-ಮಲ್ಲಿಕಾರ್ಜುನ, ಸಮಾಜಕಾರ್ಯ ಪ್ರಶಿಕ್ಷಣಾರ್ಥಿ, ಬೆಂಗಳೂರು ವಿಶ್ವವಿದ್ಯಾಲಯ.
ಅಧ್ಯಾಯ - ೧ ಪ್ರಸ್ತಾವನೆ
ಭಾರತದ ಅರ್ಥ ವ್ಯವಸ್ಥೆಯಲ್ಲಿ ಕೃಷಿ ಕಾರ್ಮಿಕರು ಅತ್ಯಧಿಕ ಪ್ರಮಾಣದಲ್ಲಿ ಕಂಡು ಬಂದು ಅವರು ಕಡೆಗಣಿಸಲ್ಪಟ್ಟಿರುವ ಹಾಗೂ ಅಸಂಘಟಿತ ವಲಯದಲ್ಲಿರುವ ಕಾರ್ಮಿಕರಾಗಿದ್ದಾರೆ. ಅವರ ವರಮಾನವು ಬಹಳ ಕಡಿಮೆ ಇದ್ದು ಅದು ಅನಿಶ್ಚಿತವೂ, ಅನಿಯಮಿತವೂ ಆಗಿರುತ್ತದೆ. ಅಲ್ಲದೆ ಅವರು ಅಸಂಘಟಿತರು, ಅವಿದ್ಯಾವಂತರು, ತರಬೇತಿ ಹೊಂದಿಲ್ಲದವರು, ದುರ್ಬಲರು ಹಾಗೂ ನಿರ್ಗತಿಕ ವರ್ಗದವರಾಗಿರುತ್ತಾರೆ. ಇವರಿಗೆ ಸಿಗಬೇಕಾಗಿರುವಂತಹ ಹಕ್ಕುಗಳಿಗೆ ಹೋರಾಡುವ ಸಾಮರ್ಥ್ಯವನ್ನು ಹೊಂದಿರುವುದಿಲ್ಲ. ಈ ಎಲ್ಲಾ ಕಾರಣದಿಂದಾಗಿ ಕೃಷಿ ಕಾರ್ಮಿಕರು ಆರ್ಥಿಕವಾಗಿ ಸಾಮಾಜಿಕವಾಗಿ ಮುಂದುವರೆಯಲು ಸಾಧ್ಯವಾಗದೆ ಹಲವಾರು ರೀತಿಯ ಸಮಸ್ಯೆಯನ್ನು ಎದುರಿಸುತ್ತಿರುವುದು ಕಂಡು ಬರುತ್ತದೆ.
ಭಾರತ ಒಂದು ಕೃಷಿ ಪ್ರಧಾನ ರಾಷ್ಟ್ರವಾಗಿದ್ದು ಶೇ.೬೫% ರಷ್ಟು ಜನರು ಕೃಷಿಯನ್ನೇ ಅವಲಂಭಿಸಿದ್ದಾರೆ. ನಮ್ಮದು ಕೃಷಿಕರ ದೇಶ. ರೈತರೇ ಈ ದೇಶದ ಬೆನ್ನೆಲುಬು ಮಣ್ಣಿನ ಮಕ್ಕಳ ಏಳಿಗೆಯೇ ನಮ್ಮ ಗುರಿ ಇತ್ಯಾದಿ ಹೇಳಿಕೆಗಳು ಕೃಷಿ ಕಾರ್ಮಿಕರ ಜೀವನದಲ್ಲಿ ಕೇವಲ ಹೇಳಿಕೆಗಳಷ್ಟೆ ಅವು ಅವರ ಜೀವನದಲ್ಲಿ ಕಾರ್ಯ ರೂಪಕ್ಕೆ ತಂದಿರುವುದು ಬಹಳ ವಿರಳವಾಗಿದೆ. ಕೃಷಿ ಕಾರ್ಮಿಕರು ಅವರ ಭೂ ಮಾಲಿಕರ ನಿರಂತರ ಶೊಷಣೆಗೆ ಒಳಪಡಿಸುತ್ತಿದ್ದಾರೆ. ಈ ಕೃಷಿ ಕಾರ್ಮಿಕರಲ್ಲಿ ಹೆಚ್ಚು ಗಂಡಸರ ಪ್ರಮಾಣ ಹೆಚ್ಚಾಗಿದ್ದು ಮಹಿಳೆಯರು ಹೆಚ್ಚು ತೋಟದ ಬೆಳೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವುದು ಕಂಡು ಬರುತ್ತದೆ. ಇಲ್ಲಿ ಗಂಡಸರಿಗೆ ಹೆಚ್ಚು ಮತ್ತು ಮಹಿಳೆಯರಿಗೆ ಕಡಿಮೆ ಕೂಲಿಯನ್ನು ನೀಡುತ್ತಿದ್ದು ಇದರಲ್ಲಿಯೂ ತಾರತಮ್ಯ ಇರುವುದನ್ನು ಕಾಣಬಹುದಾಗಿದೆ.
ಗ್ರಾಮೀಣ ಆರ್ಥಿಕ ವ್ಯವಸ್ಥೆಯಲ್ಲಿ ಕೃಷಿ ಕಾರ್ಮಿಕರು ಅತ್ಯಂತ ನಿರ್ಲಕ್ಷ್ಯಯುತ ಹಾಗೂ ಶೋಷಣೆಯುತ ಪಟ್ಟಿಗೆ ಸೇರಿದವರಲ್ಲದೆ ನಿರ್ಗತಿಕ ವರ್ಗಕ್ಕೂ ಸೇರಿದವರಾಗಿದ್ದಾರೆ. ಅವರ ಉದ್ಯೋಗವು ಅಸ್ಥಿರವಾಗಿದ್ದು, ಋತುಕಾಲಿಕವಾಗಿದ್ದು, ಬಹುಪಾಲು ಕೃಷಿ ಕಾರ್ಮಿಕರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗಗಳಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಅಲ್ಪಸಂಖ್ಯಾತರ ಪಟ್ಟಿಗೆ ಸೇರಿದವರಾಗಿರುತ್ತಾರೆ. ಪ್ರಸ್ತುತ ಭಾರತದಲ್ಲಿ ಏರುತ್ತಿರುವ ಜನಸಂಖ್ಯೆಯ ಪ್ರಭಾವದಿಂದ ಭೂಮಿಯ ಮೇಲಿನ ಅವಲಂಭಿತರ ಸಂಖ್ಯೆ ಅಧಿಕವಾಗುತ್ತಿದೆ. ಭೂಮಿಯ ಸರಾಸರಿ ಇಳುವರಿ ಕಡಿಮೆಯಾಗುತ್ತಿರುವುದಕ್ಕೆ ಭೂ ವಿಭಜನೆ ಮತ್ತು ವಿಕೇಂದ್ರೀಕರಣವು ಕಾರಣವಾಗಿದ್ದು, ಭಾರತದಲ್ಲಿ ಸ್ವತಂತ್ರ ಪೂರ್ವದಿಂದ ಹಿಡಿದು ಪ್ರಸ್ತುತ ಸ್ವತಂತ್ರ ಪಡೆದು ೬೦ ವರ್ಷಗಳಾದರೂ ಯತಾಸ್ಥಿತಿಯಲ್ಲಿರುವುದು ಕಂಡು ಬರುತ್ತದೆ.
ವ್ಯಾಖ್ಯೆಗಳು :
೧೯೫೦-೫೧ ರಲ್ಲಿ ಪ್ರಥಮ ಕೃಷಿ ಕಾರ್ಮಿಕರ ವಿಚಾರಣಾ ಸಮಿತಿಯ ಕೃಷಿ ಕಾರ್ಮಿಕರನ್ನು ಈ ಕೆಳಕಂಡಂತೆ ವ್ಯಾಖ್ಯನಿಸಿದೆ. ಹಿಂದಿನ ವರ್ಷದಲ್ಲಿ ಒಟ್ಟು ಕೆಲಸ ಮಾಡಿದ ದಿನಗಳ ಪ್ರತಿಶತ ೫೦ಕ್ಕಿಂತ ಹೆಚ್ಚು ದಿನಗಳವರೆಗೆ ಕೃಷಿ ಚಟುವಟಿಕೆಯಲ್ಲಿ ಕೂಲಿಯ ಆಳುಗಳಾಗಿ ಕೆಲಸ ಮಾಡಿದವರು ಕೃಷಿ ಕಾರ್ಮಿಕರಾಗಿದ್ದಾರೆ.
೧೯೫೬-೫೭ರ ಎರಡನೆ ಕೃಷಿ ಕಾರ್ಮಿಕರ ವಿಚಾರಣಾ ಸಮಿತಿಯು ಹಿಂದಿನ ವರ್ಷದಲ್ಲಿ ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳಿಂದ ಹೆಚ್ಚಿನ ಪ್ರಮಾಣದ ಆದಾಯ ಪಡೆದವರು ಕೃಷಿ ಕಾರ್ಮಿಕರಾಗಿದ್ದಾರೆ ಎಂದು ವ್ಯಾಖ್ಯಾನಿಸಿದೆ.
ಮೇಲ್ಕಂಡ ವ್ಯಾಖ್ಯೆಗಳ ಪ್ರಕಾರ ಕೃಷಿ ಕಾರ್ಮಿಕರು ತಮ್ಮ ಆದಾಯದ ಬಹುಭಾಗವನ್ನು ಬೇರೆಯವರ ಜಮೀನಿನಲ್ಲಿ ದುಡಿದು ಪಡೆಯುವ ಕಾರ್ಮಿಕರಾಗಿರುತ್ತಾರೆ. ಅವರು ಬೇರೆಯವರ ಜಮೀನಲ್ಲಿ ವರ್ಷದ ಅರ್ಧಕ್ಕಿಂತಲೂ ಹೆಚ್ಚಿನ ಅವಧಿಯವರೆಗೆ ದುಡಿಯುವವರಾಗಿರಬೇಕು ಅವರು ಕೃಷಿ ಕಾರ್ಮಿಕರು ಎಂದು ಪರಿಗಣಿಸಲಾಗಿದೆ.
ಕರ್ನಾಟಕದ ೬ ಕೋಟಿ ಮಂದಿಗಳಲ್ಲಿ ರೈತ ಸಮುದಾಯ ಶೇ.೬೮ ರಷ್ಟು ಜನರು ಕೃಷಿಕರಿದ್ದಾರೆ. ಕರ್ನಾಟಕದ ಯಾವೊಬ್ಬ ರೈತನು ಉನ್ನತ ಸ್ಥಾನಮಾನದಲ್ಲಿ ಇಲ್ಲವಾದರೆ ಕೃಷಿ ಪ್ರಧಾನ ರಾಷ್ಟ್ರವೆಂದು ಕರೆಸಿಕೊಳ್ಳುವ ಪುರುಷಾರ್ಥವೆಂದರೂ ಏಕೆ? ತಮ್ಮನ್ನು ತಾವೇ ರೈತರ ಪರ ಎಂದು ಕರೆದುಕೊಳ್ಳುವ ಸರ್ಕಾರಗಳು, ಜನ ಪ್ರತಿನಿಧಿಗಳು ಕೃಷಿ ಕಾರ್ಮಿಕರನ್ನು ಯಾವ ಮಟ್ಟದಲ್ಲಿ ಕಾಣುತ್ತಿದೆ ಎಂಬುದಕ್ಕೆ ರಕ್ಷಣೆಯಿಲ್ಲದ ರೈತನು ರೈತನನ್ನು ಅವಲಂಭಿಸಿದ ಆ ಕುಟುಂಬವೇ ಇದಕ್ಕೆ ನಿದರ್ಶನ. ಕೇಂದ್ರ ಸರ್ಕಾರ ಕೃಷಿಕ ಸಮುದಾಯವನ್ನು ಸಾಲದ ಹೊರೆಯಿಂದ ಮುಕ್ತಗೊಳಿಸಿ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸರ್ಕಾರ ವಿಶೇಷ ಕ್ರಮ ಕೈಗೊಳ್ಳಲಿದೆ ಎಂಬ ಆಶ್ವಾಸನೆಗಳ ದಾರಿಯಲ್ಲಿ ನಡೆಯುತ್ತಿದೆ ಎನ್ನುವುದಾದರೆ, ೨೦೦೩ರಿಂದ ೨೦೦೬ರವರೆಗೆ ಕರ್ನಾಟಕದಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಪೈಕಿ ೪೦೬ ಜನ ಕೃಷಿಯ ಸಾಲ ಭಾದೆಯಿಂದಲೇ ಎಂಬುದು ರುಜುವಾತುವಾಗಿದೆ. ಈ ಕೃಷಿಕ ಕುಟುಂಬಗಳ ರಕ್ಷಣೆ ಯಾರದು? ಎಂಬ ಪ್ರಶ್ನೆ ಕೇಂದ್ರದ ಕೃಷಿ ಅಭಿವೃದ್ಧಿ ಮಂಡಳಿಯ ಜ್ಞಾಪಕಕ್ಕೆ ಬರುತ್ತಿಲ್ಲವೇ? ಕೇಂದ್ರ ಸರ್ಕಾರ ಕಳೆದ ೫ ವರ್ಷಗಳಲ್ಲಿ ಯೋಜನಾ ಆಯೋಗ ನಿಗದಿ ಪಡಿಸಿದ ಗುರಿ ಎಲ್ಲ ರಾಜ್ಯ ಸರ್ಕಾರಗಳು ಯಶಸ್ಸು ಕಂಡಿಲ್ಲ ಎಂಬ ಕೇಂದ್ರ ಅಂಕಿ-ಅಂಶಗಳ ಸಮೀಕ್ಷೆ ದೃಡಪಡಿಸಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾರತ ಕೃಷಿ ಉತ್ಪಾದನಾ ಕ್ಷೇತ್ರ ಅಭಿವೃದ್ಧಿ ಹೊಂದಿಲ್ಲ ಎನ್ನುವುದಾದರೆ ಕೃಷಿ ಕಾರ್ಮಿಕನ ಅಭಿವೃದ್ಧಿ ಸಾಧ್ಯವೇ ಎಂಬ ಮಾತು ಇವತ್ತಿಗೂ ಭಾರತ ನಿರ್ಮಾಣ ಯೋಜನೆ ಐದು ವರ್ಷಗಳಲ್ಲಿ ಕೃಷಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವ ಸಂಬಂಧ ಯಾವ ಯೋಜನೆಗಳನ್ನು ಜಾರಿಗೊಳಿಸಬಹುದು ಎಂಬುದರ ಬಗ್ಗೆ ಕರಡು ಪ್ರತಿ ಸಿದ್ಧಪಡಿಸಲಾಗುತ್ತದೆ. ಆದರೆ ಕೃಷಿಯನ್ನು ಅವಲಂಭಿಸಿದ ಕೃಷಿ ಕಾರ್ಮಿಕರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಬಿವೃದ್ಧಿ ಮಾರ್ಗ ಸೂತ್ರಗಳನ್ನು ಏಕೆ ಗಮನಹರಿಸುತ್ತಿಲ್ಲ ಎಂಬುದು ಜಮೀನ್ದಾರ ಕೃಷಿ ರೈತರಿಗೆ ಹೊರತು ಕೃಷಿ ಕಾರ್ಮಿಕರಿಗಲ್ಲ ಎಂಬುದು ತಿಳಿದು ಬರುತ್ತದೆ.
ಕೃಷಿ ಕಾರ್ಮಿಕರ ವಿಧಗಳು :
ಗ್ರಾಮೀಣ ವಲಯದಲ್ಲಿ ಕೃಷಿ ಕಾರ್ಮಿಕರು ಅತ್ಯಂತ ಮುಖ್ಯವಾದ ಒಂದು ವರ್ಗದ ಜನರಿದ್ದಾರೆ. ಇವರೂ ಸಹ ಕೃಷಿಯಲ್ಲಿ ನಿರತರಾಗಿದ್ದ ಜನರಾಗಿರುವವರು. ಕೃಷಿ ಕಾರ್ಮಿಕರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ತೀರಾ ಹಿಂದುಳಿದ ವರ್ಗದವರಾಗಿರುತ್ತಾರೆ. ಇವರು ದಾರುಣ ಬಡತನದಲ್ಲಿ ಜೀವಿಸುತ್ತಿದ್ದು ಗ್ರಾಮೀಣ ಅರ್ಥ ವ್ಯವಸ್ಥೆಯಲ್ಲಿ ನಿರ್ಲಕ್ಷಕ್ಕೆ ಒಳಗಾಗಿರುವವರು. ಕೃಷಿ ಉತ್ಪಾದನೆಗೆ ಕೃಷಿ ಕಾರ್ಮಿಕರು ಅವಶ್ಯಕವಾದ ವರ್ಗದ ಜನರಾಗಿದ್ದಾರೆ.
ಕೃಷಿ ಕಾರ್ಮಿಕರನ್ನು ವಿಶಾಲವಾಗಿ ೪ ವಿಧಗಳಾಗಿ ವಿಂಗಡಿಸಬಹುದು. ಅವುಗಳೆಂದರೆ;
೧.ಭೂ ಮಾಲೀಕರ ಜಮೀನಿನಲ್ಲಿ ಕೆಲಸ ಮಾಡುವಂತಹ ಭೂ ರಹಿತ ಕಾರ್ಮಿಕರು.
೨.ವ್ಯಕ್ತಿ ಗತವಾಗಿ ಸ್ವತಂತ್ರವಾಗಿರುವಂತಹ ಆದರೆ ಸಂಪೂರ್ಣವಾಗಿ ಇತರರಿಗಾಗಿ ಕೆಲಸ ನಿರ್ವಹಿಸುವಂತಹ ಭೂ ರಹಿತ ಕಾರ್ಮಿಕರು.
೩.ಚಿಕ್ಕ ತುಂಡು ಜಮೀನನ್ನು ಹೊಂದಿದ್ದು ಬಹುತೇಕ ಸಮಯ ಬೇರೆಯವರಿಗಾಗಿ ಕೆಲಸ ಮಾಡುವಂತಹ ಅತೀ ಸಣ್ಣ ರೈತರು.
೪.ಆರ್ಥಿಕ ಹಿಡುವಳಿಗಳನ್ನು ಹೊಂದಿರುವ ಆದರೆ ಅವರ ಒಬ್ಬ ಅಥವಾ ಹೆಚ್ಚಿನ ಸಂಖ್ಯೆಯ ಮಕ್ಕಳು ಮತ್ತು ಅವರ ಅವಲಂಭಿಗಳು ಶ್ರೀಮಂತ ರೈತರ ಜಮೀನಿನಲ್ಲಿ ಕೆಲಸ ಮಾಡುವಂತಹ ಕೃಷಿಕನು.
ಮೇಲೆ ನಮುದಿಸಿರುವುಗಳಲ್ಲಿ ಮೊದಲನೇ ವರ್ಗ ಅಂದರೆ ಭೂ ಮಾಲೀಕರ ಜಮೀನಿನಲ್ಲಿ ಕೆಲಸ ಮಾಡುವಂತಹ ಭೂ ರಹಿತ ಕಾರ್ಮಿಕರು ಗುಲಾಮರ ಸ್ಥಿತಿಯಲ್ಲಿದ್ದಾರೆ. ಅವರನ್ನು ಜೀತದಾಳುಗಳು ಎಂತಲೂ ಕರೆಯಲಾಗುತ್ತದೆ. ಇವರಿಗೆ ಕೂಲಿಯನ್ನು ಸಾಮಾನ್ಯವಾಗಿ ನಗದು ಹಣದ ರೂಪದಲ್ಲಿ ಕೊಡದೆ ಧಾನ್ಯದ ರೂಪದಲ್ಲಿ ಕೊಡಲಾಗುತ್ತದೆ. ಮೇಲೆ ನಮೂದಿಸಿರುವದಲ್ಲಿ ಎರಡನೆಯ ಮತ್ತು ಮೂರನೆಯ ವರ್ಗಗಳು ಕೃಷಿ ಕಾರ್ಮಿಕರ ಅತ್ಯಂತ ಪ್ರಮುಖ ವಿಧಗಳಾಗಿವೆ.
ಇದಲ್ಲದೆ ಕೃಷಿ ಕಾರ್ಮಿಕರನ್ನು ಕೆಳಗಿನಂತೆ ವರ್ಗೀಕರಿಸಬಹುದು. ಕೃಷಿ ಕಾರ್ಮಿಕರನ್ನು ಖಾಯಂ ಕಾರ್ಮಿಕರು, ಇವರು ಒಂದು ನಿರ್ದಿಷ್ಟ ಭೂಮಿಯಲ್ಲಿ ಖಾಯಂ ಆಗಿ ಕೆಲಸ ನಿರ್ವಸುವರು. ಹಂಗಾಮಿ ಕಾರ್ಮಿಕರು ಇವರು, ಕೆಲವೇ ತಿಂಗಳು ಅಥವಾ ದಿನಗಳಿಗೆ ಮಾತ್ರ ನೇಮಕವಾಗಿರುತ್ತಾರೆ.
ಯುವ ಪುರುಷ ಕಾರ್ಮಿಕರು, ಯುವ ಮಹಿಳಾ ಕಾರ್ಮಿಕರು ಈ ಎರಡು ವರ್ಗದಲ್ಲಿ ತುಂಬಾ ಚಿಕ್ಕ ವಯಸ್ಸಿನವರು ಕೆಲಸ ನಿರ್ವಹಿಸುತ್ತಾರೆ. ಪುರುಷ ಕಾರ್ಮಿಕರು ಮತ್ತು ಸ್ತ್ರೀ ಕೃಷಿ ಕಾರ್ಮಿಕರು ಇವರು ೨೫ ವರ್ಷ ಮೇಲ್ಪಟ್ಟ ವರ್ಗದವರಾಗಿದ್ದರೆ ದೀರ್ಘಾವಧಿ ಕೃಷಿ ಕಾರ್ಮಿಕರು. ಇವರು ಜೀವನ ಪರ್ಯಂತ ಕೆಲಸ ಮಾಡಲು ನೇಮಕವಾದ ವರ್ಗ ಜೀತದಾಳುಗಳು. ಇವರು ಭೂ ಮಾಲೀಕರ ಹತ್ತಿರ ಜೀತಕ್ಕೆ ಕೆಲಸ ಮಾಡುವವರು ಮತ್ತು ಬಂದಿತ ಕಾರ್ಮಿಕರು ಇವರು ನಾನಾ ಅಪರಾಧ ಮಾಡಿ ಸೆರೆಮನೆಯಲ್ಲಿರುತ್ತಾರೆ. ಇವರಿಗೆ ಅಲ್ಲಿಯೇ ಕೃಷಿಯಲ್ಲಿ ತೊಡಗಲು ಅವಕಾಶವಿದೆ.
ಕೃಷಿ ಕಾರ್ಮಿಕರ ಲಕ್ಷಣಗಳು :
ಭಾರತದಲ್ಲಿ ಕೃಷಿ ಕಾರ್ಮಿಕರು ಕೆಲವು ವಿಶಿಷ್ಟ ಲಕ್ಷಣಗಳನ್ನು ಹೊಂದಿದ್ದಾರೆ. ಅವರು ಕೈಗಾರಿಕಾ ಕಾರ್ಮಿಕರಂತೆ ಸಂಘಟಿತರಾಗಿಲ್ಲ ಆದರೆ ಅವರು ಸುಸಂಘಟಿತರಾಗಲು ಕಾರಣಗಳೂ ಇವೆ. ಅವರು ಕೈಗಾರಿಕಾ ಕಾರ್ಮಿಕರಂತೆ ಒಂದೇ ಸ್ಥಳದಲ್ಲಿ ಕೂಡಿ ಕೆಲಸ ಮಾಡುವುದಿಲ್ಲ. ಅವರು ಬೇರೆ ಬೇರೆ ಸ್ಥಳಗಳಲ್ಲಿರುವ ಬೇರೆ ಬೇರೆಯವರ ಜಮೀನಿನಲ್ಲಿ ಕೆಲಸ ಮಾಡುತ್ತಾರೆ. ಅವರಿಗೆ ಕೈಗಾರಿಕಾ ಕಾರ್ಮಿಕರಂತೆ ಇಡೀ ವರ್ಷ ಕೆಲಸ ಸಿಗುವುದಿಲ್ಲ. ಅವರು ಕೆಲಸ ಮಾಡುವ ಸ್ಥಿತಿಗತಿಗಳು ಬೇರೆ ಸ್ಥಳಗಳಲ್ಲಿ ಬೇರೆ ಬೇರೆಯಾಗಿರುತ್ತದೆ. ಕೃಷಿ ಕಾರ್ಮಿಕರು ಹೆಚ್ಚಾಗಿ ಅವಿದ್ಯಾವಂತರಾಗಿರುತ್ತಾರೆ. ಅವರಿಗೆ ಲೋಕದ ಬಗ್ಗೆ ಕೃಷಿಯ ಬಗ್ಗೆ ಸರಿಯಾದ ಜ್ಞಾನ ಇರುವುದಿಲ್ಲ. ಅವರು ಸಾಮಾನ್ಯವಾಗಿ ತಾವು ಕೈಗೊಳ್ಳುವ ಕೆಲಸದ ಬಗ್ಗೆ ಯಾವುದೇ ತರಬೇತಿಯನ್ನು ಪಡೆದಿರುವುದಿಲ್ಲ. ಅವರು ತಮಗೆ ಇಷ್ಟ ಬಂದ ರೀತಿಯಲ್ಲಿ ಕೃಷಿ ಮಾಡುತ್ತಾರೆ.
ಅವರು ಸಂಚಾರಿ ಸ್ವಭಾವದವರಾಗಿದ್ದಾರೆ. ಸುಗ್ಗಿಯ ಸಮಯದಲ್ಲಿ ಹೆಚ್ಚಿನ ಕೆಲಸ ಸಿಗುತ್ತದೆ. ನಂತರ ಅವರು ಉದ್ಯೋಗ ಅರಸಿ ಬೇರೆ ಕಡೆಗೆ ವಲಸೆ ಹೋಗುತ್ತಾರೆ. ಅವರಿಗೆ ಕೊಡುವ ಕೂಲಿ ದರ ತುಂಬಾ ಕಡಿಮೆ ಇದೆ. ಇದು ಅವರ ಜೀವನ ನಿರ್ವಹಣೆಗೆ ಸಾಲದ ಅವರು ಸಾಲದಲ್ಲಿಯೇ ಮುಳುಗಿರುತ್ತಾರೆ.
