ಬಿಕ್ಶಕರೊಂದಿಗೆ ಸಮಾಜಕಾರ‍್ಯ ಆಚರಣೆಯ ಅನುಬವಾತ್ಮಕ ದ್ರುಶ್ಟಿಕೋನಕ್ಕೆ ಸಂಬಂದಪಟ್ಟ ಕೆಲವು ಕೇಳ್ವಿಗಳು ಮತ್ತು ಹೇಳ್ವಿಗಳು


ಬೆಂಗಳೂರಿನಲ್ಲಿರುವ ನಿರಾಶ್ರಿತರ ಪುನರ‍್ವಸತಿ ಕೇಂದ್ರದಲ್ಲಿನ  ಸಮಲೋಚಕರಿಂದ ಪಡೆದ ಹೇಳ್ವಿಗಳನ್ನು ಈ ಕೆಳಗೆ ಬರೆಯಲಾಗಿದೆ.

೧. ಮಹಿಳೆಯರು ಹಾಗೂ ಪುರುಶರು ಯಾವಯಾವ ಕಾರಣಗಳಿಗಾಗಿ ಬಿಕ್ಶಾಟನೆಯನ್ನು ಅವಲಂಬಿಸುತ್ತಾರೆಂದು ನಿಮಗೆ ಅನಿಸಿದೆ? ಮತ್ತು ಸಮಾಜಕಾರ‍್ಯದ ಹಿನ್ನಲೆಯಲ್ಲಿ ಹೇಗೆ ಇಂತಹ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುತ್ತಿದ್ದೀರಿ?
ಉ: ಮಹಿಳೆಯರು ಹೆಚ್ಚಾಗಿ ಪುರುಶರ ದವ್ರ‍್ಜನ್ಯದಿಂದ, ರೋಗ ಗ್ರಸ್ತಳಾದಾಗ ಮತ್ತು ಮಕ್ಕಳ ಅಸಡ್ಡೆತನದಿಂದ ಬಿಕ್ಶಾಟನೆಯನ್ನು ಅವಲಂಬಿಸುತ್ತಿದ್ದಾರೆಂದು ತಿಳಿದುಕೊಂಡಿದ್ದೇನೆ.
 ಇನ್ನು ಪುರುಶರು ಕುಡಿಯುವ ಚಟ, ಮಯ್ಗಳ್ಳತನ
 ಮತ್ತು ಇತರೆ ಕಾರಣಗಳಿಂದ ಬಿಕ್ಶಾಟನೆಯನ್ನು ಅವಲಂಬಿಸುತ್ತಾರೆ.
   ಸಮಾಜಕಾರ‍್ಯದಲ್ಲಿನ  ಆಪ್ತಸಮಾಲೋಚನೆ ಮತ್ತು ಪುನರ‍್ವಸತಿಯ ಸಯ್ದಾಂತಿಕ ಮಾರ‍್ಗದ ಮೂಲಕ ಪರಿಹಾರವನ್ನು ಪಡೆದುಕೊಳ್ಳಬಹುದು. ಇದರ ಜೊತೆಗೆ ನಯ್ತಿಕ ಮಾತುಗಳನ್ನು ಹೇಳುವುದರೊಂದಿಗೆ ಅವರು ಮತ್ತೆ ಬಿಕ್ಶೆ ಬೇಡದಂತೆ ಮಾಡಬಹುದು.

೨. ಎಂತಹ ಬಿಕ್ಶಕರಿಗೆ ಕಡಿಮೆ ಅವದಿಯಲ್ಲಿ ಆಪ್ತಸಮಲೋಚನೆಯನ್ನು ಮಾಡುವ ಮೂಲಕ ಪುನರ‍್ವಸತಿಯನ್ನು ಕಲ್ಪಿಸಬಹುದು? ವ್ರುತ್ತಿಪರ ಬಿಕ್ಶಕರಿಗೋ ಅತವಾ ಪರಿಸ್ತಿತಿಯ  ಕಯ್ಗೊಂಬೆಯಾದವರಿಗೋ?
ಉ: ಸಮಾಜಕಾರ‍್ಯ ಕರ‍್ತ ಬಿಕ್ಶಕರೊಂದಿಗೆ ಕಾರ‍್ಯನಿರ‍್ವಹಿಸಬೇಕಾದರೆ ಈ ವ್ರುತ್ತಿಪರ ಬಿಕ್ಶಕರನ್ನು ಮನವಲಿಸುವುದೇ ಒಂದು ಸವಾಲಿನ ಕೆಲಸವಾಗಿದೆ. ಹೆಚ್ಚಾಗಿ ಯಾರು ಪರಿಸ್ತಿತಿಯ ಕಯ್ಗೊಂಬೆಯಾಗಿ ಅಂದರೆ, ಅನಿವಾರ‍್ಯವಾಗಿ ಬಿಕ್ಶೆ ಬೇಡುತ್ತಿರುತ್ತಾರೋ ಅವರಿಗೆ  ಕಡಿಮೆ ಅವದಿಯಲ್ಲಿ ಆಪ್ತಸಮಾಲೋಚನೆಯನ್ನು ನೀಡುವ ಮೂಲಕ ಪುನರ‍್ವಸತಿಯನ್ನು ಕಲ್ಪಿಸಬಹುದು.

೩. ಹಿರಿಯರಿಗೆ ತಿಳುವಳಿಕೆಯನ್ನು ಹೇಳುವ ಸಂದರ‍್ಬದಲ್ಲಿನ ಮುಜುಗರಕ್ಕೆ ಪರಿಹಾರ?
ಉ: ಮೊದಮೊದಲು ಎಂತಹ ವ್ರುತ್ತಿಪರ ಸಮಾಜಕಾರ‍್ಯಕರ‍್ತರಿಗೆ ತನಗಿಂತ ಹಿರಿಯರಿಗೆ  ತಿಳುವಳಿಕೆಯನ್ನು ಹೇಳುವಾಗ ಮುಜುಗರವಾಗುತ್ತಿರುತ್ತದೆ. ವ್ರುತ್ತಿಯಲ್ಲಿನ ಅನುಬವವು ಇದಕ್ಕೆ ಪರಿಹಾರ.

೪. ಬಿಕ್ಶಾಟನೆಯು ಬೂಗತ ದೊರೆಗಳಿಗೆ ಆದಾಯವನ್ನು ತರುವ ಉದ್ಯಮವಾಗಿರುತ್ತಿರುವ ಈ ಸನ್ನಿವೇಶದಲ್ಲಿ ಸಮಾಜಕಾರ‍್ಯಕರ‍್ತರು ಎದರಿಸಬಹುದಾದ ಸಂದಿಗ್ದತೆಯನ್ನು ಮತ್ತು ಇದಕ್ಕೆ ಪರಿಹಾರಕವಾಗಿ ಸಮಾಜಕಾರ‍್ಯದ ಆಚರಣೆಯಲ್ಲಿನ ಹೊಸ ಸಾದ್ಯತೆಯನ್ನು ಗುರುತಿಸಿ.
ಉ: ಬೂಗತ ದೊರೆಗಳಿಗೆ ಇದು ಒಂದು ಆದಾಯ ಮೂಲ. ಸಮಾಜಕಾರ‍್ಯಕರ‍್ತರಿಗೆ ಇಂತವರು  ಕೊಲೆ ಬೆದರಿಕೆಯನ್ನು ಹಾಕುವ ಸಾದ್ಯತೆ ಇರುತ್ತದೆ. ಇದೆ ಹೆಚ್ಚಾಗಿ ಸಮಾಜಕಾರ‍್ಯಕರ‍್ತರನ್ನು ಸಂದಿಗ್ದತೆಗೆ ಈಡು ಮಾಡುವಂತದ್ದು ಆಗುತ್ತಿದೆ.
    ಸಮಾಜಕಾರ‍್ಯ ವಿಶಯದಲ್ಲಿರುವ ವ್ಯಕ್ತಿಗತ ಕಾರ‍್ಯದ ವಿದಾನದಲ್ಲಿ ಅಪರಾದಶಾಸ್ತ್ರದ ಕೆಲವು ಸಾರವನ್ನು ಸೇರ‍್ಪಡೆ ಮಾಡಿದರೆ  ಸಮಾಜಕಾರ‍್ಯದ ಆಚರಣೆಯನ್ನು ಇನ್ನು ಪರಿಣಾಮಕಾರಿಯಾಗಿ ಮಾಡಬಹುದಾಗಿದೆ. ಇಂತಹ ಸಂದಿಗ್ದತೆಯ ಮುಕ್ತತೆಗೆ ಇದು ಒಂದು ಉತ್ತಮ ಪರಿಹಾರವಾಗುತ್ತದೆ.

೫. ಬಿಕ್ಶಕರೊಂದಿಗೆ ವ್ಯವಹರಿಸುವಾಗ ಕಂಡುಬರುವ ಸಮಾಜಕಾರ‍್ಯದ ಆಚರಣೆಯಲ್ಲಿನ ಮೂರು ಲೋಪವನ್ನು ಗುರುತಿಸಿ.
ಉ: ಸಮಾಜಕಾರ‍್ಯದ ಆಚರಣೆಯಲ್ಲಿನ ಲೋಪವೆಂದರೆ, ೧. ವ್ಯವಸ್ತೆಯ ವಿರುದ್ದ ಹೋಗದಂತೆ ಇರುವ ಮಾರ‍್ಗದರ‍್ಶನ. ೨. ವ್ಯಕ್ತಿಯು ತನ್ನದೇ ಆದ ಸಿದ್ದಾಂತಕ್ಕೆ ಅಂಟಿಕೊಂಡಿರುವುದರಿಂದ ಸಮಾಜಕಾರ‍್ಯದ ಮೂಲಕ ಅತವಾ ಇನ್ಯಾವ ವಿದಾನದ ಮೂಲಕ ಆತನಿಗೆ ತಿಳುವಳಿಕೆಯ ಮಾತನ್ನು ಹೇಳಿದರೂ ಆತನನ್ನು ಬದಲಾಯಿಸಲು ಸಾದ್ಯವಾಗದಿರೋದು. ೩. ಸಮುದಾಯದವರ ಅಸಹಕಾರವಿದ್ದರೆ ಸಮಾಜಕಾರ‍್ಯವು ಅಸ್ತಿತ್ವದಲ್ಲಿರುವುದಿಲ್ಲ.

೬. ಬಿಕ್ಶಕರೊಡನೆ  ಸಮಾಜಕಾರ‍್ಯವನ್ನು ಪರಿಣಾಮಕಾರಿಯಾಗಿ ಆಚರಿಸಲು ಪ್ರಶಿಕ್ಶಣಾರ‍್ತಿಗಳಿಗೆ ಕೆಲವು ಸಲಹೆಗಳನ್ನು ನೀಡಿ.
ಉ: ೧. ಪರಿಸ್ತಿತಿಯನ್ನು ವಿವಿದ ದ್ರುಶ್ಟಿಕೋನದ ಮೂಲಕ ವಿಶ್ಲೇಶಣೆ ಮಾಡುವ ಕವ್ಶಲ್ಯವನ್ನು ರೂಡಿಸಿಕೊಳ್ಳಬೇಕು. ೨. ಸಮಾಜಕ್ಕೆ ತನ್ನ ಕಾಣಿಕೆ ಹೇಗಿರಬೇಕು ಮತ್ತು ಅದರಿಂದ ಸಮಸ್ಯೆಯು ನಿವಾರಣೆ ಆಗುತ್ತದೆಯೇ ಎಂಬುವುದನ್ನು ಅರಿತು ಕಾರ‍್ಯ ಯೋಜನೆಯನ್ನು ಹಾಕಿಕೊಳ್ಳಬೇಕು. ೩. ಕೇವಲ ಸಮಾಜಕಾರ‍್ಯದ ವಿಶಯಕ್ಕೆ ಅಂಟುಕೊಳ್ಳದೆ ಸಾಮಾಜಿಕ ವಿಜ್ನಾನಗಳ ಅರಿವನ್ನು ಹೊಂದಬೇಕು. ೪. ಚಿಕ್ಕವರಿರಲಿ ದೊಡ್ಡವರಿರಲಿ ಅವರು ನೀಡುವ ಉತ್ತಮ ಸಲಹೆಗಳನ್ನು ಸ್ವೀಕರಿಸಿ ಅವುಗಳ  ಸಾದಕ ಬಾದಕವನ್ನು ವಿಶ್ಲೇಶಿಸಿ ಮುಂದಿನ ಹೆಜ್ಜೆಯನ್ನು ಇಡಬೇಕು.

೭. ಇಶ್ಟು ದಿನದ ವ್ರುತ್ತಿ ಅನುಬವದ ಮೂಲಕ  ನಿಮ್ಮಲ್ಲಾದ ಪರಿವರ‍್ತನೆ?
ಉ: ೧. ತಾಳ್ಮೆಯ ಮೂಲಕ ಕೆಟ್ಟ ವ್ಯವಸ್ತೆಗೆ  ಬಾಹ್ಯವಾಗಿ ಹೊಂದಿಕೊಂಡು ವ್ಯವಸ್ತೆಯನ್ನು ತಳಮಟ್ಟದಿಂದ ಸುದಾರಿಸುವ ಕವ್ಶಲ್ಯವು  ಸಮಾಜಕಾರ‍್ಯಕರ‍್ತರದಾಗಿರಬೇಕು ಎಂಬುವುದನ್ನು ತಿಳಿದುಕೊಂಡು ಕಾರ‍್ಯನಿರ‍್ವಹಿಸುತ್ತಿರುವುದು. ೨. ಸಮಾಜಕಾರ‍್ಯಕರ‍್ತ ತನ್ನ ಕಾರ‍್ಯಕ್ಕೆ ಸೀಮಿತನಾಗದೆ ಅವಶ್ಯವೆನಿಸಿದಾಗ ಇತರೆ ಕಾರ‍್ಯವನ್ನು ಕಯ್ಗೊಳ್ಳಬೇಕು ಎಂಬುವುದನ್ನು ತಿಳಿದು ಅದರಂತೆ ಕಾರ‍್ಯನಿರ‍್ವಹಿಸುತ್ತಿರುವುದು.

೩/೧೨ ಬೆಸೆದುಕೊಂಡಿರುವ ಸಂತಸ, ದುಕ್ಕ


1884 ರಲ್ಲಿ ಡಾ.ರಾಜೇಂದ್ರ ಪ್ರಸಾದ್ ಹಾಗೂ 1889 ರಲ್ಲಿ ಕುದಿರಾಮ್ ಬೋಸ್ ಹುಟ್ಟಿದರು.
1979 ರಲ್ಲಿ ಹಾಕಿ ಆಟದ ರುವಾರಿ ದ್ಯಾನ್ ಚಂದ್ ತೀರಿಕೊಂಡರು.
ಬಾರತದಲ್ಲಿ ಕಟ್ಟಲೆ ಅರಿಗರ ದಿನವನ್ನಾಗಿ ಆಚರಿಸಲಾಗುವುದು.
೧೯೮೪ ರಲ್ಲಿ ಬೋಪಾಲ್ನಲ್ಲಿ ಅನಿಲದ ದುರಂತ.
ಒಟ್ಟಾರೆ ಸಂತಸ, ದುಕ್ಕ ಗಳೊಟ್ಟಿಗೆ ವಿಶ್ವ ಅಂಗವಿಕಲರ ದಿನವನ್ನೂ ಬಾರತದಲ್ಲಿ ಆಚರಿಸಲಾಗುತ್ತದೆ.

ವಿಶ್ವಸಂಸ್ತೆಯು 15% ರಶ್ಟು ಜಗತ್ತಿನಲ್ಲಿ ಅಂಗವಿಕಲರು ಇರುವುದನ್ನು ಮನಗಂಡು 1981ರ ವರ‍್ಶವನ್ನು ವಿಶ್ವ ಅಂಗವಿಕಲರ ವರ‍್ಶವನ್ನಾಗಿ ಗೋಶಿಸಿ ೧೯೯೨ ರಿಂದ ಪ್ರತಿ ವರ‍್ಶ ೩/೧೨ರ ದಿನವನ್ನು ಅಂಗವಿಕಲರ ದಿನವನ್ನಾಗಿ ಹೋಬಳಿಯಿಂದ ಇಡಿದು ವಿಶ್ವ ಮಟ್ಟದ ತನಕ ಆಚರಿಸಲು ಎಲ್ಲಾ ದೇಶಗಳಿಗೂ ಕರೆ ನೀಡಿತು. ಅಂದಿನಿಂದ ಅಂಗವಿಕಲರ ಸಮಸ್ಯೆಗಳನ್ನು, ಪರಿಹಾರಗಳನ್ನು ಹಾಗೂ ಅಂಗವಿಕಲರ ಸಾದನೆಗಳನ್ನು ಸಮಾಜಕ್ಕೆ ತಿಳಿಯಪಡಿಸುವ ಹಲವು ಬಗೆಯ ಕಾರ‍್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

ದಿನದ ವಿಶೇಶ:
೧. ಅಂಗವಿಕಲರ ಏಳಿಗೆಗೆ ದುಡಿದ ಅಂಗವಿಕಲರಿಗೆ ಹಾಗೂ ಅಂಗವಿಕಲರಿಗಾಗಿ ದುಡಿದ ಅಂಗವಿಕಲರಲ್ಲದ ವ್ಯಕ್ತಿಗಳ ಸಾದನೆಯನ್ನು ಗುರುತಿಸಿ ಪ್ರಶಸ್ತಿಯನ್ನು ನೀಡುವುದು.
೨. ಅಂಗವಿಕಲರ ಪ್ರತಿಬೆಗಳ ಅನಾವರಣಗಳಿಗೆ ವೇದಿಕೆಯನ್ನು ಒದಗಿಸುವುದು.
೩. ಆಟಗಳ ಪೋಟಿಗಳಲ್ಲಿ ಗೆದ್ದವರಿಗೆ ಬಹುಮಾನಗಳನ್ನು ನೀಡುವುದು.
೪. ಅಂಗವಿಕಲರ ಶಿಕ್ಶಣಕ್ಕೆ ದುಡಿಯುತ್ತಿರುವ ಶಾಲೆಗಳನ್ನು ಗುರುತಿಸಿ ರಾಜ್ಯ ಹಾಗೂ ರಾಶ್ಟ್ರ ಪ್ರಶಸ್ತಿಗಳನ್ನು ನೀಡುವುದು.
೫. ಸರ‍್ಕಾರಗಳ ಯೋಜನೆಗಳನ್ನು ವಿಮರ‍್ಶೆಗೆ ಒಳಪಡಿಸಿ ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯನ್ನು ಮಾಡಿಕೊಳ್ಳುವುದು.
೬. ನೆಲದವ್ವಳ ಹಲತನವನ್ನು ಒಪ್ಪುವ ಮೂಲಕ ಅಸಮಾನತೆ ಹಾಗೂ ತಾರತಮ್ಯ ನಿಲುವುಗಳನ್ನು ತಾಳದಿರಲು ಅಂಗವಿಕಲರಲ್ಲದವರಲ್ಲಿ ಮನವಿ ಮಾಡಿಕೊಳ್ಳುವಂತಹ ನಡಿಗೆಗಳನ್ನು ಏರ‍್ಪಡಿಸುವುದು.

ಬಾರತವು Convention on the Rights of Persons with Disabilities ಗೆ ಒಪ್ಪಿಕೊಂಡು ವಿಶ್ವಸಂಸ್ತೆಯು ಅಂಗವಿಕಲರ ಏಳಿಗೆಗೆ ರೂಪಿಸುವಂತಹ ಯೋಜನೆಗಳನ್ನು ಜಾರಿಗೊಳಿಸುತ್ತಿರುವಾಗಿನಿಂದ ತುಸು ಅಂಗವಿಕಲರ ಜೀವನ ಮಟ್ಟ ಏರಿಕೆ ಕಂಡಿದೆ. ವಿವಿದ ಕ್ಶೇತ್ರಗಳಲ್ಲಿಯೂ ಅಂಗವಿಕಲರ ಇರುವಿಕೆಯನ್ನು ಕಾಣಬಹುದಾಗಿದೆ.

ಸಮಾಜ ಒಳ್ಳೆಯವರೊಂದಿಗೂ ಇರುವಂತೆ ಕೆಟ್ಟವರೊಂದಿಗೂ ಇರುತ್ತದೆ. ಆದರೆ ಯಾರು ದ್ರುತಿಗೆಟ್ಟು ತಮ್ಮ ಬಾವನೆಗಳನ್ನು ಹೇಳಿಕೊಳ್ಳದೆ ಒಳಒಳಗೆ ಕೊರಗುತ್ತಿರುತ್ತಾರೋ ಅಂತವರ ನೆರವಿಗೆ ಬಾರದು ಎಂಬ ಸತ್ಯವನ್ನು ಅಂಗವಿಕಲರು ತಿಳಿದುಕೊಂಡಿದ್ದರಿಂದಲೇ ವಿಶಿಶ್ಟ ಸಾದಕರಾಗುತ್ತಿರುವುದು. ಎತ್ತುಗೆಗೆ: ಕುರುಡರು ಬಳಸುವ JAWS ಹಾಗೂ NVDA ಪರದೆ ಓದುಗ (screenreader) ಮೆದು ಜಾಣು (software) ಅಣಿಗೊಳಿಸಲು ಕುರುಡರೇ ಮೊದಮೊದಲು ತೊಡಗಿಕೊಂಡ ಬಳಿಕ ಕುರುಡರಲ್ಲದವರು ನೆರವಿಗೆ ಬಂದು ಜಯ್ವಿಕ ದ್ರುಶ್ಟಿಯ ಬದಲಾಗಿ ಚಳಕದ ದ್ರುಶ್ಟಿಯನ್ನು ನೀಡುವಲ್ಲಿ ಕೊಡುಗೆ ನೀಡಿದ್ದಾರೆ.

ಬಾರತದಲ್ಲಿ ಅಂಗವಿಕಲರ ಕಾಯ್ದೆಯನ್ನು ಜಾರಿಗೆ ತಂದು ಹತ್ತಿರ ಎರಡು ದಶಕಗಳೇ ಕಳೆದಿದ್ದರೂ, ಕಾಯ್ದೆಯು ಇಡಿಯಾಗಿ ಅನುಶ್ಟಾನವಾಗಿಲ್ಲವಾಗ್ಯೂ ಕೆಲವು ಕಟ್ಟಲೆ ಅರಿಗರು ಅಂಗವಿಕಲರ ಕಾಯ್ದೆಗಳನುಸಾರ ಅಂಗವಿಕಲರಿಗೆ ಎಲ್ಲಾ ರಂಗಗಳಲ್ಲಿ ಸವಲತ್ತುಗಳನ್ನು ನೀಡುವಂತೆ ನ್ಯಾಯಾಲಯಗಳ ಮೂಲಕ ನ್ಯಾಯವನ್ನು ಕೊಡಿಸುತ್ತಿದ್ದಾರೆ. ಇಂದು ಅಂಗವಿಕಲರು ಬೆಳಕನ್ನು ಕಂಡಿದ್ದೇ ಹವ್ದಾಗಿದ್ದರೆ ಅದು ನ್ಯಾಯಾಲಯಗಳ ಮೂಲಕವೇ ಹೊರತು ರಾಜಕಾರಣಿಗಳ ಮೂಲಕವಲ್ಲ. IAS, KAS, PDO, SDA, FDA ಗಳಾಗಿ ಕೆಲಸ ಮಾಡುತ್ತಿರುವುದು ಈ ತೆರನ ವ್ಯಕ್ತಿಗಳ ಪ್ರಯತ್ನದಿಂದ.

"ಹಕ್ಕು ಇರುವುದು ಪಡೆಯುವುದಕ್ಕೆ. ಅಂತೆಯೆ, ಕರ‍್ತವ್ಯವಿರುವುದು ಸಮಾಜಕ್ಕೆ ತಮ್ಮಿಂದಾಗುವ ನೆರವನ್ನು ನೀಡುವುದಕ್ಕೆ. ರಾಜಕಾರಣಿಗಳಲ್ಲಿ ಕಯ್ ಚಾಚುವ ಬದಲು ನ್ಯಾಯಾಲಯಗಳಲ್ಲಿ ಅನ್ಯಾಯಗಳ ಎದುರಾಗಿ ಮೊರೆ ಹೋಗುವುದು ಒಳಿತು." ಎಂದು ಆಗಾಗ ಅಂಗವಿಕಲರ ಏಳಿಗೆಗೆಂದು ದುಡಿಯುತ್ತಿರುವವರು ಆಗಾಗ್ಗೆ ಹೇಳುವ ಮಾತು.

ಕೆಲವು ಹಣಮನೆಗಳು ಅಂಗವಿಕಲರಿಗೆ ಸಾಲವನ್ನು ಕೊಡಲು ನಿರಾಕರಿಸುತ್ತಿರುವುದನ್ನು ಮನಗಂಡು ಕೇಂದ್ರ ಸರ‍್ಕಾರ ಅಂಗವಿಕಲರ ಚಳುವಳಿಗಳನ್ನು ಗವ್ರವಿಸಿ National Handicapped Finance and Development Corporation (NHFDC) ಯನ್ನು ಸ್ತಾಪಿಸಿ ಒಳ್ಳೆಯ ಕೆಲಸವನ್ನು ಮಾಡಿದೆ. ಇದರಿಂದ ಸಾಲವನ್ನು ಪಡೆದ ಅಂಗವಿಕಲರು ಬೇರೆಯವರಿಗೂ ಕೆಲಸವನ್ನು ನೀಡಿದ್ದಾರೆ.
ಇದರ ಮಿಂಬಲೆ: www.nhfdc.nic.in/

ಅಂಗವಿಕಲರನ್ನು ಹಾಗೂ ಅಂಗವಿಕಲರಲ್ಲದವರನ್ನು ಅಂಗವಿಕಲರು ಮದುವೆಯಾಗಿ ಬಾಳ ದೋಣಿಯಲ್ಲಿ ಸಾಗುತ್ತಿದ್ದಾರೆ. ಅಂಗವಿಕಲರು ಕೂಡ ಗಂಡು-ಹೆಣ್ಣು ಹುಡುಕಾಟಕ್ಕಾಗಿ www.jeevansathi.com ತೆರನ ಮಿಂಬಲೆಯ ಸವಲತ್ತುಗಳನ್ನು ಪಡೆಯಲು ಆಗಿರುವಂತೆಯೇ ಕುಂದು ಕೊರತೆಗಳ ಬಗೆಗೆ ಚರ‍್ಚಿಸಲು www.sayeverything.org/ ಹಾಗೂ accessindia.org.in/ ತೆರನ ಮಿಂಚು ಕೂಟಗಳನ್ನು ಮಾಡಿಕೊಂಡಿದ್ದಾರೆ.

ಅಂಗವಿಕಲರು ಅಡೆ ತಡೆ ಇಲ್ಲದಂತೆ ಬದುಕಲು ಹಲವಾರು ತೆರನ ಚಳಕಗಳು ನೆರವಾಗುತ್ತಿರುವ ಹಿನ್ನೆಲೆಯಲ್ಲಿ ಕೆಲವರು "ಯಾರ ಮೆದಳು ಕೆಲಸ ಮಾಡಲು ಸೋತಿರುತ್ತದೋ ಅಂತವರನ್ನು ಮಾತ್ರ ಅಂಗವಿಕಲರು" ಎಂಬ ವಾದವನ್ನು ಮಂಡಿಸುತ್ತಿದ್ದಾರೆ. ಒಟ್ಟಾರೆ  ಎಲ್ಲಾ ರಂಗಗಳಲ್ಲಿ ಸಾದನೆ ಮಾಡುತ್ತಾ ಸಂತಸ-ದುಕ್ಕ ಗಳೊಟ್ಟಿಗೆ ಅಂಗವಿಕಲರ ಬದುಕು ಸಾಗಿದೆ ಎಂದಶ್ಟೇ ಹೇಳಬಹುದು.

ಹೆಚ್ಚಿನ ಅರಿವಿಗೆ:
ರಾಜಕೀಯಕ್ಕೆ: http://en.wikipedia.org/wiki/List_of_physically_disabled_politicians
ವಿಜ್ನಾನಕ್ಕೆ: www.reddisability.org/
ಕಟ್ಟಲೆಗೆ: wwwsocialjustice.nic.in/pwdact1995.php

ಎಲ್ಲೆಲ್ಲೂ ಮೂಡ ನಂಬಿಕೆ?!

ಕವಿ/ಲೇಕಕ/ಹಾಡುಗಾರ… ಇವರು ಯಾವುದರ ಸಲುವಾಗಿ ಇದ್ದಾರೆ? ಒಂದು ತಮ್ಮ ಮನಸ್ಸನ್ನು ಆರೋಗ್ಯದಿಂದ ಇಟ್ಟುಕೊಳ್ಳಲಿಕ್ಕೆ. ಮತ್ತೊಂದು ನೊಂದವರನ್ನು/ಸಮಾಜವನ್ನು ಸ್ಪೂರ್ತಿಯಾಗಿಸಲಿಕ್ಕೆ ತಾನೆ?
ಇವರು ಮಾಡಿದ ಕೆಲಸ ಎಲ್ಲರಿಗೂ ಮೆಚ್ಚುಗೆಯಾಗಬೇಕೆಂದೇನು ಇಲ್ಲವಲ್ಲ? ಅಶ್ಟಕ್ಕೂ ಕವಿ/ಲೇಕಕ/ಹಾಡುಗಾರ… ಗಳವರು ಮಾಡಿದ ಪ್ರಯತ್ನಗಳನ್ನು ಆಸ್ವಾದಿಸುವವರಿಗೇನೇ ಬಿಡುವಂತೆ ವಿಜ್ಞಾನಿಗಳು ತಮ್ಮ ಪ್ರಯತ್ನದ ಶ್ರಮದ ಒತ್ತಡದಿಂದ ಹೊರಬರಲು ಕಣ್ಣಿಗೆ ಕಾಣದ ಶಕ್ತಿಯ ಮೊರೆ ಹೋಗುವುದರಲ್ಲಿ ತಪ್ಪು ಇಲ್ಲವೇ ಇಲ್ಲ ಮತ್ತು ಆ ತೆರನ ಪ್ರಯತ್ನದ ಹಿಂದಿನ ನಂಬಿಕೆಯನ್ನು ಮೂಡನಂಬಿಕೆ ಎನ್ನಲಾಗದು. ಒಂದು ವೇಳೆ ಹಾಗೆನ್ನುವವರೇ ಮೂಡರು!
ನೀವು ಶಿಕ್ಶಕರಾಗಿ ಈ ಹಿನ್ನಲೆಯಲ್ಲಿ ಯೋಚಿಸಿ ನೋಡಿ. ನೀವು ತರಗತಿಯಲ್ಲಿ ಪಾಟ ಎಶ್ಟೇ ಉತ್ತಮವಾಗಿ ಮಾಡಿರಬಹುದು. ಆದರೆ, ಈ ನಿಮ್ಮ ಪಾಟ ಎಲ್ಲಾ ವಿದ್ಯಾರ್ತಿಗಳ ಮಾನಸಿಕ ವಾತಾವರಣದಲ್ಲಿ ಸಮವಾಗಿ ಉಳಿದುಕೊಳ್ಳುತ್ತದೆಯೇ? ಅದಾಗ್ಯೂ ನೀವು ಕಾಣದ ಶಕ್ತಿಯನ್ನು ಎಲ್ಲರೂ ತೇರ್ಗಡೆಯಾಗುವಂತೆ ಕೇಳಿಕೊಳ್ಳುವುದಿಲ್ಲವೆ? ತರಗತಿಯಲ್ಲಿನ ವಿದ್ಯಾರ್ತಿಗಳ ಓದಿನ ವೈಕರಿ ಸಮವಾಗಿ ಇರಲಾಗದು ಅಲ್ಲವೆ? ಹಾಗೆಯೇ ವಿಜ್ಞಾನಿಗಳೂ ರೂಪಿಸಿದ ಯಾವುದೇ ತೆರನ ಯಂತ್ರಗಳು ಕೈಕೊಡಬಾರದೂ ಅಂತವೇನೂ ಇಲ್ಲವಲ್ಲ?

ಮಾನವನ ಮಾನಸಿಕ ಸ್ತಿತಿ ಹೇಗಿದೆ ಎಂದರೆ,
ಯುಕ್ತಿ/ಶಕ್ತಿ /ಇವೆರಡರ ಮೂಲಕ
“ಸಮರ್ತನೆಗೊಂದು ಸಮರ್ತನೆ/ ತೆಗಳಿಕೆಗೊಂದು ತೆಗಳಿಕೆ /ಪ್ರೇರಣೆಗೊಂದು ಪ್ರೇರಣೆ ಇವುಗಳಲ್ಲಿ ಪೈಪೋಟಿಗೆ ಇಳಿಯುವುದೇ ಆಗಿದೆ.”
ಈ ನಿಟ್ಟಿನಲ್ಲಿಯೇ ತನ್ನದೇ ಆದ ಅಹಮ್ಗೆ ಮಾನವ ಒತ್ತು ನೀಡುತ್ತಾ ಬೇರೆಯವರನ್ನು ಹತೋಟಿಗೆ/ಮೆಚ್ಚುಗೆಗೆ ಒಳಪಡಿಸಿಕೊಳ್ಳಲು ಹವಣಿಸುತ್ತಾ ಇರುವುದು.

