ಶ್ರವಣ ನ್ಯೂನ್ಯತೆವುಳ್ಳ ಹದಿಹರೆಯ ವಿದ್ಯಾರ್ಥಿಗಳ ಮನೋಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ, ಕಾನೂನು- ಹಕ್ಕುಗಳು ಮತ್ತು ಸೌಲಭ್ಯಗಳ ಬಗೆಗಿನ ಅರಿವು ...ಒಂದು ಅಧ್ಯಯನ.


ಬೆಂಗಳೂರು ವಿಶ್ವವಿದ್ಯಾಲಯ, ಸಮಾಜಕಾರ್ಯ ವಿಭಾಗ, ಜ್ಞಾನಭಾರತಿ ಆವರಣ

ಸಮಾಜಕಾರ್ಯ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯ ಅಗತ್ಯ ಭಾಗಶಃ ಪೂರೈಕೆಗಾಗಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿರುವ ಒಂದು ಕಿರು ನಿಬಂಧ.

ಸಂಶೋಧಕ: ರಮೇಶ ಎಚ್, ನಾಲ್ಕನೇ ಸೆಮಿಸ್ಟರ್ ಸಮಾಜಕಾರ್ಯ ವಿದ್ಯಾರ್ಥಿ

ಮಾರ್ಗದರ್ಶಕರು: ರವಿಕುಮಾರ್ ಬಿ. ಎಸ್, ಅಥಿತಿ ಉಪನ್ಯಾಸಕರು, ಸಮಾಜಕಾರ್ಯ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ

ಅಧ್ಯಾಯ - ೧ ಪೀಠಿಕೆ
 Helen Keller was both blind and deaf. When asked by someone what could be worse that being blind in this world, she replied “having eyes but not having a vision”
ಪ್ರಸ್ತುತ ಸನ್ನಿವೇಶದಲ್ಲಿ ಭಾರತದಲ್ಲಿ ೩. ೨೫ ದಶಲಕ್ಷ ಮಕ್ಕಳು ಶ್ರವಣದೋಷದ ತೊಂದರೆಯಿಂದ ಬಳಲುತ್ತಿದ್ದಾರೆ. ಈ ರೀತಿಯ ಶ್ರವಣದೋಷದ ನ್ಯೂನ್ಯತೆಯಿಂದ ಬಳಲುತ್ತಿರುವಂತಹ ಹದಿಹರೆಯದ ಮಕ್ಕಳಲ್ಲಿ ಹಲವಾರು ರೀತಿಯ ಸಮಸ್ಯೆಗಳು ಎದ್ದು ಕಾಣುತ್ತವೆ. ಇವರು ಮುಖ್ಯವಾಗಿ ಸಂವಹನದ ಸಂಧರ್ಭದಲ್ಲಿ ಮಾತುಗಾರಿಕೆಯು ಕೇಳಿಸದೇ ಇಲ್ಲದಿರುವುದರಿಂದ ಹೆಚ್ಚಿನದಾಗಿ ಮಾತನಾಡುವ ವ್ಯಕ್ತಿಯ ತುಟಿಯನ್ನೇ ಅತಿ ಸೂಕ್ಷ್ಮವಾಗಿ ಈ ನ್ಯೂನ್ಯತೆಯಿಂದ ಬಳಲುತ್ತಿರುವ ಮಕ್ಕಳು ಗಮನಿಸುತ್ತಾರೆ. ಒಂದು ವೇಳೆ ಮಾತನಾಡುವ ವ್ಯಕ್ತಿಯ ತುಟಿಯು ಬೇರೆ ಕಡೆ ತಿರುಗಿ ಮಾತನಾಡಿದರೆ ಶ್ರವಣದೋಷದ ನ್ಯೂನ್ಯತೆವುಳ್ಳ ಮಕ್ಕಳ ಗಮನ ಬೇರೆ ಕಡೆ ಸೆಳೆಯುತ್ತದೆ ಇದರಿಂದ ಅ ಮಕ್ಕಳಲ್ಲಿ ಸಂವಹನದ ಪ್ರಕ್ರಿಯೆಯಲ್ಲಿ ಮಾತುಗಾರಿಕೆ ಪರಿಣಾಮಕಾರಿಯಾಗಿ ಕೇಳಿಸುವುದಿಲ್ಲ. ಇದರಿಂದ ಮಕ್ಕಳಲ್ಲಿನ ಮಾತುಗಾರಿಕೆಯ ಕೌಶಲ್ಯವು ಅಭಿವೃದ್ದಿಯಾಗದೆ ತನ್ನ ಜ್ಞಾನವೃದ್ದಿಯಲ್ಲಿಯೂ ಕ್ಷೀಣನಾಗುತ್ತಾನೆ.
ಇತಂಹ ಹದಿಹರೆಯ ಮಕ್ಕಳು ಸಮುದಾಯದಲ್ಲಿಯೂ, ಶಾಲೆಯಲ್ಲಿಯೂ, ಹಾಗೂ ಕುಟುಂಬದಲ್ಲಿಯು ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಇದರಿಂದ ಶ್ರವಣದೋಷವುಳ್ಳ ಮಕ್ಕಳಲ್ಲಿ ಕಾಲಕ್ರಮೇಣ ಖಿನ್ನತೆಯ ಮನೋಭಾವನೆ ಬೆಳೆಯಲಿಕ್ಕೆ ಕಾರಣವಾಗುತ್ತೆ. ಆಗ ಮಕ್ಕಳು ಯಾರ ಜೊತೆಯಲ್ಲಿಯು ಬೇರೆಯಲು ಇಚ್ಚೆಪಡದೆ ದೂರ ಸರಿಯುತ್ತಾರೆ , ಇಂತಹ ಶ್ರವಣದೋಷವುಳ್ಳ ಮಕ್ಕಳನೊಡನೆ ಪ್ರತಿಯೊಂದು ಸಮುದಾಯ ವರ್ಗವು ಅಂದರೆ ಶಾಲಾ ಶಿಕ್ಷಕರು, ಪೋಷಕರು, ಸ್ನೇಹಿತರು , ಹಾಗೂ ನೆರೆಹೊರೆಯವರು ಇವರನ್ನು ತುಂಬಾ ಪ್ರೀತಿಯಿಂದ ಸಹನೆಯಿಂದ ಹಾಗೂ ಸಂಯಮದಿಂದ ಆತನಿಗೆ ಕೇಳಿಸುವಂತಹ ರೀತಿಯಲ್ಲಿ ಆತನು ಕೂಡ ನನ್ನಂತೆಯೆ ಎಂಬ ಭಾವನೆಯನ್ನು ಇಟ್ಟುಕೊಂಡು ಮಾತಾನಾಡಿಸಬೇಕು.
 ಕೀವುಡುತನ ಒಂದು ಅಗೋಚರ ಅಂಗವಿಕಲತೆ, ಕೀವುಡುತನಕ್ಕಿಂತ ಕೀವುಡುತನದ ಪರಿಣಾಮ ಅಗೋಚರವಾದುದು ಹಾಗೂ ಭಯಂಕರವಾದುದು. ಶೈಶವಾಸ್ಥೆಯಲ್ಲಿಯೇ ದೃಷ್ಟಿದೋಷಕ್ಕೂ ಶ್ರವಣದೋಷಕ್ಕೂ ಬಲಿಯಾದ ಹೆಲನ್‌ಕೆಲ್ಲರ್ ಆತ್ಮಕಥೆಯಲ್ಲಿ ಒಂದೆಡೇ ಹೀಗೆ ಹೇಳಿಕೊಂಡಿದ್ದಾರೆ. ಕುರುಡುತನವು ನನ್ನನ್ನು ನನ್ನ ಸುತ್ತಮುತ್ತಲಿನ ವಸ್ತುಗಳಿಂದ ಬೇರ್ಪಡಿಸಿದರೆ, ಕಿವಿಡುತನವು ನನ್ನನ್ನು ನನ್ನ ಸಹಜೀವಿಗಳಿಂದಲೇ ಬೇರ್ಪಡಿಸಿದೆ. ಈ ಒಂದು ಮಾತನ್ನು ಅರ್ಥೈಸಿಕೊಂಡರೆ ಸಾಕು ನಮಗೆ ಕಿವುಡುತನದ ಕಠೋರತೆಯು ಅರಿವಾಗುತ್ತದೆ.
 ಶ್ರವಣದೋಷ ಎಂದರೆ ಯಾವ ಮಕ್ಕಳಿಗೆ ಶೇ. ೫೦ ರಷ್ಟು ಡೆಸಿಬಲ್‌ಗಿಂತ ಕೇಳಿಸದ ಸಾಮಾರ್ಥ್ಯಕ್ಕಿಂತ ಹೆಚ್ಚಾಗಿರುತ್ತದೋ ಅಂತಹ ನ್ಯೂನ್ಯತೆಯನ್ನು ಶ್ರವಣದೋಷ ಎಂದು ಕರೆಯುತ್ತಾರೆ.
 ಅಥವಾ ಮಕ್ಕಳು ಹುಟ್ಟಿದಾಗಿನಿಂದ ಯಾವುದಾದರು ಸೊಂಕು ತಗುಲಿದ್ದು, ಹಾಗೂ ಸೋರುವಿಕೆಯಿಂದ ಕಿವಿಯ ತಮಟೆ ಸಮಸ್ಯೆಯಿಂದ ಬಳಲುತ್ತಿದ್ದರೇ ಕೇಳಿಸುವ ಸಾಮರ್ಥ್ಯ ಕ್ಷೀಣವಾದರೇ ಅದನ್ನು ಶ್ರವಣದೋಷವೆಂತಲು ಕರೆಯುವರು. ಇದನ್ನು ಆಂಗ್ಲಭಾಷೆಯಲ್ಲಿ Hearing impairment ಅಥವಾ Hearing loss ಎಂತಲೂ ಕರೆಯುವರು.

ಕಿವಿಯ ರಚನೆ ಮತ್ತು ಅದರ ಕಾರ್ಯಗಳು:
ನಮ್ಮ ಐದು ಪಂಚೇಂದ್ರಿಯಗಳಲ್ಲಿ ಕಿವಿಯೂ ಸಹ ಒಂದು. ಅದ್ದರಲ್ಲಿ ಕಣ್ಣಿಗೆ ಕಾಣುವಂತಹ ಹಾಗೂ ಕಾಣದಂತಹ ಅನೇಕ ಭಾಗಗಳಿವೆ. ಶಬ್ಧಗಳನ್ನು ಕೇಳಿಸಿಕೊಳ್ಳುವುದು, ಮೆದುಳಿಗೆ ರವಾನಿಸುವುದು ಹಾಗೂ ದೇಹದ ಸಮತೋಲನ ಸ್ಥಿತಿಯನ್ನು ಕಾಪಾಡುವುದು ಕಿವಿಯ ಮುಖ್ಯವಾದ ಕೆಲಸ.

‘ಶ್ರವಣ + ದೋಷ’
ಶ್ರವಣ ಎಂದರೆ ಕಿವಿ ಎಂದರ್ಥ ಇದರಲ್ಲಿ ೩ ರೀತಿಯವು ಇವೆ. ಹೊರ ಕಿವಿ, ನಡು ಕಿವಿ, ಹಾಗೂ ಒಳ ಕಿವಿ.
ಹೊರಕಿವಿ : ಹೊರಕಿವಿಯಲ್ಲಿ ಮುಖ್ಯವಾಗಿ ಬರುವ ಭಾಗಗಳೆಂದರೆ ಕಿವಿಯ ಹಾಲೆ (ಪಿನ್ಯಾ) ಮತ್ತು ಕರ್ಣನಾಳ. ಇದು ಕಿವಿಯ ಹಾಲೆಯಿಂದ ಕಿವಿಯ ತಮಟೆಯವರೆಗೆ ಆವರಿಸಿದೆ. ಪರಿಸರದಲ್ಲಿ ಉಂಟಾಗುವ ಶಬ್ಧಗಳನ್ನು ನಮ್ಮ ಹೊರಕಿವಿಯನ್ನು ಮೊದಲು ತಲುಪುತ್ತವೆ. ಹೊರಕಿವಿಯ ವಿಶಿಷ್ಟ ಆಕಾರದಿಂದ ಶಬ್ಧ ಶೇಖರಣೆ ಸಹಾಯವಾಗಿತ್ತದೆ. ಹೊರಕಿವಿಯ ಹಾಲೆ ಮತ್ತು ನಾಳ, ಶಬ್ಧವನ್ನು ಶೇಖರಿಸಿ ಮಧ್ಯಕಿವಿಗೆ ವರ್ಗಾಹಿಸುತ್ತದೆ. ಇದಲ್ಲದೆ ಹೊರಕಿವಿಯ ನಾಳದಲ್ಲಿರುವ ಗ್ರಂಥಿಗಳು ನೀರು, ಕ್ರಿಮಿ- ಕೀಟಗಳು ಮುಂತಾದವುಗಳು ಮಧ್ಯಕಿವಿಯನ್ನು ತಲುಪದ ಹಾಗೆ ತಡೆಯುತ್ತದೆ. ಅದಲ್ಲದೆ ಸೂಕ್ಷ್ಮ ರೋಮಗಳು ಗುಗ್ಗಿಯ ರೂಪದಲ್ಲಿ ಹೊರತಳ್ಳುತ್ತವೆ. ಇದರಿಂದಾಗಿ ಕಿವಿಯು ತನ್ನಿಂದ ತಾನೇ ಶುಚಿಯಾಗುತ್ತದೆ. ಹೊರಕಿವಿಯಿಂದ ಹಾಯ್ದು, ಶಬ್ಧದ ಅಲೆಗಳು ಕಿವಿಯ ತಮಟೆಯನ್ನು ಮುಟ್ಟಿದಾಗ ಕಿವಿಯ ತಮಟೆಯ ಚಲನೆ ಸೂಕ್ಷ್ಮವಾಗಿರುತ್ತದೆ ಹಾಗೂ ಜೋರಾದ ಶಬ್ಧಗಳಿಗೆ ತಮಟೆಯ ಚಲನೆ ಹೆಚ್ಚಿನ ಪ್ರಮಣದ್ದಾಗಿರುತ್ತದೆ. ಈ ತಮಟೆ ಪದರಗಳಿಂದ ಕೂಡಿರುತ್ತದೆ.
ಮಧ್ಯಕಿವಿ : ಮಧ್ಯಕಿವಿಯು ತಮಟೆಯ ಹೊರ ಹಾಗೂ ಮಧ್ಯಕಿವಿಯನ್ನು ಬೇರ್ಪಡಿಸುತ್ತದೆ. ತಮಟೆ ಬಂದು ತಲುಪಿದ ಶಬ್ಧ ಅದರ ಚಲನೆಯಿಂದ ತಮಯೆಗೆ ಹುದುಗಿಸಿಕೊಂಡಿರುವ ಮೂಳೆಗಳಿಗೆ ವರ್ಗಾವಣೆ ಆಗುತ್ತದೆ. ಆ ಮೂಳೆಗಳು ಕ್ರಮವಾಗಿ ಇಂಕಸ್ ,ಮ್ಯಾಲಿಯಸ್, ಸ್ಟೆಪಿಸ್ ಮೂಲಕ ಶಬ್ಧಗಳನ್ನು ರವಾನಿಸುತ್ತದೆ. ಈ ಮೂರು ಮೂಳೆಗಳಲ್ಲಿ ದೊಡ್ಡದಾದದ್ದು ಕಿವಿಯ ತಮಟೆಯಲ್ಲಿ ಹುದುಗಿದ್ದರೆ, ಚಿಕ್ಕದು ಒಳಕಿವಿಯೊಂದಿಗೆ ಸಂಪರ್ಕ ಸ್ಥಾಪಿಸುತ್ತದೆ. ಸ್ಟೆಪಿಸ್ ನಮ್ಮ ದೇಹದ ಅತ್ಯಂತ ಚಿಕ್ಕ ಮೂಳೆಯಾಗಿದೆ.
ಒಳಕಿವಿ : ಒಳಕಿವಿಗೆ ಚಕ್ರವ್ಯೂಹ ಎಂದು ಕರೆಯುತ್ತಾರೆ. ಒಳಕಿವಿ ಒಂದು ಬಟಾಣಿ ಕಾಳಿನ ಗಾತ್ರದಷ್ಟಿರುತ್ತದೆ. ಇದು ಅತೀ ತೊಡಕಾದ ಕಾರ್ಯ ವ್ಯಾಪ್ತಿಯನ್ನು ಹೊಂದಿದೆ. ಇದರ ಕಾರ್ಯದ ದೃಷ್ಟಿಯಿಂದ ಒಳಕಿವಿಯನ್ನು ೨ ಭಾಗಗಳಾಗಿ ವಿಂಗಡಿಸಬಹುದು.
ಅವುಗಳು ಅ) ಕಾಕ್ಲಿಯ. ಬ) ವೆಸ್ಟಬ್ಯುಲಾರ್ ಮೆಕಾನಿಸಂ.
ಅ) ಕಾಕ್ಲಿಯ: ಕೇಳಿಸಿಕೊಳ್ಳುವಲ್ಲಿ ಅತೀ ಪ್ರಮುಖ ಪಾತ್ರವಹಿಸುವ ಅಂಗ ಕಾಕ್ಲಿಯಾ. ಇದು ಒಳಕಿವಿಯ ಕೆಳಭಾಗದಲ್ಲಿದ್ದು ಬಸವನ ಹುಳುವಿನ ಆಕಾರವನ್ನು ಹೊಂದಿದೆ ಮತ್ತು ೨. ೧/೨ ಸುತ್ತುಗಳನ್ನು ಹೊಂದಿದೆ.
ಆ) ವೆಸ್ಟ ಬ್ಯುಲಾರ್ ಮೆಕಾನಿಸಂ: ಮಧ್ಯಕಿವಿಯಿಂದ ಒಳಕಿವಿಗೆ ಸಂಪರ್ಕ ಹೊಂದಿದೆ. ಇ ಭಾಗದಲ್ಲಿ ಸಮತೋಲನದ ಅಂಗಗಳಾದ ಅರ್ಧ ಚಂದ್ರಾಕಾರದ ನಾಳೆ (ಸೆಮಿ- ಸರ್ಕ್ಯಲರ್ ಕೆನಾಲ್) ಇವೆ. ಇದು ಕಿವಿಯ ಒಳಭಾಗದಲ್ಲಿ ಇರುತ್ತದೆ. ಇದು ನಮ್ಮ ದೇಹದ ಸಮತೋಲನವನ್ನು ಕಾಪಾಡುತ್ತಿರುತ್ತದೆ. ಪೋಷಕರು ತಮಗೆ ತಿಳಿಯದೇ ಮಕ್ಕಳ ಕೆನ್ನೆಯ ಭಾಗದ ಮೇಲೆ ಜೋರಾದ ಏಟು/ ಒತ್ತಡ ಬೀಳುವುದು ಅಪಾಯಕಾರಿ. ಆದುದರಿಂದ ಕಿವಿಯ ಕಾರ್ಯಕ್ಕೆ ತಡೆಯುಂಟಾಗುತ್ತದೆ.
 ಹದಿಹರೆಯದ ವಿದ್ಯಾರ್ಥಿಗಳಲ್ಲಿ ಈ ೩ ಭಾಗಗಳು ಕ್ಷೀಣವಾದರೆ ಶ್ರವಣತೆಯಲ್ಲಿ ನ್ಯೂನ್ಯತೆ ಅಥವಾ ದೋಷವಾಗಿದೆ ಎಂದರ್ಥ.

ಕಿವಿಯ ಕಾರ್ಯಗಳು:
ಕಿವಿಯು ಶಬ್ಧದ ತರಂಗಗಳನ್ನು ಸಂಗ್ರಹಿಸಿ ಹೊರ ಕಿವಿಯ ನಾಳದಲ್ಲಿ ಹಾದು ಹೋಗುವಂತೆ ಮಾಡುತ್ತದೆ. ಈ ಶಬ್ಧ ತರಂಗಗಳು ಕಿವಿಯ ತಮಟೆಯ ಹೊಡೆದು ತಮಟೆಯು ಕಂಪಿಸುತ್ತದೆ. ಈ ತಮಟೆಯ ಅಂಟಿಕೊಂಡಿರುವ ಮಧ್ಯಕಿವಿಯ ೩ ಮೂಳೆಗಳ ಸರಪಳಿಯು ಈ ಕಂಪನವನ್ನು ಒಳಕಿವಿಗೆ ಸಾಗಿಸುತ್ತದೆ. ಈ ಕಂಪನಗಳು ಕಾಕ್ಲಿಯಾದ ಸುತ್ತಲಿರುವ ಪೆರಿಲಿಂಪ್ ದ್ರವವನ್ನು ಚೇತನಗೊಳಿಸಿ ಅದರಲ್ಲಿ ಕಂಪನಗಳನ್ನು ಉಂಟುಮಾಡುತ್ತದೆ. ಇದರಿಂದ ಕಾಕ್ಲಿಯಾದ ಒಳಗಿರುವ ಎಂಡೋಲಿಂಫ್ ದ್ರವದಲ್ಲಿ ಕಂಪನಗಳು ಉತ್ಪನ್ನವಾಗಿ ಕಾಟಿ ಅಂಗವನ್ನು ಪ್ರಚೋದಿಸುತ್ತದೆ. ಈ ಪ್ರಚೋದನೆಗಳನ್ನು ಕಾಟಿ ಅಂಗದಲ್ಲಿರುವ ಗ್ರಾಹಕಗಳು ಸ್ವೀಕರಿಸಿ ಶ್ರವಣ ನರಗಳ ಮೂಲಕ ಮೆದುಳಿಗೆ ಕಳಿಸುತ್ತದೆ. ಮೆದುಳಿನಲ್ಲಿರುವ ಈ ಸಂದೇಶಗಳನ್ನು ಅರ್ಥೈಯಿಸಲ್ಪಟ್ಟಾಗ ನಮಗೆ ಶಬ್ಧ ಕೇಳುತ್ತದೆ. ಹೀಗೆ ಅತೀ ಕಡಿಮೆ ಅವಧಿಯಲ್ಲಿ ಕೇಳಿಸಿಕೋಳ್ಳುವ ಕ್ರಿಯೆ ಪೂರ್ಣವಾಗುತ್ತದೆ.

 ಶ್ರವಣದೋಷ ಉಂಟಾಗಲು ಕಾರಣಗಳು:
ರಕ್ತಸಂಬದದಲ್ಲಿನ ಮದುವೆ: ಶ್ರವಣದೋಷವುಂಟಾಗಲು ಪ್ರಮುಖ ಕಾರಣಗಳಲ್ಲಿ ರಕ್ತಸಂಬಂದದ ಮದುವೆಗಳು ಸಹ ಒಂದು.
ಹಲವರಿಗೆ ಈ ವಿಷಯ ಅಶ್ಚರ್ಯಕರವೂ! ನಾನು ನಮ್ಮ ಸೋದರತ್ತೆಯ ಮಗಳನ್ನೆ ಮದುವೆಯಾಗಿರುವುದು, ನಮ್ಮ ಮಗುವಿಗೆ ಯಾವುದೇ ತೊಂದರೆಗಳಿಲ್ಲ ಎಂದು ಹೇಳುವವರು ಇದ್ದಾರೆ.
ಆದರೆ ಇದು ಸತ್ಯದ ಸಂಗತಿ ವಿಜ್ಞಾನದ ವರದಿಯಂತೆ ಶ್ರವಣದೋಷಕ್ಕೆ ಪ್ರಮುಖ ಕಾರಣ ರಕ್ತ ಸಂಬಂದದ ಮದುವೆಗಳಿಂದಲೇ ಎಂಬುದು ತಿಳಿದು ಬಂದಿದೆ.
ಬಾಲ್ಯವಿವಾಹ: ಹೆಚ್ಚಿನ ರೀತಿಯಲ್ಲಿ ಹದಿಹರೆಯದಕ್ಕಿಂತ ಮುಂಚೆ ಅ ಮಕ್ಕಳ ಅಂಗಾಗಗಳು ಸರಿಯಾಗಿ ಸ್ಥಿರಗೊಂಡಿರುವುದಿಲ್ಲ, ಅಪ್ರಾಪ್ತ ವಯಸ್ಸಿನಲ್ಲಿಯೇ ಮದುವೆ ಮಾಡುವುದರಿಂದ ಏನು ಅರಿಯದ ಹುಟ್ಟಿದ ಮಕ್ಕಳಿಗೆ ಶ್ರವಣದೋಷ ಉಂಟಾಗುತ್ತದೆ. ಕಾರಣ ಎಳೆ ವಯಸ್ಸಿನಲ್ಲೆ ಗರ್ಭಿಣಿಯಾಗಿರುವುದರಿಂದ ಹೇರಿಗೆ ಕಷ್ಟಕರವಾಗಬಹುದು. ಹೆರಿಗೆ ಸಮಯದಲ್ಲಿ ಮಗುವಿಗೆ ಮತ್ತು ತಾಯಿಗೂ ಅಪಾಯ ಉಂಟಾಗುತ್ತದೆ. ಇದರಿಂದ ಹುಟ್ಟಿದ ಮಗುವಿಗೆ ಶ್ರವಣನ್ಯೂನ್ಯತೆಯುಂಟಾಗುವ ಸಾಧ್ಯತೆಯು ಇದೆ.
ಕಲುಷಿತ ವಾತಾವರಣ: ಕಲುಷಿತ ವಾತಾವರಣ ಶ್ರವಣದೋಷ ಉಂಟಾಗಲು ಪ್ರಮುಖ ಕಾರಣವಾಗಿದೆ. ಕಲುಷಿತ ವಾತಾವರಣ, ಮೂಲಭೂತ ಸೌಕರ್ಯಯಗಳನ್ನು ಮನುಷ್ಯನಿಗೆ ಅತಿಮುಖ್ಯ ಅಂದರೇ ಕಾರ್ಖಾನೆ ಮತ್ತು ಕೈಗಾರಿಕೆಯ ಶಬ್ಧ ಮತು ಮಾಲಿನ್ಯತೆ, ವಾಹನದ ಶಬ್ಧಗಳು, ಧ್ವನಿವರ್ಧಕಗಳು ಇವು ಕಿವಿಯ ಮೇಲೆ ದುಷ್ಪರಿಣಾಮ ಬೀರುತ್ತದೆ.
ಉದಾ: ಕೈಗಾರಿಕೆ ಮತ್ತು ಕಾರ್ಖಾನೆಯಿಂದ ಹೋರ ಬಂದ ವಿಷಗಾಳಿಯ ಸೇವನೆಯಿಂದ (ಭೂಪಾಲ್ ಅನಿಲ ದುರಂತ) ಅನೇಕ ಜನರು ಸಾವನ್ನಪ್ಪಿದರೆ, ಇನ್ನು ಕೆಲವರು ಶ್ರವಣನ್ಯೂನ್ಯತೆ ಮತ್ತು ಅಂಗವೈಕಲ್ಯತೆಗೆ ಒಳಗಾಗಿದ್ದಾರೆ.
ಗರ್ಭಿಣಿಯರಿಗೆ ಸರಿಯಾದ ಆರೈಕೆ ಇಲ್ಲದಿರುವುದು: ಶ್ರವಣದೋಷದ ನ್ಯೂನ್ಯತೆಯು ಉಂಟಾಗಲು ಪ್ರಮುಖ ಕಾರಣ ಗರ್ಭಿಣಿಯ ಹಾರೈಕೆ ಸರಿಯಾಗಿಲ್ಲದಿರುವುದು, ಯಾವುದೇ ಮಗು ಆರೋಗ್ಯವಾಗಿ ಜನಿಸಬೇಕಾದರೆ ಗರ್ಭಿಣಿಯ ಪಾತ್ರ ಮುಖ್ಯವಾಗಿದೆ. ಅನೇಕ ಮಕ್ಕಳು ಹುಟ್ಟಿದ ತಕ್ಷಣ ಸಾಯುತ್ತಿದ್ದಾರೆ, ಹುಟ್ಟಿದ ವರ್ಷದ ಒಳಗೆ ಸಾವನ್ನಪ್ಪುವ ಮಕ್ಕಳು ಹಲವಾರು, ಭಾರತದಲ್ಲಿಹುಟ್ಟಿದ ಪ್ರತಿ ಸಾವಿರ ಮಕ್ಕಳಲ್ಲಿ ೮೫ ಮಕ್ಕಳು ಒಂದು ವರ್ಷದ ಒಳಗಾಗಿ ಸಾಯುತ್ತಿದಾರೆ. ಮಗು ಗರ್ಭದಲ್ಲಿದಾಗ ಗರ್ಭಿಣಿಯ ಹಾರೈಕೆ ಸರಿಯಾಗಿ ಇಲ್ಲದಿರುವುದು ಕಂಡುಬರುತ್ತದೆ. ಗರ್ಭಿಣಿ ಸ್ತ್ರೀ ಸರಿಯಾದ ಮುನ್ನೇಚ್ಚರಿಕೆ ಕ್ರಮಗಳನ್ನು ವಹಿಸಿರುವುದಿಲ್ಲ. ಗರ್ಭಾವಸ್ಥೆಯಲ್ಲಿ ಪೌಷ್ಟಿಕ ಆಹಾರ ಸೇವನೆ ಅತ್ಯಗತ್ಯ, ಅಲ್ಲದೆ ಸಮಯಕ್ಕೆ ಸರಿಯಾಗಿ ವೈದ್ಯಕೀಯ ಪರೀಕ್ಷೆ, ಕಬ್ಬಿಣಾಂಶ ಮಾತ್ರೆಗಳ ಸೇವನೆ, ಮಾನಸಿಕ ಆರೋಗ್ಯವನು ಕಾಪಾಡಿಕೊಳ್ಳುವುದು, ಗರ್ಭಿಣಿಯು ಹೆಚ್ಚು ತೂಕ ಹೊಂದಿರುವಂತಹ ಹಲವಾರು ಕ್ರಮಗಳು ಗರ್ಭಿಣಿ ಸ್ತ್ರೀಯು ಪಾಲಿಸಬೇಕು.
ಆದರೆ ಹಲವಾರು ಕಡೆ ಇಂತಹ ಸೌಲಭ್ಯಗಳಿಂದ ವಂಚಿತರಾಗಿದ್ದರೆ. ಹಳ್ಳಿಗಳಲ್ಲಿಯೂ ಇದರ ಸ್ಥಿತಿ ತೀರಾ ಗಂಭೀರವಾಗಿರುತ್ತದೆ. ಅದರಿಂದ ಅವರಿಗೆ ಹುಟ್ಟುವ ಮಗುವಿಗೆ ಬೆಳವಣಿಗೆಯಲ್ಲಿ ಕುಂಠಿತ ಕಾಣಬಹುದು, ಇದರಿಂದ ಕೇವಲ ಮಗುವಿಗೆ ಮಾತ್ರ ಹಾನಿಯಲ್ಲ ತಾಯಿಗೂ ಸಹ ಹಾನಿವುಂಟಾಗುತ್ತದೆ ಹಾಗೂ ಹೆರಿಗೆ ಕಷ್ಟಕರವಾಗಬಹುದು. ಕೆಲವೊಮ್ಮೆ ಹೆರಿಗೆ ಸಮಯದಲ್ಲೆ ಮರಣ ಹೊಂದಬಹುದು, ಹೆರಿಗೆಯ ನಂತರ ತಾಯಿ ನಿಶಕ್ತಳಾಗಬಹುದು, ಅದರಿಂದ ಗರ್ಭಿಣಿ ಸ್ತ್ರೀಯ ಆರೈಕೆ ಅತಿ ಮುಖ್ಯವಾಗಿದೆ.
ಅಸುರಕ್ಷಿತ ಹೆರಿಗೆ: ಶ್ರವಣದೋಷನ್ಯೂನ್ಯತೆಗೆ ಮಾತ್ತೋಂದು ಕಾರಣ ಅಸುರಕ್ಷಿತ ಹೆರಿಗೆ, ಆಸ್ಪತ್ರೆಗಳು ಇಲ್ಲದ ಕಾರಣ ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ಅನುಭವ ಇಲ್ಲದಿರುವುದರಿಂದ ಹೆರಿಗೆ ಮಾಡಿಸುವುದು ಹಾಗೂ ಹೆರಿಗೆಯ ಸಮಯದಲ್ಲಿ ಸುರಕ್ಷಿತ ಮತ್ತು ಶುಚಿತ್ವ ವಹಿಸದೇ ಇರುವುದರಿಂದ ಎಷ್ಟೋ ಮಕ್ಕಳು ಹೆರಿಗೆಯ ಸಮಯದಲ್ಲೆ ಅಸುನೀಗಿರುವುದು ಕಾಣಬಹುದು, ಅಸುರಕ್ಷಿತ ಹೆರಿಗೆಯಿಂದ ಮಗುವಿಗೆ ತಲೆಗೆ ಪೆಟ್ಟು ಬಿದ್ದು ಬುದ್ಧಿಮಾಂದ್ಯತೆ, ಮಾನಸಿಕ ಅಸ್ವಸ್ಥತೆ, ಹಾಗೂ ಶ್ರವಣದೋಷದ ನ್ಯೂನ್ಯತೆಗೆ ಕಾರಣವಾಗಬಹುದು.
ಯುದ್ಧಗಳು: ಇತ್ತೀಚಿನ ದಿನಗಳಲ್ಲಿ ಶ್ರವಣದೋಷಕ್ಕೆ ಕಾರಣವಾಗುತ್ತಿರುವ ಅಂಶಗಳಲ್ಲಿ ಪ್ರಮುಖವಾದುದು. ಯುದ್ಧಗಳು ಮತ್ತು ಮತಗಲಭೆಗಳು ಯಾರದೋ ಸ್ವಾರ್ಥಭಾವನೆಗಳಿಗೆ ಅಮಾಯಕರು ತೊಂದರೆಗಳಿಗೆ ತುತ್ತಾಗುತ್ತಿದ್ದಾರೆ ಇಂತಹ ಯುದ್ಧಗಳಿಂದ ಎಷ್ಟೋ ಜನರ ಪ್ರಾಣಹಾನಿ ಉಂಟಾಗುತ್ತಿದೆ. ಅನೇಕ ಜನ ಶ್ರವಣದೋಷ ಹಾಗೂ ಇನ್ನಿತರ ಅಂಗವೈಕಲ್ಯತೆಗೆ ತುತ್ತಾಗುತ್ತಿದಾರೆ, ಅಲ್ಲಿ ಉಪಯೋಗಿಸುವ ರಾಸಾಯನಿಕ ಬಾಂಬ್‌ಗಳು ಮತ್ತು ಶಸ್ತ್ರಾಸ್ತ್ರಗಳಿಂದ ಆ ಪ್ರದೇಶ ವಾತಾವರಣ ಹದಗೆಡುತ್ತಿದೆ, ಇದರಿಂದ ಇಲ್ಲಿ ಹುಟ್ಟುವ ಮಕ್ಕಳು ಹಲವಾರು ನ್ಯೂನ್ಯತೆಯಂತಹ ತೊಂದರೆಗಳಿಗೆ ಒಳಗಾಗುತ್ತಿದ್ದಾರೆ.
ಇದಕ್ಕೊಂದು ಉತ್ತಮ ಉದಾಹರಣೆ ಎಂದರೆ ೨ನೇ ಜಾಗತಿಕ ಮಹಾಯುದ್ಧದಲ್ಲಿ ಅಮೇರಿಕಾ ಜಪಾನಿನ ಮುಖ್ಯ ನಗರಗಳಾದ ಹಿರೋಷಿಮಾ ಮತ್ತು ನಾಗಸಾಕಿಯ ಮೇಲೆ ಅಣುಬಾಂಬ್ ಹಾಕಿದಾಗ ಲಕ್ಷಗಟ್ಟಲೆ ಜನ ಸಾವನ್ನಪ್ಪಿದರು. ಅಳಿದುಳಿದವರು ವಿವಿಧ ರೀತಿಯ ನ್ಯೂನ್ಯತೆಗೆ ಒಳಗಾಗಿದ್ದರು. ಹುಟ್ಟುತಿರುವ ಮಕ್ಕಳ ಮೇಲೂ ವ್ಯತಿರಿಕ್ತ ಪ್ರಭಾವವಾಗಿದೆ.
 ಮಕ್ಕಳಿಗೆ ಸರಿಯಾದ ಸಮಯಕ್ಕೆ ಚುಚ್ಚುಮದ್ದುಗಳು ಹಾಗೂ ಲಸಿಕೆ ಕೊಡಿಸದೇ ಇರುವುದು: ಒಂದು ಮಗು ಆರೋಗ್ಯಯುತವಾಗಿ ಬೆಳೆಯಬೇಕಾದರೆ ಮಗು ಹುಟ್ಟಿದಾಗಿನಿಂದ ಐದು ವರ್ಷದವರೆಗೂ ಅನೇಕ ಲಸಿಕೆ ಮತ್ತು ಚುಚ್ಚುಮದ್ದುಗಳನ್ನು ಕೊಡಿಸಬೇಕು. ಹುಟ್ಟಿದ ವಾರದೊಳಗೆ ಬಿ. ಸಿ. ಜಿ ಹಾಕಿಸಬೇಕು. ಇದು ಬಾಲಕ್ಷಯರೋಗವನ್ನು ತಡೆಯುತ್ತದೆ. ಅದೇ ರೀತಿ ೩ ತಿಂಗಳು ತುಂಬಿದ ಮೇಲೆ ಡಿ. ಪಿ. ಟಿ ಚುಚ್ಚುಮದ್ದು ಹಾಕಿಸಬೇಕು. ಇದು ಗಂಟಲು ಮಾರಿ ಮತ್ತು ನಾಯಿ ಕೆಮ್ಮು ರೋಗವನ್ನು ತಡೆಯುತ್ತದೆ, ೯ ತಿಂಗಳು ತುಂಬಿದಾಗ ದಡಾರ ರೋಗ ನಿಯಂತ್ರಣಕ್ಕಾಗಿ ಮೀಸಲ್ಸ್ನ್ನು ಕೊಡಬೇಕಾಗುತ್ತದೆ. ಅಲ್ಲದೆ ಐದು ವರ್ಷದವರೆಗೂ ವರ್ಷಕ್ಕೆ ಎರಡು ಬಾರಿ ಪೋಲೀಯೋ ಲಸಿಕೆ ನೀಡಬೇಕು, ಇವೆಲ್ಲಾ ಮಕ್ಕಳ ಆರೋಗ್ಯಯುತ ಜೀವನಕ್ಕೆ ಅತೀ ಅವಶ್ಯಕ.
ಸರಿಯಾದ ರೀತಿಯಲ್ಲಿ ಚುಚ್ಚುಮದ್ದು ಲಸಿಕೆಗಳನ್ನು ಕೊಡಿಸುವುದರಿಂದ ಮಕ್ಕಳು ಶ್ರವಣದೋಷದ ಮತ್ತು ಇತರೆ ಅಂಗವೈಕಲ್ಯತೆಯಿಂದ ತಡೆಯಿಡಿಯಬಹುದು, ಇದಕ್ಕೊಂದು ಉತ್ತಮ ಉದಾಹರಣೆ ಎಂದರೆ : ೧೯೫೧ ರಲ್ಲಿ ೨೯೭೦೯ ಪೋಲೀಯೋ ಪ್ರಕರಣ ದಾಖಲಾಗಿತ್ತು. ಇದು ೧೯೮೧ ರ ವೇಳೆಗೆ ೨೨೫ ಕ್ಕೆ ಇಳಿದಿದ್ದು ೨೦೦೩ ಕ್ಕೆ ೨೧೪ಕ್ಕೆ ಇಳಿದಿರುವುದು ಒಂದು ಸಾಧನೆ ಎಂದು ಹೇಳಬಹುದು.
ಮೂಢನಂಬಿಕೆಗಳು: ಇದು ಸಹ ಶ್ರವಣ ನ್ಯೂನ್ಯತೆಗೆ ಪ್ರಮುಖ ಕಾರಣ, ದೊಡ್ಡವರ ಯಾವುದೋ ಆಚಾರ-ವಿಚಾರಗಳಿಗೆ ಮತ್ತು ಅವರ ಸಿದ್ಧಾಂತಗಳಿಗೆ ಮಕ್ಕಳು ಬಲಿಪಶುಗಳಾಗುತ್ತಿದಾರೆ.
ಮಗು ಯಾವುದೊ ತೊಂದರೆಗೆ ಸಿಲುಕಿದರೇ ಕಾಯಿಲೆಗೆ ತುತ್ತಾಗಿದ್ದರೆ ಅಥವ ಕಿವಿಯ ಸೋರುವಿಕೆಗೆ ಒಳಗಾಗಿದ್ದರೆ ತಮ್ಮ ಮೂಢನಂಬಿಕೆಗಳಿಂದ ಇದೆಲ್ಲಾ ದೇವರ ಶಾಪ, ಕೋಪ, ಕೂದಲು ಬಲಿಕೊಡುವಿಕೆ, ಪೂಜೆ ಮಾಡಿಸುವುದರಿಂದ ಸರಿಹೋಗುತ್ತದೆ, ಎಂದೆಲ್ಲಾ ತಿಳಿದು ಇವೆಲ್ಲಾ ಮಾಡುಸುವಷ್ಟರಲ್ಲಿ ಆ ಕಾಯಿಲೆಗೆ ತುತ್ತಾಗಿರುವ ಮಕ್ಕಳ ತಲೆಬುರುಡೆಯಲ್ಲಿ ಕಿವಿಸೋರುವಿಕೆಯಿಂದ ಕೊಳೆಯುವುದಕ್ಕೆ ಪ್ರಾರಂಭಿಸುತ್ತದೆ, ಇದರಿಂದ ಶ್ರವಣದಲ್ಲಿನ ತಮಟೆ ಅರಿಯಲ್ಲಿಕ್ಕೆ ಪ್ರಾರಂಭಿಸಿ ತಮಟೆ ತೂತು ಬಿದ್ದು ಕಿವಿ ಕೇಳಿಸದಂತೆ ಆಗುತ್ತದೆ.
ಬಡತನ: ಬಡತನದಿಂದ ಮನುಷ್ಯ ಅಪೌಷ್ಟಿಕತೆಯನ್ನು ಅನುಭವುಸುತ್ತಾನೆ, ಇದರಿಂದ ಅವನ ಜೀವನ ಗುಣಮಟ್ಟ ಕಡಿಮೆಯಾಗಿರುತ್ತದೆ, ಅಪಾಯಕಾರಿ ಕೆಲಸಗಳಲ್ಲಿ ತೊಡಗಿ ಶ್ರವಣದೋಷಕ್ಕೆ ಒಳಗಾಗಿ ಇಂತಹ ನ್ಯೂನ್ಯತೆಯಿಂದ ಹೊರಬರಲ್ಲಿಕ್ಕೆ ಆರ್ಥಿಕ ಸಮಸ್ಯೆ ಎಂಬುದು ಎದ್ದು ಕಾಣುತ್ತದೆ, ಇದರಿಂದ ಶಸ್ತ್ರಚಿಕಿತ್ಸೆಗೂ ಹಣ ಒದಗಿಸಲಾಗದೆ, ಜೀವನ ಪೂರ್ತಿ ಶ್ರವಣದೋಷದ ಸಮಸ್ಯೆಯಿಂದಲೇ ಬಳಲುತ್ತಾನೆ.