ಕಾರ್ಮಿಕರ ಹೆಚ್ಚು ಸಮಯ ದುಡಿಸಿಕೊಂಡು ಅವರಿಗೆ ಕಡಿಮೆ ಕೂಲಿಯನ್ನು ವಿತರಿಸಲಾಗುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ಯಾವುದೇ ಕಾನೂನುಗಳು ರಚಿಸಲ್ಪಟ್ಟಿಲ್ಲ. ಒಂದು ವೇಳೆ ಇದ್ದರೂ ಅವುಗಳನ್ನು ಪಾಲಿಸುವುದಕ್ಕಿಂತ ಕಡೆಗಣಿಸುವುದು ಹೆಚ್ಚು ಹೆಚ್ಚು ಕೃಷಿ ಕಾರ್ಮಿಕರು ಸಮಾಜದ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದಾರೆ. ಅವರು ನಿರಂತರ ಶೋಷಣೆಗೆ ಒಳಪಟ್ಟ ಜನಾಂಗದವರಾಗಿದ್ದಾರೆ. ಕೃಷಿ ಕಾರ್ಮಿಕರಿಗೆ ಸಂಬಂಧಿಸಿದಂತೆ ಸರ್ಕಾರ ಜಾರಿಗೆ ತಂದಿರುವ ಕಾಯ್ದೆಗಳ ಬಗ್ಗೆ ಅವರಿಗೆ ಅರಿವೇ ಇರುವುದಿಲ್ಲ. ಅವರಿಗೆ ಅವರ ದುಡಿಮೆಯೇ ಹೊರತು ಬೇರೆ ಯಾವುದೇ ವಿಷಯ ತಿಳಿದಿರುವುದಿಲ್ಲ ಮತ್ತು ಮಾಲೀಕರೊಂದಿಗೆ ಚೌಕಾಶಿ ಮಾಡುವ ಸಾಮರ್ಥ್ಯವಿರುವುದಿಲ್ಲ. ಅವರಿಗೆ ಕೂಲಿಯು ಸಿಗುವುದು ಹಣದ ರೂಪದಲ್ಲಿ, ಕೆಲವೊಂದು ಸರಿ ಅವರಿಗೆ ದವಸ ಧಾನ್ಯಗಳ ರೂಪದಲ್ಲಿ ನೀಡಲಾಗುತ್ತದೆ. ಇದರಿಂದ ಅವರ ಜೀವನ ನಿರ್ವಹಣೆಗೆ ಸ್ವಲ್ಪ ಸಹಾಯವಾಗುತ್ತದೆ. ಜಮೀನ್ದಾರರು ಕೃಷಿ ಕಾರ್ಮಿಕರನ್ನು ನಿರಂತರ ಶೋಷಣೆಗೆ ಗುರಿಪಡಿಸುತ್ತಿದ್ದಾರೆ. ಅವರಿಂದ ಹೆಚ್ಚು ಸಮಯ ದುಡಿಸಿಕೊಂಡು ಕಡಿಮೆ ಕೂಲಿಯನ್ನು ನೀಡುತ್ತಿದ್ದಾರೆ. ಇಲ್ಲಿ ಅವರಿಗೆ ಶ್ರಮಕ್ಕೆ ಸರಿಯಾದ ಪ್ರತಿಫಲ ದೊರೆಯುತ್ತಿಲ್ಲ. ಕೃಷಿಯನ್ನು ಅವಲಂಭಿಸಿರುವ ಸಂಖ್ಯೆ ಅವಲಂಬನೆಗಿಂತ ಹೆಚ್ಚು ಜನರು ಕೃಷಿಯನ್ನು ಅವಲಂಬಿಸಿದರೆ ಕೃಷಿ ಕಾರ್ಮಿಕರು ಅತ್ಯಂತ ನಿಕೃಷ್ಟವಾದ ಮತ್ತು ಅತ್ಯಂತ ಹೀನಾಯ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ.
ಭಾರತದಲ್ಲಿ ಕೃಷಿ ಕಾರ್ಮಿಕರ ಬೆಳವಣಿಗೆ :
ಕೃಷಿ ಕಾರ್ಮಿಕರ ನಿಖರ ಸಂಖ್ಯೆ ಅವರ ಆದಾಯ ಜೀವನ ಮಟ್ಟ ವಿಷಯಗಳ ಬಗೆಗೆ ಅಂಕಿ ಅಂಶಗಳ ಕೊರತೆ ಇದೆ. ಭಾರತದಲ್ಲಿ ಬ್ರಿಟೀಷರ ಕಾಲದಲಿ ಕೃಷಿ ಕಾರ್ಮಿಕರು ಎಂಬ ಪ್ರತ್ಯೇಕವಾದ ವರ್ಗವು ಇದ್ದಂತೆ ಕಾಣುವುದಿಲ್ಲ. ಕೆಲವು ಸಮಿತಿಗಳು ಮತ್ತು ಆಯೋಗಗಳ ವರದಿಗಳ ರೂಪದಲ್ಲಿ ಮಾಹಿತಿ ಲಭ್ಯವಾಗುತ್ತದೆ. ೧೯೬೦ರಲ್ಲಿ ಪ್ರಕಟಿಸಲಾದ ಎರಡನೇ ಕೃಷಿ ಕಾರ್ಮಿಕರ ಪರಿಶೋಧನಾ ಸಮಿತಿ ಪ್ರಕಾರ ಒಟ್ಟು ಗ್ರಾಮೀಣ ಕುಟುಂಬಗಳಲಿ ಶೇ.೨೫ ರಷ್ಟು ಕೃಷಿ ಕಾರ್ಮಿಕರ ಕುಟುಂಬಗಳಿವೆ. ಈ ವರದಿಯ ಮೇರೆಗೆ ಗ್ರಾಮೀಣ ಕೆಲಸಗಾರರಲ್ಲಿ ಶೇ.೮೫% ರಷ್ಟು ಅನಿಯಮಿತ ಕಾರ್ಮಿಕರಾಗಿದ್ದು ತಮ್ಮನ್ನು ನೇಮಿಸಿಕೊಳ್ಳಲು ಇಚ್ಛಿಸುವ ಯಾವುದೇ ಕೃಷಿಕರಿಗಾಗಿ ಕೆಲಸ ಮಾಡುವ ವರ್ಗದವರಾಗಿರುತ್ತಾರೆ. ಶೇ.೧೫% ರಷ್ಟು ಜನರು ಮಾತ್ರ ನಿರ್ದಿಷ್ಟ ಭೂ ಮಾಲಿಕರ ಜಮೀನಿನಲ್ಲಿ ಕೆಲಸ ಮಾಡುತ್ತಾರೆ. ಶೇ.೫೦% ರಷ್ಟು ಜನ ಭೂ ರಹಿತ ಕಾರ್ಮಿಕರು. ಉಳಿದವರು ತುಂಡು ಭೂಮಿಯನ್ನು ಹೊಂದಿರುತ್ತಾರೆ. ಅವರೇ ಪರಿಶಿಷ್ಟ ಜಾತಿ, ಬುಡಕಟ್ಟು ಹಿಂದುಳಿದ ವರ್ಗಗಳಿಗೆ ಸೇರಿದವರಾಗಿರುತ್ತಾರೆ. ವಿಶೇಷವೆಂದರೆ ಶೇ.೭೫% ರಿಂದ ೮೦ ರಷ್ಟು ಕೃಷಿ ಕಾರ್ಮಿಕರು ಪರಿಶಿಷ್ಟ ಜಾತಿಗೆ ಸೇರಿದವರಾಗಿರುತ್ತಾರೆ. ೧೯೮೧ರ ಜನಗಣತಿಯ ಪ್ರಕಾರ ಕೃಷಿ ಕಾರ್ಮಿಕರ ಸಂಖ್ಯೆ ೬೪.೪ ದಶಲಕ್ಷ ಆಗಿತ್ತು. ಆಗ ದೇಶದ ಒಟ್ಟು ಕಾರ್ಮಿಕರ ಸಂಖ್ಯೆ ೨೨೪.೬ ದಶಲಕ್ಷ ಇತ್ತು. ಅಂದರೆ ೧೯೮೧ ರಲ್ಲಿ ಒಟ್ಟು ಕೃಷಿ ಕಾರ್ಮಿಕರ ಪ್ರಮಾಣ ಶೇ.೨೬.೩ ಆಗಿತ್ತು. ೧೯೬೧ ರಲ್ಲಿ ಇವರ ಪ್ರಮಾಣ ೩೧ ದಶಲಕ್ಷ ಆಗಿತ್ತು. ಆದರೆ ೧೯೬೧-೮೧ರ ನಡುವೆ ಈ ಕಾರ್ಮಿಕರ ಸಂಖ್ಯೆ ತೀವ್ರವಾಗಿ ಹೆಚ್ಚಿತ್ತು ಎನ್ನುವುದು ತಿಳಿಯುತ್ತದೆ.
ಗ್ರಾಮೀಣ ಕಾರ್ಮಿಕರ ಮೇಲಿನ ರಾಷ್ಟ್ರೀಯ ಆಯೋಗದ ಅಧ್ಯಯನದಿಂದ ತಿಳಿದು ಬರುವಂತೆ ೧೯೭೦ರ ದಶಕದಲ್ಲಿ ಗ್ರಾಮೀಣ ಜನಸಂಖ್ಯೆಯು ಶೇ.೨ರ ವಾರ್ಷಿಕ ದರದಲ್ಲಿ ಬೆಳೆದರೆ ಕೃಷಿ ಕಾರ್ಮಿಕರ ಸಂಖ್ಯೆಯು ಶೇ.೪.೧ ವಾರ್ಷಿಕ ದರದಲ್ಲಿ ಹೆಚ್ಚಿತ್ತು. ೧೯೮೦ರ ದಶಕದಲ್ಲಿ ಈ ಸಂಖ್ಯೆ ಶೇ.೫.೧ರ ವಾರ್ಷಿಕ ದರದಲ್ಲಿ ಬೆಳೆದರೆ ಕೃಷಿ ಕಾರ್ಮಿಕರ ಸಂಖ್ಯೆಯು ಶೇ.೩ ವಾರ್ಷಿಕ ದರದಲ್ಲಿ ಹೆಚ್ಚಿತ್ತು. ಗ್ರಾಮೀಣ ಜನ ಸಂಖ್ಯೆಯ ಬೆಳವಣಿಗೆಯು ದರಕ್ಕಿಂತ ಹೆಚ್ಚಿನ ದರದಲ್ಲಿ ಕೃಷಿ ಕಾರ್ಮಿಕರ ಸಂಖ್ಯೆಯು ಹೆಚ್ಚಾದುದು ಇದರಿಂದ ಗಮನಕ್ಕೆ ಬರುತ್ತದೆ. ೧೯೯೧ರ ಜನಗಣತಿಯ ಪ್ರಕಾರ ಕೃಷಿ ಕಾರ್ಮಿಕರು ೭೪೭ ದಶಲಕ್ಷಗಳಷ್ಟಿದ್ದರು. ಅಂದರೆ ಕೃಷಿ ಕಾರ್ಮಿಕರ ಒಟ್ಟು ಪ್ರಮಾಣ ೨೪.೫ ರಷ್ಟು ಇತ್ತು. ಇದು ೨೦೦೧ರ ಜನಗಣತಿಯ ಆಧಾರದ ಮೇಲೆ ಕೃಷಿ ಕಾರ್ಮಿಕರು ೮೯೦ ದಶಲಕ್ಷ ಅಂದೇ ಪ್ರತಿಶತ ಪ್ರಮಾಣ ಶೇ.೨೩.೫ ರಷ್ಟು ಇತ್ತು.
ಈ ಮೇಲಿನ ಅಂಕಿ-ಅಂಶಗಳಿಂದ ಕಂಡು ಬರುವುದೇನೆಂದರೆ ಕೃಷಿ ಕಾರ್ಮಿಕರ ಸಂಖ್ಯೆಯು ಸ್ವಾತಂತ್ರ್ಯದ ನಂತರ ವರ್ಷಗಳಲ್ಲಿ ತ್ವರಿತಗತಿಯಲ್ಲಿ ಏರಿದೆ. ೧೯೬೧ ರಿಂದ ೨೦೦೧ರ ನಡುವಿನ ೪೦ ವರ್ಷಗಳ ಅವಧಿಯಲ್ಲಿ ಅದು ಮೂರು ಪಟ್ಟಿಗಿಂತಲೂ ಹೆಚ್ಚು ಏರಿದೆ.
ಕೃಷಿ ಕಾರ್ಮಿಕರ ಸಂಖ್ಯೆಯು ತೀವ್ರಗತಿಯಲ್ಲಿ ಏರಲು ಕಾರಣಗಳು :
ಕೃಷಿ ಕಾರ್ಮಿಕರು ಇಂದು ಭಾರತದಲ್ಲಿ ತೀವ್ರಗತಿಯಲ್ಲಿ ಬೆಳೆಯುತ್ತಿದ್ದಾರೆ. ಅದಕ್ಕೆ ಪ್ರಮುಖ ಕಾರಣ ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿರುವುದು. ಇದು ಮಾತ್ರವಲ್ಲದೆ ಇನ್ನೂ ಅನೇಕ ಕಾರಣಗಳನ್ನು ನೀಡಬಹುದಾಗಿದೆ. ಅವುಗಳೆಂದರೆ ಭಾರತದಲ್ಲಿ ಜನಸಂಖ್ಯೆ ತೀವ್ರಗತಿಯಲ್ಲಿ ಬೆಳೆಯುತ್ತಿದ್ದು ಸುಮಾರು ೧೧೦ ಕೋಟಿ ಮೀರಿದೆ. ಅದರಿಂದ ಹೆಚ್ಚಿನ ಜನರು ಕೃಷಿಯನ್ನೇ ಅವಲಂಭಿಸಿದ್ದಾರೆ. ಕೃಷಿ ಕಾರ್ಮಿಕರು ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿ ನೆಲೆಸಿರುವುದರಿಂದ ಅವರಿಗೆ ಕೃಷಿ ಬಿಟ್ಟು ಇತರೆ ಕಸುಬುಗಳು ಅಧಿಕ ಪ್ರಮಾಣದಲ್ಲಿ ಲಭ್ಯವಾಗುವುದಿಲ್ಲ. ಕೃಷಿ ಕೈಗೊಳ್ಳುವ ಚಿಕ್ಕ ರೈತರನ್ನು ಮತ್ತು ಗೇಣಿದಾರರನ್ನು ಕಡೆಗಣಿಸಲಾಗಿದೆ. ಸಣ್ಣ ಅತಿ ಸಣ್ಣ ಹಿಡುವಳಿಗಳಿಂದ ಆದಾಯ ತುಂಬಾ ಕಡಿಮೆ ಇದ್ದು ಹೆಚ್ಚು ಕಾರ್ಮಿಕರು ಹೆಚ್ಚಾಗಿ ಅವಲಂಭಿಸಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಅತಿ ಚಿಕ್ಕ ರೈತರ ಸಾಲದ ಬಾರವು ಕ್ರಮೇಣ ಅಧಿಕವಾಗುತ್ತಿದ್ದುದರಿಂದ ಅವರ ಕೂಲಿಗಾಗಿ ದುಡಿಯುವ ಅವಶ್ಯಕತೆ ಉಂಟಾಗಿದೆ ಮತ್ತು ವ್ಯವಸಾಯದಲ್ಲಿ ಯಂತ್ರೋಪಕರಣಗಳನ್ನು ಉಪಯೋಗಿಸಿ ಅದನ್ನು ವಾಣಿಜ್ಯದ ದೃಷ್ಠಿಯಿಂದ ಕೈಗೊಳ್ಳುವುದು ಅಧಿಕವಾಗಿದೆ. ಕೃಷಿ ಕಾರ್ಮಿಕರು, ಮಧ್ಯಸ್ಥಗಾರರ ನಿರ್ಮೂಲನಾ ತಾಂತ್ರಿಕ ಸುಧಾರಣೆ, ಯಂತ್ರೋಪಕರಣಗಳ ಉಪಯೋಗ, ಮಾರುಕಟ್ಟೆ ವಿಸ್ತರಣೆ ಸಹಕಾರಿ ಸಂಘಗಳ ಮೂಲಕ ಪತ್ತಿನ ಲಭ್ಯತೆ, ವೈಜ್ಞಾನಿಕ ಬೇಸಾಯ ಇವೇ ಮೊದಲಾದವುಗಳ ಮೂಲಕ ಬಂಡವಾಳ ಪ್ರಭುತ್ವ ವ್ಯವಸ್ಥೆಯು ವ್ಯವಸಾಯದಲ್ಲಿ ಕಂಡು ಬರುತ್ತದೆ.
ಈ ಎಲ್ಲಾ ಕಾರಣಗಳ ಮೂಲಕ ಭೂ ರಹಿತರು ಹಾಗೂ ಅತಿ ಚಿಕ್ಕ ಹಿಡುವಳಿದಾರರು ಕೃಷಿ ಕಾರ್ಮಿಕರಾಗಿ ಪರಿವರ್ತಿಸಲ್ಪಟ್ಟಿದ್ದಾರೆ.
ಕೃಷಿ ಕಾರ್ಮಿಕರ ಬಡತನದ ಪರಿಸ್ಥಿತಿಗೆ ಕಾರಣಗಳು :
ಭಾರತದಲ್ಲಿ ಗ್ರಾಮೀಣ ಪ್ರದೇಶಗಳ ಕಾರ್ಮಿಕರಲ್ಲಿ, ಕೃಷಿ ಕಾರ್ಮಿಕರು ಅತ್ಯಂತ ನಿಕೃಷ್ಟ ಜೀವನ ಸಾಗಿಸುವವರಾಗಿದ್ದಾರೆ. ಅವರು ಅತ್ಯಧಿಕ ಪ್ರಮಾಣದಲ್ಲಿ ಶೋಷಣೆ ಸುಲಿಗೆಗೊಳಗಾದವರು, ಸಾಮಾಜಿಕವಾಗಿ ಹತ್ತಿಕ್ಕಲ್ಪಟ್ಟವರು ಹಾಗೂ ಹಿಂಸಿಸಲ್ಪಟ್ಟವರು ಆಗಿದ್ದಾರೆ. ಅವರು ಬಡವರಲ್ಲಿಯೇ ಬಡವರಾಗಿ ಅಂದರೆ ಕಡುಬಡವರಾಗಿ ಜೀವಿಸುವಂತವರಾಗಿದ್ದಾರೆ. ಭಾರತವು ಸ್ವಾತಂತ್ರ್ಯ ಪಡೆಯುವುದಕ್ಕಿಂತ ಮೊದಲು ಅಂದರೆ ಬ್ರಿಟೀಷ್ರ ಕಾಲದಲ್ಲಿ ಅವರು ವಾಸ್ತವಿಕವಾಗಿ ಜೀತದ ಆಳುಗಳೇ ಆಗಿದ್ದರು ಅವರು ತಮ್ಮ ಜಮೀನುದಾರರ ಜಮೀನುಗಳಲ್ಲಿಯಷ್ಟೇ ಅಲ್ಲದೆ ಅವರ ಮನೆಯಲ್ಲಿ ದುಡಿಯುತ್ತಿದ್ದಾರೆ. ಕೃಷಿ ಕಾರ್ಮಿಕರು ಹೆಚ್ಚಾಗಿ ಅನಕ್ಷರಸ್ಥರು ಆಗಿರುವುದರಿಂದ ಅವರಿಗೆ ದುಡಿಯುವುದೊಂದೇ ಗೊತ್ತು ಹೊರತು ಅವರಿಗೆ ತಮ್ಮ ಹಕ್ಕುಗಳ ಅರಿವೇ ಇರುವುದಿಲ್ಲ ಅವರು ಸುಸಂಘಟಿತರಲ್ಲದ ಕಾರಣ ಅವರು ದೇಶದ ವಿವಿಧ ಗ್ರಾಮೀಣ ಭಾಗಗಳಲ್ಲಿ ವಾಸ ಮಾಡುವುದರಿಂದ ಒಂದು ಗೂಡಿ ಸಂಘಗಳನ್ನು ಸ್ಥಾಪಿಸುವುದು ಕಷ್ಟ.
ಅವರಿಗೆ ಸಮಾಜದ ಯಾವ ಸ್ಥಾನಮಾನಗಳೂ ಇದ್ದಿಲ್ಲ. ಅವರನ್ನು ಸಮಾಜದಲ್ಲಿ ಅತ್ಯಂತ ಕೆಳಮಟ್ಟದವರೆಂದು ಪರಿಗಣಿಸಲಾಗುತ್ತಿತ್ತು. ಅವರಿಗೆ ಯಾವುದೇ ವಿಧವಾದ ಆರ್ಥಿಕ ಸಾಮಾಜಿಕ ಸ್ವಾತಂತ್ರ್ಯವಿದ್ದಿಲ್ಲ. ಆದರೆ ಭಾರತವು ಸ್ವಾತಂತ್ರ್ಯವಾದ ನಂತರ ಅವರ ಆರ್ಥಿಕ, ಸಾಮಾಜಿಕ ಪರಿಸ್ಥಿತಿಯನ್ನು ಸುಧಾರಿಸಲು ಸರ್ಕಾರವು ಕ್ರಮ ಕೈಗೊಂಡಿತು. ಆದರೂ ಇಂದಿಗೂ ಅವರ ಪರಿಸ್ಥಿತಿ ಹೇಳಿಕೊಳ್ಳುವಷ್ಟು ಅಥವಾ ನಿರೀಕ್ಷಿಸಿದಷ್ಟು ಸುಧಾರಿಸಿಲ್ಲ. ಈಗಲೂ ಅವರ ಕೂಲಿಯ ದರವು ಬಹಳ ಕಡಿಮೆ ಇದೆ. ಅವರ ಹಿತರಕ್ಷಣೆಗಾಗಿ ಯಾವುದೇ ಕಾನೂನುಗಳಿರುವುದಿಲ್ಲ. ಅವರು ಕೆಲಸ ಮಾಡುವ ಅವಧಿ, ಕೆಲಸದ ಸ್ಥಿತಿಗತಿ ಕೂಲಿಯ ದರ, ಇವೇ ಮೊದಲಾದವುಗಳನ್ನು ನಿರ್ಧರಿಸಲು ಕಾನೂನುಗಳಿರುವುದಿಲ್ಲ. ಕೆಲವು ಕಾನೂನುಗಳು ಇದ್ದರೂ ಅವು ಕೇವಲ ಕಾಗದದಲ್ಲಿಯೇ ಉಳಿದಿದೆ. ಹೀಗಾಗಿ ಇಂದಿಗೂ ಕೃಷಿ ಕಾರ್ಮಿಕರು ಅತ್ಯಂತ ನಿಕೃಷ್ಟವಾದ ಜೀವನವನ್ನು ನಡೆಸುತ್ತಿದ್ದಾರೆ.
ಕೃಷಿ ಕಾರ್ಮಿಕರ ಉದ್ಯೋಗ ಋತುಮಾನದ ಉದ್ಯೋಗವಾಗಿರುವುದರಿಂದ ಅವರಿಗೆ ವರ್ಷವಿಡೀ ಕೆಲಸವಿರುವುದಿಲ್ಲ. ವರ್ಷದಲ್ಲಿ ಕೆಲವೇ ತಿಂಗಳುಗಳವರೆಗೆ ಅವರಿಗೆ ಕೆಲಸ ಸಿಗುತ್ತದೆ. ಅವರಿಗೆ ವರ್ಷದಲ್ಲ ಸರಾಸರಿ ಕೇವಲ ೨೦೦ ದಿನಗಳ ಕೆಲಸ ಸಿಗುತ್ತದೆಮದು ಅಂದಾಜಿಸಲಾಗಿದೆ. ಉಳಿದ ಅವಧಿಯಲ್ಲಿ ಉದ್ಯೋಗ ಇರುವುದಿಲ್ಲ ಬಡತನ ಹೆಚ್ಚಾಗುತ್ತದೆ. ಕೃಷಿಯೇತರ ವಲಯಗಳ ಅಭಾವ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಜನತು ಕೃಷಿಯನ್ನೇ ಅಲಂಭಿಸಿದ್ದಾರೆ. ಅಲ್ಲಿ ಬೇರೆ ವಲಯಗಳು ಬೆಳೆದು ಬಂದಿಲ್ಲ. ಚಿಕ್ಕ ಕೈಗಾರಿಕೆಗಳು ಹಾಗೂ ಕರಕುಶಲ ಕೈಗಾರಿಕೆಗಳು ಸಾಕಷ್ಟು ಪ್ರಮಾಣದಲ್ಲಿ ಬೆಳೆದಿಲ್ಲವಾದ್ದರಿಂದ ಕೃಷಿ ಕಾರ್ಮಿಕರಿಗೆ ಪರ್ಯಾಯ ಕೆಲಸ ಸಿಗದಂತಾಗಿ ತಮಗೆ ಸಿಗುವಷ್ಟು ಕೂಲಿಯಿಂದ ತೃಪ್ತಿ ಹೊಂದಬೇಕಾಗುತ್ತದೆ. ಗ್ರಾಮೀಣ ಸಾಲದ ಭಾರ ಮತ್ತು ಸಮಾಜದಲ್ಲಿ ಅತಿ ಕೆಳಮಟ್ಟದ ಸ್ಥಾನ ಈ ಮೇಲಿನ ಸಂಗತಿಗಳು ಕೃಷಿ ಕಾರ್ಮಿಕರ ಬಡತನದ ಪರಿಸ್ಥಿತಿಗೆ ಪ್ರಮುಖ ಕಾರಣಗಳಾಗಿವೆ.