“ಕಾನೂನು ದರ್ಮವಾಗಿ ರಾಜಕೀಯ ಇದರ ಆದ್ಯಾತ್ಮವಾಗಿರಲಿ” ಎಂದುಕೊಂಡಿರುವವರು ಕಾಣುತ್ತಿರುವ ಸಮಾನತೆಯ ಕಲ್ಪನೆಯೇ ಮೂಡನಂಬಿಕೆ ತಾನೆ? ನಿಗಮ..ಆಯೋಗ ಪರಿಶತ್ತು ಹಾಗೂ ಇಲಾಕೆ ಈ ವ್ಯವಸ್ತೆಯಲ್ಲಿ ತಮ್ಮವರ ಪರವಾಗಿ ಲಾಬಿ ಮಾಡುವ ರೂಡಿ ಇದೆ. ಸರ್ಕಾರದ ವ್ಯವಸ್ತೆಯಲ್ಲಿ ಆಡಳಿತವನ್ನು ನಡೆಸಬೇಕಾಗಿರುವುದು ರಾಜಕೀಯ ಪಕ್ಶ ಇದು ಸರಿಯಾಗಿಯೇ ಇದೆ. ಆದರೆ ನಿಗಮ..ಪರಿಶತ್ತು ಈ ವ್ಯವಸ್ತೆಯನ್ನೇ ನೋಡಿ ಎಶ್ಟು ತಪ್ಪುಗಳಿವೆ. ಮೊದಲು ಅಂತಹ ತಪ್ಪುಗಳನ್ನು ಇಲ್ಲವಾಗಿಸಬೇಕಲ್ಲವೆ?
ದರ್ಮವೇನೋ ಮೊದಲು ಅನಕ್ಶರಸ್ತರಿಂದ ಅಕ್ಶರಸ್ತರಿಗೆ ವರ್ಗಾವಣೆಯಾಗಿದೆ. ಇದರಲ್ಲಿ ತಪ್ಪುಗಳು ಇವೆ. ಆದರೆ ಕಾನೂನು ಅಕ್ಶರಸ್ತರಿಂದ ರೂಪಿಸಲ್ಪಟ್ಟು ಅನಕ್ಶರಸ್ತರಿಗೆ ವರ್ಗಾವಣೆಯಾಗಿದೆ. ಲಿಕಿತದಲ್ಲಿದ್ದಾಗ್ಯೂ ಕಾನೂನನ್ನು ತಮ್ಮವರಿಗೆಂದು ತಿರಿಚಿಕೊಳ್ಳುವ ಹಿಂದಿನ ಗುಟ್ಟು ಕ್ಶಮಿಸಲಾರದ ತಪ್ಪು. ಕಾನೂನು ಹಾಗೂ ದರ್ಮಗಳೆರಡೂ ಹತೋಟಿಯ ತಂತ್ರಗಳೆ ತಾನೆ?
CBI ವಿಚರವನ್ನೇ ನೋಡಿ. ಲಿಕಿತದ ಪುರಾವೆ ಇದ್ದಾಗ್ಯೂ ನ್ಯಾಯಾಲಯಗಳು ಎರಡೆರಡು ತೆರನ ತೀರ್ಪನ್ನು ಕೊಡುತ್ತವೆ.
ಹೀಗೇನೆ ದರ್ಮದಲ್ಲೂ ಆಯಾ ಗುಂಪಿನವರಿಗೆ “ಅವರೇ ಹೇಳಿದ್ದು ಅವರಿಗೆ ಸರಿ” ಎನ್ನುವ ಮನಸ್ತಿತಿ ಇದೆ. ಕಾನೂನು ಯಾಕೆ ದೇಶ/ಬಾಶೆ/ವರ್ಗಕ್ಕೆ ಬೇರೆಬೇರೆ ಇದೆ? ಇದರ ರಚನೆಯೂ ಒಂದು ಮಾನಸಿಕ ಸ್ತಿತಿಗನುಗುಣವಾಗಿಯೇ ಇರೋದು ತಾನೆ?
ಗಲ್ಲು ಶಿಕ್ಶೆಗೆ ಸಂಬಂದಪಟ್ಟಂತೆ ಕಾನೂನಿನಲ್ಲಿರುವವರೇ ಬೇರೆಬೇರೆ ನಿಲುವನ್ನು ತಾಳುತ್ತಾರೆ. ಒಂದು ತಪ್ಪು ಆಗಿದೆ ಎಂದ ಮೇಲೆ ಆ ತಪ್ಪನ್ನು ಇಲ್ಲವಾಗಿಸಬೇಕು ಅಲ್ಲವೆ? ಕಂಪ್ಯೂಟರ್ನಲ್ಲಿ ವೈರಸ್ ಇದೆ. ಅದನ್ನು ಡಿಲಿಟ್ ಮಾಡದೆ ಕೇವಲ ಹತೋಟಿ ಮಾಡಿದರೆ ಕಂಪ್ಯೂಟರ್ ಸರಿಯಾಗಿ ಕೆಲಸ ಮಾಡುತ್ತದೆಯೇ?
ಹೀಗೇನೆ, ಸಮಾಜವೆಂಬ ಕಂಪ್ಯೂಟರ್ನಲ್ಲಿ ಡಿಲಿಟ್ ಇರಬೇಕು ಜೊತೆಗೆ ನಿಯಂತ್ರಣವೂ ಇರಬೇಕು.
ಮೂಡನಂಬಿಕೆ ಮತ್ತು ನಂಬಿಕೆಗೆ ಈ ಗಾದೆಮಾತನ್ನು ತುಸು ನೆನಪಿಗೆ ತಂದುಕೊಳ್ಳಿ.
“ಬೆರ್ಕೆ ಸೊಪ್ಪಿನ್ ಸಾರ್ ಚೆಂದ ಬೆರ್ಕೆಗ್ ಹುಟ್ಟಿದ್ ಮಕ್ಳು ಚೆಂದ”
ಇದರಲ್ಲಿ ಎಲ್ಲರೂ
“ಬೆರ್ಕೆ ಸೊಪ್ಪಿನ್ ಸಾರ್ ಚೆಂದ”
ಎಂಬುವುದನ್ನು ಯಾವ ವಾದವಿಲ್ಲದೆ ಒಪ್ಪಿಬಿಡುತ್ತಾರೆ.
ಆದರೆ
“ಬೆರ್ಕೆಗ್ ಹುಟ್ಟಿದ್ ಮಕ್ಳು ಚೆಂದ”
ಎಂಬುವುದನ್ನು ದರ್ಮ ಒಪ್ಪಲಾರದು ಆದರೆ ದರ್ಮದೊಳಗಿರುವ ತೀರಾ ಕಡಿಮೆ ಮಂದಿ ಒಪ್ಪುವರು ಇದ್ದಾರೆ. ಈ ಗಾದೆಯನ್ನು ಒಬ್ಬ ವ್ಯಕ್ತಿ ಆಯಾ ವಯೋಗನುಗುಣವಾಗಿ ಸಮರ್ತನೆ ನೀಡುತ್ತಾನೆ. ಯುವಕರಾದ ನಮ್ಮಂತವರಿಗೆ ಆಶ್ಚರ್ಯ/ಒಪ್ಪಲಾರದ/ೊಪ್ಪುವ/ ನಗೆಯ ಸಾಲು. ಇನ್ನು ಮದುವೆಯಾದವರಿಗೆ ಅನುಮಾನ, ವೃದ್ದರಿಗೆ ಬುದ್ದಿ ಮಾತನ್ನು ಹುಟ್ಟಿಸುವ ಸಾಲು.
ಕಾನೂನಿನಲ್ಲಂತೂ ಗೊಂದಲ. ಒಂದು ದೇಶದಲ್ಲಿ ನಿಯಂತ್ರಣ ಮತ್ತೊಂದರಲ್ಲಿ ವಯಕ್ತಿಕ ನೆಲೆಯದ್ದು ಆಗಿದೆ.
ಗಾದೆ ಮಾತುಗಳಲ್ಲಿ ಈ ಮೇಲೆ ಬರೆದ ಗಾದೆಯನ್ನು ಸಮರ್ತಿಸುವ ಇನ್ನುಳಿದ ಗಾದೆಗಳು ಇವೆ. ಅಂತೆಯೇ ಈ ಗಾದೆಯನ್ನು ನಿಯಂತ್ರಿಸುವ ಗಾದೆ ಮಾತುಗಳೂ ಇವೆ.
ನನ್ನ ಪ್ರಕಾರ ಮೂಡನಂಬಿಕೆ ಎಂದರೆ,
ಪರ ಹಾಗೂ ವಿರೋದದ ನಂಬಿಕೆಗಳ ಸಂಗರ್ಶದಿಂದ ಹುಟ್ಟುವ ವಿಕೋಪದ ವರ್ತನೆಯೇ ‘ಮೂಡನಂಬಿಕೆ’ ಯಾಗಿದೆ.
ಕೊನೆಯದಾಗಿ,
ಒಂದು ದೃಶ್ಟಿಕೋನವನ್ನು ನಂಬುವುದನ್ನೋ/ಪ್ರಶ್ನಿಸುವುದನ್ನೋ ಯಾರು ಮಾಡುತ್ತಿರುತ್ತಾರೋ ಅವರು ಅಶ್ಟೇ ಬೌದ್ದಿಕ ಕುಬ್ಜರಾಗುತ್ತಾರೆ. ಅಂತವರು ಈ ಬೌದ್ದಿಕ ಕುಬ್ಜರಾಗದಿರಲು ಇರುವ ಒಂದೆ ಮಾರ್ಗವೆಂದರೆ
ಎಲ್ಲಾ ತೆರನ ವೈವಿದ್ಯತೆಗೆ ತೆರೆದುಕೊಳ್ಳಬೇಕು ಮತ್ತು ವಿಶಾಲವಾಗಿ ಯೋಚಿಸುವುದನ್ನು ಮಾಡಬೇಕು. ಅದಕ್ಕೂ ಮುನ್ನ ಸಮಾನತೆಯ ಕಲ್ಪನೆಯನ್ನು ಬಿಟ್ಟು ಅಸಮಾನತೆಯ ನಿಯಂತ್ರಣಕ್ಕೆ ಪ್ರಯತ್ನಿಸುವ ಆಲೋಚನೆಯನ್ನು ಮಾಡಬೇಕು.
‘ಸಮಾನತೆ’ ಇದು ಪರಿಪೂರ್ಣದ ಸಂಕೇತ. ಆದರೆ ಪ್ರಕೃತಿ ನಿರ್ಮಿತದಲ್ಲಿ ಸಮಾನತೆಯೇ ಇಲ್ಲ. ಮಾನವ ಈ ಪ್ರಕೃತಿಯ ಅಸಮಾನತೆಯನ್ನು ತನ್ನ ಜಾಣ್ಮೆಯಿಂದ ಇಲ್ಲವಾಗಿಸಲು ಯತ್ನಿಸುತ್ತಿದ್ದಾಗ್ಯೂ ಪ್ರಾಕೃತಿಕ ಕಾರಣಗಳಿಂದಾಗ್ಇ ಸಮಾನತೆಯನ್ನು ಗಳಿಸಲು ಆಗುತ್ತಿದೆಯೇ?
ಇನ್ನು ಮಾನವನೇ ಒಂದು ವಿಚಿತ್ರ. ಮನಸ್ಸಿಗೆ ಚಿತ್ರಿಸಿಕೊಂಡದ್ದನ್ನು ಬೇರೆಯವರ ಮೇಲೆ ಗೀಚುವ ಹಂಬಲದವನೂ. ಇಂತಹ ಮನಸ್ತಿತಿಯ ಮನುಶ್ಯನಿಂದ ಸಮಾನತೆಯನ್ನು ಗಳಿಸಲು ಆಗುವುದೇ?

ಗೊಂದಲನ ಸೋಂಕು


ಗೊಂದಲ ಹುಟ್ಟಿದ ಬಳಿಕ ತಂದೆ ತಾಯಿಗಳೊಡನೆ ತನ್ನ ಅಮ್ಮನ ತವರಿನಿಂದ ತಂದೆಯ ತವರಿಗೆ ಬರುವಾಗ ದೋಣಿಯ ಮೂಲಕ ಬರಬೇಕಾಗಿತ್ತು. ಅಂತೆಯೇ ಆ ದಿನ ಈ ಮೂವರು ಇತರೆ ಜನರೊಡನೆ ದೋಣಿ ಮೂಲಕ ಬರುವಾಗ ಪ್ರವಾಹದಲ್ಲಿ ಕೊಚ್ಚಿ ಹೋದರು. ಗೊಂದಲ ತಂದೆ-ತಾಯಿಗಳಿಲ್ಲದ ಮಗುವಾದ. ತಂದೆ ತಾಯಿ ಸತ್ತರೆಂದು ಭಾವಿಸದಿರಿ. ದೋಣಿ ನೀರಿನಲ್ಲಿ ಮುಳುಗಿದಾಗ ತಾತ್ಕಾಲಿಕವಾಗಿ ಮೂವರೂ ಎರಡು ದಿಕ್ಕಾದರು. ಈ ಗೊಂದಲನ ಸ್ವಭಾವವೇ ಬೇರೆಯವರನ್ನು ಗೊಂದಲಕ್ಕೆ ಈಡು ಮಾಡುವುದು. ಆದಿನ ಅಂಬಿಗನನ್ನೂ ಸಹ ಗೊಂದಲಕ್ಕೆ ಈಡು ಮಾಡಿ ತಪ್ಪಿಸಬಹುದಾಗಿದ್ದ ಅವಘಡವನ್ನು ಆಗಿಸಿದ. ಗೊಂದಲನ ಹಾಲು ಮತ್ತು ಬಾಳು ಈಗ ಸರ್ಕಾರದ ಶಿಶು ಪಾಲನಾ ಕೇಂದ್ರದ ಹೆಗಲಿಗೆ ಬಿತ್ತು. ಶಿಶು ಪಾಲನಾ ಕೇಂದ್ರದವರೂ ತಮ್ಮ ಅಧೀನಕ್ಕೆ ಗೊಂದಲನನ್ನು ಪಡೆಯುವುದಕ್ಕೂ ಮುನ್ನ ಯಾರಾದರೂ ಗೊಂದಲನನ್ನು ಸಾಕಲು ಬಂದರೆ ಅವರಿಗೆ ಸಂಪೂರ್ಣ ಆರ್ಥಿಕ ನೆರವನ್ನೂ ಹಾಗೂ ಉದ್ಯೋಗವನ್ನೂ ನೀಡುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದರು. ಇಷ್ಟೆಲ್ಲಾ ಪ್ರಯತ್ನ ಕೈಗೂಡದಕ್ಕಾಗಿ ಶಿಶು ಪಾಲನ ಕೇಂದ್ರದವರೇ ಗೊಂದಲನ ಆಸರೆಗೆಂದು ನಿಲ್ಲಬೇಕಾಯಿತು. ಅಂತೂ ಗೊಂದಲನು ಪ್ರಾಥಮಿಕ ಶಿಕ್ಷಣದಿಂದ ಪದವಿಯ ತನಕದ ಶಿಕ್ಷಣವನ್ನು ಸರ್ಕಾರದ ನೆರವಿನಿಂದ ಸರ್ಕಾರಿ ಶಾಲಾ-ಕಾಲೇಜಿನಲ್ಲಿಯೇ ಮುಗಿಸಿದ.

ಎಲ್ಲಾ ಹಂತದ ಶಿಕ್ಷಣದ ಪರೀಕ್ಷೆಗಳಲ್ಲಿ ನೀಡಲಾದ ಪ್ರಶ್ನೆಗಳಿಗೆ ಕೆಲವು ಸಾಲುಗಳಲ್ಲಿ ಉತ್ತರವನ್ನು ಚೆನ್ನಾಗಿ ಬರೆದು ಉಳಿದ ಸಾಲುಗಳಲ್ಲಿ ಬೇಕಾಬಿಟ್ಟಿ ಗೀಚೀಗೀಚೀ ಮೌಲ್ಯಮಾಪಕರನ್ನೇ ಗೊಂದಲಕ್ಕೆ ಈಡು ಮಾಡಿ ಅಂತೂ ತೇರ್ಗಡೆಯಾಗಿದ್ದ ಗೊಂದಲನು ಈಗ ಕೆಲಸಕ್ಕೆ ಗಾಳ ಹಾಕಿದ. ಕೆಲಸವೆಂದರೆ ಕೆಲಸ ಅಮೃತವನ್ನು ಅಮೃತದೊಡನೆ ಕಲಸಿ ತಿನ್ನುವಷ್ಟು ಸಂಬಳ ಸಿಗುವ ಕೆಲಸ ಅವನಿಗೆ ಬೇಕಾಗಿತ್ತು! ಗೊಂದಲ ಯೋಚಿಸಿದ ನ್ಯಾಯದ ಮಾರ್ಗವನ್ನು ತುಳಿಯಲೇ ಅಥವಾ ಅವನ ವಿರೋಧಿಯ ಪಥ ಒಳ್ಳೆಯದೆ ಎಂದು. ಏನೂ ತಿಳಿಯದೆ ಗಾಳಿಯ ಗಾಲಿಯಲ್ಲವೆ ನಾನು? ಗಾಳಿ ಬೀಸಿದಂತೆ ತಿರುಗುವುದೇ ಸರಿ ಎಂದು ಭಾವಿಸಿದನು. ಆಗಷ್ಟೆ ರಾಜ್ಯದ ಪ್ರಥಮ ಶ್ರೇಣಿಯ ಹುದ್ದೆಗಳಿಗೆ ಅರ್ಜಿಯನ್ನು ಹಾಕುವ ಅವಕಾಶವೂ ಇದ್ದುದ್ದರ ಜೊತೆಗೆ ಬಹು ಚರ್ಚಿತ ವಿಷಯವೂ ಆಗಿದ್ದರಿಂದ ಓಹ್! ನಾನೂ ಯಾವುದಾದರೊಂದು ಇಲಾಖೆಯ ಪ್ರಥಮ ಶ್ರೇಣಿಯ ಹುದ್ದೆಗೆ ಸೇರಲೇ ಬೇಕೆಂದು ತಾನೂ ಸಹ ಅರ್ಜಿಯನ್ನು ಹಾಕಿಯೇ ಬಿಟ್ಟ. ಪ್ರಥಮ ಶ್ರೇಣಿಯ ಹುದ್ದೆಗಳಿಗೆ ಸಂಬಂಧಿಸಿದಂತೆ ಎಲ್ಲಾ ಹಂತಗಳ ಪರೀಕ್ಷೆಗಳಲ್ಲಿಯೂ ಈ ಹಿಂದಿನ ಶಾಲಾ-ಕಾಲೇಜುಗಳ ಪರೀಕ್ಷೆಗಳಲ್ಲಿ ಉತ್ತರಗಳನ್ನು ಬರೆಯಲು ಅನುಸರಿಸುತ್ತಿದ್ದ ವಿಧಾನವನ್ನೇ ಅನುಸರಿಸಿ ಅಂತೂ ಇಲ್ಲಿಯೂ ತೇರ್ಗಡೆಯಾದ! ಸದರಿ ಪರಿಕ್ಷೆಗಳನ್ನು ನಡೆಸುತ್ತಿದ್ದ ಆಯೋಗವು ಪರೀಕ್ಷೆಗಳಲ್ಲಿ ನೀಡಲಾದ ಪ್ರಶ್ನೆಗಳಿಗೆ ಎರಡೆರಡು ಸಲ key answer ಗಳನ್ನು ಅಂತರ್ಜಾಲದ ಮೂಲಕ ಹಾಕುತ್ತಿದ್ದದ್ದು ಗೊಂದಲನ ಹಾಗೂ ಸೋಂಬೇರಿ ಎಂಬಾತನ ಪ್ರಭಾವದಿಂದಲೆ!

ಸಂದರ್ಶನದಲ್ಲೂ ಅವರಿವರಿಂದ ರಾಜಕೀಯ ಮತ್ತು ಹಣದ ಸಹಾಯ ಪಡೆದು ಸ್ವಲ್ಪ ಬುದ್ಧಿ ಬಳಸಿ ಗೆದ್ದ ಗೊಂದಲನಿಗೆ ಈಗ ಎಲ್ಲಿಲ್ಲದ ಸಂತೋಷ! ಆದರೆ, ಕೆಲವರು ತಮಗೆ ಪರೀಕ್ಷೆಯಲ್ಲಿ ಮತ್ತು ಸಂದರ್ಶನದಲ್ಲಿ ಅನ್ಯಾಯವಾಗಿದೆ ಎಂದು ನ್ಯಾಯಾಲಯದ ಮೊರೆ ಹೋಗಿದ್ದರು. ಇದರ ಫಲ ಹಗರಣಗಳು ಹೊರಬರಲು ಸಾಧ್ಯವಾಯಿತು. ಗೊಂದಲನ ಉತ್ತರ ಪತ್ರಿಕೆಗಳೂ ಸಹ ತನಿಖೆಗೆ ಒಳಪಡುವ ಸಾಧ್ಯತೆ ಇದ್ದರಿಂದ ಗೊಂದಲ ಕೊಂಚ ಬುದ್ಧಿ ಬಳಸಿ ತನ್ನ ಉತ್ತರ ಪತ್ರಿಕೆಗಳನ್ನು ಹೇಗೋ ಬೇರೆಯವರ ನೆರವಿನಿಂದ ಸರಿಪಡಿಸಿದ. ತನಿಖೆಯಲ್ಲಿ ಈತನೂ ಸಹ ತಪ್ಪು ಮಾಡಿರುವುದು ಬೆಳಕಿಗೆ ಬಂದಿತು. ಆದರೆ ಪ್ರಭಾವ ಬಳಸಿ ಸರ್ಕಾರದ ಒಂದು ಇಲಾಖೆಯ ಕಾರ್ಯದರ್ಶಿಯಾದ.

ಈತ ಒತ್ತಡ ಮತ್ತು ವಂಚನೆ ಈ ಈರ್ವರ ನೆರವಿನಿಂದ ಸಿದ್ಧಪಡಿಸುತ್ತಿದ್ದ ಕಡತಗಳೂ ಮತ್ತು ಪತ್ರಗಳೂ ಯಾರಿಗೂ ಅರ್ಥವಾಗದಾಗ ಸರ್ಕಾರವೇ ಈತನನ್ನು ಮಾತ್ರ ಹುದ್ದೆಯಿಂದ ಕೇವಲ ಐದೇ ವರ್ಷಗಳಲ್ಲಿ ತೆಗೆದು ಹಾಕಿತು. ಗೊಂದಲ ಹುದ್ದೆಯಲ್ಲಿ ಮುಂದುವರಿಯಲು ಯಾವ ಪ್ರಯತ್ನವನ್ನು ಮಾಡಲು ಸಾಧ್ಯವಾಗಲಿಲ್ಲ. ಇದಕ್ಕೆ ಕಾರಣ ರಾಜಕೀಯದ ಪ್ರಭಾವ ಗೊಂದಲನಿಗಿಲ್ಲದೇ ಇದ್ದದ್ದು.

ತಾನು ಸುಮ್ಮನಿರಲು ಸಾಧ್ಯವಿಲ್ಲ. ಈ ಮುಂಚೆಯೋ ಹೊಟ್ಟೆಗೆ ಮತ್ತು ಬಟ್ಟೆಗೆ ಸರ್ಕಾರವೇ ನೆರವಾಗುತ್ತಿತ್ತು. ಖಾಸಗಿ ಕ್ಷೇತ್ರಕ್ಕೆ ಹೋಗಿಬಿಟ್ಟರೆ ಉತ್ತಮ ಎಂದುಕೊಂಡವನೆ ಒಳ್ಳೆಯ ಕಂಪನಿಯಲ್ಲಿ ನೌಕರನಾದ. ಇಲ್ಲಿಯೂ ಗೊಂದಲನು ತನ್ನ ಹಿಂದಿನ ಸ್ನೇಹಿತರನ್ನು ಭೇಟಿ ಮಾಡಬೇಕಾಯಿತು. ಇವರಿಬ್ಬರೂ ತಮ್ಮ ಸ್ಥಾನಕ್ಕೆ ಬೇರೆ ಪಕ್ಷದ ಬೆಂಬಲವುಳ್ಳ ತಮ್ಮಂತಿರುವ ಬೇರೆಯವರು ಬಂದಿದ್ದಾರೆಂದು ಗೊಂದಲನಿಗೆ ಹೇಳಿದರು. ‘ಹಾಗಾದರೆ, ನಾನಿದ್ದ ಸ್ಥಾನಕ್ಕೆ’-ಗೊಂದಲನು ಎಂದಾಗ ಒತ್ತಡನು ‘ಅವನೂ ನಿನ್ನಂತೆಯೇ ಇದ್ದಾನೆ’ -ಎಂದು ಮೂವರು ಕುಶಲೋಪರಿಗಳನ್ನು ವಿನಿಮಯಿಸಿಕೊಂಡು ತಮ್ಮ ತಮ್ಮ ಕಾರ್ಯಗಳಲ್ಲಿ ತೊಡಗಿದರು.

ಕಂಪನಿಯವರಿಗೆ ತಡವಾಗಿ ಗೊಂದಲನ ಕಾರ್ಯಗಳು ಕಂಪನಿಯ ಅಸ್ತಿತ್ವಕ್ಕೆ ಧಕ್ಕೆಯಾಗುತ್ತಿದ್ದನ್ನು ತಿಳಿದು ಗೊಂದಲನನ್ನು ಹೊರಹಾಕಲು ಕೆಲವು ಮಂದಿಗಳು ಪ್ರಯತ್ನವನ್ನು ಮಾಡಿದರು. ಈ ಕಂಪನಿಯಲ್ಲಿನ ಕೆಲವು ಮಂದಿಗಳ  ಪ್ರಯತ್ನದ ಫಲವಾಗಿ ಎಚ್ಚರನ ಬಟ್ಟೆಯನ್ನು ಧರಿಸಿದರೆ ಗೊಂದಲನ ಕಾಟದಿಂದ ತಪ್ಪಿಸಿಕೊಳ್ಳಬಹುದೆಂದು ಸಂಶೋಧನೆಯ ಮೂಲಕ ಎಲ್ಲರಿಗೂ ತಿಳಿಯಿತು. ಕಂಪನಿಯವರು ಈ ಎಚ್ಚರನ ಬಟ್ಟೆಯನ್ನು ಧರಿಸಿಯೇ ಗೊಂದಲನನ್ನು ಮತ್ತು ಅವನ ಸ್ನೇಹಿತರಿಬ್ಬರನ್ನು ಹೊರಹಾಕಿದರು. ಕಂಪನಿಯಿಂದ ಹೊರಬಿದ್ದ ತಕ್ಷಣ ಗೊಂದಲ ತನ್ನ ಇಬ್ಬರ ಸ್ನೇಹಿತರನ್ನು ಬಿಟ್ಟು ಭಿಕ್ಷೆ ಬೇಡಿ ಜೀವನವನ್ನು ಸಾಗಿಸ ತೊಡಗಿದ.

ಒಂದು ದಿನ ಗೊಂದಲನಿಗೆ ಭಿಕ್ಷೆ ಬೇಡಿದರೂ ಏನೂ ಧಕ್ಕಲೇ ಇಲ್ಲ. ಆಗ ಕಳುವು ಮಾಡಿಯಾದರೂ ಬದುಕಲೇಬೇಕು ಎಂದು ಕಳ್ಳತನಕ್ಕೆ ಇಳಿದ. ಪೋಲಿಸರಿಗೂ ಹಿಡಿಯಲು ಅಸಾಧ್ಯವಾಗುತ್ತಿತ್ತು. ಪೋಲಿಸರು ಎಚ್ಚರ ಹಾಗೂ ಪ್ರಜ್ಞೆ ಎಂಬಿಬ್ಬರ ಸಹಾಯದಿಂದ ಗೊಂದಲನನ್ನು ಬಂಧಿಸಿದರು. ಗೊಂದಲ ಕೆಲವು ವರ್ಷಗಳ ಕಾಲ ಶಿಕ್ಷೆಯನ್ನು ಅನುಭವಿಸಿ ಜೈಲಿನಿಂದ ಹೊರಬಂದು ಜಗತ್ತಿನಲ್ಲಿ ಅಸ್ತಿತ್ವದಲ್ಲಿರುವ ಕೆಟ್ಟ ಮತ್ತು ಒಳ್ಳೆಯ ಅಂಶಗಳುಳ್ಳ ಎಲ್ಲಾ ರೀತಿಯ ಕ್ಷೇತ್ರಗಳಲ್ಲೂ ತನ್ನಂತಿರುವವರು ಇದ್ದಾರೆಂದೂ, ಇಲ್ಲಿ ತನ್ನ ತಾಯಿ-ತಂದೆ ಸಿಗಲಾರರೆಂದು ಮನವರಿಕೆ ಮಾಡಿಕೊಂಡು ಎಲ್ಲಾ ಕ್ಷೇತ್ರಗಳಿಗಿಂತ ಉತ್ತಮವಾದ ಮತ್ತು ಎಲ್ಲರಿಗೂ ಅಹಾರವನ್ನು ಒದಗಿಸುವ ಕ್ಷೇತ್ರವಾದ ಬೇಸಾಯ ಕ್ಷೇತ್ರಕ್ಕೆ ಹೋಗಿ ಬೇಸಾಯ ಮಾಡಿದರೆ ತನ್ನ ತಂದೆ-ತಾಯಿಯನ್ನು ಕಾಣಲು ಸಾಧ್ಯವಾಗಬಹುದೆಂದು ಯಾವುದೋ ಹಳ್ಳಿಗೆ ತೆರಳಿ ಅಲ್ಲಿಯೇ ಬೇಸಾಯ ಮಾಡುವುದನ್ನು ಕಲಿತು ಕೃಷಿಕನಾದ. ಈಗ ಗೊಂದಲನ ಆಟಾಟೋಪಗಳು ಕಡಿಮೆಯಾಗಿದ್ದವು. ಇದರ ಜೊತೆಗೆ ತನ್ನ ತಾಯಿ-ತಂದೆ ಸಿಗುವ ಸುಳಿವೂ ಸಹ ಮನಸ್ಸಿನಲ್ಲಿ ಆಗಾಗ ಮೂಡುತ್ತಿತ್ತು.

ಒಂದು ಸಂಜೆ ಗೊಂದಲನು ಉಳುಮೆ ಮಾಡಿ ತೋಟದಿಂದ ಮನೆಗೆ ಬಂದವನೆ ನೇಗಿಲನ್ನು ಮೂಲೆಯಲ್ಲಿಟ್ಟು ನೆಲದ ಮೇಲೆ ಕಣ್ಣೀರನ್ನು ಸುರಿಸುತ್ತಾ ಮಲಗಿ ತನ್ನ ತಂದೆ-ತಾಯಿ ಮತ್ತು ಈ ಹಿಂದಿನ ತನ್ನ ಕಾರ್ಯಗಳೆಲ್ಲವನ್ನು ನೆನೆದು ನೆನೆದೂ ತನ್ನ ಕಣ್ಣೀರಿನಿಂದಲೇ ಒದ್ದೆಯಾದ. ಈ ಹೊತ್ತಿಗೆ ಸಮಾಧಾನನು ಗೊಂದಲನ ಮನೆಗೆ ಬಂದು ಪ್ರಜ್ಞನ ತಪಸ್ಸನ್ನು ಮಾಡುವಂತೆ ತನಗೆ ತೋಚಿದ ಪರಿಹಾರಗಳನ್ನು ಹೇಳಿ ಹೋಗಿದ್ದ. ಸಮಧಾನನ ಮಾತನ್ನು ಕೇಳಿ ಗೊಂದಲನು ತುಸು ನಿರಾಳನಾಗಿಯೇ ಬಾಗಿಲನ್ನು ಹಾಕಿಕೊಂಡು ಊಟವನ್ನು ಮಾಡದೆಯೇ ‘ನ್ಯಾಯದ ಪಥನೋ?, ಅನ್ಯಾಯದ ಪಥನೋ? ಮತ್ತು ಒಳ್ಳೆಯ ಪಥ ಯಾವುದೋ?’ ಎಂದು ಯೋಚನೆಗಳನ್ನು ಮನಸ್ಸಿಗೆ ಹತ್ತಿಸಿಕೊಂಡು ಮಲಗಿ ನಿದ್ದೆಗೆ ಜಾರಿದ.

ಅನ್ಯಾಯನು ರಭಸದಲ್ಲಿ ಬಂದು ಬಾಗಿಲನ್ನು ಬಡಿದು ಗೊಂದಲನನ್ನು ನಿದ್ದೆಯಿಂದ ಎಬ್ಬಿಸಿ ‘ನೀನು ನನ್ನ ಪಥದಲ್ಲಿ ನಡೆಯುವುದೇ ಉತ್ತಮ. ಈ ಜಗತ್ತಿನಲ್ಲಿ ನನ್ನ ಅನುಯಾಯಿಗಳೇ ಬಹು ಸಂಖ್ಯಾತರಿದ್ದಾರೆ. ನಿನಗೆ ಅಗತ್ಯವಾದಾಗ ಅವರು ನಿನ್ನ ನೆರವಿಗೆ ಬರುತ್ತಾರೆ’-ಎಂದು ತನ್ನ ತೆಕ್ಕೆಯಲ್ಲಿ ಗೊಂದಲನನ್ನು ಬಂಧಿಸಿಕೊಳ್ಳಲು ಯತ್ನಿಸುತ್ತಿರುವಾಗಲೇ ಸೌಮ್ಯವಾಗಿ ಗೊಂದಲನ ಮನೆಯೊಳಗೆ ಬಂದು ನ್ಯಾಯನು ಅನ್ಯಾಯನಿಗೆ ಕೈಮುಗಿದು ‘ದಯವಿಟ್ಟು ಬಿಡಿ. ಅವರ ಪಾಡಿಗೆ ಇರಲು ಬಿಡಿ.’-ಎನ್ನುತ್ತಲೇ ಗೊಂದಲನಿಗೆ ‘ದಯವಿಟ್ಟು ಅನ್ಯಾಯನನ್ನು ನಂಬಬೇಡಿ ನೀವು ನೀವಾಗಿ ಯಾರಿಗೂ ತೊಂದರೆಯನ್ನು ನೀಡದೆ ಬದುಕಬೇಕೆಂದರೆ ನನ್ನ ಪಥಕ್ಕೆ ಬನ್ನಿ. ಇಲ್ಲಿ ಎಲ್ಲರಿಗೂ ಗೌರವವಿರುತ್ತದೆ. ಎಲ್ಲರ ನಡುವೆಯೂ ಹೊಂದಾಣಿಕೆ ಇರುತ್ತದೆ. ಈ ಅನ್ಯಾಯನ ಪಥ ಕೇವಲ ಕಿತ್ತು ತಿನ್ನುವ ಪಥ’-ಎಂದು ತನ್ನ ಮಾತನ್ನು ನಿಲ್ಲಿಸಿದನು. ಆಗ ಅನ್ಯಾಯನು ನ್ಯಾಯನ ಕಪಾಳಕ್ಕೆ ಹೊಡೆಯುತ್ತಾನೆ. ನ್ಯಾಯನು ಪ್ರಶಾಂತದಲ್ಲಿ ‘ನಿಮಗೆ ಹಿಂಸೆ ಇಷ್ಟವಾದರೆ ಅವನನ್ನು ಈಗಲೇ ಅಪ್ಪಿಕೊಳ್ಳಿ. ನಿಮಗೆ ತಾಯಿತಂದೆ ಬೇಕಿದ್ದರೆ ಈ ನಿಮ್ಮ ಮನೆಯನ್ನು ಅನ್ಯಾಯನಿಗೆ ಬರೆದುಕೊಟ್ಟು ನನ್ನೊಂದಿಗೆ ಬನ್ನಿ. ಖಂಡಿತವಾಗಿಯೂ ನಿಮ್ಮ ತಾಯಿತಂದೆ ಸಿಗುತ್ತಾರೆ.’-ಎಂದು ಗೊಂದಲನಿಗೆ ಭರವಸೆಗಳನ್ನು ತುಂಬುತ್ತಾನೆ. ವಾಸ್ತವದ ಮತ್ತು ಭಾವನಾತ್ಮಕ ಅಂಶಗಳನ್ನು ಗೊಂದಲನಿಗೆ ಮನವರಿಕೆ ಮಾಡಿಕೊಟ್ಟ ನ್ಯಾಯನನ್ನು ಕೊಲ್ಲಲು ಅನ್ಯಾಯನು ಮುಂದಾಗುತ್ತಾನೆ. ಇದೇ ಸಮಯಕ್ಕೆ ವಿವೇಕನು ಗೊಂದಲನ ಮನೆಗೆ ಬಂದು ಅನ್ಯಾಯನು ನಿಶ್ಚಯಿಸಿಕೊಂಡಿದ್ದ ಕೃತ್ಯವನ್ನು ತಡೆಗಟ್ಟುತ್ತಾನೆ. ವಿವೇಕನು ನ್ಯಾಯನಿಗೂ ಹಾಗೂ ಅನ್ಯಾಯನಿಗೂ ತಮ್ಮ ತಮ್ಮ ಬೆಂಬಲಿಗರನ್ನು ಕರೆತರುವಂತೆ ತಿಳಿಸುತ್ತಾನೆ. ತಾನೆ ಗೆಲ್ಲುವುದಾಗಿ ಭಾವಿಸಿ ದಡದಡನೆ ಅನ್ಯಾಯನು ತನ್ನ ಬೆಂಬಲಿಗರನ್ನು ಕರೆದು ನ್ಯಾಯನನ್ನು ಹಂಗಿಸುತ್ತಾನೆ. ನ್ಯಾಯನು ತನ್ನ ಪರವಾಗಿ ಧರ್ಮ ಮಾತ್ರ ಇರುವುದಾಗಿ ತಿಳಿಸುತ್ತಾನೆ. ವಿವೇಕನು ಗೊಂದಲನಿಗೆ ‘ಯಾರ ಪಥದಲ್ಲಿ ನಡೆಯಬೇಕೆಂದು ಈಗ ಎಲ್ಲರ ಮುಂದೆ ತಿಳಿಸಿ’-ಎಂದು ವಿನಂತಿಸಿಕೊಳ್ಳುತ್ತಾನೆ. ಗೊಂದಲನು ‘ಬಹುಸಂಖ್ಯೆಯಲ್ಲಿರುವ ಅನ್ಯಾಯನ ಪಥದಲ್ಲಿ ಇನ್ನುಮುಂದೆ ನನ್ನ ಪಯಣ’-ಎಂದು ತನ್ನ ತಲೆ ಮೇಲೆ ಪಕ್ಕದಲ್ಲಿದ್ದ ಕಲ್ಲನ್ನು ಎತ್ತಿ ಹಾಕಿಕೊಳ್ಳುತ್ತಾನೆ. ಅನ್ಯಾಯನು ‘ನೀನು ನಿನ್ನ ಮೇಲೆ ಕಲ್ಲನ್ನು ಹಾಕಿಕೊಳ್ಳುವುದಲ್ಲ ನನ್ನ ಪಥ. ನೀನು ಚೆನ್ನಾಗಿರಲು ಬೇರೆಯವರ ಮೇಲೆ ಕಲ್ಲನ್ನು ಹಾಕಬೇಕು’-ಎಂದನು. ನ್ಯಾಯನು ‘ಈಗಾಗಲೆ ಜೈವಿಕವಾಗಿ, ನೈತಿಕವಾಗಿ ಮತ್ತು ಸಾಮಾಜಿಕವಾಗಿ ಅನ್ಯಾಯನ ಅಚ್ಚೆ ಬಹಳ ಇದೆ. ಇಂದು ನನ್ನ ಪಥದವರನ್ನು ಹುಡುಕುವುದು ಮರಳ ರಾಶಿಯಲ್ಲಿ ಸಾಸಿವೆಯ ಕಾಳೊಂದನ್ನು ಬಿಸಾಕಿ ಮತ್ತೆ ಅದನ್ನು ಹುಡುಕಿದಂತೆ ಆಗಿಬಿಟ್ಟಿದೆ. ದಯವಿಟ್ಟು ಸುಸ್ಥಿರದ ಬದುಕಿಗೆ ಅನುವಾಗುವಂತೆ ಒಂದು ವ್ಯವಸ್ಥೆಯನ್ನು ಕಲ್ಪಿಸು’-ಎಂದು ವಿವೇಕನನ್ನು ಪರಿಪರಿಯಾಗಿ ಕೇಳಿಕೊಳ್ಳುತ್ತಾನೆ. ವಿವೇಕನು ಅನ್ಯಾಯನಿಗೂ ತಿಳಿಯದ ಹಾಗೆ ನ್ಯಾಯನ ಕಿವಿಯಲ್ಲಿ ‘ನಿನ್ನ ಅಸ್ತಿತ್ವವೇ ನನ್ನ ಅಸ್ತಿತ್ವ’-ಎಂದು ಹೇಳಿ, ಗೊಂದಲನಿಗೆ ‘ನೀನು ಈ ಇಬ್ಬರ ಮಾರ್ಗವನ್ನು ಬಿಟ್ಟು ಎಚ್ಚರನ ಬಟ್ಟೆಯನ್ನು ಧರಿಸಿ ಪ್ರಜ್ಞನ ತಪಸ್ಸು ಮಾಡಿ ಅವನು ತೋರಿಸಿದ ಪಥದಲ್ಲಿ ನಡೆ.’-ಎಂದು ತಿಳಿಸಿ ನ್ಯಾಯನ ಜೊತೆಗೆ ಹೋದನು. ಅನ್ಯಾಯನು ತನ್ನ ತೆಕ್ಕೆಗೆ ಬರಲು ಗೊಂದಲನನ್ನು ಪೀಡಿಸುತ್ತಾನೆ. ಆದರೆ ಗೊಂದಲ ಈತನ ಸಂಗಡ ಸೇರದೆ ವಿವೇಕನು ಹೇಳಿದಂತೆಯೇ ಅನುಸರಿಸುವುದಾಗಿ ಹೇಳುತ್ತಾನೆ. ಅನ್ಯಾಯನು ‘ಈಗ ನಾನು ಸೋತಿದ್ದೇನೆ. ಆದರೆ ಮುಂದೆ ನಿನ್ನನ್ನು ನಾನು ಬಂಧಿಸುತ್ತೇನೆ’-ಎಂದು ಶಪಥ ಮಾಡಿ ಬೆಂಬಲಿಗರೊಡನೆ ಮರೆಯಾಗುತ್ತಾನೆ.