 ಇತರೆ ಈ ಕೆಳಗಿನ ಅಂಶಗಳು ಶ್ರವಣನ್ಯೂನ್ಯತೆಗೆ ಪ್ರಮುಖ ಕಾರಣಗಳಾಗಿವೆ.
ಗರ್ಭಿಣಿಗೆ ಸೋಂಕು ರೋಗಗಳು ಬರುವುದರಿಂದ
ಜರ್ಮೆನ್, ದಡಾರ, ಮೀಸಲ್ಸ್ ಎಂಬ ಜ್ವರಗಳಿಂದ
ಮೆದುಳು ಜ್ವರದಿಂದ
ಕ್ಷ-ಕಿರಣಗಳಿಂದ
ಪೌಷ್ಟಿಕ ಆಹಾರದ ಕೊರತೆಯಿಂದ
ತಾಯಿ ಮತ್ತು ಮಗುವಿನಲ್ಲಿ ರಕ್ತದ ಗುಂಪುಗಳು ಒಂದೇ ಇರುವುದರಿಂದ
ಪದೇ ಪದೇ ಗರ್ಭಪಾತ ಮಾಡಿಸಿಕೊಳ್ಳುವುದರಿಂದ
ರಕ್ತ ಸಂಬಂದದಲ್ಲಿ ಮದುವೆ ಆಗುವುದರಿಂದ
ವೈದ್ಯರ ಸಲಹೆ ಇಲ್ಲದೆ ಔಷಧಿಗಳನ್ನು ಬಳಸುವುದರಿಂದ
ಹುಟ್ಟಿದ ತಕ್ಷಣ ಮಗುವಿನ ಆಮ್ಲಜನಕ ಕೊರತೆ ಉಂಟಾದಲ್ಲಿ
ಮಗು ಹುಟ್ಟಿದ ತಕ್ಷಣ ಅಳದಿರುವುದು
ಅವಧಿಗೆ ಮುನ ಮಗು ಜನಿಸುವುದರಿಂದ
ಮಗುವಿನ ೧ ಕೆ ಜಿ ಗಿಂತ ಕಡಿಮೆ ತೂಕ ಇದ್ದಲ್ಲಿ
ಹೆರಿಗೆ ಸಮಯದಲ್ಲಿ ಸ್ವಚ್ಚತೆ ಇಲ್ಲದೆ ವೈದ್ಯಕೀಯ ಉಪಕರಣಗಳನ್ನು ಬಳಕೆ ಮಾಡುವುದರಿಂದ
ಮೆದಳು ಜ್ವರ . ಕಾಮಾಲೆ ರೋಗ (ಜಾಂಡೀಸ್) ಇತ್ಯಾದಿಗಳಿಂದ
ಪದೇ ಪದೇ ಕಿವಿ ಸೋರುವಿಕೆಯಿಂದ
ಮೆದಳು ಜ್ವರ ,ಟೈಫಾಯಿಡ್ ಜ್ವರ ಮತ್ತು ಜಾಂಡೀಸ್ ಮೊದಲಾದವುಗಳಿಂದ
ಅಪಘಾತಕ್ಕೆ ಒಳಗಾಗಿ ಕಿವಿಯ ಅಂಗಗಳಿಗೆ ತೊಂದರೆಗಳಾಗುವುದರಿಂದ

ಶ್ರವಣದೋಷವುಳ್ಳ ಮಕ್ಕಳ ಡೆಸಿಬಲ್‌ಗಳ ಮಟ್ಟ:
 ಜೀವನ ನಿರ್ವಹಣೆಗೆ ಬೇಕಾಗಿರುವ ಶ್ರವಣಸಾಮಾರ್ಥ್ಯ ಇಲ್ಲದವರು ಶ್ರವಣದೋಷವುಳ್ಳವರು.
ಅವರಿಗೆ ಶಬ್ಧವನ್ನು ಹೆಚ್ಚಿಸುವ ಯಂತ್ರವನ್ನು ಕೊಟ್ಟರೂ ಶಬ್ಧದ ಪರಿಚಯ ಆಗುವುದಿಲ್ಲ, ಶ್ರವಣ ಸಾಮರ್ಥ್ಯವನ್ನು ( ಕೀಳಿಸಿಕೊಳ್ಳುವ ಮಟ್ಟವನ್ನು ) ಡೆಸಿಬಲ್‌ಗಳೆಂದು ಅಳೆಯುತ್ತಾರೆ . ೬೦ ಡೆಸಿಬಲ್‌ಗಿಂತ ಹೆಚ್ಚಾಗಿ ಕೇಳಿಸುವಿಕೆಯ ನಷ್ಟವಿದ್ದರೆ ಮಾತು ಕೇಳುವುದಿಲ್ಲ.
ಶ್ರವಣ ಪರೀಕ್ಷೆಯ ಆಧಾರದ ಮೇಲೆ ಶ್ರವಣದೋಷವಿರುವ ಮಕ್ಕಳನ್ನು ಈ ಕೆಳಗಿನಂತೆ ವರ್ಗಿಕರಿಸಬಹುದು.

ಕೇಳಿಸಿಕೊಳ್ಳುವ ಮಟ್ಟ (ಡೆಸಿಬಲ್‌ಗಳಲ್ಲಿ)
ಕೇಳುವ ಶಕ್ತಿಯ ಕೊರತೆ/ದೋಷ ೦-೨೫
ಸಾಮಾನ್ಯ ೨೬-೪೦
ಲಘು ೪೧-೫೫
ಸುಮಾರು ೫೬-೭೦
ಸುಮಾರಾಗಿ ತೀವ್ರ ೭೧-೯೦
ತೀವ್ರ ೯೧ ಕ್ಕಿಂತ ಹೆಚ್ಚಿದ್ದರೆ
ನಿಮ್ಮಮಗುವಿನಲ್ಲಿ ಈ ಕೆಳಗಿನ ಲಕ್ಷಣಗಳು ಕಂಡುಬರುತ್ತವೆಯೇ ಗಮನಿಸಿ
 ಲಘುಯಿಲ್ಲದ ಜೋರಾದ ಶಬ್ಧಕ್ಕೆ ಸ್ಪಲ್ಪ ಮಟ್ಟಿನ ಪ್ರತಿಕ್ರಿಯೆ ಅಥವಾ ಪ್ರತಿಕ್ರಿಯಿಸದೇ ಇರುವುದು
 ೬-೮ ತಿಂಗಳ ತೊದಲನ್ನು ನಿಲ್ಲಿಸದಿರುವುದು
ಶಬ್ಧ ಮಡುವ ಆಟಿಕೆಗಳೊಂದಿಗೆ ಆಡಲು ಇಷ್ಟಪಡದೇ ಇರುವುದು.
ಸನ್ನೆ ಮಾಡದೆ ಬರೀ ಮಾತಿನಿಂದ ಹೇಳಿದರೆ ಅರ್ಥ ಮಡಿಕೊಳ್ಳಲು ಕಷ್ಟಪಡುವುದು
 ನೋಡಿ ಗ್ರಹಿಸುವ ಸಂಧರ್ಭವಿಲ್ಲದಿದ್ದರೆ ಇದನ್ನು ಅರ್ಥ ಮಾಡಿಕೊಳ್ಳದಿರುವುದು.
 ೫-೧೦ ಅಡಿಗಳ ಅಂತರದಿಂದ ಕಳೆದರೇ ಪ್ರತಿಕ್ರಿಯಿಸದಿರುವುದು .
ದೂರದರ್ಶನ ರೇಡಿಯೊ ಕೇಳುವಾಗ ಅದರ ಶಬ್ಧವನ್ನು ಹೆಚ್ಚಿಸುವುದು.
ಉಚ್ಚಾರಣೆ ಮತ್ತು ಸ್ವರದಲ್ಲಿ ಸಮಸ್ಯೆ ತೋರಿಸುವುದು.
ಇವುಗಳಲ್ಲಿ ಮೂರಕ್ಕಿಂತ ಹೆಚ್ಚು ಸಮಸ್ಯೆಗಳು ಕಂಡು ಬಂದರೆ ಆ ಮಗುವಿನ ಶ್ರವಣ ನ್ಯೂನ್ಯತೆ ಇರಬಹುದು

ಮಕ್ಕಳಲ್ಲಿ ಶ್ರವಣದೋಷವಿರುವುದನ್ನು ಪತ್ತೆಹಚ್ಚುವ ತಪಶೀಲು ಪಟ್ಟಿ
ವಯಸ್ಸು    ಪ್ರತಿಕ್ರಿಯೆ
೦-೩ ತಿಂಗಳು. ಜೋರಾದ ಶಬ್ಧ ಗಡಿಯಾರದ ಅಲಾರಾಂ, ಚಪ್ಪಾಳೆಗೆ ನಿದ್ದೆಯಿಂದ ಎಚ್ಚರಗೊಳ್ಳುವುದು.
೬-೯ ತಿಂಗಳು. ಶಬ್ಧಬಂದ ದಿಕ್ಕಿಗೆ ತಿರುಗಿ ನೋಡುವುದು.
೯-೧೮ ತಿಂಗಳು. ಬೇಡ ಎಂಬುದಕ್ಕೆ ಅರ್ಥ ತಿಳಿದಿರುವುದು . ಜೊತೆಗೆ ಬಾ-ಹೋಗು, ನಿಲ್ಲು- ಕೂರು, ತಗೋ-ಕೋಡು, ಇಂತಹ ಸರಳ ಮಾತುಗಳನ್ನು ಅರ್ಥ ಮಾಡಿಕೊಂಡು ಅದಕ್ಕೆ ತಕ್ಕದಾಗಿ ವರ್ತಿಸುವುದು.
೧೮ ತಿಂಗಳ ಮೇಲೆ. ಸರಳ ವಾಕ್ಯಗಳನ್ನು ತಿಳಿದುಕೊಂಡು ಅದರಂತೆ ನಡೆಯುವುದು, ಉದಾಹರಣೆ, ಆ ಪುಸ್ತಕ ಕೊಡು.
೫ ವರ್ಷ ೦೮ ತಿಂಗಳು ನಿಂದ ೧೧ ವರ್ಷ. ಈ ವಯಸ್ಸಿನಲ್ಲಿ ಮಕ್ಕಳು ತಮ್ಮ ನೆರೆಹೊರೆಯ ಜನರ ಹೆಸರು ಪ್ರಕೃತಿಯಲ್ಲಿ ಕಾಣುವಂತಹ ಚಿತ್ರಗಳ ಕಲ್ಪನೆ, ಸ್ವಾಭಾವಿಕವಾಗಿ ನೈಜ ವಸ್ತುಗಳ ಮನನ ಮಾಡಿಕೊಳ್ಳುವಿಕೆ ಹಾಗೂ ಕ್ಷಣದಲ್ಲಿ ಪ್ರತಿಕ್ರಿಯಿಸುವಿಕೆ. ಉದಾಹರಣೆ ತಂದೆಯನ್ನು ಕರೆದುಕೊಂಡು ಬಾ, ಒಂದು ಕೆ. ಜಿ ಉಪ್ಪನ್ನು ಅಂಗಡಿಯಿಂದ ತೆಗೆದುಕೊಂಡು ಬಾ.
೧೧ ವರ್ಷದಿಂದ ೧೬ ವರ್ಷ. ಈ ಒಂದು ಹಂತದಲ್ಲಿ ಕಲಿಕಾ ಪ್ರಗತಿ ಹೆಚ್ಚಾಗಿದ್ದು ಸಾಮಾನ್ಯ ಮಕ್ಕಳಂತೆಯೇ ಪ್ರತಿಕ್ರಿಯೆ ನೀಡುವುದರಲ್ಲಿ ಮುಂದಾಗುತ್ತಿರುತ್ತಾರೆ. ಉದಾಹರಣೆ ಪ್ರಶ್ನೆಗೆ ಉತ್ತರ ಬರೆಯುವುದು, ಕೊಟ್ಟ ಕೆಲಸವನ್ನು ನಿಷ್ಠೆಯಿಂದ ಮಾಡುವುದು.
೧೬ ವರ್ಷದಿಂದ ೨೦ ವರ್ಷ. ಈ ವಯಸ್ಸಿನಲ್ಲಿ ಶ್ರವಣ ನ್ಯೂನ್ಯತೆ ಇರುವುದಕ್ಕೆ ಪ್ರಮುಖ ಕಾರಣ ಏನೆಂಬುದನ್ನು ಅರಿಯುತ್ತಾರೆ. ತನ್ನ ಪಾತ್ರ ಸಮಾಜದಲ್ಲಿ ಏನಿರಬಹುದು ಎಂಬುದನ್ನು ಅರಿಯುತ್ತಾನೆ, ಎಲ್ಲರಂತೆ ತಾನು ಸಮಾನವಾಗಿ ಬದುಕಬೇಕು ಎಂಬ ಭಾವನೆ, ಕಲಿಕೆಯಲ್ಲಿ ಮುನ್ನೆಡೆ ಹಾಗೂ ವೃತ್ತಿಪರತೆಯಲ್ಲಿ ಸಂಸಾರದ ಜವಾಬ್ದಾರಿಯಲ್ಲಿ, ಸಾಧನೆಗೈಯುವಂತನಾಗುತ್ತಾನೆ.

ಶ್ರವಣದೋಷವುಳ್ಳ ಮಕ್ಕಳಿಗೆ ಸಂವಿಧಾನಬದ್ಧವಾಗಿ ನೀಡಲ್ಪಟ್ಟಿರುವ ಹಕ್ಕುಗಳು:
ವಿಶ್ವಸಂಸ್ಥೆಯು ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದಂತೆ ೧ ರಿಂದ ೫೪ ಪರಿಚ್ಛೇದಗಳನ್ನು ಒಳಗೊಂಡಿದ್ದು, ಶ್ರವಣದೋಷವುಳ್ಳ ಮಕ್ಕಳಿಗೆ ಹಕ್ಕುಗಳಲ್ಲಿ ಸಮಾನತೆಯನ್ನು ನೀಡಿದೆ, ಇದು ೧೯೮೯ ರಲ್ಲಿ ಈ ಹಕ್ಕುಗಳು ಜಾರಿಗೆ ಬಂದವು.
ಪರಿಚ್ಛೇದ-೦೨: ಮಕ್ಕಳ ನಡುವೆ ತಾರತಮ್ಯ/ ಭೇದಭಾವ ಇರಬಾರದು.
ಸಮುದಾಯದಲ್ಲಿ, ಮನೆಯಲ್ಲಿ, ಶಾಲೆಯಲ್ಲಿ, ಮಕ್ಕಳನ್ನು ಹಳ್ಳಿಗಾಡಿನವ, ನಗರದವ, ಶ್ರವಣನ್ಯೂನ್ಯತೆಯಿರುವವ ಹಾಗೂ ಜಾತಿ, ಬಣ್ಣ ಇತ್ಯಾದಿಗಳಿಂದ ಭೇದಭಾವ ಮಾಡಬಾರದು, ಎಲ್ಲರನ್ನು ಸಮಾನತೆಯಿಂದ ಕಾಣಬೇಕು.
ಪರಿಚ್ಛೇದ-೦೬: ಎಲ್ಲಾ ಮಕ್ಕಳಿಗೂ ಜೀವಿಸುವ ಹಕ್ಕು ಇದೆ.
ಮಕ್ಕಳಿಗೆ ಬದುಕುವ ಹಕ್ಕು ಇದೆ. ಯಾವುದೇ ಮಗು ಅಸ್ವಾಭಾವಿಕ ಸಾವಿಗೆ ಗುರಿಯಾಗದಂತೆ, ಸಮುದಾಯ ವ್ಯವಸ್ಥೆ ನೋಡಿಕೊಳ್ಳಬೇಕು. ಇದರಲ್ಲಿ ಯಾವುದೇ ಕಾರಣಕ್ಕೂ ಶ್ರವಣನ್ಯೂನ್ಯತೆ ಮಕ್ಕಳನ್ನು ನಿರ್ಲಕ್ಷಿಸುವಂತಿಲ್ಲ.
ಪರಿಚ್ಛೇದ-೦೮: ಮಕ್ಕಳ ವ್ಯಕ್ತಿತ್ವಕ್ಕೆ ಧಕ್ಕೆ ಬರಬಾರದು.
ಇಲ್ಲಿ ಪ್ರತಿಯೊಂದು ಮಗುವು ದೇಶದ ಪ್ರಜೆಯೇ ಆಗಿರುವುದರಿಂದ ಆತನ ಜಾತಿ, ಧರ್ಮ,ವರ್ಗ, ಭಾಷೆ, ಅಂಗವೈಕಲತೆಯ ಬಗ್ಗೆ ಧಕ್ಕೆ ಬರಬಾರದು.
ಪರಿಚ್ಛೇದ-೧೨: ಮಕ್ಕಳ ವಿಚಾರಣೆಗೆ ಸಂಬಂಧಿಸಿದ ಪ್ರತಿಯೊಂದರ ಬಗ್ಗೆ ಅಭಿಪ್ರಾಯ ತಿಳಿಸುವ ಹಕ್ಕು ಸಾಮಾನ್ಯ ಮಕ್ಕಳಂತೆಯೇ ಶ್ರವಣದೋಷ ಮಕ್ಕಳಿಗೂ ಇದೆ. ಈ ಅಭಿಪ್ರಾಯವನ್ನು ವಯಸ್ಕರು ಆಲಿಸಿ ಚರ್ಚಿಸಬೇಕು. ತಮಗೆ ಬೇಕಾದ ಅಭಿಪ್ರಾಯಗಳನ್ನು ವಯಸ್ಕರು ಬಲವಂತವಾಗಿ ಮಕ್ಕಳಿಗೆ ಹೊರಿಸುವುದು ತಪ್ಪು, ಅಡ್ಡಿ, ಭಯ, ಆತಂಕ, ಒತ್ತಡವಿಲ್ಲದ ವಾತಾವರಣದಲ್ಲಿ ಸಾಮಾನ್ಯ ಮಕ್ಕಳ ಮಾತಿನಂತೆ ಶ್ರವಣದೋಷ ಮಕ್ಕಳ ಮಾತನ್ನು ಕೇಳಬೇಕು.
ಪರಿಚ್ಛೇದ-೧೮: ಮಕ್ಕಳ ಒಳಿತು ಪೋಷಕರ ಜವಾಬ್ದಾರಿ
ಮಕ್ಕಳ ಆರೈಕೆ ಲಾಲನೆ ಪಾಲನೆ ರಕ್ಷಣೆ ನೀಡುವುದರಲ್ಲಿ ಪೋಷಕರದ್ದೇ ಮೊದಲ ಪಾತ್ರ. ಸರ್ಕಾರ, ಸಮುದಾಯ, ಶಾಲೆ, ಮತ್ತಿತರೆ ವ್ಯವಸ್ಥೆಗಳೂ ಕೂಡ ಶ್ರವಣದೋಷ ಮಕ್ಕಳ ಹಾಗೂ ಸಾಮಾನ್ಯ ಮಕ್ಕಳು ಎಂಬ ಭೇದವಿಲ್ಲದೆ ಎಲ್ಲರನ್ನು ಪ್ರೀತಿಯಿಂದ ಪೋಷಕರು ಪೋಷಿಸಬೇಕು.
ಪರಿಚ್ಛೇದ-೨೩: ಶ್ರವಣದೋಷ ಇರುವ ಮಕ್ಕಳಿಗೆ ರಕ್ಷಣೆ ನೀಡಬೇಕು.
ಯಾವುದೇ ರೀತಿಯ ಶ್ರವಣದೋಷ ಮಕ್ಕಳಿಗೆ ಇದ್ದರೂ ಅವರನ್ನು ಎಲ್ಲ ಮಕ್ಕಳಂತೆಯೇ ನೋಡಿಕೊಳ್ಳಬೇಕು. ಶ್ರವಣದೋಷತೆಯಿಂದಾಗಿ ಮಕ್ಕಳು ಹಿಂದುಳಿಯುವಂತಾಗಬಾರದು, ಮಕ್ಕಳಗೌರವಳಿಗೆ ತೊಂದರೆಯಾಗದಂತೆ ಶುಲ್ಕರಹಿತ ಶಿಕ್ಷಣ, ಆರೋಗ್ಯ ವ್ಯವಸ್ಥೆ, ಸಾಧನ ಸಲಕರಣೆಗಳ ಸರಬರಾಜು ವಿಶೇಷ ಶಿಕ್ಷಣ ತರಬೇತಿ, ಆಟೋಟಗಳಿಗೆ ಅವಕಾಶ, ಮುಂದೆ ಉದ್ಯೋಗವಕಾಶಕ್ಕೆ ಸಿದ್ಧತೆ ನೀಡಬೇಕು. ಶ್ರವಣದೋಷ ಇರುವ ಮಕ್ಕಳಿಗೆ ಶಾಲೆಯೂ ಸೇರಿದಂತೆ ಎಲ್ಲೆಡೆ ಮೂಲಭೂತ ವ್ಯವಸ್ಥೆಗಳು ಇರಬೇಕು.
ಪರಿಚ್ಛೇದ-೨೪: ಎಲ್ಲಾ ಮಕ್ಕಳಿಗೆ ಮೂಲಸೇವೆಗಳನ್ನು ಒದಗಿಸಬೇಕು.
ಪ್ರತಿಯೊಂದೂ ಮಗುವಿಗೂ ಶುದ್ಧ ಕುಡಿಯುವ ನೀರು, ಚುಚ್ಚುಮದ್ದುಗಳ ಸೌಲಭ್ಯ, ಪೌಷ್ಠಿಕ ಆಹಾರ ಮುಂತಾದವುಗಳು ಸ್ಥಳೀಯವಾಗಿ ದೊರೆಯುವಂತೆ ಮಾಡುವುದು. ಅದರಂತೆ ವಿಶೇಷವಾಗಿ ಶ್ರವಣದೋಷ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸಬೇಕು.
ಪರಿಚ್ಛೇದ-೨೬: ಎಲ್ಲಾ ಮಕ್ಕಳಿಗೂ ಸಾಮಾಜಿಕ ಭದ್ರತೆಯನ್ನು ನೀಡಬೇಕು.
ಮಕ್ಕಳೆಂದರೆ ಕೇವಲ ದೊಡ್ಡವರ ಭಾಷಣದ ವಸ್ತುಗಳಲ್ಲ ಅಥವ ಯೋಜನೆಗಳಲ್ಲಿ ಬಂದು ಹೋಗುವ ಫಲಾನುಭವಿಗಳಲ್ಲ, ಅಂದರೆ ಶ್ರವಣದೋಷ ಮಕ್ಕಳಿಗೆ ಸರ್ಕಾರದಿಂದ ಸಿಗಬೇಕಾದ ಎಲ್ಲಾ ರೀತಿಯ ಸೌಲಭ್ಯ ದೊರಕಿಸಿಕೊಟ್ಟು ಅವರ ಬದುಕನ್ನು ಉತ್ತಮಗೊಳಿಸುವುದು.
ಪರಿಚ್ಛೇದ-೨೮,೨೯: ಎಲ್ಲ ಮಕ್ಕಳಿಗೆ ತಾರತಮ್ಯವಿಲ್ಲದ ಶಿಕ್ಷಣ ಪಡೆಯುವ ಹಕ್ಕು ಇದೆ.
ಸ್ವಾತಂತ್ರ್ಯ ನಮ್ಮ ಜನ್ಮಸಿದ್ಧ ಹಕ್ಕು, ಈ ಸ್ವಾತಂತ್ರ್ಯವನ್ನು ಅರ್ಥಬದ್ಧವಾಗಿ ಉಳಿಸಿ ಬೆಳಿಸಿ ಹಂತಹಂತವಾಗಿ ಮಕ್ಕಳು ಎಲ್ಲರೊಡನೆ ಬೆಳೆಯಬೇಕೆಂದರೆ ಎಲ್ಲಾ ಮಕ್ಕಳಿಗೆ ಸಮಾನ ಶಿಕ್ಷಣ ದೊರೆಯಬೇಕು. ೧೯೯೨ ರಲ್ಲಿ ಸರ್ವೋಚ್ಚನ್ಯಾಯಾಲಯದ ನ್ಯಾಯಮೂರ್ತಿ ಜೀವನ್‌ರೆಡ್ಡಿಯವರು ಹೇಳಿರುವಂತೆ ನಮಗೆ ಜೀವಿಸುವ ಹಕ್ಕು ( ವಿಧಿ ೨೧) ಇದೆ ಎಂದರೆ ಶಿಕ್ಷಣದ ಹಕ್ಕು ಇದೆ ಎಂದರ್ಥ, ಇಲ್ಲಿ ಎಲ್ಲಾ ಮಕ್ಕಳಂತೆಯೂ ಶ್ರವಣದೋಷವುಳ್ಳ ಮಕ್ಕಳು ಸಮಾನ ಶಿಕ್ಷಣ ಪಡೆಯಲು ಅರ್ಹರಾಗಿರುತ್ತಾರೆ.