ಕೃಷಿ ಕಾರ್ಮಿಕರ ಹಿತಕ್ಕಾಗಿ ಸರ್ಕಾರವು ಕೈಗೊಂಡ ಕ್ರಮಗಳು :
ಭಾರತವು ಸ್ವಾತಂತ್ರ್ಯ ಪಡೆದ ನಂತರವೇ ಸರಕಾರವು ಕೃಷಿ ಕಾರ್ಮಿಕರ ಆರ್ಥಿಕ ಸ್ಥಿತಿಗತಿಗಳನ್ನು ಸುಧಾರಿಸಲು ಹಲವಾರು ಕ್ರಮಗಳನ್ನು ಕೈಗೊಂಡಿತು. ಭಾರತದ ಸಂವಿಧಾನದಲ್ಲಿ ಜೀತ ಪದ್ಧತಿಯು ಮಹಾಪರಾಧವೆಂದು ಘೋಷಿಸಿದೆ. ಸರಕಾರವು ಜೀತ ಪದ್ಧತಿಯನ್ನು ನಿರ್ಮೂಲನೆ ಮಾಡಲು ಕ್ರಮ ಕೈಗೊಂಡ ಅದನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿದೆ. ಇದರಿಂದ ಅನೇಕ ಜೀತದಾಳುಗಳು ಜೀತ ವಿಮುಕ್ತಿಯಾದ ಅನೇಕ ನಿದರ್ಶನಗಳಿವೆ ಮತ್ತು ಕನಿಷ್ಟ ಕೂಲಿ ಕಾಯಿದೆಯನ್ನು ಜಾರಿಗೆ ತರಲಾಗಿದೆ. ಈ ಕಾಯಿದೆ ಪ್ರಕಾರ ಕೃಷಿ ಕಾರ್ಮಿಕರಿಗೆ ಕೊಡಬೇಕಾದ ಕನಿಷ್ಠ ಕೂಲಿಯನ್ನು ನಿಗದಿಪಡಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡುತ್ತದೆ. ಆ ಪ್ರಕಾರ ಎಲ್ಲ ರಾಜ್ಯಗಳಲ್ಲಿ ಕೃಷಿ ಕಾರ್ಮಿಕರಿಗೆ ಕನಿಷ್ಠ ಕೂಲಿಯ ದರಗಳನ್ನು ನಿಗದಿಪಡಿಸಲಾಗಿದೆ. ಈ ಕೂಲಿಯ ದರಗಳು ಸಮರ್ಪಕವಾಗಿ ಜಾರಿಗೆ ಬಂದಿಲ್ಲ.
ಸರ್ಕಾರವು ಕಾನೂನಿನ ಮೂಲಕ ಕೃಷಿ ಕಾರ್ಮಿಕರ ಹಿತಕ್ಕಾಗಿ ಅನೇಕ ಕಾಯಿದೆ ಕ್ರಮಗಳನ್ನು ಜಾರಿಗೆ ತಂದಿದೆ. ಸರ್ಕಾರವು ಕಾನೂನಿನ ಮೂಲಕ ಜಮೀನುದಾರಿ ಪದ್ಧತಿಯನ್ನು ನಿರ್ಮೂಲನ ಮಾಡಿದೆ. ಅದರೊಂದಿಗೆ ಕೃಷಿ ಕಾರ್ಮಿಕರ ಶೋಷಣೆಯನ್ನು ನಿವಾರಿಸಿದೆ. ಇದೂ ಅಲ್ಲದೆ ಗೇಣಿ ಪದ್ಧತಿಯ ಸುಧಾರಣೆಗಾಗಿ ರಾಜ್ಯ ಸರ್ಕಾರಗಳು ಕಾಯಿದೆಗಳನ್ನು ಪಾಸು ಮಾಡಿದೆ. ಅವುಗಳ ಮೂಲಕ ಗೇಣಿದಾರರ ಹಾಗೂ ಕೃಷಿ ಕಾರ್ಮಿಕರ ಹಿತಾಸಕ್ತಿಗಳನ್ನು ರಕ್ಷಿಸಲು ಕ್ರಮ ಕೈಗೊಳ್ಳಲಾಗಿದೆ. ಕೃಷಿ ಕಾರ್ಮಿಕರ ಅಭಿವೃದ್ಧಿಯ ಕಾರ್ಯಕ್ರಮ, ಚಿಕ್ಕ ರೈತರ ಅಭಿವೃದ್ಧಿ ಕಾರ್ಯಕ್ರಮ ಮೊದಲಾದ ಕೆಲವು ವಿಶೇಷ ಕಾರ್ಯಕ್ರಮಗಳ ಮೂಲಕ ಕೃಷಿ ಕಾರ್ಮಿಕರ ಹಾಗೂ ಚಿಕ್ಕ ರೈತರ ಹಿತಾಸಕ್ತಿಯನ್ನು ರಕ್ಷಿಸಲು ಕ್ರಮ ಕೈಗೊಳ್ಳಲಾಗಿದೆ.
ಕೃಷಿ ಕಾರ್ಮಿಕರಿಗೆ ಸಾಗುವಳಿಗಾಗಿ ಪಾಳು ಭೂಮಿಯ ಉದ್ಯೋಗ ಸಾಕಷ್ಟು ಬಂಜರು ಮತ್ತು ಪಾಳು ಭೂಮಿಯನ್ನು ಸಾಗುವಳಿಗೆ ತರಲಾಗಿದೆ ಮತ್ತು ಅದನ್ನು ಭೂ ರಹಿತರಿಗೆ ಹಂಚಲಾಗಿದೆ. ಗ್ರಾಮೀನ ಉದ್ಯೋಗಾವಕಾಶಗಳ ಕಾರ್ಯಕ್ರಮದಡಿಯಲ್ಲಿ ಪಂಚವಾರ್ಷಿಕ ಯೋಜನೆಗಳ ಪ್ರಕಾರ ಗ್ರಾಮಾಂತರ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಅನೇಕ ಯೋಜನೆಗಳನ್ನು ಅಳವಡಿಸಿಲಾಗಿದ್ದು ನಿರುದ್ಯೋಗಿ ಮತ್ತು ಅರೇ ಉದ್ಯೋಗಿ ಕೃಷಿ ಕಾರ್ಮಿಕರಿಗೆ ಪೂರ್ಣಾವಧಿ ಉದ್ಯೋಗಗಳನ್ನು ಒದಗಿಸುವ ವ್ಯವಸ್ಥೆ ಮಾಡಲಾಗಿದೆ.
೨೦ ಅಂಶಗಳ ಆರ್ಥಿಕ ಕಾರ್ಯಕ್ರಮ ಭಾರತದ ಮಾಜಿ ಪ್ರಧಾನಮಂತ್ರಿ ಶ್ರೀಮತಿ ಇಂದಿರಾಗಾಂಧಿಯವರು ಜುಲೈ ೧೯೭೫ರಲ್ಲಿ ೨೦ ಅಂಶಗಳ ಆರ್ಥಿಕ ಕಾರ್ಯಕ್ರಮವೊಂದನ್ನು ಘೋಷಿಸಿ, ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನದಲ್ಲಿ ತರಲು ಎಲ್ಲಾ ರಾಜ್ಯ ಸರ್ಕಾರಗಳಿಗೆ ಕೇಳಿಕೊಂಡರು. ಅವರು ಈ ಕಾರ್ಯಕ್ರಮವನ್ನು ಜನವರಿ ೧೪, ೧೯೮೧ ರಂದು ಪರಿಷ್ಕರಿಸಿದರು. ಈ ಕಾರ್ಯಕ್ರಮದ ಪ್ರಕಾರ ಭೂ ರಹಿತ ಕೃಷಿ ಕಾರ್ಮಿಕರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ರಾಜ್ಯ ಸರ್ಕಾರಗಳು ಹಲವಾರು ಕ್ರಮಗಳನ್ನು ಕೈಗೊಂಡಿದೆ.
ಒಕ್ಕಲುತನದಲ್ಲಿ ಜೀತ ಪದ್ಧತಿಯು ಬಹಳ ಹಿಂದಿನಿಂದಲೂ ಬಂದ ಪದ್ಧತಿಯಾಗಿದೆ. ಈ ಪದ್ಧತಿಯಲ್ಲಿ ಕೃಷಿ ಕಾರ್ಮಿಕರು ಜೀತದ ಆಳುಗಳಾಗಿ ಗುಲಾಮರಾಗಿ ಬಾಳುತ್ತಾರೆ. ಇದನ್ನು ತಡೆಯಲು ೧೯೭೬ರಲ್ಲಿ ಜೀತ ಪದ್ಧತಿಯು ನಿರ್ಮೂಲನಾ ಕಾಯ್ದೆಯನ್ನು ಜಾರಿಗೆ ತರಲಾಗಿದೆ.
ಇತ್ತೀಚೆಗೆ ಲಭ್ಯವಾದ ಅಂಕಿ ಅಂಶಗಳ ಪ್ರಕಾರ ೩೧ ಮಾರ್ಚ್ ೧೯೯೩ರ ವರೆಗೆ ರಾಜ್ಯ ಸರ್ಕಾರಗಳು ೨,೫೧,೫೦೦ ಜೀತದಾಳುಗಳನ್ನು ಗುರುತಿಸಿ ಅವರನ್ನು ಮುಕ್ತಗೊಳಿಸಿ ಇವರ ಪೈಕಿ ಶೇಕಡ ೮೦%ರಷ್ಟು ಜೀತದಾಳುಗಳಿಗೆ ಅಂದರೆ ೨,೨೭, ೫೦೦ ಜೀತದಾಳುಗಳಿಗೆ ಸ್ವತಂತ್ರವಾಗಿ ಜೀವಿಸಲು ಅವಕಾಶ ಮಾಡಿಕೊಡಲಾಯಿತು. ಇದೂ ಅಲ್ಲದೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಜೀತ ಪದ್ಧತಿಯ ನಿರ್ಮೂಲನಕ್ಕಾಗಿ ಹಾಗೂ ಜೀತದಾಳುಗಳ ಪುನರ್ ನೆಲೆಗಾಗಿ ಸಹಾಯ ಧನವನ್ನು ನೀಡುತ್ತಿದೆ. ಪ್ರತಿಯೊಬ್ಬ ಜೀತದಾಳುವಿಗೆ ನೀಡುವ ಸಹಾಯಧನವು ೪,೦೦೦ ರೂ. ಗಳಷ್ಟಿತ್ತು. ಅದನ್ನು ಕೇಂದ್ರ ಸರ್ಕಾರವು ೧ ಫೆಬ್ರವರಿ ೧೯೮೬ ರಿಂದ ೬,೨೫೦ ರೂ. ಗಳಿಗೆ ಏರಿಸಿತು ಹಾಗೂ ೧ ಆಗಸ್ಟ್ ೧೯೯೪ರಿಂದ ಅದನ್ನು ೧೦,೦೦೦ ರೂ.ಗಳಿಗೆ ಏರಿಸಿತು.
ಕೃಷಿ ಕಾರ್ಮಿಕರ ಸುಧಾರನೆಗಾಗಿ ಗ್ರಾಮೀಣ ಶ್ರಮಿಕರ ಬಗೆಗಿನ ರಾಷ್ಟ್ರೀಯ ಆಯೋಗದ
ಶಿಫಾರಸ್ಸುಗಳು :
ಗ್ರಾಮೀಣ ಶ್ರಮಿಕರ ಬಗೆಗಿನ ರಾಷ್ಟ್ರೀಯ ಆಯೋಗವು ಕಾರ್ಮಿಕರ ಸ್ಥಿತಿಗತಿಗಳ ಸುಧಾರಣೆಗಾಗಿ ಕೆಲವು ಮಹತ್ವದ ಶಿಫಾರಸ್ಸುಗಳನ್ನು ಮಾಡಿದೆ. ಸದ್ಯದ ಪರಿಸ್ಥಿತಿಯಲ್ಲಿ ಗ್ರಾಮೀನ ಪ್ರದೇಶಗಳಲ್ಲಿ ಕಂಡುಬರುವ ವ್ಯವಸಾಯ ವ್ಯವಸ್ಥೆಯನ್ನು ಸುಧಾರಿಸಲು ಅಸಾಧ್ಯವಾಗಿದೆ. ಅನೇಕ ಚಿಕ್ಕ ಅಂಚಿನ ರೈತರು ತಮ್ಮ ಅತಿಚಿಕ್ಕ ಭೂ ಹಿಡುವಳಿಗಳನ್ನು ದೊಡ್ಡ ದೊಡ್ಡ ಜಮೀನುದಾರರಿಗೆ ಮಾರಾಟ ಮಾಡಿ ಕೃಷಿ ಕಾರ್ಮಿಕರಾಗುತ್ತಿದ್ದಾರೆ. ಹೀಗಾಗಿ ಕೃಷಿ ಕಾರ್ಮಿಕರ ಸಂಖ್ಯೆ ಅಧಿಕವಾಗುತ್ತಿದೆ. ಹೊಸ ಕೃಷಿ ತಂತ್ರವು ಕೇವಲ ದೊಡ್ಡ ಜಮೀನುದಾರರಿಗೆ ಮಾತ್ರ ಪ್ರಯೋಜನಕಾರಿಯಾಗಿದೆ. ಏಕೆಂದರೆ ಅದು ಮಾರುಕಟ್ಟೆ ಆಧಾರಿತವಾಗಿದ್ದು, ಹೆಚ್ಚು ಬಂಡವಾಳ ಮತ್ತು ಕಡಿಮೆ ಶ್ರಮವನ್ನು ಬಳಸುವಂತಾಗಿದೆ. ಆದ್ದರಿಂದ ಅದು ಚಿಕ್ಕ ರೈತರಿಗೆ ಎಳ್ಳಷ್ಟೂ ಪ್ರಯೋಜನವಾಗಿಲ್ಲ. ಏಕೆಂದರೆ ಅವರಲ್ಲಿ ಹೊಸ ತಂತ್ರವನ್ನು ಬಳಸಲು ಸಾಕಷ್ಟು ಸಂಪನ್ಮೂಲಗಳಿರುವುದಿಲ್ಲ. ಅದರ ಬಗೆಗಿನ ಜ್ಞಾನವು ಅವರಿಗಿರುವುದಿಲ್ಲ. ಅಲ್ಲದೆ ಅದರಿಂದಾಗಬಹುದಾದ ನಷ್ಟ ಭಯವನ್ನು ಎದುರಿಸುವ ಸಾಮರ್ಥ್ಯವೂ ಅವರಿಗಿರುವುದಿಲ್ಲ. ಹೀಗಾಗಿ ಚಿಕ್ಕ ಹಾಗೂ ಅಂಚಿನ ರೈತರು ಸುಧಾರಿತ ರೀತಿಯಲ್ಲಿ ವ್ಯವಸಾಯ ಮಾಡಲು ಅಸಮರ್ಥರಾಗಿದ್ದಾರೆ. ಆದರೆ ಅದೇ ವೇಳೆಗೆ ಸುಧಾರಿತ ಆರ್ಥಿಕ ಕ್ರಮಗಳಿಂದ ಅವರಿಗೆ ತಮ್ಮ ಚಿಕ್ಕ ಹಿಡುವಳಿಗಳನ್ನು ಲಾಭದಾಯಿಕವಾಗಿ ಊಳಲು ಹಾಗೂ ಅವುಗಳಿಂದ ಸಾಕಷ್ಟು ಆದಾಯ ಪಡೆಯಲು ಅಸಾಧ್ಯವಾಗಿದೆ. ಹೀಗಾಗಿ ಅವರು ತಮ್ಮ ಚಿಕ್ಕ ಜಮೀನುಗಳನ್ನು ಮಾರಾಟ ಮಾಡಿ ಕೃಷಿ ಕಾರ್ಮಿಕರಿಗೆ ದುಡಿಯುವುದೇ ಮೇಲು ಎಂಬ ಭಾವನೆ ಅಧಿಕವಾಗುತ್ತಿದೆ. ಆದ್ದರಿಂದಲೇ ಅವರ ಸಂಖ್ಯೆ ಇಂದು ಅಧಿಕವಾಗುತ್ತಿದೆ.
ಸದ್ಯದ ಪರಿಸ್ಥಿತಿಯಲ್ಲಿ ಚಿಕ್ಕ ಹಾಗೂ ಅಂಚಿನ ರೈತರಿಗೆ ಹೆಚ್ಚಿನ ಜಮೀನನ್ನು ಕೊಟ್ಟು ಅವರ ಹಿಡುವಳಿಗಳ ಗಾತ್ರವನ್ನು ಹೆಚ್ಚಿಸಲು ಸಾಧ್ಯವಿಲ್ಲವಾಗಿದ್ದರಿಂದ ಅವರನ್ನು ಹೊಲದೊಡೆಯರನ್ನಾಗಿ ಮಾಡುವುದು ಅವಾಸ್ಥವಿಕವೇ ಆಗಿದೆ. ಆದ್ದರಿಂದ ಕೃಷಿ ಕಾರ್ಮಿಕರ ಸಂಖ್ಯೆಯು ಅಧಿಕವಾಗುತ್ತಿದ್ದು ಅವರ ಪರಿಸ್ಥಿತಿಯು ಭಾರಿ ಕಷ್ಟದಾಯಕವಾಗುತ್ತಿದೆ. ಅವರ ಇಂಥ ಪರಿಸ್ಥಿತಿಯ ಸುಧಾರಣೆಗಾಗಿ ರಾಷ್ಟ್ರೀಯ ಗ್ರಾಮೀಣ ಶ್ರಮಿಕರ ಆಯೋಗವು ಕೆಳಗೆ ಕೊಟ್ಟ ಶಿಫಾರಸ್ಸುಗಳನ್ನು ಮಾಡಿದೆ.
೧.ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಯ ಸುಧಾರಣೆಗಾಗಿ ಬಹುಮುಖ ಕಾರ್ಯಕ್ರಮವನ್ನು ಕೈಗೊಳ್ಳಬೇಕು. ನೀರಾವರಿ, ನೆರೆನಿಯಂತ್ರಣ, ಚರಂಡಿಯ ವ್ಯವಸ್ಥೆ, ಗ್ರಾಮೀಣ ವಿದ್ಯುಚ್ಛಕ್ತಿ, ಒಣಬೇಸಾಯ ಮೊದಲಾದವುಗಳನ್ನು ಕೈಗೊಂಡು ಅವುಗಳ ಮೂಲಕ ಕೃಷಿ ಉತ್ಪಾದನೆಯನ್ನು ಹಾಗೂ ಪ್ರದೇಶಗಳಲ್ಲಿ ಉದ್ಯೋಗವಕಾಶಗಳನ್ನು ಹೆಚ್ಚಿಸಬೇಕು.
೨.ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗವಕಾಶಗಳನ್ನು ನಿರ್ಮಿಸುವ ಹೊಸ ಹೊಸ ಯೋಜನೆಗಳನ್ನು ಕೈಗೊಳ್ಳಬೇಕು. ಅದೇ ವೇಳೆಗೆ ಕನಿಷ್ಟ ಕೂಲಿ ದರಗಳನ್ನು ಹಾಗೂ ಸಾಮಾಜಿಕ ಭದ್ರತೆಯ ಯೋಜನೆಗಳನ್ನು ಜಾರಿಗೊಳಿಸಬೇಕು.
೩.ಕೃಷಿ ಕಾರ್ಮಿಕರಿಗೆ ಮನೆ ಕಟ್ಟಿಕೊಳ್ಳಲು ನಿವೇಶನಗಳನ್ನು ಮತ್ತು ಕಟ್ಟಿದ ಮನೆಗಳನ್ನು ಉಚಿತವಾಗಿ ಇಲ್ಲವೇ ಅತೀ ಕಡಿಮೆ ಬೆಲೆಗೆ ಒದಗಿಸಬೇಕು ಅಲ್ಲದೆ ಅವರು ಕೃಷಿ ಆಧಾರಿತ ಚಟುವಟಿಕೆಗಳಾದ ದನ-ಕರು, ಕೋಳಿ ಸಾಕುವಿಕೆ, ಹೈನೋದ್ಯಮ ಮೊದಲಾದವುಗಳನ್ನು ಕೈಕೊಳ್ಳಲು ಅವರಿಗೆ ಎಲ್ಲಾ ರೀತಿಯಿಂದ ಉತ್ತೇಜನ ನೀಡಬೇಕು.
೪.ಕೇಂದ್ರ ಸರ್ಕಾರವು ಕೃಷಿ ಕಾರ್ಮಿಕರ ರಕ್ಷಣೆಗಾಗಿ ಪ್ರತ್ಯೇಕವಾದ ಕಾನೂನನ್ನು ಪಾಸು ಮಾಡಬೇಕು. ಇದರ ಮೂಲಕ ಅವರ ಯೋಗಕ್ಷೇಮವನ್ನು ಸಾಧಿಸಬಹುದಾಗಿದೆ.
೫.ಕೇಂದ್ರ ಮತ್ತು ರಾಜ್ಯಗಳ ಮಟ್ಟದಲ್ಲಿ ಗ್ರಾಮೀಣ ಕಾರ್ಮಿಕ ಇಲಾಖೆಯೆಂಬ ಪ್ರತ್ಯೇಕ ಇಲಾಖೆಯನ್ನು ಪ್ರಾರಂಭಿಸಬೇಕು. ಅದಕ್ಕೆ ಗ್ರಾಮೀಣ ಕಾರ್ಮಿಕರ ಯೋಗಕ್ಷೇಮವನ್ನು ನೋಡಿಕೊಳ್ಳುವ ಹೊಣೆಗಾರಿಕೆಯನ್ನು ವಹಿಸಿಕೊಡಬೇಕು.
೬.ಗ್ರಾಮೀಣ ಕಾರ್ಮಿಕರು ಕೈಗಾರಿಕಾ ಕಾರ್ಮಿಕರಂತೆ ಕಾರ್ಮಿಕ ಸಂಘಗಳನ್ನು ರಚಿಸಿಕೊಳ್ಳುವಂತೆ ಅವರಿಗೆ ಉತ್ತೇಜನ ಮತ್ತು ಮಾರ್ಗದರ್ಶನ ನೀಡಬೇಕು.
೭.ಗ್ರಾಮೀಣ ಕೃಷಿ ಮಹಿಳಾ ಕಾರ್ಮಿಕರಿಗಾಗಿ ಕೃಷಿ ಕಾರ್ಮಿಕರ ಕಲ್ಯಾಣ ನಿಧಿಯನ್ನು ರಚಿಸಬೇಕೆಂದೂ, ಅದನ್ನು ಗ್ರಾಮೀಣ ಕೃಷಿ ಮಹಿಳಾ ಕಾರ್ಮಿಕರ ಹೆರಿಗೆ, ನಿವೃತ್ತಿ ವೇತನ ಮೊದಲಾದವುಗಳಿಗೆ ಉಪಯೋಗಿಸಬೇಕು. ಈ ನಿಧಿಯ ರಚನೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮ ಪ್ರಮಾಣದಲ್ಲಿ ವಂತಿಗೆಯನ್ನು ಸಲ್ಲಿಸಬೇಕು.
ಒಟ್ಟಿನಲ್ಲಿ ಹೇಳಬೇಕೆಂದರೆ ಗ್ರಾಮೀಣ ಕೃಷಿ ಕಾರ್ಮಿಕರು ಸಮಾಜದ ಅತ್ಯಂತ ಬಡತನದ ವರ್ಗವಾಗಿದ್ದು ಅವರನ್ನು ಬಡತನ ರೇಖೆಯಿಂದ ಮೇಲೆತ್ತಲು ಹಾಗೂ ಅವರ ಸರ್ವಾಂಗೀಣ ಯೋಗಕ್ಷೇಮವನ್ನು ಸಾಧಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಯೋಗವು ಶಿಫಾರಸ್ಸು ಮಾಡಿರುತ್ತದೆ. ಕೇಂದ್ರ ಸರ್ಕಾರವು ಈ ದಿಶೆಯಲ್ಲಿ ಕಾರ್ಯೋನ್ಮುಖವಾಗಿದೆ.
ಕೃಷಿ ಕಾರ್ಮಿಕರ ಕೃಷಿ ಕೂಲಿ :
ಕೂಲಿ ಎಂದರೆ ಆ ದಿನದ ಕೊನೆಯಲ್ಲಿ ಅಥವಾ ವಾರದ ಕೊನೆಯಲ್ಲಿ ಶ್ರಮಿಕನಿಗೆ ಕೊಡುವ ಸಂಭಾವನೆ. ವಸ್ತುಗಳನ್ನು ಉತ್ಪಾದಿಸಲು ಶ್ರಮಕ್ಕೆ ಕೊಡುವ ಪ್ರತಿಫಲವೇ ಕೂಲಿ. ಕಾರ್ಮಿಕರು ತಮ್ಮ ಶಕ್ತಿ ಸಾಮರ್ಥ್ಯಗಳನ್ನು ಮಾಲೀಕನಿಗೆ ಒಪ್ಪಿಸಿ ಅದಕ್ಕೆ ಪ್ರತಿಫಲವಾಗಿ ಸಂಭಾವನೆ ಪಡೆಯುವರು. ಕಾರ್ಮಿಕರ ದುಡಿಮೆಯಿಂದ ಲಭ್ಯವಾದ ಉತ್ಪನ್ನದ ಮೊತ್ತಕ್ಕೆ ಅನುಗುಣವಾಗಿ ಅವರಿಗೆ ಕೂಲಿಯನ್ನು ನಿರ್ಧರಿಸಲಾಗುವುದು. ಕೂಲಿಯನ್ನು ಜೀತ ವೇತನ ಎಂದು ಕರೆಯುತ್ತಾರೆ. ಕೃಷಿ ಕೂಲಿ ಎಂದರೆ ಕೃಷಿ ಕಾರ್ಮಿಕ ತನ್ನ ಶ್ರಮ ಸಲ್ಲಿಸಿದ್ದಕ್ಕಾಗಿ ಪಡೆಯುವ ಸಂಭಾವನೆ.
ಕೃಷಿ ಕೂಲಿಯನ್ನು ಕಾರ್ಮಿಕರುಗಳಿಗೆ ಪಾವತಿ ಮಾಡುವಲ್ಲಿ ೨ ಪದ್ಧತಿಗಳು ಬಳಕೆಯಲ್ಲಿವೆ.
೧.ದಿನಗೂಲಿ : ಕೆಲಸ ಮಾಡುವ ಕಾಲಕ್ಕನುಗುಣವಾಗಿ ಕೊಡುವ ಕೂಲಿ
೨.ಗುತ್ತಿಗೆ ಕೂಲಿ: ಮಾಡಬೇಕಾದ ಕೆಲಸವನ್ನು ಗುತ್ತಿಗೆ ಕೊಟ್ಟು ಅದಕ್ಕೆ ತಕ್ಕಂತೆ ಕೂಲಿಯನ್ನು ಪಾವತಿ ಮಾಡುವುದು.
ಕಾಲಕ್ಕನುಗುಣ ಕೂಲಿ ಪದ್ಧತಿಯಲ್ಲಿ ಕೃಷಿ ಕಾರ್ಮಿಕರನ ಕೂಲಿ ಅವನು ಮಾಡಿದ ಕೆಲಸದ ಪ್ರಯಾಣವನ್ನಾಗಲೀ, ಕೆಲಸದ ಗುಣಮಟ್ಟವನ್ನಾಗಲೀ ಅವಲಂಭಿಸಿರುವುದಿಲ್ಲ. ಇಲ್ಲಿ ಕೃಷಿ ಕೂಲಿ ಕಾರ್ಮಿಕರ ಕೆಲಸದಲ್ಲಿ ನಿರತನಾಗಿದ್ದ ಕಾಲವನ್ನು ಅವಲಂಭಿಸಿರುತ್ತದೆ. ಆದರೆ ಈ ಪದ್ಧತಿಯಲ್ಲಿ ಕಾರ್ಮಿಕನ ಮೇಲೆ ಮೇಲುಸ್ತುವಾರಿ ಅಗತ್ಯ.