ವಿವೇಕನು ಹೇಳಿದಂತೆ ಗೊಂದಲನು ಅನುಸರಿಸಿದ. ಇದರ ಫಲವಾಗಿ ಪ್ರಜ್ಞನು ಗೊಂದಲನ ಮನೆಗೆ ಬಂದು ‘ಮೊದಲು ಈ ಮನೆಯನ್ನು ಬಿಟ್ಟು ನೈತಿಕನ ಮನೆಗೆ ಹೋಗು. ಬಳಿಕ ನಿನ್ನ ತಂದೆ-ತಾಯಿ ತಾವಾಗಿಯೇ ಬರುವರು. ಅವರು ಹೇಳಿದ ಹೆಸರನ್ನಿಟ್ಟುಕೊಂಡು ಸೂಚಿಸಿದ ಹುಡುಗಿಯೊಂದಿಗೆ ಮದುವೆಯಾಗು. ಎಚ್ಚರನ ಬಟ್ಟೆಯನ್ನು ಸದಾ ಧರಿಸಿಯೇ ಇರು. ಕಾನೂನಿನ ಮನೆಗೂ ಆಗಾಗ್ಗೆ ಹೋಗಿ ಬಾ. ಆದರೆ ಅಲ್ಲಿಯೇ ಉಳಿಯದಿರು. ನೈತಿಕನ ಮನೆಯೇ ಕಾನೂನಿನ ಮನೆಗಿಂತ ಉತ್ತಮ ಮತ್ತು ಸತ್ವಯುತವಾದದ್ದು. ಅದು ಹೇಗೆ ನಿನ್ನ ಬಳಿ ಅನ್ಯಾಯನೂ ಮತ್ತು ಅವನ ಬೆಂಬಲಿಗರು ಬರುತ್ತಾರೆ ನೋಡಿಯೇ ಬಿಡೋಣ’ ಎಂದು ತನಗೆ ತೋಚಿದ್ದನ್ನು ಹೇಳಿ ಪ್ರಜ್ಞ ಹೊರಟು ಹೋದ.

ಪ್ರಜ್ಞನು ಹೇಳಿದ್ದ ಎಲ್ಲವನ್ನು ಚಾಚೂ ತಪ್ಪದೆ ಪಾಲಿಸಿದ್ದಕ್ಕಾಗಿ ಗೊಂದಲನ ತಾಯಿಯಾದ ನೆಮ್ಮದಿ ಮತ್ತು ತಂದೆಯಾದ ಸಂತೋಷ ಬಂದರು. ಇಷ್ಟು ದಿನ ತಾವು ಪ್ರಜ್ಞನ ಆಸರೆಯಲ್ಲಿದ್ದೇವೆಂದು ಮಗನಿಗೆ ತಿಳಿಸಿ ಘಟನೆಯನ್ನು ನೆನೆದು ಮೂವರು ಅತ್ತು ಬೆಸೆದುಕೊಂಡರು. ಈ ಮೂವರು ಮಾತನಾಡಿಕೊಳ್ಳುತ್ತಿರುವಾಗ ಸಮಾಧಾನನು ಬಂದು ಎಲ್ಲರನ್ನು ಆಶೀರ್ವಾದಿಸಿ ಹೊರಟು ಹೋದ. ಕೆಲವು ದಿನಗಳ ಬಳಿಕ ತಂದೆ-ತಾಯಿ ಸೂಚಿಸಿದ ಸಂತೃಪ್ತಿ ಎಂಬ ಹೆಸರನ್ನಿಟ್ಟುಕೊಂಡು ಶ್ವೇತ ಎಂಬ ಹುಡುಗಿಯನ್ನು ಮದುವೆಯಾಗಿ ಸುಖ ಜೀವನವನ್ನು ಈತ ನಡೆಸಿದನು.

ಶ್ವೇತ ತುಂಬಾ ಪಾರದರ್ಶಕವಾಗಿ ಎಲ್ಲವನ್ನು ಎಲ್ಲರಿಗೂ ತಿಳಿಸುವ ಜಾಣ್ಮೆಯ ಹುಡುಗಿ. ಇರುವುದನ್ನು ಇದ್ದ ಹಾಗೆ ಹೇಳುವ ಧೈರ್ಯ ಅವಳಿಗಿತ್ತು. ಗಂಡ ದುರಾಸೆಯ ಬಳಿ ಹೋಗಲು ಆಸಕ್ತನಾಗಿರುವುದಾಗಿ ತನ್ನ ಮಾವ ಮತ್ತು ಅತ್ತೆಗೆ ಒಂದು ದಿನ ಹೇಳಿದಳು. ‘ಈಗ ಕಾಯ್ದು ನೋಡುವ ತಂತ್ರವನ್ನು ಅನುಸರಿಸೋಣ. ಒಂದು ವೇಳೆ ಆತನೇ ನಮ್ಮನ್ನು ನಿರ್ಲಕ್ಷಿಸಲು ಆರಂಭಿಸಿದರೆ ಮೂವರು ಹೊರಡೋಣ’-ಎಂದು ಮಾವ ಹೇಳಿದಾಗ ಅವಳೂ ಮತ್ತು ಅತ್ತೆಯು ಒಪ್ಪಿದರು.

 ಕೆಲವು ವರ್ಷಗಳಾದ ಬಳಿಕ ದುರಾಸೆ ಎಂಬುವನ ಮಾತನ್ನು ಕೇಳಿ ಸಂತೃಪ್ತಿ ಹೆಸರು ಸರಿಯಾಗಿಲ್ಲವೆಂದು ಗೊಂದಲನು ತನ್ನನ್ನು ನಿಜವಾದ ಹೆಸರಿನಿಂದಲೇ ಕರೆಯುವಂತೆ ಸುತ್ತಲಿನವರಿಗೆ ಆಗ್ರಹಪಡಿಸುತ್ತಾನೆ. ತಾಯಿ-ತಂದೆ ಮತ್ತು ಹೆಂಡತಿಯನ್ನು ನಿರ್ಲಕ್ಷಿಸಲು ಗೊಂದಲನು ಆರಂಭಿಸುತ್ತಾನೆ. ಇದೂ ಅಲ್ಲದೆ ಎಚ್ಚರನ ಬಟ್ಟೆಯನ್ನು ಹರಿದು ಬೂದಿ ಮಾಡುತ್ತಾನೆ. ಇದನ್ನರಿತ ತಂದೆ-ತಾಯಿ ಮತ್ತು ಹೆಂಡತಿ ಈತನನ್ನು ಬಿಟ್ಟು ಪ್ರಜ್ಞನ ಮನೆಗೆ ಹೋಗುತ್ತಾರೆ. ನೈತಿಕನು ಆಶ್ರಯ ನೀಡಿದ್ದಕ್ಕಾಗಿ ಮರುಗುತ್ತಾನೆ. ಗೊಂದಲ ನೈತಿಕನು ಕೂಡ ನನ್ನ ವಶವಾಗಿದ್ದಾನೆ. ಇನ್ನು ಕಾನೂನನ್ನು  ಕೂಡ ನಾನು ವಶಪಡಿಸಿಕೊಂಡುಬಿಟ್ಟರೆ ಜಗತ್ತಿನಲ್ಲಿ ಎಲ್ಲರು ನನ್ನವರೇ ಆಗುತ್ತಾರೆಂದುಕೊಂಡು ಕಾನೂನಿನ ಮನೆಗೂ ಹೋಗಿ ಕೆಲವು ಕಾಲ ಅಲ್ಲಿಯೇ ಇದ್ದು ಅಲ್ಲಿನ ಮಂದಿಗಳನ್ನು ಮನವಲಿಸಿ ತನ್ನ ವಶಕ್ಕೆ ಒಳಪಡಿಸಿಕೊಂಡು ಕಾನೂನನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತಾನೆ. ದುರಾಸೆ ಗೊಂದಲನಿಗೆ ತುಂಬಾ ಆಪ್ತನಾಗುವುದಶ್ಟೇ ಅಲ್ಲದೆ, ಗೊಂದಲನ ಸೋಂಕಿನ ಜೊತೆ ತನ್ನ ಸೋಂಕನ್ನು ಬೆರೆಸಿಬಿಡುತ್ತಾನೆ..

ಮತ್ತೆ ಅನ್ಯಾಯನು ಬಂದು ‘ನನ್ನ ಶಪಥ ಕೈಗೂಡಿತು. ದುರಾಸೆ ನನ್ನ ಬೆಂಬಲಿಗ’-ಎಂದು ತನ್ನ ಬೆಂಬಲಿಗರಿಗೆ ಗೊಂದಲನ ಆಸ್ತಿಯನ್ನು ಹಂಚಿಕೊಳ್ಳಲು ಆಜ್ಞೆ ಮಾಡುತ್ತಾನೆ.

ಎಲ್ಲರು ತನ್ನ ಆಸ್ತಿಗಾಗಿ ಹೊಡೆದಾಟ ಆರಂಭಿಸಿದ್ದನ್ನು ಕಂಡು ಗೊಂದಲನಿಗೆ ಸಾವು ಹತ್ತಿರವಾಗುತ್ತದೆ. ಕೊನೆಗಾಲದಲ್ಲೂ ಎಲ್ಲರನ್ನು ಇಕ್ಕಟ್ಟಿಗೆ ಸಿಲುಕಿಸಿಯೇ ಸಾವಿಗೆ ಶರಣಾಗಲು ತಂತ್ರವನ್ನು ಹೆಣೆಯುತ್ತಾನೆ. ಅನ್ಯಾಯನು ಗೊಂದಲನಿಗೆ ‘ಏನೋ ಸಾಯುವ ಹೊತ್ತೆಂದು ಭಯ ಅಲ್ಲವೆ ನಿನಗೆ?’ ಎಂದು ಗರ್ಜಿಸುತ್ತಾನೆ. ಮನನೊಂದ ಗೊಂದಲನು ಸ್ವತಃ ಬೆಂಕಿ ಹಚ್ಚಿಕೊಂಡು ‘ಗಾಳಿಯ ಗಾಲಿ ನಾನು; ಗಾಳಿ ಬೀಸಿದಂತೆ ತಿರುಗುವುದೇ ಸರಿ’-ಎಂದು ಅನ್ಯಾಯನ ಮತ್ತು ಅನ್ಯಾಯನ ಬೆಂಬಲಿಗರ ಸುತ್ತ ಗಾಲಿಯಾಗಿ ಗಾಳಿ ಬೀಸಿದಂತೆ ತಿರುಗುವಾಗ, ವಿವೇಕನು ಮತ್ತು ನ್ಯಾಯನು ಬೆಂಬಲಿಗರೊಡನೆ ಕಟ್ಟೆಚ್ಚರನ ಬಟ್ಟೆ ಧರಿಸಿ ಬರುತ್ತಾರೆ. ಗೊಂದಲನು ಎಷ್ಟೇ ನ್ಯಾಯನ ಹಾಗೂ ವಿವೇಕನ ಸುತ್ತ ಸುತ್ತಲು ಪ್ರಯತ್ನಿಸಿದರೂ ಅವರನ್ನು ಸ್ಪರ್ಶಿಸಲು ಸಾಧ್ಯವಾಗಲಿಲ್ಲ. ಆದರೆ, ಇನ್ನೇನು ಗೊಂದಲನು ಬೂದಿಯಾಗಿಬಿಡುವ ಎಂದು ಬಿಸಿಯ ಝಳಕ್ಕೆ ಬೆವತು ಹೋಗಿದ್ದ ನ್ಯಾಯನು ತಾಳ್ಮೆಯನ್ನು ಕಳೆದುಕೊಂಡು ಕಟ್ಟೆಚ್ಚರನ ಬಟ್ಟೆಯನ್ನು ತೆಗೆದುಬಿಡುತ್ತಾನೆ. ಈ ಸುಳಿವನ್ನರಿತ ಗೊಂದಲನು ನ್ಯಾಯನ ದೇಹವನ್ನು ಸ್ಪರ್ಶಿಸಿಯೇ ಸಾಯುತ್ತಾನೆ. ಕೊನೆ ಪಕ್ಷ ಅನ್ಯಾಯನನ್ನು ನ್ಯಾಯನ ಹತ್ತಿರ ಬಿಡಬಾರದೆಂದು ವಿವೇಕನೇ ಕಟ್ಟೆಚ್ಚರನ ಬಟ್ಟೆಯನ್ನು ಜರೂರಾಗಿ ಧರಿಸುವಂತೆ ಹೇಳುತ್ತಾನೆ. ಅಂತೆಯೇ ನ್ಯಾಯನು ಕಟ್ಟೆಚ್ಚರನ ಬಟ್ಟೆಯನ್ನು ಧರಿಸುತ್ತಾನೆ.

ನ್ಯಾಯನು ಬೇಸರದಿಂದ ‘ನಾನೂ ಸಹ ಗೊಂದಲನ ನೆರಳಿನಲ್ಲಿರಬೇಕಾಯಿತಲ್ಲವೆ?’-ಎಂದು ವಿವೇಕನನ್ನು ಕೇಳುತ್ತಾನೆ. ವಿವೇಕನು ‘ನನ್ನನ್ನು ಮತ್ತು ಪ್ರಜ್ಞನನ್ನು ಬಿಟ್ಟು ಎಲ್ಲರೂ ಸಹ ಈ ಗೊಂದಲನಂತೆ ಗಾಲಿಯಾಗಿದ್ದೀರಿ. ಗಾಳಿ ಬೀಸಿದಂತೆ ತಿರುಗುತ್ತಾ ಇದ್ದೀರಿ’-ಎಂದು ನ್ಯಾಯನಿಗೆ ಹೇಳಿ ನ್ಯಾಯ ಮತ್ತು ಅನ್ಯಾಯರ ನಡುವೆ ಸಣ್ಣನೆಯ ಅನಂತವಾದ ರಂಧ್ರವನ್ನು ಕೊರೆದು ‘ನೀನು ನನ್ನ ಆಪ್ತ ನಿನ್ನನ್ನು ಯಾರು ತಪಸ್ಸು ಮಾಡಿ ನಿನ್ನ ಕೃಪೆಗೆ ಒಳಗಾಗುವರೋ ಅವರಿಗೆ ಮಾತ್ರ ನಾನು ಸಿಗುತ್ತೇನೆ’-ಎಂದು ಪ್ರಜ್ಞನಿಗೆ ರಂಧ್ರದ ಬಳಿ ವಾಸಿಸಲು ಹೇಳಿದನು. ಪ್ರಜ್ಞನೂ ಸಹ ಒಪ್ಪಿದ. ‘ನಮ್ಮಿಬ್ಬರ ನಡುವೆ ನೀನು?’-ಎಂದು ಅನ್ಯಾಯನು ಕೇಳಿದಾಗ ವಿವೇಕನು ‘ಸಮಾಜದ ಅಸ್ತಿತ್ವದ ದೃಷ್ಟಿಯಿಂದ ನನ್ನ ಅವಶ್ಯಕತೆ ಇದೆ. ಜೊತೆಗೆ ನೀವು ಗೊಂದಲನ ಸೋಂಕಿಗೆ ಒಳಪಟ್ಟಿರುವಿರಿ. ನೀವಿಬ್ಬರು ವಿರುದ್ಧಿಗಳು; ವಿರುದ್ಧ ಮುಖಿಯಾಗಿ ಚಕ್ರೀಯವಾಗಿ ಚಲಿಸಲು ಹೋಗಿ’-ಎಂದು ಇಬ್ಬರಿಗೂ ತಿಳಿಸಿ ರಂಧ್ರದ ಒಳಕ್ಕೆ ಹೋದನು. ಪ್ರಜ್ನನು ರಂಧ್ರದ ಬಳಿ ಅಮೂರ್ತವಾಗಿ ಆದರೆ ಸೂಕ್ಷ್ಮವಾಗಿ ನೋಡುವವರಿಗೆ ದೊಡ್ಡ ಹಣತೆಯಂತೆ ರೂಪತಳೆದು ನಿಂತನು. ನ್ಯಾಯ ಮತ್ತು ಅನ್ಯಾಯರು ವಿವೇಕನ ಮಾತನ್ನು ಒಪ್ಪಿ ಕಾಲನ ಲೋಕದಲ್ಲಿ ವಿರುದ್ಧ ಮುಖಿಯಾಗಿ ಚಕ್ರದಂತೆ ತಿರುಗಲು ಆರಂಭಿಸಿದರು.

ರಾಜಕೀಯ ರಂಗಕ್ಕೆ ಚದುರಂಗ


ಚದುರಂಗ ನಮ್ಮ ದೇಶದ ಅಪ್ಪಟ ಆಟ. ಅಂತೆಯೆ, ಅರಸರುಗಳಿಗೆ ಅಚ್ಚುಮೆಚ್ಚಿನ ಆಟ. ಅರಸರಿಗೆ ಚದುರಂಗ ಮಾತ್ರ ಅಚ್ಚುಮೆಚ್ಚು ಅಂತ ಹೇಳಬಹುದು. ಪಗಡೆ? ಅಂತ ನಿಮ್ಮ ಮನಸ್ಸಿನಲ್ಲಿ ಕೇಳ್ವಿ ಇದೆ ಅಲ್ಲವೆ? ಊಊಊ! ಕಂಡಿತವಾಗ್ಯೂ ಸರಿ. ಅದೂ ಇದೆ. ತಮ್ಮ ನಾಡಿನ ಬವಿಶ್ಯವನ್ನು ಊಹಿಸಲು ರೂಪಿಸಿಕೊಂಡ ಆಟವಶ್ಟೇ ಪಗಡೆ. ಚದುರಂಗ ಯುದ್ದಗಳಲ್ಲಿ ಜಯ/ಅಪಜಯಗಳನ್ನು ಗುರುತಿಸಿಕೊಳ್ಳಲು ಒಂದು ಎಚ್ಚರಿಕೆಯ ಯೋಜನೆಗೆ ನೆರವಾಗುವ ಒಂದು ಆಟ. ಅದಕ್ಕಾಗಿಯೇ ಈ ಆಟವನ್ನು ಅರಸರು, ಮಂತ್ರಿಗಳು ಹಾಗೂ ಪಡೆಗಳ ಮುಂದಾಳುಗಳು ಆಡುತ್ತಿದ್ದದ್ದು.

ಈಗ ಯಾಕೆ ಇದನ್ನು ಈತ ಎಲ್ಲರಿಗೂ ತಿಳಿದಿರುವುದನ್ನು ಹೇಳುತ್ತಿದ್ದಾನೆ ? ಅಂತ ಯೋಚನೆ ಹತ್ತಿವೆಯೇ? ಚದುರಂಗದ ನಿಯಮಗಳನ್ನು ಬರೆಯದೆ ಚದುರಂಗವನ್ನು ರಾಜಕೀಯ ರಂಗಕ್ಕೆ ಬಳಸಬಹುದೆಂದು ನಾನು ನಿಮಗೆ ತಿಳಿಸಲು ಬಯಸಿದ್ದೇನೆ. ಅದರ ಬಗ್ಗೆ ಈ ಕೆಳಗೆ ಬರೆದಿದ್ದೇನೆ.

ಸಮವಾಗಿ ಕಪ್ಪು ಹಾಗೂ ಬಿಳಿಯ ಚವ್ಕಗಳಿಂದ ಕೂಡಿದ ೮*೮ ರ ಮಣೆಯಲ್ಲಿ ಆನೆಗಳು-೪, ಕುದುರೆಗಳು-೪, ಒಂಟೆಗಳು-೪, ಮಂತ್ರಿಗಳು-೨, ರಾಜರು-೨ ಹಾಗೂ ಸಯ್ನಿಕರು-೧೬. ಒಟ್ಟು ೩೨ ದಾಳಗಳು ಬೇಕಾಗಿದ್ದು ಅವುಗಳಲ್ಲಿ ಕಪ್ಪು ಹಾಗೂ ಬಿಳಿ ದಾಳಗಳು ೧೬ ಬೇಕಾಗುತ್ತವೆ. ಎರಡು ಪಡೆಗಳು ಕಾದಾಡುವ ಹಾಗೆ ಇಬ್ಬರು ಆಳುಗಳು ಈ ಮಣೆಯಲ್ಲಿನ ದಾಳಗಳನ್ನು ಅನುಕ್ರಮವಾಗಿ ಜೋಡಿಸಿಕೊಂಡು ಆಡಬೇಕು. ಇದು ಚದುರಂಗದ ಆಟಕ್ಕೆ ಮೊದಮೊದಲಿಗೆ ಬೇಕಾಗುವ ವಸ್ತುಗಳು. ಈ ಆಟದಲ್ಲಿ ಬಳಸುವ ದಾಳಗಳ ಬದಲಾಗಿ ಮನುಶ್ಯರೇ ಸಯ್ನಿಕ, ಕುದುರೆ, ಆನೆ, ಒಂಟೆ, ಗಳಾಗಿರಬೇಕು. ಮಂತ್ರಿ ಹಾಗೂ ಅರಸರುಗಳ ಪಾತ್ರವನ್ನು ರಾಜಕೀಯ ಪಕ್ಶಗಳಲ್ಲಿ ನಾಯಕರಾಗುವವರು ನಿರ‍್ವಹಿಸಬೇಕು. ಈ ಈರ್ವರೇ ಉಳಿದ ದಾಳಗಳನ್ನು ನಡೆಸಬೇಕು.

ಚದುರಂಗವನ್ನು ತಮ್ಮ ಪಕ್ಶಕ್ಕೆ ನೆರವಾಳುಗಳನ್ನು ಹೆಚ್ಚಿಸಿಕೊಳ್ಳುವುದಕ್ಕೆ/ಪ್ರಚಾರಕ್ಕೆ ಬಳಸಿಕೊಳ್ಳಬಹುದು. ಈ ಆಟವನ್ನು ಅವರು ಬಳಸಿಕೊಳ್ಳುವುದಾದರೆ ಮಡಿ-ಮಯ್ಲಿಗೆಯನ್ನು ಇಲ್ಲವಾಗಿಸಿಕೊಳ್ಳಬೇಕು. ಗೊಡ್ಡು ನೀತಿಗಳನ್ನು ಹೊಂದದೆ ನಾಡ ಒಳಿತಿಗೆ ಕಾರಣಿಗಳಾಗುವ ಮನಸ್ಸು ಮಾಡಬೇಕು. ಹಿಂಸೆಯ ದೋರಣೆಗಳನ್ನು ಬಿಟ್ಟು ಬಿಡಬೇಕು. ಬಳಿಕ ಈ ಕೆಳಗಿನ ಹೆಜ್ಜೆಗಳನ್ನು ಅನುಸರಿಸಬೇಕು.

ಆಟಕ್ಕೂ ಮುನ್ನ:
೧. ಪಕ್ಶದಲ್ಲಿ ನಾಯಕನಾಗಲು ಆಸಕ್ತರಾಗುವಂತಹ ಆಳುಗಳನ್ನು ಆ ಪಕ್ಶದವರು ಗುರುತಿಸಿಕೊಳ್ಳಬೇಕು.
೨. ಯಾರು ಹೆಚ್ಚು ತುಳಿತಕ್ಕೆ ಒಳಗಾದವರನ್ನು ಗುರುತಿಸಿ ಅವರಿಗೆ ಚದುರಂಗವನ್ನು ಕಲಿಸುತ್ತಾರೋ ಮತ್ತು ಗೆಲ್ಲುತ್ತಾರೋ ಅವರೇ ನಾಯಕನೆಂದು ಸದರಿ ಪಕ್ಶದವರು ಗೋಶಿಸಬೇಕು.
೩. ಗುರುತಿಸಿದ ಆಳುಗಳಿಗೆ ದರ‍್ಮ/ಜಾತಿಗಳ ಬೇದವಿಲ್ಲದೆ ಎಲ್ಲಾ ವಯಸ್ಸಿನ ಹೆಣ್ಣು ಗಂಡುಗಳನ್ನು ಆಟಕ್ಕೆ ಹೊಂಚಿಕೊಳ್ಳುವಂತೆ ಸೂಚಿಸಬೇಕು.
೪. ಹೊಂಚಿಕೊಂಡ ಬಳಿಕ ಅವರಿಗೆ ಚದುರಂಗ ಆಟದ ಬಗ್ಗೆ ತಿಳಿಸಬೇಕು.

ಆಟವಾಡುವಾಗ:
೧. ಎತ್ತರದ ನೆಲದಲ್ಲೇ ಚದುರಂಗದ ಅಂಗಣವನ್ನು ಸಜ್ಜುಗೊಳಿಸಿದ ಬಳಿಕ ಆಟವನ್ನು ನೋಡುವವರಿಗೆ ಇಂತಿಶ್ಟು ಹಣವನ್ನು ನಿಗದಿಪಡಿಸಿ ಜನರನ್ನು ಸೇರಿಸಿ ಹಣವನ್ನು ಕೂಡಿಸಿಕೊಳ್ಳಬೇಕು.
ಆಟದ ಮೊದಲಿಗೆ ಎನ್.ಸಿ.ಸಿ ಹಾಗೂ ಸಯ್ನಿಕರು ಬಳಸುವಂತಹ ವಾದ್ಯಗಳನ್ನು ಬಾರಿಸುತ್ತಾ/ನುಡಿಸುತ್ತಾ ನಾಡ ಹಾಡನ್ನು ಆಡಬೇಕು ಮತ್ತು ನೆಲದವ್ವಳಿಗೆ ವಂದಿಸಬೇಕು.
೨. ಸಯ್ನಿಕರು, ಅರಸರು ಮತ್ತು ಮಂತ್ರಿಗಳನ್ನು ಬಿಂಬಿಸುವಂತಹ ಟೋಪಿಗಳನ್ನು ಹಾಕಿಕೊಳ್ಳುವುದರ ಜೊತೆಗೆ ಕುದುರೆ, ಆನೆ, ಒಂಟೆ ಇವುಗಳ ಬದಲಿಗೆ ಈಗ ಯುದ್ದಗಳಲ್ಲಿ ಬಳಕೆಯಾಗುತ್ತಿರುವ ವಸ್ತುಗಳನ್ನು ಬಿಂಬಿಸುವ ಟೋಪಿಗಳನ್ನು ಹಾಕಿಕೊಳ್ಳಲು ಆಟಕ್ಕೆ ದಾಳವಾದವರಿಗೆ ಹೇಳಬೇಕು.
೩. ದಾಳವನ್ನು ಕಳೆದುಕೊಂಡ ಗುಂಪು ರೋದಿಸಬೇಕು. ದಾಳವನ್ನು ಉರುಳಿಸಿದ ಗುಂಪು ಸಂತೋಶದಲ್ಲಿ ಬೀಗಬೇಕು. ಮತ್ತು ವಾದ್ಯಗಳು ಬಾವನೆಗೆ ತಕ್ಕಂತೆ ಹಿನ್ನೆಲೆಯಾಗಬೇಕು.
೪. ಗೆದ್ದ ಗುಂಪು ನಗುವಿನಲ್ಲಿಯೂ ಸೋತ ಗುಂಪು ಅಳುಮೋರೆಯಲ್ಲಿಯೂ ಮುಳುಗಬೇಕು. ವಾದ್ಯಗಳು ಬಾವನೆಗೆ ತಕ್ಕಂತೆ ಹಿನ್ನೆಲೆಯಾಗಬೇಕು.
೫. ಗೆದ್ದ ಗುಂಪಿನಲ್ಲಿ ದಾಳವಾಗಿ ಬಳಕೆಯಾದವರಿಗೆ ಹಣದ ನೆರವನ್ನು ನೀಡಬೇಕು.

ಹೀಗೆ ಪಕ್ಶಗಳು ಚದುರಂಗವನ್ನು ತಮ್ಮ ಪ್ರಚಾರಕ್ಕೆ ಬಳಸಿಕೊಳ್ಳಬಹುದು. ಇದು ಕೇವಲ ರಾಜಕೀಯ ಪಕ್ಶಗಳಿಗೇನೆ ಇರುವ ಆಟವಶ್ಟೆ ಎಂದು ಅಂದುಕೊಳ್ಳದಿರಿ. ಈ ಆಟ ಎಲ್ಲಾ ಕ್ಶೇತ್ರಗಳಿಗೂ ಹೊಂದಿಕೆಯಾಗಬಲ್ಲ ಆಟವಾಗಿದೆ. ಕ್ರೀಡಾ ಇಲಾಕೆಯವರು/T.V ಗಳು/ಚೆಸ್ ಕಲಿಸುವ ಕೇಂದ್ರಗಳು ಈ ಆಟವನ್ನು ಮಂದಿ ಮೆಚ್ಚುಗೆಯ ಆಟವಾಗಿಸಬಹುದು. ಚದುರಂಗ ಒಂದು ನಾಡನ್ನು ಕಟ್ಟಲೋಸುಗ ಅರಸರಿಗೆ ಪೂರಕವಾಗಿದ್ದ ಆಟವಾಗಿದ್ದರಿಂದ ಇಂದಿನ ಸನ್ನಿವೇಶಕ್ಕೆ ಈ ಆಟದ ಬಳಕೆಯನ್ನು ಜನಪ್ರೀಯಗೊಳಿಸಲಿಕ್ಕಾಗಿಯಶ್ಟೇ ಈ ಕಲ್ಪನೆಯನ್ನು ಬರೆದಿದ್ದೇನೆ. ನಾಡು ಎಂದ ಮೇಲೆ ರಾಜಕೀಯ ಇದ್ದೇ ಇರುತ್ತಾದ್ದರಿಂದ ರಾಜಕೀಯ ಪಕ್ಶಗಳಲ್ಲಿ ನಾಯಕರಾಗುವವರಿಗೆ ಪ್ರಾಕ್ಟಿಕಲ್ ಟಾಸ್ಕ್ಗೆ ಈ ಆಟವನ್ನು ಬಳಸಿಕೊಳ್ಳುವುದು ಸರಿಯಾಗಿಯೇ ಇದೆ ಎಂದೇ ನನ್ನ ಅನಿಸಿಕೆ.

ಇದರ ಆಶಯ:
ಸವಾಲಿಗೊಂದು ಸವಾಲ್ ಇದ್ದೇ ಇರುತ್ತದೆ. ಅದಕ್ಕಾಗಿಯೇ ಎಲ್ಲರು ಸವಾಲಿಗೆ ತೆರೆದುಕೊಳ್ಳಬೇಕು. ಆಗಲ್ಲ ಎಂದು ಕಯ್ಚೆಲ್ಲುವವರು ಯಾರಿಗೂ ತೊಂದರೆ ನೀಡದೆ ಸವಾಲಿಗೆ ಸವಾಲನ್ನು ಒಡ್ಡುವವರಿಗೆ ದಾರಿ ಬಿಟ್ಟುಕೊಡಬೇಕು.

ಈ ಆಟದಲ್ಲಿ ತಪ್ಪು ಕಂಡಿತವಾಗಿಯೂ ಇಲ್ಲ. ಆದರೆ ರಾಜಕೀಯದವರು ಈ ಆಟವನ್ನು ಈಗ ನಾನು ವಿವರಿಸಿದಂತೆ ಬಳಸಿಕೊಂಡಲ್ಲಿ ತಪ್ಪನ್ನು ಅಂಟಿಸುವ ಸಾದ್ಯತೆ ಇರುತ್ತದೆ. ದಯವಿಟ್ಟು ಈ ಆಟದ ಹುರುಳಿಗೆ ತಪ್ಪನ್ನು ಅಂಟಿಸಬೇಡಿ ಎಂದು ತಮ್ಮಲ್ಲಿ ಮನವಿ.