ಶ್ರವಣನ್ಯೂನ್ಯತೆಗೆ ಸಂಬಂಧಿಸಿದಂತೆ ಕಾರ್ಯಾನಿರ್ವಹಿಸುತ್ತಿರುವ ಸರ್ಕಾರೇತರ ಸಂಸ್ಥೆಗಳು:
ಕ್ರ. ಸಂ     ಸಂಸ್ಥೆಯ ಹೆಸರು     ವಿಳಾಸ ಸಂಪರ್ಕದ ವಿವರ
೧.
 ದಿ ಅಸೋಸಿಯೇಷನ್ ಅಫ್ ಪೀಪಲ್ ವಿತ್ ಡಿಸೆಬಿಲಿಟಿ (ಎ. ಪಿ. ಡಿ) ೬ನೇ ಅಡ್ಡರಸ್ತೆ, ಹಚ್ಚಿನ್ಸ್‌ರಸ್ತೆ, ಹೆಣ್ಣೂರು ಮುಖ್ಯರಸ್ತೆ, ಸಂತಥಾಮಸ್‌ಟೌನ್ ಅಂಚೆ, ಲಿಂಗರಾಜಪುರಂ ಬೆಂಗಳೂರು.
೨. ಸಂವಾದ ಇನ್ಸಿಟಿಟ್ಯೂಟ್ ಅಫ್ ಸ್ಪೀಚ್ ಆಂಡ್ ಹಿಯರಿಂಗ್
 ೩. ಡಾ. ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆ ಹೆಣ್ಣೂರು ಮುಖ್ಯರಸ್ತೆ, ಕರಿಯಣ್ಣನ ಪಾಳ್ಯ ಲಿಂಗರಾಜಪುರಂ, ಬೆಂಗಳೂರು.
೪. ಶೀಲಾ ಕೋತ್ತವಾಲ ವಾಕ್ ಮತ್ತು ಶ್ರವಣ ಮಕ್ಕಳ ಶಾಲೆ, ರುಸ್ತುಂ ಭಾಗ್, ಮಣಿಪಾಲ್ ಆಸ್ಪತ್ರೆ ಹಿಂಭಾಗ, ಹಳೇ ಹೆಚ್. ಎ. ಎಲ್. ರಸ್ತೆ, ಬೆಂಗಳೂರು.
೫. ರಾಷ್ಟ್ರೀಯ ಕಿವುಡ ಮತ್ತು ಮೂಕ ಮಕ್ಕಳ ಶಾಲೆ, ಸಿ. ಎ-೬ ಮಿನಿ ಬಾಲ ಭವನ ಹಿಂಭಾಗ ,ಜೀವನ್‌ಭೀಮಾನಗರ ಬೆಂಗಳೂರು
೬. ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಮಾನಸ ಗಂಗೋತ್ರಿ ವಾಕ್ ಮತ್ತು ಶ್ರವಣ ಸಂಸ್ಥೆ ತಿಲಕ್ ನಗರ ಮೈಸೂರು.
೭. ಸಾಯಿರಂಗ ವಿದ್ಯಾಸಂಸ್ಥೆ ಕಿವುಡ ಗಂಡು ಮಕ್ಕಳ ವಸತಿ ಶಾಲೆ, ೭೬೪/ಎ. ಬಿ ಲೇಔಟ್, ಬಿನ್ನಿ ಮಂಟಪ ,ಮೈಸೂರು.
೮. ತಶೃಂಗ ವಿಧ್ಯಾ ಸಂಸ್ಥೆ, ಶ್ರೀ ಸಾಯಿ ಸ್ನೇಹ ಧರ್ಮ ಹಿರಿಯ ನಾಗರೀಕರ ಸಂಸ್ಥೆ ,ಮಾಗಡಿ ಮುಖ್ಯರಸ್ತೆ,ಕಾಮಾಕ್ಷಿಪಾಳ್ಯ ಬೆಂಗಳೂರು
೯. ಶ್ರೀಮತಿ ಪುಟ್ಟುವೀರಮ್ಮ ಕಿವುಡಹೆಣ್ಣು ಮಕ್ಕಳ ವಸತಿಯುತ ಶಾಲೆ, ಬಿಸಿಲು ಮಾರಮ್ಮ ದೇವಸ್ಥಾನದ ಹತ್ತಿರ, ವಾಗ್ದೇವಿ ನಗರ ,ತೊಳಸಿ ಕೊಪ್ಪಲು, ಮೈಸೂರು.
 ೧೦. ಸರ್ಕಾರಿ ಕಿವುಡ ಮಕ್ಕಳ ಶಾಲೆ, ಪುಲಕೇಶಿ ರಸ್ತೆ , ತಿಲಕ್‌ನಗರ, ಮೈಸೂರು.
೧೧. ಜೈಭಾರತ್ ಕಿವುಡ ಮತ್ತು ಮೂಕ ಮಕ್ಕಳ ಶಾಲೆ, ಬಸ್‌ನಿಲ್ದಾಣದ ಹತ್ತಿರ ,ಶ್ರೀನಿವಾಸಪುರ ಟೌನ್, ಕೋಲಾರ ಜಿಲ್ಲೆ.

 ಶ್ರವಣನ್ಯೂನ್ಯತೆವುಳ್ಳ ಮಕ್ಕಳಿಗೆ ಲಭ್ಯವಿರುವ ಸೌಲಭ್ಯಗಳು:
ಅಂಗವಿಕಲರ (ಸಮಾನ ಅವಕಾಶ , ಹಕ್ಕುಗಳ ಸಂರಕ್ಷಣೆ ಮತ್ತು ಪೂರ್ಣ ವಿಕಾಸ ) ಕಾಯಿದೆ ೧೯೯೫ ಪ್ರಕಾರ ಶೇ. ೪೦ ಅಥವಾ ಹೆಚ್ಚಿನ ಪ್ರಮಾಣದಲ್ಲಿ ಶ್ರವಣದೋಷ ಹೊಂದಿರುವ ಪ್ರಮಾಣ ಪತ್ರವನ್ನು ಸರ್ಕಾರಿ ವೈದ್ಯಾಧಿಕಾರಿಯಿಂದ ಪಡೆದಿರುವ ಮಕ್ಕಳನ್ನು ಶ್ರವಣದೋಷ ಮಕ್ಕಳು ಎಂದು ಪರಿಗಣಿಸಲಾಗುತ್ತದೆ. ಅಂತಹ ಮಕ್ಕಳು ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.

ಶ್ರವಣನ್ಯೂನ್ಯತೆವುಳ್ಳ ಮಕ್ಕಳಿಗಿರುವ ಸೌಲಭ್ಯಗಳು:
ಶ್ರವಣನ್ಯೂನ್ಯತೆವುಳ್ಳ ಮಕ್ಕಳು ಯಾವುದಾದರು ಒಂದು ಭಾಷೆಯಲ್ಲಿ ಕಲಿಯಬಹುದು.
೧೦ನೇ ತರಗತಿಯಲ್ಲಿ ನಾಲ್ಲು ವಿಷಯಗಳಲ್ಲಿ ತೇರ್ಗಡೆ ಹೊಂದಿದರೆ ಸಾಕು.
ಪರೀಕ್ಷೆ ಬರೆಯುವಾಗ ಹೆಚ್ಚಿನ ಕಾಲವಾಕಾಶ ನೀಡಲಾಗುತ್ತದೆ.
ಉತ್ತರ ಪತ್ರಿಕೆಯಲ್ಲಿ ವ್ಯಾಕರಣಗಳ ಸಡಿಲಿಕೆ ನೀಡಲಾಗಿದೆ (ಹಸಿರು ಬಣ್ಣದ ಸ್ಟಿಕ್ಕರ್ ಹಚ್ಚಬೇಕು)
ಶ್ರವಣ ಸಾಧನವನ್ನು ಸರ್ಕಾರದಿಂದ ಉಚಿತವಾಗಿ ಪಡೆಯಬಹುದು.
ರಿಯಾಯಿತಿಯಲ್ಲಿ ೧೦೦ ಕಿಲೊ ಮೀಟರ್ ವ್ಯಾಪ್ತಿಯಲ್ಲಿ ಪ್ರಯಣಿಸಲು ಬಸ್ ಪಾಸ್ ದೊರೆಯುತ್ತದೆ.
ಪ್ರತಿ ತಿಂಗಳೂ ಮಾಶಾಸನ ಪಡೆಯಬಹುದು (೪೦%ರಿಂದ ೭೫% ರವರೆಗೆ ೪೦೦ ರೂ ಮತ್ತು ೭೫% ಮೇಲ್ಪಟ್ಟವರಿಗೆ ೧೦೦೦ ರೂ)
ಒಂದನೇ ತರಗತಿಯಿಂದ ಸ್ನಾತ್ತಕೋತ್ತರ ಶಿಕ್ಷಣದವರೆಗೆ ವಿದ್ಯಾರ್ಥಿ ವೇತನ ಪಡೆಯಬಹುದು.
ವೃತ್ತಿಪರ ,ತಾಂತ್ರಿಕ ಮತ್ತು ಉನ್ನತ ಶಿಕ್ಷಣದಲ್ಲಿ ಪ್ರವೇಶಕ್ಕಾಗಿ ಮೀಸಲಾತಿ.
ಉಚಿತ ಮತ್ತು ಕಡ್ಡಾಯ ಶಿಕ್ಷಣ
ಸರ್ವಶಿಕ್ಷಣ ಅಭಿಯಾನದಿಂದ ಶಾಲೆಗೆ ಹೋಗುವ ಮಕ್ಕಳಿಗೆ ಪ್ರತಿ ವರ್ಷ ಪ್ರವಾಸ ಭತ್ಯೆ ಹಾಗೂ ಶ್ರವಣ ಸಾಧನ.
ಪ್ರತಿ ವರ್ಷ ಆರೋಗ್ಯ ತಪಾಸಣೆ ಸರ್ವ ಶಿಕ್ಷಣ ಅಭಿಯಾನದ ವತಿಯಿಂದ
ಉದ್ಯೋಗದಲ್ಲಿ ಮೀಸಲಾತಿ

ಶ್ರವಣನ್ಯೂನ್ಯತೆಗೆ ಕಾರಣಗಳು, ಲಕ್ಷಣಗಳು ಮತ್ತು ಪತ್ತೆ ಹಚ್ಚುವ ವಿಧಾನಗಳು:
ನಮ್ಮ ಪಂಚೇಂದ್ರಿಯಗಳಲ್ಲಿ ಅತೀಮುಖ್ಯವಾದ ಅಂಗಗಳಲ್ಲೊಂದು ಕಿವಿ. ಈ ಕಿವಿಯು ಮಗುವಿನ ವಿಕಾಸನ ಮತ್ತು ಭಾಷಾ ಬೆಳವಣಿಗೆಗೆ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ . ದೂರದ ವಿಷಯಗಳನ್ನು ಕೇಳಿಸಿಕೋಳ್ಳುವುದರ ಮೂಲಕ ಭಾಷೆ ಬೆಳವಣಿಗೆಯಾಗುತ್ತದೆ. ಇದು ಬೇರೆಯವರೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ.
 ಈ ರೀತಿಯ ಸಂವಹನದ ಅಡತಡೆ ಪ್ರಮುಖವಾಗಿ ಮೂರು ಕಾರಣಗಳಿವೆ. ಜನನ ಪೂರ್ವ ,ಜನನ ಸಮಯ ಮತ್ತು ಜನನದ ನಂತರದಲ್ಲಿನ ಕೆಲವು ಕಾರಣಗಳಿಂದಾಗಿ ಶ್ರವಣದೋಷ ಉಂಟಾಗಬಹುದು. . ಈ ನ್ಯೂನ್ಯತೆಯ ಯಾವುದೇ ವಯಸ್ಸಿನಲ್ಲಿಯಾದರು ನಮ್ಮನ್ನು ಕಾಡಬಹುದು.
ಈ ಮೇಲಿನ ಎಲ್ಲಾ ಕಾರಣಗಳಿಂದಾಗಿ ಮಗುವಿನಲ್ಲಿ ಶ್ರವಣದೋಷ ಉಂಟಾಗಿ ಭಾಷೆ ಬೆಳವಣಿಗೆಗೆ ತಡೆವುಂಟಾಗುತ್ತದೆ. ಆದುದರಿಂದಾಗಿ ಮಗುವಿನ ಕಲಿಕೆಯ ಕಿವಿಯ ಪಾತ್ರ ಬಹಳ ಮುಖ್ಯ ಪಾತ್ರವಹಿಸುತ್ತದೆ.

ಲಕ್ಷಣಗಳು ಮತ್ತು ಪತ್ತೆಹಚ್ಚುವ ವಿಧಾನಗಳು:
ಮಗುವಿನಲ್ಲಿ ಶ್ರವಣದೋಷವಿದ್ದಲ್ಲಿ ಒಂದೇ ಒಂದು ಶಬ್ದದ ಉಚ್ಚಾರಣೆಯೂ ಇರುವುದಿಲ್ಲ. ಕೆಲವೊಮ್ಮೆ ದೋಷಬದ್ದ ಉಚ್ಚಾರಣೆಯ ಕಂಡುಬರುತ್ತದೆ ಅಥವಾ ಸೌಮ್ಯ ಶ್ರವಣದೋಷವಿದ್ದಲ್ಲಿ ಮಗುವು ಜೋರು ಧ್ವನಿಯಲ್ಲಿ ಮಾತನಾಡುತ್ತದೆ . ಅವರು ಇತರ ಮಕ್ಕಳಂತೆ ಕುಂಟುಬದಲ್ಲಿಯಾಗಲಿ, ನೆರೆ-ಹೊರೆಯಲ್ಲಾಗಲಿ ಎಲ್ಲರೊಡನೆ ಬೆರೆಯದೆ ದೂರ ಉಳಿಯುತ್ತಾರೆ. ಈ ರೀತಿಯ ದೋಷವಿರುವಂತಹ ಮಗುವನ್ನು ಪತ್ತೆ ಹಚ್ಚಲು ಈ ಕೆಳಕಂಡ ಲಕ್ಷಣಗಳು ಇವೆಯೇ ಎಂದು ಪರೀಕ್ಷಿಸಬೇಕಾಗುತ್ತದೆ. ಅವುಗಳೆಂದರೆ:

ಕೇಳುವಿಕೆಯ ಮಟ್ಟ    ಲಕ್ಷಣಗಳು
ಸೌಮ್ಯ: ೨೫-೪೦ ಡೆಸಿಬಲ್. ಮಗುವು ಸ್ಪಷ್ಟವಾಗಿ ಮಾತನಾಡಲು ಬರುವುದಿಲ್ಲ. ಮಗುವು ಪ್ರಶ್ನೆಗಳಿಗೆ ಬೇಗ ಪ್ರತಿಕ್ರಿಯಿಸುವುದಿಲ್ಲ. ಮಾತನಾಡುವಾಗ ಮುಖವನ್ನೇ ದಿಟ್ಟಿಸಿ ನೋಡುವುದು. ಅತೀ ಕಡಿಮೆ ಶಬ್ಧ ಮತ್ತು ದೂರದಿಂದ ಬಂದಂತಹ ಶಬ್ಧವನ್ನು ಕೇಳಿಸಿಕೊಳ್ಳುವಲ್ಲಿ ತೊಂದರೆ. ಮಾತು ಮತ್ತು ಭಾಷೆಯ ಬೆಳವಣಿಗೆ ಹೆಚ್ಚು ಕಡಿಮೆ ಸಾಮನ್ಯ ಸ್ಥಿತಿಯಲ್ಲಿ ಇರುತ್ತದೆ. ವಿಷಯಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ತೊಂದರೆ ಅನುಭವಿಸುತ್ತಾರೆ. ಶಬ್ಧವನ್ನು ಆಲಿಸಲು ಕಿವಿಯನ್ನು ಪಕ್ಕಕ್ಕೆ ತಿರುಗಿಸುತ್ತಾರೆ.
ಸಾಧಾರಣೆ: ೪೧-೭೦. ಸಂಭಾಷಣೆಯನ್ನು ಕಷ್ಣಪಟ್ಟು ಅರ್ಥಮಾಡಿಕೊಳ್ಳುವುದು . ಜೋರು ಶಬ್ಧ ಬಂದ ಕಡೆಗೆ ತಲೆ ತಿರುಗಿಸುವುದು. ಮಾತನಾಡುವವರ ಮುಖವನ್ನೇ ದಿಟ್ಟಿಸಿ ನೋಡಿ ಮಾತನಾಡುವುದು. ಪದಗುಚ್ಚಗಳಲ್ಲಿ ವ್ಯಂಜನಗಳನ್ನು ಬಿಟ್ಟು ಮಾತನಾಡುವುದು. ನಿರಂತರವಾಗಿ ಏನು‘ ಎಂದು ಪ್ರಶ್ನೆ ಕೇಳುವುದು ಯಾವಾಗಲೂ ಕಿವಿ ನೋವು ಎಂದು ಹೇಳುವುದು, ಉಚ್ಚಾರಣೆಯಲ್ಲಿ ಮಾತು ಸ್ಪಷ್ಟವಾಗಿರುವುದಿಲ್ಲ, ಒತ್ತಕ್ಷರಗಳನ್ನು ಬಿಟ್ಟು ಮಾತನಾಡುವುದು.
ತೀವ್ರ: ೭೧-೯೦. ಮಾತನಾಡಲು ಬರುವುದಿಲ್ಲ . ಸಂಜ್ಞಾ, ಹಾವ-ಭಾವಗಳನ್ನು ಬಳಸುವುದು. ಅತೀ ಜೋರಾದ ಶಬ್ಧಗಳಿಗೆ ಮಾತ್ರ ಪ್ರತಿಕ್ರಿಯಿಸುತ್ತಾರೆ. ಎತ್ತರದ ಧ್ವನಿಯಲ್ಲಿ ಮಾತನಾಡುವುದು. ಭಾಷಾ ಬೆಳವಣಿಗೆಯಲ್ಲಿ ತೊಂದರೆ ಅನುಭವಿಸುವುದು. ಏರಿಳಿತವಿಲ್ಲದ ಧ್ವನಿಗಳನ್ನು ಬಳಸಿ ಮಾತನಾಡುತ್ತಾರೆ . ಮಾತನಾಡಲು ಹೆಚ್ಚು ಹಾವ-ಭಾವಗಳನ್ನು ಬಳಸುತ್ತಾರೆ
ಅತೀ ತೀವ್ರ: ೯೦ಕ್ಕಿಂತ ಹೆಚ್ಚು ಡೆಸಿಬಲ್. ಮಾತನಾಡಲು ಬರುವುದಿಲ್ಲ. ಸಂಜ್ಞಾ,ಹಾವ-ಭಾವಗಳನ್ನು ಬಳಸುತ್ತಾರೆ. ಯಾವುದೇ ಶಬ್ಧಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ ತೀವ್ರ ಶಬ್ಧಗಳಿಗೆ ಪ್ರತಿಕ್ರಿಯೆ (ರಾಕೇಟ್,ಸಿಡಿಲು) ನೀಡಬಹುದು.
ಕೇಳಿಸಿಕೊಳ್ಳಲು ವಿಫಲರಾಗುತ್ತಾರೆ. ಸಂವಹನಕ್ಕಾಗಿ ಸಂಜ್ಞಾ ಭಾಷೆಯನ್ನು ಬಳಸುತ್ತಾರೆ . ಭಾಷೆ ಬೆಳವಣಿಗೆ ಇರುವುದಿಲ್ಲ.

ಶ್ರವಣನ್ಯೂನ್ಯತೆವುಳ್ಳ ಮಕ್ಕಳ ಮತ್ತು ಪೋಷಕರ ಸಮನ್ವಯ ಕಾರ್ಯಕ್ರಮ:
 ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ (ಎ. ಪಿ. ಡಿ) ಒಂದು ಸ್ವಯಂ ಸೇವಾ ಸಂಸ್ಥೆಯಾಗಿದ್ದು, ವಿಕಲಚೇತನ ಮಕ್ಕಳ ಮತ್ತು ಅವರ ಸ್ನೇಹಿತರು ಸೇರಿ ವಿಕಲಚೇತನರು ಕೂಡ ಸಮಾಜದ ಮುಖ್ಯವಾಹಿನಿಯಲ್ಲಿ ಸ್ವಾವಲಂಬನೆಯ ಜೀವನ ನಿರ್ವಹಿಸಲು ಸಾಧ್ಯಾವಿದೆಯೆಂದು ತೋರಿಸುವ ನಿಟ್ಟಿನಲ್ಲಿ ೧೯೫೯ರಲ್ಲಿ ಸಂಸ್ಥೆಯನ್ನು ಆರಂಭಿಸಿದರು. ಸಂಸ್ಥೆಯು ಸಹಭಾಗಿಗಳ ಸಾಮರ್ಥ್ಯವರ್ಧನೆ ಮತ್ತು ಸಬಲೀಕರಣದ ಮೂಲಕ ಅವಕಾಶಗಳನ್ನು ದೊರಕಿಸಿಕೊಡುವುದು, ಸಮನ್ವಯಕ್ಕೆ ಉತ್ತೇಜನ ನ್ಯಾಯ ಬದ್ಧ ಹಕ್ಕು ಮತ್ತು ಸೌಲಭ್ಯಗಳನ್ನು ಹೊಂದುವ ಉದ್ದೇಶವನ್ನು ಈಡೇರಿಸಲು ವೈದ್ಯಕೀಯ ಪುನರ್ವಸತಿ, ಶಿಕ್ಷಣ, ತರಬೇತಿ ಮತ್ತು ಉದ್ಯೋಗ, ಜನಸಂಘಟನೆ ಮತ್ತು ವಕಾಲತಿ, ಸಂಪನ್ಮೂಲ ಕ್ರೂಢೀಕರಣ ಹಾಗೂ ಸಾಂಸ್ಥಿಕ ಅಭಿವೃದ್ಧಿ ಕ್ಷೇತ್ರದ ಅಡಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಎ. ಪಿ. ಡಿ ಸಂಸ್ಥೆಯು ನಗರ ಮತ್ತು ಗ್ರಾಮೀಣ ಸಮುದಾಯಗಳಲ್ಲಿ ಹಾಗೂ ಸಂಸ್ಥೆ ಆಧಾರಿತ ಕಾರ್ಯಾಕ್ರಮದಡಿಯಲ್ಲಿ ಸುಮಾರು ೩೦,೦೦೦ಕ್ಕೂ ಹೆಚ್ಚು ವಿಕಲಚೇತನ ಮಕ್ಕಳೊಂದಿಗೆ ತನ್ನ ಸೇವ ಸೌಲಭ್ಯಗಳನ್ನು ಒದಗಿಸಿದೆ. ಸಂಸ್ಥೆಯು ಪ್ರಸ್ತುತ ಬೆಂಗಳೂರು, ಚಿಕ್ಕಬಳ್ಳಾಪುರ, ದಾವಣಗೆರೆ ಮತ್ತು ಬಿಜಾಪುರ ಜಿಲ್ಲೆಗಳಲ್ಲಿ ತನ್ನ ಕಾರ್ಯಾವ್ಯಾಪ್ತಿಯನ್ನು ನೇರವಾಗಿ ವಿಸ್ತರಿಸಿದ್ದು, ಇದರೊಡನೆ ಇತರೆ ೧೦ ಸ್ವಯಂ ಸೇವ ಸಂಸ್ಥೆಗಳಿಗೆ ಅಂಗವಿಕಲತೆಯ ಕ್ಷೇತ್ರದ ಕೆಲಸಗಳಿಗೆ ಸಹಕರಿಸುತ್ತದೆ.
 ನಮ್ಮ ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ. ೫-೬ ರಷ್ಟು ವಿಕಲಚೇತನರಿದ್ದು ಭೌಗೋಳಿಕವಾಗಿ ಹೆಚ್ಚು ಹಳ್ಳಿಗಳಿಂದ ಕೂಡಿದ ನಮ್ಮ ನಾಡಿನಲ್ಲಿ ಶೇ. ೬೫ ಕ್ಕೂ ಜನರು ಗ್ರಾಮೀಣ ಪ್ರದೇಶಗಳಲ್ಲಿಯೇ ಇರುವರು . ನಮ್ಮ ದೇಶದ ವಿಕಲಚೇತನರ ಏಳಿಗೆಗಾಗಿ ಸರ್ಕಾರ ಹಲವಾರು ಕಾನೂನು, ಕಾಯಿದೆಗಳನ್ನು ಜಾರಿಗೆತಂದ್ದಿದರೂ ಸಹ ವಿಕಲಚೇತನರ ಜೀವನದಲ್ಲಿ ಹೇಳಿಕೊಳ್ಳುವಂತಹ ಯಾವುದೆ ಬದಲಾವಣೆಗಳು ಕಾಣುತ್ತಿಲ್ಲ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಈ ಕಾನೂನು, ಕಾಯ್ದೆಗಳನ್ನು ಅನುಷ್ಟಾನಕ್ಕೆ ತರುವಲ್ಲಿ ಹೆಚ್ಚಿನ ಕೆಲಸಗಳು ಆಗಬೇಕಾಗಿವೆ.
 ಸಮಾಜದಲ್ಲಿರುವ ಪ್ರಸ್ತುತ ಧೋರಣೆ, ವ್ಯವಹಾರಿಕ ಜೀವನದಲ್ಲಿ ಅನುಭವಿಸುವ ಅಡೆತಡೆಗಳು, ಹಕ್ಕು ಮತ್ತು ಕರ್ತವ್ಯಗಳನ್ನು ಪಡೆದುಕೊಳ್ಳುವಲ್ಲಿ ವಿಕಲಚೇತನರು ವಿಫಲರಾಗುತ್ತಿರುವುದು, ಅದರಲ್ಲೂ ಬಡತನ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿರುವ ಜನರಿಗೆ ವಿಕಲತೆಯ ಕುರಿತು ಇರುವ ಅಲ್ಪ ಅರಿವಿನಿಂದಾಗಿ ಅಗ್ಯತ್ಯವಾದ ವಿದ್ಯಾಭ್ಯಾಸ, ಉದ್ಯೋಗ, ಕೌಟುಂಬಿಕ ಜೀವನ , ವಯಸ್ಸಿನ ಮತ್ತು ಪರಿಸ್ಥಿತಿಗಳಿಗೆ ಅನುಗುಣವಾಗಿ ಸಿಗಬೇಕಾದ ಸೌಲಭ್ಯಗಳು, ಮಾಹಿತಿಗಳು ದೊರಕುತ್ತಿಲ್ಲ. ಇದರ ಜೊತೆಗೆ ಶ್ರವಣ ನ್ಯೂನ್ಯತೆವುಳ್ಳವರ ಒಂಟಿತನ ಹಾಗೂ ಸಂವಹನದ ಅಂತರವೂ ಪ್ರಮುಖ ಸಮಸ್ಯೆಯಾಗಿದ್ದು, ಇವೆಲ್ಲವುಗಳ ನಿವಾರಣೆಗಾಗಿ ಆಗಬೇಕಾದ ಕೆಲಸಗಳ ಬಗ್ಗೆ ಚರ್ಚಿಸಲು ರಾಷ್ಟ್ರಮಟ್ಟದ ವೇದಿಕೆಯ ಅಗತ್ಯತೆಯನ್ನು ಮನಗಂಡು ರಾಜ್ಯ ಮಟ್ಟದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮೂರನೇ ಬಾರಿಗೆ ಈ ಕಾರ್ಯಕ್ರಮವನ್ನು ಕ್ರೈಸ್ಟ್ ಕನ್ನಡ ಪ್ರಾಥಮಿಕ ಶಾಲೆ, ೧ನೇ ಮುಖ್ಯ ರಸ್ತೆ, ೫ನೇ ಅಡ್ಡ ರಸ್ತೆ , ಭಾರತಿ ಬಡಾವಣೆ, ಸುದ್ದಗುಂಟೆ ಪಾಳ್ಯ, ಧರ್ಮಾವರಂ ಕಾಲೇಜು ಅಂಚೆ, ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಉದ್ದೇಶಗಳು:
ಶ್ರವಣ ನ್ಯೂನ್ಯತೆವುಳ್ಳ ಮಕ್ಕಳ ಸಾಮರ್ಥ್ಯವನ್ನು ವೃಧಿಗೊಳಿಸಿ ಸ್ವ ವಕಾಲಾತಿಯ ಮೂಲಕ ಸ್ಫರ್ಧಾತ್ಮಕ ಜೀವನದ ಆಯ್ಕೆ, ಸಂವಹನದ ಅಭಿವೃದ್ಧಿ ಮತ್ತು ಸ್ವ ಗೌರವವನ್ನು ಹೆಚ್ಚಿಸುವುದು.
ಶ್ರವಣ ನ್ಯೂನ್ಯತೆವುಳ್ಳ ಮಕ್ಕಳ ಮತ್ತು ಪೋಷಕರ ನಾಯಕತ್ವ ಗುಣವನ್ನು ಅಭಿವೃಧಿಪಡಿಸುವುದು.
ಜಾಗೃತಿ ಮತ್ತು ಸ್ವೀಕಾರ ಮನೋಭಾವದ (ಒಪ್ಪಿಕೊಳ್ಳುವುದರ ) ಮೂಲಕ ಸಮಾಜದಲ್ಲಿ ಶ್ರವಣ ನ್ಯೂನ್ಯತೆವುಳ್ಳ ಮಕ್ಕಳು ಕ್ರಿಯಾಶೀಲ ಭಾಗವಹಿಸುವುದನ್ನು ಖಾತರಿಗೊಳಿಸುವುದು.
ಎಲ್ಲಾ ಕ್ಷೇತ್ರಗಳಲ್ಲಿ ಶ್ರವಣ ನ್ಯೂನ್ಯತೆವುಳ್ಳ ಮಕ್ಕಳು ಸಮಾಜದ ಮುಖ್ಯವಾಹಿನಿಗೆ ಬರುವುದಾಗಿ ಉತ್ತೇಜಿಸುವುದು.

ಹಲವಾರು ವಿಧದ ಶ್ರವಣದೋಷಗಳು ಇವೆ. ಅದನ್ನೆಲ್ಲ ನೀವು ಶ್ರವಣದೋಷದ ಬಗೆಗಿನ ಪುಸ್ತಕದಲ್ಲಿ ತಿಳಿದುಕೊಳ್ಳಬಹುದು. ಮಕ್ಕಳಲ್ಲಿ ಶ್ರವಣ ಸಮಸ್ಯೆಗಳೇನಾದರೂ ಇದ್ದರೆ , ಅದನ್ನು ಕಂಡುಹಿಡಿಯಲು ಪೋಷಕರಿಗೆ ತಿಳಿದಿರಬೇಕು. ಪುಟ್ಟ ಮಕ್ಕಳು ಶಬ್ಧಕ್ಕೆ ಪ್ರತಿಕ್ರಿಯಿಸದಿದ್ದರೆ ಬರೀ ಮಾತಿನಿಂದ ಹೇಳಿದ್ದನ್ನು ಅರ್ಥಮಾಡಿಕೊಳ್ಳದಿದ್ದರೆ ತೊದಲು ನುಡಿಯದಿದ್ದರೆ ೬-೮ ತಿಂಗಳಿಗೆ ಸ್ವರ ಉಚ್ಚಾರಣೆಯಲ್ಲಿ ಯಾವುದೇ ಸಮಸ್ಯೆಯಿದ್ದರೆ ಶ್ರವಣದೋಷವಿದೆ ಎಂದು ಊಹಿಸಬಹುದು.