ಕೈಗಾರಿಕಾ ಕ್ಷೇತ್ರದಲ್ಲಿ ಕಾರ್ಯವನ್ನು ಕೈಗೊಳ್ಳುವುದು ಸುಲಭ. ಆದರೆ ಕೃಷಿ ಕ್ಷೇತ್ರದಲ್ಲಿ ಇದು ಕಷ್ಟ. ಮುಂದುವರಿದ ರಾಷ್ಟ್ರಗಳಲ್ಲಿ ಕೆಲಸಗಾರರ ನೇಮಕಕ್ಕೆ ಕೃಷಿ ರಂಗವೂ ಇತರ ಉದ್ಯಮ ರಂಗಗಳೊಂದಿಗೆ ಪೈಪೋಟಿ ನಡೆಸಬೇಕಾಗುತ್ತದೆ. ಅಲ್ಲಿ ಕಾರ್ಮಿಕರುಗಳನ್ನು ಕೃಷಿ ರಂಗಕ್ಕೆ ಆಕರ್ಷಿಸಬೇಕಾದರೆ ಹೆಚ್ಚಿನ ಕೂಲಿ ಮರಗಳನ್ನು ನೀಡಬೇಕಾಗುತ್ತದೆ. ಕೆಲವು ಕಾರ್ಯಗಳಲ್ಲಿ ಗುತ್ತಿಗೆ ಕೂಲಿ ವಾಡಿಕೆಯಲ್ಲಿದೆ. ಹತ್ತಿ ಬಿಡಿಸುವುದು, ನೆಲಗಡಲೆ, ಆಲೂಗಡ್ಡೆಗಳನ್ನು ಅಗೆದು ಅದನ್ನು ಬಿಡಿಸುವುದು, ಇಷ್ಟು ಚೀಲ ಹತ್ತಿ ಬಿಡಿಸಿದರೆ ಇಷ್ಟು ಕೂಲಿ ಎಂದು ನಿಗದಿ ಮಾಡಲಾಗಿರುತ್ತದೆ. ಹೆಚ್ಚು ಹತ್ತಿ ಬಿಡಿಸಿದವನು ಹೆಚ್ಚು ಕೂಲಿ ಪಡೆಯುತ್ತಾನೆ. ಇಲ್ಲಿ ಗುತ್ತಿಗೆ ಕೂಲಿ ಕೊಡುವ ಉದ್ದೇಶ ಕೆಲಸದಲ್ಲಿ ಹೆಚ್ಚಿನ ಆಸಕ್ತಿ ತೋರಿಸಲಿ ಎನ್ನುವುದು. ದಿನಗೂಲಿಯ ಮೇಲೆ ನೇಮಕ ಮಾಡಿಕೊಳ್ಳುವ ಕಾರ್ಮಿಕ ಈ ಕಾರ್ಯಗಳಲ್ಲಿ ವಿಶೇಷ ಆಸಕ್ತಿ ತೋರಿಸಲಾರ. ಕೈಗಾರಿಕಾ ಕಾರ್ಮಿಕರಿಗೆ ಹೋಲಿಸಿದರೆ ಕೃಷಿ ಕಾರ್ಮಿಕರು ಪಡೆಯುವ ಕೂಲಿ ಅತಿ ಕಡಿಮೆ. ಬಂಗಾಳದಲ್ಲಿ ಒಬ್ಬ ಕಾರ್ಮಿಕ ೨೬೮ರೂ. ಗಳಿಸಿದರೆ ಕೃಷಿ ಕಾರ್ಮಿಕ ೧೬೦ರೂ. ಗಳಿಸುತ್ತಾನೆ. ಈ ಬಗೆಯ ತಾರತಮ್ಯಕ್ಕೆ ಪ್ರಮುಖ ಕಾರಣಗಳೆಂದರೆ;
೧.ಕೃಷಿ ಕಾರ್ಮಿಕರು ಸಂಘಟನಾ ಶಕ್ತಿ ಪಡೆದಿರುವುದಿಲ್ಲ. ಇದರಲ್ಲಿ ಮುಂದಾಳುತನ ಇಲ್ಲ. ಕಾರ್ಮಿಕ ಸಂಘಗಳನ್ನು ನೇಮಿಸಿಕೊಂಡು ಹಕ್ಕುಗಳ ಈಡೇರಿಕೆಗೆ ಹೊಡೆದಾಡುವುದಿಲ್ಲ.
೨.ಕೃಷಿ ಕಾರ್ಮಿಕರ ಪ್ರಮಾಣ ಹೆಚ್ಚು.
೩.ಕೃಷಿ ಹಿಡುವಳಿಗಳು ದೊಡ್ಡದಾಗಿಲ್ಲದಿರುವುದು.
೪.ಕೃಷಿ ಕಾರ್ಮಿಕರು ಒಂದೆಡೆ ನೆಲಸದೆ ಚೆಲ್ಲಾಪಿಲ್ಲಿಯಾಗಿರುವುದು.
೫.ಮಕ್ಕಳುಗಳನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳುವ ಬಗ್ಗೆ ನಿಯಂತ್ರಣವಿಲ್ಲದಿರುವುದರಿಂದ ಕಾರ್ಮಿಕ ಪೂರೈಕೆ ಅಧಿಕಗೊಂಡು ಕಡಿಮೆ ಕೂಲಿಗೆ ಎಡೆಮಾಡಿ ಕೊಟ್ಟಿದೆ.
೬.ಸಣ್ಣ ಉದ್ದಿಮೆದಾರರು ಎಲ್ಲಾ ಕಾರ್ಯಗಳನ್ನು ಕುಟುಂಬದ ಸದಸ್ಯರುಗಳಿಂದಲೇ ಮಾಡಿ ಮುಗಿಸುತ್ತಾರೆ. ಇದಕ್ಕೆ ಕಾರಣ ಅವರಿಗೆ ಕೂಲಿ ಕೊಡುವ ಸಾಮರ್ಥ್ಯ ಕಡಿಮೆ. ಅಗತ್ಯಬಿದ್ದರೆ ಅವರೇ ಹೆಚ್ಚು ಕಾಲ ದುಡಿಯುತ್ತಾರೆ ಅಥವಾ ಮಯ್ಯಾಳು ಪದ್ಧತಿಯನ್ವಯ ಅಕ್ಕಪಕ್ಕದ ರೈತರ ನೆರವು ಪಡೆಯುತ್ತಾರೆ. ಇಲ್ಲಿ ಕೆಲಸದ ದಕ್ಷತೆಗಿಂತ ಕೆಲಸವನ್ನು ಬೇಗ ಮಾಡಿ ಮುಗಿಸಬೇಕೆನ್ನುವ ಆತುರ ಹೆಚ್ಚು. ಅಸಮರ್ಪಕ ಕೆಲಸ ಕಡಿಮೆ ಉತ್ಪನ್ನಕ್ಕೆ ದಾರಿಯಾಗುವುದು.
೭.ಕೃಷಿ ಕಾರ್ಮಿಕರು ಅವಿದ್ಯಾವಂತರಾಗಿದ್ದು, ಭೂ ಮಾಲೀಕರೊಂದಿಗೆ ಹೆಚ್ಚು ಕೂಲಿ ಪಡೆಯಲು ಚೌಕಾಸಿ ಮಾಡುವ ಶಕ್ತಿ ಇವರಿಗಿರುವುದಿಲ್ಲ.
೮.ಋಣ ಕೂಪದಲ್ಲಿ ಬಿದ್ದು ತೊಳಲಾಡುತ್ತಿರುವ ಕೃಷಿ ಕಾರ್ಮಿಕರು ಭೂ ಮಾಲೀಕರ ಹಂಗಿಗೆ ಒಳಪಡುತ್ತಾರೆ. ಇದರಿಂದಾಗಿ ಮಾಲೀಕರೇ ನಿರ್ಧರಿಸಿದ ಕೂಲಿಗೆ ಅನ್ವಯವಾಗಿ ಅವರು ಕೆಲಸ ಮಾಡಲು ಒಪ್ಪಲೇ ಬೇಕು. ಜೊತೆಗೆ ಭೂ ಮಾಲೀಕರು ಸಮಾಜದ ಮೇಲು ಜಾತಿಗೆ ಸೇರಿದ್ದು, ಕೃಷಿ ಕಾರ್ಮಿಕರುಗಳು ಕೆಳ ಜಾತಿಗೆ ಸೇರಿರುವುದರಿಂದ ಅವರ ಶೋಷಣೆ ಇಲ್ಲಿ ಅತಿ ಸುಲಭ.
ಕೃಷಿ ಕೂಲಿ ಕಡಿಮೆ ಇರಲು ಕಾರ್ಮಿಕರ ಚೌಕಾಸಿಯ ಅಸಾಮರ್ಥ್ಯವೂ ಸಹ ಕಾರಣವಾಗಿ ಪರಿಣಮಿಸುತ್ತದೆ. ಕೃಷಿ ಕಾರ್ಮಿಕರುಗಳಿಗೆ ಬೇಡಿಕೆಯು ದೊಡ್ಡ ಹಿಡುವಳಿದಾರರಿಂದ ಬರಬೇಕು. ಸಣ್ಣ ಹಿಡುವಳಿದಾರರ ಬೇಡಿಕೆ ಬಹಳ ಕಡಿಮೆ. ಏಕೆಂದರೆ ಸಣ್ಣ ಹಿಡುವಳಿದಾರರುಗಳಿಗೆ ಕೂಲಿ ಕೊಡುವ ಶಕ್ತಿಯು ಬಹಳ ಕಡಿಮೆ. ಆದಕಾರಣ ಅವರು ತಮ್ಮ ಕೆಲಸಗಳನ್ನು ಕುಟುಂಬದವರ ಸಹಾಯದಿಂದ ಮಾಡಿಕೊಳ್ಳುತ್ತಾರೆ. ಅಗತ್ಯಬಿದ್ದರೆ ಅವರೇಗಳೇ ಹೆಚ್ಚು ವೇಳೆ ದುಡಿಯುವರು.
ಈ ಅಂಶಗಳು ಕೃಷಿ ಕೂಲಿ ಕಡಿಮೆ ಇರಲು ಕಾರಣವಾಗಿದೆ. ಕೃಷಿ ಕೂಲಿ ಕಾರ್ಮಿಕರ ಬೇಡಿಕೆ ಮತ್ತು ಪೂರೈಕೆಗಳಿಗನುಸಾರವಾಗಿ ನಿರ್ಧಾರವಾದಲ್ಲಿ ಬಡ ಕೃಷಿ ಕಾರ್ಮಿಕರ ಸ್ಥಿತಿಯಲ್ಲಿ ಸುಧಾರಣೆ ಕಾಣಬಹುದು. ಆದರೆ ಕೃಷಿ ಕೂಲಿ ಸಮಪ್ರದಾಯಗಳಿಗನುಸಾರವಾಗಿ ನಿರ್ಧಾರವಾಗುವುದು. ಕೃಷಿ ಕಾರ್ಮಿಕರ ಹೀನ ಸ್ಥಿತಿಗೆ ಅತಿ ಮುಖ್ಯ ಕಾರಣ, ಅಲ್ಲದೆ ಕೃಷಿ ಕಾರ್ಮಿಕರಿಗೆ ಬೇಡಿಕೆಯು ದೊಡ್ಡ ಹಿಡುವಳಿದಾರರಿಂದಲೇ ಬರಬೇಕು. ಆದರೆ ಕೃಷಿ ಯಾಂತ್ರೀಕರಣದಿಂದಾಗಿ ಇತ್ತೀಚೆಗೆ ಈ ಬೇಡಿಕೆ ದುರ್ಬಲಗೊಳ್ಳುತ್ತದೆ. ಇವರ ಜೊತೆಗೆ ಕೃಷಿ ಕಾರ್ಮಿಕರ ಪೂರೈಕೆ ಬೇಡಿಕೆಗಿಂತ ಹೆಚ್ಚುತ್ತಿರುವುದು ಕೂಲಿ ದರದ ಕುಸಿತಕ್ಕೆ ಕಾರಣವಾಗಿ ಪರಿಣಮಿಸಿದೆ.
ಕೃಷಿ ಕೂಲಿ ಕೆಲಸ ಮತ್ತು ಋತುಮಾನಗಳಿಗನುಸಾರವಾಗಿ ಮಾತ್ರವೇ ಅಲ್ಲದೆ ಪ್ರಾಂತ್ಯಕ್ಕೆ ಹೆಚ್ಚು ಕಡಿಮೆ ಇರುತ್ತದೆ. ರಾಜ್ಯದಿಂದ ರಾಜ್ಯಕ್ಕೆ, ರಾಜ್ಯದಲ್ಲೇ ಜಿಲ್ಲೆಯಿಂದ ಜಿಲ್ಲೆಗೆ, ಜಿಲ್ಲೆಯಲ್ಲೇ ಒಂದು ತಾಲ್ಲೂಕಿನಿಂದ ಮತ್ತೊಂದು ತಾಲ್ಲೂಕಿಗೆ ಕೃಷಿ ಕೂಲಿಯಲ್ಲಿ ವ್ಯತ್ಯಾಸ ಕಾಣಬಹುದು. ಭಾರತದಲ್ಲಿ ಕೃಷಿ ವಿಧಾನವು ಎಲ್ಲಾ ಕಡೆ ಒಂದೇ ಬಗೆಯಾಗಿರುವುದರಿಂದ ಕೃಷಿ ಕೂಲಿಯಲ್ಲೂ ಸಮಾನತೆಯನ್ನು ತರುವುದು ಕಷ್ಟ. ಇನ್ನೂ ವಿಚಿತ್ರವೆಂದರೆ ಒಂದೇ ಪ್ರದೇಶದಲ್ಲಿ ಬೇರೆ ಬೇರೆ ಜಾತಿಯವರೆಗೆ ಒಂದೇ ಬಗೆಯ ಕೆಲಸಕ್ಕೆ ಬೇರೆ ಬೇರೆ ಕೂಲಿ ಕೊಡುವ ಪದ್ಧತಿ ಉಂಟು. ಅಲ್ಲದೆ ಗಂಡಾಳುಗಳಿಗೆ ದೊರೆಯುವಷ್ಟು ಕೂಲಿಯು ಹೆಣ್ಣಾಳುಗಳಿಗೆ ಹಾಗೂ ಮಕ್ಕಳಿಗೆ ದೊರೆಯುವುದಿಲ್ಲ. ಗಂಡಾಳುಗಳು ಮಾಡುವ ಕೆಲವು ಕೆಲಸಗಳನ್ನು ಹೆಣ್ಣಾಳುಗಳು ಮಾಡಿದಾಗ್ಯೂಕ ಅವರಿಗೆ ಗಂಡಾಳುಗಳು ಪಡೆಯುವಷ್ಟು ಕೂಲಿ ಸಿಗುವುದಿಲ್ಲ. ಮಕ್ಕಳಿಗ ಇವರಿಬ್ಬರಿಗಿಂತಲೂ ಕೂಲಿ ಕಡಿಮೆ ಇರುತ್ತದೆ. ಕುಟುಂಬದ ವೆಚ್ಚವನ್ನು ಹೊರುವ ಸಲುವಾಗಿ ಸ್ತ್ರೀಯರು ಮತ್ತು ಮಕ್ಕಳು ಅನಿವಾರ್ಯವಾಗಿ ದುಡಿಯುತ್ತಾರೆ. ಯೋಜನೆಗಳ ಪೂರ್ವದ ತನಿಖಾ ಆಯೋಗಗಳ ಪ್ರಕಾರ ೧೯೫೦-೫೧ರಲ್ಲಿ ಸರಾಸರಿ ದಿನ ನಿತ್ಯದ ಗಂಡಾಳುಗಳಿಗೆ ದಿನಕ್ಕೆ ೧೦೯ ಪೈಸೆ ಇದ್ದುದು ೧೯೫೬ರಲ್ಲಿ ೯೬ ಪೈಸೆಗಳಿಗೆ ಇಳಿಯಿತು. ಹೆಣ್ಣಾಳುಗಳಿಗೆ ೬೮ ಪೈಸೆಗಳಿಂದ ೫೯ ಪೈಸೆಗಳಿಗೆ ಇಳಿಯಿತು. ಮಕ್ಕಳಿಗೆ ೭೦ ಪೈಸೆಗಳಿಂದ ೫೩ ಪೈಸೆಗಳಿಗೆ ಇಳಿಯಿತು.
ಕೃಷಿ ಕನಿಷ್ಠ ಕೂಲಿ ಕಾಯ್ದೆ ೧೯೪೮ :
೧೯೪೮ರಲ್ಲಿ ಅನುಷ್ಟಾನಕ್ಕೆ ಬಂದ ಕನಿಷ್ಠ ಕೂಲಿ ಕಾಯಿದೆಯು ಕೂಲಿ ದರಗಳನ್ನು ಕ್ರಮಬದ್ಧ ಪಡಿಸುವ ಹಾದಿಯಲ್ಲಿ ಒಂದು ಮೈಲುಗಲ್ಲಾಗಿ ಪರಿಣಮಿಸಿದೆ. ಕೂಲಿ ದರಗಳು ಕಡಿಮೆ ಇರುವ ಕಾರ್ಮಿಕ ಸಂಘಗಳಿಲ್ಲದ ಕಡೆಗಳಲ್ಲಿ ಕನಿಷ್ಠ ಕೂಲಿ ನಿಗದಿ ಪಡಿಸುವುದು ಅವಶ್ಯಕ. ಈ ಕಾಯ್ದೆ ಪ್ರಕಾರ ಕೃಷಿ ಕಾರ್ಮಿಕರು ಕನಿಷ್ಠ ಕೂಲಿಗೆ ಅರ್ಹರಾಗಿರುತ್ತಾರೆ.
ಕೃಷಿ ಕಾರ್ಮಿಕರಿಗೆ ಕನಿಷ್ಠ ಕೂಲಿಯನ್ನು ನಿಗದಿ ಮಾಡುವಾಗ ಕಾರ್ಮಿಕ ಸಾಮಾನ್ಯ ಜೀವನಮಟ್ಟ ನ್ಯಾಯವಾದ ಕೂಲಿ, ಯಜಮಾನ ಕೊಡಲು ಸಿದ್ಧವಿರುವ ಕೂಲಿದರಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಸಾಮಾನ್ಯವಾಗಿ ಗಂಡಾಳುಗಳಿಗೆ ಕೊಡುವ ಕೂಲಿಯು ಅವನ ಸಂಸಾರದ ಪೋಷಣೆಗೆ ಸಾಕಾಗುವಷ್ಟು ಇರಬೇಕು. ಆದರೆ ಸ್ತ್ರೀ ಕಾರ್ಮಿಕರುಗಳಿಗೆ ಅವರ ಜೀವನಕ್ಕೆ ಸಾಕಾಗುವಷ್ಟರ ಮಟ್ಟಿಗೆ ಕೂಲಿ ಸಿಕ್ಕರೆ ಸಾಕು. ಈ ಅಂಶಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ನಿಗದಿ ಮಾಡಿದ ಕೂಲಿ ದರವನ್ನು ಜಾರಿಗೆ ತರಲು ಜಿಲ್ಲೆ ಮತ್ತು ರಾಜ್ಯ ಮಟ್ಟಗಳಲ್ಲಿ ಕೃಷಿ ಕೂಲಿ ಮಂಡಳಿಗಳನ್ನು ರಚಿಸಬೇಕು. ಕೃಷಿ ಕೂಲಿ ಮಂಡಳಿಗಳಲ್ಲಿ ಕಾರ್ಮಿಕ ಪ್ರತಿನಿಧಿಗಳು, ಜಮೀನು ಹಿಡುವಳಿದಾರರು ಹಾಗೂ ಸರಕಾರಗಳ ಪ್ರತಿನಿಧಿಗಳಿರಬೇಕು. ಈ ಮಂಡಳಿಯು ಪ್ರತಿಯೊಂದು ಜಿಲ್ಲೆಗೂ ಕೃಷಿ ಪ್ರದೇಶಕ್ಕೂ ಕೂಲಿ ದರಗಳನ್ನು ನಿಗದಿ ಮಾಡಿ ಜಾರಿಗೆ ತರಬೇಕು. ಆದರೆ ಕನಿಷ್ಠ ಕೂಲಿಯನ್ನು ನಿಗದಿ ಮಾಡಿ ಜಾರಿಗೆ ತರುವುದು ಸುಲಭವಲ್ಲ. ಇದಕ್ಕೆ ಅನೇಕ ತೊಂದರೆಗಳಿವೆ;
೧.ಕನಿಷ್ಠ ಕೂಲಿಯನ್ನು ನಿಗದಿ ಮಾಡುವುದು ತುಂಬಾ ಪ್ರಯಾಸದ ಕೆಲಸ.
೨.ನಿಗದಿ ಮಾಡಿದ ಕೂಲಿಯನ್ನು ಮಾಲೀಕ ಕೊಡಲು ಶಕ್ತನೇ ಅಲ್ಲವೇ ಎಂಬುದನ್ನು ಗಮನಿಸಬೇಕು.
ಕೃಷಿಕನಿಗೆ ಅವನ ವೃತ್ತಿಯು ಎಷ್ಟರ ಮಟಿಗೆ ಲಾಭದಾಯಕ ಎಂಬ ಪ್ರಶ್ನೆಯನ್ನು ಇದು ಅವಲಂಭಿಸಿದೆ. ಅವನ ಉತ್ಪಾದನಾ ಕಾರ್ಯದ ಆದಾಯ ವೆಚ್ಚಗಳನ್ನು ಇದು ಅವಲಂಭಿಸಿರುವುದು. ಅದನ್ನು ಕಂಡುಹಿಡಿಯ ಬೇಕಾಗುತ್ತದೆ. ಇದು ಅಷ್ಟು ಸುಲಭವಲ್ಲ. ಉತ್ಪಾದನೆಯ ವೆಚ್ಚ ಆ ಪ್ರದೇಶದ ಬೆಳೆಗಳು ಅವುಗಳನ್ನು ಉತ್ಪಾದಿಸಲು ತಗಲುವ ವೆಚ್ಚ, ಉತ್ಪನ್ನದ ಮಟ್ಟ ಅದಕ್ಕೆ ದೊರೆಯಬಹುದಾದ ಬೆಲೆ ಇವುಗಳ ಮೇಲೆ ರೈತನ ಕಸುಬು ಲಾಭದಾಯಕವೇ ಇಲ್ಲವೇ ಎಂಬುದು ನಿರ್ಧಾರವಾಗುತ್ತದೆ. ಕೃಷಿ ಕೂಲಿಯನ್ನು ಹಣ, ಧಾನ್ಯಗಳ ರೂಪದಲ್ಲಿ ಕೊಡುವುದರಿಂದ ಸಮಾನ ಕೂಲಿದರಗಳನ್ನು ನಿಗದಿ ಮಾಡುವುದು ಕಷ್ಟ. ಹೀಗಾಗಿ ಕೂಲಿ ದರವನ್ನು ಯಾವ ಆಧಾರವಿಲ್ಲದೆ ಅಧಿಕ ಮಟ್ಟದಲ್ಲಿ ನಿಗದಿ ಮಾಡಿದರೆ ಕೊನೆಯಲ್ಲಿ ಕಾರ್ಮಿಕರಿಗೆ ಬೇಡಿಕೆ ಕಡಿಮೆಯಾಗಿ ತೊಂದರೆಯಾಗುವುದು. ಎಲ್ಲಕ್ಕೂ ಮೇಲಾಗಿ ಕೃಷಿ ಕಾರ್ಮಿಕರು ಅನಕ್ಷರಸ್ಥರು ಅವರಲ್ಲಿ ಸಂಘಟನಾ ಶಕ್ತಿ ಇಲ್ಲ. ಕನಿಷ್ಠ ಕೂಲಿಯನ್ನು ನಿಗದಿ ಮಾಡಿದರೂ ಅನೇಕ ಕಾರ್ಮಿಕರ ಗಮನಕ್ಕೆ ಬರದಿರಬಹುದು. ಕನಿಷ್ಠ ಕೂಲಿಯನ್ನು ಜಾರಿಗೆ ತಂದು ಮೇಲ್ವಿಚಾರಣೆ ನಡೆಸುವುದು ತುಂಬಾ ಅಗಾಧವಾದ ಕೆಲಸ. ಆದಾಗ್ಯೂ ಸರಕಾರ ಶ್ರದ್ಧೆ ವಹಿಸಿ ಮುಂದೆ ಬಂದು ಅವರ ಹಿತವನ್ನು ರಕ್ಷಿಸಲೇಬೇಕು. ಇದು ಸರಕಾರದ ಕರ್ತವ್ಯವೂ ಹೌದು.