ಈಗಲಾದರು ಒಗ್ಗೂಡೋಣ


ಬ್ರಿಟೀಶರಿಗೆ ನಮ್ಮ ನಾಡಿನಲ್ಲಿ ಕಾಲು ಊರಲು ಅನುಕೂಲವಾಗಿದ್ದು ನಮ್ನಮ್ಮ ನಡುವೆ ಇದ್ದ ಕಿತ್ತಾಟ.
ಬ್ರಿಟೀಶರಿಗೂ ಮುಂಚೆ ಬಂದವರು ಇಲ್ಲುಳಿಯಲು ಸಾದ್ಯವಾಗಿದ್ದು ನಮ್ನಮ್ಮಲ್ಲಿದ್ದ ಏಕತೆಯ ಕೊರತೆ.
ಈಗ ನಾವು ಅವರುಗಳ ಆಕ್ರಮಣಗಳಿಂದ ಕಲಿತದ್ದು ಏನು?
ಮತ್ತೇ ಅದೆ!
ಕಿತ್ತಾಟ, ಬೈದಾಟ, ಅಹಾ! ಆಟ ಬರೀ ಡೋಂಗಿ ಆಟ!

ಮಾನವನ ಸಮಾಜದಲ್ಲೇಕೆ ಇತರೆ ಪ್ರಾಣಿಗಳಲ್ಲೂ ತನ್ನ ಅಸ್ಮಿತೆಯನ್ನು ಉಳಿಸಿಕೊಳ್ಳುವ ಪದ್ಧತಿಗಳಿವೆ. ಅಂದ ಮೇಲೆ ನಾವು ನಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳಲು ನಡೆಸುತ್ತಿರುವ ಯತ್ನಗಳ ತಪ್ಪಾದರೂ ಏನು?
ಜಾತಿ/ಧರ್ಮಗಳ ಅಸ್ಮಿತೆ? ಚೇಚೇ ಕಂಡಿತ ಅಲ್ಲ!
ನಾಡ ಏಳಿಗೆ, ಏಕತೆಯ ಹೊರತೆ ಇಂತಹ ಅಸ್ಮಿತೆ? ಹೌದು! ಹೌದು.
ಇದಕ್ಕಾಗಿಯಾದರೂ ಬಹಳ ಹತ್ತಿರದ ಸಿದ್ಧಾಂತವನ್ನು ಹೊಂದಿರುವ ರಾಜಕೀಯ ಪಕ್ಶವನ್ನು ಬೆಂಬಲಿಸುವುದರ ಮೂಲಕ ನಮ್ಮೆಲ್ಲರ ಏಕತೆಯನ್ನು ಕಟ್ಟಬೇಕಾಗಿದೆ.

ಎಡ ಪಕ್ಶಗಳು ನಾಯಕ ಗುಣವಿರುವ ವ್ಯಕ್ತಿಗಳನ್ನು ಹೊಮ್ಮಿಸುವುದರಲ್ಲಿ ಸೋತಿವೆ. ಕಾಂಗ್ರೆಸ್ ಕುಟುಂಬ ರಾಜಕಾರಣಕ್ಕಾಗಿ ಪ್ರಜಾಪ್ರಭುತ್ವಕ್ಕೆ ಕುತಂತ್ರಗಳನ್ನು ಅಳವಡಿಸಿಕೊಂಡಿದೆ. ನಮ್ಮ ದೇಶ ಸ್ವತಂತ್ರಗೊಂಡಾಗಿನಿಂದ ಇಶ್ಟೂ ವರ್ಶ ಕಳೆದರೂ ಭಾರತವನ್ನು ಆಂತರಿಕವಾಗಿ ಕಟ್ಟಲು ಆಗಿಯೇ ಇಲ್ಲ.

ಇನ್ನು ಬಾಜಪ ಕುರಿತು ಹೇಳುವುದಾದರೆ ಕೇವಲ ಆದರ್ಶಗಳಿಗೆ ಸೀಮಿತಗೊಂಡಿರುವ ಪಕ್ಶವಾಗಿದೆ. ಭಾರತವನ್ನು ವಿವಿಧ ನೆಲೆಗಳಲ್ಲಿ ಅರಿತುಕೊಳ್ಳದೆ ಒಂದಕ್ಕೇನೆ ಅಂಟುಕೊಂಡು ಇದೆ. ರಾಜ್ಯಗಳಿಗೆ ಸೀಮಿತವಾಗಿರುವ ಪಕ್ಶಗಳಾವು ರಾಶ್ಟ್ರೀಯ ಪ್ರಜ್ಞೆಯಲ್ಲಿ ಒಂದಾಗುವ ಮನಸ್ಸನ್ನು ಮಾಡುತ್ತಿಲ್ಲ. ಹೊಸ ಪಕ್ಶಗಳು ಅಸ್ತಿತ್ವಕ್ಕೆ ಬರುತ್ತಿವೆಯಾದರೂ ಜನರನ್ನು ತಲುಪುವ ತಂತ್ರಗಳ ಕಡೆಗೆ ಗಮನ ನೀಡುತ್ತಿಲ್ಲವೇನೋ ಅನಿಸುತ್ತಿದೆ. ಹೀಗಾಗಿ ಬರಲಿರುವ ಲೋಕಸಭೆಯ ಚುನಾವಣೆಯ ನಿಟ್ಟಿನಲ್ಲಿ ಹೇಳುವುದಾದರೆ,
ಕಾಂಗ್ ಮತ್ತು ಬಾಜಪ ಈ ಎರಡೇ ರಾಶ್ಟ್ರೀಯ ಪಕ್ಶಗಳು ಪ್ರಧಾನಿಗಳಾಗಲು ಅರ್ಹವಿರುವವರೆಂದು ತಮ್ಮತಮ್ಮವರ ತಲೆಯಾಳುಗಳನ್ನು ಗೋಶಿಸಿದ್ದಾರೆ. ಗಟ್ಟಿತನ ಈ ಎರಡೂ ಪಕ್ಶಗಳಲ್ಲಿ ಎಶ್ಟರ ಮಟ್ಟಿಗೆ ಇದೆ ಎಂಬುವುದನ್ನು ಅವಲೋಕಿಸುವ ಮತ್ತು ಯಾರಲ್ಲಿ ಟೊಳ್ಳುತನ ಯತೇಚ್ಚವಾಗಿದೆ ಎಂಬುವುದರ ಕುರಿತು ಆ ಪಕ್ಶಗಳ ವ್ಯಕ್ತಿಗತ ನೆಲೆಗಟ್ಟಿನ ವಿಶ್ಲೇಶಣೆ ಅಗತ್ಯವಿದೆ.

ಬರಲಿರುವ ಚುನಾವಣೆಯಲ್ಲಿ ಬಾಜಪ ಬರುವುದೇ ಒಳಿತು ಎಂದು ನನಗೆ ಅನಿಸಿದೆ. ಇದಕ್ಕೆ ಕಾರಣ ಕಾಂಗ್ ಹಗರಣಗಳನ್ನು ತನ್ನೊಳಗೆ ಬಚ್ಚಿಟ್ಟುಕೊಂಡಿದೆ. ಅವಿತುಕೊಂಡಿರುವ ಹಗರಣಗಳನ್ನು ಹೊರಗೆಡವಲೋಸುಗವಾದರೂ ಬಾಜಪ ಬರಬೇಕು. ಅಂದರೆ ಅದು ಮಾಡಿದ್ದನ್ನು ಇದು ತೊಳೆಯಲಿ ಇದು ಮಾಡಿದ್ದನ್ನು ಅದು ತೊಳೆಯಲಿ ಎನ್ನುವ ಹಂಬಲವಶ್ಟೆ. ಲೋಕ್ಸತ್ತಾ ಹಾಗೂ ಆಮ್ ಆದ್ಮಿ ಯನ್ನು ಬೆಂಬಲಿಸೋಣವೆಂದರೆ ಅವರು ಎಲ್ಲಾ ಲೋಕಸಭಾ ಕ್ಶೇತ್ರಗಳಲ್ಲಿ ತಮ್ಮವರ ವ್ಯಕ್ತಿಗಳನ್ನು ನಿಲ್ಲಿಸುವುದಿಲ್ಲ. ಇದರಿಂದ ಲೋಕಸಭೆಯಲ್ಲಿ ಮತ್ತೆ ಅದೇ ಬೆರಕೆ ಆಗುತ್ತದೆ. ಒಂದು ವೇಳೆ ಬಾಜಪ ಬಂತು ಎಂದುಕೊಳ್ಳಿ; ಜನರ ಒಳಿತಿಗೆ ಯೋಜನೆಗಳು ರೂಪುಗೊಳ್ಳದ ಪಕ್ಶದಲ್ಲಿ ನಮಗಿರುವ ಅವಕಾಶಗಳನ್ನು ಬಳಸಿಕೊಂಡು ಆಂದೋಲನ ಮಾಡಬಹುದು. ಪ್ರಾಣ ಹಿಂಸೆಯನ್ನು ಬಾಜಪ, ಕಾಂಗ್ ಎರಡೂ ಮಾಡಿವೆ. ಕಾಂಗ್ ಇದರಲ್ಲಿ ಬಲೂ ಮೇಲು!

ಇಂದು ಕಮ್ಯೂನಿಸ್ಟ್ರು ಬಾಜಪ ದವರನ್ನು ಪ್ರಾಣ ಹಿಂಸೆಗೆನೇ ಸೀಮಿತಗೊಂಡು ಪದೇಪದೇ ಬರಹ, ಮಾತು ಹಾಗೂ ನಡತೆಗಳ ರೂಪದಲ್ಲಿ ವಾಚಾನುಗೋಚರವಾಗಿ ದಾಳಿ ಮಾಡುತ್ತಿವೆ. ಆದರೆ ಅವರು ನಂಬಿರುವ ಕಮ್ಯುನಿಸ್ಟ್ ಕೂಡ ಹಿಂಸಾತ್ಮಕ ಪಂಥಕ್ಕೆ ಸೇರಿದ್ದೂ ಎನ್ನುವಂತದ್ದನ್ನು ಮರೆತಿದ್ದಾರೆ. ಪ್ರತಿಯೊಂದು ಪಕ್ಶಗಳು ಎಡವಿದಾಗಲು ೧೦೦ ರಲ್ಲಿ ೧೦ರಶ್ಟಾದರನ್ನೂ ಏಳುವಿಕೆಗೆಗಾದರೂ ಶ್ರಮ ಹಾಕುತ್ತವೆ. ಹೀಗಾಗಿ ಆಳುವ ಪಕ್ಶ ವಿರೋಧ ಪಕ್ಶವಾಗಬೇಕು. ಅಂತೆಯೆ ವಿರೋಧ ಪಕ್ಶ ಆಳುವ ಪಕ್ಶವಾಗಲೇ ಬೇಕು. ಇಲ್ಲವಾದರೆ ಅದು ಪ್ರಜಾಪ್ರಭುತ್ವದ ಚೌಕಟ್ಟನ್ನು ಸೀಮಿತವಾಗಿಸುತ್ತದೆ. ಆಳುವ ಪಕ್ಶ ಆಳುತ್ತಾ ಇದ್ದರೆ ಸರ್ವಾಧಿಕಾರಿತ್ವದ ಮನೋಭಾವ ಜನರಿಗೆ ತಿಳಿಯದೆನೇ ಹಂತಹಂತವಾಗಿ ಪ್ರಜಾಪ್ರಭುತ್ವವನ್ನು ಆವರಿಸುತ್ತದೆ. ಆಗ ಪ್ರಜಾಪ್ರಭುತ್ವದಲ್ಲಿನ ವಿಕೇಂದ್ರೀತ ಅಧಿಕಾರವು ಕುಟುಂಬಪ್ರಭುಗಳ ತೆಕ್ಕೆಗೆ ಸೇರುತ್ತದೆ. ಹೀಗೆ ಆಗದಿರಲು ಪ್ರಜಾಪ್ರಭುತ್ವದ ಕಾಳಜಿ ಪ್ರಕಟವಾಗುವ ಅವಕಾಶ ಇನ್ನೇನು ಕೆಲವೇ ತಿಂಗಳಲ್ಲಿ ಮತ್ತೆ ದೊರೆಯಲಿದೆ. ದೊರೆತ ಈ ಅವಕಾಶವನ್ನು ಕುಟುಂಬ ಕೇಂದ್ರಿತ ಅಧಿಕಾರವನ್ನು ಬೆಂಬಲಿಸದಿರಲು ಮನಸ್ಸು ಮಾಡಬೇಕಾಗಿದೆ. ಚುನಾವಣೆಗೆ ನಿಂತ ಎಲ್ಲರನ್ನು ತಿರಸ್ಕರಿಸುವ ಅವಕಾಶವೂ ಜನಸ್ನೇಹಿಯಾಗಲಿದೆ. ಅದರ ಬಳಕೆಯಿಂದ ಲಂಚಿಗಳನ್ನು ಹಾಗೂ ಬ್ರಶ್ಟಿಗಳನ್ನು ಆಯ್ಕೆ ಮಾಡದಿರೋಣ.

ದೇಶದ ಭದ್ರತೆಯ ವಿಚಾರದಲ್ಲಿ ಹೇಳುವುದಾದರೆ ಕಾಂಗ್ಗಿಂತ ಬಾಜಪವೇ ಒಳಿತು. ಈ ಹಿಂದಿನ ಗಂಡಾಂತರಗಳನ್ನು ಅವಲೋಕಿಸಿದರೆ ನಿಮಗೆ ತಿಳಿಯುತ್ತದೆ. ಇಂದು ಸೈನಿಕರು ಬಳಸುವ ಯಂತ್ರಗಳ ವಲಯ ವಿದೇಶಿಮಯವಾಗಿದೆ. ಒಂದು ವೇಳೆ ಆಪತ್ತು ಬಂದರೆ ವಿದೇಶವನ್ನೇ ಅವಲಂಭಿಸಬೇಕಾಗುತ್ತದೆ. ಅವಲಂಬಿತ ದೇಶಗಳು ನಮ್ಮ ಆಪತ್ತಿಗೆ ಒದಗದೇ ಇದ್ದಲ್ಲಿ ನಾವು ಇನ್ನಶ್ಟು ಗುಲಾಮಿಗೆ ಒಳಗಾಗುತ್ತೇವೆ.

ಕಾಂಗ್ ಭಾರತೀಯರ ಪ್ರತಿಭೆಗಳನ್ನು ಸರಿಯಾಗಿ ಗುರುತಿಸಲು ಪ್ರಯತ್ನಿಸಿಯೇ ಇಲ್ಲ. ಉದ್ಯೋಗದ ಸ್ರುಶ್ಟಿಯಲ್ಲಿ ಸೋತಿರುವುದೇ ಇದಕ್ಕೆ ಎತ್ತುಗೆಯಾಗಿದೆ.

ಗಾಂಧೀಜಿಯವರು ಸಾರಾಯಿಯ ವಿರೋಧಿ ಅಂತ ತಿಳಿದಿದ್ದರೂ ಕಾಂಗ್ ಅದರ ನಿಶೇಧಕ್ಕೆ ಬೆಂಬಲವಿರಲಿ ಕೊಂಚವೂ ಯತ್ನಿಸಿಯೇ ಇಲ್ಲ. ಅಂದಮೇಲೆ ಅದನ್ನು ಗಾಂಧೀಜಿ ಸಿದ್ಧಾಂತಗಳ ಪಕ್ಶ ಅಂತ ಅನ್ನುವುದಕ್ಕಿಂತ ಕೇವಲ ತೋರಿಕೆಗೆ ಇರುವ ಪಕ್ಶ ಎಂದರೆ ತಪ್ಪು ಆಗಲಾರದು ಅಲ್ಲವೆ?

ಇತ್ತೀಚೆಗಶ್ಟೆ ಮಂಡ್ಯಾದಲ್ಲಿ ಸೋನಿಯಾ ಬಂದು ಹೋಗುತ್ತಿದ್ದಂತೆ ಕಾಂಗ್ ಕರೆತಂದಿದ್ದ ಮಂದಿಗಳು ಸಾರಾಯಿ ಅಂಗಡಿಗೆ ಮುಗಿಬಿದ್ದು ಸಾರಾಯಿಯನ್ನು ಕೊಂಡು ಕುಡಿದ ಸಂಗತಿ ಎಲ್ಲರಿಗು ತಿಳಿದಿರಬಹುದು. ಸಮಾವೇಶಕ್ಕೆ ಮಂದಿಗಳನ್ನು ಸೆಳೆದುಕೊಳ್ಳಲು ಸಾರಾಯಿಯನ್ನೇ ಸೆಳೆದ್ರವವಾಗಿಸಿಕೊಂಡಿರುವ ಪರಿಯನ್ನ! ಬೇರೆ ಪಕ್ಶಗಳು ಸಾರಾಯಿಯನ್ನು ನೀಡುವುದಿಲ್ಲವೆಂದಲ್ಲ. ಕಾಂಗ್ ಗಾಂಧೀಜಿ ಸಿದ್ಧಾಂತವನ್ನು ಹೊಂದಿರುವ ಪಕ್ಶವೆಂದು ಗುರುತಿಸಿಕೊಂಡಿದೆಯಲ್ಲ ಅದಕ್ಕೇನೆ ಅಶ್ಟೆ!

ಇನ್ನು ಸ್ವಿಸ್ ಬ್ಯಾಂಕ್ ವಿಚಾರದ ಬಗ್ಗೆ ಹೇಳುವುದಾದರೆ ಕಾಂಗ್ ಪ್ರಯತ್ನವನ್ನು ಮಾಡಿಯೇ ಇಲ್ಲವೆನ್ನಬಹುದು. ಆದರೆ ಬಾಜಪ ಈ ವಿಚಾರದಲ್ಲಿ ಕೊಂಚವಾದರೂ ಪ್ರಯತ್ನಗಳನ್ನು ಮಾಡುವ ಭರವಸೆ ಹೊಮ್ಮಿಸಿದೆ. ನಾವು ಪರೋಕ್ಶ ಸಾಲದಿಂದ ಮುಕ್ತರಾದರೆ ಒಂದಶ್ಟು ದಿನಗಳ ಕಾಲ ಗುಲಾಮಿತನದಿಂದ ತಪ್ಪಿಸಿಕೊಳ್ಳಬಹುದು. ಆದರೆ ಕಾಂಗ್ ಹಾಗೆ ಹಾಗದಿರಲು ಯತ್ನಿಸುತ್ತಾ ಇದೆ ಎನ್ನಬಹುದು. ಸಾಲಕ್ಕೆ ಕುರಿತಂತೆ ಇವರ ಮನೋಭಾವ ಹೇಗಿದೆ ನೋಡಿ. ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ‘ಅಲ್ಪ ಸಂಖ್ಯಾತರ ಅಭಿವೃದ್ಧಿಗೆ ಸರ್ಕಾರ ನೀಡುವ ಸಾಲವನ್ನು ತೆಗೆದುಕೊಂಡು ಮರುಪಾವತಿ ಮಾಡದಿದ್ದರೂ ಪರವಾಗಿಲ್ಲ’ ಎಂದು ಹೇಳಿದ್ದಾರೆ ಅಂದಮೇಲೆ ಸರ್ಕಾರಕ್ಕೆ ಸಾಲದ ಹೊರೆಯಾದರೆ ಅದು ಒದಗುವ ಗಂಡಾಂತರದ ಸೂಚನೆ ಎಂಬುವುದು ಇವರಿಗೆ ತಿಳಿದಿಲ್ಲವೆ? ಈ ರೀತಿಯ ಮನೋಭಾವ ಉಳ್ಳವರಿಂದ ನಾವು ನಮ್ಮ ದೇಶವನ್ನು ಸಾಲ ನೀಡುವವರಿಗೆ ಅಡವಿಟ್ಟು ಕಳೆದುಕೊಳ್ಳಬೇಕೆ?

ಕಾಂಗ್ ಆಳುವ ಪಕ್ಶವಾಗಿ ಮುಂದುವರಿದರೆ ಗುಲಾಮಿಗಳಾಗುವುದು ಖಂಡಿತ. ಕಾಂಗ್ ಯಾವಾಗಲು ಅಮೇರಿಕಾದ ಕಡೆಗೆನೇ ಮೋರೆ ತಿರುಗಿಸಿರುವ ಪಕ್ಶ. ಎಲ್ಲಿಯ ತನಕ ಎಲ್ಲಾ ಲೋಕಸಭೆಯ ಕ್ಶೇತ್ರಗಳಲ್ಲಿ ಬಾಜಪ ಮತ್ತು ಕಾಂಗ್ಗೆ ಸಾಟಿಯಾಗಿ ನಿಲ್ಲುವ ಹೊಸ ಪಕ್ಶ ಅಸ್ತಿತ್ವಕ್ಕೆ ಬರುವುದಿಲ್ಲವೋ ಅಲ್ಲಿಯ ತನಕ ಬಾಜಪವೇ ಕಾಂಗ್ಗಿಂತ ಉತ್ತಮ. ಬಾಜಪ.ದಲ್ಲಿ ಒಂದೇ ಕೊರತೆ. ಅದೇ ಹಿಂದೂ ಕೇಂದ್ರಿತ ಸಿದ್ಧಾಂತ! ತಪ್ಪು ಖಂಡಿತ ಅಲ್ಲ. ಆದರೆ ಬಹು ವಿಶಿಶ್ಟಗಳ ನಾಡಿನಲ್ಲಿ ಇಂತಹ ಸಿದ್ಧಾಂತ ಯಾವಾಗಲೋ ಅಸ್ತಿತ್ವದಲ್ಲಿದ್ದಿದ್ದರೆ ಇದಕ್ಕೊಂದು ಹುರುಳು ಇರುತ್ತಿತ್ತು. ಇಂದಿಗೆ ಇದು ಹುರುಳಿಲ್ಲವಾಗಿದೆ. ಬಾಜಪ.ದವರು ಈಗಲಾದರು ತಮ್ಮ ಚೌಕಟ್ಟನ್ನು ವಿಸ್ತರಿಸಿಕೊಳ್ಳುವ ಮನಸ್ಸನ್ನು ಮಾಡಬೇಕು. ಅಂತೆಯೆ, ಮಹಿಳೆಯರ ಸಬಲಕ್ಕೆ ಉತ್ತೇಜನಕಾರಿ ಯೋಜನೆಗಳನ್ನೂ ಹಾಗೂ ಅವಕಾಶಗಳನ್ನು ದೊರಕಿಸಬೇಕು.
ಕಾಂಗ್ನಲ್ಲಿ ಬಡವರ, ಎಲ್ಲಾ ವರ್ಗದವರ ಕಾಳಜಿ ಇದೆ. ಒಪ್ಪೋಣ. ಆದರೆ, ಆಬಗೆಗಿನ ಕಾಳಜಿ ಸಕರಾತ್ಮಕವಾಗಿದ್ದಿದ್ದರೆ ನಾವು ಇಶ್ಟು ಪರೋಕ್ಶದ ಸಾಲದ ಗುಲಾಮಿಗಳಾಗುತ್ತಿರಲಿಲ್ಲ. ಅವರಿಗೆ ನಮ್ಮಲ್ಲಿನ ಚಿಂತನೆಗಳಿಗಿಂತ ಬೇರೆ ನಾಡುಗಳ ಚಿಂತನೆಗಳೇ ಸೊಗಸಿನ ದಾರಿಗಳಾಗಿವೆ. ಇದರಿಂದ ನಮ್ಮ ಅಧಿಕಾರಗಳು ಬೇರೆ ನಾಡುಗಳ ನಿಯಂತ್ರಣಕ್ಕೆ ಒಳಪಟ್ಟಿವೆ. ನಮ್ಮ ಯೋಜನೆಗಳನ್ನು ಬೇರೆ ನಾಡುಗಳಿಂದ ಅಣಿಗೊಳಿಸಿಕೊಳ್ಳುವ ಸನ್ನಿವೇಶವನ್ನು ಯಾರು ಉಂಟುಮಾಡಿದರು? ಎಂಬುವುದನ್ನು ನೋಡಿದರೆ ಕಾಂಗ್! ಎನ್ನುವ ಹೆಸರು ಮೊದಲು ಪ್ರಕಟಗೊಳ್ಳುತ್ತದೆ. ಇವೆಲ್ಲವು ಸರಿಯಾಗಬೇಕು. ಹೀಗಾಗಿ ಬದಲಾವಣೆಗೆ ತಾವೆಲ್ಲರು ತೆರೆದುಕೊಳ್ಳುವುದು ಅನಿವಾರ್ಯವೇ ಇದೆ.

ನೊಬೆಲ್ ಪಡೆದವರು ನಮ್ಮ ನಾಡಿಗೆ ಹೊಂದುವ ಆರ್ಥಿಕ ತಳಹದಿಯನ್ನು ಹಾಕದೆ !ಆ ನಾಡನ್ನೆ! ಬೆಂಬಲಿಸಲು ಸೂಚಿಸುತ್ತಾರೆ. ಇಂತವರಿಂದ ದೂರವಿದ್ದು ನಮ್ಮದೂನೂ ಇಂತಹ ಆರ್ಥಿಕ ನೀತಿಯಾಗಿದೆ. ಎಂದು ಧೈರ್ಯ ಮಾಡಿ ಜಗತ್ತಿಗೆ ಹೊಸತನವನ್ನು ತೋರಿಸುವಂತಹ ನಾಯಕನ ಕೊರತೆ ಕಾಂಗ್ನಲ್ಲಿ ಹೇರಳವಾಗಿದೆ. ಬಾಜಪ.ದಲ್ಲಿ ಒಂದಶ್ಟು ನಾಯಕರಿದ್ದಾರೇನೋ ಎನ್ನುವ ಭರವಸೆ ಮೂಡಿದೆ.

ಎಲ್ಲರ ಮನದೊಳಗಿನ ಇಂಗಿತವನ್ನು ಬಲ್ಲವರು ಯಾರು?
ತಿಳಿದಿಲ್ಲ.
ಆದರೆ, ಕಾಂಗ್ ಹೀಗೆಯೇ ಆಳುತ್ತಾ ಇದ್ದಲ್ಲಿ ನಾವು !ಆ ಅ ನಾಡೊಳಗೆ ಇನ್ನಶ್ಟೂ ಸೇರುವುದು ಖಂಡಿತ.
ಬಹುಜನರು ಕಾಂಗ್ ಪಕ್ಶವನ್ನು ಬೆಂಬಲಿಸಿದ ಮೇಲೆ ಬಹುಜನರ ಒಪ್ಪಿಗೆ !ಅ ನಾಡನ್ನು ಸೇರಲು ಬಯಸಿದ್ದಾರೆ ಅಂತ ತಾನೆ?
ಹಾಗೆ ಆಗದಿರಲು ಈಗಲಾದರು ಒಗ್ಗೂಡೋಣ.

ಗ್ರಾಮೀಣ ಪ್ರದೇಶದಲ್ಲಿನ ದಿನಗೂಲಿ ಕೃಷಿ ಕಾರ್ಮಿಕರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಒಂದು ಕಿರು ಅಧ್ಯಯನ


-ಮಲ್ಲಿಕಾರ್ಜುನ, ಸಮಾಜಕಾರ್ಯ ಪ್ರಶಿಕ್ಷಣಾರ್ಥಿ, ಬೆಂಗಳೂರು ವಿಶ್ವವಿದ್ಯಾಲಯ.

ಅಧ್ಯಾಯ - ೧ ಪ್ರಸ್ತಾವನೆ
ಭಾರತದ ಅರ್ಥ ವ್ಯವಸ್ಥೆಯಲ್ಲಿ ಕೃಷಿ ಕಾರ್ಮಿಕರು ಅತ್ಯಧಿಕ ಪ್ರಮಾಣದಲ್ಲಿ ಕಂಡು ಬಂದು ಅವರು ಕಡೆಗಣಿಸಲ್ಪಟ್ಟಿರುವ ಹಾಗೂ ಅಸಂಘಟಿತ ವಲಯದಲ್ಲಿರುವ ಕಾರ್ಮಿಕರಾಗಿದ್ದಾರೆ. ಅವರ ವರಮಾನವು ಬಹಳ ಕಡಿಮೆ ಇದ್ದು ಅದು ಅನಿಶ್ಚಿತವೂ, ಅನಿಯಮಿತವೂ ಆಗಿರುತ್ತದೆ. ಅಲ್ಲದೆ ಅವರು ಅಸಂಘಟಿತರು, ಅವಿದ್ಯಾವಂತರು, ತರಬೇತಿ ಹೊಂದಿಲ್ಲದವರು, ದುರ್ಬಲರು ಹಾಗೂ ನಿರ್ಗತಿಕ ವರ್ಗದವರಾಗಿರುತ್ತಾರೆ. ಇವರಿಗೆ ಸಿಗಬೇಕಾಗಿರುವಂತಹ ಹಕ್ಕುಗಳಿಗೆ ಹೋರಾಡುವ ಸಾಮರ್ಥ್ಯವನ್ನು ಹೊಂದಿರುವುದಿಲ್ಲ. ಈ ಎಲ್ಲಾ ಕಾರಣದಿಂದಾಗಿ ಕೃಷಿ ಕಾರ್ಮಿಕರು ಆರ್ಥಿಕವಾಗಿ ಸಾಮಾಜಿಕವಾಗಿ ಮುಂದುವರೆಯಲು ಸಾಧ್ಯವಾಗದೆ ಹಲವಾರು ರೀತಿಯ ಸಮಸ್ಯೆಯನ್ನು ಎದುರಿಸುತ್ತಿರುವುದು ಕಂಡು ಬರುತ್ತದೆ.
ಭಾರತ ಒಂದು ಕೃಷಿ ಪ್ರಧಾನ ರಾಷ್ಟ್ರವಾಗಿದ್ದು ಶೇ.೬೫% ರಷ್ಟು ಜನರು ಕೃಷಿಯನ್ನೇ ಅವಲಂಭಿಸಿದ್ದಾರೆ. ನಮ್ಮದು ಕೃಷಿಕರ ದೇಶ. ರೈತರೇ ಈ ದೇಶದ ಬೆನ್ನೆಲುಬು ಮಣ್ಣಿನ ಮಕ್ಕಳ ಏಳಿಗೆಯೇ ನಮ್ಮ ಗುರಿ ಇತ್ಯಾದಿ ಹೇಳಿಕೆಗಳು ಕೃಷಿ ಕಾರ್ಮಿಕರ ಜೀವನದಲ್ಲಿ ಕೇವಲ ಹೇಳಿಕೆಗಳಷ್ಟೆ ಅವು ಅವರ ಜೀವನದಲ್ಲಿ ಕಾರ್ಯ ರೂಪಕ್ಕೆ ತಂದಿರುವುದು ಬಹಳ ವಿರಳವಾಗಿದೆ. ಕೃಷಿ ಕಾರ್ಮಿಕರು ಅವರ ಭೂ ಮಾಲಿಕರ ನಿರಂತರ ಶೊಷಣೆಗೆ ಒಳಪಡಿಸುತ್ತಿದ್ದಾರೆ. ಈ ಕೃಷಿ ಕಾರ್ಮಿಕರಲ್ಲಿ ಹೆಚ್ಚು ಗಂಡಸರ ಪ್ರಮಾಣ ಹೆಚ್ಚಾಗಿದ್ದು ಮಹಿಳೆಯರು ಹೆಚ್ಚು ತೋಟದ ಬೆಳೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವುದು ಕಂಡು ಬರುತ್ತದೆ. ಇಲ್ಲಿ ಗಂಡಸರಿಗೆ ಹೆಚ್ಚು ಮತ್ತು ಮಹಿಳೆಯರಿಗೆ ಕಡಿಮೆ ಕೂಲಿಯನ್ನು ನೀಡುತ್ತಿದ್ದು ಇದರಲ್ಲಿಯೂ ತಾರತಮ್ಯ ಇರುವುದನ್ನು ಕಾಣಬಹುದಾಗಿದೆ.
ಗ್ರಾಮೀಣ ಆರ್ಥಿಕ ವ್ಯವಸ್ಥೆಯಲ್ಲಿ ಕೃಷಿ ಕಾರ್ಮಿಕರು ಅತ್ಯಂತ ನಿರ್ಲಕ್ಷ್ಯಯುತ ಹಾಗೂ ಶೋಷಣೆಯುತ ಪಟ್ಟಿಗೆ ಸೇರಿದವರಲ್ಲದೆ ನಿರ್ಗತಿಕ ವರ್ಗಕ್ಕೂ ಸೇರಿದವರಾಗಿದ್ದಾರೆ. ಅವರ ಉದ್ಯೋಗವು ಅಸ್ಥಿರವಾಗಿದ್ದು, ಋತುಕಾಲಿಕವಾಗಿದ್ದು, ಬಹುಪಾಲು ಕೃಷಿ ಕಾರ್ಮಿಕರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗಗಳಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಅಲ್ಪಸಂಖ್ಯಾತರ ಪಟ್ಟಿಗೆ ಸೇರಿದವರಾಗಿರುತ್ತಾರೆ. ಪ್ರಸ್ತುತ ಭಾರತದಲ್ಲಿ ಏರುತ್ತಿರುವ ಜನಸಂಖ್ಯೆಯ ಪ್ರಭಾವದಿಂದ ಭೂಮಿಯ ಮೇಲಿನ ಅವಲಂಭಿತರ ಸಂಖ್ಯೆ ಅಧಿಕವಾಗುತ್ತಿದೆ. ಭೂಮಿಯ ಸರಾಸರಿ ಇಳುವರಿ ಕಡಿಮೆಯಾಗುತ್ತಿರುವುದಕ್ಕೆ ಭೂ ವಿಭಜನೆ ಮತ್ತು ವಿಕೇಂದ್ರೀಕರಣವು ಕಾರಣವಾಗಿದ್ದು, ಭಾರತದಲ್ಲಿ ಸ್ವತಂತ್ರ ಪೂರ್ವದಿಂದ ಹಿಡಿದು ಪ್ರಸ್ತುತ ಸ್ವತಂತ್ರ ಪಡೆದು ೬೦ ವರ್ಷಗಳಾದರೂ ಯತಾಸ್ಥಿತಿಯಲ್ಲಿರುವುದು ಕಂಡು ಬರುತ್ತದೆ.