ಅಧ್ಯಾಯ- ೨ ಸಾಹಿತ್ಯ ಪುನರ್ ವಿಮರ್ಶೆ
ಶ್ರವಣದೋಷವು ಅನಾದಿ ಕಾಲದಿಂದಲು ಮಾನವನನ್ನು ತೀವ್ರವಾಗಿ ಕಾಡುತ್ತಿರುವ ಒಂದು ಸಮಸ್ಯೆಯಾಗಿದೆ. ವಿಶ್ವದ ಎಲ್ಲಾ ಭಾಗಗಳಲ್ಲೂ ಶ್ರವಣದೋಷದ ಪಾಪದ ಫಲ ಎಂದು ಭಾವಿಸಿಕೊಂಡು ಶ್ರವಣನ್ಯೂನ್ಯತೆಯಿರುವವರನ್ನು ಕನಿಕರ ದೃಷ್ಟಿಯಿಂದಲು, ಅವರ ಪಾಲನೆ, ಪೋಷಣೆಯನ್ನು ಬಹುತೇಕ ಅದೇ ದೃಷ್ಟಿಯಿಂದಲೂ ಪರಿಗಣಿಸಲಾಗಿತ್ತು. ಹೆತ್ತವರು ತಮಗೆ ಶ್ರವಣ ನ್ಯೂನ್ಯತೆಯ ಮಕ್ಕಳು ಹುಟ್ಟಿರುವುದು ಒಂದು ಶಾಪವೆಂದೇ ಪರಿಗಣಿಸಿದರು. ವಿಜ್ಞಾನದ ಹೊಸ -ಹೊಸ ಆವಿಷ್ಕಾರಗಳು ಸಂಶೋಧನೆ ಸಮ್ಮೇಳನಗಳು ಹಾಗೂ ಅಂತರಾಷ್ಟ್ರೀಯ ತಡೆಗಟ್ಟುವಿಕೆ ಮತ್ತು ಶ್ರವಣದೋಷದ ಪುನಃಶ್ಚೇತನದಲ್ಲಿ ಕ್ರಾಂತಿಯನ್ನೇ ಹುಟ್ಟಿಹಾಕಿದೆ. ಈ ಒಂದು ಶ್ರವಣದೋಷಕ್ಕೆ ಸಂಬಂಧಿಸಿದಂತೆ ಹಲವು ಸಾಹಿತ್ಯಿಕ ಪುರಾವೆಗಳು ಲಭ್ಯವಾಗಿವೆ. ಈ ಪುರಾವೆಗಳು ತಮ್ಮದೆ ಆದ ನಿರ್ದಿಷ್ಟ ವಿಷಯವನ್ನು ಒಳಗೊಂಡಂತಹ ಆಕಾರಗಳಾಗಿವೆ, ಅವುಗಳೆಂದರೆ
ಕೆ. ಕೆ ಶ್ರೀನಿವಾಸ್ ರವರು ಬರೆದಿರುವ ‘ಶ್ರವಣ ಕಿರಣ
ಶ್ರವಣದೋಷ ಯಾವ ರೀತಿಯಲ್ಲಿ ಉಂಟಾಗುತ್ತದೆ. ಉಂಟಾದ ನಂತರ ಅವರ ಪ್ರಾರಂಭದಲ್ಲಿ ಅವರಿಗೆ ಕಲಿಕೆಯ ಅಥವಾ ಸಂವಹನ ಪ್ರಕ್ರಿಯೇಯನು ಯಾವ ರೀತಿಯಲ್ಲಿ ಕಲಿಯಬೇಕು ಏಂಬುದನ್ನು ತಿಳಿಸುತ್ತದೆ. ಹಾಗೂ ಯಾವ ವಯಸ್ಸೀನಲ್ಲಿ ಸಂವಹನ ಪ್ರೌಢತೆಯನ್ನು ಹೊಂದುವರು ಎಂಬುವಂತಹ ಮಾಹಿತಿ ಇದರಲ್ಲಿ ಅಡಗಿದೆ.
೨. ಬೆಳೆಯುತ್ತಿರುವ ಮಕ್ಕಳಲ್ಲಿ ಕಂಡುಬರುವ ನ್ಯೂನತೆಗಳು-ಒಂದು ಪರಿಚಯ, ಲೇಖಕರು ಡಾII ಮ. ಜಯರಾಂ
ಈ ಒಂದು ವರದಿಯಲ್ಲಿ ಈ ಮೇಲಿನ ಲೇಖಕರು ತಿಳಿಸಿರುವಂತೆ ತಾಯಿಯ ಗರ್ಭವ್ಯವಸ್ಥೆಯಲ್ಲಿ ಆಗುವ ತೊಂದರೆಗಳು, ಅನುವಂಶಿಯತೆಯಿಂದ ,ಮದುವೆಯಿಂದ ಆಗುವಂತಹ ಘಟನೆಗಳು, ಬೆಳೆದಂತೆ ಮಗುವಿಗೆ ಉತ್ತಮ ಆಹಾರದ ಸೌಲಭ್ಯ ಇಲ್ಲದೇ ಇರುವುದು, ಇಷ್ಟೇಲ್ಲವುಗಳಿಂದ ಮಗುವಿನ ದೇಹದಲ್ಲಿ ಆಗುವಂತಹ ವಿವಿಧ ರೀತಿಯ ನ್ಯೂನತೆಯ ಬಗ್ಗೆ ಇವರು ತಿಳಿಸಿದ್ದಾರೆ.
ಉದಾಹರಣೆ. ಶ್ರವಣದೋಷ , ಬುದ್ಧಿಮಾಂದ್ಯತೆ.
೩. ಅಂಗವಿಕಲತೆ ಮತ್ತು ಕಾನೂನು (ಹೆಚ್. ಆರ್. ಎಲ್. ಎನ್): ಹ್ಯೂಮನ್ ರೈಟ್ಸ್ ಲಾ ನೆಟ್‌ವರ್ಕ್
 ಇಂದು ನ್ಯಾಯಾಧೀಶರು ರಚಿಸಿಕೊಂಡಿರುವಂತಹ ಸಮೂಹವಾಗಿದ್ದು, ಈ ನ್ಯಾಯಾಧೀಶರೇ ಇದರಲ್ಲಿ ಅಂಗವಿಕಲರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಯುವುದರ ಮೂಲಕ ನ್ಯಾಯ ಧೊರಕಿಸಿಕೊಡುವುದರ ಜೊತೆಯಲ್ಲಿಯೇ ಹೊಸ ಕಾನೂನುಗಳನ್ನು ರೂಪಿಸುವುದು ಇವರ ಮುಖ್ಯ ಧ್ಯೇಯವಾಗಿದೆ. ಇದರಲ್ಲಿ ಅಂಗವಿಕಲರು ಪ್ರತಿಯೊಂದು ಕ್ಷೇತ್ರದಲ್ಲಿ ಮುಂದುವರಿಯುವಂತೆ ಮೀಸಲಾತಿಯನ್ನು ನೀಡುವುದರ ಮೂಲಕ ಅವರ ಭವಿಷ್ಯಕ್ಕೆ ಸಹಾಕಾರಿಯಾಗಿದ್ದಾರೆ.
ಮಗುವಿನ ಭಾಷಾ ಕಲಿಕೆಯಲ್ಲಿ ಫೋಷಕರ ಪಾತ್ರ(ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೇಬಿಲಿಟಿ)
ಇದರಲ್ಲಿ ಸಾಮಾನ್ಯ ವಯಸ್ಕರಲ್ಲಿನ ಶ್ರವಣದೋಷದ ಸಮಸ್ಯೆಗೆ ಕಾರಣಗಳ ಪರಿಣಾಮಗಳನ್ನು ತಿಳಿಸಿದೆ. ಶ್ರವಣದೋಷದ ನ್ಯೂನತೆಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಯಾವ- ಯಾವ ಸಂಸ್ಥೆಗಳು ದುಡಿಯುತ್ತಿದ್ದಾರೆ ಎಂಬುದನ್ನು ತಿಳಿಸಿದೆ. ಹಾಗೂ ಹುಟ್ಟಿದಾಗಲೇ ಶ್ರವಣದೋಷ ಯಾವ ರೀತಿಯಲ್ಲಿ ಉಂಟಾಗುತ್ತದೆ ಎಂಬುದನ್ನು ತಿಳಿಯಪಡಿಸಿದ್ದಾರೆ.
೫. ಮಕ್ಕಳಿಗಾಗಿ ಮಕ್ಕಳ ಹಕ್ಕುಗಳು: (ವಾಸುದೇವ್ ಶರ್ಮ)
ಇದರಲ್ಲಿ ಪ್ರತಿಯೊಂದು ಸಮಾಜದ ಮಕ್ಕಳಿಗೆ ಮೂಲಭೂತ ಹಕ್ಕುಗಳು ಇವೆ. ಇದರಲ್ಲಿ ಶೋಷಣೆಗೆ, ದೌರ್ಜನ್ಯಕ್ಕೆ, ಲೈಂಗಿಕತೆಗೆ, ತಾರತಮ್ಯಕ್ಕೆ ಹಾಗೂ ಇತರ ಅಂಶಗಳಿಂದ ಹೀನ ಸ್ಥಿತಿಗೆ ಒಳಗಾದರೇ ಅಂತಹ ಮಕ್ಕಳಿಗೆ ನ್ಯಾಯ ದೊರಕಿಸಿಕೊಡುವುದು. ಅಂಗವಿಕಲ ಮಕ್ಕಳಿಗೆ ಹಾಗೂ ಎಲ್ಲಾ ಮಕ್ಕಳಿಗೂ ಸಮಾನವಾಗಿ ಜೀವಿಸುವ ಹಕ್ಕನ್ನು ನೀಡಿದೆ.
ದಿನಪತ್ರಿಕೆ, ವಾರಪತ್ರಿಕೆ ಹಾಗೂ ಶ್ರವಣ ಸಾಧನ ದೊರಕಿಸಿಕೊಡುವಂತಹ ಸಂಸ್ಧೆಯಿಂದ ಹೋರ ತಂದ ಮ್ಯಾಗ್‌ಝ್ಹಿನ್
ಪುಸ್ತಕಗಳು:
ಇದರಲ್ಲಿ ಶ್ರವಣ ಸಾಧನಕ್ಕೆ ಸಂಬಂಧಿಸಿದಂತೆ ಕಿವಿಯ ಆಕಾರ,ಗಾತ್ರಕ್ಕೆ ಅನುಗುಣವಾಗಿ ಶ್ರವಣ ಸಾಧನೋಪಕರಣದ ಬಗ್ಗೆ ಮತ್ತುಆಡಿಯೋಗ್ರಮ್ ಮಾಡುವ ರೀತಿಯ ಬಗ್ಗೆ ವಿಷಯ ಸಂಗ್ರಹ ಇದೆ.

ಅಧ್ಯಾಯ - ೩. ಸಂಶೋಧನ ವಿಧಾನ:-
All power is within you, you can do any thing and everything, believe in that, and do not believe that you are week. Stand up and express divinity within you.
Swamy vivekananda
ಗುರಿ ಮತ್ತು ಉದ್ದೇಶಗಳು:
ಶ್ರವಣದೋಷವುಳ್ಳ ಮಕ್ಕಳ ಸಂವಹನದ ಸಮಸ್ಯೆಯನ್ನು ತಿಳಿಯಬಹುದು.
ಶ್ರವಣದೋಷವುಳ್ಳ ಮಕ್ಕಳು ಕಲಿಕಾ ತೊಂದರೆಯನ್ನು ತಿಳಿಯಬಹುದು.
ಶ್ರವಣದೋಷವುಳ್ಳ ಮಕ್ಕಳು ಶಾಲಾ ತರಗಿತಿಯೊಂದಿಗೆ ಹಾಗೂ ಶಿಕ್ಷಕರೊಂದಿಗೆ ಮತ್ತು ಸಮುದಾಯದೊಂದಿಗೆ ಯಾವ ರೀತಿಯ ಸಂಬಂದ ಹೊಂದಿದ್ದಾರೆ ಎಂಬುದನ್ನು ತಿಳಿಯಬಹುದು.
ಎಚ್. ಅರ್ ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆಯವರು ಶ್ರವಣದೋಷವುಳ್ಳ ಮಕ್ಕಳಿಗೆ ತೆಗೆದುಕೊಂಡಿರುವ ಕಾರ್ಯಯೋಜನೆಗಳ ಬಗ್ಗೆ ತಿಳಿಯುವುದು.
ಈ ಸಂಸ್ಥೆಯಲ್ಲಿ ಶ್ರವಣದೋಷವುಳ್ಳ ಮಕ್ಕಳಿಗೆ ವಿಶೇಷ ಬೋದನಾ ವಿಧಾನದಲ್ಲಿ ಪ್ರಕ್ರಿಯೆಯನ್ನು ಅರಿಯುವುದು.
ಶ್ರವಣದೋಷವುಳ್ಳ ಮಕ್ಕಳ ಹಕ್ಕುಗಳನ್ನು ಅರಿಯುವುದು.
ಶ್ರವಣದೋಷವುಳ್ಳ ಮಕ್ಕಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಕೊಡಲ್ಪಟ್ಟಿರುವ ಸವಲತ್ತುಗಳನ್ನು ಅರಿಯುವುದು.
ಶ್ರವಣದೋಷವುಳ್ಳ ಮಕ್ಕಳಿಗೆ ಸಂವಿಧಾನಬದ್ದವಾಗಿ ನೀಡಲ್ಪಟ್ಟಿರುವ ಕಾನೂನುಗಳನ್ನು ತಿಳಿಯುವುದು.

ಸಂಶೋಧನೆಯ ವಿನ್ಯಾಸ:
 ಸಂಶೋಧಕನು ಸಂಶೋಧನೆಯ ವಿಧಾನ ಮಾಡಿದ ನಂತರ ಸಂಶೋಧನೆಗೆ ಮುಖ್ಯ ತಯಾರಿಯನ್ನು ಮಾಡಿಕೊಂಡನು. ಈ ಸಂಶೋಧನಾ ವಿನ್ಯಾಸ ಸಂಶೋಧನೆಗೆ ನೀಲಿ ನಕಾಶೆ ಇದ್ದಂತೆ.
ಸಂಶೋಧನೆಯು ಶ್ರವಣದೋಷವುಳ್ಳ ಮಕ್ಕಳನ್ನು ಕುರುತುದಾಗಿದೆ.
ಈ ಸಂಶೋಧನೆಯನ್ನು ಬೆಂಗಳೂರು ನಗರದ ಕ್ಷೇತ್ರದಲ್ಲಿ ಎಸ್. ಅರ್. ಚಂದ್ರಶೇಕರ್ ವಾಕ್ ಮತ್ತು ಶ್ರವಣ ಸಂಸ್ಥೆಯ ಕಾರ್ಯವ್ಯಾಪ್ತಿ ಅಡಿಯಲ್ಲಿ ಕೈಗೊಳ್ಳಲಾಯಿತು.
ಸಂಶೋಧನೆಗೆ ಬೇಕಾದ ಮಾಹಿತಿಯನ್ನು ಮಕ್ಕಳ ಮತ್ತು ಪೋಷಕರ ಮೂಲಕ ತಿಳಿದುಕೊಳ್ಳಲಾಯಿತು.
ಈ ಸಂಶೋಧನೆಗೆ ಕಾಲಾವದಿ ೪೦ ದಿನಗಳಾದ್ದಾಗಿರುತ್ತದೆ.
ಮಾಹಿತಿ ಸಂಗ್ರಹಣೆಗೆ ಪ್ರಶ್ನಾವಳಿ ಅನುಸೂಚಿಯನ್ನು ಬಳಸಲಾಗುತ್ತದೆ.
ಈ ಸಂಶೋಧನೆಯಲ್ಲಿ ಶ್ರವಣದೋಷವುಳ್ಳ ಮಕ್ಕಳ ಸಮಸ್ಯೆಗಳು , ಅಭಿಪ್ರಾಯ, ದೃಷ್ಠಿಕೋನ, ಕಾನೂನು ಹಕ್ಕುಗಳ ಮತ್ತು ಪರಿಣಾಮ ಕುರಿತು ಅಧ್ಯಯನ ಮಾಡುವುದಾಗಿದೆ.
ಸಂಶೋಧಕನು ಸಂಶೋಧನೆಯನ್ನು ಕೈಗೊಳ್ಳಬೇಕಾದರೆ ಸಂಶೋಧನೆಯ ವಿನ್ಯಾಸವೆಂಬುದು ಅತ್ಯವಶ್ಯಕ. ಈ ಒಂದು ವಿಧಾನದ ಮೂಲಕ ಸಂಶೋಧಕನು ಸಂಶೋಧನೆಯನ್ನು ಕೈಗೊಳ್ಳುವುದ್ದಕ್ಕೆ ಸಹಾಯಕ.

ಸಂಶೋಧನೆಯ ವಿನ್ಯಾಸದ ವಿಧಗಳು
ವಿವರಣಾತ್ಮಕ ಅಧ್ಯಯನ:
ಈ ಅಧ್ಯಯನದಲ್ಲಿಸಂಶೋಧಕನು ಕೈಗೊಳ್ಳುವಂತಹ ವಿಷಯದ ಬಗ್ಗೆ ಮಕ್ಕಳಲ್ಲಿ ಮನವರಿಕೆಯನ್ನು ಮಾಡಿಕೊಡುವುದರ ಮೂಲಕ ಮಾಹಿತಿಯನ್ನು ಪಡೆಯುವುದು. ಇದರಲ್ಲಿ ಸಂಶೋಧನೆಯಲ್ಲಿ ಕೈಗೊಳ್ಳುತ್ತಿರುವ ಅಂಶಗಳನ್ನು ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಹೇಳಬೇಕು.
ವಿಶ್ಲೇಷಣಾತ್ಮಕ ವಿಧಾನ:
ಇದರಲ್ಲಿ ಸಂಶೋಧಕನು ಕೈಗೊಂಡಿರುವ ಪ್ರಮುಖವಾದ ವಿಷಯಾಂಶಗಳನ್ನುವಿಶ್ಲೇಷಣಾತ್ಮಕ ರೀತಿಯಲ್ಲಿ ತಿಳಿಯಪಡಿಸುವುದು. ಇದರಿಂದ ಸಂಪೂರ್ಣವಾಗಿ ಮಾಹಿತಿಯನ್ನು ನೀಡುವುದಾಗಿದೆ.
ಪ್ರಯೋಗಾತ್ಮಕ ವಿಧಾನ:
ಈ ಒಂದು ವಿಧಾನದಲ್ಲಿ ಕಲೆಹಾಕಿದ ಮಾಹಿತಿಯನ್ನು ಪ್ರಯೋಗಾತ್ಮಕ ಒಳಪಡಿಸಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವುದು. ಇದರಿಂದ ಮಾಹಿತಿಯನ್ನು ನಿರ್ದಿಷ್ಠತೆಯಿಂದ ಹಾಗೂ ನಿಖರತೆಯಿಂದ ಕ್ರೂಢೀಕರಿಸಿದಂತೆ ಆಗುತ್ತದೆ.
ಈ ಸಂಶೋಧನೆಯ ಮೂರು ವಿಧಾನಗಳಲ್ಲಿ ಆಯ್ಕೆಮಾಡಿಕೊಂಡಿರುವಂತಹ ವಿಧಾನ ವಿವರಣಾತ್ಮಕ ಅಧ್ಯಯನ ವಾಗಿದೆ.
ಮಾಹಿತಿ ಸಂಗ್ರಹಣೆಯ ವಿಧಾನ:
ಸಂಶೋಧಕನು ಸಂಶೋಧನೆಗೆ ಬೇಕಾದ ಮಾಹಿತಿಯನ್ನು ಪ್ರಶ್ನಾವಳಿ ವಿಧಾನದ ಮೂಲಕ ಮಾಹಿತಿ ಸಂಗ್ರಹಿಸಿದನು.
 ಮಾಹಿತಿ ಸಂಗ್ರಹಣಾ ವಿಧಾನದಲ್ಲಿ ಪ್ರಶ್ನಾವಳಿ ಅನುಸೂಚಿಯ ವಿಧಾನವನ್ನು ಅನುಸರಿಸಿದನು.

ಮಾಹಿತಿ ಸಂಗ್ರಹಣೆಯ ತಂತ್ರಗಳು :
ಅವಲೋಕನ : ಸಂಶೋಧಕನು ಸಂಶೋಧನೆಗೆ ಬೇಕಾದ ಮಾಹಿತಿಯನ್ನು ಸಂಗ್ರಹಿಸುವಲ್ಲಿ ಅವಲೋಕನ ವಿಧಾನವನ್ನು ಅನುಸರಿಸಿದನು. ಆ ಅವಲೋಕನ ವಿಧಾನದಲ್ಲಿ ನಿಯಂತ್ರಿಕ ಸಹಭಾಗಿಯಾಗಿ ಅವಲೋಕನ ವಿಧಾನವನ್ನು ಅನುಸರಿಸಲಾಗಿದೆ. ಸಂಶೋಧಕನು ಸ್ವತಃ ಭಾಗಿಯಾಗಿ ಅ ಸನ್ನಿವೇಶದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದನು.
ಸಂದರ್ಶನ ಅನುಸೂಚಿ: ಸಂಶೋಧಕನು ಸಂಶೋಧನಾ ಶೀರ್ಷಿಕೆಯನ್ನು ಆಯ್ಕೆಮಾಡಿದ ನಂತರ ಅದಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ರಚಿಸಲಾಯಿತು. ಸಂಶೋಧಕನು ತನ್ನ ಸಂಶೋಧನೆಗೆ ಆಯ್ಕೆ ಮಾಡಿದ ವ್ಯಕ್ತಿಗಳಿಗೆ ಸಂದರ್ಶನ ಅನುಸೂಚಿಯನ್ನು ತನ್ನೊಂದಿಗೆ ತೆಗೆದುಕೊಂಡು ಹೋಗಿ ಅದರಲ್ಲಿ ಪಟ್ಟಿ ಮಾಡಿದ ಕ್ರಮದಲ್ಲಿಯೇ ಪ್ರಶ್ನೆಗಳನ್ನು ಮಾಹಿತಿದಾರರಿಗೆ ಸ್ವತಃ ಕೇಳಿ ಪ್ರತಿಕ್ರಿಯೆಗಳನ್ನು ಪ್ರತ್ಯೇಕವಾಗಿ ಕಾಗದದಲ್ಲಿ ಭರ್ತಿಮಾಡಿಕೊಂಡನು.
ಪಶ್ನಾವಳಿ ವಿಧಾನ:
ಪ್ರಶ್ನಾವಳಿ ಸಾಮಾಜಿಕ ಸಂಶೋಧನಾ ಕ್ಷೇತ್ರದಲ್ಲಿ ಮಾಹಿತಿಯನ್ನು ಸಂಗ್ರಹಿಸಲು ಬಹಳ ಪರಿಣಾಮಕಾರಿಯಾದ ವಿಧಾನವಾಗಿರುವುದರಿಂದ ಸಂಶೋಧಕನು ಪ್ರಶ್ನಾವಳಿ ವಿಧಾನವನ್ನು ಸಂಶೋಧನೆಗೆ ಮಾಹಿತಿ ಪಡೆಯಲು ಬಯಸಿದನು.
ಸಂಶೋಧನೆಗೆ ಆಯ್ಕೆಯಾದ ಮಕ್ಕಳೊಂದಿಗೆ ಸಂಭಾಷಣೆ ಮಾಡುವ ಮೂಲಕ ಅಭಿಪ್ರಾಯಗಳನ್ನು ತೆಗೆದುಕೊಳ್ಳಲಾಯಿತು.

ಪ್ರಶ್ನಾವಳಿಯ ಉದ್ದೇಶ:
ಸಂಶೋಧಕನು ಶ್ರವಣದೋಷವುಳ್ಳ ಮಕ್ಕಳ ಕಲಿಕಾ ಪ್ರಗತಿ, ಮನೋಭವ, ದೃಷ್ಠಿಕೋನ ಬದಲಾವಣೆಯ ಪರಿಣಾಮಗಳನ್ನು ಅರ್ಥಮಾಡಿಕೊಳ್ಳುವುದಾಗಿತ್ತು.
ಶ್ರವಣದೋಷವು ಅಂಗವಿಕಲತೆಯ ಭಾಗವಾಗಿದ್ದು ಸರ್ಕಾರವು ಇವರಿಗೆ ನೀಡಿರುವ ಸವಲತ್ತುಗಳ ಬಗ್ಗೆ ಅರಿವು ಇದೇಯೇ ಇಲ್ಲವೋ ಎಂಬುದನ್ನು ತಿಳಿಯುವುದಾಗಿತ್ತು.
ಶ್ರವಣದೋಷವುಳ್ಳ ಮಕ್ಕಳ ವಿಚಾರಗಳು , ಅನುಭವಗಳನ್ನು ವಿನಿಮಯ ಮಾಡಿಕೊಳ್ಳುವುದ್ದಾಗಿತ್ತು.

ಪ್ರಶ್ನಾವಳಿಯ ಪ್ರಕ್ರಿಯೆ:
ಸಂಶೋಧಕನು ಮಕ್ಕಳಿಗೆ ಸಂಶೋಧನಾ ವಿಷಯದ ಪರಿಚಯಮಾಡಿಕೊಟ್ಟು ಅವರ ವಿಶ್ವಾಸಗೊಳಿಸಿದನು.
ಸಂಶೋಧಕನು ಸ್ವರೂಪ ಮತ್ತು ಉದ್ದೇಶಗಳನ್ನು ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ವಿವರಿಸಿ ಅವರ ಮನಸ್ಸಿನಲ್ಲಿ ಉಂಟಾಗಬಹುದಾದ ಸಂಶಯವನ್ನು ನಿವಾರಿಸಿದನು.
ಸಂಶೋಧನೆ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುವಾಗ ಅವರಿಗೆ ಅರ್ಥವಾಗುವಂತೆ, ಸೂಕ್ತ ಶಬ್ಧಗಳನ್ನು ಉಪಯೋಗಿಸಲಾಯಿತ್ತು.
ಸಂಶೋಧನಾ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಬಂದ ಪ್ರತಿಕ್ರಿಯೆಗಳನ್ನು ದಾಖಲಿಸಿಕೊಂಡನು.
ಸಂಶೋಧನಾ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರವನ್ನು ಮುಕ್ತವಾಗಿ ನೀಡಬೇಕೆಂದು ಪ್ರೋತ್ಸಾಹಿಸಿದ್ದೇನು.
ಪ್ರಶ್ನಾವಳಿಯನ್ನು ಅಂತ್ಯಗೊಳಿಸುವಾಗ ಸಂಶೋಧಕನು ಮಕ್ಕಳ ಶ್ರವಣದೋಷದ ಸಮಸ್ಯೆಗಳ ಕುರಿತು ಸಂದರ್ಭದಲ್ಲಿ ಇನ್ನೇನಾದರೂ ಅನಿಸಿಕೆ ಇದೆಯೇ ಎಂದು ಕೇಳಿ ತನ್ನೊಂದಿಗೆ ಸಂಶೋಧನಾ ಮಾಹಿತಿ ಸಂಗ್ರಹಣೆಗೆ ಸಹಕರಿಸಿದ್ದಕ್ಕಾಗಿ ಧನ್ಯವಾದ ಹೇಳಿದನು.
ಒಟ್ಟಾರೆಯಾಗಿ ಶ್ರವಣದೋಷವುಳ್ಳ ಮಕ್ಕಳ ಸಮಸ್ಯೆಯನ್ನು ಹೊಂದಿದ್ದಾರೆ, ಹಾಗೂ ಈ ಸಮಸ್ಯೆಯಿಂದ ಹೋರಬಂದು ಸ್ನೇಹಿತರೊಂದಿಗೆ, ಪೋಷಕರೊಂದಿಗೆ, ಸೂಕ್ತವಾದುದು ಎಂದು ಹೇಳುವಲ್ಲಿ ಸಂಶಯವಿಲ್ಲ.

ಅಧ್ಯಾಯ - ೪. ಮಾಹಿತಿ ವರ್ಗೀಕರಣ ಮತ್ತು ವಿಶ್ಲೇಷಣೆ
 ಮಾಹಿತಿ ಸಂಗ್ರಹಣೆಯ ಮೂಲಗಳು:
ಪ್ರಾಥಮಿಕ ಮೂಲಗಳು
ಮಾಧ್ಯಮಿಕ ಮೂಲಗಳು

ಮಾಹಿತಿ ಸಂಗ್ರಹಣೆಯ ವಿಧಾನಗಳು:
ಸಂಶೋಧಕನು ಶ್ರವಣದೋಷವುಳ್ಳ ಮಕ್ಕಳ ಸಮಸ್ಯೆಗಳು ಕುರಿತಂತೆ ಪ್ರಶ್ನಾವಳಿ ಅನುಸೂಚಿಯನ್ನು ಸಿದ್ಧಪಡಿಸಿ ಪ್ರಶ್ನೆಗಳನ್ನು ಮಕ್ಕಳಿಗೆ ಕೇಳಿ ಉತ್ತರಗಳನ್ನು ದಾಖಲೆ ಮಾಡಿಕೊಳ್ಳುವುದರ ಮೂಲಕ ಮಾಹಿತಿ ಸಂಗ್ರಹಿಸದೇನು.
ಅನುಷಾಂಗಿಕ ಮೂಲಗಳು : ಶ್ರವಣದೋಷವುಳ್ಳ ಮಕ್ಕಳ ಸಮಸ್ಯೆಗಳನ್ನು ಕುರಿತು ಮಾಹಿತಿಯನ್ನು ಎಸ್. ಅರ್. ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಪ್ರಕಟಿಸಿದ ಪ್ರಕಾಶಿತ ದಾಖಲೆಗಳಿಂದ ಸಂಗ್ರಹಿಸಲಾಯಿತು ಮತ್ತು ಜಾಲ ಸಂಪರ್ಕಗಳು.
ಅಧ್ಯಯನದ ಸಮಸ್ಯೆಗಳು
ಅ) ಸಮಯದ ಅಭಾವ ಆ) ಸಾರಿಗೆ ಸಂಪರ್ಕದ ಕೊರತೆ
ಇ) ಸಂಶೋಧಕನ ಪರಿಚಯವಿಲ್ಲದಿರುಕೆ
ಈ) ಭಾಷೆ ಸಮಸ್ಯೆಯ ತೊಡಕು
ನಮೂನೆ:
ನಮೂನೆಯಲ್ಲಿ ಎರಡು ವಿಧ
ಸಂಭವನೀಯತೆ ಮಾದರಿ.
ಸಂಭವನೀಯತೆ ಇಲ್ಲದ ಮಾದರಿ.

ಸಂಭವನೀಯತೆ ಮಾದರಿಯಲ್ಲಿ ೪ ವಿಧಗಳು.
ಸರಳ ಯಾದೃಚ್ಛಿಕ ಮಾದರಿ
ವಿಂಗಡಣೆಯಾದ ಮಾದರಿ
ವ್ಯವಸ್ಥಿತ ಮಾದರಿ
ಬಹುಹಂತದ ಮಾದರಿ

ಸಂಶೋಧಕನು ಸಂಶೋಧನೆಯ ನಮೂನೆಯಲ್ಲಿ ಮೊದಲನೆಯ ವಿಧವಾದ ಸರಳ ಯಾದೃಚ್ಛಿಕ ಮಾದರಿ ಯನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ ಲಾಟರಿ ವಿಧಾನ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆಮಾಡಿಕೊಳ್ಳುವುದಾಗಿದೆ, ಎಸ್. ಅರ್ ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ೧೦೫ ವಿದ್ಯಾರ್ಥಿಗಳಿದ್ದು ಇದರಲ್ಲಿ ಲಾಟರಿ ಮಾದರಿ ವಿಧಾನದ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವುದಾಗಿದೆ. ಇದಕ್ಕೆ ಸೀಮಿತವಾಗಿಯೇ ೫೦ ವಿದ್ಯಾರ್ಥಿಗಳನು ಆಯ್ಕೆ ಮಾಡಿಕೊಳ್ಳಲಾಯಿತ್ತು.

ಕೋಷ್ಟಕ ಸಂಖ್ಯೆ - ೧
ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಪುರುಷ ಪ್ರಾಧಾನ್ಯತೆಯಿದೆ. ಲಿಂಗ ಸೂಕ್ಷ್ಮತೆ ಮತ್ತು ಮಹಿಳಾ ಸಬಲೀಕರಣದಂತಹ ಅಂದೋಲನಗಳಲ್ಲಿ ಅಪಾರವಾದುದನ್ನು ಸಾದಿಸಿದ್ದಾರೆ. ತಮ್ಮ ಊನ ಶಕ್ತತೆಯೊಂದಿಗೂ ಉನ್ನತ ಶಿಕ್ನಣವನ್ನು ಪಡೆದುಕೊಳ್ಳುವ ಪ್ರಯತ್ನದಲ್ಲಿರುವುದು ಅಭಿವೃದ್ದಿಯ ಸೂಚಕವಾಗಿದೆ. ಪ್ರತಿವಾದಿಗಳಲ್ಲಿ ಗಂಡು ಮತ್ತು ಹೆಣ್ಣೆನ ಪ್ರಾತಿನಿದ್ಯಗಳು ಅನುಕ್ರಮವಾಗಿ ಶೇಕಡಾ ೫೪ ಮತ್ತು ೪೬ ರ ಪ್ರಮಾಣದಲ್ಲಿರುವುದನ್ನು ಕೋಷ್ಟಕದ ಅs ಕೋಷ್ಟಕ ಸಹಾಯದಿಂದ ತಿಳಿಯಬಹುದಾಗಿದೆ.

ಆ ಕೋಷ್ಟಕ ಮಾತೃಭಾಷೆ
 ವ್ಯಕ್ತಿಯ ಅಭಿವ್ಯಕ್ತಿಗೆ ಭಾಷೆಯು ಒಂದು ಸಾಧನ. ಭಾರತವು ವಿವಿಧತೆಯಲ್ಲಿ ವೈವಿಧ್ಯತೆಯೊಂದಿಗೆ ಐಕ್ಯತೆಯನ್ನು ಹೊಂದಿರುವ ಒಂದು ಬೃಹತ್ ರಾಷ್ಟ್ರವಾಗಿದೆ, ಹಿಂದಿ ಭಾಷೆಯು ನಮ್ಮ ರಾಷ್ಟ್ರದ ನುಡಿಯಾಗಿದೆ. ಬೆಂಗಳೂರು ನಗರದಲ್ಲಿ ಭಾರತದ ಹಲವಾರು ರಾಜ್ಯಗಳಿಂದ ಬಂದು ನೆಲೆಸಿರುವ ಜನರಿದ್ದು ವ್ಯವಹಾರಿಕವಾಗಿ ಕನ್ನಡ , ತೆಲುಗು, ತಮಿಳು ಮತ್ತು ಆಂಗ್ಲಭಾಷೆಗಳು ಬಳಕೆಯಾಗುತ್ತವೆ.
ಶೇಕಡ ೮೬ ರಷ್ಟು ಪ್ರಮಾಣದಲ್ಲಿ ಪ್ರತಿವಾದಿಗಳು ಕನ್ನಡ ಮಾತೃ ಭಾಷಿಗಳಾಗಿರುವುದನ್ನು ಕೋಷ್ಟಕದ ಆ ವಿಭಾಗದಲ್ಲಿನ ಅಂಕಿ ಅಂಶಗಳಿಂದ ತಿಳಿಯಬಹುದಾಗಿದೆ, ಉಳಿದಂತೆ ಹಿಂದಿ ಮತ್ತು ತೆಲುಗು ಭಾಷಿಗರ ಪ್ರತಿನಿಧ್ಯವಿದೆ. ಹಿಂದಿ ತೆಲುಗು ಮತ್ತು ತಮಿಳು ಪ್ರತಿವಾದಿಗಳಿಗೆ ತಿಳಿದಿರುವ ಇತರೆ ಭಾಷೆಗಳಿವೆ.

ಕೋಷ್ಟಕ - ೨: ಮಾಧ್ಯಮ ಮತ್ತು ಧರ್ಮನುಸಾರ ಪ್ರತಿವಾದಿಗಳ ಪ್ರತಿವಾದಿಗಳ ವಿಂಗಡಣೆ.
ಕರ್ನಾಟಕದಲ್ಲಿ ವಿವಿಧ ರೀತಿಯ ಶಾಲೆಗಳು ಮಕ್ಕಳ ಶಿಕ್ಷಣದ ಕಲಿಕಾ ಅಭಿವೃದ್ಧಿಗೆ ವಿವಿಧ ಮಾದರಿಯ ಶಾಲೆಗಳು ಕಾಣುತ್ತವೆ. ಆದರೆ ಇಂತಹ ಶಾಲೆಗಳಲ್ಲಿ ಮಕ್ಕಳಿಗೆ ಕಲಿಸುವಂತಹ ಭಾಷೆಯ ಮಾಧ್ಯಮ ವಿವಿಧ ರೀತಿಯಲ್ಲಿ ಇರುತ್ತದೆ. ಈ ಒಂದು ಸಂಸ್ಥೆಯಲ್ಲಿ ಕನ್ನಡ ಮಾಧ್ಯಮ ಶೇಕಡಾ ೨೮ % ರಷ್ಟು ಇದ್ದರೆ ಇಂಗ್ಲೀಷ್ ಮಾಧ್ಯಮ ಶೇಕಡಾ ೭೨ % ಇದೆ. ಇದರಿಂದ ಕರ್ನಾಟಕದಲ್ಲಿ ಬರುವಂತಹ ಜನತೆಗೆ ಭಾಷಾ ಸಮಸ್ಯೆಯು ಕಾಣಿಸಿಕೊಳ್ಳುತ್ತದೆ.

