಾನತೆಯನ್ನು ಗಳಿಸಲು ಆಗುತ್ತಿದೆಯೇ?
ಇನ್ನು ಮಾನವನೇ ಒಂದು ವಿಚಿತ್ರ. ಮನಸ್ಸಿಗೆ ಚಿತ್ರಿಸಿಕೊಂಡದ್ದನ್ನು ಬೇರೆಯವರ ಮೇಲೆ ಗೀಚುವ ಹಂಬಲದವನೂ. ಇಂತಹ ಮನಸ್ತಿತಿಯ ಮನುಶ್ಯನಿಂದ ಸಮಾನತೆಯನ್ನು ಗಳಿಸಲು ಆಗುವುದೇ?
ಇವರು ಮಾಡಿದ ಕೆಲಸ ಎಲ್ಲರಿಗೂ ಮೆಚ್ಚುಗೆಯಾಗಬೇಕೆಂದೇನು ಇಲ್ಲವಲ್ಲ? ಅಶ್ಟಕ್ಕೂ ಕವಿ/ಲೇಕಕ/ಹಾಡುಗಾರ… ಗಳವರು ಮಾಡಿದ ಪ್ರಯತ್ನಗಳನ್ನು ಆಸ್ವಾದಿಸುವವರಿಗೇನೇ ಬಿಡುವಂತೆ ವಿಜ್ಞಾನಿಗಳು ತಮ್ಮ ಪ್ರಯತ್ನದ ಶ್ರಮದ ಒತ್ತಡದಿಂದ ಹೊರಬರಲು ಕಣ್ಣಿಗೆ ಕಾಣದ ಶಕ್ತಿಯ ಮೊರೆ ಹೋಗುವುದರಲ್ಲಿ ತಪ್ಪು ಇಲ್ಲವೇ ಇಲ್ಲ ಮತ್ತು ಆ ತೆರನ ಪ್ರಯತ್ನದ ಹಿಂದಿನ ನಂಬಿಕೆಯನ್ನು ಮೂಡನಂಬಿಕೆ ಎನ್ನಲಾಗದು. ಒಂದು ವೇಳೆ ಹಾಗೆನ್ನುವವರೇ ಮೂಡರು!
ನೀವು ಶಿಕ್ಶಕರಾಗಿ ಈ ಹಿನ್ನಲೆಯಲ್ಲಿ ಯೋಚಿಸಿ ನೋಡಿ. ನೀವು ತರಗತಿಯಲ್ಲಿ ಪಾಟ ಎಶ್ಟೇ ಉತ್ತಮವಾಗಿ ಮಾಡಿರಬಹುದು. ಆದರೆ, ಈ ನಿಮ್ಮ ಪಾಟ ಎಲ್ಲಾ ವಿದ್ಯಾರ್ತಿಗಳ ಮಾನಸಿಕ ವಾತಾವರಣದಲ್ಲಿ ಸಮವಾಗಿ ಉಳಿದುಕೊಳ್ಳುತ್ತದೆಯೇ? ಅದಾಗ್ಯೂ ನೀವು ಕಾಣದ ಶಕ್ತಿಯನ್ನು ಎಲ್ಲರೂ ತೇರ್ಗಡೆಯಾಗುವಂತೆ ಕೇಳಿಕೊಳ್ಳುವುದಿಲ್ಲವೆ? ತರಗತಿಯಲ್ಲಿನ ವಿದ್ಯಾರ್ತಿಗಳ ಓದಿನ ವೈಕರಿ ಸಮವಾಗಿ ಇರಲಾಗದು ಅಲ್ಲವೆ? ಹಾಗೆಯೇ ವಿಜ್ಞಾನಿಗಳೂ ರೂಪಿಸಿದ ಯಾವುದೇ ತೆರನ ಯಂತ್ರಗಳು ಕೈಕೊಡಬಾರದೂ ಅಂತವೇನೂ ಇಲ್ಲವಲ್ಲ?
ಮಾನವನ ಮಾನಸಿಕ ಸ್ತಿತಿ ಹೇಗಿದೆ ಎಂದರೆ,
ಯುಕ್ತಿ/ಶಕ್ತಿ /ಇವೆರಡರ ಮೂಲಕ
“ಸಮರ್ತನೆಗೊಂದು ಸಮರ್ತನೆ/ ತೆಗಳಿಕೆಗೊಂದು ತೆಗಳಿಕೆ /ಪ್ರೇರಣೆಗೊಂದು ಪ್ರೇರಣೆ ಇವುಗಳಲ್ಲಿ ಪೈಪೋಟಿಗೆ ಇಳಿಯುವುದೇ ಆಗಿದೆ.”