ವ್ಯಾಖ್ಯೆಗಳು :
೧೯೫೦-೫೧ ರಲ್ಲಿ ಪ್ರಥಮ ಕೃಷಿ ಕಾರ್ಮಿಕರ ವಿಚಾರಣಾ ಸಮಿತಿಯ ಕೃಷಿ ಕಾರ್ಮಿಕರನ್ನು ಈ ಕೆಳಕಂಡಂತೆ ವ್ಯಾಖ್ಯನಿಸಿದೆ. ಹಿಂದಿನ ವರ್ಷದಲ್ಲಿ ಒಟ್ಟು ಕೆಲಸ ಮಾಡಿದ ದಿನಗಳ ಪ್ರತಿಶತ ೫೦ಕ್ಕಿಂತ ಹೆಚ್ಚು ದಿನಗಳವರೆಗೆ ಕೃಷಿ ಚಟುವಟಿಕೆಯಲ್ಲಿ ಕೂಲಿಯ ಆಳುಗಳಾಗಿ ಕೆಲಸ ಮಾಡಿದವರು ಕೃಷಿ ಕಾರ್ಮಿಕರಾಗಿದ್ದಾರೆ.
೧೯೫೬-೫೭ರ ಎರಡನೆ ಕೃಷಿ ಕಾರ್ಮಿಕರ ವಿಚಾರಣಾ ಸಮಿತಿಯು ಹಿಂದಿನ ವರ್ಷದಲ್ಲಿ ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳಿಂದ ಹೆಚ್ಚಿನ ಪ್ರಮಾಣದ ಆದಾಯ ಪಡೆದವರು ಕೃಷಿ ಕಾರ್ಮಿಕರಾಗಿದ್ದಾರೆ ಎಂದು ವ್ಯಾಖ್ಯಾನಿಸಿದೆ.
ಮೇಲ್ಕಂಡ ವ್ಯಾಖ್ಯೆಗಳ ಪ್ರಕಾರ ಕೃಷಿ ಕಾರ್ಮಿಕರು ತಮ್ಮ ಆದಾಯದ ಬಹುಭಾಗವನ್ನು ಬೇರೆಯವರ ಜಮೀನಿನಲ್ಲಿ ದುಡಿದು ಪಡೆಯುವ ಕಾರ್ಮಿಕರಾಗಿರುತ್ತಾರೆ. ಅವರು ಬೇರೆಯವರ ಜಮೀನಲ್ಲಿ ವರ್ಷದ ಅರ್ಧಕ್ಕಿಂತಲೂ ಹೆಚ್ಚಿನ ಅವಧಿಯವರೆಗೆ ದುಡಿಯುವವರಾಗಿರಬೇಕು ಅವರು ಕೃಷಿ ಕಾರ್ಮಿಕರು ಎಂದು ಪರಿಗಣಿಸಲಾಗಿದೆ.
ಕರ್ನಾಟಕದ ೬ ಕೋಟಿ ಮಂದಿಗಳಲ್ಲಿ ರೈತ ಸಮುದಾಯ ಶೇ.೬೮ ರಷ್ಟು ಜನರು ಕೃಷಿಕರಿದ್ದಾರೆ. ಕರ್ನಾಟಕದ ಯಾವೊಬ್ಬ ರೈತನು ಉನ್ನತ ಸ್ಥಾನಮಾನದಲ್ಲಿ ಇಲ್ಲವಾದರೆ ಕೃಷಿ ಪ್ರಧಾನ ರಾಷ್ಟ್ರವೆಂದು ಕರೆಸಿಕೊಳ್ಳುವ ಪುರುಷಾರ್ಥವೆಂದರೂ ಏಕೆ? ತಮ್ಮನ್ನು ತಾವೇ ರೈತರ ಪರ ಎಂದು ಕರೆದುಕೊಳ್ಳುವ ಸರ್ಕಾರಗಳು, ಜನ ಪ್ರತಿನಿಧಿಗಳು ಕೃಷಿ ಕಾರ್ಮಿಕರನ್ನು ಯಾವ ಮಟ್ಟದಲ್ಲಿ ಕಾಣುತ್ತಿದೆ ಎಂಬುದಕ್ಕೆ ರಕ್ಷಣೆಯಿಲ್ಲದ ರೈತನು ರೈತನನ್ನು ಅವಲಂಭಿಸಿದ ಆ ಕುಟುಂಬವೇ ಇದಕ್ಕೆ ನಿದರ್ಶನ. ಕೇಂದ್ರ ಸರ್ಕಾರ ಕೃಷಿಕ ಸಮುದಾಯವನ್ನು ಸಾಲದ ಹೊರೆಯಿಂದ ಮುಕ್ತಗೊಳಿಸಿ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸರ್ಕಾರ ವಿಶೇಷ ಕ್ರಮ ಕೈಗೊಳ್ಳಲಿದೆ ಎಂಬ ಆಶ್ವಾಸನೆಗಳ ದಾರಿಯಲ್ಲಿ ನಡೆಯುತ್ತಿದೆ ಎನ್ನುವುದಾದರೆ, ೨೦೦೩ರಿಂದ ೨೦೦೬ರವರೆಗೆ ಕರ್ನಾಟಕದಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಪೈಕಿ ೪೦೬ ಜನ ಕೃಷಿಯ ಸಾಲ ಭಾದೆಯಿಂದಲೇ ಎಂಬುದು ರುಜುವಾತುವಾಗಿದೆ. ಈ ಕೃಷಿಕ ಕುಟುಂಬಗಳ ರಕ್ಷಣೆ ಯಾರದು? ಎಂಬ ಪ್ರಶ್ನೆ ಕೇಂದ್ರದ ಕೃಷಿ ಅಭಿವೃದ್ಧಿ ಮಂಡಳಿಯ ಜ್ಞಾಪಕಕ್ಕೆ ಬರುತ್ತಿಲ್ಲವೇ? ಕೇಂದ್ರ ಸರ್ಕಾರ ಕಳೆದ ೫ ವರ್ಷಗಳಲ್ಲಿ ಯೋಜನಾ ಆಯೋಗ ನಿಗದಿ ಪಡಿಸಿದ ಗುರಿ ಎಲ್ಲ ರಾಜ್ಯ ಸರ್ಕಾರಗಳು ಯಶಸ್ಸು ಕಂಡಿಲ್ಲ ಎಂಬ ಕೇಂದ್ರ ಅಂಕಿ-ಅಂಶಗಳ ಸಮೀಕ್ಷೆ ದೃಡಪಡಿಸಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾರತ ಕೃಷಿ ಉತ್ಪಾದನಾ ಕ್ಷೇತ್ರ ಅಭಿವೃದ್ಧಿ ಹೊಂದಿಲ್ಲ ಎನ್ನುವುದಾದರೆ ಕೃಷಿ ಕಾರ್ಮಿಕನ ಅಭಿವೃದ್ಧಿ ಸಾಧ್ಯವೇ ಎಂಬ ಮಾತು ಇವತ್ತಿಗೂ ಭಾರತ ನಿರ್ಮಾಣ ಯೋಜನೆ ಐದು ವರ್ಷಗಳಲ್ಲಿ ಕೃಷಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವ ಸಂಬಂಧ ಯಾವ ಯೋಜನೆಗಳನ್ನು ಜಾರಿಗೊಳಿಸಬಹುದು ಎಂಬುದರ ಬಗ್ಗೆ ಕರಡು ಪ್ರತಿ ಸಿದ್ಧಪಡಿಸಲಾಗುತ್ತದೆ. ಆದರೆ ಕೃಷಿಯನ್ನು ಅವಲಂಭಿಸಿದ ಕೃಷಿ ಕಾರ್ಮಿಕರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಬಿವೃದ್ಧಿ ಮಾರ್ಗ ಸೂತ್ರಗಳನ್ನು ಏಕೆ ಗಮನಹರಿಸುತ್ತಿಲ್ಲ ಎಂಬುದು ಜಮೀನ್ದಾರ ಕೃಷಿ ರೈತರಿಗೆ ಹೊರತು ಕೃಷಿ ಕಾರ್ಮಿಕರಿಗಲ್ಲ ಎಂಬುದು ತಿಳಿದು ಬರುತ್ತದೆ.

ಕೃಷಿ ಕಾರ್ಮಿಕರ ವಿಧಗಳು :
ಗ್ರಾಮೀಣ ವಲಯದಲ್ಲಿ ಕೃಷಿ ಕಾರ್ಮಿಕರು ಅತ್ಯಂತ ಮುಖ್ಯವಾದ ಒಂದು ವರ್ಗದ ಜನರಿದ್ದಾರೆ. ಇವರೂ ಸಹ ಕೃಷಿಯಲ್ಲಿ ನಿರತರಾಗಿದ್ದ ಜನರಾಗಿರುವವರು. ಕೃಷಿ ಕಾರ್ಮಿಕರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ತೀರಾ ಹಿಂದುಳಿದ ವರ್ಗದವರಾಗಿರುತ್ತಾರೆ. ಇವರು ದಾರುಣ ಬಡತನದಲ್ಲಿ ಜೀವಿಸುತ್ತಿದ್ದು ಗ್ರಾಮೀಣ ಅರ್ಥ ವ್ಯವಸ್ಥೆಯಲ್ಲಿ ನಿರ್ಲಕ್ಷಕ್ಕೆ ಒಳಗಾಗಿರುವವರು. ಕೃಷಿ ಉತ್ಪಾದನೆಗೆ ಕೃಷಿ ಕಾರ್ಮಿಕರು ಅವಶ್ಯಕವಾದ ವರ್ಗದ ಜನರಾಗಿದ್ದಾರೆ.
ಕೃಷಿ ಕಾರ್ಮಿಕರನ್ನು ವಿಶಾಲವಾಗಿ ೪ ವಿಧಗಳಾಗಿ ವಿಂಗಡಿಸಬಹುದು. ಅವುಗಳೆಂದರೆ;
೧.ಭೂ ಮಾಲೀಕರ ಜಮೀನಿನಲ್ಲಿ ಕೆಲಸ ಮಾಡುವಂತಹ ಭೂ ರಹಿತ ಕಾರ್ಮಿಕರು.
೨.ವ್ಯಕ್ತಿ ಗತವಾಗಿ ಸ್ವತಂತ್ರವಾಗಿರುವಂತಹ ಆದರೆ ಸಂಪೂರ್ಣವಾಗಿ ಇತರರಿಗಾಗಿ ಕೆಲಸ ನಿರ್ವಹಿಸುವಂತಹ ಭೂ ರಹಿತ ಕಾರ್ಮಿಕರು.
೩.ಚಿಕ್ಕ ತುಂಡು ಜಮೀನನ್ನು ಹೊಂದಿದ್ದು ಬಹುತೇಕ ಸಮಯ ಬೇರೆಯವರಿಗಾಗಿ ಕೆಲಸ ಮಾಡುವಂತಹ ಅತೀ ಸಣ್ಣ ರೈತರು.
೪.ಆರ್ಥಿಕ ಹಿಡುವಳಿಗಳನ್ನು ಹೊಂದಿರುವ ಆದರೆ ಅವರ ಒಬ್ಬ ಅಥವಾ ಹೆಚ್ಚಿನ ಸಂಖ್ಯೆಯ ಮಕ್ಕಳು ಮತ್ತು ಅವರ ಅವಲಂಭಿಗಳು ಶ್ರೀಮಂತ ರೈತರ ಜಮೀನಿನಲ್ಲಿ ಕೆಲಸ ಮಾಡುವಂತಹ ಕೃಷಿಕನು.
ಮೇಲೆ ನಮುದಿಸಿರುವುಗಳಲ್ಲಿ ಮೊದಲನೇ ವರ್ಗ ಅಂದರೆ ಭೂ ಮಾಲೀಕರ ಜಮೀನಿನಲ್ಲಿ ಕೆಲಸ ಮಾಡುವಂತಹ ಭೂ ರಹಿತ ಕಾರ್ಮಿಕರು ಗುಲಾಮರ ಸ್ಥಿತಿಯಲ್ಲಿದ್ದಾರೆ. ಅವರನ್ನು ಜೀತದಾಳುಗಳು ಎಂತಲೂ ಕರೆಯಲಾಗುತ್ತದೆ. ಇವರಿಗೆ ಕೂಲಿಯನ್ನು ಸಾಮಾನ್ಯವಾಗಿ ನಗದು ಹಣದ ರೂಪದಲ್ಲಿ ಕೊಡದೆ ಧಾನ್ಯದ ರೂಪದಲ್ಲಿ ಕೊಡಲಾಗುತ್ತದೆ. ಮೇಲೆ ನಮೂದಿಸಿರುವದಲ್ಲಿ ಎರಡನೆಯ ಮತ್ತು ಮೂರನೆಯ ವರ್ಗಗಳು ಕೃಷಿ ಕಾರ್ಮಿಕರ ಅತ್ಯಂತ ಪ್ರಮುಖ ವಿಧಗಳಾಗಿವೆ.
ಇದಲ್ಲದೆ ಕೃಷಿ ಕಾರ್ಮಿಕರನ್ನು ಕೆಳಗಿನಂತೆ ವರ್ಗೀಕರಿಸಬಹುದು. ಕೃಷಿ ಕಾರ್ಮಿಕರನ್ನು ಖಾಯಂ ಕಾರ್ಮಿಕರು, ಇವರು ಒಂದು ನಿರ್ದಿಷ್ಟ ಭೂಮಿಯಲ್ಲಿ ಖಾಯಂ ಆಗಿ ಕೆಲಸ ನಿರ್ವಸುವರು. ಹಂಗಾಮಿ ಕಾರ್ಮಿಕರು ಇವರು, ಕೆಲವೇ ತಿಂಗಳು ಅಥವಾ ದಿನಗಳಿಗೆ ಮಾತ್ರ ನೇಮಕವಾಗಿರುತ್ತಾರೆ.
ಯುವ ಪುರುಷ ಕಾರ್ಮಿಕರು, ಯುವ ಮಹಿಳಾ ಕಾರ್ಮಿಕರು ಈ ಎರಡು ವರ್ಗದಲ್ಲಿ ತುಂಬಾ ಚಿಕ್ಕ ವಯಸ್ಸಿನವರು ಕೆಲಸ ನಿರ್ವಹಿಸುತ್ತಾರೆ. ಪುರುಷ ಕಾರ್ಮಿಕರು ಮತ್ತು ಸ್ತ್ರೀ ಕೃಷಿ ಕಾರ್ಮಿಕರು ಇವರು ೨೫ ವರ್ಷ ಮೇಲ್ಪಟ್ಟ ವರ್ಗದವರಾಗಿದ್ದರೆ ದೀರ್ಘಾವಧಿ ಕೃಷಿ ಕಾರ್ಮಿಕರು. ಇವರು ಜೀವನ ಪರ್ಯಂತ ಕೆಲಸ ಮಾಡಲು ನೇಮಕವಾದ ವರ್ಗ ಜೀತದಾಳುಗಳು. ಇವರು ಭೂ ಮಾಲೀಕರ ಹತ್ತಿರ ಜೀತಕ್ಕೆ ಕೆಲಸ ಮಾಡುವವರು ಮತ್ತು ಬಂದಿತ ಕಾರ್ಮಿಕರು ಇವರು ನಾನಾ ಅಪರಾಧ ಮಾಡಿ ಸೆರೆಮನೆಯಲ್ಲಿರುತ್ತಾರೆ. ಇವರಿಗೆ ಅಲ್ಲಿಯೇ ಕೃಷಿಯಲ್ಲಿ ತೊಡಗಲು ಅವಕಾಶವಿದೆ.

ಕೃಷಿ ಕಾರ್ಮಿಕರ ಲಕ್ಷಣಗಳು :
ಭಾರತದಲ್ಲಿ ಕೃಷಿ ಕಾರ್ಮಿಕರು ಕೆಲವು ವಿಶಿಷ್ಟ ಲಕ್ಷಣಗಳನ್ನು ಹೊಂದಿದ್ದಾರೆ. ಅವರು ಕೈಗಾರಿಕಾ ಕಾರ್ಮಿಕರಂತೆ ಸಂಘಟಿತರಾಗಿಲ್ಲ ಆದರೆ ಅವರು ಸುಸಂಘಟಿತರಾಗಲು ಕಾರಣಗಳೂ ಇವೆ. ಅವರು ಕೈಗಾರಿಕಾ ಕಾರ್ಮಿಕರಂತೆ ಒಂದೇ ಸ್ಥಳದಲ್ಲಿ ಕೂಡಿ ಕೆಲಸ ಮಾಡುವುದಿಲ್ಲ. ಅವರು ಬೇರೆ ಬೇರೆ ಸ್ಥಳಗಳಲ್ಲಿರುವ ಬೇರೆ ಬೇರೆಯವರ ಜಮೀನಿನಲ್ಲಿ ಕೆಲಸ ಮಾಡುತ್ತಾರೆ. ಅವರಿಗೆ ಕೈಗಾರಿಕಾ ಕಾರ್ಮಿಕರಂತೆ ಇಡೀ ವರ್ಷ ಕೆಲಸ ಸಿಗುವುದಿಲ್ಲ. ಅವರು ಕೆಲಸ ಮಾಡುವ ಸ್ಥಿತಿಗತಿಗಳು ಬೇರೆ ಸ್ಥಳಗಳಲ್ಲಿ ಬೇರೆ ಬೇರೆಯಾಗಿರುತ್ತದೆ. ಕೃಷಿ ಕಾರ್ಮಿಕರು ಹೆಚ್ಚಾಗಿ ಅವಿದ್ಯಾವಂತರಾಗಿರುತ್ತಾರೆ. ಅವರಿಗೆ ಲೋಕದ ಬಗ್ಗೆ ಕೃಷಿಯ ಬಗ್ಗೆ ಸರಿಯಾದ ಜ್ಞಾನ ಇರುವುದಿಲ್ಲ. ಅವರು ಸಾಮಾನ್ಯವಾಗಿ ತಾವು ಕೈಗೊಳ್ಳುವ ಕೆಲಸದ ಬಗ್ಗೆ ಯಾವುದೇ ತರಬೇತಿಯನ್ನು ಪಡೆದಿರುವುದಿಲ್ಲ. ಅವರು ತಮಗೆ ಇಷ್ಟ ಬಂದ ರೀತಿಯಲ್ಲಿ ಕೃಷಿ ಮಾಡುತ್ತಾರೆ.
ಅವರು ಸಂಚಾರಿ ಸ್ವಭಾವದವರಾಗಿದ್ದಾರೆ. ಸುಗ್ಗಿಯ ಸಮಯದಲ್ಲಿ ಹೆಚ್ಚಿನ ಕೆಲಸ ಸಿಗುತ್ತದೆ. ನಂತರ ಅವರು ಉದ್ಯೋಗ ಅರಸಿ ಬೇರೆ ಕಡೆಗೆ ವಲಸೆ ಹೋಗುತ್ತಾರೆ. ಅವರಿಗೆ ಕೊಡುವ ಕೂಲಿ ದರ ತುಂಬಾ ಕಡಿಮೆ ಇದೆ. ಇದು ಅವರ ಜೀವನ ನಿರ್ವಹಣೆಗೆ ಸಾಲದ ಅವರು ಸಾಲದಲ್ಲಿಯೇ ಮುಳುಗಿರುತ್ತಾರೆ.
ಕಾರ್ಮಿಕರ ಹೆಚ್ಚು ಸಮಯ ದುಡಿಸಿಕೊಂಡು ಅವರಿಗೆ ಕಡಿಮೆ ಕೂಲಿಯನ್ನು ವಿತರಿಸಲಾಗುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ಯಾವುದೇ ಕಾನೂನುಗಳು ರಚಿಸಲ್ಪಟ್ಟಿಲ್ಲ. ಒಂದು ವೇಳೆ ಇದ್ದರೂ ಅವುಗಳನ್ನು ಪಾಲಿಸುವುದಕ್ಕಿಂತ ಕಡೆಗಣಿಸುವುದು ಹೆಚ್ಚು ಹೆಚ್ಚು ಕೃಷಿ ಕಾರ್ಮಿಕರು ಸಮಾಜದ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದಾರೆ. ಅವರು ನಿರಂತರ ಶೋಷಣೆಗೆ ಒಳಪಟ್ಟ ಜನಾಂಗದವರಾಗಿದ್ದಾರೆ. ಕೃಷಿ ಕಾರ್ಮಿಕರಿಗೆ ಸಂಬಂಧಿಸಿದಂತೆ ಸರ್ಕಾರ ಜಾರಿಗೆ ತಂದಿರುವ ಕಾಯ್ದೆಗಳ ಬಗ್ಗೆ ಅವರಿಗೆ ಅರಿವೇ ಇರುವುದಿಲ್ಲ. ಅವರಿಗೆ ಅವರ ದುಡಿಮೆಯೇ ಹೊರತು ಬೇರೆ ಯಾವುದೇ ವಿಷಯ ತಿಳಿದಿರುವುದಿಲ್ಲ ಮತ್ತು ಮಾಲೀಕರೊಂದಿಗೆ ಚೌಕಾಶಿ ಮಾಡುವ ಸಾಮರ್ಥ್ಯವಿರುವುದಿಲ್ಲ. ಅವರಿಗೆ ಕೂಲಿಯು ಸಿಗುವುದು ಹಣದ ರೂಪದಲ್ಲಿ, ಕೆಲವೊಂದು ಸರಿ ಅವರಿಗೆ ದವಸ ಧಾನ್ಯಗಳ ರೂಪದಲ್ಲಿ ನೀಡಲಾಗುತ್ತದೆ. ಇದರಿಂದ ಅವರ ಜೀವನ ನಿರ್ವಹಣೆಗೆ ಸ್ವಲ್ಪ ಸಹಾಯವಾಗುತ್ತದೆ. ಜಮೀನ್ದಾರರು ಕೃಷಿ ಕಾರ್ಮಿಕರನ್ನು ನಿರಂತರ ಶೋಷಣೆಗೆ ಗುರಿಪಡಿಸುತ್ತಿದ್ದಾರೆ. ಅವರಿಂದ ಹೆಚ್ಚು ಸಮಯ ದುಡಿಸಿಕೊಂಡು ಕಡಿಮೆ ಕೂಲಿಯನ್ನು ನೀಡುತ್ತಿದ್ದಾರೆ. ಇಲ್ಲಿ ಅವರಿಗೆ ಶ್ರಮಕ್ಕೆ ಸರಿಯಾದ ಪ್ರತಿಫಲ ದೊರೆಯುತ್ತಿಲ್ಲ. ಕೃಷಿಯನ್ನು ಅವಲಂಭಿಸಿರುವ ಸಂಖ್ಯೆ ಅವಲಂಬನೆಗಿಂತ ಹೆಚ್ಚು ಜನರು ಕೃಷಿಯನ್ನು ಅವಲಂಬಿಸಿದರೆ ಕೃಷಿ ಕಾರ್ಮಿಕರು ಅತ್ಯಂತ ನಿಕೃಷ್ಟವಾದ ಮತ್ತು ಅತ್ಯಂತ ಹೀನಾಯ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ.

ಭಾರತದಲ್ಲಿ ಕೃಷಿ ಕಾರ್ಮಿಕರ ಬೆಳವಣಿಗೆ :
ಕೃಷಿ ಕಾರ್ಮಿಕರ ನಿಖರ ಸಂಖ್ಯೆ ಅವರ ಆದಾಯ ಜೀವನ ಮಟ್ಟ ವಿಷಯಗಳ ಬಗೆಗೆ ಅಂಕಿ ಅಂಶಗಳ ಕೊರತೆ ಇದೆ. ಭಾರತದಲ್ಲಿ ಬ್ರಿಟೀಷರ ಕಾಲದಲಿ ಕೃಷಿ ಕಾರ್ಮಿಕರು ಎಂಬ ಪ್ರತ್ಯೇಕವಾದ ವರ್ಗವು ಇದ್ದಂತೆ ಕಾಣುವುದಿಲ್ಲ. ಕೆಲವು ಸಮಿತಿಗಳು ಮತ್ತು ಆಯೋಗಗಳ ವರದಿಗಳ ರೂಪದಲ್ಲಿ ಮಾಹಿತಿ ಲಭ್ಯವಾಗುತ್ತದೆ. ೧೯೬೦ರಲ್ಲಿ ಪ್ರಕಟಿಸಲಾದ ಎರಡನೇ ಕೃಷಿ ಕಾರ್ಮಿಕರ ಪರಿಶೋಧನಾ ಸಮಿತಿ ಪ್ರಕಾರ ಒಟ್ಟು ಗ್ರಾಮೀಣ ಕುಟುಂಬಗಳಲಿ ಶೇ.೨೫ ರಷ್ಟು ಕೃಷಿ ಕಾರ್ಮಿಕರ ಕುಟುಂಬಗಳಿವೆ. ಈ ವರದಿಯ ಮೇರೆಗೆ ಗ್ರಾಮೀಣ ಕೆಲಸಗಾರರಲ್ಲಿ ಶೇ.೮೫% ರಷ್ಟು ಅನಿಯಮಿತ ಕಾರ್ಮಿಕರಾಗಿದ್ದು ತಮ್ಮನ್ನು ನೇಮಿಸಿಕೊಳ್ಳಲು ಇಚ್ಛಿಸುವ ಯಾವುದೇ ಕೃಷಿಕರಿಗಾಗಿ ಕೆಲಸ ಮಾಡುವ ವರ್ಗದವರಾಗಿರುತ್ತಾರೆ. ಶೇ.೧೫% ರಷ್ಟು ಜನರು ಮಾತ್ರ ನಿರ್ದಿಷ್ಟ ಭೂ ಮಾಲಿಕರ ಜಮೀನಿನಲ್ಲಿ ಕೆಲಸ ಮಾಡುತ್ತಾರೆ. ಶೇ.೫೦% ರಷ್ಟು ಜನ ಭೂ ರಹಿತ ಕಾರ್ಮಿಕರು. ಉಳಿದವರು ತುಂಡು ಭೂಮಿಯನ್ನು ಹೊಂದಿರುತ್ತಾರೆ. ಅವರೇ ಪರಿಶಿಷ್ಟ ಜಾತಿ, ಬುಡಕಟ್ಟು ಹಿಂದುಳಿದ ವರ್ಗಗಳಿಗೆ ಸೇರಿದವರಾಗಿರುತ್ತಾರೆ. ವಿಶೇಷವೆಂದರೆ ಶೇ.೭೫% ರಿಂದ ೮೦ ರಷ್ಟು ಕೃಷಿ ಕಾರ್ಮಿಕರು ಪರಿಶಿಷ್ಟ ಜಾತಿಗೆ ಸೇರಿದವರಾಗಿರುತ್ತಾರೆ. ೧೯೮೧ರ ಜನಗಣತಿಯ ಪ್ರಕಾರ ಕೃಷಿ ಕಾರ್ಮಿಕರ ಸಂಖ್ಯೆ ೬೪.೪ ದಶಲಕ್ಷ ಆಗಿತ್ತು. ಆಗ ದೇಶದ ಒಟ್ಟು ಕಾರ್ಮಿಕರ ಸಂಖ್ಯೆ ೨೨೪.೬ ದಶಲಕ್ಷ ಇತ್ತು. ಅಂದರೆ ೧೯೮೧ ರಲ್ಲಿ ಒಟ್ಟು ಕೃಷಿ ಕಾರ್ಮಿಕರ ಪ್ರಮಾಣ ಶೇ.೨೬.೩ ಆಗಿತ್ತು. ೧೯೬೧ ರಲ್ಲಿ ಇವರ ಪ್ರಮಾಣ ೩೧ ದಶಲಕ್ಷ ಆಗಿತ್ತು. ಆದರೆ ೧೯೬೧-೮೧ರ ನಡುವೆ ಈ ಕಾರ್ಮಿಕರ ಸಂಖ್ಯೆ ತೀವ್ರವಾಗಿ ಹೆಚ್ಚಿತ್ತು ಎನ್ನುವುದು ತಿಳಿಯುತ್ತದೆ.
ಗ್ರಾಮೀಣ ಕಾರ್ಮಿಕರ ಮೇಲಿನ ರಾಷ್ಟ್ರೀಯ ಆಯೋಗದ ಅಧ್ಯಯನದಿಂದ ತಿಳಿದು ಬರುವಂತೆ ೧೯೭೦ರ ದಶಕದಲ್ಲಿ ಗ್ರಾಮೀಣ ಜನಸಂಖ್ಯೆಯು ಶೇ.೨ರ ವಾರ್ಷಿಕ ದರದಲ್ಲಿ ಬೆಳೆದರೆ ಕೃಷಿ ಕಾರ್ಮಿಕರ ಸಂಖ್ಯೆಯು ಶೇ.೪.೧ ವಾರ್ಷಿಕ ದರದಲ್ಲಿ ಹೆಚ್ಚಿತ್ತು. ೧೯೮೦ರ ದಶಕದಲ್ಲಿ ಈ ಸಂಖ್ಯೆ ಶೇ.೫.೧ರ ವಾರ್ಷಿಕ ದರದಲ್ಲಿ ಬೆಳೆದರೆ ಕೃಷಿ ಕಾರ್ಮಿಕರ ಸಂಖ್ಯೆಯು ಶೇ.೩ ವಾರ್ಷಿಕ ದರದಲ್ಲಿ ಹೆಚ್ಚಿತ್ತು. ಗ್ರಾಮೀಣ ಜನ ಸಂಖ್ಯೆಯ ಬೆಳವಣಿಗೆಯು ದರಕ್ಕಿಂತ ಹೆಚ್ಚಿನ ದರದಲ್ಲಿ ಕೃಷಿ ಕಾರ್ಮಿಕರ ಸಂಖ್ಯೆಯು ಹೆಚ್ಚಾದುದು ಇದರಿಂದ ಗಮನಕ್ಕೆ ಬರುತ್ತದೆ. ೧೯೯೧ರ ಜನಗಣತಿಯ ಪ್ರಕಾರ ಕೃಷಿ ಕಾರ್ಮಿಕರು ೭೪೭ ದಶಲಕ್ಷಗಳಷ್ಟಿದ್ದರು. ಅಂದರೆ ಕೃಷಿ ಕಾರ್ಮಿಕರ ಒಟ್ಟು ಪ್ರಮಾಣ ೨೪.೫ ರಷ್ಟು ಇತ್ತು. ಇದು ೨೦೦೧ರ ಜನಗಣತಿಯ ಆಧಾರದ ಮೇಲೆ ಕೃಷಿ ಕಾರ್ಮಿಕರು ೮೯೦ ದಶಲಕ್ಷ ಅಂದೇ ಪ್ರತಿಶತ ಪ್ರಮಾಣ ಶೇ.೨೩.೫ ರಷ್ಟು ಇತ್ತು.
ಈ ಮೇಲಿನ ಅಂಕಿ-ಅಂಶಗಳಿಂದ ಕಂಡು ಬರುವುದೇನೆಂದರೆ ಕೃಷಿ ಕಾರ್ಮಿಕರ ಸಂಖ್ಯೆಯು ಸ್ವಾತಂತ್ರ್ಯದ ನಂತರ ವರ್ಷಗಳಲ್ಲಿ ತ್ವರಿತಗತಿಯಲ್ಲಿ ಏರಿದೆ. ೧೯೬೧ ರಿಂದ ೨೦೦೧ರ ನಡುವಿನ ೪೦ ವರ್ಷಗಳ ಅವಧಿಯಲ್ಲಿ ಅದು ಮೂರು ಪಟ್ಟಿಗಿಂತಲೂ ಹೆಚ್ಚು ಏರಿದೆ.
ಕೃಷಿ ಕಾರ್ಮಿಕರ ಸಂಖ್ಯೆಯು ತೀವ್ರಗತಿಯಲ್ಲಿ ಏರಲು ಕಾರಣಗಳು :
ಕೃಷಿ ಕಾರ್ಮಿಕರು ಇಂದು ಭಾರತದಲ್ಲಿ ತೀವ್ರಗತಿಯಲ್ಲಿ ಬೆಳೆಯುತ್ತಿದ್ದಾರೆ. ಅದಕ್ಕೆ ಪ್ರಮುಖ ಕಾರಣ ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿರುವುದು. ಇದು ಮಾತ್ರವಲ್ಲದೆ ಇನ್ನೂ ಅನೇಕ ಕಾರಣಗಳನ್ನು ನೀಡಬಹುದಾಗಿದೆ. ಅವುಗಳೆಂದರೆ ಭಾರತದಲ್ಲಿ ಜನಸಂಖ್ಯೆ ತೀವ್ರಗತಿಯಲ್ಲಿ ಬೆಳೆಯುತ್ತಿದ್ದು ಸುಮಾರು ೧೧೦ ಕೋಟಿ ಮೀರಿದೆ. ಅದರಿಂದ ಹೆಚ್ಚಿನ ಜನರು ಕೃಷಿಯನ್ನೇ ಅವಲಂಭಿಸಿದ್ದಾರೆ. ಕೃಷಿ ಕಾರ್ಮಿಕರು ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿ ನೆಲೆಸಿರುವುದರಿಂದ ಅವರಿಗೆ ಕೃಷಿ ಬಿಟ್ಟು ಇತರೆ ಕಸುಬುಗಳು ಅಧಿಕ ಪ್ರಮಾಣದಲ್ಲಿ ಲಭ್ಯವಾಗುವುದಿಲ್ಲ. ಕೃಷಿ ಕೈಗೊಳ್ಳುವ ಚಿಕ್ಕ ರೈತರನ್ನು ಮತ್ತು ಗೇಣಿದಾರರನ್ನು ಕಡೆಗಣಿಸಲಾಗಿದೆ. ಸಣ್ಣ ಅತಿ ಸಣ್ಣ ಹಿಡುವಳಿಗಳಿಂದ ಆದಾಯ ತುಂಬಾ ಕಡಿಮೆ ಇದ್ದು ಹೆಚ್ಚು ಕಾರ್ಮಿಕರು ಹೆಚ್ಚಾಗಿ ಅವಲಂಭಿಸಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಅತಿ ಚಿಕ್ಕ ರೈತರ ಸಾಲದ ಬಾರವು ಕ್ರಮೇಣ ಅಧಿಕವಾಗುತ್ತಿದ್ದುದರಿಂದ ಅವರ ಕೂಲಿಗಾಗಿ ದುಡಿಯುವ ಅವಶ್ಯಕತೆ ಉಂಟಾಗಿದೆ ಮತ್ತು ವ್ಯವಸಾಯದಲ್ಲಿ ಯಂತ್ರೋಪಕರಣಗಳನ್ನು ಉಪಯೋಗಿಸಿ ಅದನ್ನು ವಾಣಿಜ್ಯದ ದೃಷ್ಠಿಯಿಂದ ಕೈಗೊಳ್ಳುವುದು ಅಧಿಕವಾಗಿದೆ. ಕೃಷಿ ಕಾರ್ಮಿಕರು, ಮಧ್ಯಸ್ಥಗಾರರ ನಿರ್ಮೂಲನಾ ತಾಂತ್ರಿಕ ಸುಧಾರಣೆ, ಯಂತ್ರೋಪಕರಣಗಳ ಉಪಯೋಗ, ಮಾರುಕಟ್ಟೆ ವಿಸ್ತರಣೆ ಸಹಕಾರಿ ಸಂಘಗಳ ಮೂಲಕ ಪತ್ತಿನ ಲಭ್ಯತೆ, ವೈಜ್ಞಾನಿಕ ಬೇಸಾಯ ಇವೇ ಮೊದಲಾದವುಗಳ ಮೂಲಕ ಬಂಡವಾಳ ಪ್ರಭುತ್ವ ವ್ಯವಸ್ಥೆಯು ವ್ಯವಸಾಯದಲ್ಲಿ ಕಂಡು ಬರುತ್ತದೆ.
ಈ ಎಲ್ಲಾ ಕಾರಣಗಳ ಮೂಲಕ ಭೂ ರಹಿತರು ಹಾಗೂ ಅತಿ ಚಿಕ್ಕ ಹಿಡುವಳಿದಾರರು ಕೃಷಿ ಕಾರ್ಮಿಕರಾಗಿ ಪರಿವರ್ತಿಸಲ್ಪಟ್ಟಿದ್ದಾರೆ.