ಅಧ್ಯಾಯ - ೨. ಸಾಹಿತ್ಯ ವಿಮರ್ಶೆ
ಹೊಲ-ಗದ್ದೆಗಳಲ್ಲಿ ಕೂಲಿಗಾಗಿ ದುಡಿಯುವ ಭೂ ರಹಿತ ಕೂಲಿಗಾರರಿಗೆ ಕೃಷಿ ಕಾರ್ಮಿಕರೆಂದು ಅವರ ಸಂಖ್ಯೆಯು ತೀವ್ರಗತಿಯಲ್ಲಿ ಅಧಿಕವಾಗುತಿದ್ದರೂ ಅವರ ಆರ್ಥಿಕ ಸ್ಥಿತಿಯು ಮಾತ್ರ ಶೋಚನೀಯವಾಗುತ್ತಾ ನಡೆದಿದೆ. ಸರ್ಕಾರವು ಬಹು ಕಾಲದಿಂದಲೂ ಕೈಗಾರಿಕಾ ಕಾರ್ಮಿಕರ ಹಿತರಕ್ಷಣೆಗಾಗಿ ಸಾಕಷ್ಟು ಗಮನ ಕೊಟ್ಟು ಹಲವಾರು ಕಾಯ್ದೆಗಳನ್ನು ಪಾಸು ಮಾಡಿತು. ಆದರೆ ಕೃಷಿ ಕಾರ್ಮಿಕ ಸಂಖ್ಯೆಯು ಏರುತ್ತಿದ್ದರೂ ಅವರ ಹಿತರಕ್ಷಣೆಗಾಗಿ ಇತ್ತೀಚಿನವರೆಗೆ ಸರ್ಕಾರವು ಗಮನವನ್ನೇ ಕೊಟ್ಟಿದ್ದಿಲ್ಲ. ಯಾವ ಕಾಯಿದೆಯನ್ನು ಪಾಸು ಮಾಡಿಲ್ಲ ಎಂದು ತಿಳಿಸಿದ್ದಾರೆ. (ಪ್ರೊ.ಕೆ.ಡಿ.ಬಸವ)
ಕೃಷಿ ಕಾರ್ಮಿಕರನ್ನು ಭಯ ರಹಿತ ಕೃಷಿ ಕಾರ್ಮಿಕರು ಮತ್ತು ಅತಿ ಸಣ್ಣ ಭೂ ಹಿಡುವಳಿ ಇರುವ ಕಾರ್ಮಿಕರು ಎಂಬ ೨ ವರ್ಗಗಳಿವೆ. ಭೂ ರಹಿತ ಕೃಷಿ ಕಾರ್ಮಿಕರು ಬೇರೆ ಯಾವುದೇ ಆದಾಯದ ಮೂಲಗಳು ಇಲ್ಲದಿರುವುದರಿಂದ ಅವರು ಕೂಲಿಗಾಗಿ ಸದಾ ಬೇರೆಯವರ ಭೂಮಿಯಲ್ಲಿ ದುಡಿಯುತ್ತಾರೆ. ಆದರೆ ಅತಿ ಸಣ್ಣ ಭೂ ಹಿಡುವಳಿ ಹೊಂದಿರುವ ರೈತರು ತಮ್ಮ ಭೂಮಿಯಿಂದ ಬರುವ ಆದಾಯ ಜೀವನ ಸಾಗಿಸಲು ಸಾಲದೆ ಬರುವುದರಿಂದ ತಮ್ಮ ಬಿಡುವಿನ ವೇಳೆಯಲ್ಲಿ ಬೇರೆಯವರ ಭೂಮಿಯಲ್ಲಿ ದುಡಿಯುತ್ತಾರೆ. ಮೊದಲ ಕೃಷಿ ಕಾರ್ಮಿಕರ ಸಮೀಕ್ಷಾ ಸಮಿತಿ ಭಾರತದಲ್ಲಿ ಕೃಷಿ ಕಾರ್ಮಿಕರನ್ನು (ಅ) ಹೊಂದಿಕೊಂಡ ಕಾರ್ಮಿಕರು (ಆ) ಸಾಂದರ್ಭಿಕ ಕಾರ್ಮಿಕರೆಂದು ೨ ವಿಧಗಳಾಗಿ ವಿಂಗಡಿಸಲಾಗಿದೆ. ಹೊಂದಿಕೊಂಡ ಕೃಷಿ ಕಾರ್ಮಿಕರು ಸಾಮಾನ್ಯವಾಗಿ ಯಾವುದೇ ಮೌಖಿಕ ಅಥವಾ ಲಿಖಿತ ಒಪ್ಪಂದದ ಆಧಾರದ ಮೇಲೆ ಒಬ್ಬ ರೈತರ ಕುಟುಂಬಕ್ಕೆ ಹೊಂದಿಕೊಂಡಿರುತ್ತಾರೆ. ಅವರು ಖಾಯಂ ಸ್ವರೂಪದ ಕಾರ್ಮಿಕರಾಗಿದ್ದು, ವರ್ಷವೆಲ್ಲ ಉದ್ಯೋಗ ಪಡೆಯುತ್ತಾರೆ ಹಾಗೂ ಅವರು ಬೇರೆಯವರ ಹೊಲದಲ್ಲಿ ಕೆಲಸ ಮಾಡುವಂತಿಲ್ಲ. ಅಲ್ಲದೆ ಅವರು ದೀರ್ಘಕಾಲದ ಕೆಲಸ ಮಾಡಬೇಕು. ಹೊಂದಿಕೊಂಡ ಕಾರ್ಮಿಕವರ್ಗವನ್ನು ಹೊರತು ಪಡಿಸಿ ಉಳಿಯುವ ಎಲ್ಲಾ ಕೃಷಿ ಕಾರ್ಮಿಕರು ಸಾಂದರ್ಭಿಕ ಕಾರ್ಮಿಕ ವರ್ಗದಲ್ಲಿ ಬರುತ್ತಾರೆ. ಈ ವರ್ಗದ ಜನರು ತಮಗಿಷ್ಟ ಬಂದವರ ಹೊಲದಲ್ಲಿ ದುಡಿಯುತ್ತಾರೆ ಹಾಗೂ ಪ್ರತಿದಿನದ ಆಧಾರದ ಮೇಲೆ ಕೂಲಿ ಪಡೆಯುತ್ತಾರೆ. (ಪ್ರೊ. ಎಚ್.ಆರ್. ಕೃಷ್ಣಮೂರ್ತಿ)
ಕೂಲಿಗಾಗಿ ದುಡಿಯುವ ಕೃಷಿ ಕಾರ್ಮಿಕರಲ್ಲಿ ೨ ವಿಧಗಳಿವೆ. ಭೂ ರಹಿತ ಮತ್ತು ಸಣ್ಣ ಭೂಮಿ ಇರುವವರು. ಭಾರತದಲ್ಲಿ ಸುಮಾರು ೭೦ ದಶಲಕ್ಷ ಮಂದಿ ಕೃಷಿ ಕಾರ್ಮಿಕರಿದ್ದಾರೆ ಎಂದು ಅಂದಾಜಿಸಲಾಗಿದೆ. ದ್ವಿತೀಯ ಮಹಾಯುದ್ಧದ ಬಳಕೆ ಕೃಷಿ ಕಾರ್ಮಿಕರ ಸಂಖ್ಯೆ ಅಧಿಕವಾಗುವುದಕ್ಕೆ ಜನಸಂಖ್ಯೆ ಹೆಚ್ಚಳ, ತರಬೇತಿ ರಹಿತ ಕಾರ್ಮಿಕರು, ಗೃಹ ಮತ್ತು ಗ್ರಾಮೀಣ ಕೈಗಾರಿಕೆಗಳ ನಾಶ, ಭೂ ವಿಭಜನೆ ಮತ್ತು ವಿಧ್ರೀಕರಣ ಕೂಡು ಕುಟುಂಬಗಳ ಸಂಖ್ಯೆ ಕಡಿಮೆಯಾಗಿರುವುದು ಅನೇಕ ಕಾರಣಗಳನ್ನು ನೀಡಬಹುದಾಗಿದೆ.
ಕೃಷಿ ಕಾರ್ಮಿಕರು ಬಹುತೇಕ ಅನಕ್ಷರಸ್ಥರು ಜಾತಿವ್ಯವಸ್ಥಗೆ ಕಟ್ಟುಬಿದ್ದವರು, ಅಸಂಘಟಿತ ವರ್ಗದವರು, ಬಂಡವಾಳ ಶಾಹಿಗಳ ಶೋಷಣೆಗೆ ಒಳಗಾದವರಾಗಿದ್ದಾರೆ ಮತ್ತು ಕಡಿಮೆ ಸಂಬಳಕ್ಕೆ ಹೆಚ್ಚು ಸಮಯ ದುಡಿಯುವ ವರ್ಗದವರಾಗಿದ್ದಾರೆ. ಕೃಷಿ ಕಾರ್ಮಿಕರ ಸಂಖ್ಯೆ ಅಧಿಕವಾಗುತ್ತಾ ಹೋಗುತ್ತದೆ. ಇವರ ಜೊತೆಗೆ ಕೃಷಿ ಕಾರ್ಮಿಕರ ಆರ್ಥಿಕ ಪರಿಸ್ಥಿತಿ ಮತ್ತು ಸಾಮಾಜಿಕ ಸ್ಥಾನಮಾನ ಕುಸಿಯುತ್ತಿದೆ. ಕೃಷಿಯು ಋತು ಸಂಭವಿಯಿಂದ ಚಟುವಟಿಕೆಯಿಂದಾಗಿರುವುದರಿಂದ ಅಪೂರ್ಣೋದ್ಯೋಗ ಕಡಿಮೆ. ಕೂಲಿ ದೊರೆಯುವುದರಿಂದ ಕನಿಷ್ಟ ಜೀವನ ಮಟ್ಟವನ್ನು ಕೃಷಿ ಕಾರ್ಮಿಕರು ಸಾಗಿಸುತ್ತಿದ್ದಾರೆ.
ಭಾರತದ ಕೃಷಿ ಕಾರ್ಮಿಕರು ಬಹುತೇಕವಾಗಿ ಹರಿಜನ, ಗಿರಿಜನ ಮತ್ತು ಹಿಂದುಳಿದ ವರ್ಗದವರಾಗಿರುವುದರಿಂದ ನಿಕೃಷ್ಟ ಸಾಮೂಹಿಕ ಜೀವನವನ್ನು ಸಾಗಿಸುತ್ತಿದ್ದಾರೆ. ಕೃಷಿ ಕಾರ್ಮಿಕರ ಸ್ಥಿತಿಯ ಸುಧಾರಣೆಗೆ ಸಂಬಂಧ ಪಟ್ಟಂತೆ ಜೀತ ಪದ್ಧತಿ ಕೃಷಿ ಕಾರ್ಮಿಕರಿಗೆ ಪುನರ್ವಸತಿ, ಗೃಹ ಮತ್ತು ಗ್ರಾಮೀಣ ಕೈಗಾರಿಕೆಗಳ ಹೆಚ್ಚಳ, ಸಹಕಾರಿ ಕೃಷಿ ಕ್ರಮವನ್ನು ಅನುಷ್ಠಾನಕ್ಕೆ ತರುವುದು ದುಡಿಮೆಯ ಅವಧಿಯನ್ನು ೮ ಗಂಟೆಗಳಿಗೆ ಸೀಮಿತಗೊಳಿಸುವುದು. ಕನಿಷ್ಠ ವೇತನವನ್ನು ನಿಗಧಿಗೊಳಿಸುವುದರಿಂದ ಅವರ ಪರಿಸ್ಥಿತಿ ಸುಧಾರಿಸಬಹುದು. (ಎಂ.ಎಸ್.ಕಲ್ಲೂರು)
ಗ್ರಾಮೀಣ ವಲಯದಲ್ಲಿ ಕೃಷಿ ಕಾರ್ಮಿಕರು ಅತ್ಯಮತ ಮುಖ್ಯವಾದ ಒಂದು ವರ್ಗದ ಜನರಾಗಿದ್ದಾರೆ. ಇವರೂ ಸಹ ಕೃಷಿಯಲ್ಲಿ ನಿರತರಾಗಿರುವ ಜನರಾಗಿರುವರು. ಕೃಷಿ ಕಾರ್ಮಿಕರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ತೀರಾ ಹಿಂದುಳಿದ ವರ್ಗದವರಾಗಿರುತ್ತಾರೆ. ಇವರು ದಾರುಣ ಬಡತನದಲ್ಲಿ ಜೀವಿಸುತ್ತಿದ್ದು ಗ್ರಾಮೀಣ ಅರ್ಥ ವ್ಯವಸ್ಥೆಯಲ್ಲಿ ನಿರ್ಲಕ್ಷಕ್ಕೆ ಒಳಗಾಗಿರುವವರು ಕೃಷಿ ಉತ್ಪಾದನೆಗೆ ಕೃಷಿ ಕಾರ್ಮಿಕರು ಅವಶ್ಯಕವಾದ ವರ್ಗದ ಜನರಾಗಿರುತ್ತಾರೆ.
ಸಮಸ್ಯೆಯ ತೀವ್ರತೆ ನಿಖರವಾದ ಸಂಖ್ಯೆ ಅವರ ಆದಾಯ ಜೀವನ ಮಟ್ಟ ಮೇಲಾದ ವಿಷಯಗಳ ಬಗೆಗೆ ಅಂಕಿ ಸಂಖ್ಯೆಗಳ ತೀವ್ರ ಕೊರತೆ ಇದೆ. ಕೆಲವು ಸಮಿತಿಗಳು ಅಯೋಗಗಳ ವರದಿಗಳ ರೂಪದಲ್ಲಿ ಸ್ವಲ್ಪ ಮಾಹಿತಿ ಲಭ್ಯವಾಗುತ್ತದೆ. ೧೯೬೦ರಲ್ಲಿ ಪ್ರಕಟಿಸಲಾದ ೨ನೇಯ ಕೃಷಿ ಕಾರ್ಮಿಕರ ಪರಿಶೋಧನಾ ಸಮಿತಿಯ ವರದಿಯ ಪ್ರಕಾರ ಒಟ್ಟು ಗ್ರಾಮೀಣ ಕುಟುಂಬಗಳಲ್ಲಿ ಶೇ.೨೫ರಷ್ಟು ಕೃಷಿ ಕಾರ್ಮಿಕರು ಈ ವರದಿಯ ಮೇರೆಗೆ ಗ್ರಾಮೀಣ ಕೆಲಸಗಾರರಲ್ಲಿ ಶೇ.೮೫ರಷ್ಟು ಅನಿಯಮಿತ ಕಾರ್ಮಿಕರಾಗಿದ್ದು ತಮ್ಮನ್ನು ನೇಮಿಸಿಕೊಳ್ಳಲು ಇಚ್ಛಿಸುವ ಯಾವುದೇ ಕೃಷಿಕರಿಗಾಗಿ ಕೆಲಸ ಮಾಡುವ ವರ್ಗದವರಾಗಿರುತ್ತಾರೆ. ಉಳಿದ ಶೇ.೧೫ರಷ್ಟು ಜನರು ಮಾತ್ರ ನಿರ್ದಿಷ್ಟ ಭೂ ಮಾಲೀಕರ ಜಮೀನಿನಲ್ಲಿ ಕೆಲಸ ಮಾಡುವವರಾಗಿರುತ್ತಾರೆ. ಸುಮಾರು ಶೇ.೫೦ರಷ್ಟು ಜನ ಸ್ವಲ್ಪವೂ ಭೂಮಿಯನ್ನು ಹೊಂದಿರುವುದಿಲ್ಲ. ಉಳಿದ ಕೃಷಿ ಕಾರ್ಮಿಕರು ತೀರಾ ಚಿಕ್ಕ ಪ್ರಮಾಣದ ಜಮೀನನ್ನು ಹೊಂದಿರುತ್ತಾರೆ. ಬಹುತೇಕ ಕೃಷಿ ಕಾರ್ಮಿಕರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೇ ಹಿಂದುಳಿದ ವರ್ಗಗಳಿಗೆ ಸೇರಿದ ಜನರಾಗಿರುತ್ತಾರೆ. ಒಂದು ಅಂದಾಜಿನ ಪ್ರಕಾರ ಶೇ.೭೫ರಿಂದ ೮೦ರಷ್ಟು ಕೃಷಿ ಕಾರ್ಮಿಕರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ. (ಎಚ್.ಆರ್.ಕೃಷ್ಣಯ್ಯಗೌಡ)
ಕೃಷಿ ಕಾರ್ಮಿಕರ ಕೂಲಿಯ ಮೇಲೆ ಹೆಚ್ಚಿನ ಗಮನ ಹರಿಸಿದ್ದಾರೆ. ಕೂಲಿ ಎಂದರೆ ಆ ದಿನದ ಕೊನೆಯಲ್ಲಿ ಅಥವಾ ವಾರದ ಕೊನೆಯಲ್ಲಿ ಶ್ರಮಿಕನಿಗೆ ಕೊಡುವ ಸಂಭಾವನೆ ವಸ್ತುಗಳ ಉತ್ಪಾದಿಸಲು ಶ್ರಮಕ್ಕೆ ಕೊಡುವ ಪ್ರತಿಫಲವೇ ಕೂಲಿ. ಕಾರ್ಮಿಕರು ತಮ್ಮ ಶಕ್ತಿ, ಸಾಮರ್ಥ್ಯಗಳನ್ನು ಮಾಲಿಕನಿಗೆ ಒಪ್ಪಿಸಿ ಅದಕ್ಕೆ ಪ್ರತಿಫಲವಾಗಿ ಸಂಭಾವನೆ ಪಡೆಯುವರು. ಕಾರ್ಮಿಕರ ದುಡಿಮೆಯಿಂದ ಲಭ್ಯವಾದ ಉತ್ಪನ್ನದ ಮೊತ್ತಕ್ಕೆ ಅನುಗುಣವಾಗಿ ಅವರಿಗೆ ಕೂಲಿಯನ್ನು ನಿರ್ಧರಿಸಲಾಗುವುದು. ಕೂಲಿಯನ್ನು ಜೀತ ವೇತನ ಎಂದು ಕರೆಯುತ್ತಾರೆ. ಕೃಷಿ ಕೂಲಿ ಎಂದು ಕಾರ್ಮಿಕ ತನ್ನ ಶ್ರಮ ಸಲ್ಲಿಸಿದ್ಧಕ್ಕಾಗಿ ಪಡೆಯುವ ಸಂಭಾವನೆ.
ಕೃಷಿ ಕೂಲಿಯನ್ನು ಕಾರ್ಮಿಕರುಗಳಿಗೆ ಪಾವತಿ ಮಾಡುವಲ್ಲಿ ೨ ಪದ್ಧತಿಗಳು ಬಳಕೆಯಲ್ಲಿವೆ.
೧.ದಿನಗೂಲಿ : ಕೆಲಸ ಮಾಡುವ ಕಾಲಕ್ಕನುಗುಣವಾಗಿ ಕೊಡುವ ಕೂಲಿ
೨.ಗುತ್ತಿಗೆ ಕೂಲಿ: ಮಾಡಬೇಕಾದ ಕೆಲಸವನ್ನು ಗುತ್ತಿಗೆ ಕೊಟ್ಟು ಅದಕ್ಕೆ ತಕ್ಕಂತೆ ಕೂಲಿಯನ್ನು ಪಾವತಿ ಮಾಡುವುದು.
ಕಾಲಕ್ಕನುಗುಣ ಕೂಲಿ ಪದ್ಧತಿಯಲ್ಲಿ ಕೃಷಿ ಕಾರ್ಮಿಕರನ ಕೂಲಿ ಅವನು ಮಾಡಿದ ಕೆಲಸದ ಪ್ರಯಾಣವನ್ನಾಗಲೀ, ಕೆಲಸದ ಗುಣಮಟ್ಟವನ್ನಾಗಲೀ ಅವಲಂಭಿಸಿರುವುದಿಲ್ಲ. ಇಲ್ಲಿ ಕೃಷಿ ಕೂಲಿ ಕಾರ್ಮಿಕರ ಕೆಲಸದಲ್ಲಿ ನಿರತನಾಗಿದ್ದ ಕಾಲವನ್ನು ಅವಲಂಭಿಸಿರುತ್ತದೆ. ಆದರೆ ಈ ಪದ್ಧತಿಯಲ್ಲಿ ಕಾರ್ಮಿಕನ ಮೇಲೆ ಮೇಲುಸ್ತುವಾರಿ ಅಗತ್ಯ. (ಡಿ.ವೆಂಕಟರಾವ್)
ಗ್ರಾಮೀಣ ಭಾರತದಲ್ಲಿ ಬಡತನ ಮತ್ತು ಉದ್ಯೋಗ ವರ್ಗಗಳ ಸಂಬಂಧ ವಿಮರ್ಶಾತ್ಮಕ ವಿವರಣೆಯನ್ನು ನೀಡುತ್ತಾರೆ. ಕೃಷಿ ಮತ್ತು ಗ್ರಾಮೀಣ ಉದ್ಯೋಗ ಮಟ್ಟದ ಬೆಳವಣಿಗೆಯು ಹಸಿರು ಕ್ರಾಂತಿಯ ಫಲಿತಾಂಶವಾಗಿದೆ. ೧೯೭೩ರಿಂದ ೭೮ರ ಅವಧಿಯಲ್ಲಿ ಶೇ.೨.೩ ರಷ್ಟಿದ್ದು ಕೃಷಿ ವಾರ್ಷಿಕ ಉದ್ಯೋಗ ಬೆಳವಣಿಗೆ ೧೯೮೩-೮೮ರ ಅವಧಿಗೆ ಶೇ.೦.೭ರಷ್ಟಕ್ಕೆ ಇಳಿಯಿತು. ಗ್ರಾಮೀಣ ಉದ್ಯೋಗ ಬೆಳವಣಿಗೆಯು ಶೇ.೨.೫ರಿಂದ ಶೇ.೧ರಷ್ಟು ೧೯೮೩-೮೮ ಅವಧಿಯಲ್ಲಿ ಇಳಿಯಿತು. ಗ್ರಾಮೀಣ ಉದ್ಯೋಗ ಮಟ್ಟದಲ್ಲಿ ಇಳಿತ ಕಂಡರೂ ನಿರುದ್ಯೋಗಕ್ಕೆ ಸಂಬಂಧಿಸಿದಂತೆ ಬ್ಯಾಕ್ಲಾಗ್ನ ಮಟ್ಟ ಈ ಅವಧಿಯಲ್ಲಿ ಅಧಿಕವಾಯಿತು. (ಸಿ.ಹೆಚ್.ಹನುಂತರಾವ್)
ಕರ್ನಾಟಕ ರಾಜ್ಯದ ಬೆಳಗಾಂ ಜಿಲ್ಲೆಯಲ್ಲಿ ಅವರು ನಡೆಸಿದ ಕೃಷಿ ಕಾರ್ಮಿಕರು ಮತ್ತು ಉದ್ಯೋಗದ ಮೇಲಿನ ಅಧ್ಯಯನದಲ್ಲಿ ಹೊಸ ಬೆಳೆ ವಿಧಾನಗಳಿಂದ ಕೃಷಿ ಸ್ವರೂಪದಲ್ಲಿ ಗಮನಾರ್ಹವಾದ ಮತ್ತು ಗುರುತಿಸಬಹುದಾದ ಬೆಳವಣಿಗೆಯನ್ನು ತೋರಿಸುತ್ತಾರೆ. ಕಳೆದ ೨ ದಶಕಗಳಿಗಿಂತ ಉದ್ಯೋಗದಲ್ಲಿ ಹೆಚ್ಚಿನ ಬೆಳವಣಿಗೆ ಮತ್ತು ವಿಸ್ತಾರತೆ ಉಂಟಾಗಿದೆ. ಇದನ್ನು ವರ್ಷದ ೨೧೦ ರಿಂದ ೨೫೦ ದಿನಗಳ ಅವಧಿಯಲ್ಲಿ ಗಮನಿಸಬಹುದಾಗಿದೆ. ಉಳುವುದು, ನೀರುಣಿಸುವುದು, ಕಳೆ ತೆಗೆಯುವುದು, ಕೊಯ್ಲಿನ ಸಂದರ್ಭದಲ್ಲಿ ಗಂಡಸರು ಮತ್ತು ಹೆಂಗಸರಿಬ್ಬರು ಕೆಲಸ ಮಾಡುವ ಕಾರ್ಮಿಕರಾಗಿರುತ್ತಾರೆ.
ತಮ್ಮ ಮದ್ರಾಸ್ ಪ್ರಾಂತ್ಯದ ಕೃಷಿ ಕಾರ್ಮಿಕರ ಉದ್ಯೋಗ ಮತ್ತು ನಿವ್ವಳ ಆದಾಯ ಎಂಬ ಅಧ್ಯಯನದಲ್ಲಿ ತಮಿಳುನಾಡಿನ ಕೃಷಿ ಕಾರ್ಮಿಕರ ಉದ್ಯೋಗ ಕೂಲಿಗಳು ಮತ್ತು ಆದಾಯಗಳಿಗೆ ಸಂಬಂಧಿಸಿದಂತೆ ವಿಶ್ಲೇಷಣೆ ಮಾಡುತ್ತಾರೆ. ಕೃಷಿ ಕಾರ್ಯಾಚರಣೆಯಲ್ಲಿ ಮಹಿಳೆಯರು ಮತ್ತು ಮಕ್ಕಳ ಸರಾಸರಿ ಕೂಲಿದರಗಳು ಗಂಡಿಗಿಂತ ಕಡಿಮೆ ಇವೆ. ಕೃಷಿ ಕಾರ್ಯಾಚರಣೆಗೆ ಸಂಬಂಧ ಕೃಷಿ ಕಾರ್ಮಿಕರು ಹೆಚ್ಚಿನ ಕೂಲಿಗಳನ್ನು ಪಡೆಯುತ್ತಾರ. ಕೂಲಿಗಳ ವಿತರಣೆ ಮುಖ್ಯವಾಗಿ ನಗದು ರೂಪದಲ್ಲಿರುತ್ತದೆ. ಕೊಯ್ಲಿನ ಸಂದರ್ಭದಲ್ಲಿ ಕೂಲಿಗಳು ಹಲವು ವಿಧಿಗಳಿಂದ ಪಾವತಿಸಲ್ಪಡುತ್ತವೆ.
೧೯೫೦-೫೧ರಲ್ಲಿ ಪ್ರಥಮ ಕೃಷಿ ಕಾರ್ಮಿಕರ ವಿಚಾರಣಾ ಸಮಿತಿಯು ಕೃಷಿ ಕಾರ್ಮಿಕರ ವ್ಯಾಖ್ಯೆಯನ್ನು ಈ ರೀತಿಯಾಗಿ ನೀಡಿತು. ಹಿಂದಿನ ವರ್ಷದಲ್ಲಿ ಒಟ್ಟು ಕೆಲಸ ಮಾಡಿದ ದಿನಗಳ ಪೈಕಿ ಪ್ರತಿಶತ ೫೦ಕ್ಕಿಂತ ಹೆಚ್ಚು ದಿನಗಳವರೆಗೆ ಕೃಷಿ ಚಟುವಟಿಕೆಯಲ್ಲಿ ಕೂಲಿಯ ಆಳುಗಳಾಗಿ ಕೆಲಸ ಮಾಡಿದವರು ಕೃಷಿ ಕಾರ್ಮಿಕರಾಗಿದ್ದಾರೆ.
೧೯೫೬-೫೭ರ ಕೃಷಿ ಕಾರ್ಮಿಕರ ವಿಚಾರಣಾ ಸಮಿತಿಯು ಆದಾಯದ ಆಧಾರದ ಮೇಲೆ ಕೃಷಿ ಕಾರ್ಮಿಕರನ್ನು ಯಾರೆಂಬುದನ್ನು ಗುರುತಿಸಿತು. ಅದರ ಪ್ರಕಾರ ಹಿಂದಿನ ವರ್ಷದಲ್ಲಿ ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳಿಂದ ಹಚ್ಚಿನ ಪ್ರಮಾಣದ ಆದಾಯ ಪಡೆದವರು ಕೃಷಿ ಕಾರ್ಮಿಕರಾಗಿದ್ದಾರೆ.