ಈ ನಿಟ್ಟಿನಲ್ಲಿಯೇ ತನ್ನದೇ ಆದ ಅಹಮ್ಗೆ ಮಾನವ ಒತ್ತು ನೀಡುತ್ತಾ ಬೇರೆಯವರನ್ನು ಹತೋಟಿಗೆ/ಮೆಚ್ಚುಗೆಗೆ ಒಳಪಡಿಸಿಕೊಳ್ಳಲು ಹವಣಿಸುತ್ತಾ ಇರುವುದು.
“ಕಾನೂನು ದರ್ಮವಾಗಿ ರಾಜಕೀಯ ಇದರ ಆದ್ಯಾತ್ಮವಾಗಿರಲಿ” ಎಂದುಕೊಂಡಿರುವವರು ಕಾಣುತ್ತಿರುವ ಸಮಾನತೆಯ ಕಲ್ಪನೆಯೇ ಮೂಡನಂಬಿಕೆ ತಾನೆ? ನಿಗಮ..ಆಯೋಗ ಪರಿಶತ್ತು ಹಾಗೂ ಇಲಾಕೆ ಈ ವ್ಯವಸ್ತೆಯಲ್ಲಿ ತಮ್ಮವರ ಪರವಾಗಿ ಲಾಬಿ ಮಾಡುವ ರೂಡಿ ಇದೆ. ಸರ್ಕಾರದ ವ್ಯವಸ್ತೆಯಲ್ಲಿ ಆಡಳಿತವನ್ನು ನಡೆಸಬೇಕಾಗಿರುವುದು ರಾಜಕೀಯ ಪಕ್ಶ ಇದು ಸರಿಯಾಗಿಯೇ ಇದೆ. ಆದರೆ ನಿಗಮ..ಪರಿಶತ್ತು ಈ ವ್ಯವಸ್ತೆಯನ್ನೇ ನೋಡಿ ಎಶ್ಟು ತಪ್ಪುಗಳಿವೆ. ಮೊದಲು ಅಂತಹ ತಪ್ಪುಗಳನ್ನು ಇಲ್ಲವಾಗಿಸಬೇಕಲ್ಲವೆ?
ದರ್ಮವೇನೋ ಮೊದಲು ಅನಕ್ಶರಸ್ತರಿಂದ ಅಕ್ಶರಸ್ತರಿಗೆ ವರ್ಗಾವಣೆಯಾಗಿದೆ. ಇದರಲ್ಲಿ ತಪ್ಪುಗಳು ಇವೆ. ಆದರೆ ಕಾನೂನು ಅಕ್ಶರಸ್ತರಿಂದ ರೂಪಿಸಲ್ಪಟ್ಟು ಅನಕ್ಶರಸ್ತರಿಗೆ ವರ್ಗಾವಣೆಯಾಗಿದೆ. ಲಿಕಿತದಲ್ಲಿದ್ದಾಗ್ಯೂ ಕಾನೂನನ್ನು ತಮ್ಮವರಿಗೆಂದು ತಿರಿಚಿಕೊಳ್ಳುವ ಹಿಂದಿನ ಗುಟ್ಟು ಕ್ಶಮಿಸಲಾರದ ತಪ್ಪು. ಕಾನೂನು ಹಾಗೂ ದರ್ಮಗಳೆರಡೂ ಹತೋಟಿಯ ತಂತ್ರಗಳೆ ತಾನೆ?
CBI ವಿಚರವನ್ನೇ ನೋಡಿ. ಲಿಕಿತದ ಪುರಾವೆ ಇದ್ದಾಗ್ಯೂ ನ್ಯಾಯಾಲಯಗಳು ಎರಡೆರಡು ತೆರನ ತೀರ್ಪನ್ನು ಕೊಡುತ್ತವೆ.