ಕೃಷಿ ಕಾರ್ಮಿಕರ ಬಡತನದ ಪರಿಸ್ಥಿತಿಗೆ ಕಾರಣಗಳು :
ಭಾರತದಲ್ಲಿ ಗ್ರಾಮೀಣ ಪ್ರದೇಶಗಳ ಕಾರ್ಮಿಕರಲ್ಲಿ, ಕೃಷಿ ಕಾರ್ಮಿಕರು ಅತ್ಯಂತ ನಿಕೃಷ್ಟ ಜೀವನ ಸಾಗಿಸುವವರಾಗಿದ್ದಾರೆ. ಅವರು ಅತ್ಯಧಿಕ ಪ್ರಮಾಣದಲ್ಲಿ ಶೋಷಣೆ ಸುಲಿಗೆಗೊಳಗಾದವರು, ಸಾಮಾಜಿಕವಾಗಿ ಹತ್ತಿಕ್ಕಲ್ಪಟ್ಟವರು ಹಾಗೂ ಹಿಂಸಿಸಲ್ಪಟ್ಟವರು ಆಗಿದ್ದಾರೆ. ಅವರು ಬಡವರಲ್ಲಿಯೇ ಬಡವರಾಗಿ ಅಂದರೆ ಕಡುಬಡವರಾಗಿ ಜೀವಿಸುವಂತವರಾಗಿದ್ದಾರೆ. ಭಾರತವು ಸ್ವಾತಂತ್ರ್ಯ ಪಡೆಯುವುದಕ್ಕಿಂತ ಮೊದಲು ಅಂದರೆ ಬ್ರಿಟೀಷ್‌ರ ಕಾಲದಲ್ಲಿ ಅವರು ವಾಸ್ತವಿಕವಾಗಿ ಜೀತದ ಆಳುಗಳೇ ಆಗಿದ್ದರು ಅವರು ತಮ್ಮ ಜಮೀನುದಾರರ ಜಮೀನುಗಳಲ್ಲಿಯಷ್ಟೇ ಅಲ್ಲದೆ ಅವರ ಮನೆಯಲ್ಲಿ ದುಡಿಯುತ್ತಿದ್ದಾರೆ. ಕೃಷಿ ಕಾರ್ಮಿಕರು ಹೆಚ್ಚಾಗಿ ಅನಕ್ಷರಸ್ಥರು ಆಗಿರುವುದರಿಂದ ಅವರಿಗೆ ದುಡಿಯುವುದೊಂದೇ ಗೊತ್ತು ಹೊರತು ಅವರಿಗೆ ತಮ್ಮ ಹಕ್ಕುಗಳ ಅರಿವೇ ಇರುವುದಿಲ್ಲ ಅವರು ಸುಸಂಘಟಿತರಲ್ಲದ ಕಾರಣ ಅವರು ದೇಶದ ವಿವಿಧ ಗ್ರಾಮೀಣ ಭಾಗಗಳಲ್ಲಿ ವಾಸ ಮಾಡುವುದರಿಂದ ಒಂದು ಗೂಡಿ ಸಂಘಗಳನ್ನು ಸ್ಥಾಪಿಸುವುದು ಕಷ್ಟ.
ಅವರಿಗೆ ಸಮಾಜದ ಯಾವ ಸ್ಥಾನಮಾನಗಳೂ ಇದ್ದಿಲ್ಲ. ಅವರನ್ನು ಸಮಾಜದಲ್ಲಿ ಅತ್ಯಂತ ಕೆಳಮಟ್ಟದವರೆಂದು ಪರಿಗಣಿಸಲಾಗುತ್ತಿತ್ತು. ಅವರಿಗೆ ಯಾವುದೇ ವಿಧವಾದ ಆರ್ಥಿಕ ಸಾಮಾಜಿಕ ಸ್ವಾತಂತ್ರ್ಯವಿದ್ದಿಲ್ಲ. ಆದರೆ ಭಾರತವು ಸ್ವಾತಂತ್ರ್ಯವಾದ ನಂತರ ಅವರ ಆರ್ಥಿಕ, ಸಾಮಾಜಿಕ ಪರಿಸ್ಥಿತಿಯನ್ನು ಸುಧಾರಿಸಲು ಸರ್ಕಾರವು ಕ್ರಮ ಕೈಗೊಂಡಿತು. ಆದರೂ ಇಂದಿಗೂ ಅವರ ಪರಿಸ್ಥಿತಿ ಹೇಳಿಕೊಳ್ಳುವಷ್ಟು ಅಥವಾ ನಿರೀಕ್ಷಿಸಿದಷ್ಟು ಸುಧಾರಿಸಿಲ್ಲ. ಈಗಲೂ ಅವರ ಕೂಲಿಯ ದರವು ಬಹಳ ಕಡಿಮೆ ಇದೆ. ಅವರ ಹಿತರಕ್ಷಣೆಗಾಗಿ ಯಾವುದೇ ಕಾನೂನುಗಳಿರುವುದಿಲ್ಲ. ಅವರು ಕೆಲಸ ಮಾಡುವ ಅವಧಿ, ಕೆಲಸದ ಸ್ಥಿತಿಗತಿ ಕೂಲಿಯ ದರ, ಇವೇ ಮೊದಲಾದವುಗಳನ್ನು ನಿರ್ಧರಿಸಲು ಕಾನೂನುಗಳಿರುವುದಿಲ್ಲ. ಕೆಲವು ಕಾನೂನುಗಳು ಇದ್ದರೂ ಅವು ಕೇವಲ ಕಾಗದದಲ್ಲಿಯೇ ಉಳಿದಿದೆ. ಹೀಗಾಗಿ ಇಂದಿಗೂ ಕೃಷಿ ಕಾರ್ಮಿಕರು ಅತ್ಯಂತ ನಿಕೃಷ್ಟವಾದ ಜೀವನವನ್ನು ನಡೆಸುತ್ತಿದ್ದಾರೆ.
ಕೃಷಿ ಕಾರ್ಮಿಕರ ಉದ್ಯೋಗ ಋತುಮಾನದ ಉದ್ಯೋಗವಾಗಿರುವುದರಿಂದ ಅವರಿಗೆ ವರ್ಷವಿಡೀ ಕೆಲಸವಿರುವುದಿಲ್ಲ. ವರ್ಷದಲ್ಲಿ ಕೆಲವೇ ತಿಂಗಳುಗಳವರೆಗೆ ಅವರಿಗೆ ಕೆಲಸ ಸಿಗುತ್ತದೆ. ಅವರಿಗೆ ವರ್ಷದಲ್ಲ ಸರಾಸರಿ ಕೇವಲ ೨೦೦ ದಿನಗಳ ಕೆಲಸ ಸಿಗುತ್ತದೆಮದು ಅಂದಾಜಿಸಲಾಗಿದೆ. ಉಳಿದ ಅವಧಿಯಲ್ಲಿ ಉದ್ಯೋಗ ಇರುವುದಿಲ್ಲ ಬಡತನ ಹೆಚ್ಚಾಗುತ್ತದೆ. ಕೃಷಿಯೇತರ ವಲಯಗಳ ಅಭಾವ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಜನತು ಕೃಷಿಯನ್ನೇ ಅಲಂಭಿಸಿದ್ದಾರೆ. ಅಲ್ಲಿ ಬೇರೆ ವಲಯಗಳು ಬೆಳೆದು ಬಂದಿಲ್ಲ. ಚಿಕ್ಕ ಕೈಗಾರಿಕೆಗಳು ಹಾಗೂ ಕರಕುಶಲ ಕೈಗಾರಿಕೆಗಳು ಸಾಕಷ್ಟು ಪ್ರಮಾಣದಲ್ಲಿ ಬೆಳೆದಿಲ್ಲವಾದ್ದರಿಂದ ಕೃಷಿ ಕಾರ್ಮಿಕರಿಗೆ ಪರ್ಯಾಯ ಕೆಲಸ ಸಿಗದಂತಾಗಿ ತಮಗೆ ಸಿಗುವಷ್ಟು ಕೂಲಿಯಿಂದ ತೃಪ್ತಿ ಹೊಂದಬೇಕಾಗುತ್ತದೆ. ಗ್ರಾಮೀಣ ಸಾಲದ ಭಾರ ಮತ್ತು ಸಮಾಜದಲ್ಲಿ ಅತಿ ಕೆಳಮಟ್ಟದ ಸ್ಥಾನ ಈ ಮೇಲಿನ ಸಂಗತಿಗಳು ಕೃಷಿ ಕಾರ್ಮಿಕರ ಬಡತನದ ಪರಿಸ್ಥಿತಿಗೆ ಪ್ರಮುಖ ಕಾರಣಗಳಾಗಿವೆ.

ಕೃಷಿ ಕಾರ್ಮಿಕರ ಹಿತಕ್ಕಾಗಿ ಸರ್ಕಾರವು ಕೈಗೊಂಡ ಕ್ರಮಗಳು :
ಭಾರತವು ಸ್ವಾತಂತ್ರ್ಯ ಪಡೆದ ನಂತರವೇ ಸರಕಾರವು ಕೃಷಿ ಕಾರ್ಮಿಕರ ಆರ್ಥಿಕ ಸ್ಥಿತಿಗತಿಗಳನ್ನು ಸುಧಾರಿಸಲು ಹಲವಾರು ಕ್ರಮಗಳನ್ನು ಕೈಗೊಂಡಿತು. ಭಾರತದ ಸಂವಿಧಾನದಲ್ಲಿ ಜೀತ ಪದ್ಧತಿಯು ಮಹಾಪರಾಧವೆಂದು ಘೋಷಿಸಿದೆ. ಸರಕಾರವು ಜೀತ ಪದ್ಧತಿಯನ್ನು ನಿರ್ಮೂಲನೆ ಮಾಡಲು ಕ್ರಮ ಕೈಗೊಂಡ ಅದನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿದೆ. ಇದರಿಂದ ಅನೇಕ ಜೀತದಾಳುಗಳು ಜೀತ ವಿಮುಕ್ತಿಯಾದ ಅನೇಕ ನಿದರ್ಶನಗಳಿವೆ ಮತ್ತು ಕನಿಷ್ಟ ಕೂಲಿ ಕಾಯಿದೆಯನ್ನು ಜಾರಿಗೆ ತರಲಾಗಿದೆ. ಈ ಕಾಯಿದೆ ಪ್ರಕಾರ ಕೃಷಿ ಕಾರ್ಮಿಕರಿಗೆ ಕೊಡಬೇಕಾದ ಕನಿಷ್ಠ ಕೂಲಿಯನ್ನು ನಿಗದಿಪಡಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡುತ್ತದೆ. ಆ ಪ್ರಕಾರ ಎಲ್ಲ ರಾಜ್ಯಗಳಲ್ಲಿ ಕೃಷಿ ಕಾರ್ಮಿಕರಿಗೆ ಕನಿಷ್ಠ ಕೂಲಿಯ ದರಗಳನ್ನು ನಿಗದಿಪಡಿಸಲಾಗಿದೆ. ಈ ಕೂಲಿಯ ದರಗಳು ಸಮರ್ಪಕವಾಗಿ ಜಾರಿಗೆ ಬಂದಿಲ್ಲ.
ಸರ್ಕಾರವು ಕಾನೂನಿನ ಮೂಲಕ ಕೃಷಿ ಕಾರ್ಮಿಕರ ಹಿತಕ್ಕಾಗಿ ಅನೇಕ ಕಾಯಿದೆ ಕ್ರಮಗಳನ್ನು ಜಾರಿಗೆ ತಂದಿದೆ. ಸರ್ಕಾರವು ಕಾನೂನಿನ ಮೂಲಕ ಜಮೀನುದಾರಿ ಪದ್ಧತಿಯನ್ನು ನಿರ್ಮೂಲನ ಮಾಡಿದೆ. ಅದರೊಂದಿಗೆ ಕೃಷಿ ಕಾರ್ಮಿಕರ ಶೋಷಣೆಯನ್ನು ನಿವಾರಿಸಿದೆ. ಇದೂ ಅಲ್ಲದೆ ಗೇಣಿ ಪದ್ಧತಿಯ ಸುಧಾರಣೆಗಾಗಿ ರಾಜ್ಯ ಸರ್ಕಾರಗಳು ಕಾಯಿದೆಗಳನ್ನು ಪಾಸು ಮಾಡಿದೆ. ಅವುಗಳ ಮೂಲಕ ಗೇಣಿದಾರರ ಹಾಗೂ ಕೃಷಿ ಕಾರ್ಮಿಕರ ಹಿತಾಸಕ್ತಿಗಳನ್ನು ರಕ್ಷಿಸಲು ಕ್ರಮ ಕೈಗೊಳ್ಳಲಾಗಿದೆ. ಕೃಷಿ ಕಾರ್ಮಿಕರ ಅಭಿವೃದ್ಧಿಯ ಕಾರ್ಯಕ್ರಮ, ಚಿಕ್ಕ ರೈತರ ಅಭಿವೃದ್ಧಿ ಕಾರ್ಯಕ್ರಮ ಮೊದಲಾದ ಕೆಲವು ವಿಶೇಷ ಕಾರ್ಯಕ್ರಮಗಳ ಮೂಲಕ ಕೃಷಿ ಕಾರ್ಮಿಕರ ಹಾಗೂ ಚಿಕ್ಕ ರೈತರ ಹಿತಾಸಕ್ತಿಯನ್ನು ರಕ್ಷಿಸಲು ಕ್ರಮ ಕೈಗೊಳ್ಳಲಾಗಿದೆ.
ಕೃಷಿ ಕಾರ್ಮಿಕರಿಗೆ ಸಾಗುವಳಿಗಾಗಿ ಪಾಳು ಭೂಮಿಯ ಉದ್ಯೋಗ ಸಾಕಷ್ಟು ಬಂಜರು ಮತ್ತು ಪಾಳು ಭೂಮಿಯನ್ನು ಸಾಗುವಳಿಗೆ ತರಲಾಗಿದೆ ಮತ್ತು ಅದನ್ನು ಭೂ ರಹಿತರಿಗೆ ಹಂಚಲಾಗಿದೆ. ಗ್ರಾಮೀನ ಉದ್ಯೋಗಾವಕಾಶಗಳ ಕಾರ್ಯಕ್ರಮದಡಿಯಲ್ಲಿ ಪಂಚವಾರ್ಷಿಕ ಯೋಜನೆಗಳ ಪ್ರಕಾರ ಗ್ರಾಮಾಂತರ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಅನೇಕ ಯೋಜನೆಗಳನ್ನು ಅಳವಡಿಸಿಲಾಗಿದ್ದು ನಿರುದ್ಯೋಗಿ ಮತ್ತು ಅರೇ ಉದ್ಯೋಗಿ ಕೃಷಿ ಕಾರ್ಮಿಕರಿಗೆ ಪೂರ್ಣಾವಧಿ ಉದ್ಯೋಗಗಳನ್ನು ಒದಗಿಸುವ ವ್ಯವಸ್ಥೆ ಮಾಡಲಾಗಿದೆ.
೨೦ ಅಂಶಗಳ ಆರ್ಥಿಕ ಕಾರ್ಯಕ್ರಮ ಭಾರತದ ಮಾಜಿ ಪ್ರಧಾನಮಂತ್ರಿ ಶ್ರೀಮತಿ ಇಂದಿರಾಗಾಂಧಿಯವರು ಜುಲೈ ೧೯೭೫ರಲ್ಲಿ ೨೦ ಅಂಶಗಳ ಆರ್ಥಿಕ ಕಾರ್ಯಕ್ರಮವೊಂದನ್ನು ಘೋಷಿಸಿ, ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನದಲ್ಲಿ ತರಲು ಎಲ್ಲಾ ರಾಜ್ಯ ಸರ್ಕಾರಗಳಿಗೆ ಕೇಳಿಕೊಂಡರು. ಅವರು ಈ ಕಾರ್ಯಕ್ರಮವನ್ನು ಜನವರಿ ೧೪, ೧೯೮೧ ರಂದು ಪರಿಷ್ಕರಿಸಿದರು. ಈ ಕಾರ್ಯಕ್ರಮದ ಪ್ರಕಾರ ಭೂ ರಹಿತ ಕೃಷಿ ಕಾರ್ಮಿಕರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ರಾಜ್ಯ ಸರ್ಕಾರಗಳು ಹಲವಾರು ಕ್ರಮಗಳನ್ನು ಕೈಗೊಂಡಿದೆ.
ಒಕ್ಕಲುತನದಲ್ಲಿ ಜೀತ ಪದ್ಧತಿಯು ಬಹಳ ಹಿಂದಿನಿಂದಲೂ ಬಂದ ಪದ್ಧತಿಯಾಗಿದೆ. ಈ ಪದ್ಧತಿಯಲ್ಲಿ ಕೃಷಿ ಕಾರ್ಮಿಕರು ಜೀತದ ಆಳುಗಳಾಗಿ ಗುಲಾಮರಾಗಿ ಬಾಳುತ್ತಾರೆ. ಇದನ್ನು ತಡೆಯಲು ೧೯೭೬ರಲ್ಲಿ ಜೀತ ಪದ್ಧತಿಯು ನಿರ್ಮೂಲನಾ ಕಾಯ್ದೆಯನ್ನು ಜಾರಿಗೆ ತರಲಾಗಿದೆ.
ಇತ್ತೀಚೆಗೆ ಲಭ್ಯವಾದ ಅಂಕಿ ಅಂಶಗಳ ಪ್ರಕಾರ ೩೧ ಮಾರ್ಚ್ ೧೯೯೩ರ ವರೆಗೆ ರಾಜ್ಯ ಸರ್ಕಾರಗಳು ೨,೫೧,೫೦೦ ಜೀತದಾಳುಗಳನ್ನು ಗುರುತಿಸಿ ಅವರನ್ನು ಮುಕ್ತಗೊಳಿಸಿ ಇವರ ಪೈಕಿ ಶೇಕಡ ೮೦%ರಷ್ಟು ಜೀತದಾಳುಗಳಿಗೆ ಅಂದರೆ ೨,೨೭, ೫೦೦ ಜೀತದಾಳುಗಳಿಗೆ ಸ್ವತಂತ್ರವಾಗಿ ಜೀವಿಸಲು ಅವಕಾಶ ಮಾಡಿಕೊಡಲಾಯಿತು. ಇದೂ ಅಲ್ಲದೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಜೀತ ಪದ್ಧತಿಯ ನಿರ್ಮೂಲನಕ್ಕಾಗಿ ಹಾಗೂ ಜೀತದಾಳುಗಳ ಪುನರ್ ನೆಲೆಗಾಗಿ ಸಹಾಯ ಧನವನ್ನು ನೀಡುತ್ತಿದೆ. ಪ್ರತಿಯೊಬ್ಬ ಜೀತದಾಳುವಿಗೆ ನೀಡುವ ಸಹಾಯಧನವು ೪,೦೦೦ ರೂ. ಗಳಷ್ಟಿತ್ತು. ಅದನ್ನು ಕೇಂದ್ರ ಸರ್ಕಾರವು ೧ ಫೆಬ್ರವರಿ ೧೯೮೬ ರಿಂದ ೬,೨೫೦ ರೂ. ಗಳಿಗೆ ಏರಿಸಿತು ಹಾಗೂ ೧ ಆಗಸ್ಟ್ ೧೯೯೪ರಿಂದ ಅದನ್ನು ೧೦,೦೦೦ ರೂ.ಗಳಿಗೆ ಏರಿಸಿತು.
ಕೃಷಿ ಕಾರ್ಮಿಕರ ಸುಧಾರನೆಗಾಗಿ ಗ್ರಾಮೀಣ ಶ್ರಮಿಕರ ಬಗೆಗಿನ ರಾಷ್ಟ್ರೀಯ ಆಯೋಗದ
ಶಿಫಾರಸ್ಸುಗಳು :
ಗ್ರಾಮೀಣ ಶ್ರಮಿಕರ ಬಗೆಗಿನ ರಾಷ್ಟ್ರೀಯ ಆಯೋಗವು ಕಾರ್ಮಿಕರ ಸ್ಥಿತಿಗತಿಗಳ ಸುಧಾರಣೆಗಾಗಿ ಕೆಲವು ಮಹತ್ವದ ಶಿಫಾರಸ್ಸುಗಳನ್ನು ಮಾಡಿದೆ. ಸದ್ಯದ ಪರಿಸ್ಥಿತಿಯಲ್ಲಿ ಗ್ರಾಮೀನ ಪ್ರದೇಶಗಳಲ್ಲಿ ಕಂಡುಬರುವ ವ್ಯವಸಾಯ ವ್ಯವಸ್ಥೆಯನ್ನು ಸುಧಾರಿಸಲು ಅಸಾಧ್ಯವಾಗಿದೆ. ಅನೇಕ ಚಿಕ್ಕ ಅಂಚಿನ ರೈತರು ತಮ್ಮ ಅತಿಚಿಕ್ಕ ಭೂ ಹಿಡುವಳಿಗಳನ್ನು ದೊಡ್ಡ ದೊಡ್ಡ ಜಮೀನುದಾರರಿಗೆ ಮಾರಾಟ ಮಾಡಿ ಕೃಷಿ ಕಾರ್ಮಿಕರಾಗುತ್ತಿದ್ದಾರೆ. ಹೀಗಾಗಿ ಕೃಷಿ ಕಾರ್ಮಿಕರ ಸಂಖ್ಯೆ ಅಧಿಕವಾಗುತ್ತಿದೆ. ಹೊಸ ಕೃಷಿ ತಂತ್ರವು ಕೇವಲ ದೊಡ್ಡ ಜಮೀನುದಾರರಿಗೆ ಮಾತ್ರ ಪ್ರಯೋಜನಕಾರಿಯಾಗಿದೆ. ಏಕೆಂದರೆ ಅದು ಮಾರುಕಟ್ಟೆ ಆಧಾರಿತವಾಗಿದ್ದು, ಹೆಚ್ಚು ಬಂಡವಾಳ ಮತ್ತು ಕಡಿಮೆ ಶ್ರಮವನ್ನು ಬಳಸುವಂತಾಗಿದೆ. ಆದ್ದರಿಂದ ಅದು ಚಿಕ್ಕ ರೈತರಿಗೆ ಎಳ್ಳಷ್ಟೂ ಪ್ರಯೋಜನವಾಗಿಲ್ಲ. ಏಕೆಂದರೆ ಅವರಲ್ಲಿ ಹೊಸ ತಂತ್ರವನ್ನು ಬಳಸಲು ಸಾಕಷ್ಟು ಸಂಪನ್ಮೂಲಗಳಿರುವುದಿಲ್ಲ. ಅದರ ಬಗೆಗಿನ ಜ್ಞಾನವು ಅವರಿಗಿರುವುದಿಲ್ಲ. ಅಲ್ಲದೆ ಅದರಿಂದಾಗಬಹುದಾದ ನಷ್ಟ ಭಯವನ್ನು ಎದುರಿಸುವ ಸಾಮರ್ಥ್ಯವೂ ಅವರಿಗಿರುವುದಿಲ್ಲ. ಹೀಗಾಗಿ ಚಿಕ್ಕ ಹಾಗೂ ಅಂಚಿನ ರೈತರು ಸುಧಾರಿತ ರೀತಿಯಲ್ಲಿ ವ್ಯವಸಾಯ ಮಾಡಲು ಅಸಮರ್ಥರಾಗಿದ್ದಾರೆ. ಆದರೆ ಅದೇ ವೇಳೆಗೆ ಸುಧಾರಿತ ಆರ್ಥಿಕ ಕ್ರಮಗಳಿಂದ ಅವರಿಗೆ ತಮ್ಮ ಚಿಕ್ಕ ಹಿಡುವಳಿಗಳನ್ನು ಲಾಭದಾಯಿಕವಾಗಿ ಊಳಲು ಹಾಗೂ ಅವುಗಳಿಂದ ಸಾಕಷ್ಟು ಆದಾಯ ಪಡೆಯಲು ಅಸಾಧ್ಯವಾಗಿದೆ. ಹೀಗಾಗಿ ಅವರು ತಮ್ಮ ಚಿಕ್ಕ ಜಮೀನುಗಳನ್ನು ಮಾರಾಟ ಮಾಡಿ ಕೃಷಿ ಕಾರ್ಮಿಕರಿಗೆ ದುಡಿಯುವುದೇ ಮೇಲು ಎಂಬ ಭಾವನೆ ಅಧಿಕವಾಗುತ್ತಿದೆ. ಆದ್ದರಿಂದಲೇ ಅವರ ಸಂಖ್ಯೆ ಇಂದು ಅಧಿಕವಾಗುತ್ತಿದೆ.
ಸದ್ಯದ ಪರಿಸ್ಥಿತಿಯಲ್ಲಿ ಚಿಕ್ಕ ಹಾಗೂ ಅಂಚಿನ ರೈತರಿಗೆ ಹೆಚ್ಚಿನ ಜಮೀನನ್ನು ಕೊಟ್ಟು ಅವರ ಹಿಡುವಳಿಗಳ ಗಾತ್ರವನ್ನು ಹೆಚ್ಚಿಸಲು ಸಾಧ್ಯವಿಲ್ಲವಾಗಿದ್ದರಿಂದ ಅವರನ್ನು ಹೊಲದೊಡೆಯರನ್ನಾಗಿ ಮಾಡುವುದು ಅವಾಸ್ಥವಿಕವೇ ಆಗಿದೆ. ಆದ್ದರಿಂದ ಕೃಷಿ ಕಾರ್ಮಿಕರ ಸಂಖ್ಯೆಯು ಅಧಿಕವಾಗುತ್ತಿದ್ದು ಅವರ ಪರಿಸ್ಥಿತಿಯು ಭಾರಿ ಕಷ್ಟದಾಯಕವಾಗುತ್ತಿದೆ. ಅವರ ಇಂಥ ಪರಿಸ್ಥಿತಿಯ ಸುಧಾರಣೆಗಾಗಿ ರಾಷ್ಟ್ರೀಯ ಗ್ರಾಮೀಣ ಶ್ರಮಿಕರ ಆಯೋಗವು ಕೆಳಗೆ ಕೊಟ್ಟ ಶಿಫಾರಸ್ಸುಗಳನ್ನು ಮಾಡಿದೆ.
೧.ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಯ ಸುಧಾರಣೆಗಾಗಿ ಬಹುಮುಖ ಕಾರ್ಯಕ್ರಮವನ್ನು ಕೈಗೊಳ್ಳಬೇಕು. ನೀರಾವರಿ, ನೆರೆನಿಯಂತ್ರಣ, ಚರಂಡಿಯ ವ್ಯವಸ್ಥೆ, ಗ್ರಾಮೀಣ ವಿದ್ಯುಚ್ಛಕ್ತಿ, ಒಣಬೇಸಾಯ ಮೊದಲಾದವುಗಳನ್ನು ಕೈಗೊಂಡು ಅವುಗಳ ಮೂಲಕ ಕೃಷಿ ಉತ್ಪಾದನೆಯನ್ನು ಹಾಗೂ ಪ್ರದೇಶಗಳಲ್ಲಿ ಉದ್ಯೋಗವಕಾಶಗಳನ್ನು ಹೆಚ್ಚಿಸಬೇಕು.
೨.ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗವಕಾಶಗಳನ್ನು ನಿರ್ಮಿಸುವ ಹೊಸ ಹೊಸ ಯೋಜನೆಗಳನ್ನು ಕೈಗೊಳ್ಳಬೇಕು. ಅದೇ ವೇಳೆಗೆ ಕನಿಷ್ಟ ಕೂಲಿ ದರಗಳನ್ನು ಹಾಗೂ ಸಾಮಾಜಿಕ ಭದ್ರತೆಯ ಯೋಜನೆಗಳನ್ನು ಜಾರಿಗೊಳಿಸಬೇಕು.
೩.ಕೃಷಿ ಕಾರ್ಮಿಕರಿಗೆ ಮನೆ ಕಟ್ಟಿಕೊಳ್ಳಲು ನಿವೇಶನಗಳನ್ನು ಮತ್ತು ಕಟ್ಟಿದ ಮನೆಗಳನ್ನು ಉಚಿತವಾಗಿ ಇಲ್ಲವೇ ಅತೀ ಕಡಿಮೆ ಬೆಲೆಗೆ ಒದಗಿಸಬೇಕು ಅಲ್ಲದೆ ಅವರು ಕೃಷಿ ಆಧಾರಿತ ಚಟುವಟಿಕೆಗಳಾದ ದನ-ಕರು, ಕೋಳಿ ಸಾಕುವಿಕೆ, ಹೈನೋದ್ಯಮ ಮೊದಲಾದವುಗಳನ್ನು ಕೈಕೊಳ್ಳಲು ಅವರಿಗೆ ಎಲ್ಲಾ ರೀತಿಯಿಂದ ಉತ್ತೇಜನ ನೀಡಬೇಕು.
೪.ಕೇಂದ್ರ ಸರ್ಕಾರವು ಕೃಷಿ ಕಾರ್ಮಿಕರ ರಕ್ಷಣೆಗಾಗಿ ಪ್ರತ್ಯೇಕವಾದ ಕಾನೂನನ್ನು ಪಾಸು ಮಾಡಬೇಕು. ಇದರ ಮೂಲಕ ಅವರ ಯೋಗಕ್ಷೇಮವನ್ನು ಸಾಧಿಸಬಹುದಾಗಿದೆ.
೫.ಕೇಂದ್ರ ಮತ್ತು ರಾಜ್ಯಗಳ ಮಟ್ಟದಲ್ಲಿ ಗ್ರಾಮೀಣ ಕಾರ್ಮಿಕ ಇಲಾಖೆಯೆಂಬ ಪ್ರತ್ಯೇಕ ಇಲಾಖೆಯನ್ನು ಪ್ರಾರಂಭಿಸಬೇಕು. ಅದಕ್ಕೆ ಗ್ರಾಮೀಣ ಕಾರ್ಮಿಕರ ಯೋಗಕ್ಷೇಮವನ್ನು ನೋಡಿಕೊಳ್ಳುವ ಹೊಣೆಗಾರಿಕೆಯನ್ನು ವಹಿಸಿಕೊಡಬೇಕು.
೬.ಗ್ರಾಮೀಣ ಕಾರ್ಮಿಕರು ಕೈಗಾರಿಕಾ ಕಾರ್ಮಿಕರಂತೆ ಕಾರ್ಮಿಕ ಸಂಘಗಳನ್ನು ರಚಿಸಿಕೊಳ್ಳುವಂತೆ ಅವರಿಗೆ ಉತ್ತೇಜನ ಮತ್ತು ಮಾರ್ಗದರ್ಶನ ನೀಡಬೇಕು.
೭.ಗ್ರಾಮೀಣ ಕೃಷಿ ಮಹಿಳಾ ಕಾರ್ಮಿಕರಿಗಾಗಿ ಕೃಷಿ ಕಾರ್ಮಿಕರ ಕಲ್ಯಾಣ ನಿಧಿಯನ್ನು ರಚಿಸಬೇಕೆಂದೂ, ಅದನ್ನು ಗ್ರಾಮೀಣ ಕೃಷಿ ಮಹಿಳಾ ಕಾರ್ಮಿಕರ ಹೆರಿಗೆ, ನಿವೃತ್ತಿ ವೇತನ ಮೊದಲಾದವುಗಳಿಗೆ ಉಪಯೋಗಿಸಬೇಕು. ಈ ನಿಧಿಯ ರಚನೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮ ಪ್ರಮಾಣದಲ್ಲಿ ವಂತಿಗೆಯನ್ನು ಸಲ್ಲಿಸಬೇಕು.
ಒಟ್ಟಿನಲ್ಲಿ ಹೇಳಬೇಕೆಂದರೆ ಗ್ರಾಮೀಣ ಕೃಷಿ ಕಾರ್ಮಿಕರು ಸಮಾಜದ ಅತ್ಯಂತ ಬಡತನದ ವರ್ಗವಾಗಿದ್ದು ಅವರನ್ನು ಬಡತನ ರೇಖೆಯಿಂದ ಮೇಲೆತ್ತಲು ಹಾಗೂ ಅವರ ಸರ್ವಾಂಗೀಣ ಯೋಗಕ್ಷೇಮವನ್ನು ಸಾಧಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಯೋಗವು ಶಿಫಾರಸ್ಸು ಮಾಡಿರುತ್ತದೆ. ಕೇಂದ್ರ ಸರ್ಕಾರವು ಈ ದಿಶೆಯಲ್ಲಿ ಕಾರ್ಯೋನ್ಮುಖವಾಗಿದೆ.