೧೯೩೯ರ ಕಾರ್ಮಿಕರ ಕಲ್ಯಾಣ ಸಮಿತಿಯ ಪ್ರಕಾರ ಕೃಷಿ ಹಾಗೂ ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳಿಂದ ಪಡೆಯುವ ಕೂಲಿಯ ಆದಾಯವು ಉಪಜೀವನದ ಮುಖ್ಯ ಸಾಧನವಾಗಿರುವ ಕಾರ್ಮಿಕರೂ ಕೃಷಿ ಕಾರ್ಮಿಕರಾಗಿದ್ದಾರೆ.
ಆದ್ದರಿಂದ ಕೃಷಿ ಕಾರ್ಮಿಕರ ವ್ಯಾಖ್ಯೆಯನ್ನು ಈ ರೀತಿಯನ್ನು ಕೊಡಬಹುದು. ತಮ್ಮ ಆದಾಯದ ಬಹುಭಾಗವನ್ನು ಬೇರೆಯವರ ಜಮೀನಿನಲ್ಲಿ ದುಡಿದು ಪಡೆಯುವ ಕಾರ್ಮಿಕರೆಲ್ಲರೂ ಕೃಷಿ ಕಾರ್ಮಿಕರಾಗಿದ್ದಾರೆ. ಅವರು ಬೇರೆಯವರ ಜಮೀನಿನಲ್ಲಿ ವರ್ಷದಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಅವಧಿಯವರೆಗೆ ದುಡಿಯುವವರಾಗಿರಬೇಕು.
ಅಧ್ಯಾಯ - ೩. ಸಂಶೋಧನಾ ವಿಧಾನ
ಅಧ್ಯಯನ ಶಾಸ್ತ್ರವೆನಿಸಿಕೊಳ್ಳಬೇಕಾರೆ ಅದು ವೈಜ್ಞಾನಿಕ ವಿಧಾನವನ್ನು ಅನುಸರಿಸಬೇಕಾಗುವುದು. ಎ.ಡಬ್ಲ್ಯೂ.ಗಿಲೇನ್ ಹೇಳಿರುವಂತೆ ವಿಜ್ಞಾನವೆಂಬುದು ಸಂಶೋಧನೆಯ ಒಂದು ವಿಧಾನವಾಗಿರುತ್ತದೆ. ವಿಜ್ಞಾನದ ಪರಮಗುರಿ ಸತ್ಯಾನ್ವೇಷಣೆ ಅಥವಾ ಜ್ಞಾನ ಸಂಗ್ರಹಣೆಯಾದರೂ, ಅದನ್ನು ಸಾಧಿಸಲು ನಂಬಲರ್ಹವಾದ ಹಾಗೂ ಕ್ರಮಬದ್ಧವಾದ ವಿಧಾನವನ್ನು ಅನುಸರಿಸುವುದು ಅನಿವಾರ್ಯ ವಿಧಾನವನ್ನು ವೈಜ್ಞಾನಿಕ ವಿಧಾನ ಎಂದು ಕರೆದಿದ್ದಾರೆ.
ಪ್ರಸ್ತುತ ಸಂಶೋಧನಾ ಅಧ್ಯಯನವು ಕೃಷಿ ಕಾರ್ಮಿಕರ ಬಗ್ಗೆ ಕುರಿತಾಗಿದೆ. ಇವನ್ನು ಅಲ್ಲಿನ ಕೃಷಿ ಕಾರ್ಮಿಕರಿಂದಲೇ ಮಾಹಿತಿಯನ್ನು ಪಡೆಯಲಾಗಿದೆ.
ಪ್ರಸ್ತುತ ಅಧ್ಯಯನ :
ಸಂಶೋಧನೆಗೆ ಆಯ್ಕೆ ಮಾಡಿಕೊಂಡಿರುವ ಸ್ಥಳ ಬೆಂಗಳೂರು ದಕ್ಷಿಣ ವಲಯದ ಸೋಮನಹಳ್ಳಿ ಗ್ರಾಮ ಪಂಚಾಯ್ತಿ ಅಡಿಯಲ್ಲಿ ಬರುವ ರಾವುಗೋಡ್ಲು ಗ್ರಾಮದಲ್ಲಿ ಈ ಸಂಶೋಧನೆಯನ್ನು ಮಾಡಲಾಗಿದೆ.
ಅಧ್ಯಯನದ ಗುರಿ :
ಭಾರತ ಕೃಷಿ ಪ್ರಧಾನ ರಾಷ್ಟ್ರವಾದ್ದರಿಂದ ಕೃಷಿ ಕಾರ್ಮಿಕ ಆರ್ಥಿಕ ಸ್ಥಿತಿಗತಿ ಅವರ ಕೂಲಿಗಳ ಬಗ್ಗೆ ಮತ್ತು ಅವರ ಸಮಸ್ಯೆಗಳ ನಿವಾರಣೆಗೆ ಕೈಗೊಂಡ ಕ್ರಮಗಳು ಯಾವುದೆಂಬುದನ್ನು ತಿಳಿಯುವ ಗುರಿ ಹೊಂದಲಾಗಿದೆ.
ಅಧ್ಯಯನದ ಅವಶ್ಯಕತೆ ಮತ್ತು ಮಹತ್ವ :
ಭಾರತ ಭವ್ಯ ಸಂಸ್ಕೃತಿ ಹೊಂದಿದೆ ಮತ್ತು ಕೃಷಿ ಪ್ರಧಾನ ರಾಷ್ಟ್ರವಾಗಿದೆ. ೨೦೧೧ರ ಜನಗಣತಿಯ ಪ್ರಕಾರ ಶೇ.೭೨ ರಷ್ಟು ಜನರು ಕೃಷಿಯನ್ನು ಅವಲಂಭಿಸಿದ್ದಾರೆ. ಕೃಷಿ ಕೈಗೊಳ್ಳುತ್ತಿರುವ ಕೃಷಿ ಕಾರ್ಮಿಕರು ಅವರ ಆರ್ಥಿಕ ಸ್ಥಿತಿಗತಿ ಮತ್ತು ಅವರಿಗೆ ಎಲ್ಲಾ ರೀತಿಯ ಸ್ಥಾನಮಾನಗಳನ್ನು ನೀಡುವುದು ಮತ್ತು ಅವರ ಸಮಸ್ಯೆಗಳಿಗೆ ಪರಿಹಾರ ಹುಡುಕುವಲ್ಲಿ ಈ ಸಂಶೋಧನೆ ಮುಖಾಂತರ ಪ್ರಯತ್ನ ಮಾಡಲಾಗಿದೆ.
ಅಧ್ಯಯನದ ಉದ್ದೇಶಗಳು :
೧.ಕೃಷಿ ಕಾರ್ಮಿಕರ ಆರ್ಥಿಕ ಸಾಮಾಜಿಕ, ಸ್ಥಿತಿಗತಿಗಳನ್ನು ತಿಳಿಯುವುದು.
೨.ಕೃಷಿ ಕಾರ್ಮಿಕರು ಅನುಭವಿಸುತ್ತಿರುವ ವಿವಿಧ ಸಮಸ್ಯೆಗಳನ್ನು ತಿಳಿಯುವುದು.
೩.ಹಳ್ಳಿಗಳಲ್ಲಿ ಬಡತನ ನಿವಾರಣೆಗೆ ಸರ್ಕಾರ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳ ಬಗ್ಗೆ ಕೂಲಿ ಕಾರ್ಮಿಕರಲ್ಲಿರುವ ಜಾಗೃತಿ ಮಟ್ಟವನ್ನು ಅರಿಯುವುದು.
೪.ಕೂಲಿ ತಾರತಮ್ಯದ ಬಗ್ಗೆ ತಿಳಿಯುವುದು.
ಅಧ್ಯಯನಕ್ಕೆ ಪ್ರೇರಣೆ :
ಪ್ರಸ್ತುತ ಕೃಷಿ ಕಾರ್ಮಿಕರು ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ ಮತ್ತು ಅಸಂಘಟಿತರಾಗಿದ್ದಾರೆ. ಅವರ ಜೀವನ ತುಂಬಾ ಹೀನಾಯ ಸ್ಥಿತಿ ತಲುಪಿದೆ ಮತ್ತು ಅವರು ಕೃಷಿ ಕ್ಷೇತ್ರದ ಒಂದು ಪ್ರಮುಖ ಭಾಗವಾಗಿದ್ದಾರೆ.
ಪ್ರಾಕ್ ಕಲ್ಪನೆ :
ಕಾಫೆರವರ ಪ್ರಕಾರ ಊಹೆಗಳು ಎಂದರೆ ಒಂದು ವಿಷಯದ ಬಗ್ಗೆ ಒಂದು ಘಟನೆಯ ಬಗ್ಗೆ ನಾವು ಯಾವುದೇ ಆಧಾರವಿಲ್ಲದೆ ಹೀಗಿರುವುದು ಹೀಗಾಗಬಹುದು ಎಂದು ಮನಸ್ಸಿನಲ್ಲಿ ಮಾಡಿಕೊಳ್ಳುವುದಕ್ಕೆ ಊಹೆ ಎಂದು ಹೆಸರು ಇದು ಸಂಶೋಧಕನಿಗೆ ತಾತ್ಕಾಲಿಕ ಪರಿಹಾರ ಮಾತ್ರ. ಇದು ಸಂಶೋದನೆಗೆ ಸಹಾಯವಾಗುತ್ತದೆ.
ಸಂಶೋಧನಾ ಅಧ್ಯಯನವನ್ನು ಇನ್ನೂ ಪೂರ್ಣವಾಗಿ ಪುರಸ್ಕರಿಸಲ್ಪಟ್ಟಿರುವುದಕ್ಕೆ ಮೊದಲು ಅದರ ಸತ್ಯಾಸತ್ಯತೆಯ ನಿಷ್ಕರ್ಷ ಇನ್ನೂ ಆಗದೆ ಇರುವುದರಿಂದ ಅದರ ಸತ್ಯಾಂಶವು ಹೀಗಿರಬಹುದೆಂದು ಸಂಶೋಧಕನು ಮಾಡುವ ಒಂದು ಕಲ್ಪನೇ ಪ್ರಾಕ್ ಕಲ್ಪನೆ. ಇದು ತಾತ್ಕಾಲಿಕವಾಗಿ ಒಪ್ಪಿಕೊಂಡು ಹಾಗೂ ಅತಿ ಎಚ್ಚರಿಕೆಯಿಂದ ಸಿದ್ಧಪಡಿಸಿದ ಹೇಳಿಕೆಯಂತಿದ್ದು ಮಾಹಿತಿ ಆಧಾರದ ಮೇಲೆ ಪರೀಕ್ಷೆಗಳಿಗೊಳಪಡಿಸುವುದು ಅದರ ಮಾಹಿತಿಯ ನೆಲೆಯನ್ನು ಪ್ರಾಕ್ ಕಲ್ಪನೆಯು ಪೂರ್ಣವಾಗಿ ಪುರಸ್ಕರಿಸಲ್ಪಟ್ಟು ದೃಢಗೊಳಿಸಬಹುದು.
ಸಂಶೋಧನಾ ವಿನ್ಯಾಸ :
ಸಂಶೋಧನಾ ಕಾರ್ಯದಲ್ಲಿ ಸಂಶೋಧನಾ ವಿನ್ಯಾಸವೆಂಬುದು ಬಹಳ ಮುಖ್ಯವಾದ ಹಂತವಾಗಿರುತ್ತದೆ. ಸಂಶೋಧಕನು ಸಂಶೋಧನೆಯ ಉದ್ದೇಶವನ್ನು ಪೂರೈಸುವುದಕ್ಕೋಸ್ಕರ ತನ್ನ ಸಂಶೋಧನಾ ಪ್ರಕ್ರಿಯೆಯನ್ನು ಸಮಗ್ರವಾಗಿ ಆಲೋಚನೆ ಮಾಡಿ ತಯಾರಿಸಿದ ಯೋಜನೆಯನ್ನು ಸಂಶೋಧನಾ ವಿನ್ಯಾಸವೆಂದು ಕರೆಯಲಾಗುತ್ತದೆ.
ಅಧ್ಯಯನಕ್ಕೆ ಆಯ್ಕೆ ಮಾಡಿದ ವಿಷಯಕ್ಕೆ ಹೊಂದುವಂತಹ ಸಂಶೋಧನಾ ತಂತ್ರಗಳನ್ನು ಬಳಸುವುದಕ್ಕೆ ಸಂಶೋಧನಾ ವಿನ್ಯಾಸವು ಸಹಕಾರಿಯಾಗಿದೆ.
೧.ಸಮಸ್ಯೆಯ ವ್ಯಾಪ್ತಿಯನ್ನು ಮತ್ತು ಸ್ವರೂಪವನ್ನು ಸೃಷ್ಟಿಪಡಿಸುವುದು.
೨.ತರ್ಕಬದ್ಧವಾದಂತಹ ಪ್ರಾಕ್ ಕಲ್ಪನೆಯಿಂದ ಪ್ರಾರಂಭವಾಗುತ್ತದೆ.
ಸಂಶೋಧನಾ ವಿನ್ಯಾಸದ ಪ್ರಕಾರಗಳು :
೧.ಪರಿಶೋಧನಾತ್ಮಕ ಅಧ್ಯಯನಗಳ ಸಂಬಂಧಿಸಿದ ವಿನ್ಯಾಸ :
ಇದರ ಮುಖ್ಯ ಉದ್ದೇಶವೆಂದರೆ ಸಮಸ್ಯೆಯೊಂದರ ಕುರಿತಾಗಿ ಬಹಳ ಆಳವಾದ ಹಾಗೂ ನಿಖರವಾದ ಸಂಶೋಧನೆ ಮಾಡಲು ಅದನ್ನು ಸ್ಪಷ್ಟ ಶಬ್ದಗಳಲ್ಲಿ ಸಾರಿ ಹೇಳುವುದು ಅಥವಾ ಅದಕ್ಕೆ ಸಂಬಂಧಿಸಿದ ಕಾರ್ಯ ನಿರತ ಪ್ರಾಕ್ ಕಲ್ಪೆನಯತ್ತ ಸ್ಥಾಪಿಸುವುದು ಇದರ ಉದ್ದೇಶವಾಗಿದೆ.
೨.ಪ್ರಾಯೋಗಿಕ ಅಧ್ಯಯನ :
ಬದಲಾಗುವ ವಿಷಯಗಳು ಅಸಾಮಾನ್ಯವಾಗಿ ಕಲ್ಪಿತವಾದ ಸಿದ್ಧಾಂತಗಳ ಗುಣಗಳಿಂದ ಅಧ್ಯಯನ ಮಾಡುವ ಕ್ರಮವೇ ಪ್ರಾಯೋಗಿಕ ಅಧ್ಯಯನ. ಇದರಲ್ಲಿ ಸಂಶೋಧನೆಯ ಅಸಾಮಾನ್ಯ ಸಂಬಂಧವನ್ನು ಪರೀಕ್ಷಿಸುವಲ್ಲಿ ಪ್ರಾಯೋಗಿಕವಾಗಿ ಕಂಡುಬಂದಾಗ ಬಹಳ ಪರಿಣಾಮಕಾರಿಯಾಗಿ ಪ್ರಾಯೋಗಿಸಲ್ಪಟ್ಟಿದೆ.
೩.ವಿವರಣಾತ್ಮಕ ಸಂಶೋಧನಾ ವಿನ್ಯಾಸ :
ಇದನ್ನು ಸ್ವಭಾವ ನಿರೂಪಕ ಸಂಶೋಧನಾ ವಿನ್ಯಾಸವೆಂದು ಕರೆಯುತ್ತೇವೆ. ಒಂದು ವಿಷಯದ ಬಗ್ಗೆ ಉದ್ದೇಶಪೂರ್ವಕವಾದ ಸಂಬಂಧವನ್ನು ಸಾಧಿಸುವುದು ನಿಶ್ಚಿತ ಮತ್ತು ಸಂಶೋಧನೆಯನ್ನು ಪಡೆಯುವುದಕ್ಕಾಗಿ ಪೂರ್ವ ಸಿದ್ಧಾಂತಗಳನ್ನು ರಚಿಸಿಕೊಂಡು ಕೈಗೊಳ್ಳುವ ಅಧ್ಯಯನಕ್ಕೆ ವಿವರಣಾತ್ಮಕ ಸಂಶೋಧನಾ ವಿನ್ಯಾಸವೆಂದು ಕರೆಯಲಾಗಿದೆ.
ಪ್ರಸ್ತುತ ಅಧ್ಯಯನದಲ್ಲಿ ವಿವರಣಾತ್ಮಕ ಸಂಶೋಧನಾ ವಿನ್ಯಾಸವನ್ನು ಅಳವಡಿಸಿಕೊಂಡು ಕೃಷಿ ಕಾರ್ಮಿಕರು ಬೆಂಗಳೂರು ದಕ್ಷಿಣ ವಲಯದ ಸೋಮನಹಳ್ಳಿ ಗ್ರಾಮ ಪಂಚಾಯ್ತಿ ಅಡಿಯಲ್ಲಿ ಬರುವ ರಾವುಗೋಡ್ಲು ಗ್ರಾಮದಲ್ಲಿ ಈ ಸಂಶೋಧನೆಯನ್ನು ಮಾಡಲಾಗಿದೆ.
ಮಾದರಿ ಆಯ್ಕೆ ತಂತ್ರಗಳು :
ಮಾದರಿ ವಿಧಾನವು ಸಾಮಾಜಿಕ ಸಂಶೋಧನೆಯಲ್ಲಿ ಅನುಸರಿಸಲಾಗುತ್ತಿರುವ ಮುಖ್ಯ ಕ್ರಮಗಳಲ್ಲೊಂದು. ಸಂಶೋಧನಾ ಕ್ಷೇತ್ರವು ಬಹಳ ವಿಶಾಲವಾದುದರಿಂದ ಅದನ್ನು ಒಂದೇ ಬಾರಿಗೆ ಅಧ್ಯಯನ ಮಾಡುವುದು ಬಹಳ ಕಷ್ಟಕರವಾದ್ದರಿಂದ ಆ ಕ್ಷೇತ್ರದ ಸಾಮಾನ್ಯ ಗುಣಗಳನ್ನು ಹೊಂದಿರುವುದರೊಂದಿಗೆ ಅದನ್ನು ಪ್ರತಿನಿಧಿಸಬಹುದಾದಂತಹ ಅದರ ಭಾಗವೊಂದನ್ನು ಅಧ್ಯಯನ ದೃಷ್ಠಿಯಿಂದ ಆಯ್ದುಕೊಳ್ಳುವುದಕ್ಕೆ ನಮೂನೆಯ ವಿಧಾನವೆಂದಿದ್ದಾರೆ.
ಗೂಡೆ ಮತ್ತು ಹ್ಯಾಟ್ ಎಂಬುವರು ಹೇಳಿರುವಂತ ನಮೂನೆ ಎಂಬುದು ಅದರ ಹೆಸರೇ ಸೂಚಿಸುವಂತೆ ದೊಡ್ಡ ವಸ್ತುವಿನ ಸಣ್ಣ ಪ್ರತಿ ರೂಪವಿದ್ದಂತೆ, ನಮೂನೆಯಲ್ಲಿ ಪ್ರಮುಖವಾಗಿ ೨ ವಿಧಗಳಿವೆ.
೧.ಸಂಭವನೀಯತೆಯ ವಿಧಾನ
೨.ಅಸಂಭವನೀಯತೆಯ ವಿಧಾನ
ಸಂಭವನೀಯತೆಯ ವಿಧಾನ :
ಇದರಲ್ಲಿ ನಮೂನೆಯನ್ನು ಆಯ್ಕೆ ಮಾಡುವಾಗ ಅಂದಾಜಿನಿಂದ ಘಟಕಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಒಂದು ಜನ ಸಮುದಾಯದಿಂದ ನಮೂನೆಯನ್ನು ಆಯ್ಕೆ ಮಾಡುವಾಗ ಆ ಜನ ಸಮುದಾಯವನ್ನು ಅಂದಾಜಿನ ಮೇಲೆ ಅಥವಾ ಸರಾಸರಿ ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಂಡ ಸಮಸ್ಯೆಯನ್ನು ರೂಪಿಸಬಹುದಾಗಿದೆ.
ಎ) ಸರಳ ಯಾದೃಚ್ಛಿಕ ನಮೂನೆ :
ಈ ಪದ್ಧತಿಯಲ್ಲಿ ನಮೂನೆಯ ಒಂದು ದೊಡ್ಡ ಸಂಗ್ರಹವನ್ನು ಪಡೆದು ಆಯ್ಕೆ ಮಾಡುವುದನ್ನು ಅಂದರೆ ಮಾಹಿತಿಯ ದೊಡ್ಡ ವೃತ್ತದಿಂದ ಚಿಕ್ಕ ವೃತ್ತವನ್ನು ರಚಿಸುವಂತೆ ಹೇಳಬಹುದು. ಇದನ್ನು ಸರಳ ಸಗಟು ನಮೂನೆ ಎಂದು ಕರೆಯುತ್ತೇವೆ. ಇದು ಅತಿ ದೊಡ್ಡ ಸಮುದಾಯಕ್ಕೆ ಉಪಯುಕ್ತವಾಗಿದೆ.
ಬಿ) ವಿಭಾಗಿತ ಯಾದೃಚ್ಛಿಕ ನಮೂನೆ :
ಈ ನಮೂನೆಯಲ್ಲಿ ದೊಡ್ಡ ಪ್ರಮಾಣದ ಆಯ್ಕೆ ಮಾಡಲಾದ ಘಟಕಗಳಾಗಿ ವಿಂಗಡಿಸಬಹುದು. ಪ್ರತಿಯೊಂದು ವಿಂಗಡಿಸಿದ ಚಿಕ್ಕ ಗುಂಪಿನಿಂದ ಪ್ರತ್ಯೇಕವಾಗಿಯೇ ನಮೂನೆಯಾಗಿ ಘಟಕಗಳನ್ನು ಆಯ್ದುಕೊಂಡರೆ ಇದು ವಿಭಾಗಿತ ನಮೂನೆಯಾಗುತ್ತದೆ.
ಸಿ) ಗುಚ್ಛ ನಮೂನೆ :
ಸಂಶೋಧನಾ ಕ್ಷೇತ್ರವು ಬಹಳ ವಿಸ್ತಾರವಾಗಿದ್ದು ಹೆಚ್ಚಿನ ಹಣ, ಸಮಯವನ್ನು ನಿರೀಕ್ಷಿಸುವುದರಿಂದ ಅಧ್ಯಯನ ಮಾಡಿದ ಬಿಡಿ ಭಾಗಗಳನ್ನು ಒಟ್ಟುಗೂಡಿಸಿ ಅಧ್ಯಯನವನ್ನು ಕೈಗೊಳ್ಳುವ ವಿಧಾನಕ್ಕೆ ಗುಚ್ಛ ನಮೂನೆ ಎನ್ನುವರು.
ಡಿ) ಬಹುಸ್ಥರ ನಮೂನೆ :
ಆಯ್ಕೆ ಮಾಡಿದ ಸಂಶೋಧನಾ ಕ್ಷೇತ್ರವನ್ನು ಅನೇಕ ಘಟಕಗಳನ್ನಾಗಿ ವಿಂಗಡಿಸಿದ ಘಟ್ಟಗಳಿಂದ ಮಾದರಿಯನ್ನು ಆಯ್ಕೆ ಮಾಡುವ ಕ್ರಮಕ್ಕೆ ಬಹುಸ್ಥರ ನಮೂನೆ ಎನ್ನುವರು.
೨. ಅಸಂಭವನೀಯ ವಿಧಾನ :
ಅಸಂಭವನೀಯತೆಯ ನಮೂನೆಯನ್ನು ನಿರ್ದಿಷ್ಟ ನಮೂನೆಯಂತಲೂ ನಿಕರವಾದ ನಮೂನೆ ಎಂತಲೂ ಕರೆಯುವರು. ಉದ್ದೇಶಿತ ನ್ಯಾಯ ನಿರ್ಧಾರಿತ ಯುಕ್ತ ನಿರ್ಧರಿಸಬಲ್ಲ ಪ್ರಾತಿನಿಧ್ಯದಿಂದ ಕೂಡಿದ ಒಂದು ಸರಿಯಾದ ಅಸಂಭವನೀಯತೆಯ ಪದ್ಧತಿಯಲ್ಲಿ ಪ್ರಮುಖವಾಗಿ ೫ ವಿಧಗಳಿವೆ. ಅವು ಈ ಕೆಳಕಂಡಂತೆ ವಿವರಿಸಲಾಗಿದೆ.
ಎ) ಉದ್ದೇಶಪೂರಿತ ನಮೂನೆ :
ಈ ನಮೂನೆಯನ್ನು ಉದ್ದೇಶಪೂರಿತವಾಗಿ ರಚಿಸಲಾಗಿರುವುದರಿಂದ ಉದ್ದೇಶಪೂರಿತ ನಮೂನೆ ಎನ್ನುವರು.
ಬಿ) ಪಾಲು ನಮೂನೆ :
ಈ ವಿಧಾನದಲ್ಲಿ ಸಂಶೋಧಕನಿಗೆ ಸ್ವಾತಂತ್ರ್ಯವಿರುತ್ತದೆ. ಇಲ್ಲಿ ನಮೂನೆಯನ್ನು ಪಡೆಯಲು ಇಡೀ ಜನಸಮುದಾಯಕ್ಕೆ ಅನೇಕ ಪದರುಗಳಲ್ಲಿ ವಿಂಗಡಿಸಲಾಗುತ್ತದೆ. ಪ್ರತಿಯೊಂದು ಪದರಿಂದಲೂ ಈ ನಮೂನೆಗಾಗಿ ಇಂತಿಷ್ಟು ಘಟಕಗಳನ್ನು ಅಥವಾ ಪಾಲನ್ನು ತೆಗೆದುಕೊಳ್ಳಬೇಕೆಂದು ಮೊದಲೇ ನಿರ್ಧರಿಸಲಾಗುವುದು.
ಸಿ) ಪ್ರಾತಿನಿಧಕ ನಮೂನೆ :
ಪ್ರಾತಿನಿಧಕ ನಮೂನೆ ಎಂದರೆ ಸಂಶೋಧಕನು ತನ್ನ ಸ್ವಯಂ ಪ್ರತಿಭೆಯಿಂದ ಮತ್ತು ವ್ಯವಹಾರಿಕ ಬುದ್ಧಿಮತ್ತೆಯಿಂದ ಒಂದು ಜನ ಸಮುದಾಯವನ್ನು ಆಯ್ಕೆ ಮಾಡಿಕೊಳ್ಳುವುದಾಗಿದೆ.