ಆ ಕೋಷ್ಟಕ ಧರ್ಮಗಳ ವಿಂಗಡಣೆ
 ಪ್ರಪಂಚದ್ಯಾಂತ ಜನರು ಒಂದಲ್ಲೊಂದು ಧರ್ಮದ ಅನುಯಾಯಿಗಳಾಗಿದ್ದಾರೆ. ಹಿಂದೂ ಧರ್ಮಾನುಯಾಯಿಗಳ ಸಂಖ್ಯೆಯ ಅತಿ ಹೆಚ್ಚು ನಂತರದ ಸ್ಥಾನದಲ್ಲಿ ಕ್ರೈಸ್ತ ಹಾಗೂ ಧರ್ಮಾನುಯಾಯಿಗಳಾಗಿದ್ದಾರೆ. ಭಾರತವು ಹಿಂದೂ ದೇಶವೆಂದು ಕರೆಯಲ್ಪಡುತ್ತಿದ್ದು, ಭಾರತದಲ್ಲಿ ಹಿಂದೂ ಧರ್ಮಾನುಯಾಯಿಗಳು ಅಪಾರ ಸಂಖ್ಯೆಯಲ್ಲಿದ್ದಾರೆ. ಪ್ರಸಕ್ತ ಸಂಶೋಧಕನು ಪ್ರತಿವಾದಿಗಳಲ್ಲಿ ಶೇ. ೮೬ ರಷ್ಟು ಪ್ರಾತಿನಿಧ್ಯದೊಂದಿಗೆ ಹಿಂದೂ ಧರ್ಮಾನುಯಾಯಿಗಳು ಮೊದಲಸ್ಥಾನದಲ್ಲಿದ್ದು, ಆ ನಂತರದಲ್ಲಿ ಅನುಕ್ರಮವಾಗಿ ಮುಸ್ಲಿಂ ಮತ್ತು ಕ್ರೈಸ್ತ ಧರ್ಮದವರಾಗಿದ್ದಾರೆ.

ಕೋಷ್ಟಕ ಸಂಖ್ಯೆ -೦೩: ಪ್ರತಿವಾದಿಯ ಕುಟುಂಬದ ಮಾದರಿ ಮತ್ತು ವಾಸ್ತವ್ಯ ಪ್ರದೇಶ .
ಅ ಕೋಷ್ಟಕ ಕುಟುಂಬದ ಮಾದರಿ
 ಕುಟುಂಬದ ಮಾದರಿ ಹಾಗೂ ಕುಟುಂಬವು ವಾಸ್ತವ್ಯ ಹೂಡಿರುವ ಸ್ಥಳ ಇವುಗಳು ವ್ಯಕ್ತಿ ಹಾಗೂ ಕುಟುಂಬಗಳ ಸರ್ವಾಂಗೀಣ ಬದುಕಿನಲ್ಲಿ ತಮ್ಮ ಪ್ರಭಾವವನ್ನು ಹೊಂದಿರುತ್ತವೆ. ಅವಿಭಕ್ತ ಕುಟುಂಬಗಳು ಅಸ್ತಿತ್ವದಲ್ಲಿದ್ದು, ಬಹುತೇಕ ಕಣ್ಮರೆಯಾಗಿದ್ದು ವಿಸ್ತೃತ ಕುಟುಂಬಗಳು ಅಸ್ತಿತ್ವದಲ್ಲಿದ್ದು ವಿಭಕ್ತ ಕುಟುಂಬಗಳು ಇಂದಿನ ಸಾಮಾಜಿಕ ಸಂಸ್ಥೆಗಳಾಗಿವೆ. ಕೋಷ್ಟಕ ಅ ಕೋಷ್ಟಕದಲ್ಲಿ ಕಂಡುಬಂದಿರುವಂತೆ ಪ್ರತಿವಾದಿ ಕುಟುಂಬಗಳ ಮಾದರಿ ೨ ಗುಂಪುಗಳಾಗಿ ವಿಂಗಡಣೆಯಾಗಿದ್ದು ಶೇ. ೮೨ ರಷ್ಟು ಪ್ರಮಾಣದಲ್ಲಿ ವಿಭಕ್ತ ಕುಟುಂಬಗಳಿದ್ದರೆ , ಶೇ. ೧೮ ರಷ್ಟು ಪ್ರಮಾಣದಲ್ಲಿ ಅವಿಭಕ್ತ ಕುಟುಂಬಗಳು ಕಂಡುಬರುತ್ತವೆ.

ಆ ಕೋಷ್ಟಕ ಕುಟುಂಬದ ವಾಸ್ತವ್ಯ ಸ್ಥಳ
 ಅದೇ ರೀತಿಯಾಗಿ ಪ್ರತಿವಾದಿಗಳ ವಾಸ್ತವ್ಯ ಪ್ರದೇಶವನ್ನು ಪರಿಗಣಿಸಿದಾಗ ಅತೀ ಹೆಚ್ಚಿನದಾಗಿ ನಗರ ಭಾಗದಲ್ಲಿಯೇ ಇದ್ದು ವಿದ್ಯಾಭ್ಯಾಸವನ್ನು ಈ ಸಂಸ್ಥೆಯಲ್ಲಿ ಕೈಗೊಳ್ಳುತ್ತಿದ್ದಾರೆ. ಶೇ ೧೦ ರಷ್ಟು ಗ್ರಾಮ ವಾಸ್ತವ್ಯದಿಂದ ಬಂದರೆ, ಹೋಬಳಿ ಮತ್ತು ತಾಲ್ಲೂಕು ಕೇಂದ್ರಗಳಿಂದ ಶೇ. ೬ ರಷ್ಟು ಹಾಗೂ ನಗರ ಭಾಗದಲ್ಲಿಯೇ ಶೇ ೮೪ ರಷ್ಟು ಪ್ರಮಾಣದಲ್ಲಿ ಮಕ್ಕಳು ಶ್ರವಣ ನ್ಯೂನ್ಯತೆಯ ಸಮಸ್ಯೆಯಿಂದ ಇಲ್ಲಿಗೆ ಬಂದು ಶಿಕ್ಷಣವನ್ನು ಪಡೆಯುತ್ತಾರೆ. ಅತೀ ಹೆಚ್ಚಿನದಾಗಿ ನಗರ ಭಾಗದಲ್ಲಿ ವಾಸ್ತವ್ಯಹೊಡಿರುವವರು ಅಧಿಕ ಸಂಖ್ಯೆಯಲ್ಲಿದ್ದಾರೆ.

ಕೋಷ್ಟಕ- ೦೪: ಪ್ರತಿವಾಗಳು ಮತ್ತು ಶ್ರವಣ ನ್ಯೂನ್ಯತೆ ( ಡೆಸಿಬಲ್‌ಗಳ ಮಟ್ಟ)
ಅ ಕೋಷ್ಟಕ ಶ್ರವಣ ನ್ಯೂನ್ಯತೆ ಉಂಟಾಗಲು ಕಾರಣ
ಶ್ರವಣ ನ್ಯೂನ್ಯತೆ ಎಂಬುದು ವಿವಿಧ ರೀತಿಯ ಕಾರಣಗಳಿಂದ ಉಂಟಾಗುತ್ತದೆ. ಇಂತಹ ಕಾರಣಗಳಿಂದ ಮಕ್ಕಳು ವಿವಿಧ ರೀತಿಯ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ, ಇಂತಹ ಶ್ರವಣ ನ್ಯೂನ್ಯತೆ ಯಾವ ಕಾರಣಕ್ಕೆ ಉಂಟಾಯಿತು ಎಂಬುದು ಅ ಇಲ್ಲಿ ಅನುವಂಶೀಯತೆಯಿಂದ ಶೇ. ೪, ದೈತ್ಯ ಶಬ್ಧದಿಂದ ಶೇ ೫೨, ಕಿವಿಸೋರುವಿಕೆಯಿಂದ ಶೇ ೧೨ ಹಾಗೂ ಇತರೆ ಕಾರಣಗಳಿಂದ ಶೇ ೧೨ ರಷ್ಟು ಶ್ರವಣ ನ್ಯೂನ್ಯತೆಗೆ ಕಾರಣವಾಗಿದೆ.

ಆ ಕೋಷ್ಟಕ ಶ್ರವಣ ನ್ಯೂನ್ಯತೆಯಲ್ಲಿನ ಡೆಸಿಬಲ್ ಪ್ರಮಾಣ
ಶ್ರವಣ ನ್ಯೂನ್ಯತೆಯಿದೆ ಎಂಬುದನ್ನು ಗುರುತಿಸುವುದಕ್ಕೆ ಎಷ್ಟು ಪ್ರಮಾಣದ ಡೆಸಿಬಲ್ ಇದ್ದರೇ ಅತನು ಶ್ರವಣ ನ್ಯೂನ್ಯತೆಗೆ ಒಳಾಗಾಗಿದ್ದಾನೆ ಎಂಬುದನ್ನು ತಿಳಿಯಲು ಸಹಾಯಕ. ಶೇ ೨೪ ರಷ್ಟು ಪ್ರತಿವಾದಿಗಳ ಪ್ರಕಾರ ೪೦ ಡೆಸಿಬಲ್‌ಗಳು ಶೇ ೧೨ ರಷ್ಟು ಪ್ರತಿವಾದಿಗಳ ಪ್ರಕಾರ ೫೫ ಶೇ ೦ ಡೆಸಿಬಲ್‌ಗೆ ೧೨ರಷ್ಟು ಪ್ರತಿವಾದಿಗಳ ಪ್ರಕಾರ ೩೦ ಡೆಸಿಬಲ್‌ಗಳು ಎಂದು ಪ್ರತಿವಾದಿಯು ಗುರ್ತಿಸಿದ್ದಾನೆ. ಇದರಲ್ಲಿ ಶ್ರವಣ ನ್ಯೂನ್ಯತೆ ಉಂಟಾಗಲ್ಲಿಕ್ಕೆ ಶೇ. ೫೦ಡೆಸಿಬಲ್ ಗಿಂತ ಹೆಚ್ಚಿದರೆ ಶ್ರವಣ ನ್ಯೂನ್ಯತೆ ಉಂಟಾಗಿದೆ ಎಂದು ಪ್ರತಿವಾದಿಯೂ ಹೆಚ್ಚಿನದ್ದಾಗಿ ಗುರ್ತಿಸಿದ್ದಾರೆ.

 ಇ ಕೋಷ್ಟಕ ಮಕ್ಕಳು ಶ್ರವಣ ನ್ಯೂನ್ಯತೆಯಲಿದ್ದು ಅವರಿಗೆ ಇರುವ ಡೆಸಿಬಲ್ ಪ್ರಮಾಣ
 ಪ್ರತಿವಾದಿಯು ತನ್ನಲ್ಲಿರುವಂತಹ ಶ್ರವಣ ನ್ಯೂನ್ಯತೆಯ ಪ್ರಮಾಣವನ್ನು ವೈದ್ಯರು ಗುರ್ತಿಸಿದ ಡೆಸಿಬಲ್ ಪ್ರಮಾಣವನ್ನು ತೋರಿಸಿದ್ದಾರೆ. ಇದರಲ್ಲಿ ಪ್ರತಿವಾದಿಗಳು ಹೆಚ್ಚಿನದಾಗಿ ಅವರಲ್ಲಿನ ಶ್ರವಣ ನ್ಯೂನ್ಯತೆಯ ಡೆಸಿಬಲ್ ಪ್ರಮಾಣ ಶೇ. ೯೦ ಕ್ಕಿಂತ ಹೆಚ್ಚಿರುವವರ ಪ್ರಮಾಣವಿದೆ. ಇದರಲ್ಲಿ ಶೇ. ೫೦ ರಷ್ಟು ಅಂತಹ ಮಕ್ಕಳಿದ್ದಾರೆ ಉಳಿದಂತೆ ಶೇ ೪೦, ೬ ಮತ್ತು ೪ ರಷ್ಟು ಪ್ರಮಾಣದಲ್ಲಿ ಪ್ರತಿವಾದಿಗಳು ಕಂಡುಬರುತ್ತಾರೆ.

ಕೋಷ್ಟಕ ಸಂಖ್ಯೆ - ೦೫ : ಪ್ರತಿವಾದಿಗಳ ಶ್ರವಣ ನ್ಯೂನ್ಯತೆ ಸ್ಥಿತಿಗೆ ಸಂಬಂಧಿಸಿದ ಮನೋವಿಭಾಗ
ಅ ಕೋಷ್ಟಕ
ಕ್ರ. ಸಂ     ಮನೋಭಾವ    ಪ್ರತಿವಾದಿಗಳ ಪ್ರಾತಿನಿಧ್ಯ    ಸಂಖ್ಯಾವಾರು    ಶೇಕಡಾವಾರು
೦೧. ಕೀಳರಿಮೆ ಇದೆ ೧೮ . ೩೬%
೦೨     ಕೀಳರಿಮೆ ಇಲ್ಲ . ೩೨ . ೬೪%

ಅ ಕೋಷ್ಟಕ : ಕೀಳರಿಮೆ ಇಲ್ಲದುದರ ಕಾರಣಗಳು:
ನಮ್ಮ ಶ್ರವಣ ನ್ಯೂನ್ಯತೆಗೆ ವೈಯಕ್ತಿಕ ಹೊಣೆಗಾರರಲ್ಲ
ಸಮಾಜವು ನಮ್ಮೊಂದಿಗೆ ಭಿನ್ನವಾಗಿ ವರ್ತಿಸುತ್ತಿದೆ.
ನಮ್ಮ ಜವಾಬ್ದಾರಿ-ಹೊಣೆಗಾರಿಕೆಗಳನ್ನು ಶ್ರವಣ ನ್ಯೂನ್ಯತೆಯವರೊಂದಿಗೆ ಸರಿಸಮನಾಗಿ ನಿಭಾಯಿಸಲಾಗುತ್ತಿದೆ.
ನಮ್ಮ ಶ್ರವಣ ನ್ಯೂನ್ಯತೆಯ ಪರಿಣಾಮಗಳನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಲಾಗಿದೆ.
ನಮ್ಮ ಸಾಧನೆಗಳು ಕೀಳರಿಮೆಯ ಮನೋಭಾವದಿಂದ ದೂರವಿರಲು ಸಾಧ್ಯವಾಗಿದೆ.
ಮಕ್ಕಳ ಎಲ್ಲಾ ಯಶಸ್ಸಿನ ಹಿಂದೆ ಪ್ರೇರಣೆಯಾಗಿ ಕಾರ್ಯ ನಿರ್ವಹಿಸುವ ಪ್ರಮುಖವಾದ ಅಂಶ ಆಶಾಭಾವನೆ ತಾನು ಹೊಂದಿರುವ ಸಮಸ್ಯೆಯಿಂದ ಮಕ್ಕಳು ಹೊರಬರುವ ಸಮಸ್ಯೆಯ ಬಗೆಗಿನ ಕೀಳರಿಮೆಯಿಂದ ಹೊರಬರುವುದೇ ಆಗಿರುತ್ತದೆ. ಈ ವಿಚಾರಗಳು ಅಂಗವಿಕಲರ ಕಲ್ಯಾಣ ಮತ್ತು ಪುನರ್ವಸತಿಯ ನಿಟ್ಟಿನಲ್ಲಿ ಹೆಚ್ಚುಅನ್ವಯಿಕವಾದವುಗಳಾಗಿವೆ ತಮ್ಮ ಶ್ರವಣ ನ್ಯೂನ್ಯತೆಯ ಬಗ್ಗೆ ಶೇ. ೬೪ ಪ್ರತಿವಾದಿಗಳು ಯಾವುದೇ ಕೀಳರಿಮೆಯನ್ನು ಹೊಂದಿಲ್ಲದಿರುವುದು ಒಂದು ಆಶಾದಾಯಕ ಅಂಶವಾಗಿದೆ.
 ತಮ್ಮ ಆಶಾದಾಯಕ ಮನೋಭಾವನೆಗೆ ಪ್ರತಿವಾದಿಗಳು ನೀಡಿರುವ ಕಾರಣಗಳನ್ನು ಕೋಷ್ಟಕ ಅ ಕೋಷ್ಟಕದಲ್ಲಿ ದಾಖಲಿಸಲಾಗಿದೆ. ಹಾಗೇಯೇ ಶೇ. ೩೬ ಪ್ರತಿವಾದಿಗಳು ಶ್ರವಣಾ ನ್ಯೂನ್ಯತೆಯ ಬಗ್ಗೆ ಕೀಳರಿಮೆಯನ್ನು ಹೊಂದಿದ್ದು ತಮ್ಮ ಮನೋಭಾವನೆಗೆ ಗುರ್ತಿಸಿರುವ ಅಂಶಗಳನ್ನು ಕೋಷ್ಟಕದ ಆ ದಲ್ಲಿ ನೀಡಲಾಗಿದೆ.

ಕೋಷ್ಟಕ ಸಂಖ್ಯೆ-೦೬ : ಪ್ರತಿವಾದಿಗಳು ಕನಸು ಕಟ್ಟಿಕೊಂಡಿರುವ ಸುಂದರ ಬದುಕು.
ಗುಣಮಟ್ಟದ ಶಿಕ್ಷಣ ವ್ಯಕ್ತಿಯ ಮನೋಭಾವನೆ, ಆತ್ಮಸೆರ್ಯ ಹಾಗೂ ಅವಕಾಶಗಳನ್ನು ಪೂರೈಸುವ ಒಂದು ಸಾಧನ, ವಿದ್ಯಾರ್ಜನೆಯ ಮೂಲ ಉದ್ದೇಶ ಜ್ಞಾನಾರ್ಜನೆ, ಜಾಗತಿಕ ವಿದ್ಯಮಾನಗಳಾದ ಉದಾರೀಕರಣ ಮತ್ತು ಆರ್ಥಿಕತೆ ಹಾಗೂ ಜಾಗತೀಕರಣದ ಸಂದರ್ಭದಲ್ಲಿ ಶಿಕ್ಷಣವು ಜೀವನದ ಆಗು-ಹೋಗುಗಳನ್ನು ನಿರ್ಧರಿಸುವ ಅಂಶವಾಗಿ ಪರಿಗಣಿಸಲ್ಪಟ್ಟಿದೆ, ಶ್ರವಣ ನ್ಯೂನ್ಯತೆಯ ಹೊರತಾಗಿಯೂ ಶಿಕ್ಷಣವನ್ನು ಪೂರೈಸಿಕೊಳ್ಳುವ ಗುರಿಯತ್ತ ಯಶಸ್ವಿಯಾಗಿ ಸಾಗಿರುವ ಪ್ರತಿವಾದಿಗಳಲ್ಲಿ ಉತ್ತಮ ಆಶಾಭಾವನೆಯೂ ಇದೆ. ಅವರ ಆಶಾಭಾವನೆಯಂತೆ ಹೆತ್ತವರೊಡಗೂಡಿ ಜೀವನ ನಡೆಸುವುದಕ್ಕೆ ಪ್ರತಿವಾದಿಯೂ ಶೇ. ೬೪ ರಷ್ಟು ಇಚ್ಚೆವುಳ್ಳವನಾಗಿದ್ದಾನೆ. ಇನ್ನು ಉಳಿದಂತೆ ಅಂಗವಿಕಲರ ಪುನರ್‌ವಸತಿ ಸ್ಥಾಪನೆಗೆ ಶೇ. ೧೨ ರಷ್ಟು ಹಾಗೂ ಸಮಾಜಸೇವಾ ಕಾರ್ಯದಲ್ಲಿ ಶೇ. ೨೪ ರಷ್ಟು ತಮ್ಮ ಬದುಕನ್ನು ಸುಂದರಗೊಳಿಸುತ್ತದೆ ಎಂದು ಆಶಿಸಿದ್ದಾರೆ.

ಕೋಷ್ಟಕ ಸಂಖ್ಯೆ -೦೭: ಕುಟುಂಬದಲ್ಲಿನ ನಿರ್ಧಾರಕ್ಕೆ ಅವಕಾಶ, ಸಮುದಾಯದಲ್ಲಿನ ಸಹಕಾರ, ಮತ್ತು ವಾಸ್ತವ್ಯದ ಸ್ಥಳ
ಅಕೋಷ್ಟಕ ಕುಟುಂಬದಲ್ಲಿ ನಿರ್ಧಾರ ತೆಗೆದುಕೊಳ್ಳಲು ಅವಕಾಶ
ಪ್ರತಿಯೊಂದು ಕುಟುಂದಲ್ಲಿಯೂ ತಂದೆಯದೇ ವೇದ ವಾಕ್ಯವಾಗಿರುತ್ತದೆ. ಇದರಿಂದ ತಂದೆಯ ಮಾತಿನಂತೆ ಮನೆಯವರು ನಡೆದುಕೊಳ್ಳಬೇಕಾಗುತ್ತದೆ. ಅನಂತರದಲ್ಲಿ ತಾಯಿ ಹಾಗೂ ಮನೆಯ ಇನ್ನಿತರ ಹಿರಿಯ ಸದಸ್ಯರ ಮಾತನ್ನು ಮನೆಯವರೆಲ್ಲ ಕೇಳಬೇಕಾಗುತ್ತದೆ. ಆದರೆ ಇಲ್ಲಿ ಮಕ್ಕಳ ನಿರ್ಧಾರಕ್ಕೆ ಕುಟುಂಬದಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ಅಧ್ಯಯನದಲ್ಲಿ ಪ್ರತಿವಾದಿಯು ತಮ್ಮ ನಿರ್ಧಾರಕ್ಕೆ ಸಲ್ಪಮಟ್ಟಿಗಾದರು ಅವಕಾಶ ಕಲ್ಪಿಸುತ್ತಾರೆ ಎಂದು ಶೇ. ೭೨ ರಷ್ಟು ಗುರ್ತಿಸಿದರೆ ಇನ್ನುಳಿದ ಕುಟುಂಬಗಳಲ್ಲಿ ಶೇ. ೨೬ ರಷ್ಟು ಮಕ್ಕಳಿಗೆ ನಿರ್ಧಾರಕ್ಕೆ ಅವಕಾಶ ಕಲ್ಪಿಸಿಲ್ಲ ಎಂಬುದನ್ನು ತಿಳಿಯಬಹುದು.

ಆಕೋಷ್ಟಕ ಸಮುದಾಯದಲ್ಲಿನ ಸಹಕಾರ
ಅದೇ ರೀತಿಯಾಗಿ ಶ್ರವಣ ನ್ಯೂನ್ಯತೆಯಿರುವಂತಹ ಮಕ್ಕಳ ಸಹಕಾರಕ್ಕೆ ಸಮುದಾಯದ ಜನತೆ ಶೇ. ೭೦ ರಷ್ಟು ಸಹಕರಿಸುತ್ತಾರೆ ಹಾಗೂ ಶೇ. ೩೦ ರಷ್ಟು ಸಮುದಾಯದ ಜನತೆ ತಮ್ಮಂತಹ ಮಕ್ಕಳಿಗೆ ಸಹಕಾರ ನೀಡುವುದಿಲ್ಲಎಂದು ಹೇಳಿದ್ದಾರೆ.

ಇ ಕೋಷ್ಟಕ ವಾಸ್ತವ್ಯವಿರುವ ಸ್ಥಳ
ಮಕ್ಕಳು ತಮ್ಮ ತಮ್ಮ ತಂದೆ ತಾಯಿಯರ ಆಶ್ರಯದಲ್ಲಿದ್ದು ಅವರ ಸಲಹೆಯಂತೆ ಬೆಳೆಯುತ್ತಾರೆ, ಹೆತ್ತವರೊಂದಿಗೆ ಇರುವಂತಹ ಮಕ್ಕಳ ಪ್ರಮಾಣ ಶೇ. ೪೮ ರಷ್ಟು ಹಾಗೂ ಸಂಬಂಧಿಕರೊಂದಿಗೆ, ಬಾಡಿಗೆ ಕೊಠಡಿಯಲ್ಲಿ ಇರುವವರ ಪ್ರಮಾಣ ತಲಾ ಶೇ. ೧ ರಷ್ಟು ಇದೆ.

ಕೋಷ್ಟಕ-೦೮: ಶ್ರವಣ ನ್ಯೂನ್ಯತೆ ಹುಟ್ಟಿನಿಂದಲೂ ಇರುವ ಸಾಧ್ಯತೆಯ ಪ್ರಮಾಣ ಹಾಗೂ ಶಿಕ್ಷಕ ಸಹಕಾರದ ರೂಪ
ಅಕೋಷ್ಟಕ ಶ್ರವಣ ನ್ಯೂನ್ಯತೆ ಹುಟ್ಟಿನಿಂದ ಇರುವ ಸಾಧ್ಯತೆ
ವಿದ್ಯಾರ್ಥಿಗಳಲ್ಲಿ ಶ್ರವಣದೋಷದ ಸಮಸ್ಯೆಯು ಹುಟ್ಟಿದಾಗಿನಿಂದಲೂ ಇತ್ತು ಎಂಬುದಕ್ಕೆ ಪ್ರತಿವಾದಿಯು ಶೇ. ೩೮ ರಷ್ಟು ಒಪ್ಪಿಗೆ ನೀಡಿದರೆ ಶ್ರವಣದೋಷದ ಸಮಸ್ಯೆಯು ಹುಟ್ಟಿದಾಗಿನಿಂದಲು ಇರಲಿಲ್ಲ ಇದು ವಿವಿಧ ರೀತಿಯ ಕಾರಣಗಳಿಂದ ಉಂಟಾಯಿತು ಎಂದು ಶೇ. ೬೪ ರಷ್ಟು ಪ್ರತಿವಾದಿಯು ತಿಳಿಸಿದ್ದಾನೆ.

ಆಕೋಷ್ಟಕ ಶ್ರವಣ ನ್ಯೂನ್ಯತೆ ಅನಂತರದಲ್ಲಿ ಹೇಗೆ ಉಂಟಾಯಿತು
ಪ್ರತಿವಾದಿಗೆ ಶ್ರವಣದೋಷ ಎಂಬುದು ಅಪಘಾತದಿಂದ ಉಂಟಾಯಿತು ಎಂದು, ಶೇ. ೪ ರಷ್ಟು ಪ್ರತಿವಾದಿಯು ತಿಳಿಸಿದ್ದು, ಧೀರ್ಘಾಕಾಲಿನ ಅನಾರೋಗ್ಯದಿಂದ ಉಂಟಾಗಿದೆ ಎಂದು, ಶೇ. ೨೪ ರಷ್ಟು ಶಬ್ಧದಿಂದ ಉಂಟಾಗಿದೆ ಎಂದು ಮತ್ತು ಶೇ. ೨೦ ರಷ್ಟು ಇತರೆ ಕಾರಣಗಳಿಂದ ಹಾಗೂ ಶೇ. ೨೮ ರಷ್ಟು ಶ್ರವಣದೋಷಕ್ಕೆ ಕಾರಣವಾಯಿತು ಎಂದು ಪ್ರತಿವಾದಿಯು ತಿಳಿಯಪಡಿಸಿದ್ದಾನೆ.

ಇಕೋಷ್ಟಕ ಶಿಕ್ಷಕರ ಸಹಕಾರದ ರೂಪ
ಇತಂಹ ಶ್ರವಣದೋಷವುಳ್ಳ ಮಕ್ಕಳಿಗೆ ಎಸ್. ಆರ್. ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಶಿಕ್ಷಕರ ಸಹಕಾರದ ರೂಪದಲ್ಲಿ ವಿಶೇಷ ಕಾಳಜಿಗೆ ಪ್ರತಿವಾದಿಯು ಶೆ. ೫೮ ರಷ್ಟು ಮೆಚ್ಚಿಗೆ ವ್ಯಕ್ತಪಡಿಸಿದರೆ ಉಳಿದಂತೆ ಪಠ್ಯಪುಸ್ತಕ ಒದಗಿಸುವಿಕೆ ಶೇ. ೨೨ ರಷ್ಟು ಅಪ್ತಸಮಾಲೋಚನೆ ಮತ್ತು ಸಂವಾದಕ್ಕೆ ಅವಕಾಶ ಶೇ. ೬ ರಷ್ಟು ಹಾಗೂ ಇತರೆ ಸಹಕಾರದ ರೂಪಕ್ಕೆ ಶೇ. ತಲಾ ೧ ರಂತೆ ಸೂಚಿಸಿದ್ದು ಪ್ರತಿವಾದಿಯು ಶಿಕ್ಷಕರು ಪ್ರತಿಯೊಂದು ಹಂತದಲ್ಲಿಯೂ ತೋರುವಂತಹ ಕಾಳಜಿಯ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.

ಕೋಷ್ಟಕ ಸಂಖ್ಯೆ-೦೯ ಸಂಸ್ಥೆಯ ಗುಣಗಳು ಮತ್ತು ಕಲಿಕೆಯ ವಿಧಾನ
ಅ ಕೋಷ್ಟಕ -ಸಂಸ್ಥೆಯ ಸಹಕಾರದ ರೂಪ
ಎಸ್. ಅರ್. ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆ ವಿದ್ಯಾರ್ಥಿಗಳ ಸಮಸ್ಯೆಯನ್ನು ಬಗೆಹರಿಸುವಲ್ಲಿ ಹಾಗೂ ಪರಿಹಾರವನ್ನು ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ಇಲ್ಲಿ ಅಧ್ಯಯನ ಮಾಡುವಂತಹ ವಿದ್ಯಾರ್ಥಿಗಳು ಶೇ. ೯೨ ರಷ್ಟು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇನ್ನುಳಿದಂತೆ ಸಂಸ್ಥೆಯ ಸಹಕಾರಕ್ಕೆ ಮಕ್ಕಳು ಯಾವುದೇ ಮೆಚ್ಚುಗೆ ಒದಗಿಸಿಲ್ಲ ಇದಕ್ಕೆ ಸಂಬಂಧಿಸಿದಂತೆ ಪ್ರತಿವಾಧಿಗಳು ಶೇ. ೮ ರಷ್ಟು ನಿಸ್ಸಾಹಾಯಕರಾಗಿ ತಿಳಿಸಿದ್ದಾರೆ. .

ಆಕೋಷ್ಟಕ ಸಂಸ್ಥೆಯ ಕಾರ್ಯವೈಖರಿಯಿಂದ ಮಕ್ಕಳಲ್ಲಿ ಅದ ಗುಣಗಳು
ಸಂಸ್ಥೆಯಲ್ಲಿನ ಕಾರ್ಯವೈಖರಿಯಿಂದ ಮಕ್ಕಳು ಉತ್ತಮ ರೀತಿಯ ಗುಣಗಳನ್ನು ಕಂಡುಕೊಂಡಿದ್ದಾರೆ ಇದರಲ್ಲಿ ಹೆಚ್ಚಿನದಾಗಿ ಸಹಾಯ ಮಾಡುವ ಗುಣವನ್ನು ಮಕ್ಕಳು ಮೈಗೊಡಿಸಿಕೊಂಡಿದ್ದಾರೆ ಎಂಬುದನ್ನು ಅರಿಯಬಹುದು, ಇದಕ್ಕೆ ಸಂಬಂಧಿಸಿದಂತೆ ಪ್ರತಿವಾದಿಯು ಶೇ. ೩೮ ರಷ್ಟು ಆಸಕ್ತಿ ವಹಿಸಿದ್ದಾರೆ. ಉಳಿದಂತೆ ನಾಯಕತ್ವ ಗುಣ ಶೇ. ೧೮ ರಷ್ಟು, ಸಂವಹನದ ಕೌಶಲ್ಯ ಶೇ. ೧೦ ರಷ್ಟು ಹಾಗೂ ಈ ಮೇಲಿನ ಎಲ್ಲಾ ಗುಣಗಳನ್ನು ಅಳವಡಿಸಿಕೊಂಡಿದ್ದೇನೆ ಎಂಬುದಕ್ಕೆ ಶೇ. ೩೪ ರಷ್ಟು ಪ್ರತಿವಾದಿಯು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾನೆ.

ಇಕೋಷ್ಟಕ ಸಂವಹನದ ಕಲಿಕೆಯ ವಿಧಾನ
ಭಾಷಾ ಸಂವಹನದ ಕಲಿಕಾ ವಿಧಾನದಲ್ಲಿ ವಿದ್ಯಾರ್ಥಿಗಳು ಸಂವಹನದ ವಿಧಾನದಿಂದ ಕಲಿಕೆಯ ಪ್ರಮಾಣ ಹೆಚ್ಚಿದೆ ಎಂದು ಶೇ. ೬೨ ರಷ್ಟು ಆಸಕ್ತಿಯನ್ನು ತೋರಿಸಿದ್ದಾರೆ , ಇನ್ನುಳಿದಂತೆ ಮೌಖಿಕ ವಿಧಾನಕ್ಕೆ ಶೇ. ೬೨ ರಷ್ಟು , ಲಿಖಿತ ವಿಧಾನಕ್ಕೆ ಶೇ. ೩೬ ರಷ್ಟು ಪ್ರತಿವಾದಿಯು ಪ್ರತಿಕ್ರಿಯಿಸಿದ್ದಾರೆ .