ಹೀಗೇನೆ ದರ್ಮದಲ್ಲೂ ಆಯಾ ಗುಂಪಿನವರಿಗೆ “ಅವರೇ ಹೇಳಿದ್ದು ಅವರಿಗೆ ಸರಿ” ಎನ್ನುವ ಮನಸ್ತಿತಿ ಇದೆ. ಕಾನೂನು ಯಾಕೆ ದೇಶ/ಬಾಶೆ/ವರ್ಗಕ್ಕೆ ಬೇರೆಬೇರೆ ಇದೆ? ಇದರ ರಚನೆಯೂ ಒಂದು ಮಾನಸಿಕ ಸ್ತಿತಿಗನುಗುಣವಾಗಿಯೇ ಇರೋದು ತಾನೆ?
ಗಲ್ಲು ಶಿಕ್ಶೆಗೆ ಸಂಬಂದಪಟ್ಟಂತೆ ಕಾನೂನಿನಲ್ಲಿರುವವರೇ ಬೇರೆಬೇರೆ ನಿಲುವನ್ನು ತಾಳುತ್ತಾರೆ. ಒಂದು ತಪ್ಪು ಆಗಿದೆ ಎಂದ ಮೇಲೆ ಆ ತಪ್ಪನ್ನು ಇಲ್ಲವಾಗಿಸಬೇಕು ಅಲ್ಲವೆ? ಕಂಪ್ಯೂಟರ್ನಲ್ಲಿ ವೈರಸ್ ಇದೆ. ಅದನ್ನು ಡಿಲಿಟ್ ಮಾಡದೆ ಕೇವಲ ಹತೋಟಿ ಮಾಡಿದರೆ ಕಂಪ್ಯೂಟರ್ ಸರಿಯಾಗಿ ಕೆಲಸ ಮಾಡುತ್ತದೆಯೇ?
ಹೀಗೇನೆ, ಸಮಾಜವೆಂಬ ಕಂಪ್ಯೂಟರ್ನಲ್ಲಿ ಡಿಲಿಟ್ ಇರಬೇಕು ಜೊತೆಗೆ ನಿಯಂತ್ರಣವೂ ಇರಬೇಕು.
ಮೂಡನಂಬಿಕೆ ಮತ್ತು ನಂಬಿಕೆಗೆ ಈ ಗಾದೆಮಾತನ್ನು ತುಸು ನೆನಪಿಗೆ ತಂದುಕೊಳ್ಳಿ.
“ಬೆರ್ಕೆ ಸೊಪ್ಪಿನ್ ಸಾರ್ ಚೆಂದ ಬೆರ್ಕೆಗ್ ಹುಟ್ಟಿದ್ ಮಕ್ಳು ಚೆಂದ”
ಇದರಲ್ಲಿ ಎಲ್ಲರೂ
“ಬೆರ್ಕೆ ಸೊಪ್ಪಿನ್ ಸಾರ್ ಚೆಂದ”
ಎಂಬುವುದನ್ನು ಯಾವ ವಾದವಿಲ್ಲದೆ ಒಪ್ಪಿಬಿಡುತ್ತಾರೆ.
ಆದರೆ
“ಬೆರ್ಕೆಗ್ ಹುಟ್ಟಿದ್ ಮಕ್ಳು ಚೆಂದ”
ಎಂಬುವುದನ್ನು ದರ್ಮ ಒಪ್ಪಲಾರದು ಆದರೆ ದರ್ಮದೊಳಗಿರುವ ತೀರಾ ಕಡಿಮೆ ಮಂದಿ ಒಪ್ಪುವರು ಇದ್ದಾರೆ. ಈ ಗಾದೆಯನ್ನು ಒಬ್ಬ ವ್ಯಕ್ತಿ ಆಯಾ ವಯೋಗನುಗುಣವಾಗಿ ಸಮರ್ತನೆ ನೀಡುತ್ತಾನೆ. ಯುವಕರಾದ ನಮ್ಮಂತವರಿಗೆ ಆಶ್ಚರ್ಯ/ಒಪ್ಪಲಾರದ/ೊಪ್ಪುವ/ ನಗೆಯ ಸಾಲು. ಇನ್ನು ಮದುವೆಯಾದವರಿಗೆ ಅನುಮಾನ, ವೃದ್ದರಿಗೆ ಬುದ್ದಿ ಮಾತನ್ನು ಹುಟ್ಟಿಸುವ ಸಾಲು.