ಡಿ) ಯುಕ್ತಾ ಯುಕ್ತಾ ಪರಿಜ್ಞಾನ ನಮೂನೆ :
ಈ ವಿಧಾನದಲ್ಲಿ ಸಮೀಕ್ಷಕರು ಅಥವಾ ಸಂಶೋಧಕರು ಒಂದು ಜನ ಸಮುದಾಯದಿಂದ ಬೇರೆ ಬೇರೆ ಘಟಕಗಳನ್ನು ಅಂದರೆ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ಳುವರು. ಆಯ್ದ ಘಟಕಗಳಲ್ಲಿ ಅವುಗಳ ಯುಕ್ತಾ ಯುಕ್ತಗಳನ್ನು ಸರಿಯಾಗಿ ಪರಿಶೀಲಿಸಿ ಈ ಆಯ್ದ ಘಟಕಗಳಲ್ಲಿ ಯುವ ಘಟಕಗಳಿಗೆ ನಮಗೆ ಯೋಗ್ಯವಾಗಿದೆ ಎಂಬುದನ್ನು ಪರೀಕ್ಷಿಸುವರು. ಈ ರೀತಿ ಸಿದ್ಧಪಡಿಸಿದ ನಮೂನೆಗೆ ಯುಕ್ತಾ ಯುಕ್ತ ಪರಿಜ್ಞಾನ ನಮೂನೆ ಎಂದು ಕರೆಯುತ್ತಾರೆ.
ಇ) ಆಕಸ್ಮಿಕ ನಮೂನೆ :
ಈ ಆಕಸ್ಮಿಕ ವಿಧಾನದಲ್ಲಿ ಸಂಶೋಧಕನು ನಮೂನೆಗಳಿಗೆ ಘಟಕಗಳನ್ನು ಆರಿಸುವಾಗ ತಾನು ನೋಡಿದ ಪ್ರತ್ಯಕ್ಷ, ಘಟನೆಗಳ ಸಾಕ್ಷಾಧಾರಗಳನ್ನು ಪ್ರತ್ಯಕ್ಷದರ್ಶಿಗಳಿಂದ ನೇರವಾಗಿ ಪಡೆದು ನಮೂನೆಗಾಗಿ ಘಟಕಗಳನ್ನು ಹುಟ್ಟುಹಾಕುತ್ತಿರುವಾಗ ಆಕಸ್ಮಿಕವಾಗಿ ಬಂದರೆ ತಮ್ಮ ವಿಷಯಕ್ಕೆ ಸಂಬಂಧಿಸಿದ ಸಂಗತಿಗಳು ಕಂಡುಬಂದರೆ ಅದನ್ನೇ ತೆಗೆದುಕೊಳ್ಳುವರು.
ಪ್ರಸ್ತುತ ಅಧ್ಯಯನದಲ್ಲಿ ಸಂಶೋಧಕನು ಸರಳ ಯಾದೃಚ್ಛಿಕ ನಮೂನೆಯನ್ನು ಬಳಸಿಕೊಂಡಿದ್ದಾನೆ. ಅಂದರೆ ತನ್ನ ಸಂಶೋಧನೆಗೆ ಸಂಬಂಧಪಟ್ಟಂತೆ ಕೃಷಿ ಕಾರ್ಮಿಕರಲ್ಲಿ ೩೦ ಪ್ರತಿವಾದಿಗಳನ್ನು ಆಯ್ಕೆ ಮಾಡಿಕೊಂಡು ಪ್ರಸ್ತುತ ಅಧ್ಯಯನ ನಡೆಸಲಾಗಿದೆ.
ಪ್ರಸ್ತುತ ಅಧ್ಯಯನದಲ್ಲಿ ಸಂಶೋಧಕನು ಸರಳ ಯಾದೃಚ್ಛಿಕ ವಿಧಾನವನ್ನು ಬಳಸಿಕೊಂಡಿದ್ದಾನೆ. ಪ್ರಸ್ತುತ ಅಧ್ಯಯನದಲ್ಲಿ ಕೃಷಿ ಕಾರ್ಮಿಕರ ಪೂರ್ವ ಚಿತ್ರಣ ಇರುವುದನ್ನು ಸ್ಮರಿಸಬಹುದು.
ಮಾಹಿತಿ ಸಂಗ್ರಹಣೆಯ ಮೂಲಗಳು :
ಮಾಹಿತಿ ಸಂಗ್ರಹಣೆಯಲ್ಲಿ ಪ್ರಮುಖವಾಗಿ ೨ ವಿಧ ಅವುಗಳೆಂದರೆ;
೧.ಪ್ರಾಥಮಿಕ ಮಾಹಿತಿ ಸಂಗ್ರಹಣೆ
೨.ಮಾಧ್ಯಮಿಕ ಮಾಹಿತಿ ಸಂಗ್ರಹಣೆ
ಸಂದರ್ಶನ ವಿಧಾನ :
ಸಂದರ್ಶನ ಎಂಬುದು ಮುಖಾ ಮುಖಿಯಾದ ಒಂದು ಸಂಭಾಷಣೆ. ಇದರಲ್ಲಿ ಸಂದರ್ಶಕನು ಮಾಹಿತಿದಾರರಿಂದ ಯಾವುದೇ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಪಡೆಯುವ ಪ್ರಯತ್ನವಿರುತ್ತದೆ. ಅಕ್ಷರಸ್ಥರಲ್ಲದೆ ಅನಕ್ಷರಸ್ಥರಿಂದಲೂ ಮಾಹಿತಿಯನ್ನು ಸಂಗ್ರಹಿಸಲು ಹಾಗೂ ಕೆಲವು ಪ್ರಚಲಿತ ಸಮಸ್ಯೆಗಳ ಬಗ್ಗೆ ಜನರ ಪ್ರತಿಕ್ರಿಯೆಗಳನ್ನು ತಿಳಿದುಕೊಳ್ಳಲು ವ್ಯಕ್ತಿಯೊಬ್ಬನಿಗೆ ಸಂಬಂಧಿಸಿದ ಗತಕಾಲದ ಘಟನೆಗಳನ್ನು ಹಾಗೂ ಅನುಭವಗಳನ್ನು ತಿಳಿದುಕೊಳ್ಳಲು ಸಂದರ್ಶನ ವಿಧಾನ ಬಳಸಿಕೊಳ್ಳಲಾಗುತ್ತದೆ.
ಅವಲೋಕನ :
ಪಿ.ವಿ.ಯಂಗ್ ಪ್ರಕಾರ ತಾನೇತಾನಾಗಿ ಸಂಭವಿಸುವ ಘಟನೆಗಳನ್ನು ಅವು ಘಟಿಸುವ ಸಮಯದಲ್ಲಿಯೇ ನೇರವಾಗಿ ತಮ್ಮ ಕಣ್ಣುಗಳ ಮೂಲಕ ವೀಕ್ಷಿಸುವ ಕ್ರಮಬದ್ಧವಾಗಿ ಹಾಗೂ ಉದ್ದೇಪೂರ್ವಕವಾಗಿ ಅಧ್ಯಯನ ಮಾಡುವ ಕ್ರಮವನ್ನು ಅವಲೋಕನ ಎನ್ನಬಹುದು. ಸಾಮಾನ್ಯವಾಗಿ ಪ್ರತ್ಯೇಕವಾಗಿ ಪರಿಶೀಲನೆ ಮಾಡುವುದರ ಮೂಲಕ ಮಾಹಿತಿ ಸಂಗ್ರಹಿಸುವುದಕ್ಕೆ ಅವಲೋಕನ ಎಂದು ಕರೆಯುತ್ತಾರೆ.
ಸಹಭಾಗಿತ್ವ :
ತೀವ್ರವಾದ, ತೀಕ್ಷ್ಣವಾದ ಸಾಮಾಜಿಕ ವಿಷಯಗಳ ಕ್ರಿಯೆ ಮತ್ತು ಅಂತರ ಕ್ರಿಯೆಗಳನ್ನು ಸಂಶೋಧಿಸಿ ಪರಿಶೋಧಕರನ್ನು ಆ ಸಮಾಜದ ಒಳಹೊಕ್ಕು ಅದರ ಸದಸ್ಯನಾಗಿದ್ದುಕೊಂಡು ಅಂಕಿ-ಅಂಶಗಳನ್ನು ಕಲೆ ಹಾಕುವುದಕ್ಕೆ ಸಂಪೂರ್ಣವಾಗಿ ಪಾಲ್ಗೊಂಡು ವೀಕ್ಷಿಷಿಸುವುದು ಎನ್ನುತ್ತಾರೆ.
ಪ್ರಸ್ತುತ ಅಧ್ಯಯನದಲ್ಲಿ ಪ್ರತಿವಾದಿಗಳಿಂದ ನಡೆದ ಅನುಸೂಚಿಯ ಉತ್ತರಗಳನ್ನು ಕೋಡಿಂಗ್ / ಡಿಕೋಡಿಂಗ್ ಮಾಡಿ ಅದನ್ನೆಲ್ಲಾ ಮಾಸ್ಟರ್ ಷೀಟ್ನಲ್ಲಿ ಕ್ರೋಢಿಕರಿಸಿ ಒಟ್ಟು ಉತ್ತರಗಳನ್ನು ಕಂಡು ದತ್ತಾಂಶ ವಿಶ್ಲೇಷಣೆ ಮಾಡಲಾಗಿದೆ.
೨. ಮಾಧ್ಯಮಿಕ ಮಾಹಿತಿ ಸಂಗ್ರಹಣೆ :
ಮಾಧ್ಯಮಿಕ ಮಾಹಿತಿ ಸಂಗ್ರಹಣೆ ಎಂದರೆ ಗ್ರಂಥಾಲಯಗಳಲ್ಲಿ ಲಭ್ಯವಿರುವ ಪುಸ್ತಕಗಳು, ದಿನಪತ್ರಿಕೆಗಳು, ವಾರ ಮತ್ತು ಮಾಸ ಪತ್ರಿಕೆಗಳು ಕೃಷಿ ಕಛೇರಿಗಳಲ್ಲಿ ಲಭ್ಯವಿರುವ ಅಂಕಿ ಅಂಶಗಳು ಇಲ್ಲಿ ಬರುತ್ತದೆ.
ಅಧ್ಯಯನದ ಇತಿಮಿತಿಗಳು :
ಪ್ರತಿಯೊಂದು ಸಾಮಾಜಿಕ ಸಂಶೋಧನೆಯಲ್ಲಿ ಅನುಕೂಲ ಮತ್ತು ಅನಾನುಕೂಲಗಳು ಇರುವುದು ಸಹಜವಾಗಿದೆ. ಅವುಗಳು ಒಂದೇ ನಾಣ್ಯದ ೨ ಮುಖಗಳಿದ್ದಂತೆ ಎನ್ನಬಹುದು. ಪ್ರಸಕ್ತ ಅಧ್ಯಯನದಲ್ಲಿ ಹಲವಾರು ಇತಿಮಿತಿಗಳಿವೆ.
೧.ಸಂಶೋಧನೆ ಮಾಡಲು ಕೆಲ ಪ್ರತಿವಾದಿಗಳು ಸೂಕ್ತ ಹಾಗೂ ಸರಿಯಾದ ಮಾಹಿತಿ ನೀಡುತ್ತಿರಲಿಲ್ಲ.
೨.ಪ್ರತಿವಾದಿಗಳಲ್ಲಿ ಕೆಲವರು ಸ್ಪಷ್ಟ ಮಾಹಿತಿ ನೀಡದಿರುವುದು ಉದಾಸೀನವಾಗಿ ಉತ್ತರಿಸಿದ್ದರಿಂದ ಹೆಚ್ಚಿನ ವಿವರಗಳು ಪಡೆಯಲು ಸಾಧ್ಯವಾಗಿಲ್ಲ.
೩.ಸಂಶೋಧಕನು ವಿದ್ಯಾರ್ಥಿ ಆಗಿರುವುದರಿಂದ ಹೆಚ್ಚಿನ ವಿಷಯದ ಸಂಗ್ರಹಣೆಗೆ ಅನುಭವದ ಕೊರತೆ ಇತ್ತು.
೪.ಸಂಶೋಧಕನು ಕಡಿಮೆ ಅವಧಿಯಲ್ಲಿ ಮಾಹಿತಿ ಸಂಗ್ರಹಿಸಿದ್ದು ಅವಸರದ ಅಣಿಯಾಗಿದೆ.
ಅಧ್ಯಾಯ - ೪. ಮಾಹಿತಿ ವಿಶ್ಲೇಷಣೆ ಮತ್ತು ದತ್ತಾಂಶ ವರ್ಗೀಕರಣ
ಸಂಶೋಧನೆಯಲ್ಲಿ ಪ್ರಸ್ತಾವನೆ, ಅಧ್ಯಯನದ ವಿಧಾನ ಎಷ್ಟು ಮುಖ್ಯವೋ ಅದೇ ರೀತಿಯಾಗಿ ಮಾಹಿತಿ ವರ್ಗೀಕರಣ ಮತ್ತು ದತ್ತಾಂಶ ವಿಶ್ಲೇಷಣೆ ಸಂಶೋಧನೆಯಲ್ಲಿ ಅಷ್ಟೇ ಪ್ರಾಮುಖ್ಯತೆಯನ್ನು ಹೊಂದಿದೆ. ಪ್ರಸ್ತುತ ಅಧ್ಯಯನದಲ್ಲಿ ಫಲಾನುಭವಿಗಳಿಂದ ಹೊಂದಿದೆ. ಪ್ರಸ್ತುತ ಅಧ್ಯಯನದಲ್ಲಿ ಫಲಾನುಭವಿಗಳಿಂದ ಸಂಗ್ರಹಿಸಲಾದ ಮಾಹಿತಿ ದತ್ತಾಂಶಗಳನ್ನು ಅಧ್ಯಯನ ಸಮಯದಲ್ಲಿ ಅವಲೋಕಿಸಿದಂತಹ ವಿಷಯಗಳನ್ನು ಪಟ್ಟಿಗಳಿಂದ ವಿವರಿಸಲಾಗಿದೆ.
ವಿಶ್ಲೇಷಣೆ ಎಂಬುದಕ್ಕೆ ವಿಭಜನೆ ಅಥವಾ ವಿಂಗಡಿಸುವಿಕೆ ಎಂದು ಅರ್ಥ. ಸಂಶೋಧಕನು ಸಂಶೋಧನಾ ವಿಷಯಕ್ಕೆ ಸಂಬಂಧಿಸಿದಂತೆ ದೊರೆತ ಎಲ್ಲಾ ಮಾಹಿತಿಗಳನ್ನು ಕಲೆ ಹಾಕುತ್ತಾ ಬರುವನು. ಈ ಕ್ರೂಢೀಕೃತವಾದ ಎಲ್ಲಾ ಅಂಶಗಳನ್ನು ಕ್ರಮಬದ್ಧವಾಗಿ ಮತ್ತು ಕಾರ್ಯಕಾರಣಗಳನ್ನು ಪರಸ್ಪರ ಸಂಬಂಧ ವಿಶ್ಲೇಷಣೆಯಾಗಿದೆ.
ಅಂಕಿ ಅಂಶಗಳನ್ನು ಸರಿಯಾಗಿ ವಿಶ್ಲೇಷಿಸುವುದು ಮತ್ತು ವಿಶ್ಲೇಷಣೆಯಿಂದ ಬಂದ ಪರಿಣಾಮಗಳನ್ನು ಅರ್ಥೈಸುವುದು ಸಂಶೋಧನೆಯಲ್ಲಿ ಅತ್ಯಂತ ಪ್ರಮುಖ ಕಾರ್ಯವಾಗಿದೆ. ಆದುದರಿಂದ ಅಂಕಿ ಅಂಶಗಳ ವಿಶ್ಲೇಷಣೆ ಮತ್ತು ಅರ್ಥೈಸುವಿಕೆ ಇವುಗಳು ಒಂದೇ ನಾಣ್ಯದ ೨ ಮುಖಗಳಿದ್ದಂತೆ ಎಂದು ಹೇಳಿದರೆ ತಪ್ಪಾಗಲಾರದು.
ಸಂಶೋಧನಾ ಫಲ ಮತ್ತು ಸಲಹೆಗಳು
ಗ್ರಾಮೀಣ ಪ್ರದೇಶದಲ್ಲಿನ ದಿನಗೂಲಿ ಕೃಷಿ ಕಾರ್ಮಿಕರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಒಂದು ಕಿರು ಅಧ್ಯಯನ ಈ ವಿಷಯ ಕುರಿತು ಬೆಂಗಳೂರು ದಕ್ಷಿಣ ವಲಯದ ಸೋಮನಹಳ್ಳಿ ಗ್ರಾಮ ಪಂಚಾಯಿತಿ ಅಡಿಯಲ್ಲಿನ ರಾವುಗೋಡ್ಲು ಗ್ರಾಮದಲ್ಲಿ ಕೃಷಿ ಕಾರ್ಮಿಕರು ೫೦ ಪ್ರತಿವಾದಿಗಳನ್ನಾಗಿಸಿಕೊಂಡು ಪ್ರಸ್ತುತ ಅಧ್ಯಯನದಿಂದ ಹೊರ ಬಂದಿರುವ ಫಲಿತಾಂಶಗಳು ಈ ಮುಂದಿನಂತಿವೆ.
೧.ಮಹಿಳೆಯರಿಗಿಂತ ಪುರುಷರು ಕೃಷಿಯಲ್ಲಿ ತೊಡಗಿಕೊಂಡಿರುವುದು ಕಂಡು ಬರುತ್ತದೆ.
೨.ಕೃಷಿ ಕಾರ್ಮಿಕರು ಹೆಚ್ಚಿನವರು ಅವಿದ್ಯಾವಂತರಾಗಿದ್ದಾರೆ ಎಂದು ತಿಳಿದು ಬಂದಿದೆ.
೩.ಪ್ರತಿವಾದಿಗಳು ಹೆಚ್ಚಿನವರು ೪೬ರಿಂದ ೬೦ವಯಸ್ಸಿನವರು ಕೃಷಿ ಕಾರ್ಮಿಕರಾಗಿರುವುದು ಕಂಡು ಬರುತ್ತದೆ.
೪.ಪ್ರತಿವಾದಿಗಳು ಹೆಚ್ಚಿನವರು ಒಕ್ಕಲಿಗ ಜಾತಿಯವರು ಎಂದು ತಿಳಿದು ಬಂದಿದೆ.
೫.ದಿನಗೂಲಿ ಕೆಲಸದಲ್ಲಿ ಹೆಚ್ಚಿನ ಪ್ರತಿವಾದಿಗಳು ವಿವಾಹಿತರು ಎಂದು ತಿಳಿದು ಬಂದಿದೆ.
೬.ದಿನಗೂಲಿ ಕೆಲಸದಲ್ಲಿ ತೊಡಗಿಕೊಂಡಿರುವವರು ಹೆಚ್ಚಿನವರು ಅವಿಭಕ್ತ ಕುಟುಂಬದವರಾಗಿದ್ದಾರೆ.
೭.ಬಹುತೇಕ ದಿನಗೂಲಿ ಕೃಷಿ ಕಾರ್ಮಿಕರ ವಾರ್ಷಿಕ ವರಮಾನವು ೯,೦೦೦ ರಿಂದ ೧೦,೦೦೦ರೂ.ಗಳಾಗಿವೆ ಎಂದು ತಿಳಿದು ಬಂದಿದೆ.
೮.ಶೇ.೧೦೦ರಷ್ಟು ಪ್ರತಿವಾದಿಗಳು ಮನೆಯನ್ನು ಹೊಂದಿರುವುದು ವ್ಯಕ್ತವಾಗಿದೆ.
೯.ಪ್ರತಿವಾದಿಗಳು ಹೆಚ್ಚಿನವರು ಸ್ವಂತ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
೧೦.ಶೇ.೫೪ರಷ್ಟು ಪ್ರತಿವಾದಿಗಳು ಗುಡಿಸಲು ಮನೆಯಲ್ಲಿ ವಾಸಮಾಡುತ್ತಿರುವುದು ತಿಳಿದು ಬಂದಿದೆ.
೧೧.ಪ್ರತಿವಾದಿಗಳು ಹೆಚ್ಚಿನವರು ಸರ್ಕಾರದ ವಸತಿ ಸೌಲಭ್ಯವನ್ನು ಪಡೆದುಕೊಂಡಿಲ್ಲ ಎಂಬುದು ವ್ಯಕ್ತವಾಗಿದೆ.
೧೨.ಕೃಷಿ ಕಾರ್ಮಿಕರ ಮನೆಯಲ್ಲಿ ಮೂಲ ಸೌಕರ್ಯವು ಚೆನ್ನಾಗಿರುವುದು ತಿಳಿದು ಬಂದಿದೆ.
೧೩.ಹೆಚ್ಚಿನ ಪ್ರತಿವಾದಿಗಳು ಯಾವುದೇ ರೀತಿಯಾದ ದುಶ್ಚಟಗಳಿಗೆ ದಾಸರಾಗಿರುವುದಿಲ್ಲ.
೧೪.ಮಧ್ಯಪಾನ ಮಾಡುವ ಹೆಚ್ಚಿನ ಪ್ರತಿವಾದಿಗಳು ಮಧ್ಯಪಾನ ಮಾಡುವುದರ ಕಾರಣ ರೂಢಿಯಾಗಿರುವುದಾಗಿದೆ.
೧೫.ಬಹುಪಾಲು ಪ್ರತಿವಾದಿಗಳು ಸ್ವಂತ ಭೂಮಿಯನ್ನು ಹೊಂದಿರುವುದು ತಿಳಿದು ಬಂದಿದೆ.
೧೬.ಹೆಚ್ಚಿನ ಪ್ರತಿವಾದಿಗಳು ಕೃಷಿ ಕೂಲಿ ಸಮಯ ಹೆಚ್ಚಿಗೆ ಇರುವುದನ್ನು ಸೂಚಿಸುತ್ತದೆ.
೧೭.ಪ್ರತಿವಾದಿಗಳಿಗೆ ನೀಡುವ ಕೂಲಿಯು ಕಡಿಮೆಯಾಗಿದ್ದು ಆದರೆ ಹೆಚ್ಚು ಕಾಲ ದುಡಿಮೆ ಮಾಡಿಸಿಕೊಳ್ಳುತ್ತಿದ್ದಾರೆ ಎಂಬುದು ತಿಳಿದು ಬಂದಿದೆ.
೧೮.ಪ್ರತಿವಾದಿಗಳ ಮನೆಯ ಸದಸ್ಯರು ಹೆಚ್ಚಿನವರು ಬೇರೆ ಯಾವುದೇ ಕೆಲಸಕ್ಕೆ ಹೋಗುತ್ತಿಲ್ಲ ಎಂಬುದು ತಿಳಿದು ಬಂದಿದೆ.
೧೯.ಬಹುತೇಕ ಪ್ರತಿವಾದಿಗಳಿಗೆ ದಿನಗೂಲಿ ಕೆಲಸವು ತೃಪ್ತಿಯನ್ನು ತಂದುಕೊಟ್ಟಿಲ್ಲ ಎಂಬುದನ್ನು ವ್ಯಕ್ತಪಡಿಸಿದ್ದಾರೆ.
೨೦.ಪ್ರತಿವಾದಿಗಳು ಹೆಚ್ಚಿನವರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ ಎಂಬುದು ತಿಳಿದು ಬಂದಿದೆ.
೨೧.ಪ್ರತಿವಾದಿಗಳು ಜಾತಿ ವ್ಯವಸ್ಥೆಯನ್ನು ಮುಂದುವರೆಸುತ್ತಿರುವುದು ಕಂಡುಬರುತ್ತದೆ.
೨೨.ಪ್ರತಿವಾದಿಗಳ ಕೂಲಿ ನಿರ್ಧಾರಗಳಲ್ಲಿ ಪ್ರತಿವಾದಿಗಳ ಯಾವುದೇ ಮನ್ನಣೆ ಇಲ್ಲ ಎಂಬುದು ತಿಳಿದು ಬರುತ್ತದೆ.
೨೩.ಪ್ರತಿವಾದಿಗಳ ಸಮಸ್ಯೆಗಳ ನಿವಾರಣೆಗೆ ಸರ್ಕಾರ ತೆಗೆದುಕೊಂಡ ಕ್ರಮಗಳು ಸಮರ್ಪಕ ರೀತಿಯಲ್ಲಿ ಇಲ್ಲ ಎಂಬುದು ವ್ಯಕ್ತವಾಗಿದೆ.
೨೪.ಸಾಮಾಜಿಕ, ಸಮಾನತೆ, ಸಾಮಾಜಿಕ ನ್ಯಾಯ, ಪುರುಷರಿಗೆ ಸಮನಾಗಿ ಮಹಿಳೆಯರು ದುಡಿದರು ಅವರಿಗೆ ಕಡಿಮೆ ಕೂಲಿ ವಿತರಿಸಲಾಗುತ್ತಿದೆ ಎಂಬುದು ಪ್ರತಿವಾದಿಗಳ ಅಭಿಮತ.
೨೫.ಪ್ರತಿವಾದಿಗಳಿಗೆ ಸಮಾಜದಲ್ಲಿ ಸಮಾನ ಸ್ಥಾನಮಾನ ದೊರೆತಿಲ್ಲ ಎಂಬುದು ವ್ಯಕ್ತವಾಗಿದೆ.
೨೬.ಪ್ರತಿವಾದಿಗಳ ಕೆಲಸವು ಋತುಮಾನದ ಕಸುಬು ಆಗಿರುವುದರಿಂದ ಅವರಿಗೆ ವರ್ಷದಲ್ಲಿ ಕೆಲವೇ ತಿಂಗಳು ಕೆಲಸ ಸಿಗುತ್ತದೆ ಎಂಬುದು ತಿಳಿದು ಬರುತ್ತದೆ.
ಈ ಮೇಲಿನ ಎಲ್ಲಾ ಅಂಶಗಳು ಸಂಶೋಧಕನ ಅಧ್ಯಯನದಿಂದ ಹೊರಬಂದ ಅಂಶವಾಗಿದೆ. ಇದರಿಂದ ದಿನಗೂಲಿ ಕೃಷಿ ಕಾರ್ಮಿಕರ ಸಾಮಾಜಿಕ ಆರ್ಥಿಕ ಸ್ಥಿತಿಗತಿಗಳು ಮತ್ತು ಕೂಲಿ ತಾರತಮ್ಯ ಹೆಚ್ಚಾಗಿ ಕಂಡು ಬರುತ್ತದೆ. ಈ ಎಲ್ಲಾ ಸಮಸ್ಯೆಗೆ ಸರ್ಕಾರದ ಕಾರ್ಯಕ್ರಮಗಳು ಯೋಜನೆಗಳು ಸರಿಯಾದ ರೀತಿಯಲ್ಲಿ ರೂಪಿಸಬೇಕು ಮತ್ತು ಕಾರ್ಯರೂಪಕ್ಕೆ ಬರಬೇಕು ಎಂಬುದನ್ನು ತಿಳಿಸುತ್ತದೆ.