ಕೋಷ್ಟಕ ಸಂಖ್ಯೆ - ೧೦: ಪ್ರತಿಭೆ ಅನಾವರಣ, ಓದುವ ಆಸಕ್ತಿ ಮತ್ತು ಸಂಸ್ಥೆಯಿಂದ ವಿದ್ಯಾರ್ಥಿಗಳಲ್ಲಿ ಆದಂತಹ ಬದಲಾವಣೆಗಳು
ಅ ಕೋಷ್ಟಕ ಸಂಸ್ಥೆಯು ವಿದ್ಯಾರ್ಥಿಗಳಲ್ಲಿನ ಪ್ರತಿಭೆಯ ಅನಾವರಣ
ಎಸ್. ಆರ್. ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆ ಪ್ರತಿಭೆಯ ಅನಾವರಣಕ್ಕೆ ತುಂಬಾ ಸಹಾಯಕವಾಗಿದೆ ಎಂದು ಮಕ್ಕಳು ತಿಳಿಸಿದ್ದು, ಇದರಲ್ಲಿ ಹೆಚ್ಚಿನದಾಗಿ ಸಂಸ್ಥೆಯಿಂದ ಪ್ರತಿಭೆಯ ಅನಾವರಣಕ್ಕೆ ಹೆಚ್ಚು ಸಹಕಾರಿಯಾಗಿದೆ. ಮುಕ್ತ ಅವಕಾಶ, ಮಕ್ಕಳ ಹಿತಾಶಕ್ತಿಗೆ ಶೇ. ೪೦ ರಷ್ಟು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಅನಂತರದಲ್ಲಿ ಅಭಿಪ್ರಾಯ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಶೇ. ೧೧, ಪಠ್ಯೇತರ ಚಟುವಟಿಕೆಗಳಿಗೆ ಶೇ. ೫ ರಷ್ಟು ಹಾಗೂ ಇವುಗಳೆಲ್ಲದರ ಮೇಲೆ ಶೇ. ೨೮ ರಷ್ಟು ಆಸಕ್ತಿ ವಹಿಸಿದ್ದಾರೆ.

ಆಕೋಷ್ಟಕ ಶ್ರವಣದೋಷ ಸಮಸ್ಯೆಯಿಂದಲು ಓದುವ ಆಸಕ್ತಿ
ಶ್ರವಣದೋಷದ ಸಮಸ್ಯೆಯಿದ್ದರು ಸಹ ಈ ಮಕ್ಕಳು ಓದುವ ಆಸಕ್ತಿಯನ್ನು ಕಳೆದುಕೊಂಡಿಲ್ಲ, ಇದರಲ್ಲಿ ಓದುವ ಆಸಕ್ತಿಯ ಪ್ರಮಾಣ ವಿದ್ಯಾರ್ಥಿಗಳಲ್ಲಿ ಶೇ. ೪೬ ರಷ್ಟು ಇದ್ದು, ಉಳಿದಂತೆ ಓದುವ ಆಸಕ್ತಿಯಿಲ್ಲದಿರುವವರ ಪ್ರಮಾಣ ಶೇ. ೮ ರಷ್ಟು ಪ್ರತಿವಾದಿಯು ಗುರ್ತಿಸಿದ್ದಾನೆ.

 ಇ ಕೋಷ್ಟಕ ಸಂಸ್ಥೆಯಿಂದ ಮಕ್ಕಳಲ್ಲಿ ಬದಲಾವಣೆ
ಎಸ್. ಆರ್. ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆಯಿಂದ ವಿದ್ಯಾರ್ಥಿಗಳಲ್ಲಿ ಯಾವ ರೀತಿಯ ಬದಲಾವಣೆಗಳಾಗಿವೆ ಎಂಬುದನ್ನು ವಿದ್ಯಾರ್ಥಿಗಳು ಎಲ್ಲಾ ವಿಷಯದಲ್ಲಿಯೂ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇದರಲ್ಲಿ ಸಂವಹನದಲ್ಲಿ ಬದಲಾವಣೆ ಶೇ. ೧೨, ವರ್ತನೆಯಲ್ಲಿ ಸುಧಾರಣೆ ಶೇ. ೧೫ ರಷ್ಟು ಮತ್ತು ಕ್ರಿಯಾಶೀಲತೆಯಲ್ಲಿ ಶೇ ೬ರಷ್ಟು ಆದರೆ ಎಲ್ಲಾ ವಿಷಯಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನದಾಗಿ ಶೇ. ೫೨ ರಷ್ಟು ಮೆಚ್ಚಿಗೆಯನ್ನು ವ್ಯಕ್ತಪಡಿಸಿದ್ದಾರೆ.

ಕೋಷ್ಟಕ ಸಂಖ್ಯೆ-೧೧
ಸಹಪಾಠಿಗಳ ಸಹಕಾರ, ಉಚಿತಶಿಕ್ಷಣ, ಮತ್ತು ಶ್ರವಣ ನ್ಯೂನ್ಯತೆಯ ಸಮಸ್ಯೆಯಿಂದಲು ಇತರೆ ಶಬ್ಧಗಳಿಗೆ ಪ್ರತಿಕ್ರಿಯೆ ಕಷ್ಟವಾಗಿದೆಯೇ.
ಅಕೋಷ್ಟಕ ಸಹಪಾಠಿಗಳ ಸಹಕಾರದ ಸ್ವರೂಪ
ಶಾಲೆಯಲ್ಲಿ ಸಹಪಾಠಿಗಳು ವಿದ್ಯಾರ್ಥಿಗಳ ಸಮೂಹದಲ್ಲಿ ಯಾವ ರೀತಿಯಲ್ಲಿ ಸಹಕರಿಸುತ್ತಾರೆ ಎಂಬುದಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಸ್ನೇಹಿತರು ಪ್ರತಿಯೊಂದು ಹಂತದಲ್ಲಿಯು ಸಹಾಯದ ಮಾನೋಭಾವನೆಯನ್ನು ಹೊಂದಿದ್ದು, ಇದರಲ್ಲಿ ಹೆಚ್ಚಿನದಾಗಿ ಎಲ್ಲರೊಂದಿಗೆ ವಿಶೇಷ ಕಾಳಜಿಯನ್ನು ಶೇ. ೭೨ ರಷ್ಟು ಆಸಕ್ತಿಯನ್ನು ಹೊಂದಿರುವರಾಗಿರುತ್ತಾರೆ. ಉಳಿದಂತೆ ಅಧ್ಯಯನಕೆ ಶೇ. ೨೪, ಕೇಳಿಸಿಕೊಳ್ಳುವುದಕ್ಕೆ ನೆರವು ತಲಾ ಶೇ. ೧ ಇತರೆ ಶೇ. ೧ ರಷ್ಟು ಸಹಪಾಠಿಗಳು ವಿವಿಧ ರೀತಿಯಲ್ಲಿ ಸಹಕರಿಸುವರು ಎಂದು ಹೇಳಿದ್ದಾರೆ.

ಆಕೋಷ್ಟಕ ಶ್ರವಣ ನ್ಯೂನ್ಯತೆ ವಿದ್ಯಾರ್ಥಿಗಳಿಗೆ ಎಷ್ಟನೇ ವಯಸ್ಸಿಗೆ ಉಚಿತ ಶಿಕ್ಷಣ
ಶ್ರವಣ ನ್ಯೂನ್ಯತೆವುಳ್ಳ ವಿದ್ಯಾರ್ಥಿಗಳಿಗೆ ಎಲ್ಲಿಯವರೆಗೆ ಶಿಕ್ಷಣವನ್ನು ನೀಡುತ್ತಾರೆ ಎಂಬುದರ ಬಗ್ಗೆ ಮಕ್ಕಳಿಗೆ ಅರಿವಿದ್ದು ಪ್ರತಿವಾದಿಯು ಇದಕ್ಕೆ ಸಂಬಂಧಿಸಿದಂತೆ ಶೇ. ೫೨ ರಷ್ಟು ಗುರ್ತಿಸಿದ್ದು ಉಳಿದಂತೆ ೨೧ ವರ್ಷಕ್ಕೆ ಶೇ. ೩೪, ೨೫ ವರ್ಷಕ್ಕೆ ಶೇ. ೮ ಅತೀ ಹೆಚ್ಚಿನದಾಗಿ ೧೮ ವರ್ಷದವರೆಗೆ ಶಿಕ್ಷಣವನ್ನು ನೀಡುತ್ತಾರೆ ಎಂಬುದಕ್ಕೆ ಪ್ರತಿವಾದಿಯು ಶೇ. ೫೨ ರಷ್ಟು ಗುರ್ತಿಸಿದ್ದಾರೆ. .

ಇ ಕೋಷ್ಟಕ ಶಬ್ಧಗಳಿಗೆ ಪ್ರತಿಕ್ರಿಯಿಸಲು ಕಷ್ಟವಾಗುವಿಕೆ
ಶ್ರವಣ ನ್ಯೂನ್ಯತೆಯುಳ್ಳ ಮಕ್ಕಳು ಕೆಲವು ಶಬ್ಧಗಳಿಗೆ ಪ್ರತಿಕ್ರಿಯಿಸಲು ಕಷ್ಟಪಡುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿವಾದಿಯು ಶೆ. ೮೮ ರಷ್ಟು ಪ್ರತಿಕ್ರಿಯಿಸಿದ್ದು ಇತರೆ ವಿದ್ಯಾರ್ಥಿಗಳು ಪ್ರತಿಕ್ರಿಯಿಸಲು ಸಾಧ್ಯತೆಯಿದೆ ಎಂದು ಶೇ. ೧೨ ರಷ್ಟು ವಿದ್ಯಾರ್ಥಿಗಳು ತಿಳಿಸಿದ್ದಾರೆ.

ಕೋಷ್ಟಕ ಸಂಖ್ಯೆ-೧೨: ಉದ್ಯೋಗದಲ್ಲಿನ ಮೀಸಲಾತಿ, ಉಚಿತ ಬಸ್ ವ್ಯವಸ್ಥೆ ಮತ್ತು ಕ್ರೀಡಾಕೂಟಗಳಲ್ಲಿ ಭಾಗವಹಿಸುವಿಕೆಗೆ ಸಂಬಂಧಿಸಿದಂತೆ
ಅ ಕೋಷ್ಟಕ ಶ್ರವಣ ನ್ಯೂನ್ಯತೆ ವಿದ್ಯಾರ್ಥಿಗಳಿಗೆ ಉದ್ಯೋಗದಲ್ಲಿನ ಮೀಸಲಾತಿ ಪ್ರಮಾಣ
ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರ ಶ್ರವಣ ನ್ಯೂನ್ಯತೆವುಳ್ಳವರಿಗೆ ಉದ್ಯೋಗದಲ್ಲಿ ಶೇ. ೩ ರಷ್ಟು ಮೀಸಲಾತಿಯನ್ನು ನೀಡಿದೆ. ಇದಕ್ಕೆ ಸಂಬಂಧಿಸಿದಂತೆ ಎಸ್. ಆರ್. ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆಯ ಮಕ್ಕಳು ಹೆಚ್ಚಿನದ್ದಾಗಿ ಶೇ. ೬೨ ರಷ್ಟು ಗುರ್ತಿಸಿದ್ದಾರೆ. ಇದರಿಂದ ಹದಿಹರೆಯ ಮಕ್ಕಳಿಗೆ ಮೀಸಲಾತಿಯ ಪ್ರಮಾಣ ಅರಿವಿದೆ ಎಂದು ತಿಳಿಯಬಹುದು.

ಆಕೋಷ್ಟಕ ರಾಜ್ಯಸರ್ಕಾರ ಎಷ್ಟು ಕಿ. ಮೀ ವರೆಗೆ ಉಚಿತ ಬಸ್‌ಪಾಸ್ ವ್ಯವಸ್ಥೆ ಕಲ್ಪಿಸಿದೆ
ನಮ್ಮ ಕರ್ನಾಟಕ ಸರ್ಕಾರ ಎಲ್ಲಾ ಶ್ರವಣ ನ್ಯೂನ್ಯತೆವುಳ್ಳ ಮಕ್ಕಳಿಗೆ ೧೦೦ ಕಿ. ಮೀ ವರೆಗೆ ಉಚಿತ ಬಸ್‌ಪಾಸ್ ವ್ಯವಸ್ಥೆಯನ್ನು ಕಲ್ಪಿಸಿದೆ. ಇದರಿಂದ ಬಹಳಷ್ಟು ಮಕ್ಕಳಿಗೆ ತುಂಬ ಸಹಕಾರಿಯಾಗಿದೆ. ಇದಕ್ಕೆ ಪ್ರತಿವಾದಿಯು ಶೇ. ೬೬ ರಷ್ಟು ಗುರ್ತಿಸಿದ್ದು ಇದರಲ್ಲಿ ಪ್ರತಿವಾದಿಯು ಇದರ ಸದೂಪಯೋಗವನ್ನು ಪಡೆಯುತ್ತಿದ್ದಾನೆ ಎಂಬುದನ್ನು ಅರಿಯಬಹುದು.

ಕೋಷ್ಟಕ ಸಂಖ್ಯೆ-೧೪ : ಸ್ವಯಂ ಸೇವ ಸಂಸ್ಥೆಂii ನೆರವು, ತರಗತಿಯಲ್ಲಿನ ಕಲಿಕೆಯ ನಿಧಾನಗತಿಗೆ ಕಾರಣಗಳು.
ಅಕೋಷ್ಟಕ ವಿದ್ಯಾಭ್ಯಾಸದ ಸಲುವಾಗಿ ಸ್ವಯಂ ಸೇವ ಸಂಸ್ಥೆಯ ನೆರವು
ಎಸ್. ಆರ್. ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆಯೂ ಒಂದು ಸರ್ಕಾರೇತರ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದು ನಮ್ಮಂತಹ ಶ್ರವಣ ನ್ಯೂನ್ಯತೆವುಳ್ಳ ಮಕ್ಕಳಿಗೆ ಸ್ಥಳೀಯ ಪ್ರಾಧಿಕಾರಗಳು ಮತ್ತು ವಿದೇಶಿ ಉದ್ಯಮ ಸಂಸ್ಥೆಗಳು ಸಹಾಯ ಧನವನ್ನು ನೀಡಿ ಉಚಿತ ಪಠ್ಯಪುಸ್ತಕ, ಹಾಲು, ಊಟದ ವ್ಯವಸ್ಥೆಯನ್ನು ಕಲ್ಪಿಸಿದೆ ಎಂದು ಹೆಚ್ಚಿನದಾಗಿ ಪ್ರತಿವಾದಿಯು ಶೇ. ೯೪ ರಷ್ಟು ಗುರ್ತಿಸಿದ್ದು ಇನ್ನುಳಿದಂತೆ ಸಹಾಯವಿಲ್ಲ ಎಂಬುದಕ್ಕೆ ಪ್ರತಿವಾದಿಯು ಶೇ. ೬ ರಷ್ಟು ಗುರ್ತಿಸಿದ್ದಾರೆ.

ಆ ಕೋಷ್ಟಕ ತರಗತಿಯಲ್ಲಿ ನಿಧಾನವಾಗಿ ಉತ್ತರಿಸಲು ಕಾರಣ
ಶ್ರವಣ ನ್ಯೂನ್ಯತೆವುಳ್ಳ ಮಕ್ಕಳು ತರಗತಿಯಲ್ಲಿ ವಿವಿಧ ರೀತಿಯಲ್ಲಿ ಕಲಿಕೆಯ ಸಮಸ್ಯೆಯನ್ನು ಎದುರಿಸುತ್ತಾರೆ. ಇದನ್ನು ಈ ಮಕ್ಕಳು ಕೇಳಿಸುವಿಕೆಯಲ್ಲಿ ಅಸಹಾಯಕತೆ ಮತ್ತು ಸಾಧರಣತೆ ಎಂಬುದನ್ನು ಪ್ರತಿಕ್ರಿಯಿಸಿದ್ದು ಇದರಲ್ಲಿ ಅಸಹಾಯಕತೆಗೆ ಶೇ. ೪೪ ರಷ್ಟು ಮತ್ತು ಸಾಧಾರಣತೆಗೆ ಶೇ. ೨೨ ರಷ್ಟು ತಿಳಿಸಿದ್ದು ಉಳಿದಂತೆ ಕಲ್ಪನೆಯಲ್ಲಿ ಮುಳುಗುವಿಕೆ ಮತ್ತು ವಿವಿಧ ಕಾರಣಗಳನ್ನು ಸೂಚಿಸಿದ್ದಾರೆ.

ಕೋಷ್ಟಕ ಸಂಖ್ಯೆ-೧೫: ಅಂಗವಿಕಲತೆ ಕಾಯ್ದೆಯ ಬಗೆಗಿನ ಅರಿವು ಮತ್ತು ಮೀಸಲಾತಿ.
ಅ ಕೋಷ್ಟಕ ಅಂಗವಿಕಲತೆಯ ಕಾಯ್ದೆ-‘೧೯೯೫ ಬಗೆಗಿನ ಅರಿವು
ಶ್ರವಣ ನ್ಯೂನ್ಯತೆಯು ಅಂಗವಿಕಲತೆಯ ಒಂದು ಭಾಗವಾಗಿದ್ದು ಇದರಲ್ಲಿ ವಿದ್ಯಾರ್ಥಿಗಳಿಗೆ ಇದರ ಬಗ್ಗೆ ಅರಿವಿದೆಯೇ (ಆ ಕಾಯ್ದೆಯ ಯೋಜನೆಗಳನ್ನು ಸದುಪಯೋಗ ಪಡೆಯುತ್ತಿದ್ದಾರೆ ಎಂಬುದನ್ನು ತಿಳಿಯುವುದಕ್ಕೆ ಕೇಳಲಾಯಿತು) ಎಂಬುದನ್ನು ತಿಳಿಯಲು ಕೇಳಿದ್ದು ಇದರಲ್ಲಿ ಪ್ರತಿವಾದಿಯು ಅಂಗವಿಕಲತೆಯ ಕಾಯ್ದೆ ೧೯೯೫ ಅರಿವಿದೆ, ಎಂಬುದಕ್ಕೆ ಶೇ. ೩೦ ರಷ್ಟು ಗುರ್ತಿಸಿದ್ದು ಇದರ ಬಗ್ಗೆ ಅರಿವು ಇಲ್ಲ ಎಂಬುದಕ್ಕೆ ಪ್ರತಿವಾದಿಯು ಶೇ, ೭೦ ರಷ್ಟು ಗುರ್ತಿಸಿರುವುದು ಕಾಣಬಹುದಾಗಿದೆ.

ಆಕೋಷ್ಟಕ ಉನ್ನತ ಶಿಕ್ಷಣಕ್ಕೆ ಮೀಸಲಾತಿ
 ಶ್ರವಣ ನ್ಯೂನ್ಯತೆವುಳ್ಳ ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆದ ನಂತರ ಉನ್ನತ ಶಿಕ್ಷಣವನ್ನು ಪಡೆಯುವಾಗ ಅಂಗವಿಕಲತೆಯ ಭಾಗವಾಗಿರುವ ಶ್ರವಣದೋಷವುಳ್ಳವರಿಗೂ ಶೇ. ೩ ರಷ್ಟು ಮೀಸಲಾತಿಯನ್ನು ನೀಡುವರು ಎಂಬುದರ ಬಗ್ಗೆ ಪ್ರತಿವಾದಿಗೆ ಅರಿವಿರುವುದು ತಿಳಿದುಬರುತ್ತದೆ. ಇದಕ್ಕೆ ಪ್ರತಿವಾದಿಯು ಶೇ. ೭೨ ರಷ್ಟು ಗುರ್ತಿಸಿರುವುದು ಈ ಮೇಲಿನ ವಿಭಾಗದಲ್ಲಿ ತೋರಿಸಲಾಗಿದೆ.

ಅಧ್ಯಾಯ -೫
ಸಂಶೋಧನಾ ಫಲ, ಸಲಹೆಗಳು ಮತ್ತು ಉಪಸಂಹಾರ
ಸಂಶೋಧನಾ ಫಲ:

ಸಂಶೋಧನೆಗಾಗಿ ಪ್ರಾಥಮಿಕ ಮಾಹಿತಿಯನ್ನು ಒದಗಿಸಿದವರು ಎಸ್. ಆರ್. ಚಂದ್ರಶೇಖರ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಹದಿಹರೆಯದ ವಿದ್ಯಾರ್ಥಿಗಳು, ಇವರಲ್ಲಿ ಗಂಡು ೨೭ ಮತ್ತು ಹೆಣ್ಣು ೨೩ ಪ್ರಾತಿನಿಧ್ಯವು ಅನುಕ್ರಮವಾಗಿ ಶೇ. ೫೪ ಮತ್ತು ಶೇ. ೪೬ ರ ಪ್ರಮಾಣದಲ್ಲಿದೆ.
ಶೇ. ೨೮ ಪ್ರಾತಿವಾಧಿಗಳು ಕನ್ನಡ ಮಾಧ್ಯಮದವರಾದ್ದು, ಇನ್ನುಳಿದಂತೆ ಶೇ. ೭೨ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಕೆಯನ್ನು ಮುಂದುವರಿಸಿದ್ದಾರೆ.
ಶೇ. ೮೬, ೮ ಹಾಗೂ ಶೇ . ೬ ರ ಪ್ರಮಾಣದಲ್ಲಿ ಪ್ರತಿವಾದಿಗಳು ಅನುಕ್ರಮವಾಗಿ ಹಿಂದೂ ,ಮುಸ್ಲಿಂ ಹಾಗೂ ಕ್ರೈಸ್ತ ಧರ್ಮದಲ್ಲಿ ಹಂಚಿಕೆಯಾಗಿದ್ದಾರೆ.
ಶೆ. ೩೨ ರಷ್ಟು ಕನ್ನಡ ಮಾತೃಭಾಷಿಗರು ಇದ್ದು ಇತರರೂ ಶೇ. ೧ ಮತ್ತು ೮ ರ ಪ್ರಮಾಣದಲ್ಲಿ ಹಿಂದಿ ಮತ್ತು ತೆಲುಗು ಭಾಷಿUರಿದ್ದಾರೆ, ಹಾಗೂ ಉಳಿದಂತೆ ಈ ಮೇಲಿನ ಎಲ್ಲಾ ಭಾಷೆಯನ್ನು ಬಲ್ಲವರು ಶೇ. ೫೦ ರಷ್ಟು ಇದ್ದಾರೆ.
ಶೇ. ೮೨ ರಷ್ಟು ವಿಭಕ್ತ ಕುಟುಂಬದಲ್ಲಿನ ಸದಸ್ಯರಾಗಿದ್ದು, ಕುಟುಂಬದಲ್ಲಿನ ಸದಸ್ಯರ ಸಂಖ್ಯೆಯೂ ಕನಿಷ್ಠ ೨ ರಿಂದ ಗರಿಷ್ಠ ೫ ಕ್ಕಿಂತಲೂ ಕಡಿಮೆಯಿದ್ದು ಅವಿಭಕ್ತ ಕುಟುಂಬದಲ್ಲಿ ಶೇ. ೧೮ ರಷ್ಟು ಪ್ರತಿವಾದಿಯು ಇರುವುದು ಕಂಡುಬರುತ್ತದೆ.
ಪ್ರತಿವಾದಿಗಳ ಕುಟುಂಬಗಳು ತಮ್ಮ ವಾಸ್ತವ್ಯ ಸ್ಥಳಗಳ ಅನುಸಾರ ನಗರ, ಗ್ರಾಮ ಮತ್ತು ಹೋಬಳಿಯ ಕೇಂದ್ರ ಸ್ಥಾನಗಳನ್ನು ಪ್ರತಿನಿದಿಸಿವೆ. ನಗರಗಳಲ್ಲಿ ವಾಸ್ತವ್ಯವಿರುವ ಕುಟುಂಬಗಳ ಪ್ರತಿನಿಧ್ಯವು ಶೇ. ೮೪ ರ ಪ್ರಮಾಣದಲ್ಲಿದೆ.
ಶ್ರವಣದೋಷದ ಸಮಸ್ಯೆಯಿಂದ ಬಳಲುತ್ತಿರುವಂತಹ ಮಕ್ಕಳು ಶ್ರವಣದೋಷ ಉಂಟಾಗಲು ಪ್ರಮುಖ ಕಾರಣಗಳಲ್ಲಿ ದೈತ್ಯಶಬ್ಧಗಳಿಂದ ಉಂಟಾಯಿತು ಎಂದು ಶೇ ೫೨ ರಷ್ಟು ತಿಳಿಸಿದ್ದು ಉಳಿದಂತೆ ಅನುವಂಶೀಯತೆ ಮತ್ತು ಕಿವಿಸೋರುವಿಕೆ ಹಾಗು ಇತರೆ ಸೋಂಕುಗಳ ತಗುಲುವಿಕೆಯಿಂದ ಉಂಟಾಯಿತು ಎಂಬುದನ್ನು ತಿಳಿಯಬಹುದು.
ಎಸ್. ಆರ್. ಚಂದ್ರಶೇಖರ ವಾಕ್ ಮತ್ತು ಶ್ರವಣ ಸಂಸ್ಥೆಯು ಇಂತಹ ಶ್ರವಣ ನ್ಯೂನ್ಯತೆವುಳ್ಳ ಮಕ್ಕಳಿಗೆ ಶ್ರಮಿಸುತ್ತಿರುವ್ಯದರಿಂದ, ಈ ಮಕ್ಕಳು ಸಂಸ್ಥೆಯ ಕಾರ್ಯವೈಖರಿಯನ್ನು ಮನಗಂಡು ಸಹಾಯ ಮಾಡುವ ಗುಣಕ್ಕೆ ಶೇ. ೩೮ ರಷ್ಟು ಪ್ರೇರೆಪಿತರಾಗಿದ್ದಾರೆ. ಉಳಿದಂತೆ ನಾಯಕತ್ವ ಗುಣ ಮತ್ತು ಸಂವಹನ ಕೌಶಲ್ಯವನ್ನು ಅಳವಡಿಸಿಕೊಂಡಿರುವುದು ಕಂಡುಬರುತ್ತದೆ.
ಶ್ರವಣ ನ್ಯೂನ್ಯತೆವುಳ್ಳ ಮಕ್ಕಳು ಈ ಒಂದು ಸಂಸ್ಥೆಯಲ್ಲಿ ಭಾಷೆಯನ್ನು ಕಲಿಯುವುದಕ್ಕೆ ಹೆಚ್ಚಿನದಾಗಿ ಸಂವಹನ ವಿಧಾನ ಅಳವಡಿಸಿಕೊಂಡಿದ್ದು ಶೇ. ೬೨ ರಷ್ಟು ಪ್ರತಿವಾದಿಯು ತಿಳಿಸಿದ್ದು ಉಳಿದಂತೆ ಮೌಖಿಕ ಮತ್ತು ಲಿಖಿತ ವಿಧಾನದ ಮುಲಕ ಭಾಷೆಯನ್ನು ಕಲಿಕೆಯ ವಿಧಾನವಾಗಿ ರೂಡಿಸಿಕೊಂಡಿರುವುದು ತಿಳಿದುಬರುತ್ತದೆ.
ಭಾಷೆಯು ಮಕ್ಕಳಲ್ಲಿನ ಪ್ರತಿಭೆಯ ಅನಾವರಣಕ್ಕೆ ಹೆಚ್ಚಿನದಾಗಿ ಮುಕ್ತ ಅವಕಾಶ, ಮಕ್ಕಳ ಹಿತಾಸಕ್ತಿಗೆ ಹೆಚ್ಚಿನ ಪ್ರಮುಖ್ಯತಯನ್ನು ನೀಡುತ್ತಿದೆ ಎಂಬುದನ್ನು ತಿಳಿಯಬಹುದು. ಇದರಿಂದ ಪ್ರತಿವಾದಿಗಳಿಗೆ ಸಹಾಯಕವಾಗುತ್ತಿದ್ದು ಶೇ. ೪೦ ರಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದು ಉಳಿದಂತೆ ಅಭಿಪ್ರಾಯ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಅವಕಾಶವಿದೆ ಎಂಬುದನ್ನು ತಿಳಿಯಬಹುದು.
ಶ್ರವಣದೋಷದಂತಹ ಸಮಸ್ಯೆಯಿದ್ದರೂ ನಮ್ಮಲ್ಲಿ ಓದುವಂತಹ ಆಸಕ್ತಿಯೂ ಅಧಿಕ ಪ್ರಮಾಣದಲ್ಲಿದ್ದು ಇದಕ್ಕೆ ಪ್ರತಿವಾದಿಯು ಶೆ. ೯೨ ರಷ್ಟು ಆಸಕ್ತಿಯಿರುವುದು ತಿಳಿಯಬಹುದು. ಹಾಗೂ ಇಂತಹ ಮಕ್ಕಳ ನಿರ್ಧಾರಕ್ಕೆ ಕುಟುಂಬದಲ್ಲಿ ಅವಕಾಶವನ್ನು ನೀಡುತ್ತಾರೆ ಎಂದು ಶೇ. ೭೨ ರಷ್ಟು ತಿಳಿಸಿದ್ದು ಇಂತಹ ಮಕ್ಕಳ ಮಾತಿಗೂ ಮನ್ನಣೆಯಿದೆ ಎಂಬುದನ್ನು ತಿಳಿಯಬಹುದು.
ಶ್ರವಣ ನ್ಯೂನ್ಯತೆವುಳ್ಳ ಮಕ್ಕಳು ಅವರದೇಯಾದಂತಹ ಆಸೆ ಆಕಾಂಕ್ಷೆಗಳು ಇದ್ದೆ ಇರುತ್ತವೆ. ಇದರಲ್ಲಿ ಪ್ರತಿವಾದಿಯೂ ತಾವು ಕಟ್ಟಿಕೊಂಡಿರುವ ಸುಂದರ ಬದುಕಿನ ಬಗ್ಗೆ ಆಸಕ್ತಿವಹಿಸಿರುವುದು ಕಂಡುಬರುತ್ತದೆ. ಇದರಲ್ಲಿ ಪ್ರತಿವಾದಿಯು ಶೇ. ೬೪ ರಷ್ಟು ಹೆತ್ತವರೊಡಗೂಡಿ ವೈವಾಹಿಕ ಜೀವನ ನಡೆಸುವುದಕ್ಕೆ ಆಸಕ್ತಿ ತೋರಿಸಿದರೆ ಉಳಿದಂತೆ ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳುವುದು ಮತ್ತು ಅಂಗವಿಕಲರಿಗೆ ಪುನರ್‌ವಸತಿಗಾಗಿ ಸಂಘಟನೆಯನ್ನು ಸ್ಥಾಪಿಸುವುದಾಗಿದೆ. ಇದರಲ್ಲಿ ತಮ್ಮಂತಹವರಿಗೆ ಸಹಕರಿಸಿದರೆ ಉತ್ತಮ ಬದುಕನ್ನು ರೂಢಿಸಿಕೊಂಡಿದ್ದಾರೆ.
ನಿಮ್ಮ ಸಮುದಾಯದಲ್ಲಿನ ಜನತೆ ಮತ್ತು ಶಾಲೆಯಲ್ಲಿನ ಸಹಪಾಠಿಗಳು ನಿಮ್ಮ ಸಹಕಾರಕ್ಕೆ ಧಾವಿಸುತ್ತಾರೆ ಎಮ್ಬುದಕ್ಕೆ ಪ್ರತಿವಾದಿಯು ಶೇ. ೭೦ ರಷ್ಟು ಮತ್ತು ಶೇ. ೯೮ ರಷ್ಟು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದು ಇದರಲ್ಲಿ ಪ್ರತಿಯೊಂದು ಹಂತದಲ್ಲಿಯು ಸಹಕಾರ ನೀಡಿರುವುದು ಎಂಬುದನ್ನು ತಿಳಿಸಿದ್ದು ಇದರಿಂದ ಸಮಾಜದಲ್ಲಿ ಕಟ್ಟಕಡೆಯ ಪ್ರತಿಯೊಂದು ಸೂಕ್ತವಾದ ಸ್ಥಾನ-ಮಾನವಿದೆ ಎಂಬುದನ್ನು ತಿಳಿಯಬಹುದು.
ಎಸ್. ಆರ್. ಚಂದ್ರಶೇಖರ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಅಧ್ಯಯನ ಮಾಡುವಂತಹ ಈ ಮಕ್ಕಳಲ್ಲಿ ಕೆಲವೊಂದು ವೈಯಕ್ತಿಕವಾಗಿ ಬದಲಾವಣೆಯನ್ನು ಕಾಣಬಹುದಾಗಿದೆ. ಇದರಲ್ಲಿ ಪ್ರತಿವಾದಿಯು ಶೇ. ೩೦ ರಷ್ಟು ವರ್ತನೆಯಲ್ಲಿ ಬದಲಾವಣೆಯಾದರೆ ಉಳಿದಂತೆ ಸಂವಹನದಲ್ಲಿ, ಕ್ರಿಯಾಶೀಲತೆಯಲ್ಲಿ ಹಾಗೂ ಮೇಲಿನ ಅಂಶಗಳಿಂದಲೂ ಬದಲಾವಣೆಯಾಗಿದೆ ಎಂದು ಪ್ರತಿವಾದಿಯ ವೈಯಕ್ತಿಕ ಅನಿಸಿಕೆ ಮತ್ತು ಅಭಿಪ್ರಾಯವನ್ನು ತಿಳಿಯಬಹುದಾಗಿದೆ.
ಶ್ರವಣ ನ್ಯೂನ್ಯತೆವುಳ್ಳ ಮಕ್ಕಳಲ್ಲಿ ಈ ಒಂದು ನ್ಯೂನ್ಯತೆಯಿಂದ ನಿಮ್ಮಲ್ಲಿ ಕೀಳರಿಮೆಯ ಮನೋಭವನೆಯಿದೆ ಎಂಬುದಕ್ಕೆ ಪ್ರತಿವಾದಿಯು ಹೌದು ಎಂದು ಸೂಚಿಸಿರುವ್ಯದರಿಂದ ವಿದ್ಯಾರ್ಥಿಗಳಲ್ಲಿ ನಾವುಗಳು ಇತರೆ ಮಕ್ಕಳಿಗಿಂತ ತಾವು ಭಿನ್ನವಾಗಿದ್ದೆವೆ ಎಂಬ ಮನೋಭವನೆ ಇರುವುದು ಕಂಡುಬರುತ್ತದೆ. ಇದಕ್ಕೆ ಪ್ರತಿವಾದಿಯು ಶೇ. ೬೪ ರಷ್ಟು ನಿಸ್ಸಾಹಾಯಕರಾಗಿ ತೋರಿಸಿರುವ ಅಂಕಿ ಆಂಶದಿಂದ ತಿಳಿಯಬಹುದಾಗಿದೆ.
ಶ್ರವಣ ನ್ಯೂನ್ಯತೆವುಳ್ಳ ಮಕ್ಕಳು ಸಮಾಜಕ್ಕೆ ಮತ್ತು ಕುಟುಂಬಕ್ಕೆ ತಲೆನೋವಾಗಿ ಪರಿಗಣಿಸಲ್ಪಟ್ಟಿದ್ದರೆ ಸಹ ಪ್ರೀತಿ, ಮಮತೆ ಎಂಬುದು ಯಾರನ್ನು ಬಿಟ್ಟಿಲ್ಲ, ಆದ ಕಾರಣ ಕುಟುಂಬದವರ ಆಶ್ರಯದಲ್ಲಿಯೇ ಇದ್ದು ಕೊಂಡೆ ಶೇ. ೯೬ ರಷ್ಟು ಮಕ್ಕಳು ಶಿಕ್ಷಣವನ್ನು ಪಡೆಯುತ್ತಿದ್ದಾರೆ, ಉಳಿದಂತೆ ಸಂಬಂಧಿಕರೊಂದಿಗೆ ಬಾಡಿಗೆ ಮನೆಯಿಂದ ಪ್ರತಿವಾದಿಯು ಬಂದು ಶಿಕ್ಷಣ ಪಡೆಯುತ್ತಾರೆ.
ಈ ಒಂದು ಸಂಸ್ಥೆಯಲ್ಲಿ ಅಧ್ಯಯನ ನಡೆಸುತ್ತಿರುವಂತಹ ಶ್ರವಣ ನ್ಯೂನ್ಯತೆವುಳ್ಳ ಮಕ್ಕಳ ಡೆಸಿಬಲ್‌ಗಳ ಪ್ರಮಾಣ ೯೦ ಕ್ಕಿಂತಲೂ ಮೇಲ್ಪಟ್ಟರೆ ಸಂಪೂರ್ಣ ಕೀವುಡರಾಗಿದ್ದಾರೆ. ಇದರ ಜೋತೆಯಲ್ಲಿಯೂ ಅವರ ಕಲಿಕೆಯಲ್ಲಿನ ಆಸಕ್ತಿ ಮತ್ತು ಕ್ರೀಡಾ ಕ್ಷೇತ್ರದಲ್ಲಿನ ಆಸಕ್ತಿಯನ್ನು ಮೆಚ್ಚುವಂತಹದ್ದಾಗಿದೆ . ಇದಕ್ಕೆ ಸಂಬಂಧಿಸಿದಂತೆ ಪ್ರತಿವಾದಿಯು ಅಂತರ್‌ಶಾಲಾ ಮಟ್ಟದಲ್ಲಿ ಭಾಗವಹಿಸಿ ವಿವಿಧ ರೀತಿಯ ಪ್ರಶಸ್ತಿಗಳನ್ನು ಪಡೆದಿರುವುದು ನೋಡಿದರೆ, ಈ ಮಕ್ಕಳು ಇತರೆ ಮಕ್ಕಳಂತೆಯೇ ಸರಿಸಮಾನರೆಂಬುದನ್ನು ತಿಳಿಯಬಹುದು.
ಶ್ರವಣ ನ್ಯೂನ್ಯತೆವುಳ್ಳಂತಹ ಮಕ್ಕಳಿಗೆ ಕೆಲವೊಂದು ಹಕ್ಕುಗಳ ಬಗ್ಗೆ ಸೌಲಭ್ಯಗಳ ಬಗ್ಗೆ ಅರಿವಿರುವುದು ತಿಳಿದುಬರುತ್ತದೆ. ಇದರಿಂದ ಪ್ರತಿವಾದಿಯು ೧೮ ವರ್ಷದವರೆಗೆ ಉಚಿತ ಶಿಕ್ಷನಕ್ಕೆ ಸಂಬಂಧಿಸಿದಂತೆ ಶೇ. ೫೨, ಉದ್ಯೋಗದಲ್ಲಿನ ಮೀಸಲಾತಿಗೆ ಶೇ. ೬೨, ಉಚಿತ ಬಸ್‌ಪಾಸ್ ವ್ಯವಸ್ಥೆಗೆ ಶೇ. ೬೬, ಅಂಗವಿಕಲರ ಕಾಯ್ದೆ ಶೇ. ೩೦ ಮತ್ತು ಉನ್ನತ ಶಿಕ್ಷಣಕ್ಕೆ ಮೀಸಲಾತಿಗೆ ಸಂಬಂಧಿಸಿದಂತೆ ಶೇ. ೭೨ ರಷ್ಟು ಗುರ್ತಿಸಿರುವುದನ್ನು ನೋಡಿದರೆ ಹದಿಹರೆಯದ ಮಕ್ಕಳಲ್ಲಿ ಈ ಸೌಲಭ್ಯಗಳ ಬಗ್ಗೆ ಅರಿವಿದೆ ಎಂಬುದನ್ನು ತಿಳಿಯಬಹುದು.
ಇಂತಹ ಮಕ್ಕಳಿಗೆ ತರಗತಿಯಲ್ಲಿ ಕಲಿಯಲ್ಲಿಕ್ಕೆ ವಿವಿಧ ರೀತಿಯ ಸಮಸ್ಯೆಗಳು ಸಾಮಾನ್ಯ ಮಕ್ಕಳಿಗಿಂತಲು ಭಿನ್ನವಾಗಿರುತ್ತದೆ, ಆದರೆ ಇವರಿಗೆ ಸಂವಹನ ಮತ್ತು ಮೌಖಿಕ ವಿಧಾನದ ಮೂಲಕ ಕಲಿಕೆಯನ್ನು ನೀಡುತ್ತಾರೆ ಆದರೆ ಈ ಕಲಿಕೆ ಮಕ್ಕಳಿಗೆ ತೊಡಕುಗಳು ಉಂಟುಮಾಡುತ್ತದೆ ಕಾರಣ ಅವರಲ್ಲಿನ ಅಸಹಾಯಕತೆ ಮತ್ತು ಕೇಳಿಸುವಿಕೆಯಲ್ಲಿನ ಸಾಧಾರಣತೆ ಎಂಬುದನ್ನು ಪ್ರತಿವಾದಿಯು ತಿಳಿಸಿರುವುದು ನೋಡಿದರೆ ಸ್ವಲ್ಪಮಟ್ಟಿಗೆ ಜೀವನದಲ್ಲಿ ಜಿಗುಪ್ಸೆ ಇರಬಹುದು ಎಂಬುದನ್ನು ತಿಳಿಯಬಹುದು.
ಆದರೆ ಈ ಮಕ್ಕಳು ಇತರೆ ಮಕ್ಕಳಂತೆಯೇ ಮನರಂಜನೆಯನ್ನು ಹೊಂದುವುದಕ್ಕೆ ಆಟ-ಕ್ವಿಜ್, ಟಿ. ವಿ- ಚಿತ್ರಕಲೆ, ಪ್ರಬಂದ, ನೃತ್ಯದಲ್ಲಿ ಭಾಗವಹಿಸುವುದು ಪ್ರತಿವಾದಿಯು ಶೇ. ೧೦೦ ರಷ್ಟು ಆಸಕ್ತಿ ವಹಿಸಿರುವುದನ್ನು ಗಮನಿಸಿದರೆ ಅವರಲ್ಲಿ ಸಾಧನೆಯ ಮನೋಭಾವನೆ ಇರುವುದು ಕಂಡುಬರುತ್ತದೆ.
ವಿಶೇಷವಾದ ಕಾಳಜಿ ಪಠ್ಯಪುಸ್ತಕ, ಟಿಪ್ಪಣಿಗಳನ್ನು ಒದಗಿಸುವಿಕೆ, ಆಪ್ತ ಸಮಾಲೋಚನೆ ಮತ್ತು ಸಂವಾದಕ್ಕೆ ಅವಕಾಶ, ಇವುಗಳನ್ನು ಶಿಕ್ಷಕರು ತಮಗೆ ನೀಡಿರುವ ಸಹಕಾರದ ಸ್ವರೂಪವಾಗಿ ಪ್ರತಿವಾದಿಗಳು ಗುರ್ತಿಸಿದ್ದಾರೆ.