ಕಾನೂನಿನಲ್ಲಂತೂ ಗೊಂದಲ. ಒಂದು ದೇಶದಲ್ಲಿ ನಿಯಂತ್ರಣ ಮತ್ತೊಂದರಲ್ಲಿ ವಯಕ್ತಿಕ ನೆಲೆಯದ್ದು ಆಗಿದೆ.
ಗಾದೆ ಮಾತುಗಳಲ್ಲಿ ಈ ಮೇಲೆ ಬರೆದ ಗಾದೆಯನ್ನು ಸಮರ್ತಿಸುವ ಇನ್ನುಳಿದ ಗಾದೆಗಳು ಇವೆ. ಅಂತೆಯೇ ಈ ಗಾದೆಯನ್ನು ನಿಯಂತ್ರಿಸುವ ಗಾದೆ ಮಾತುಗಳೂ ಇವೆ.
ನನ್ನ ಪ್ರಕಾರ ಮೂಡನಂಬಿಕೆ ಎಂದರೆ,
ಪರ ಹಾಗೂ ವಿರೋದದ ನಂಬಿಕೆಗಳ ಸಂಗರ್ಶದಿಂದ ಹುಟ್ಟುವ ವಿಕೋಪದ ವರ್ತನೆಯೇ ‘ಮೂಡನಂಬಿಕೆ’ ಯಾಗಿದೆ.
ಕೊನೆಯದಾಗಿ,
ಒಂದು ದೃಶ್ಟಿಕೋನವನ್ನು ನಂಬುವುದನ್ನೋ/ಪ್ರಶ್ನಿಸುವುದನ್ನೋ ಯಾರು ಮಾಡುತ್ತಿರುತ್ತಾರೋ ಅವರು ಅಶ್ಟೇ ಬೌದ್ದಿಕ ಕುಬ್ಜರಾಗುತ್ತಾರೆ. ಅಂತವರು ಈ ಬೌದ್ದಿಕ ಕುಬ್ಜರಾಗದಿರಲು ಇರುವ ಒಂದೆ ಮಾರ್ಗವೆಂದರೆ
ಎಲ್ಲಾ ತೆರನ ವೈವಿದ್ಯತೆಗೆ ತೆರೆದುಕೊಳ್ಳಬೇಕು ಮತ್ತು ವಿಶಾಲವಾಗಿ ಯೋಚಿಸುವುದನ್ನು ಮಾಡಬೇಕು. ಅದಕ್ಕೂ ಮುನ್ನ ಸಮಾನತೆಯ ಕಲ್ಪನೆಯನ್ನು ಬಿಟ್ಟು ಅಸಮಾನತೆಯ ನಿಯಂತ್ರಣಕ್ಕೆ ಪ್ರಯತ್ನಿಸುವ ಆಲೋಚನೆಯನ್ನು ಮಾಡಬೇಕು.
‘ಸಮಾನತೆ’ ಇದು ಪರಿಪೂರ್ಣದ ಸಂಕೇತ. ಆದರೆ ಪ್ರಕೃತಿ ನಿರ್ಮಿತದಲ್ಲಿ ಸಮಾನತೆಯೇ ಇಲ್ಲ. ಮಾನವ ಈ ಪ್ರಕೃತಿಯ ಅಸಮಾನತೆಯನ್ನು ತನ್ನ ಜಾಣ್ಮೆಯಿಂದ ಇಲ್ಲವಾಗಿಸಲು ಯತ್ನಿಸುತ್ತಿದ್ದಾಗ್ಯೂ ಪ್ರಾಕೃತಿಕ ಕಾರಣಗಳಿಂದಾಗ್ಇ ಸಮಾನತೆಯನ್ನು ಗಳಿಸಲು ಆಗುತ್ತಿದೆಯೇ?
ಇನ್ನು ಮಾನವನೇ ಒಂದು ವಿಚಿತ್ರ. ಮನಸ್ಸಿಗೆ ಚಿತ್ರಿಸಿಕೊಂಡದ್ದನ್ನು ಬೇರೆಯವರ ಮೇಲೆ ಗೀಚುವ ಹಂಬಲದವನೂ. ಇಂತಹ ಮನಸ್ತಿತಿಯ ಮನುಶ್ಯನಿಂದ ಸಮಾನತೆಯನ್ನು ಗಳಿಸಲು ಆಗುವುದೇ?