ಕೃಷಿ ಕಾರ್ಮಿಕರ ಕೃಷಿ ಕೂಲಿ :
ಕೂಲಿ ಎಂದರೆ ಆ ದಿನದ ಕೊನೆಯಲ್ಲಿ ಅಥವಾ ವಾರದ ಕೊನೆಯಲ್ಲಿ ಶ್ರಮಿಕನಿಗೆ ಕೊಡುವ ಸಂಭಾವನೆ. ವಸ್ತುಗಳನ್ನು ಉತ್ಪಾದಿಸಲು ಶ್ರಮಕ್ಕೆ ಕೊಡುವ ಪ್ರತಿಫಲವೇ ಕೂಲಿ. ಕಾರ್ಮಿಕರು ತಮ್ಮ ಶಕ್ತಿ ಸಾಮರ್ಥ್ಯಗಳನ್ನು ಮಾಲೀಕನಿಗೆ ಒಪ್ಪಿಸಿ ಅದಕ್ಕೆ ಪ್ರತಿಫಲವಾಗಿ ಸಂಭಾವನೆ ಪಡೆಯುವರು. ಕಾರ್ಮಿಕರ ದುಡಿಮೆಯಿಂದ ಲಭ್ಯವಾದ ಉತ್ಪನ್ನದ ಮೊತ್ತಕ್ಕೆ ಅನುಗುಣವಾಗಿ ಅವರಿಗೆ ಕೂಲಿಯನ್ನು ನಿರ್ಧರಿಸಲಾಗುವುದು. ಕೂಲಿಯನ್ನು ಜೀತ ವೇತನ ಎಂದು ಕರೆಯುತ್ತಾರೆ. ಕೃಷಿ ಕೂಲಿ ಎಂದರೆ ಕೃಷಿ ಕಾರ್ಮಿಕ ತನ್ನ ಶ್ರಮ ಸಲ್ಲಿಸಿದ್ದಕ್ಕಾಗಿ ಪಡೆಯುವ ಸಂಭಾವನೆ.
ಕೃಷಿ ಕೂಲಿಯನ್ನು ಕಾರ್ಮಿಕರುಗಳಿಗೆ ಪಾವತಿ ಮಾಡುವಲ್ಲಿ ೨ ಪದ್ಧತಿಗಳು ಬಳಕೆಯಲ್ಲಿವೆ.
೧.ದಿನಗೂಲಿ : ಕೆಲಸ ಮಾಡುವ ಕಾಲಕ್ಕನುಗುಣವಾಗಿ ಕೊಡುವ ಕೂಲಿ
೨.ಗುತ್ತಿಗೆ ಕೂಲಿ: ಮಾಡಬೇಕಾದ ಕೆಲಸವನ್ನು ಗುತ್ತಿಗೆ ಕೊಟ್ಟು ಅದಕ್ಕೆ ತಕ್ಕಂತೆ ಕೂಲಿಯನ್ನು ಪಾವತಿ ಮಾಡುವುದು.
ಕಾಲಕ್ಕನುಗುಣ ಕೂಲಿ ಪದ್ಧತಿಯಲ್ಲಿ ಕೃಷಿ ಕಾರ್ಮಿಕರನ ಕೂಲಿ ಅವನು ಮಾಡಿದ ಕೆಲಸದ ಪ್ರಯಾಣವನ್ನಾಗಲೀ, ಕೆಲಸದ ಗುಣಮಟ್ಟವನ್ನಾಗಲೀ ಅವಲಂಭಿಸಿರುವುದಿಲ್ಲ. ಇಲ್ಲಿ ಕೃಷಿ ಕೂಲಿ ಕಾರ್ಮಿಕರ ಕೆಲಸದಲ್ಲಿ ನಿರತನಾಗಿದ್ದ ಕಾಲವನ್ನು ಅವಲಂಭಿಸಿರುತ್ತದೆ. ಆದರೆ ಈ ಪದ್ಧತಿಯಲ್ಲಿ ಕಾರ್ಮಿಕನ ಮೇಲೆ ಮೇಲುಸ್ತುವಾರಿ ಅಗತ್ಯ.
ಕೈಗಾರಿಕಾ ಕ್ಷೇತ್ರದಲ್ಲಿ ಕಾರ್ಯವನ್ನು ಕೈಗೊಳ್ಳುವುದು ಸುಲಭ. ಆದರೆ ಕೃಷಿ ಕ್ಷೇತ್ರದಲ್ಲಿ ಇದು ಕಷ್ಟ. ಮುಂದುವರಿದ ರಾಷ್ಟ್ರಗಳಲ್ಲಿ ಕೆಲಸಗಾರರ ನೇಮಕಕ್ಕೆ ಕೃಷಿ ರಂಗವೂ ಇತರ ಉದ್ಯಮ ರಂಗಗಳೊಂದಿಗೆ ಪೈಪೋಟಿ ನಡೆಸಬೇಕಾಗುತ್ತದೆ. ಅಲ್ಲಿ ಕಾರ್ಮಿಕರುಗಳನ್ನು ಕೃಷಿ ರಂಗಕ್ಕೆ ಆಕರ್ಷಿಸಬೇಕಾದರೆ ಹೆಚ್ಚಿನ ಕೂಲಿ ಮರಗಳನ್ನು ನೀಡಬೇಕಾಗುತ್ತದೆ. ಕೆಲವು ಕಾರ್ಯಗಳಲ್ಲಿ ಗುತ್ತಿಗೆ ಕೂಲಿ ವಾಡಿಕೆಯಲ್ಲಿದೆ. ಹತ್ತಿ ಬಿಡಿಸುವುದು, ನೆಲಗಡಲೆ, ಆಲೂಗಡ್ಡೆಗಳನ್ನು ಅಗೆದು ಅದನ್ನು ಬಿಡಿಸುವುದು, ಇಷ್ಟು ಚೀಲ ಹತ್ತಿ ಬಿಡಿಸಿದರೆ ಇಷ್ಟು ಕೂಲಿ ಎಂದು ನಿಗದಿ ಮಾಡಲಾಗಿರುತ್ತದೆ. ಹೆಚ್ಚು ಹತ್ತಿ ಬಿಡಿಸಿದವನು ಹೆಚ್ಚು ಕೂಲಿ ಪಡೆಯುತ್ತಾನೆ. ಇಲ್ಲಿ ಗುತ್ತಿಗೆ ಕೂಲಿ ಕೊಡುವ ಉದ್ದೇಶ ಕೆಲಸದಲ್ಲಿ ಹೆಚ್ಚಿನ ಆಸಕ್ತಿ ತೋರಿಸಲಿ ಎನ್ನುವುದು. ದಿನಗೂಲಿಯ ಮೇಲೆ ನೇಮಕ ಮಾಡಿಕೊಳ್ಳುವ ಕಾರ್ಮಿಕ ಈ ಕಾರ್ಯಗಳಲ್ಲಿ ವಿಶೇಷ ಆಸಕ್ತಿ ತೋರಿಸಲಾರ. ಕೈಗಾರಿಕಾ ಕಾರ್ಮಿಕರಿಗೆ ಹೋಲಿಸಿದರೆ ಕೃಷಿ ಕಾರ್ಮಿಕರು ಪಡೆಯುವ ಕೂಲಿ ಅತಿ ಕಡಿಮೆ. ಬಂಗಾಳದಲ್ಲಿ ಒಬ್ಬ ಕಾರ್ಮಿಕ ೨೬೮ರೂ. ಗಳಿಸಿದರೆ ಕೃಷಿ ಕಾರ್ಮಿಕ ೧೬೦ರೂ. ಗಳಿಸುತ್ತಾನೆ. ಈ ಬಗೆಯ ತಾರತಮ್ಯಕ್ಕೆ ಪ್ರಮುಖ ಕಾರಣಗಳೆಂದರೆ;
೧.ಕೃಷಿ ಕಾರ್ಮಿಕರು ಸಂಘಟನಾ ಶಕ್ತಿ ಪಡೆದಿರುವುದಿಲ್ಲ. ಇದರಲ್ಲಿ ಮುಂದಾಳುತನ ಇಲ್ಲ. ಕಾರ್ಮಿಕ ಸಂಘಗಳನ್ನು ನೇಮಿಸಿಕೊಂಡು ಹಕ್ಕುಗಳ ಈಡೇರಿಕೆಗೆ ಹೊಡೆದಾಡುವುದಿಲ್ಲ.
೨.ಕೃಷಿ ಕಾರ್ಮಿಕರ ಪ್ರಮಾಣ ಹೆಚ್ಚು.
೩.ಕೃಷಿ ಹಿಡುವಳಿಗಳು ದೊಡ್ಡದಾಗಿಲ್ಲದಿರುವುದು.
೪.ಕೃಷಿ ಕಾರ್ಮಿಕರು ಒಂದೆಡೆ ನೆಲಸದೆ ಚೆಲ್ಲಾಪಿಲ್ಲಿಯಾಗಿರುವುದು.
೫.ಮಕ್ಕಳುಗಳನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳುವ ಬಗ್ಗೆ ನಿಯಂತ್ರಣವಿಲ್ಲದಿರುವುದರಿಂದ ಕಾರ್ಮಿಕ ಪೂರೈಕೆ ಅಧಿಕಗೊಂಡು ಕಡಿಮೆ ಕೂಲಿಗೆ ಎಡೆಮಾಡಿ ಕೊಟ್ಟಿದೆ.
೬.ಸಣ್ಣ ಉದ್ದಿಮೆದಾರರು ಎಲ್ಲಾ ಕಾರ್ಯಗಳನ್ನು ಕುಟುಂಬದ ಸದಸ್ಯರುಗಳಿಂದಲೇ ಮಾಡಿ ಮುಗಿಸುತ್ತಾರೆ. ಇದಕ್ಕೆ ಕಾರಣ ಅವರಿಗೆ ಕೂಲಿ ಕೊಡುವ ಸಾಮರ್ಥ್ಯ ಕಡಿಮೆ. ಅಗತ್ಯಬಿದ್ದರೆ ಅವರೇ ಹೆಚ್ಚು ಕಾಲ ದುಡಿಯುತ್ತಾರೆ ಅಥವಾ ಮಯ್ಯಾಳು ಪದ್ಧತಿಯನ್ವಯ ಅಕ್ಕಪಕ್ಕದ ರೈತರ ನೆರವು ಪಡೆಯುತ್ತಾರೆ. ಇಲ್ಲಿ ಕೆಲಸದ ದಕ್ಷತೆಗಿಂತ ಕೆಲಸವನ್ನು ಬೇಗ ಮಾಡಿ ಮುಗಿಸಬೇಕೆನ್ನುವ ಆತುರ ಹೆಚ್ಚು. ಅಸಮರ್ಪಕ ಕೆಲಸ ಕಡಿಮೆ ಉತ್ಪನ್ನಕ್ಕೆ ದಾರಿಯಾಗುವುದು.
೭.ಕೃಷಿ ಕಾರ್ಮಿಕರು ಅವಿದ್ಯಾವಂತರಾಗಿದ್ದು, ಭೂ ಮಾಲೀಕರೊಂದಿಗೆ ಹೆಚ್ಚು ಕೂಲಿ ಪಡೆಯಲು ಚೌಕಾಸಿ ಮಾಡುವ ಶಕ್ತಿ ಇವರಿಗಿರುವುದಿಲ್ಲ.
೮.ಋಣ ಕೂಪದಲ್ಲಿ ಬಿದ್ದು ತೊಳಲಾಡುತ್ತಿರುವ ಕೃಷಿ ಕಾರ್ಮಿಕರು ಭೂ ಮಾಲೀಕರ ಹಂಗಿಗೆ ಒಳಪಡುತ್ತಾರೆ. ಇದರಿಂದಾಗಿ ಮಾಲೀಕರೇ ನಿರ್ಧರಿಸಿದ ಕೂಲಿಗೆ ಅನ್ವಯವಾಗಿ ಅವರು ಕೆಲಸ ಮಾಡಲು ಒಪ್ಪಲೇ ಬೇಕು. ಜೊತೆಗೆ ಭೂ ಮಾಲೀಕರು ಸಮಾಜದ ಮೇಲು ಜಾತಿಗೆ ಸೇರಿದ್ದು, ಕೃಷಿ ಕಾರ್ಮಿಕರುಗಳು ಕೆಳ ಜಾತಿಗೆ ಸೇರಿರುವುದರಿಂದ ಅವರ ಶೋಷಣೆ ಇಲ್ಲಿ ಅತಿ ಸುಲಭ.
ಕೃಷಿ ಕೂಲಿ ಕಡಿಮೆ ಇರಲು ಕಾರ್ಮಿಕರ ಚೌಕಾಸಿಯ ಅಸಾಮರ್ಥ್ಯವೂ ಸಹ ಕಾರಣವಾಗಿ ಪರಿಣಮಿಸುತ್ತದೆ. ಕೃಷಿ ಕಾರ್ಮಿಕರುಗಳಿಗೆ ಬೇಡಿಕೆಯು ದೊಡ್ಡ ಹಿಡುವಳಿದಾರರಿಂದ ಬರಬೇಕು. ಸಣ್ಣ ಹಿಡುವಳಿದಾರರ ಬೇಡಿಕೆ ಬಹಳ ಕಡಿಮೆ. ಏಕೆಂದರೆ ಸಣ್ಣ ಹಿಡುವಳಿದಾರರುಗಳಿಗೆ ಕೂಲಿ ಕೊಡುವ ಶಕ್ತಿಯು ಬಹಳ ಕಡಿಮೆ. ಆದಕಾರಣ ಅವರು ತಮ್ಮ ಕೆಲಸಗಳನ್ನು ಕುಟುಂಬದವರ ಸಹಾಯದಿಂದ ಮಾಡಿಕೊಳ್ಳುತ್ತಾರೆ. ಅಗತ್ಯಬಿದ್ದರೆ ಅವರೇಗಳೇ ಹೆಚ್ಚು ವೇಳೆ ದುಡಿಯುವರು.
ಈ ಅಂಶಗಳು ಕೃಷಿ ಕೂಲಿ ಕಡಿಮೆ ಇರಲು ಕಾರಣವಾಗಿದೆ. ಕೃಷಿ ಕೂಲಿ ಕಾರ್ಮಿಕರ ಬೇಡಿಕೆ ಮತ್ತು ಪೂರೈಕೆಗಳಿಗನುಸಾರವಾಗಿ ನಿರ್ಧಾರವಾದಲ್ಲಿ ಬಡ ಕೃಷಿ ಕಾರ್ಮಿಕರ ಸ್ಥಿತಿಯಲ್ಲಿ ಸುಧಾರಣೆ ಕಾಣಬಹುದು. ಆದರೆ ಕೃಷಿ ಕೂಲಿ ಸಮಪ್ರದಾಯಗಳಿಗನುಸಾರವಾಗಿ ನಿರ್ಧಾರವಾಗುವುದು. ಕೃಷಿ ಕಾರ್ಮಿಕರ ಹೀನ ಸ್ಥಿತಿಗೆ ಅತಿ ಮುಖ್ಯ ಕಾರಣ, ಅಲ್ಲದೆ ಕೃಷಿ ಕಾರ್ಮಿಕರಿಗೆ ಬೇಡಿಕೆಯು ದೊಡ್ಡ ಹಿಡುವಳಿದಾರರಿಂದಲೇ ಬರಬೇಕು. ಆದರೆ ಕೃಷಿ ಯಾಂತ್ರೀಕರಣದಿಂದಾಗಿ ಇತ್ತೀಚೆಗೆ ಈ ಬೇಡಿಕೆ ದುರ್ಬಲಗೊಳ್ಳುತ್ತದೆ. ಇವರ ಜೊತೆಗೆ ಕೃಷಿ ಕಾರ್ಮಿಕರ ಪೂರೈಕೆ ಬೇಡಿಕೆಗಿಂತ ಹೆಚ್ಚುತ್ತಿರುವುದು ಕೂಲಿ ದರದ ಕುಸಿತಕ್ಕೆ ಕಾರಣವಾಗಿ ಪರಿಣಮಿಸಿದೆ.
ಕೃಷಿ ಕೂಲಿ ಕೆಲಸ ಮತ್ತು ಋತುಮಾನಗಳಿಗನುಸಾರವಾಗಿ ಮಾತ್ರವೇ ಅಲ್ಲದೆ ಪ್ರಾಂತ್ಯಕ್ಕೆ ಹೆಚ್ಚು ಕಡಿಮೆ ಇರುತ್ತದೆ. ರಾಜ್ಯದಿಂದ ರಾಜ್ಯಕ್ಕೆ, ರಾಜ್ಯದಲ್ಲೇ ಜಿಲ್ಲೆಯಿಂದ ಜಿಲ್ಲೆಗೆ, ಜಿಲ್ಲೆಯಲ್ಲೇ ಒಂದು ತಾಲ್ಲೂಕಿನಿಂದ ಮತ್ತೊಂದು ತಾಲ್ಲೂಕಿಗೆ ಕೃಷಿ ಕೂಲಿಯಲ್ಲಿ ವ್ಯತ್ಯಾಸ ಕಾಣಬಹುದು. ಭಾರತದಲ್ಲಿ ಕೃಷಿ ವಿಧಾನವು ಎಲ್ಲಾ ಕಡೆ ಒಂದೇ ಬಗೆಯಾಗಿರುವುದರಿಂದ ಕೃಷಿ ಕೂಲಿಯಲ್ಲೂ ಸಮಾನತೆಯನ್ನು ತರುವುದು ಕಷ್ಟ. ಇನ್ನೂ ವಿಚಿತ್ರವೆಂದರೆ ಒಂದೇ ಪ್ರದೇಶದಲ್ಲಿ ಬೇರೆ ಬೇರೆ ಜಾತಿಯವರೆಗೆ ಒಂದೇ ಬಗೆಯ ಕೆಲಸಕ್ಕೆ ಬೇರೆ ಬೇರೆ ಕೂಲಿ ಕೊಡುವ ಪದ್ಧತಿ ಉಂಟು. ಅಲ್ಲದೆ ಗಂಡಾಳುಗಳಿಗೆ ದೊರೆಯುವಷ್ಟು ಕೂಲಿಯು ಹೆಣ್ಣಾಳುಗಳಿಗೆ ಹಾಗೂ ಮಕ್ಕಳಿಗೆ ದೊರೆಯುವುದಿಲ್ಲ. ಗಂಡಾಳುಗಳು ಮಾಡುವ ಕೆಲವು ಕೆಲಸಗಳನ್ನು ಹೆಣ್ಣಾಳುಗಳು ಮಾಡಿದಾಗ್ಯೂಕ ಅವರಿಗೆ ಗಂಡಾಳುಗಳು ಪಡೆಯುವಷ್ಟು ಕೂಲಿ ಸಿಗುವುದಿಲ್ಲ. ಮಕ್ಕಳಿಗ ಇವರಿಬ್ಬರಿಗಿಂತಲೂ ಕೂಲಿ ಕಡಿಮೆ ಇರುತ್ತದೆ. ಕುಟುಂಬದ ವೆಚ್ಚವನ್ನು ಹೊರುವ ಸಲುವಾಗಿ ಸ್ತ್ರೀಯರು ಮತ್ತು ಮಕ್ಕಳು ಅನಿವಾರ್ಯವಾಗಿ ದುಡಿಯುತ್ತಾರೆ. ಯೋಜನೆಗಳ ಪೂರ್ವದ ತನಿಖಾ ಆಯೋಗಗಳ ಪ್ರಕಾರ ೧೯೫೦-೫೧ರಲ್ಲಿ ಸರಾಸರಿ ದಿನ ನಿತ್ಯದ ಗಂಡಾಳುಗಳಿಗೆ ದಿನಕ್ಕೆ ೧೦೯ ಪೈಸೆ ಇದ್ದುದು ೧೯೫೬ರಲ್ಲಿ ೯೬ ಪೈಸೆಗಳಿಗೆ ಇಳಿಯಿತು. ಹೆಣ್ಣಾಳುಗಳಿಗೆ ೬೮ ಪೈಸೆಗಳಿಂದ ೫೯ ಪೈಸೆಗಳಿಗೆ ಇಳಿಯಿತು. ಮಕ್ಕಳಿಗೆ ೭೦ ಪೈಸೆಗಳಿಂದ ೫೩ ಪೈಸೆಗಳಿಗೆ ಇಳಿಯಿತು.

ಕೃಷಿ ಕನಿಷ್ಠ ಕೂಲಿ ಕಾಯ್ದೆ ೧೯೪೮ :
೧೯೪೮ರಲ್ಲಿ ಅನುಷ್ಟಾನಕ್ಕೆ ಬಂದ ಕನಿಷ್ಠ ಕೂಲಿ ಕಾಯಿದೆಯು ಕೂಲಿ ದರಗಳನ್ನು ಕ್ರಮಬದ್ಧ ಪಡಿಸುವ ಹಾದಿಯಲ್ಲಿ ಒಂದು ಮೈಲುಗಲ್ಲಾಗಿ ಪರಿಣಮಿಸಿದೆ. ಕೂಲಿ ದರಗಳು ಕಡಿಮೆ ಇರುವ ಕಾರ್ಮಿಕ ಸಂಘಗಳಿಲ್ಲದ ಕಡೆಗಳಲ್ಲಿ ಕನಿಷ್ಠ ಕೂಲಿ ನಿಗದಿ ಪಡಿಸುವುದು ಅವಶ್ಯಕ. ಈ ಕಾಯ್ದೆ ಪ್ರಕಾರ ಕೃಷಿ ಕಾರ್ಮಿಕರು ಕನಿಷ್ಠ ಕೂಲಿಗೆ ಅರ್ಹರಾಗಿರುತ್ತಾರೆ.
ಕೃಷಿ ಕಾರ್ಮಿಕರಿಗೆ ಕನಿಷ್ಠ ಕೂಲಿಯನ್ನು ನಿಗದಿ ಮಾಡುವಾಗ ಕಾರ್ಮಿಕ ಸಾಮಾನ್ಯ ಜೀವನಮಟ್ಟ ನ್ಯಾಯವಾದ ಕೂಲಿ, ಯಜಮಾನ ಕೊಡಲು ಸಿದ್ಧವಿರುವ ಕೂಲಿದರಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಸಾಮಾನ್ಯವಾಗಿ ಗಂಡಾಳುಗಳಿಗೆ ಕೊಡುವ ಕೂಲಿಯು ಅವನ ಸಂಸಾರದ ಪೋಷಣೆಗೆ ಸಾಕಾಗುವಷ್ಟು ಇರಬೇಕು. ಆದರೆ ಸ್ತ್ರೀ ಕಾರ್ಮಿಕರುಗಳಿಗೆ ಅವರ ಜೀವನಕ್ಕೆ ಸಾಕಾಗುವಷ್ಟರ ಮಟ್ಟಿಗೆ ಕೂಲಿ ಸಿಕ್ಕರೆ ಸಾಕು. ಈ ಅಂಶಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ನಿಗದಿ ಮಾಡಿದ ಕೂಲಿ ದರವನ್ನು ಜಾರಿಗೆ ತರಲು ಜಿಲ್ಲೆ ಮತ್ತು ರಾಜ್ಯ ಮಟ್ಟಗಳಲ್ಲಿ ಕೃಷಿ ಕೂಲಿ ಮಂಡಳಿಗಳನ್ನು ರಚಿಸಬೇಕು. ಕೃಷಿ ಕೂಲಿ ಮಂಡಳಿಗಳಲ್ಲಿ ಕಾರ್ಮಿಕ ಪ್ರತಿನಿಧಿಗಳು, ಜಮೀನು ಹಿಡುವಳಿದಾರರು ಹಾಗೂ ಸರಕಾರಗಳ ಪ್ರತಿನಿಧಿಗಳಿರಬೇಕು. ಈ ಮಂಡಳಿಯು ಪ್ರತಿಯೊಂದು ಜಿಲ್ಲೆಗೂ ಕೃಷಿ ಪ್ರದೇಶಕ್ಕೂ ಕೂಲಿ ದರಗಳನ್ನು ನಿಗದಿ ಮಾಡಿ ಜಾರಿಗೆ ತರಬೇಕು. ಆದರೆ ಕನಿಷ್ಠ ಕೂಲಿಯನ್ನು ನಿಗದಿ ಮಾಡಿ ಜಾರಿಗೆ ತರುವುದು ಸುಲಭವಲ್ಲ. ಇದಕ್ಕೆ ಅನೇಕ ತೊಂದರೆಗಳಿವೆ;
೧.ಕನಿಷ್ಠ ಕೂಲಿಯನ್ನು ನಿಗದಿ ಮಾಡುವುದು ತುಂಬಾ ಪ್ರಯಾಸದ ಕೆಲಸ.
೨.ನಿಗದಿ ಮಾಡಿದ ಕೂಲಿಯನ್ನು ಮಾಲೀಕ ಕೊಡಲು ಶಕ್ತನೇ ಅಲ್ಲವೇ ಎಂಬುದನ್ನು ಗಮನಿಸಬೇಕು.
ಕೃಷಿಕನಿಗೆ ಅವನ ವೃತ್ತಿಯು ಎಷ್ಟರ ಮಟಿಗೆ ಲಾಭದಾಯಕ ಎಂಬ ಪ್ರಶ್ನೆಯನ್ನು ಇದು ಅವಲಂಭಿಸಿದೆ. ಅವನ ಉತ್ಪಾದನಾ ಕಾರ್ಯದ ಆದಾಯ ವೆಚ್ಚಗಳನ್ನು ಇದು ಅವಲಂಭಿಸಿರುವುದು. ಅದನ್ನು ಕಂಡುಹಿಡಿಯ ಬೇಕಾಗುತ್ತದೆ. ಇದು ಅಷ್ಟು ಸುಲಭವಲ್ಲ. ಉತ್ಪಾದನೆಯ ವೆಚ್ಚ ಆ ಪ್ರದೇಶದ ಬೆಳೆಗಳು ಅವುಗಳನ್ನು ಉತ್ಪಾದಿಸಲು ತಗಲುವ ವೆಚ್ಚ, ಉತ್ಪನ್ನದ ಮಟ್ಟ ಅದಕ್ಕೆ ದೊರೆಯಬಹುದಾದ ಬೆಲೆ ಇವುಗಳ ಮೇಲೆ ರೈತನ ಕಸುಬು ಲಾಭದಾಯಕವೇ ಇಲ್ಲವೇ ಎಂಬುದು ನಿರ್ಧಾರವಾಗುತ್ತದೆ. ಕೃಷಿ ಕೂಲಿಯನ್ನು ಹಣ, ಧಾನ್ಯಗಳ ರೂಪದಲ್ಲಿ ಕೊಡುವುದರಿಂದ ಸಮಾನ ಕೂಲಿದರಗಳನ್ನು ನಿಗದಿ ಮಾಡುವುದು ಕಷ್ಟ. ಹೀಗಾಗಿ ಕೂಲಿ ದರವನ್ನು ಯಾವ ಆಧಾರವಿಲ್ಲದೆ ಅಧಿಕ ಮಟ್ಟದಲ್ಲಿ ನಿಗದಿ ಮಾಡಿದರೆ ಕೊನೆಯಲ್ಲಿ ಕಾರ್ಮಿಕರಿಗೆ ಬೇಡಿಕೆ ಕಡಿಮೆಯಾಗಿ ತೊಂದರೆಯಾಗುವುದು. ಎಲ್ಲಕ್ಕೂ ಮೇಲಾಗಿ ಕೃಷಿ ಕಾರ್ಮಿಕರು ಅನಕ್ಷರಸ್ಥರು ಅವರಲ್ಲಿ ಸಂಘಟನಾ ಶಕ್ತಿ ಇಲ್ಲ. ಕನಿಷ್ಠ ಕೂಲಿಯನ್ನು ನಿಗದಿ ಮಾಡಿದರೂ ಅನೇಕ ಕಾರ್ಮಿಕರ ಗಮನಕ್ಕೆ ಬರದಿರಬಹುದು. ಕನಿಷ್ಠ ಕೂಲಿಯನ್ನು ಜಾರಿಗೆ ತಂದು ಮೇಲ್ವಿಚಾರಣೆ ನಡೆಸುವುದು ತುಂಬಾ ಅಗಾಧವಾದ ಕೆಲಸ. ಆದಾಗ್ಯೂ ಸರಕಾರ ಶ್ರದ್ಧೆ ವಹಿಸಿ ಮುಂದೆ ಬಂದು ಅವರ ಹಿತವನ್ನು ರಕ್ಷಿಸಲೇಬೇಕು. ಇದು ಸರಕಾರದ ಕರ್ತವ್ಯವೂ ಹೌದು.