ಸಲಹೆಗಳು:
ಶ್ರವಣನ್ಯೂನ್ಯತೆವುಳ್ಳ ಹದಿಹರೆಯ ಮಕ್ಕಳ ಮನೋಸಾಮಾಜಿಕ- ಶೈಕ್ಷಣಿಕ ಸ್ಥಿತಿಗತಿ, ಕಾನೂನು- ಹಕ್ಕುಗಳು ಮತ್ತು ಸೌಲಭ್ಯಗಳ ಬಗೆಗಿನ ಅರಿವು ಒಂದು ಅಧ್ಯಯನ. ಈ ವಿಷಯದಲ್ಲಿ ಎಸ್. ಆರ್. ಚಂದ್ರಶೇಖರ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಅಭ್ಯಾಸ ನಿರತರಾಗಿರುವ ಶ್ರವಣ ನ್ಯೂನ್ಯತೆ ವಿದ್ಯಾರ್ಥಿಗಳ ಕುರಿತು ನಡೆಸಿದ ಅಧ್ಯಯನದಿಂದ ಹೋರಬಂದಿರುವ ಫಲಿತಾಂಶಗಳು ಮತ್ತು ಸಂಶೋಧಕನು ಶ್ರವಣ ನ್ಯೂನ್ಯತೆವುಳ್ಳ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದ ಹಾಗು ಸಂಶೋಧಕನು ಸ್ವಯಂ ಶ್ರವಣ ನ್ಯೂನ್ಯತೆವುಳ್ಳವನಾಗಿ ಅನುಭವ ವೇದ್ಯ ಪಡಿಸಿಕೊಂಡ ವಿಚಾರಗಳು ಹಾಗೂ ಸಂಗತಿಗಳ ಅಧಾರದಿಂದ ಈ ಮುಂದಿನ ಸಲಹೆಗಳನ್ನು ನೀಡಬಯಸಿದ್ದಾನೆ.
 ಸರ್ಕಾರ ಮತ್ತು ಸರ್ಕಾರೇತರ ಸಂಘ- ಸಂಸ್ಥೆಗಳು ಶ್ರವಣದೋಷವುಳ್ಳ ವಿದ್ಯಾರ್ಥಿಗಳ ಕಾನೂನು ಅರಿವು ಸೌಲಭ್ಯಗಳ ಅರಿವು ಹಾಗೂ ಅವರ ಪಾಲ್ಗೋಳ್ಳುವಿಕೆ ಇವುಗಳ ಸಂಬಂಧ ನೆರವಾಗಲು ಎಲ್ಲಾ ಶಾಲಾ-ಕಾಲೇಜುಗಳಲ್ಲಿ ವಿಕಲಚೇತನರ ಕೋಶವೊಂದನ್ನು ರಚಿಸಬೇಕು. ಈ ಕೋಶದ ವತಿಯಿಂದ ಶ್ರವಣ ನ್ಯೂನ್ಯತೆವುಳ್ಳ ವಿದ್ಯಾರ್ಥಿಗಳಲ್ಲಿ ಅವರ ಸಮಸ್ಯೆಗಳ ಬಗ್ಗೆ ಮತ್ತು ಪ್ರೋತ್ಸಾಹ , ಪುನಶ್ಚೇತನ ಸಂಬಂಧದ ಅರಿವು ಮತ್ತು ಪುರ್ನಮನನ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು.
ತರಗತಿಗಳ ಕೊಠಡಿ, ವಿದ್ಯಾರ್ಥಿನಿಲಯ, ಗ್ರಂಥಾಲಯ, ಬಸ್‌ನಿಲ್ದಾಣ, ಕ್ಯಾಂಟಿನ ಮೊದಲಾದ ಪ್ರಮುಖ ಸ್ಥಳಗಳಲ್ಲಿ ಶ್ರವಣ ನ್ಯೂನ್ಯತೆವುಳ್ಳ ವಿದ್ಯಾರ್ಥಿಗಳಿಗಾಗಿ ಸೂಕ್ತ ಮುನ್ನೆಚರಿಕೆಯ ಸೌಲಭ್ಯವಾದ ಶ್ರವಣೋಪಕರಣಗಳನ್ನು ದೊರಕಿಸಿಕೋಡಬೇಕು.
ಶ್ರವಣ ನ್ಯೂನ್ಯತೆಯಂತಹ ಸಮಸ್ಯೆಯಿಂದಲು ಸಾಧನೆಯನ್ನು ಮಾಡಿದಂತಹ ವಿದ್ಯಾರ್ಥಿಗಳನ್ನು ಪೋಷಕರ ಸಮುಖದಲ್ಲಿಯೇ ಸನ್ಮಾನಿಸುವುದರಿಂದ ಇಡೀ ಶ್ರವಣ ನ್ಯೂನ್ಯತೆವುಳ್ಳ ಸಮುದಾಯವೇ ಪ್ರೇರಣೆಗೊಳ್ಳಲು ಸಹಕಾರಿಯಾಗುತ್ತದೆ. ಇವರಿಗೆ ಸೂಕ್ತ ಸನ್ನಿವೇಶಕ್ಕೆ ತಕ್ಕಂತೆ ಶಾಲಾ-ಕಾಲೇಜುಗಳ ಮತ್ತು ಸಮಾಜಕಲ್ಯಾಣ ವತಿಯಿಂದ ವಿದ್ಯಾರ್ಥಿವೇತನ ನಗದು ಬಹುಮಾನ ಮುಂತಾದ ಪ್ರೋತ್ಸಾಹದಾಯಕ ಯೋಜನೆಗಳನ್ನು ರೂಪಿಸಬೇಕು.
ಶ್ರವಣ ನ್ಯೂನ್ಯತೆವುಳ್ಳ ಸಮುದಾಯದ ಗಾತ್ರನುಸಾರ ಉನ್ನತ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಪ್ರಮಾಣವನ್ನು ಶೇ. ೩ ರಿಂದ ಕನಿಷ್ಠ ೧೦ ರ ಪ್ರಮಾಣದಲ್ಲಿ ಏರಿಕೆಯಾಗಬೇಕು. ಹಾಗೆಯೇ ಶ್ರವಣ ನ್ಯೂನ್ಯತೆವುಳ್ಳವರು ಎಂದು ಗುರ್ತಿಸಲು ನಿಗದಿಪಡಿಸಿರುವ ಶೇ. ೪೦ಕ್ಕಿಂತಲೂ ಹೆಚ್ಚು ವಿಕಲತೆಯ ಪ್ರಮಾಣವನ್ನು ಹೊಂದಿರುವವರು ಶ್ರವಣ ನ್ಯೂನ್ಯತೆವುಳ್ಳವರಿಗಾಗಿನ ಮೀಸಲಾತಿ ಪ್ರಯೋಜನವನ್ನು ದುರುಪಯೋಗ ಪಡಿಸಿಕೋಳ್ಳದಂತೆ ಕಠಿಣ ಕಾನೂನು ಕ್ರಮಗಳನ್ನು ಜಾರಿಗೊಳಿಸಬೇಕು.
ಪಂಚಾಯತ್ ರಾಜ್ ವ್ಯವಸ್ಥೆಯ ಎಲ್ಲಾ ಮೂರು ಹಂತಗಳಲ್ಲಿ ಕೆಲವು ಸ್ಥಾನಗಳನ್ನು ಸಮುದಾಯಕ್ಕೆ ಮೀಸಲಿಡುವುದರಿಂದ ಗ್ರಾಮೀಣ ಅಭಿವೃಧಿ ಪ್ರಕ್ರಿಯೆಯಲ್ಲಿ ಅದರಲ್ಲೂ ಶ್ರವಣ ನ್ಯೂನ್ಯತೆವುಳ್ಳವರಿಗಾಗಿ ಸಮುದಾಯದಾರಿತ ಪುನಶ್ಚೇತನ ಕಾರ್ಯಕ್ರಮವು ಮತ್ತಷ್ಟು ಬಲವನ್ನು ಹೊಂದಲು ಸಾಧ್ಯವಾಗುತ್ತದೆ.
ಪ್ರತಿಯೊಂದು ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಜನೆಯಲ್ಲಿ ತೊಡಗಿರುವ ಶ್ರವಣ ನ್ಯೂನ್ಯತೆಯುಳ್ಳವರಿಗೆ ಪ್ರತಿಯೊಂದು ಸರ್ಕಾರ ಮತ್ತು ಸರ್ಕಾರೇತರ ಸಂಘ-ಸಂಸ್ಥೆಗಳು, ಜೀವನ ಮಾರ್ಗದರ್ಶನ ಕಾರ್ಯಕ್ರಮಗಳನ್ನು ರೂಪಿಸಿ ನೆರವಾಗಬೇಕು. ಶ್ರವಣ ನ್ಯೂನ್ಯತೆಯ ಸಮಸ್ಯೆಯನ್ನು ತಡೆಗಟ್ಟುವಿಕೆ ಹಾಗೂ ಪುನರ್ ವಸತಿಗೆ ಸಂಬಂಧಿಸಿದಂತೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸುವ ಹೊಣೆಗಾರಿಕೆಯನ್ನು ಸಮಾಜಕಾರ್ಯ ವಿಭಾಗವು ನಡೆಸಿಕೊಡಬೇಕು.

ಉಪಸಂಹಾರ:
ಶ್ರವಣ ನ್ಯೂನ್ಯತೆಯು ಒಂದು ಸಾಮಾಜಿಕ ಸಮಸ್ಯೆಯಾಗಿದೆ. ಸರ್ಕಾರ ಮತ್ತು ನಾಗರೀಕ ಸಮಾಜವು ಸಮಸ್ಯೆಯನ್ನು ತಡೆಗಟ್ಟಲು ಮತ್ತು ಶ್ರವಣ ನ್ಯೂನ್ಯತೆವುಳ್ಳವರ ಪುರ್ನವಸತಿಗೆ ಕ್ರೀಯಾಶೀಲವಾಗಿದೆ. ಶ್ರವಣ ನ್ಯೂನ್ಯತೆವುಳ್ಳ ಸಮುದಾಯವು ತಮ್ಮ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಸ್ಪಷ್ಟವಾದ ಅರಿವನ್ನು ಹೊಂದಿರುವುದರೊಂದಿಗೆ ಶ್ರವಣ ನ್ಯೂನ್ಯತೆವುಳ್ಳವರ ಪುನಶ್ಚೇತನ ಆಂದೋಲನದಲ್ಲಿ ತಾವು ಭಾಗವಹಿಸಿದಂತಾಗುತ್ತದೆ. ಶಿಕ್ಷಣ ಹಾಗೂ ಉದ್ಯೋಗದಲ್ಲಿ ದೊರೆಯುತ್ತಿರುವ ಮೀಸಲಾತಿಯೂ ಶ್ರವಣದೋಷವುಳ್ಳ ಸಮುದಾಯಕ್ಕೆ ಅವಕಾಶವನ್ನಷ್ಟೆ ನೀಡದೆ ಸ್ಪೂರ್ತಿಯ ಸೆಲೆಯಾಗಿ ಹೊರಹೊಮ್ಮಿದೆ. ಶ್ರವಣ ನ್ಯೂನ್ಯತೆಯ ಸಮುದಾಯವು ಅವರ ಸಾಧನೆಗಳನ್ನು ಗಮನಿಸಿದಾಗ ಪ್ರತಿಭಾ ಕಾರಂಜಿಯಂತೆ ಕಂಗೋಳಿಸುತ್ತಿದೆ. ಶ್ರವಣ ನ್ಯೂನ್ಯತೆವುಳ್ಳವರು ತಮ್ಮ ಸಮುದಾಯದ ಪುನಶ್ಚೇತನಕ್ಕಾಗಿ ಸ್ವಯಂ ಸೇವಾ ಸಂಸ್ಥೆಗಳನ್ನು ಸ್ಥಾಪಿಸಿ ಪರಿಣಾಮಕಾರಿಯಾಗಿ ಮುನ್ನೆಡೆದಿದ್ದಾರೆ. ಶ್ರವಣ ನ್ಯೂನ್ಯತೆವುಳ್ಳವರಿಗೆ ಬೇಕಾಗಿರುವುದು ಸ್ಫೂರ್ತಿ, ಪ್ರೇರಣೆ ಮತ್ತು ಸಮಕಾಲೀನ ನೆರವು ಮಾತ್ರ, ಶ್ರವಣ ನ್ಯೂನ್ಯತೆವುಳ್ಳವರ ಸಮಸ್ಯೆಯನ್ನು ವ್ಶೆಜ್ಞಾನಿಕ ದೃಷ್ಠಿಕೋನದಿಂದ ಹಾಗೂ ಮಕ್ಕಳ ಹಕ್ಕುಗಳ ಸಮರ್ಪಕ ಜಾರಿಯ ಹಿನ್ನೆಲೆಯಲ್ಲಿ ಪರಿಶೀಲಿಸಿ ಮುನ್ನೆಡೆಯ ಬೇಕಿದೆ.

ಅನುಬಂಧ-೧: ಕೇಂದ್ರ ಸಮನ್ವಯ ಸಮಿತಿ
ಕೇಂದ್ರ ಸರ್ಕಾರ, ಸಮಾಜಕಲ್ಯಾಣ ಸಚಿವ್ರ ನೇತೃತ್ವದಲ್ಲಿ ಒಂದು ಕೇಂದ್ರ ಸಮನ್ವಯ ಸಮಿತಿಯನ್ನು ರಚಿಸಿದೆ. ಈ ಸಮಿತಿಯಲ್ಲಿ ೩೯ ಸದಸ್ಯರು ಇದ್ದಾರೆ ಇವರಲ್ಲಿ ೩೪ ಸದಸ್ಯರು ಸರ್ಕಾರಿ ಅಧಿಕಾರಿಗಳಾಗಿದ್ದು, ಮಿಕ್ಕ ೫ ಸದಸ್ಯರು, ಸರ್ಕಾರೇತರ, ಅಂಗವಿಕಲರ ಸೇವಾಸಂಸ್ಥೆಗಳ ಪ್ರತಿನಿಧಿಗಳಾಗಿದ್ದು ಇವರನ್ನು ಸರ್ಕಾರ ನೇಮಕ ಮಾಡಿರುವುದು. ಈ ಐವರಲ್ಲಿ ಕನಿಷ್ಟ ಒಬ್ಬ ಮಹಿಳೆ ಮತ್ತು ಒಬ್ಬರು ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗಕ್ಕೆ ಸೇರಿದವರಿರಬೇಕು. ಈ ಎಲ್ಲರ ಸದ್ಯಸ್ಯತ್ವದ ಅವಧಿ ಮೂರು ವರ್ಷಗಳು.
ಕೇಂದ್ರ ಕಾರ್ಯಕಾರಿ ಸಮಿತಿ
 ಈ ಸಮಿತಿಯಲ್ಲಿ ೨೩ ಸದಸ್ಯರು ಇದ್ದಾರೆ. ಇ ಸಮಿತಿಯಲ್ಲೂ ೫ ಜನ ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳಿದ್ದಾರೆ. ಅಂಗವಿಕಲರ ಬಗ್ಗೆ ರಾಷ್ಟ್ರೀಯ ನೀತಿ, ಯೋಜನೆ ಮತ್ತು ಕಾರ್ಯಕ್ರಮಗಳನ್ನು ರೂಪಿಸುವುದು ಮತ್ತು ಸರ್ಕಾರಕ್ಕೆ ಸಲಹೆ ನೀಡುವುದು ಈ ಸಮಿತಿಯ ಕರ್ತವ್ಯ.

ಅನುಬಂಧ-೨: ರಾಜ್ಯ ಸಮನ್ವಯ ಸಮಿತಿ
ಕೇಂದ್ರ ಸಮನ್ವಯ ಸಮಿತಿಯ ರೀತಿಯಲ್ಲೇ, ರಾಜ್ಯ ಸರ್ಕಾರಗಳು ರಾಜ್ಯ ಸಮನ್ವಯ ಸಮಿತಿಯನ್ನು ರಚಿಸುವವು. ಈ ಸಮಿತಿಯಲ್ಲಿ ೨೩ ಸದಸ್ಯರು ಸರ್ಕಾರಿ ಅಧಿಕಾರಿಗಳಾಗಿದ್ದು, ೫ ಇತರ ಸದಸ್ಯರಿದ್ದಾರೆ. ರಾಜ್ಯ ಕಾರ್ಯಕಾರಿ ಸಮಿತಿಯನ್ನು ಕೇಂದ್ರ ಕಾರ್ಯಕಾರಿ ಸಮಿತಿಯಂತೆಯೇ ರಚಿಸಲಾಗಿದೆ.

ಅನುಬಂಧ-೩: ರಾಷ್ಟ್ರೀಯ ಟ್ರಸ್ಟ್ ಕಾಯಿದೆ
ತಮ್ಮ ಹಿತಾಸಕ್ತಿಗಳನ್ನು ಸ್ವತಃ ನೋಡಿಕೊಳ್ಳಲು ಅಸಮರ್ಥರಾಗಿರುವಂತಹ, ಗಂಭೀರ ಶ್ರವಣನ್ಯೂನ್ಯತೆಯಿರುವವರ ರಕ್ಷಣೆಗಾಗಿ ೧೯೯೯ ರಲ್ಲಿ ಕೇಂದ್ರ ಸರ್ಕಾರ ಒಂದು ರಾಷ್ಟ್ರೀಯ ಟ್ರಸ್ಟ್ [ನ್ಯಾಸ] ಕಾಯಿದೆಯನ್ನು ಹೋರಡಿಸಿದೆ. ಈ ಕಾಯಿದೆ ಈ ಕೆಳಕಂಡತೆ ರೀತಿಯ ಅಂಗವಿಕಲರಿಗೆ ಅನ್ವಯಿಸುತ್ತದೆ.
ಮಂಡಳಿಯ ರಚನೆ
ಈ ರಾಷ್ಟ್ರೀಯ ಟ್ರಸ್ಟ್‌ನ ಮುಖ್ಯ ಕಛೇರಿ ದೆಹಲಿಯಲ್ಲಿದು ಅಗತ್ಯವಿದ್ದಲ್ಲಿ ಕೇಂದ್ರ ಸರ್ಕಾರದ ಅನುಮತಿಯನ್ನು ಪಡೆದು ಇತರ ಊರುಗಳಲ್ಲಿ ಉಪಕಛೇರಿಗಳನ್ನು ಸ್ಥಾಪಿಸಬಹುದು. ಟ್ರಸ್ಟ್‌ಗೆ ಒಬ್ಬ ಅಧ್ಯಕ್ಷರು ಇರುತ್ತಾರೆ. ಇತರ ಸದಸ್ಯರು ಈ ಕೆಳಕಂಡಂತೆ ಇದ್ದಾರೆ. ೯ ಜನ ಟ್ರಸ್ಟ್‌ನ ಅನ್ವಯ ನೋಂದಯಿಸಲ್ಪಟ್ಟಿರುವ ಸ್ವಯಂ ಸೇವಾ ಸಂಸ್ಥೆಯ ಪ್ರತಿನಿದಿಗಳಾಗಿರುತ್ತಾರೆ. ಇದರಲ್ಲಿ ವಿಕಲತೆಯುಳ್ಳವರ ಸಂಘ ಅಥವಾ ಅವರ ಪಾಲಕರ ಸಂಘಗಳ ಸದಸ್ಯರಾಗಿರಬೇಕು. ಸರ್ಕಾರದ ನಾನಾ ಇಲಾಖೆಗಳ ಅಧಿಕಾರಿಗಳು ೮ ಜನ ಸಮಾಜ ಸೇವೆಯಲ್ಲಿ ನಿರತರಾಗಿರುವ ಉದ್ದಿಮೆ/ ವ್ಯಾಪಾರಸ್ಥರ ಪೈಕಿ ಮೂವರೂ ಮತ್ತು ಸರ್ಕಾರದ ಜಂಟಿ ಕಾರ್ಯದರ್ಶಿ ನಿರ್ವಾಹಕರು.
 ಟ್ರಸ್ಟ್‌ನ ಲಕ್ಷಣಗಳು ಹೀಗಿವೆ;
. ಶ್ರವಣನ್ಯೂನತೆ ಸಾಧ್ಯವಾದಷ್ಟು ಸ್ವತಂತ್ರರಾಗಿ ಮತ್ತು ಸ್ವವಲಂಬಿಗಳಾಗಿ ತಮ್ಮ ಸಮುದಾಯದಲ್ಲಿ, ತಮ್ಮ ಊರುಗಳಲ್ಲಿ ಅಥವಾ ಹತ್ತಿರದಲ್ಲೇ ನೆಲೆಸುವಂತೆ ಅನುಕೂಲ ಮಾಡುವುದು.
. ಶ್ರವಣನ್ಯೂನ್ಯತೆ ತಮ್ಮ ಕುಟುಂಬದೊಡನೆಯೇ ಇರಲು ಅನುಕೂಲವಾಗುವಂತೆ ಸೌಕರ್ಯಗಳನ್ನು ಒದಗಿಸುವುದು.
 . ಈ ಕಾಯಿದೆಯಡಿ ನೋಂದಯಿಸಿಕೊಂಡಿರುವ ಸಂಸ್ತೆಗಳು, ಶ್ರವಣನ್ಯೂನ್ಯತೆ ಕುಟುಂಬಗಳಿಗೆ ಬಿಕ್ಕಟ್ಟಿನ ಸಮಯದಲ್ಲಿ ಅಗತ್ಯವಾದ ಸಹಾಯ ನೀಡಲು ಅನುವು ಮಾಡಿಕೊಡುವುದು.
. ಕುಟುಂಬದ ಅಥವಾ ಪರಿವಾರದ ನೆರವಿಲ್ಲದ ಶ್ರವಣನ್ಯೂನ್ಯತೆ ಸಮಸ್ಯೆಗಳನ್ನು ಪರಿಹರಿಸುವುದು.
. ಶ್ರವಣನ್ಯೂನ್ಯತೆ ವ್ಯಕ್ತಿಯ ತಂದೆ ಅಥವಾ ತಾಯಿ, ಪಾಲಕರು ತೀರಿಕೊಂಡಾಗ ಅವರ ರಕ್ಷಣೆ ಪಾಲನೆಗೆ ಸೂಕ್ತ ಏರ್ಪಾಟು ಮಾಡುವುದು.
 . ಶ್ರವಣ ನ್ಯೂನ್ಯತೆವುಳ್ಳವರಿಗೆ ಸಮಾನ ಅವಕಾಶಗಳನ್ನು ದೊರಕಿಸಿಕೊಡುವುದು, ಅವರ ಹಕ್ಕುಗಳನ್ನು ಕಾಪಾಡಿ ಅವರು ಸಮಾಜದಲ್ಲಿ ಪೂರ್ಣವಾಗಿ ಭಾಗವಹಿಸುವುದಕ್ಕೆ ಅನುವು ಮಾಡಿಕೊಡುವುದು. ಈ ಮೇಲೆ ಹೇಳಿದ ಉದ್ದೇಶಗಳ ಪೂರೈಕೆಗೆ ಅಗತ್ಯವಾದ ಕೆಲಸಗಳನ್ನು ಮಾಡುವುದು.
 ರಾಷ್ಟ್ರೀಯ ಅಂಗವಿಕಲರ ಹಣಕಾಸು ಮತ್ತು ಅಭಿವೃದ್ಧಿ ನಿಗಮ
ಅಂಗವಿಕಲರು ಆರಂಭಿಸಿರುವ ಆರ್ಥಿಕ ಮತ್ತು ಆಭಿವೃದ್ಧಿ ಚಟುವಟಿಕೆಗಳನ್ನು ಉತ್ತೇಜಿಸಲು ರಾಷ್ಟ್ರೀಯ ಅಂಗವಿಕಲರ ಹಣಕಾಸು ಮತ್ತು ಅಭಿವೃದ್ಧಿ ನಿಗಮ ಪ್ರಾರಂಭವಾಗಿದೆ.
ಗುರಿ ಮತ್ತು ಉದ್ದೇಶಗಳು
 ಶ್ರವಣ ನ್ಯೂನ್ಯತೆವುಳ್ಳವರಿಗೆ ಪ್ರಯೋಜನವಾಗುವಂತೆ ಅವರ ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸುವುದು.
 ಶ್ರವಣ ನ್ಯೂನ್ಯತೆವುಳ್ಳವರಿಗೆ ಪುನರ್ವಸತಿ ಕಲ್ಪಿಸಲು ಸಹಾಯಕವಾಗುವಂತೆ ಸ್ವಯಂ ಉದ್ಯೋಗವನ್ನು ಪ್ರೋತ್ಯಾಹಿಸುವುದು.
 ಶ್ರವಣ ನ್ಯೂನ್ಯತೆವುಳ್ಳವರಿಗೆ ಉನ್ನತ ವ್ಯಾಸಂಗ ಕೈಗೊಳ್ಳಲು ಮತ್ತು ವೃತ್ತಿಪರ ಶಿಕ್ಷಣ ಪಡೆಯುವುದಕ್ಕೆ ಸಹಯವಾಗಲು ಸಾಲವನ್ನು ನೀಡುವುದು.
 ಉತ್ಪಾದನಾ ಕೇಂದ್ರಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡಲು ಸಹಾಯವಾಗುವಂತೆ ಶ್ರವಣನ್ಯೂನ್ಯತೆ ವುಳ್ಳವರಿಗೆ ತಾಂತ್ರಿಕ ಮತ್ತು ಉದ್ಯಮ ಶೀಲತೆಯ ಕೌಶಲ್ಯಗಳನ್ನು ಹೆಚ್ಚಿಸುವುದು.
 ಸ್ವಯಂ ಉದ್ಯೋಗ ಕೈಗೊಂಡ ಶ್ರವಣ ನ್ಯೂನ್ಯತೆವುಳ್ಳವರಿಗೆ /ನೋಂದಯಿತ ಅಂಗವಿಕಲರ ಕಾರ್ಖಾನೆ/ ಸಂಸ್ಥೆ /ಸಹಕಾರ ಸಂಘಗಳಲ್ಲಿ ತಯಾರಿಸಿದ ವಸ್ತುಗಳಿಗೆ ಮಾರುಕಟ್ಟೆ ಸೌಲಭ್ಯ ಮತ್ತು ಅವರು ಕಚ್ಚಾ ಸಾಮಗ್ರಿಗಳನ್ನು ಪಡೆಯಲು ಸಹಾಯ ಮಾಡುವುದು.