ಸಲಹೆಗಳು :
ಭಾರತ ಒಂದು ಕೃಷಿ ಪ್ರಧಾನ ರಾಷ್ಟ್ರವಾಗಿದೆ ಬಹುಪಾಲು ಜನರು ಕೃಷಿಯನ್ನೇ ಅವಲಂಭಿಸಿದ್ದಾರೆ. ಕೃಷಿ ಕೆಲಸದಲ್ಲಿ ತೊಡಗಿರುವವರನ್ನು ಕೃಷಿ ಕಾರ್ಮಿಕರು ಎಂದು ಕರೆಯಲಾಗುತ್ತದೆ. ಅವರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು ಅವುಗಳ ನಿವಾರಣೆಗೆ ಅನೇಕ ಸಲಹೆಗಳನ್ನು ನೀಡಬಹುದಾಗಿದೆ.
೧.ಕೃಷಿ ಕಾರ್ಮಿಕರು ಮಾಡುವ ಕೆಲಸಕ್ಕೆ ಸರಿಯಾದ ಕೂಲಿಯನ್ನು ವಿತರಿಸಬೇಕು
೨.ಕೃಷಿ ಕೂಲಿ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು
೩.ಕೃಷಿಯ ಮೇಲಿನ ಅವಲಂಬನೆ ಮಾಡಲು ಗೃಹ ಮತ್ತು ಸಣ್ಣ ಕೈಗಾರಿಕೆಗಳನ್ನು ಹೆಚ್ಚಿಸುವುದು.
೪.ಭೂ ರಹಿತ ಕೃಷಿ ಕಾರ್ಮಿಕರಿಗೆ ಪುನರ್ವಸತಿ ಸೌಲಭ್ಯ ಒದಗಿಸಬೇಕು
೫.ಸರ್ಕಾರದ ಕಾರ್ಯಕ್ರಮಗಳನ್ನು ಸಮರ್ಪಕ ರೀತಿಯಲ್ಲಿ ಜಾರಿಗೆ ತರಬೇಕು
೬.ಕೂಲಿ ವಿತರಣೆಯಲ್ಲಿ ಲಿಂಗ ತಾರತಮ್ಯ ಇಲ್ಲದಂತೆ ನೋಡಿಕೊಳ್ಳಬೇಕು
೭.ಹಣಕಾಸು ಸೌಲಭ್ಯಗಳನ್ನು ವಿಸ್ತರಿಸಿ ಕೃಷಿ ಕಾರ್ಮಿಕರಿಗೆ ಕಡಿಮೆ ದರದಲ್ಲಿ ಸಾಲದ ಸೌಲಭ್ಯಗಳನ್ನು ನೀಡಬೇಕು.
೮.ಕೃಷಿ ಕಾರ್ಮಿಕರು ಹಕ್ಕು ಬಾಧ್ಯತೆಗಳ ಬಗ್ಗೆ ಅವರಿಗೆ ಸರಿಯಾದ ಮಾಹಿತಿ ನೀಡಬೇಕು.
೯.ಕೃಷಿ ಕಾರ್ಮಿಕರ ದುಡಿಮೆಯ ಅವಧಿಯನ್ನು ೮ ಗಂಟೆಗಳಿಗೆ ಸೀಮಿತಗೊಳಿಸಬೇಕು.
೧೦.ಕೃಷಿ ಕಾರ್ಮಿಕರು ಹೆಚ್ಚಾಗಿ ಅವಿದ್ಯಾವಂತರಾಗಿರುವುದರಿಂದ ಅವರಿಗೆ ತಾಂತ್ರಿಕ ಮತ್ತು ವೃತ್ತಿ ಪರ ಶಿಕ್ಷಣ ನೀಡಬೇಕು.
೧೧.ಕೃಷಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಗಳನ್ನು ಒದಗಿಸಬೇಕು
೧೨.ಕೃಷಿಯಲ್ಲಿ ಬಾಲ ಕಾರ್ಮಿಕರು ಇರದಂತೆ ನೋಡಿಕೊಳ್ಳಬೇಕು.
೧೩.ಕೃಷಿ ಬದಲಾಗಿ ಪರ್ಯಾಯ ಉದ್ಯೋಗವನ್ನು ಕಲ್ಪಿಸಬೇಕು.
೧೪.ಸಹಕಾರಿ ಕೃಷಿ ಕ್ರಮವನ್ನು ಜಾರಿಗೆ ತರುಬೇಕು.
ಉಪಸಂಹಾರ :
ಕೃಷಿ ಕಾರ್ಮಿಕರು ಎಂಬ ಆರ್ಥಿಕ ಪರಿಕಲ್ಪನೆ ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಜಗತ್ತಿನ ಅಭಿವೃದ್ಧಿ ಹೊಂದಿದ ರಾಷ್ಟ್ರವಾದ ಅಮೇರಿಕವು ಈ ಸಮಸ್ಯೆಯಿಂದ ಹೊರತಾಗಿಲ್ಲ. ಇಂದು ಶೇ.೮೫ರಷ್ಟು ಜನತೆ ಭೂ ರಹಿತರಾಗಿದ್ದಾರೆ. ಭಾರತದಲ್ಲಿ ಕೃಷಿ ಕಾರ್ಮಿಕರು ಆರ್ಥಿಕವಾಗಿ, ಸಾಮಾಜಿಕವಾಗಿ, ತುಂಬಾ ಹಿಂದುಳಿದಿದ್ದು ಅವರು ತುಂಬಾ ನಿಕೃಷ್ಟವಾದ ಜೀವನ ಮಟ್ಟವನ್ನು ಸಾಗಿಸುತ್ತಿದ್ದಾರೆ. ಭಾರತದಲ್ಲಿ ಕೃಷಿ ಕಾರ್ಮಿಕರು ಮೂಲೆ ಗುಂಪಾಗಿದ್ದು ಸಂಘಟನೆ ಎಂಬ ಪರಿಕಲ್ಪನೆಯ ಅರ್ಥವೇ ತಿಳಿಯದ ಈ ಜನ ಭಾರತದ ಅರ್ಥ ವ್ಯವಸ್ಥೆಗೆ ಸ್ಥಿತಿಯಲ್ಲಿ ಇವರ ಪಾಲು ಶೋಷಿತರ ಪಾಲಿಗಿಂತ ಹೊರತಾಗಿಲ್ಲ ಹಸಿವು ಬಡತನ ಕಿತ್ತು ತಿನ್ನುವ ಇಂದಿನ ಸಮಾಜದ ಆಡಂಬರದ ಬದುಕಿನಲ್ಲಿ ಕೃಷಿ ಕಾರ್ಮಿಕರು ಯಾವ ವರ್ಗಕ್ಕೆ ಬರುತ್ತಾರೆಂಬುದೇ ವಿವಾದವಾಗಿದೆ. ಭಾರತ ಸರ್ಕಾರ ಕನಿಷ್ಠ ಕೂಲಿ ಕಾಯಿದೆಯನ್ನು ಜಾರಿಗೆ ತಂದಿದ್ದರು. ಅದು ಸರಿಯಾದ ರೀತಿಯಲ್ಲಿ ಅನುಷ್ಠಾನಕ್ಕೆ ಬಾರದಿರುವುದು ಇಲ್ಲಿ ಕಂಡು ಬರುತ್ತದೆ. ಭಾರತ ಸರ್ಕಾರದ ಯೋಜನೆಗಳು ಸರ್ಕಾರದ ಕಾನೂನು ಕಾಯಿದೆಗಳು ಜಮೀನ್ದಾರ ಕೃಷಿಕರಿಗೆ ಹೊರತು ಕೃಷಿಯನ್ನು ಮಾಡುವ ಕೃಷಿ ಕಾರ್ಮಿಕರಿಗಲ್ಲ. ಇವರಿಗೆ ಭದ್ರತೆಯಿಲ್ಲದ ಬಂಗಲೆಯಲ್ಲಿ ಬಂಜರಾಗಿ ನಿಂತಿದ್ದಾನೆ. ಕೃಷಿ ಕಾರ್ಮಿಕರು ಭಾರತದಲ್ಲಿ ಒಂದು ಪ್ರಮಾಣ ಸಂಪನ್ಮೂಲ ಇವರು ಸಮರ್ಪಕವಾಗಿ ಕೃಷಿ ಚಟುವಟಿಕೆಗಳನ್ನು ಕೈಗೊಂಡಾಗ ಮಾತ್ರ ದೇಶದ ಆದಾಯದ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗುತ್ತದೆ. ಕೃಷಿ ಕಾರ್ಮಿಕರ ಸಂಖ್ಯೆ ತೀವ್ರ ಗತಿಯಲ್ಲಿ ಬೆಳೆಯುತ್ತಿದೆ. ಅವರ ಸಂಖ್ಯೆ ಹೆಚ್ಚಾದಂತೆಲ್ಲಾ ಹೆಚ್ಚು ಸಮಸ್ಯೆಗಳು ಇರುವುದು ಕಂಡು ಬರುತ್ತದೆ. ಅವರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಉತ್ತಮವಾದ ಸೌಲಭ್ಯವನ್ನು ಕಲ್ಪಿಸಬೇಕಾಗಿದೆ. ಕೃಷಿ ಕಾರ್ಮಿಕರು ತಮ್ಮ ದಿನನಿತ್ಯದ ಬದುಕಿನಲ್ಲಿ ಕನಿಷ್ಟ ಅವಶ್ಯಕತೆಗಳನ್ನು ತಾವೇ ಅಲೆಮಾರಿಗಳಾಗಿ ಪಡೆಯುತ್ತಿರುವುದರಿಂದ ಜನ್ಮ ನೀಡಿದ ಈ ಭೂಮಿಯ ಋಣ ತೀರಿಸಲೆಂದೇ ಹುಟ್ಟಿದ್ದೇವೆ ಎಂಬ ನಿರ್ಧಾರಕ್ಕೆ ಬಂದಿರುವುದು ಕೃಷಿಯಿಂದ ವಲಸೆ ಹೋಗುವುದು ನಿಂತು ನೆಲೆಯಾಗಲು ಪ್ರಯತ್ನಿಸುತ್ತಿದ್ದಾರೆ.
ಆಧಾರ ಗ್ರಂಥಗಳು
೧. ಡಿ. ವೆಂಕಟರಾವ್: ಕೃಷಿ ಅರ್ಥಶಾಸ್ತ್ರ, ಲಕ್ಷ್ಮಿ ಪ್ರಿಂಟಿಂಗ್ ಅಂಡ್ ಪಬ್ಲಿಷಿಂಗ್
ಹೌಸ್, ಮೈಸೂರು, ಪ್ರಥಮ ಮುದ್ರಣ ೨೦೦೦.
ಪು. ಸಂ. ೨೨೦
೨. ಎಂ.ಎಸ್. ಕಲ್ಲೂರು: ಕೃಷಿ ಅರ್ಥಶಾಸ್ತ್ರ, ಕಲಾ ಪ್ರಕಾಶನ, ಬೆಂಗಳೂರು
ಪ್ರಥಮ ಮುದ್ರಣ ೨೦೦೦, ಪು.ಸಂ. ೫೩೬
೩. ಹೆಚ್. ಆರ್. ಕೃಷ್ಣಯ್ಯ ಗೌಡ: ಭಾರತದ ಆರ್ಥಿಕ ವ್ಯವಸ್ಥೆ ಸಮಸ್ಯ,
ಲಕ್ಷ್ಮಿ ಪ್ರಿಂಟಿಂಗ್ ಅಂಡ್ ಪಬ್ಲಿಕೇಷನ್ ಹೌಸ್, ಮೈಸೂರು
ಪ್ರಥಮ ಮುದ್ರಣ ೧೯೯೯, ಪು.ಸಂ ೨೪೦
೪. ಹೆಚ್. ಆರ್. ಕೃಷ್ಣಯ್ಯ ಗೌಡ: ಭಾರತದ ಆರ್ಥಿಕ ವ್ಯವಸ್ಥೆ ಸಮಸ್ಯ,
ಚೇತನ್ ಬುಕ್ ಹೌಸ್,
ಪ್ರಥಮ ಮುದ್ರಣ ೧೯೯೫, ಪು.ಸಂ ೪೪೨
೫. ಕೆ.ಡಿ. ಬಸವ: ಭಾರತದ ಅರ್ಥವ್ಯವಸ್ಥೆಯ ಪರಿಚಯ
೬. ಶರಣಪ್ಪ: ಭಾರತದ ಆರ್ಥಿಕ ಸಮಸ್ಯೆಗಳು,
ಚೇತನ್ ಬುಕ್ ಹೌಸ್, ಪು.ಸಂ. ೧೯೮
೭. ಪ್ರಭಾಕರ ಶಿಶಿಲ: ಆಧುನಿಕ ಬಾರತದ ಆರ್ಥಿಕ ಸಮಸ್ಯೆಗಳು
ಸುಧಾ ಪಬ್ಲಿಕೇಷನ್ಸ್, ಬೆಂಗಳೂರು.
೮. ಕರ್ನಾಟಕ ರಾಜ್ಯ ಕೃಷಿ: ರೈತ ಸಂಜೀವಿನಿ ಅಪಘಾತ, ವಿಮಾ ಯೋಜನೆ,
ಮಾರಾಟ ಮಂಡಳಿ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ
ಮುದ್ರಣಾಲಯ, ವಿದ್ಯಾನಗರ, ಹುಬ್ಬಳ್ಳಿ.
೯. ನಾರಾಯಣ ಎಂ.: ಸಾಮಾಜಿಕ ಸಂಶೋಧನೆ,
ಲಕ್ಷ್ಮಿ ಪ್ರಿಂಟಿಂಗ್ ಪಬ್ಲಿಷಿಂಗ್ ಹೌಸ್, ಮೈಸೂರು.
ಪ್ರಶ್ನಾವಳಿ
ಗ್ರಾಮೀಣ ಪ್ರದೇಶದಲ್ಲಿನ ದಿನಗೂಲಿ ಕೃಷಿ ಕಾರ್ಮಿಕರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಒಂದು ಕಿರು ಅಧ್ಯಯನ
೧.ಪ್ರತಿವಾದಿಗಳ ವೈಯಕ್ತಿಕ ಮಾಹಿತಿ
೧. ಹೆಸರು:
೨. ಲಿಂಗ: ಎ) ಸ್ತ್ರೀ ಬಿ) ಪುರುಷ
೩. ವಯಸ್ಸು: ಎ) ೨೫ರಿಂದ ೩೫ ಬಿ) ೩೬ ರಿಂದ ೪೫
ಸಿ) ೪೬ ರಿಂದ ೬೦ ಡಿ) ೬೧ಕ್ಕೂ ಮೇಲ್ಪಟ್ಟು
೪.ವಿದ್ಯಾರ್ಹತೆ: ಎ) ಅನಕ್ಷರಸ್ಥರು ಬಿ) ಪ್ರಾಥಮಿಕ ಸಿ) ಪ್ರೌಢ ಡಿ) ಪದವಿ
೫.ಜಾತಿ: ಎ) ಒಕ್ಕಲಿಗ ಬಿ) ಎಸ್.ಸಿ. ಸಿ) ಎಸ್.ಟಿ. ಡಿ) ಇತರೆ
೬.ವೈವಾಹಿಕ ಸ್ಥಿತಿ: ಎ) ಅವಿವಾಹಿತ ಬಿ) ವಿವಾಹಿತ ಸಿ) ವಿಧುರ/ ವಿಧವೆ
ಡಿ) ವಿಚ್ಛೇದನ
೭.ಧರ್ಮ: ಎ) ಹಿಂದೂ ಬಿ) ಮುಸ್ಲಿಂ ಸಿ) ಕ್ರೈಸ್ತ ಡಿ) ಇತರೆ
೮.ಕುಟುಂಬದ ಸ್ವರೂಪ ಎ) ಅವಿಭಕ್ತ ಕುಟುಂಬ () ಬಿ) ವಿಭಕ್ತ ಕುಟುಂಬ()
೯.ಉದ್ಯೋಗ ಎ) ಕೃಷಿ ಕೂಲಿ ಕಾರ್ಮಿಕರು () ಬಿ) ವ್ಯವಸಾಯ ಸಿ) ಇತರೆ()
೧೦.ವೈಯಕ್ತಿಕ ವಾರ್ಷಿಕ ವರಮಾನ ಎ) ೭೦೦೦ -೮೦೦೦ ಬಿ) ೯೦೦೦ ೧೦೦೦೦ (ಸಿ) ೧೧೦೦೦ ೧೨೦೦೦ () ಡಿ)೧೨೦೦೦ಕ್ಕೂ ಮೇಲ್ಪಟ್ಟು ()
ಕುಟುಂಬದಲ್ಲಿನ ಸದಸ್ಯರ ವಿವರ
ಕ್ರ.ಸಂಹೆಸರುಸಂಬಂಧಲಿಂಗವಯಸ್ಸುವಿದ್ಯಾರ್ಯತೆವೃತ್ತಿ
೨.ಕೃಷಿ ಕಾರ್ಮಿಕರ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿ
೧೧.ನೀವು ಮನೆಯನ್ನು ಹೊಂದಿರುವಿರಾ? ಎ) ಹೌದು () ಬಿ) ಇಲ್ಲ()
೧೨.ಹೌದು ಎನ್ನುವುದಾದರೆ ಯಾವ ರೀತಿಯ ಮನೆಯನ್ನು ಹೊಂದಿದ್ದೀರಿ? ಎ) ಸ್ವಂತ ಮನೆ ಬಿ) ಬಾಡಿಗೆ ಮನೆ()
೧೩.ನೀವು ಸ್ವಂತ ಮನೆಯಲ್ಲಿ ವಾಸಿಸುತ್ತಿದ್ದರೆ ಮನೆಯ ವಿಧ ಯಾವುದು? ಎ) ಗುಡಿಸಲು ಬಿ) ಹೆಂಚಿನ ಮನೆ () ಸಿ) ಶೀಟಿನ ಮನೆ (ಡಿ) ಆರ್.ಸಿ.ಸಿ. ಕಟ್ಟಡ ಇ) ಇತರೆ()
೧೪.ಈ ಕೆಳಕಂಡ ಸರ್ಕಾರದ ಯಾವುದಾದರೂ ಯೋಜನೆಯಡಿಯಲ್ಲಿ ವಸತಿ ಸೌಲಭ್ಯವನ್ನು ಹೊಂದಿದ್ದೀರಾ? ಎ) ಆಶ್ರಯ ಯೋಜನೆ () ಬಿ) ಇಂದಿರಾ ಆವಾಸ್ ಯೋಜನೆ() ಸಿ) ಅಂಬೇಡ್ಕರ್ ವಸತಿ ಯೋಜನೆಡಿ) ಬಸವ ಯೋಜನೆ()
೧೫.ನಿಮ್ಮ ಮನೆಯಲ್ಲಿ ಈ ಕೆಳಕಂಡ ಯಾವುದಾದರೂ ವಸ್ತುಗಳನ್ನು ಹೊಂದಿರುವಿರಾ? ಎ) ಹೌದು () ಬಿ) ಇಲ್ಲ()
೧.ಟೆಲಿಫೋನ್
೨.ದೂರದರ್ಶನ
೩.ರೇಡಿಯೋ
೪.ಸಿ.ಡಿ., ಡಿ.ವಿ.ಡಿ., ವಿ.ಸಿ.ಆರ್.
೫.ಮೋಟಾರು ವಾಹನಗಳು
೧೬. ನಿಮ್ಮ ಮನೆಯಲ್ಲಿ ಈ ಕೆಳಕಂಡ ಮೂಲ ಸೌಕರ್ಯಗಳನ್ನು ಹೊಂದಿದ್ದೀರಾ? ಎ) ಅಡುಗೆ ಕೋಣೆ () ಬಿ) ಮಲಗುವ ಕೋಣೆ (ಸಿ) ಸ್ನಾನದ ಗೃಹ/ ಶೌಚಾಲಯ() ಡಿ) ಮೇಲಿನ ಎಲ್ಲವೂ
೧೭.ನೀವು ಈ ಕೆಳಕಂಡ ಯಾವುದಾದರೂ ದುಶ್ಚಟಗಳಿಗೆ ದಾಸರಾಗಿದ್ದೀರಾ? ಎ) ಮಧ್ಯಪಾನ ಬಿ) ದೂಮಪಾನ () ಸಿ) ತಂಬಾಕು () ಡಿ) ಯಾವುದು ಇಲ್ಲ
೧೮.ನೀವು ಮಧ್ಯಪಾನ ಅಥವಾ ಧೂಮಪಾನ ಮಾಡುತ್ತೀರಾ? ಎ) ಹೌದು ಬಿ) ಇಲ್ಲ
೧೯.ಮಧ್ಯಪಾನ ಮಾಡುವುದಾದರೆ ಕಾರಣ ಎ) ಕೆಲಸದ ಆಯಾಸ (ಬಿ) ರೂಢಿಯಾಗಿರುವುದು ಸಿ) ಇತರೆ()
೨೦.ಸ್ವಂತ ಭೂಮಿಯನ್ನು ಹೊಂದಿರುವಿರಾ? ಎ) ಹೌದು () ಬಿ) ಇಲ್ಲ()
೨೧.ದಿನದಲ್ಲಿ ಎಷ್ಟು ಘಂಟೆ ಕೂಲಿ ಕೆಲಸ ಮಾಡುತ್ತೀರಾ? ಎ) ೫ (ಬಿ) ೬ ಸಿ) ೮ () ಡಿ) ೧೦ ()
೨೨. ನೀವು ದಿನವೊಂದಕ್ಕೆ ಪಡೆಯುವ ಕೂಲಿ ಎಷ್ಟು ಎ) ೧೦೦ ಬಿ) ೧೨೫ ಸಿ) ೧೫೦ ಡಿ) ೨೦೦
೨೩.ನಿಮ್ಮ ಮನೆಯ ಇತರೆ ಸಧಸ್ಯರು ಬೇರೆ ಯಾವುದಾದರೆ ಕೆಲಸಕ್ಕೆ ಹೋಗುತಿದ್ಧಾರಾ? ಎ) ಹೌದು ಬಿ) ಇಲ್ಲ
೨೪.ನೀವು ಮಾಡುತ್ತಿರುವ ಕೆಲಸವು ನಿಮಗೆ ತೃಪ್ತಿಯನ್ನು ನೀಡುತ್ತಿದೆಯೇ? ಎ) ಹೌದು ಬಿ) ಇಲ್ಲ
೨೫. ನೀವು ಈ ಕೆಳಕಂಡ ಯಾವ ಸ್ಥಳಗಳಲ್ಲಿ ಆರೋಗ್ಯ ಚಿಕಿತ್ಸೆ ಪಡೆಯುತ್ತೀರಿ?
ಎ) ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಸರ್ಕಾರಿ ಆಸ್ಪತ್ರೆ() ಬಿ) ಖಾಸಗಿ ಆಸ್ಪತ್ರೆಸಿ) ಮನೆ ಮದ್ದು ಅಥವಾ ಮಾಟ ಮಂತ್ರಾ() ಡಿ) ಕ್ಲೀನಿಕ್ (ಇ) ಆಯುರ್ವೇದಿಕ್()
೨೬. ನಿಮ್ಮ ಊರಿನಲ್ಲಿ ಸಾಮಾನ್ಯವಾಗಿ ಆಚರಿಸುವ ಹಬ್ಬ ಯಾವುದು?
ಎ) ಯುಗಾದಿ ಬಿ) ಸಂಕ್ರಾಂತಿ ಸಿ) ಗಣೇಶ ಚತುರ್ಥಿ ಡಿ) ಎಲ್ಲಾ ಹಬ್ಬಗಳು
೨೭. ನೀವು ಹಬ್ಬ ಹರಿದಿನಗಳಲ್ಲಿ ಅಥವಾ ಜಾತ್ರೆಯಲ್ಲಿ ಬೇರೆ ಜಾತಿಯವರೊಡನೆ ಬೆರೆಯುತ್ತೀರಾ? ಎ) ಹೌದು ಬಿ) ಇಲ್ಲ
೨೮. ಕೂಲಿ ನಿರ್ಧಾರದಲ್ಲಿ ನಿಮ್ಮ ತೀರ್ಮಾನಕ್ಕೆ ಮನ್ನಣೆ ಇದೆಯೇ? ಎ) ಹೌದು ಬಿ) ಇಲ್ಲ
೨೯. ಸರ್ಕಾರ ನಿಮ್ಮ ಸಮಸ್ಯೆಗಳ ನಿವಾರಣೆಗೆ ಯಾವುದಾದರೂ ಕ್ರಮ ಕೈಗೊಂಡಿದೆಯೇ? (ಎ) ಹೌದು ಬಿ) ಇಲ್ಲ
೩೦. ಹೌದು ಆಗಿದ್ದಲ್ಲಿ ಯಾವ ಕ್ರಮಗಳನ್ನು ಕೈಗೊಂಡಿದೆ? ಎ) ಕೂಲಿಗಾಗಿ ಕಾಳು ಯೋಜನೆ ಬಿ) ಉದ್ಯೋಗ ಖಾತರಿ ಯೋಜನೆ (ಸಿ) ಕನಿಷ್ಠ ಕೂಲಿ()ಡಿ) ಭೂ ಸುಧಾರಣೆ ಕ್ರಮಗಳು()
೩೧. ಸಮಸ್ಯೆಗಳ ನಿವಾರಣೆಗೆ ನೀವು ಸ್ವ-ಸಹಾಯ ಗುಂಪಿನ ರಚನೆ ಮಾಡಿಕೊಂಡಿದ್ದೀರಾ? ಎ) ಹೌದು ಬಿ) ಇಲ್ಲ
೩೨. ನೀವು ಮಾಡಿಕೊಂಡಿರುವ ಸ್ವ-ಸಹಾಯ ಗುಂಪಿನಿಂದ ನಿಮ್ಮ ಸಮಸ್ಯೆಗೆ ಪರಿಹಾರ ದೊರಕಿದೆಯೇ? ಎ) ಹೌದು ಬಿ) ಇಲ್ಲ
೩೩. ದಿನಗೂಲಿ ಕೆಲಸವನ್ನು ಬಿಟ್ಟು ನೀವು ಬೇರೆಯಾವುದಾದರೂ ಕುಲ ಕಸುಬನ್ನು ಮಾಡುತ್ತಿದ್ದೀರಾ? ಎ) ಹೌದು ಬಿ) ಇಲ್ಲ