ಅನುಬಂಧ-೪: ಸಾರ್ವಜನಿಕರ ಮತ್ತು ಸಂಘ ಸಂಸ್ಥೆಗಳ ಹೊಣೆ
ಶ್ರವಣನ್ಯೂನ್ಯತೆ ವುಳ್ಳವರಿಗೆ ಕಾನೂನಿನ ಮೂಲಕ ಸಲ್ಲಬೇಕಾದ ಸೌಲಭ್ಯ ಮತ್ತು ಸೌಕರ್ಯಗಳನ್ನು ಅವರಿಗೆ ತಲುಪಿಸಬೇಕದದ್ದು ಸರ್ಕಾರದ ಹೊಣೆ ಮಾತ್ರವೇ ಅಲ್ಲ, ಈ ಸಮಾಜದ ಸದಸ್ಯರಾಗಿರುವ ನಮ್ಮೆಲ್ಲರ ಹೊಣೆಯೂ ಹೌದು. ನಾವು ಈ ಕೆಳಗಿನ ಪ್ರಯತ್ನಗಳನ್ನು ಮಾಡಬಹುದು.
 ಪ್ರತಿಯೊಂದು ಮಗುವಿನ ಜನನ ಒಳ್ಳೆಯ, ಸುರಕ್ಷಿತ ಹಾಗೂ ಶುದ್ಧ ವಾತಾವರಣದಲ್ಲಿ ಆಗುವಂತೆ ನೋಡಿಕೊಳ್ಳಬೇಕು.
 ಮಕ್ಕಳ ತಂದೆ-ತಾಯಂದಿರು ಅಥವಾ ಪೋಷಕರು ರೋಗ ನಿರೋಧಕ ಲಸಿಕೆ/ ಚುಚ್ಚುಮದ್ದುಗಳನ್ನು ಮಕ್ಕಳಿಗೆ ತಪ್ಪಿಸದೆ ಹಾಕಿಸಬೇಕು.
 ನಿಮ್ಮ ಶ್ರವಣ ನ್ಯೂನ್ಯತೆವುಳ್ಳ ಮಗುವಿಗೆ ಯಾವುದಾದರು ವೃತ್ತಿಪರ ತರಭೇತಿಯನ್ನು ಕೊಡಿಸಿ.
 ಶ್ರವಣ ನ್ಯೂನ್ಯತೆವುಳ್ಳವರೊಂದಿಗೆ ಸೌಜನ್ಯದಿಂದ ವರ್ತಿಸುವುದು.
 ಅವರ ದೋಷದ ಹೆಸರಿಟ್ಟು ಕರೆಯದೆ ಅವರ ಹೆಸರಿನಿಂದ ಕರೆಯುವುದು.
 ಆಟ, ಮನರಂಜನೆ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಶ್ರವಣನ್ಯೂನ್ಯತೆ ವುಳ್ಳವರನ್ನು ಸೇರಿಸಿಕೊಳ್ಳುವುದು.
 ಶ್ರವಣ ನ್ಯೂನ್ಯತೆವುಳ್ಳವರಿಗೆ ಹಕ್ಕುಗಳು ಮತ್ತು ಆಗತ್ಯಗಳ ಬಗ್ಗೆ ಸಮುದಾಯದಲ್ಲಿ ಅರಿವು ಮೂಡಿಸಿ ಅವರಿಗೆ ಕಲಿಯಲು ಮತ್ತು ಹಣ ಸಂಪಾದಿಸಲು ಅವಕಾಶ ದೊರಕಿಸಿಕೊಡುವುದು.
 ಸಂಸ್ಥೆಗಳಲ್ಲಿ, ಸಮಿತಿ, ಮುಂತಾದವುಗಳಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಮಟ್ಟದಲ್ಲಿ ಶ್ರವಣನ್ಯೂನ್ಯತೆ ವುಳ್ಳವರನ್ನು ಪಾಲ್ಗೊಳ್ಳುವಂತೆ ಮಾಡುವುದು.

ಅನುಬಂಧ-೫: ಅಂಗವಿಕಲರ [ಸಮಾನ ಅವಕಾಶ, ಹಕ್ಕುಗಳ ಸಂರಕ್ಷಣೆ ಮತ್ತು ಪೂರ್ಣ ವಿಕಾಸ] ಕಾಯಿದೆ ೧೯೯೫.
ಕಾನೂನಿನ ಉದ್ದೇಶ
ಶ್ರವಣ ನ್ಯೂನ್ಯತೆವುಳ್ಳವರ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹೊಣೆಯನ್ನು ನಿಗದಿಪಡಿಸಿ ಸರ್ಕಾರಗಳು ತಮ್ಮ ಶಕ್ತ್ಯಾನುಸಾರ ಶ್ರವಣ ನ್ಯೂನ್ಯತೆವುಳ್ಳವರಿಗೆ ವಿವಿಧ ಸೇವೆಗಳನ್ನು ಒದಗಿಸಿ ಮತ್ತು ಸೌಲಭ್ಯಗಳನ್ನು ಕಲ್ಪಿಸಿ ಅವರು ಎಲ್ಲಾ ಕ್ಷೇತ್ರಗಳಲ್ಲೂ ಭಾಗವಹಿಸುವಂತೆ ಮಾಡಲು ನೆರವು ನೀಡುವುದು. ಮೇಲ್ಕಂಡ ಉದ್ದೇಶಗಳನ್ನು ಕಾರ್ಯರೂಪಕ್ಕೆ ತರಲು ಸರ್ಕಾರಗಳು ಜವಾಬ್ಧಾರಿಯನ್ನು ನಿಗದಿಪಡಿಸಲು ಈ ಕಾಯಿದೆ ಶ್ರವಣ ನ್ಯೂನ್ಯತೆವುಳ್ಳವರಿಗೆ ವಿವಿಧ ಹಕ್ಕುಗಳನ್ನು ನೀಡಿದೆ. ಕಾಯಿದೆ ಅನ್ವಯ ಕಾರ್ಯಕ್ರಮಗಳನ್ನು ರೂಪಿಸಲು ಕರ್ನಾಟಕ ಸರ್ಕಾರ ರಾಜ್ಯ ಸಂಯೋಜನ ಸಮಿತಿ ಹಾಗೂ ರಾಜ್ಯ ಕಾರ್ಯಕಾರಿ ಸಮಿತಿಯನ್ನು ರಚಿಸಿದೆ ಮತ್ತು ಹೊಣೆ ನಿರ್ವಹಿಸಲು ಒಬ್ಬ ಆಯುಕ್ತರನ್ನು ನೇಮಿಸಿದೆ. ಶ್ರವಣ ನ್ಯೂನ್ಯತೆವುಳ್ಳವರಿಗೆ ರೂಪಿಸಿರುವ ಕಾರ್ಯಕ್ರಮಗಳ ಸಂಯೋಜನೆ ಅವುಗಳಿಗೆ ನಿಗದಿಪಡಿಸಿರುವ ಹಣದ ಬಳಕೆಯ ನಿರ್ವಹಣೆಯಲ್ಲದೆ ಶ್ರವಣ ನ್ಯೂನ್ಯತೆವುಳ್ಳವರಿಗೆ ಅವರ ಹಕ್ಕುಗಳ ಮತ್ತು ಸೌಲಭ್ಯಗಳು ತಲುಪುವಂತೆ ನೋಡಿಕೊಳ್ಳುವುದು ಆಯುಕ್ತರ ಕರ್ತವ್ಯವಾಗಿದೆ.

ಶಿಕ್ಷಣ
ವಿಶೇಷ ಶಾಲೆಗಳಲ್ಲಿ ವೃತ್ತಿಪರ ತರಬೇತಿಗಳಿಗೆ ಸೌಲಭ್ಯವನ್ನು ಒದಗಿಸಬೇಕು.
 ಶ್ರವಣನ್ಯೂನ್ಯತೆವುಳ್ಳ ವಿದ್ಯಾರ್ಥಿ ವೇತನವನ್ನು ನೀಡಬೇಕು.
ಶ್ರವಣನ್ಯೂನ್ಯತೆವುಳ್ಳವರ ಶಿಕ್ಷಣಕ್ಕೆ ಬೇಕಾಗುವ ಸಾಧನ ಸಾಮಗ್ರಿಗಳ ಬಗ್ಗೆ ಸಂಶೋಧನೆ ಮಾಡುವ
ಪ್ರಯತ್ನಗಳಿಗೆ ಪ್ರೋತ್ಸಾಹವನ್ನು ನೀದಬೇಕು.
ವಿಶೇಷ ಶಾಲೆಗಳು ಮತ್ತು ಸಮನ್ವಯ ಶಿಕ್ಷಣವನ್ನು ಉತ್ತೇಜಿಸಬೇಕು.
ಶ್ರವಣ ನ್ಯೂನ್ಯತೆವುಳ್ಳವರಿಗೆ ಸಾರ್ವಾಜನಿಕ ರಸ್ತೆಗಳ ವಾಹನ ದಟ್ಟನೆಯ ಸನ್ನಿವೇಶದಲ್ಲಿ ಸಹಾಯ
ಮಾಡುವುದು.
ಉದ್ಯೋಗ
ಸರ್ಕಾರ ಶ್ರವಣ ನ್ಯೂನ್ಯತೆವುಳ್ಳವರಿಗೆ ಮೀಸಲಿಡಬಹುದಾದಂತಹ ಉದ್ಯೋಗ ಮತ್ತು ಹುದ್ದೆಗಳನ್ನು ಗುರ್ತಿಸಬೇಕು. ಹಾಗೂ ಉದ್ಯೋಗವಕಾಶ ಕಲ್ಪಿಸುವಂತಹ ಯೋಜನೆಗಳನ್ನು ರೂಪಿಸಬೇಕು.
ಇವು ಕನಿಷ್ಟ ಪಕ್ಷ ಒಟ್ಟು ಹುದ್ದೆಯ ಶೇ. ೩ ರಷ್ಟಿರಬೇಕು. ಇದರಲ್ಲಿ ಶೇ. ೧ ರಷ್ಟು ಅಂಧರಿಗೆ ಅಥವಾ ಮಂದದೃಷ್ಟಿಯವರಿಗೆ ಶೇ. ೧, ಶ್ರವಣದೋಷವುಳ್ಳವರಿಗೆ ಶೇ. ೧, ಹಾಗೂ ಚಕನೆಯಲ್ಲಿ ನ್ಯೂನ್ಯತೆ ಅಥವಾ ಮೆದುಳು ವಾತದವರಿಗೆ ಮೀಸಲು. ಬಡತನ ನಿವಾರಣ ಯೋಜನೆಯಲ್ಲಿ ಶೇ. ೩ ರಷ್ಟು ಶ್ರವಣ ನ್ಯೂನ್ಯತೆವುಳ್ಳವರಿಗೆ ಮೀಸಲಿಡಬೇಕು.
ಕೆಲಸದ ನಿಮಿತದಲ್ಲಿ ಶ್ರವಣದೋಷ ಉಂಟಾದಾಗ ಯಾವುದೇ ನೌಕರನಿಗೆ ಬಡ್ತಿಯನ್ನು ನಿರಾಕರಿಸಲಾಗದು ಮತ್ತು ಕೆಲಸದಿಂದ ತೆಗೆದು ಹಾಕಲಾಗದು ಅವನಿಗೆ ಪರ್ಯಾಯವಾದ ಕೆಲಸವನ್ನು ಕೊಡಬೇಕು.

ಸಕಾರಾತ್ಮಕ ಕ್ರಮ
ಸರ್ಕಾರ ಶ್ರವಣ ನ್ಯೂನ್ಯತೆವುಳ್ಳವರಿಗೆ ರಿಯಾಯಿತಿ ದರದಲ್ಲಿ ಶ್ರವಣೋಪಕರಣಗಳನ್ನು ಒದಗಿಸುವುದು ಮತ್ತು ರಿಯಾಯಿತಿ ದರದಲ್ಲಿ ಭೂಮಿಯನ್ನು ಕೊಡುವುದು.

ಸಾಮಾಜಿಕ ಭದ್ರತೆ
ಸರ್ಕಾರವು ತನ್ನ ಹಣಕಾಸಿನ ಶಕ್ತಿಗೆ ಅನುಸಾರವಾಗಿ ಪ್ರತಿಯೊಬ್ಬನ ಪುನರ್‌ವಸತಿಗೆ ವ್ಯವಸ್ಥೆ ಮಾಡುವುದು.
ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ನೊಂದಾಯಿಸಿ ಎರಡು ವ ಶಿಕ್ಷಣಕ್ಕೆಗಳಾದರೂ ನೌಕರಿ ದೊರಕದಿರುವ ಶ್ರವಣ ನ್ಯೂನ್ಯತೆವುಳ್ಳವರಿಗೆ ನಿರುದ್ಯೋಗ ಭತ್ಯೆಯನ್ನು ನೀಡಲಾಗುವುದು.
ಉದ್ಯೋಗಸ್ಥ ಶ್ರವಣ ನ್ಯೂನ್ಯತೆವುಳ್ಳವರಿಗೆ ಅಗತ್ಯವಿದಲ್ಲಿ ನಿರುದ್ಯೋಗಿಗಳಿಗೂ ಅನ್ವಯಿಸುವ ವಿಮಾ ಯೋಜನೆಗಳನ್ನು ರೂಪಿಸುವುದು.

ಅಧಿಕಾರಿಗಳು ಮತ್ತು ಸಮಿತಿಗಳು
ಕಾಯಿದೆಯನ್ನು ಅನುಷ್ಟಾನಗೊಳಿಸಲು ಸರ್ಕಾರ ರಚಿಸಿರುವ ಸಮಿತಿಗಳ ವಿವರ ಹೀಗಿದೆ.
ಕೇಂದ್ರ ಸಮನ್ವಯ ಸಮಿತಿ
ಕೇಂದ್ರ ಕಾರ್ಯಕಾರಿ ಸಮಿತಿ
ರಾಜ್ಯ ಸಮನ್ವಯ ಸಮಿತಿ
ಆಯುಕ್ತರು

 ಆಧಾರ ಗ್ರಂಥಗಳು:
ಕಾಂಪೋಡಿಯಂ -ಕರ್ನಾಟಕ ಸರ್ಕಾರ (ಕರ್ನಾಟಕ ಸರ್ಕಾರದ ಅಂಗವಿಕಲರಿಗಾಗಿನ
೨೦೦೮ ಯೋಜನೆಗಳು ಮತ್ತು ಕಾರ್ಯಕ್ರಮಗಳು
ವಾರ್ಷಿಕ ವರದಿ-(ಕರ್ನಾಟಕ ಸರ್ಕಾರ,೨೦೦೮) (ಹಿರಿಯ ನಾಗರಿಕ ಮತ್ತು ಅಂಗವಿಕಲರಕಲ್ಯಾಣ ಇಲಾಖೆ)
Who is disabled-Ali kawaj Spandana publications (2007)
Indian social problems-Madan Chetana publication (2001)
ಅಂಗವಿಕಲರು ಮತ್ತು ಕಾನೂನು- A. D. D India samooha publication 1999
ಪ್ರಸಕ್ತ ವರ್ಷದ ದಿನ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳು
ಅಂತರ್ಜಾಲ ಮಾಹಿತಿ

ವಿಷಯ : ಶ್ರವಣನ್ಯೂನ್ಯತೆವುಳ್ಳ ಹದಿಹರೆಯ ವಿದ್ಯಾರ್ಥಿಗಳ ಮನೋಸಾಮಾಜಿಕ- ಶೈಕ್ಷಣಿಕ ಸ್ಥಿತಿಗತಿ, ಕಾನೂನು- ಹಕ್ಕುಗಳ ಮತ್ತು ಸೌಲಭ್ಯಗಳ ಬಗೆಗಿನ ಅರಿವು ಒಂದು ಅಧ್ಯಯನ.
ಪ್ರಶ್ನಾವಳಿ
ಪ್ರತಿವಾದಿಯ ವೈಯಕ್ತಿಕ ಮಾಹಿತಿ
ಹೆಸರು: ----------------
ಲಿಂಗ : ಅ) ಗಂಡು ಆ) ಹೆಣ್ಣು
ತರಗತಿ : ______
ಮಾಧ್ಯಮ: ಅ) ಕನ್ನಡ ಆ) ಇಂಗ್ಲೀಷ್
 ಇ) ಇತರೆ
 ಧರ್ಮ :ಅ) ಹಿಂದೂ ಆ) ಮುಸ್ಲಿಂ, ಇ) ಕ್ರೈಸ ಈ) ಇತರೆ
ಮಾತೃ ಭಾಷೆ : ಅ) ಕನ್ನಡ ಆ) ಹಿಂದಿ, ಇ) ತೆಲುಗು ಈ) ಇತರೆ
ಕುಟುಂಬದ ಮಾದರಿ: ಅ) ವಿಭಕ್ತ ಆ) ಅವಿಭಕ್ತ
ಕುಟುಂಬದ ಪ್ರಸ್ತುತ ವಾಸ್ತವ್ಯ ಪ್ರದೇಶ?
ಅ) ಗ್ರಾಮ ಆ) ಹೋಬಳಿ ಕೇಂದ್ರ ಸ್ಥಾನ. ಇ) ತಾಲ್ಲೂಕು ಕೇಂದ್ರ ಸ್ಥಾನ ಈ) ನಗರ
 ೯. ನಿಮಗೆ ಕುಟುಂಬದಲ್ಲಿ ನಿರ್ಧಾರ ತೆಗೆದುಕೊಳ್ಳುವ ಅವಕಾಶ ಕಲ್ಪಿಸಲಾಗಿದೆಯೇ? ಅ) ಹೌದು ಆ) ಇಲ್ಲ
 ೧೦. ನಿಮ್ಮ ಸಮುದಾಯದಲ್ಲಿ ಶ್ರವಣದೋಷವುಳ್ಳ ಮಕ್ಕಳ ತೊಂದರೆಗಳಿಗೆ ಸಹಕರಿಸುವರೇ? ಅ) ಹೌದು ಆ) ಇಲ್ಲ
 ೧೧. ನಿಮಗೆ ಶ್ರವಣದೋಷ ಉಂಟಾಗಲು ಕಾರಣಗಳೇನು? ಅ) ಅನುವಂಶೀಯತೆ ಆ) ದೈತ್ಯ ಶಬ್ದದಿಂದ. . . ಇ) ಕಿವಿ ಸೋರುವಿಕೆಯಿಂದ ಈ) ಇತರೆ
೧೨. ಎಸ್. ಅರ್. ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆ ನಿಮ್ಮ ಸಮಸ್ಯೆಯನ್ನು
 ಬಗೆಹರಿಸುವಲ್ಲಿ ಹಾಗೂ ಪರಿಹಾರ ಒದಗಿಸುವಲ್ಲಿ ಸಹಾಯಕವಾಗಿದೆಯೇ? ಅ) ಹೌದು ಆ) ಇಲ್ಲ
 ೧೩. ನಿಮ್ಮ ಸಂಸ್ಥೆಯ ಕಾರ್ಯವೈಖರಿಯಿಂದ ನೀವು ಕಂಡುಕೊಂಡ ಗುಣಗಳು ಯಾವುವು? ಅ) ನಾಯಕತ್ವ ಗುಣ ಆ) ಸಂವಹನ ಕೌಶಲ್ಯ ಇ) ಸಹಾಯ ಮಾಡುವ ಗುಣ ಈ) ಮೇಲಿನ ಎಲ್ಲಾವು
 ೧೪. ನಿಮ್ಮ ಭಾಷಾ ಸಂವಹನದ ಕಲಿಕೆಯ ವಿಧಾನ ಯಾವುದು? ಅ) ಮೌಖಿಕ ವಿಧಾನ ಆ) ಲಿಖಿತ ವಿಧಾನ ಇ) ಸಂವಹನ ವಿಧಾನ ಈ) ಇತರೆ
 ೧೫. ನಿಮ್ಮ ಪ್ರತಿಭೆಯ ಅನಾವರಣಕ್ಕೆ ಎಸ್. ಅರ್. ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆ
 ಯಾವ ರೀತಿ ಸಹಾಯಕವಾಗಿದೆ? ಅ) ಮುಕ್ತ ಅವಕಾಶ, ಮಕ್ಕಳ ಹಿತಾಶಕ್ತಿ ಆ) ಅಭಿಪ್ರಾಯ ಅಭಿವ್ಯಕ್ತಿ ಸ್ವಾತಂತ್ರ್ಯ ಇ) ಪಠ್ಯೇತರ ಚಟುವಟಿಕೆಗಳು ಈ) ಮೇಲಿನ ಎಲ್ಲವು.
 ೧೬. ಶ್ರವಣದೋಷ ಸಮಸ್ಯೆ ಇದ್ದರೂ ನಿಮ್ಮಲ್ಲಿ ಓದುವ ಆಸಕ್ತಿ ಹೆಚ್ಚಿದೆಯೇ? ಅ) ಹೌದು ಆ) ಇಲ್ಲ
 ೧೭. ಶ್ರವಣದೋಷವುಳ್ಳ ಮಕ್ಕಳು ಎಂದು ನಿರ್ಧರಿಸುವುದಕ್ಕೆ ಎಷ್ಟು ಡೆಸಿಬಲ್‌ಗಳಷ್ಟು ಇರಬೇಕು? ಅ) ೪೦ ಡೆಸಿಬಲ್ ಆ) ೫೦ ಡೆಸಿಬಲ್ ಇ) ೫೫ ಡೆಸಿಬಲ್ ಈ) ೩೦ ಡೆಸಿಬಲ್
೧೮. ಎಸ್. ಅರ್. ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆಯಿಂದ ನಿಮ್ಮಲ್ಲಿ ಆದ
 ಬದಲಾವಣೆಗಳೇನು? ಅ)ಸಂವಹನದಲ್ಲಿ ಬದಲಾವಣೆ ಆ) ವರ್ತನೆಯಲ್ಲಿ ಸುಧಾರಣೆ ಇ) ಕ್ರಿಯಾಶೀಲತೆ ಈ) ಮೇಲಿನ ಎಲ್ಲಾವು.
 ೧೯. ನೀವು ಯಾವುದಾದರು ಇತರೆ ಶಬ್ದಗಳಿಗೆ ಪ್ರತಿಕ್ರಿಯಿಸಲು ಕಷ್ಟಪಡುತ್ತಿರಾ? ಅ)ಹೌದು ಆ)ಇಲ್ಲ
 ೨೦. ಶ್ರವಣದೋಷದಿಂದ ನಿಮ್ಮಲ್ಲಿ ಕೀಳುಹಿರಿಮೆಯ ಮನೋಭಾವ ಇದೆಯೇ? ಅ)ಹೌದು ಆ)ಇಲ್ಲ
 ೨೧. ವೈದ್ಯರು ಅಥವಾ ಸಂಬಂಧಿಸಿದ ಪ್ರಾಧಿಕಾರ ಗುರುತಿಸಿರುವ ನಿಮ್ಮ ಶ್ರವಣದೋಷದ ಶೇಖಡವಾರು ಪ್ರಮಾಣವನ್ನು ತಿಳಿಸಿರಿ?
 ೨೨. ನಿಮ್ಮಲ್ಲಿ ಶ್ರವಣದೋಷ ಹುಟ್ಟಿನಿಂದಲೂ ಇದೆಯೇ? ಅ)ಹೌದು ಆ) ಇಲ್ಲ ಇಲ್ಲವಾದರೆ ಅನಂತರದಲ್ಲಿ ಹೇಗೆ ಉಂಟಾಯಿತು? ಅ) ಅಪಘಾತ ಆ)ಧೀರ್ಘಾಕಾಲಿನ ಅನಾರೋಗ್ಯ ಇ) ಶಬ್ಧದಿಂದ ಈ) ಇತರೆ
 ೨೩. ನೀವು ಕನಸು ಕಟ್ಟಿಕೊಂಡಿರುವ ಸುಂದರ ಬದುಕು ಯಾವುದು? ಅ) ಹೆತ್ತವರೋಡಗೂಡಿ ಜೀವನ ನಡೆಸುವುದು. ಆ) ಅಂಗವಿಕಲರ ಪುನರ್ವಸತಿಗಾಗಿ ಸಂಘಟನೆಯ ಸಂಸ್ಥಾಪನೆ. ಇ) ಅವಿವಾಹಿತರಾಗಿದ್ದುಕೊಂಡು ಸಮಾಜ ಸೇವೆ ಸಮಾಜಕಾರ್ಯದಲ್ಲಿ ತೊಡಗಿಸಿಕೊಳ್ಳುವುದು. ಈ) ಯಾವುದೇ ನಿಶ್ಚಿತ ಸುಂದರ ಬದುಕನ್ನು ಕಲ್ಪಿಸಿಕೊಂಡಿಲ್ಲ.
 ೨೪. ನೀವು ಪ್ರಸ್ತುತ ವಾಸ್ತವ್ಯವಿರುವ ಸ್ಥಳ ಯಾವುದು? ಅ) ಹೆತ್ತವರೊಂದಿಗೆ ಆ)ಸಂಬಂಧಿಕರೊಂದಿಗೆ ಇ) ಬಾಡಿಗೆ ಕೊಠಡಿ ಈ) ಅಂಗವಿಕಲರ ವಿದ್ಯಾರ್ಥಿನಿಲಯ
 ೨೫. ನಿಮ್ಮ ವಿಭಾಗಗಳಲ್ಲಿನ ಶಿಕ್ಷಕರು ನಿಮಗೆ ವಿಶೇಷವಾಗಿ ಸಹಕರಿಸುತ್ತಿರುವರೇ? ಅ) ಹೌದು ಆ) ಇಲ್ಲ
 ಹೌದಾದರೆ ಸಹಕಾರದ ರೂಪವನ್ನು ಗುರ್ತಿಸಿರಿ ಅ) ವಿಶೇಷವಾದ ಕಾಳಜಿ ಆ) ಪಠ್ಯಪುಸ್ತಕ/ ಟಿಪ್ಪಣಿಗಳನ್ನು ಒದಗಿಸುವುದು ಇ) ಅಪ್ತಸಮಾಲೋಚನೆ ಮತ್ತು ಸಂವಾದಕ್ಕೆ ಅವಕಾಶ ಈ) ಇತರೆ ಸ್ಪಷ್ಟಪಡಿಸಿ
 ೨೬. ನಿಮ್ಮ ಸಹಪಾಠಿಗಳು ನಿಮಗೆ ವಿಶೇಷವಾಗಿ ಸಹಕರಿಸುತ್ತಿರುವರೇ? ಅ) ಹೌದು ಆ)ಇಲ್ಲ
 ಹೌದಾದರೆ ಸಹಕಾರದ ಸ್ವರೂಪವನ್ನು ಗುರ್ತಿಸಿರಿ? ಅ) ಅಧ್ಯಯನಕ್ಕೆ ಪ್ರೋತ್ಸಾಹ ಆ) ವಿಶೇಷ ಕಾಳಜಿ ಇ) ಕೇಳಿಸಿಕೊಳ್ಳುವುದಕ್ಕೆ ನೆರವು ಈ) ಇತರೆ
 ೨೭. ಶ್ರವಣನ್ಯೂನ್ಯತೆವುಳ್ಳ ವಿಧ್ಯಾರ್ಥಿಗಳಿಗೆ ಎಷ್ಟನೇ ವಯಸ್ಸಿನವರಗೆ ಉಚಿತ ಶಿಕ್ಷಣವನ್ನು
 ನೀಡಬೇಕಿದೇ ? ಅ) ೧೮ ವರ್ಷ ಆ) ೨೧ ವರ್ಷ ಇ) ೨೫ ವರ್ಷ ಈ) ಇತರೆ
 ೨೮. ಶ್ರವಣನ್ಯೂನ್ಯತೆವುಳ್ಳ ವಿಧ್ಯಾರ್ಥಿಗಳಿಗೆ ಉದ್ಯೋಗದಲ್ಲಿ ಮೀಸಲಾಗಿರುವ ಶೇಕಾಡವಾರು
 ಪ್ರಮಾಣ ಎಷ್ಟು? ಅ) ಶೇ. ೧ ಆ)ಶೇ. ೨ ಇ) ಶೇ. ೩ ಈ) ಇತರೆ
 ೨೯. ಶ್ರವಣನ್ಯೂನ್ಯತೆವುಳ್ಳ ಮಕ್ಕಳಿಗೆ ರಾಜ್ಯ ಸರ್ಕಾರ ಎಷ್ಟು ಕಿಲೋಮೀಟರ್‌ವರೆಗೆ ಉಚಿತ ಬಸ್
 ಪಾಸ್ ವ್ಯವಸ್ಥೆ ಕಲ್ಪಿಸಿದೆ? ಅ) ೫೦ ಕಿ. ಮೀ ಆ) ೧೦೦ ಕಿ. ಮೀ ಇ) ೧೫೦ ಕಿ. ಮೀ ಈ) ೨೦೦ ಕಿ. ಮೀ
 ೩೦. ನೀವು ಶ್ರವಣನ್ಯೂನ್ಯತೆವುಳ್ಳ ಸಹಪಾಠಿಗಳೊಂದಿಗೆ ಕ್ರೀಡಾಕೂಟಗಳಲ್ಲಿ
 ಭಾಗವಹಿಸುತ್ತಿರುವಿರಾ? ಅ) ಹೌದು ಆ) ಇಲ್ಲ
 ಹೌದಾದರೆ ನೀವು ಇದುವರೆಗೆ ಭಾಗವಹಿಸಲು ಸಾಧ್ಯವಾಗಿರುವ ಮಟ್ಟವನ್ನು ಗುರ್ತಿಸಿರಿ ಅ) ಶಾಲಾ ಮಟ್ಟದಲ್ಲಿ ಆ) ಅಂತರ್‌ಶಾಲಾ ಮಟ್ಟದಲ್ಲಿ ಇ) ರಾಜ್ಯಮಟ್ಟದಲ್ಲಿ ಈ) ರಾಷ್ಟ್ರಮಟ್ಟದಲ್ಲಿ
 ೩೧. ನಿಮಗೆ ತಿಳಿದಿರುವಂತೆ ಶಾಲೆಯಲ್ಲಿ ಶ್ರವಣನ್ಯೂನ್ಯತೆಯುಳ್ಳವರೊಂದಿಗೆ ಕ್ರೀಡೆ ಮತ್ತು ಸಾಂಸ್ಕ್ರತಿಕ
 ಕಾರ್ಯಕ್ರಮದಲ್ಲಿ ಸಾಧೆನೆ ಮಾಡಿ ಗೆದ್ದ ಪ್ರಶಸ್ತಿಗಳನ್ನು ಪಟ್ಟಿ ಮಾಡಿರಿ?
 ೩೨. ನೀವು ಸಾಂಸ್ಕ್ರತಿಕ ಚಟುವಟಿಕೆಗಳಲ್ಲಿ ಆಸಕ್ತರಾಗಿರುವಿರಾ? ಅ) ಹೌದು ಆ) ಇಲ್ಲ
೩೩. ಇಲ್ಲವಾದರೆ ಕಾರಣಗಳೇನು? ಅ) ಶ್ರವಣನ್ಯೂನ್ಯತೆಯ ಪರಿಣಾಮ ಆ) ಪ್ರಯೋಜನಗಳ ಮನವರಿಕೆ ಆಗದಿರುವುದು ಇ) ಪ್ರೋತ್ಸಾಹ ದೊರೆಯದಿರುವುದು ಈ) ಇತರೆ
 ೩೪. ಮನರಂಜನೆ ಹೊಂದಲು ಏನು ಮಾಡುತ್ತಿರಾ? ಅ) ಆಟ , ಕ್ವಿಜ್ ಆ) ಟಿ. ವಿ ,ಚಿತ್ರಕಲೆ ಇ) ಪ್ರಬಂಧ, ನೃತ್ಯ ಈ) ಮೇಲಿನ ಎಲ್ಲವು
೩೫. ಶ್ರವಣದೋಷದ ಸಮಸ್ಯೆಯಿಂದಲೂ ನೀವು ಮಾಡಿದ ಸಾಧನೆಯ ಕ್ಷೇತ್ರ ಯಾವುದು? ಅ) ಕ್ರೀಡೆ ಆ)ಸಾಹಿತ್ಯ ಇ)ಚಿತ್ರಕಲೆ ಈ) ಇತರೆ
 ೩೬. ನಿಮಗೆ ವಿಧ್ಯಾಭ್ಯಾಸದ ಸಲುವಾಗಿ ಸ್ವಯಂ ಸೇವಾ ಸಂಸ್ಥೆಗಳಿಂದ ನೆರವು ದೊರೆತಿದೆಯೇ? ಅ) ಹೌದು ಆ) ಇಲ್ಲ
 ೩೭. ಅಂಗವಿಕಲತೆಯ ಕಾಯ್ದೆ -೧೯೯೫ ರ ಬಗ್ಗೆ ನಿಮಗೆ ಅರಿವಿದೆಯೇ? ಅ) ಹೌದು ಆ) ಇಲ್ಲ
 ೩೮. ತರಗತಿಯಲ್ಲಿ ಕೇಳಿದ ಪ್ರಶ್ನೆಗಳಿಗೆ ನಿಧಾನಗತಿಯಲ್ಲಿ ಉತ್ತರಿಸಲು ಕಾರಣಗಳೇನು? ಅ) ಕೇಳಿಸುವಿಕೆಯಲ್ಲಿ ಸಾಧಾರಣತೆ ಆ) ಅಸಹಾಯಕತೆ ಇ) ಕಲ್ಪನೆಯಲ್ಲಿ ಮುಳುಗುವಿಕೆಈ) ಯಾವುದು ಇಲ್ಲ.
೩೯. ಎಸ್. ಅರ್. ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆ ಶ್ರವಣದೋಷವುಳ್ಳ ಮಕ್ಕಳಿಗೆ
ಶ್ರಮಿಸುತ್ತಿರುವುದರಿಂದ ನಿಮ್ಮ ಹಕ್ಕುಗಳ ಬಗ್ಗೆ ಅರಿವಾಗಿದೆಯೇ? ಅ) ಹೌದುಆ) ಇಲ್ಲ
 ೪೦. ಉನ್ನತ ಶಿಕ್ಷಣದಲ್ಲಿ ಶ್ರವಣ ನ್ಯೂನ್ಯತೆವುಳ್ಳವರಿಗೆ ಮೀಸಲಾಗಿರುವ ಶೇಕಡವಾರು ಪ್ರಮಾಣವೇಷ್ಟು? ಅ) ಶೇಕಡ ೫ % ಆ) ಶೇಕಡ ೩ % ಇ) ಶೇಕಡ ೨ % ಈ) ಇತರೆ

No comments:

Post a Comment