ಅಧ್ಯಾಯ - ೨. ಸಾಹಿತ್ಯ ವಿಮರ್ಶೆ
ಹೊಲ-ಗದ್ದೆಗಳಲ್ಲಿ ಕೂಲಿಗಾಗಿ ದುಡಿಯುವ ಭೂ ರಹಿತ ಕೂಲಿಗಾರರಿಗೆ ಕೃಷಿ ಕಾರ್ಮಿಕರೆಂದು ಅವರ ಸಂಖ್ಯೆಯು ತೀವ್ರಗತಿಯಲ್ಲಿ ಅಧಿಕವಾಗುತಿದ್ದರೂ ಅವರ ಆರ್ಥಿಕ ಸ್ಥಿತಿಯು ಮಾತ್ರ ಶೋಚನೀಯವಾಗುತ್ತಾ ನಡೆದಿದೆ. ಸರ್ಕಾರವು ಬಹು ಕಾಲದಿಂದಲೂ ಕೈಗಾರಿಕಾ ಕಾರ್ಮಿಕರ ಹಿತರಕ್ಷಣೆಗಾಗಿ ಸಾಕಷ್ಟು ಗಮನ ಕೊಟ್ಟು ಹಲವಾರು ಕಾಯ್ದೆಗಳನ್ನು ಪಾಸು ಮಾಡಿತು. ಆದರೆ ಕೃಷಿ ಕಾರ್ಮಿಕ ಸಂಖ್ಯೆಯು ಏರುತ್ತಿದ್ದರೂ ಅವರ ಹಿತರಕ್ಷಣೆಗಾಗಿ ಇತ್ತೀಚಿನವರೆಗೆ ಸರ್ಕಾರವು ಗಮನವನ್ನೇ ಕೊಟ್ಟಿದ್ದಿಲ್ಲ. ಯಾವ ಕಾಯಿದೆಯನ್ನು ಪಾಸು ಮಾಡಿಲ್ಲ ಎಂದು ತಿಳಿಸಿದ್ದಾರೆ. (ಪ್ರೊ.ಕೆ.ಡಿ.ಬಸವ)
ಕೃಷಿ ಕಾರ್ಮಿಕರನ್ನು ಭಯ ರಹಿತ ಕೃಷಿ ಕಾರ್ಮಿಕರು ಮತ್ತು ಅತಿ ಸಣ್ಣ ಭೂ ಹಿಡುವಳಿ ಇರುವ ಕಾರ್ಮಿಕರು ಎಂಬ ೨ ವರ್ಗಗಳಿವೆ. ಭೂ ರಹಿತ ಕೃಷಿ ಕಾರ್ಮಿಕರು ಬೇರೆ ಯಾವುದೇ ಆದಾಯದ ಮೂಲಗಳು ಇಲ್ಲದಿರುವುದರಿಂದ ಅವರು ಕೂಲಿಗಾಗಿ ಸದಾ ಬೇರೆಯವರ ಭೂಮಿಯಲ್ಲಿ ದುಡಿಯುತ್ತಾರೆ. ಆದರೆ ಅತಿ ಸಣ್ಣ ಭೂ ಹಿಡುವಳಿ ಹೊಂದಿರುವ ರೈತರು ತಮ್ಮ ಭೂಮಿಯಿಂದ ಬರುವ ಆದಾಯ ಜೀವನ ಸಾಗಿಸಲು ಸಾಲದೆ ಬರುವುದರಿಂದ ತಮ್ಮ ಬಿಡುವಿನ ವೇಳೆಯಲ್ಲಿ ಬೇರೆಯವರ ಭೂಮಿಯಲ್ಲಿ ದುಡಿಯುತ್ತಾರೆ. ಮೊದಲ ಕೃಷಿ ಕಾರ್ಮಿಕರ ಸಮೀಕ್ಷಾ ಸಮಿತಿ ಭಾರತದಲ್ಲಿ ಕೃಷಿ ಕಾರ್ಮಿಕರನ್ನು (ಅ) ಹೊಂದಿಕೊಂಡ ಕಾರ್ಮಿಕರು (ಆ) ಸಾಂದರ್ಭಿಕ ಕಾರ್ಮಿಕರೆಂದು ೨ ವಿಧಗಳಾಗಿ ವಿಂಗಡಿಸಲಾಗಿದೆ. ಹೊಂದಿಕೊಂಡ ಕೃಷಿ ಕಾರ್ಮಿಕರು ಸಾಮಾನ್ಯವಾಗಿ ಯಾವುದೇ ಮೌಖಿಕ ಅಥವಾ ಲಿಖಿತ ಒಪ್ಪಂದದ ಆಧಾರದ ಮೇಲೆ ಒಬ್ಬ ರೈತರ ಕುಟುಂಬಕ್ಕೆ ಹೊಂದಿಕೊಂಡಿರುತ್ತಾರೆ. ಅವರು ಖಾಯಂ ಸ್ವರೂಪದ ಕಾರ್ಮಿಕರಾಗಿದ್ದು, ವರ್ಷವೆಲ್ಲ ಉದ್ಯೋಗ ಪಡೆಯುತ್ತಾರೆ ಹಾಗೂ ಅವರು ಬೇರೆಯವರ ಹೊಲದಲ್ಲಿ ಕೆಲಸ ಮಾಡುವಂತಿಲ್ಲ. ಅಲ್ಲದೆ ಅವರು ದೀರ್ಘಕಾಲದ ಕೆಲಸ ಮಾಡಬೇಕು. ಹೊಂದಿಕೊಂಡ ಕಾರ್ಮಿಕವರ್ಗವನ್ನು ಹೊರತು ಪಡಿಸಿ ಉಳಿಯುವ ಎಲ್ಲಾ ಕೃಷಿ ಕಾರ್ಮಿಕರು ಸಾಂದರ್ಭಿಕ ಕಾರ್ಮಿಕ ವರ್ಗದಲ್ಲಿ ಬರುತ್ತಾರೆ. ಈ ವರ್ಗದ ಜನರು ತಮಗಿಷ್ಟ ಬಂದವರ ಹೊಲದಲ್ಲಿ ದುಡಿಯುತ್ತಾರೆ ಹಾಗೂ ಪ್ರತಿದಿನದ ಆಧಾರದ ಮೇಲೆ ಕೂಲಿ ಪಡೆಯುತ್ತಾರೆ. (ಪ್ರೊ. ಎಚ್.ಆರ್. ಕೃಷ್ಣಮೂರ್ತಿ)
ಕೂಲಿಗಾಗಿ ದುಡಿಯುವ ಕೃಷಿ ಕಾರ್ಮಿಕರಲ್ಲಿ ೨ ವಿಧಗಳಿವೆ. ಭೂ ರಹಿತ ಮತ್ತು ಸಣ್ಣ ಭೂಮಿ ಇರುವವರು. ಭಾರತದಲ್ಲಿ ಸುಮಾರು ೭೦ ದಶಲಕ್ಷ ಮಂದಿ ಕೃಷಿ ಕಾರ್ಮಿಕರಿದ್ದಾರೆ ಎಂದು ಅಂದಾಜಿಸಲಾಗಿದೆ. ದ್ವಿತೀಯ ಮಹಾಯುದ್ಧದ ಬಳಕೆ ಕೃಷಿ ಕಾರ್ಮಿಕರ ಸಂಖ್ಯೆ ಅಧಿಕವಾಗುವುದಕ್ಕೆ ಜನಸಂಖ್ಯೆ ಹೆಚ್ಚಳ, ತರಬೇತಿ ರಹಿತ ಕಾರ್ಮಿಕರು, ಗೃಹ ಮತ್ತು ಗ್ರಾಮೀಣ ಕೈಗಾರಿಕೆಗಳ ನಾಶ, ಭೂ ವಿಭಜನೆ ಮತ್ತು ವಿಧ್ರೀಕರಣ ಕೂಡು ಕುಟುಂಬಗಳ ಸಂಖ್ಯೆ ಕಡಿಮೆಯಾಗಿರುವುದು ಅನೇಕ ಕಾರಣಗಳನ್ನು ನೀಡಬಹುದಾಗಿದೆ.
ಕೃಷಿ ಕಾರ್ಮಿಕರು ಬಹುತೇಕ ಅನಕ್ಷರಸ್ಥರು ಜಾತಿವ್ಯವಸ್ಥಗೆ ಕಟ್ಟುಬಿದ್ದವರು, ಅಸಂಘಟಿತ ವರ್ಗದವರು, ಬಂಡವಾಳ ಶಾಹಿಗಳ ಶೋಷಣೆಗೆ ಒಳಗಾದವರಾಗಿದ್ದಾರೆ ಮತ್ತು ಕಡಿಮೆ ಸಂಬಳಕ್ಕೆ ಹೆಚ್ಚು ಸಮಯ ದುಡಿಯುವ ವರ್ಗದವರಾಗಿದ್ದಾರೆ. ಕೃಷಿ ಕಾರ್ಮಿಕರ ಸಂಖ್ಯೆ ಅಧಿಕವಾಗುತ್ತಾ ಹೋಗುತ್ತದೆ. ಇವರ ಜೊತೆಗೆ ಕೃಷಿ ಕಾರ್ಮಿಕರ ಆರ್ಥಿಕ ಪರಿಸ್ಥಿತಿ ಮತ್ತು ಸಾಮಾಜಿಕ ಸ್ಥಾನಮಾನ ಕುಸಿಯುತ್ತಿದೆ. ಕೃಷಿಯು ಋತು ಸಂಭವಿಯಿಂದ ಚಟುವಟಿಕೆಯಿಂದಾಗಿರುವುದರಿಂದ ಅಪೂರ್ಣೋದ್ಯೋಗ ಕಡಿಮೆ. ಕೂಲಿ ದೊರೆಯುವುದರಿಂದ ಕನಿಷ್ಟ ಜೀವನ ಮಟ್ಟವನ್ನು ಕೃಷಿ ಕಾರ್ಮಿಕರು ಸಾಗಿಸುತ್ತಿದ್ದಾರೆ.
ಭಾರತದ ಕೃಷಿ ಕಾರ್ಮಿಕರು ಬಹುತೇಕವಾಗಿ ಹರಿಜನ, ಗಿರಿಜನ ಮತ್ತು ಹಿಂದುಳಿದ ವರ್ಗದವರಾಗಿರುವುದರಿಂದ ನಿಕೃಷ್ಟ ಸಾಮೂಹಿಕ ಜೀವನವನ್ನು ಸಾಗಿಸುತ್ತಿದ್ದಾರೆ. ಕೃಷಿ ಕಾರ್ಮಿಕರ ಸ್ಥಿತಿಯ ಸುಧಾರಣೆಗೆ ಸಂಬಂಧ ಪಟ್ಟಂತೆ ಜೀತ ಪದ್ಧತಿ ಕೃಷಿ ಕಾರ್ಮಿಕರಿಗೆ ಪುನರ್ವಸತಿ, ಗೃಹ ಮತ್ತು ಗ್ರಾಮೀಣ ಕೈಗಾರಿಕೆಗಳ ಹೆಚ್ಚಳ, ಸಹಕಾರಿ ಕೃಷಿ ಕ್ರಮವನ್ನು ಅನುಷ್ಠಾನಕ್ಕೆ ತರುವುದು ದುಡಿಮೆಯ ಅವಧಿಯನ್ನು ೮ ಗಂಟೆಗಳಿಗೆ ಸೀಮಿತಗೊಳಿಸುವುದು. ಕನಿಷ್ಠ ವೇತನವನ್ನು ನಿಗಧಿಗೊಳಿಸುವುದರಿಂದ ಅವರ ಪರಿಸ್ಥಿತಿ ಸುಧಾರಿಸಬಹುದು. (ಎಂ.ಎಸ್.ಕಲ್ಲೂರು)
ಗ್ರಾಮೀಣ ವಲಯದಲ್ಲಿ ಕೃಷಿ ಕಾರ್ಮಿಕರು ಅತ್ಯಮತ ಮುಖ್ಯವಾದ ಒಂದು ವರ್ಗದ ಜನರಾಗಿದ್ದಾರೆ. ಇವರೂ ಸಹ ಕೃಷಿಯಲ್ಲಿ ನಿರತರಾಗಿರುವ ಜನರಾಗಿರುವರು. ಕೃಷಿ ಕಾರ್ಮಿಕರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ತೀರಾ ಹಿಂದುಳಿದ ವರ್ಗದವರಾಗಿರುತ್ತಾರೆ. ಇವರು ದಾರುಣ ಬಡತನದಲ್ಲಿ ಜೀವಿಸುತ್ತಿದ್ದು ಗ್ರಾಮೀಣ ಅರ್ಥ ವ್ಯವಸ್ಥೆಯಲ್ಲಿ ನಿರ್ಲಕ್ಷಕ್ಕೆ ಒಳಗಾಗಿರುವವರು ಕೃಷಿ ಉತ್ಪಾದನೆಗೆ ಕೃಷಿ ಕಾರ್ಮಿಕರು ಅವಶ್ಯಕವಾದ ವರ್ಗದ ಜನರಾಗಿರುತ್ತಾರೆ.
ಸಮಸ್ಯೆಯ ತೀವ್ರತೆ ನಿಖರವಾದ ಸಂಖ್ಯೆ ಅವರ ಆದಾಯ ಜೀವನ ಮಟ್ಟ ಮೇಲಾದ ವಿಷಯಗಳ ಬಗೆಗೆ ಅಂಕಿ ಸಂಖ್ಯೆಗಳ ತೀವ್ರ ಕೊರತೆ ಇದೆ. ಕೆಲವು ಸಮಿತಿಗಳು ಅಯೋಗಗಳ ವರದಿಗಳ ರೂಪದಲ್ಲಿ ಸ್ವಲ್ಪ ಮಾಹಿತಿ ಲಭ್ಯವಾಗುತ್ತದೆ. ೧೯೬೦ರಲ್ಲಿ ಪ್ರಕಟಿಸಲಾದ ೨ನೇಯ ಕೃಷಿ ಕಾರ್ಮಿಕರ ಪರಿಶೋಧನಾ ಸಮಿತಿಯ ವರದಿಯ ಪ್ರಕಾರ ಒಟ್ಟು ಗ್ರಾಮೀಣ ಕುಟುಂಬಗಳಲ್ಲಿ ಶೇ.೨೫ರಷ್ಟು ಕೃಷಿ ಕಾರ್ಮಿಕರು ಈ ವರದಿಯ ಮೇರೆಗೆ ಗ್ರಾಮೀಣ ಕೆಲಸಗಾರರಲ್ಲಿ ಶೇ.೮೫ರಷ್ಟು ಅನಿಯಮಿತ ಕಾರ್ಮಿಕರಾಗಿದ್ದು ತಮ್ಮನ್ನು ನೇಮಿಸಿಕೊಳ್ಳಲು ಇಚ್ಛಿಸುವ ಯಾವುದೇ ಕೃಷಿಕರಿಗಾಗಿ ಕೆಲಸ ಮಾಡುವ ವರ್ಗದವರಾಗಿರುತ್ತಾರೆ. ಉಳಿದ ಶೇ.೧೫ರಷ್ಟು ಜನರು ಮಾತ್ರ ನಿರ್ದಿಷ್ಟ ಭೂ ಮಾಲೀಕರ ಜಮೀನಿನಲ್ಲಿ ಕೆಲಸ ಮಾಡುವವರಾಗಿರುತ್ತಾರೆ. ಸುಮಾರು ಶೇ.೫೦ರಷ್ಟು ಜನ ಸ್ವಲ್ಪವೂ ಭೂಮಿಯನ್ನು ಹೊಂದಿರುವುದಿಲ್ಲ. ಉಳಿದ ಕೃಷಿ ಕಾರ್ಮಿಕರು ತೀರಾ ಚಿಕ್ಕ ಪ್ರಮಾಣದ ಜಮೀನನ್ನು ಹೊಂದಿರುತ್ತಾರೆ. ಬಹುತೇಕ ಕೃಷಿ ಕಾರ್ಮಿಕರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೇ ಹಿಂದುಳಿದ ವರ್ಗಗಳಿಗೆ ಸೇರಿದ ಜನರಾಗಿರುತ್ತಾರೆ. ಒಂದು ಅಂದಾಜಿನ ಪ್ರಕಾರ ಶೇ.೭೫ರಿಂದ ೮೦ರಷ್ಟು ಕೃಷಿ ಕಾರ್ಮಿಕರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ. (ಎಚ್.ಆರ್.ಕೃಷ್ಣಯ್ಯಗೌಡ)
ಕೃಷಿ ಕಾರ್ಮಿಕರ ಕೂಲಿಯ ಮೇಲೆ ಹೆಚ್ಚಿನ ಗಮನ ಹರಿಸಿದ್ದಾರೆ. ಕೂಲಿ ಎಂದರೆ ಆ ದಿನದ ಕೊನೆಯಲ್ಲಿ ಅಥವಾ ವಾರದ ಕೊನೆಯಲ್ಲಿ ಶ್ರಮಿಕನಿಗೆ ಕೊಡುವ ಸಂಭಾವನೆ ವಸ್ತುಗಳ ಉತ್ಪಾದಿಸಲು ಶ್ರಮಕ್ಕೆ ಕೊಡುವ ಪ್ರತಿಫಲವೇ ಕೂಲಿ. ಕಾರ್ಮಿಕರು ತಮ್ಮ ಶಕ್ತಿ, ಸಾಮರ್ಥ್ಯಗಳನ್ನು ಮಾಲಿಕನಿಗೆ ಒಪ್ಪಿಸಿ ಅದಕ್ಕೆ ಪ್ರತಿಫಲವಾಗಿ ಸಂಭಾವನೆ ಪಡೆಯುವರು. ಕಾರ್ಮಿಕರ ದುಡಿಮೆಯಿಂದ ಲಭ್ಯವಾದ ಉತ್ಪನ್ನದ ಮೊತ್ತಕ್ಕೆ ಅನುಗುಣವಾಗಿ ಅವರಿಗೆ ಕೂಲಿಯನ್ನು ನಿರ್ಧರಿಸಲಾಗುವುದು. ಕೂಲಿಯನ್ನು ಜೀತ ವೇತನ ಎಂದು ಕರೆಯುತ್ತಾರೆ. ಕೃಷಿ ಕೂಲಿ ಎಂದು ಕಾರ್ಮಿಕ ತನ್ನ ಶ್ರಮ ಸಲ್ಲಿಸಿದ್ಧಕ್ಕಾಗಿ ಪಡೆಯುವ ಸಂಭಾವನೆ.
ಕೃಷಿ ಕೂಲಿಯನ್ನು ಕಾರ್ಮಿಕರುಗಳಿಗೆ ಪಾವತಿ ಮಾಡುವಲ್ಲಿ ೨ ಪದ್ಧತಿಗಳು ಬಳಕೆಯಲ್ಲಿವೆ.
೧.ದಿನಗೂಲಿ : ಕೆಲಸ ಮಾಡುವ ಕಾಲಕ್ಕನುಗುಣವಾಗಿ ಕೊಡುವ ಕೂಲಿ
೨.ಗುತ್ತಿಗೆ ಕೂಲಿ: ಮಾಡಬೇಕಾದ ಕೆಲಸವನ್ನು ಗುತ್ತಿಗೆ ಕೊಟ್ಟು ಅದಕ್ಕೆ ತಕ್ಕಂತೆ ಕೂಲಿಯನ್ನು ಪಾವತಿ ಮಾಡುವುದು.
ಕಾಲಕ್ಕನುಗುಣ ಕೂಲಿ ಪದ್ಧತಿಯಲ್ಲಿ ಕೃಷಿ ಕಾರ್ಮಿಕರನ ಕೂಲಿ ಅವನು ಮಾಡಿದ ಕೆಲಸದ ಪ್ರಯಾಣವನ್ನಾಗಲೀ, ಕೆಲಸದ ಗುಣಮಟ್ಟವನ್ನಾಗಲೀ ಅವಲಂಭಿಸಿರುವುದಿಲ್ಲ. ಇಲ್ಲಿ ಕೃಷಿ ಕೂಲಿ ಕಾರ್ಮಿಕರ ಕೆಲಸದಲ್ಲಿ ನಿರತನಾಗಿದ್ದ ಕಾಲವನ್ನು ಅವಲಂಭಿಸಿರುತ್ತದೆ. ಆದರೆ ಈ ಪದ್ಧತಿಯಲ್ಲಿ ಕಾರ್ಮಿಕನ ಮೇಲೆ ಮೇಲುಸ್ತುವಾರಿ ಅಗತ್ಯ. (ಡಿ.ವೆಂಕಟರಾವ್)
ಗ್ರಾಮೀಣ ಭಾರತದಲ್ಲಿ ಬಡತನ ಮತ್ತು ಉದ್ಯೋಗ ವರ್ಗಗಳ ಸಂಬಂಧ ವಿಮರ್ಶಾತ್ಮಕ ವಿವರಣೆಯನ್ನು ನೀಡುತ್ತಾರೆ. ಕೃಷಿ ಮತ್ತು ಗ್ರಾಮೀಣ ಉದ್ಯೋಗ ಮಟ್ಟದ ಬೆಳವಣಿಗೆಯು ಹಸಿರು ಕ್ರಾಂತಿಯ ಫಲಿತಾಂಶವಾಗಿದೆ. ೧೯೭೩ರಿಂದ ೭೮ರ ಅವಧಿಯಲ್ಲಿ ಶೇ.೨.೩ ರಷ್ಟಿದ್ದು ಕೃಷಿ ವಾರ್ಷಿಕ ಉದ್ಯೋಗ ಬೆಳವಣಿಗೆ ೧೯೮೩-೮೮ರ ಅವಧಿಗೆ ಶೇ.೦.೭ರಷ್ಟಕ್ಕೆ ಇಳಿಯಿತು. ಗ್ರಾಮೀಣ ಉದ್ಯೋಗ ಬೆಳವಣಿಗೆಯು ಶೇ.೨.೫ರಿಂದ ಶೇ.೧ರಷ್ಟು ೧೯೮೩-೮೮ ಅವಧಿಯಲ್ಲಿ ಇಳಿಯಿತು. ಗ್ರಾಮೀಣ ಉದ್ಯೋಗ ಮಟ್ಟದಲ್ಲಿ ಇಳಿತ ಕಂಡರೂ ನಿರುದ್ಯೋಗಕ್ಕೆ ಸಂಬಂಧಿಸಿದಂತೆ ಬ್ಯಾಕ್‌ಲಾಗ್‌ನ ಮಟ್ಟ ಈ ಅವಧಿಯಲ್ಲಿ ಅಧಿಕವಾಯಿತು. (ಸಿ.ಹೆಚ್.ಹನುಂತರಾವ್)
ಕರ್ನಾಟಕ ರಾಜ್ಯದ ಬೆಳಗಾಂ ಜಿಲ್ಲೆಯಲ್ಲಿ ಅವರು ನಡೆಸಿದ ಕೃಷಿ ಕಾರ್ಮಿಕರು ಮತ್ತು ಉದ್ಯೋಗದ ಮೇಲಿನ ಅಧ್ಯಯನದಲ್ಲಿ ಹೊಸ ಬೆಳೆ ವಿಧಾನಗಳಿಂದ ಕೃಷಿ ಸ್ವರೂಪದಲ್ಲಿ ಗಮನಾರ್ಹವಾದ ಮತ್ತು ಗುರುತಿಸಬಹುದಾದ ಬೆಳವಣಿಗೆಯನ್ನು ತೋರಿಸುತ್ತಾರೆ. ಕಳೆದ ೨ ದಶಕಗಳಿಗಿಂತ ಉದ್ಯೋಗದಲ್ಲಿ ಹೆಚ್ಚಿನ ಬೆಳವಣಿಗೆ ಮತ್ತು ವಿಸ್ತಾರತೆ ಉಂಟಾಗಿದೆ. ಇದನ್ನು ವರ್ಷದ ೨೧೦ ರಿಂದ ೨೫೦ ದಿನಗಳ ಅವಧಿಯಲ್ಲಿ ಗಮನಿಸಬಹುದಾಗಿದೆ. ಉಳುವುದು, ನೀರುಣಿಸುವುದು, ಕಳೆ ತೆಗೆಯುವುದು, ಕೊಯ್ಲಿನ ಸಂದರ್ಭದಲ್ಲಿ ಗಂಡಸರು ಮತ್ತು ಹೆಂಗಸರಿಬ್ಬರು ಕೆಲಸ ಮಾಡುವ ಕಾರ್ಮಿಕರಾಗಿರುತ್ತಾರೆ.
ತಮ್ಮ ಮದ್ರಾಸ್ ಪ್ರಾಂತ್ಯದ ಕೃಷಿ ಕಾರ್ಮಿಕರ ಉದ್ಯೋಗ ಮತ್ತು ನಿವ್ವಳ ಆದಾಯ ಎಂಬ ಅಧ್ಯಯನದಲ್ಲಿ ತಮಿಳುನಾಡಿನ ಕೃಷಿ ಕಾರ್ಮಿಕರ ಉದ್ಯೋಗ ಕೂಲಿಗಳು ಮತ್ತು ಆದಾಯಗಳಿಗೆ ಸಂಬಂಧಿಸಿದಂತೆ ವಿಶ್ಲೇಷಣೆ ಮಾಡುತ್ತಾರೆ. ಕೃಷಿ ಕಾರ್ಯಾಚರಣೆಯಲ್ಲಿ ಮಹಿಳೆಯರು ಮತ್ತು ಮಕ್ಕಳ ಸರಾಸರಿ ಕೂಲಿದರಗಳು ಗಂಡಿಗಿಂತ ಕಡಿಮೆ ಇವೆ. ಕೃಷಿ ಕಾರ್ಯಾಚರಣೆಗೆ ಸಂಬಂಧ ಕೃಷಿ ಕಾರ್ಮಿಕರು ಹೆಚ್ಚಿನ ಕೂಲಿಗಳನ್ನು ಪಡೆಯುತ್ತಾರ. ಕೂಲಿಗಳ ವಿತರಣೆ ಮುಖ್ಯವಾಗಿ ನಗದು ರೂಪದಲ್ಲಿರುತ್ತದೆ. ಕೊಯ್ಲಿನ ಸಂದರ್ಭದಲ್ಲಿ ಕೂಲಿಗಳು ಹಲವು ವಿಧಿಗಳಿಂದ ಪಾವತಿಸಲ್ಪಡುತ್ತವೆ.
೧೯೫೦-೫೧ರಲ್ಲಿ ಪ್ರಥಮ ಕೃಷಿ ಕಾರ್ಮಿಕರ ವಿಚಾರಣಾ ಸಮಿತಿಯು ಕೃಷಿ ಕಾರ್ಮಿಕರ ವ್ಯಾಖ್ಯೆಯನ್ನು ಈ ರೀತಿಯಾಗಿ ನೀಡಿತು. ಹಿಂದಿನ ವರ್ಷದಲ್ಲಿ ಒಟ್ಟು ಕೆಲಸ ಮಾಡಿದ ದಿನಗಳ ಪೈಕಿ ಪ್ರತಿಶತ ೫೦ಕ್ಕಿಂತ ಹೆಚ್ಚು ದಿನಗಳವರೆಗೆ ಕೃಷಿ ಚಟುವಟಿಕೆಯಲ್ಲಿ ಕೂಲಿಯ ಆಳುಗಳಾಗಿ ಕೆಲಸ ಮಾಡಿದವರು ಕೃಷಿ ಕಾರ್ಮಿಕರಾಗಿದ್ದಾರೆ.
೧೯೫೬-೫೭ರ ಕೃಷಿ ಕಾರ್ಮಿಕರ ವಿಚಾರಣಾ ಸಮಿತಿಯು ಆದಾಯದ ಆಧಾರದ ಮೇಲೆ ಕೃಷಿ ಕಾರ್ಮಿಕರನ್ನು ಯಾರೆಂಬುದನ್ನು ಗುರುತಿಸಿತು. ಅದರ ಪ್ರಕಾರ ಹಿಂದಿನ ವರ್ಷದಲ್ಲಿ ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳಿಂದ ಹಚ್ಚಿನ ಪ್ರಮಾಣದ ಆದಾಯ ಪಡೆದವರು ಕೃಷಿ ಕಾರ್ಮಿಕರಾಗಿದ್ದಾರೆ.
೧೯೩೯ರ ಕಾರ್ಮಿಕರ ಕಲ್ಯಾಣ ಸಮಿತಿಯ ಪ್ರಕಾರ ಕೃಷಿ ಹಾಗೂ ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳಿಂದ ಪಡೆಯುವ ಕೂಲಿಯ ಆದಾಯವು ಉಪಜೀವನದ ಮುಖ್ಯ ಸಾಧನವಾಗಿರುವ ಕಾರ್ಮಿಕರೂ ಕೃಷಿ ಕಾರ್ಮಿಕರಾಗಿದ್ದಾರೆ.
ಆದ್ದರಿಂದ ಕೃಷಿ ಕಾರ್ಮಿಕರ ವ್ಯಾಖ್ಯೆಯನ್ನು ಈ ರೀತಿಯನ್ನು ಕೊಡಬಹುದು. ತಮ್ಮ ಆದಾಯದ ಬಹುಭಾಗವನ್ನು ಬೇರೆಯವರ ಜಮೀನಿನಲ್ಲಿ ದುಡಿದು ಪಡೆಯುವ ಕಾರ್ಮಿಕರೆಲ್ಲರೂ ಕೃಷಿ ಕಾರ್ಮಿಕರಾಗಿದ್ದಾರೆ. ಅವರು ಬೇರೆಯವರ ಜಮೀನಿನಲ್ಲಿ ವರ್ಷದಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಅವಧಿಯವರೆಗೆ ದುಡಿಯುವವರಾಗಿರಬೇಕು.

ಅಧ್ಯಾಯ - ೩. ಸಂಶೋಧನಾ ವಿಧಾನ
ಅಧ್ಯಯನ ಶಾಸ್ತ್ರವೆನಿಸಿಕೊಳ್ಳಬೇಕಾರೆ ಅದು ವೈಜ್ಞಾನಿಕ ವಿಧಾನವನ್ನು ಅನುಸರಿಸಬೇಕಾಗುವುದು. ಎ.ಡಬ್ಲ್ಯೂ.ಗಿಲೇನ್ ಹೇಳಿರುವಂತೆ ವಿಜ್ಞಾನವೆಂಬುದು ಸಂಶೋಧನೆಯ ಒಂದು ವಿಧಾನವಾಗಿರುತ್ತದೆ. ವಿಜ್ಞಾನದ ಪರಮಗುರಿ ಸತ್ಯಾನ್ವೇಷಣೆ ಅಥವಾ ಜ್ಞಾನ ಸಂಗ್ರಹಣೆಯಾದರೂ, ಅದನ್ನು ಸಾಧಿಸಲು ನಂಬಲರ್ಹವಾದ ಹಾಗೂ ಕ್ರಮಬದ್ಧವಾದ ವಿಧಾನವನ್ನು ಅನುಸರಿಸುವುದು ಅನಿವಾರ್ಯ ವಿಧಾನವನ್ನು ವೈಜ್ಞಾನಿಕ ವಿಧಾನ ಎಂದು ಕರೆದಿದ್ದಾರೆ.
ಪ್ರಸ್ತುತ ಸಂಶೋಧನಾ ಅಧ್ಯಯನವು ಕೃಷಿ ಕಾರ್ಮಿಕರ ಬಗ್ಗೆ ಕುರಿತಾಗಿದೆ. ಇವನ್ನು ಅಲ್ಲಿನ ಕೃಷಿ ಕಾರ್ಮಿಕರಿಂದಲೇ ಮಾಹಿತಿಯನ್ನು ಪಡೆಯಲಾಗಿದೆ.

ಪ್ರಸ್ತುತ ಅಧ್ಯಯನ :
ಸಂಶೋಧನೆಗೆ ಆಯ್ಕೆ ಮಾಡಿಕೊಂಡಿರುವ ಸ್ಥಳ ಬೆಂಗಳೂರು ದಕ್ಷಿಣ ವಲಯದ ಸೋಮನಹಳ್ಳಿ ಗ್ರಾಮ ಪಂಚಾಯ್ತಿ ಅಡಿಯಲ್ಲಿ ಬರುವ ರಾವುಗೋಡ್ಲು ಗ್ರಾಮದಲ್ಲಿ ಈ ಸಂಶೋಧನೆಯನ್ನು ಮಾಡಲಾಗಿದೆ.

ಅಧ್ಯಯನದ ಗುರಿ :
ಭಾರತ ಕೃಷಿ ಪ್ರಧಾನ ರಾಷ್ಟ್ರವಾದ್ದರಿಂದ ಕೃಷಿ ಕಾರ್ಮಿಕ ಆರ್ಥಿಕ ಸ್ಥಿತಿಗತಿ ಅವರ ಕೂಲಿಗಳ ಬಗ್ಗೆ ಮತ್ತು ಅವರ ಸಮಸ್ಯೆಗಳ ನಿವಾರಣೆಗೆ ಕೈಗೊಂಡ ಕ್ರಮಗಳು ಯಾವುದೆಂಬುದನ್ನು ತಿಳಿಯುವ ಗುರಿ ಹೊಂದಲಾಗಿದೆ.

ಅಧ್ಯಯನದ ಅವಶ್ಯಕತೆ ಮತ್ತು ಮಹತ್ವ :
ಭಾರತ ಭವ್ಯ ಸಂಸ್ಕೃತಿ ಹೊಂದಿದೆ ಮತ್ತು ಕೃಷಿ ಪ್ರಧಾನ ರಾಷ್ಟ್ರವಾಗಿದೆ. ೨೦೧೧ರ ಜನಗಣತಿಯ ಪ್ರಕಾರ ಶೇ.೭೨ ರಷ್ಟು ಜನರು ಕೃಷಿಯನ್ನು ಅವಲಂಭಿಸಿದ್ದಾರೆ. ಕೃಷಿ ಕೈಗೊಳ್ಳುತ್ತಿರುವ ಕೃಷಿ ಕಾರ್ಮಿಕರು ಅವರ ಆರ್ಥಿಕ ಸ್ಥಿತಿಗತಿ ಮತ್ತು ಅವರಿಗೆ ಎಲ್ಲಾ ರೀತಿಯ ಸ್ಥಾನಮಾನಗಳನ್ನು ನೀಡುವುದು ಮತ್ತು ಅವರ ಸಮಸ್ಯೆಗಳಿಗೆ ಪರಿಹಾರ ಹುಡುಕುವಲ್ಲಿ ಈ ಸಂಶೋಧನೆ ಮುಖಾಂತರ ಪ್ರಯತ್ನ ಮಾಡಲಾಗಿದೆ.

ಅಧ್ಯಯನದ ಉದ್ದೇಶಗಳು :
೧.ಕೃಷಿ ಕಾರ್ಮಿಕರ ಆರ್ಥಿಕ ಸಾಮಾಜಿಕ, ಸ್ಥಿತಿಗತಿಗಳನ್ನು ತಿಳಿಯುವುದು.
೨.ಕೃಷಿ ಕಾರ್ಮಿಕರು ಅನುಭವಿಸುತ್ತಿರುವ ವಿವಿಧ ಸಮಸ್ಯೆಗಳನ್ನು ತಿಳಿಯುವುದು.
೩.ಹಳ್ಳಿಗಳಲ್ಲಿ ಬಡತನ ನಿವಾರಣೆಗೆ ಸರ್ಕಾರ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳ ಬಗ್ಗೆ ಕೂಲಿ ಕಾರ್ಮಿಕರಲ್ಲಿರುವ ಜಾಗೃತಿ ಮಟ್ಟವನ್ನು ಅರಿಯುವುದು.
೪.ಕೂಲಿ ತಾರತಮ್ಯದ ಬಗ್ಗೆ ತಿಳಿಯುವುದು.

ಅಧ್ಯಯನಕ್ಕೆ ಪ್ರೇರಣೆ :
ಪ್ರಸ್ತುತ ಕೃಷಿ ಕಾರ್ಮಿಕರು ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ ಮತ್ತು ಅಸಂಘಟಿತರಾಗಿದ್ದಾರೆ. ಅವರ ಜೀವನ ತುಂಬಾ ಹೀನಾಯ ಸ್ಥಿತಿ ತಲುಪಿದೆ ಮತ್ತು ಅವರು ಕೃಷಿ ಕ್ಷೇತ್ರದ ಒಂದು ಪ್ರಮುಖ ಭಾಗವಾಗಿದ್ದಾರೆ.

ಪ್ರಾಕ್ ಕಲ್ಪನೆ :
ಕಾಫೆರವರ ಪ್ರಕಾರ ಊಹೆಗಳು ಎಂದರೆ ಒಂದು ವಿಷಯದ ಬಗ್ಗೆ ಒಂದು ಘಟನೆಯ ಬಗ್ಗೆ ನಾವು ಯಾವುದೇ ಆಧಾರವಿಲ್ಲದೆ ಹೀಗಿರುವುದು ಹೀಗಾಗಬಹುದು ಎಂದು ಮನಸ್ಸಿನಲ್ಲಿ ಮಾಡಿಕೊಳ್ಳುವುದಕ್ಕೆ ಊಹೆ ಎಂದು ಹೆಸರು ಇದು ಸಂಶೋಧಕನಿಗೆ ತಾತ್ಕಾಲಿಕ ಪರಿಹಾರ ಮಾತ್ರ. ಇದು ಸಂಶೋದನೆಗೆ ಸಹಾಯವಾಗುತ್ತದೆ.
ಸಂಶೋಧನಾ ಅಧ್ಯಯನವನ್ನು ಇನ್ನೂ ಪೂರ್ಣವಾಗಿ ಪುರಸ್ಕರಿಸಲ್ಪಟ್ಟಿರುವುದಕ್ಕೆ ಮೊದಲು ಅದರ ಸತ್ಯಾಸತ್ಯತೆಯ ನಿಷ್ಕರ್ಷ ಇನ್ನೂ ಆಗದೆ ಇರುವುದರಿಂದ ಅದರ ಸತ್ಯಾಂಶವು ಹೀಗಿರಬಹುದೆಂದು ಸಂಶೋಧಕನು ಮಾಡುವ ಒಂದು ಕಲ್ಪನೇ ಪ್ರಾಕ್ ಕಲ್ಪನೆ. ಇದು ತಾತ್ಕಾಲಿಕವಾಗಿ ಒಪ್ಪಿಕೊಂಡು ಹಾಗೂ ಅತಿ ಎಚ್ಚರಿಕೆಯಿಂದ ಸಿದ್ಧಪಡಿಸಿದ ಹೇಳಿಕೆಯಂತಿದ್ದು ಮಾಹಿತಿ ಆಧಾರದ ಮೇಲೆ ಪರೀಕ್ಷೆಗಳಿಗೊಳಪಡಿಸುವುದು ಅದರ ಮಾಹಿತಿಯ ನೆಲೆಯನ್ನು ಪ್ರಾಕ್ ಕಲ್ಪನೆಯು ಪೂರ್ಣವಾಗಿ ಪುರಸ್ಕರಿಸಲ್ಪಟ್ಟು ದೃಢಗೊಳಿಸಬಹುದು.

ಸಂಶೋಧನಾ ವಿನ್ಯಾಸ :
ಸಂಶೋಧನಾ ಕಾರ್ಯದಲ್ಲಿ ಸಂಶೋಧನಾ ವಿನ್ಯಾಸವೆಂಬುದು ಬಹಳ ಮುಖ್ಯವಾದ ಹಂತವಾಗಿರುತ್ತದೆ. ಸಂಶೋಧಕನು ಸಂಶೋಧನೆಯ ಉದ್ದೇಶವನ್ನು ಪೂರೈಸುವುದಕ್ಕೋಸ್ಕರ ತನ್ನ ಸಂಶೋಧನಾ ಪ್ರಕ್ರಿಯೆಯನ್ನು ಸಮಗ್ರವಾಗಿ ಆಲೋಚನೆ ಮಾಡಿ ತಯಾರಿಸಿದ ಯೋಜನೆಯನ್ನು ಸಂಶೋಧನಾ ವಿನ್ಯಾಸವೆಂದು ಕರೆಯಲಾಗುತ್ತದೆ.
ಅಧ್ಯಯನಕ್ಕೆ ಆಯ್ಕೆ ಮಾಡಿದ ವಿಷಯಕ್ಕೆ ಹೊಂದುವಂತಹ ಸಂಶೋಧನಾ ತಂತ್ರಗಳನ್ನು ಬಳಸುವುದಕ್ಕೆ ಸಂಶೋಧನಾ ವಿನ್ಯಾಸವು ಸಹಕಾರಿಯಾಗಿದೆ.
೧.ಸಮಸ್ಯೆಯ ವ್ಯಾಪ್ತಿಯನ್ನು ಮತ್ತು ಸ್ವರೂಪವನ್ನು ಸೃಷ್ಟಿಪಡಿಸುವುದು.
೨.ತರ್ಕಬದ್ಧವಾದಂತಹ ಪ್ರಾಕ್ ಕಲ್ಪನೆಯಿಂದ ಪ್ರಾರಂಭವಾಗುತ್ತದೆ.

ಸಂಶೋಧನಾ ವಿನ್ಯಾಸದ ಪ್ರಕಾರಗಳು :
೧.ಪರಿಶೋಧನಾತ್ಮಕ ಅಧ್ಯಯನಗಳ ಸಂಬಂಧಿಸಿದ ವಿನ್ಯಾಸ :
ಇದರ ಮುಖ್ಯ ಉದ್ದೇಶವೆಂದರೆ ಸಮಸ್ಯೆಯೊಂದರ ಕುರಿತಾಗಿ ಬಹಳ ಆಳವಾದ ಹಾಗೂ ನಿಖರವಾದ ಸಂಶೋಧನೆ ಮಾಡಲು ಅದನ್ನು ಸ್ಪಷ್ಟ ಶಬ್ದಗಳಲ್ಲಿ ಸಾರಿ ಹೇಳುವುದು ಅಥವಾ ಅದಕ್ಕೆ ಸಂಬಂಧಿಸಿದ ಕಾರ್ಯ ನಿರತ ಪ್ರಾಕ್ ಕಲ್ಪೆನಯತ್ತ ಸ್ಥಾಪಿಸುವುದು ಇದರ ಉದ್ದೇಶವಾಗಿದೆ.
೨.ಪ್ರಾಯೋಗಿಕ ಅಧ್ಯಯನ :
ಬದಲಾಗುವ ವಿಷಯಗಳು ಅಸಾಮಾನ್ಯವಾಗಿ ಕಲ್ಪಿತವಾದ ಸಿದ್ಧಾಂತಗಳ ಗುಣಗಳಿಂದ ಅಧ್ಯಯನ ಮಾಡುವ ಕ್ರಮವೇ ಪ್ರಾಯೋಗಿಕ ಅಧ್ಯಯನ. ಇದರಲ್ಲಿ ಸಂಶೋಧನೆಯ ಅಸಾಮಾನ್ಯ ಸಂಬಂಧವನ್ನು ಪರೀಕ್ಷಿಸುವಲ್ಲಿ ಪ್ರಾಯೋಗಿಕವಾಗಿ ಕಂಡುಬಂದಾಗ ಬಹಳ ಪರಿಣಾಮಕಾರಿಯಾಗಿ ಪ್ರಾಯೋಗಿಸಲ್ಪಟ್ಟಿದೆ.
೩.ವಿವರಣಾತ್ಮಕ ಸಂಶೋಧನಾ ವಿನ್ಯಾಸ :
ಇದನ್ನು ಸ್ವಭಾವ ನಿರೂಪಕ ಸಂಶೋಧನಾ ವಿನ್ಯಾಸವೆಂದು ಕರೆಯುತ್ತೇವೆ. ಒಂದು ವಿಷಯದ ಬಗ್ಗೆ ಉದ್ದೇಶಪೂರ್ವಕವಾದ ಸಂಬಂಧವನ್ನು ಸಾಧಿಸುವುದು ನಿಶ್ಚಿತ ಮತ್ತು ಸಂಶೋಧನೆಯನ್ನು ಪಡೆಯುವುದಕ್ಕಾಗಿ ಪೂರ್ವ ಸಿದ್ಧಾಂತಗಳನ್ನು ರಚಿಸಿಕೊಂಡು ಕೈಗೊಳ್ಳುವ ಅಧ್ಯಯನಕ್ಕೆ ವಿವರಣಾತ್ಮಕ ಸಂಶೋಧನಾ ವಿನ್ಯಾಸವೆಂದು ಕರೆಯಲಾಗಿದೆ.

ಪ್ರಸ್ತುತ ಅಧ್ಯಯನದಲ್ಲಿ ವಿವರಣಾತ್ಮಕ ಸಂಶೋಧನಾ ವಿನ್ಯಾಸವನ್ನು ಅಳವಡಿಸಿಕೊಂಡು ಕೃಷಿ ಕಾರ್ಮಿಕರು ಬೆಂಗಳೂರು ದಕ್ಷಿಣ ವಲಯದ ಸೋಮನಹಳ್ಳಿ ಗ್ರಾಮ ಪಂಚಾಯ್ತಿ ಅಡಿಯಲ್ಲಿ ಬರುವ ರಾವುಗೋಡ್ಲು ಗ್ರಾಮದಲ್ಲಿ ಈ ಸಂಶೋಧನೆಯನ್ನು ಮಾಡಲಾಗಿದೆ.

ಮಾದರಿ ಆಯ್ಕೆ ತಂತ್ರಗಳು :
ಮಾದರಿ ವಿಧಾನವು ಸಾಮಾಜಿಕ ಸಂಶೋಧನೆಯಲ್ಲಿ ಅನುಸರಿಸಲಾಗುತ್ತಿರುವ ಮುಖ್ಯ ಕ್ರಮಗಳಲ್ಲೊಂದು. ಸಂಶೋಧನಾ ಕ್ಷೇತ್ರವು ಬಹಳ ವಿಶಾಲವಾದುದರಿಂದ ಅದನ್ನು ಒಂದೇ ಬಾರಿಗೆ ಅಧ್ಯಯನ ಮಾಡುವುದು ಬಹಳ ಕಷ್ಟಕರವಾದ್ದರಿಂದ ಆ ಕ್ಷೇತ್ರದ ಸಾಮಾನ್ಯ ಗುಣಗಳನ್ನು ಹೊಂದಿರುವುದರೊಂದಿಗೆ ಅದನ್ನು ಪ್ರತಿನಿಧಿಸಬಹುದಾದಂತಹ ಅದರ ಭಾಗವೊಂದನ್ನು ಅಧ್ಯಯನ ದೃಷ್ಠಿಯಿಂದ ಆಯ್ದುಕೊಳ್ಳುವುದಕ್ಕೆ ನಮೂನೆಯ ವಿಧಾನವೆಂದಿದ್ದಾರೆ.
ಗೂಡೆ ಮತ್ತು ಹ್ಯಾಟ್ ಎಂಬುವರು ಹೇಳಿರುವಂತ ನಮೂನೆ ಎಂಬುದು ಅದರ ಹೆಸರೇ ಸೂಚಿಸುವಂತೆ ದೊಡ್ಡ ವಸ್ತುವಿನ ಸಣ್ಣ ಪ್ರತಿ ರೂಪವಿದ್ದಂತೆ, ನಮೂನೆಯಲ್ಲಿ ಪ್ರಮುಖವಾಗಿ ೨ ವಿಧಗಳಿವೆ.
೧.ಸಂಭವನೀಯತೆಯ ವಿಧಾನ
೨.ಅಸಂಭವನೀಯತೆಯ ವಿಧಾನ
ಸಂಭವನೀಯತೆಯ ವಿಧಾನ :
ಇದರಲ್ಲಿ ನಮೂನೆಯನ್ನು ಆಯ್ಕೆ ಮಾಡುವಾಗ ಅಂದಾಜಿನಿಂದ ಘಟಕಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಒಂದು ಜನ ಸಮುದಾಯದಿಂದ ನಮೂನೆಯನ್ನು ಆಯ್ಕೆ ಮಾಡುವಾಗ ಆ ಜನ ಸಮುದಾಯವನ್ನು ಅಂದಾಜಿನ ಮೇಲೆ ಅಥವಾ ಸರಾಸರಿ ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಂಡ ಸಮಸ್ಯೆಯನ್ನು ರೂಪಿಸಬಹುದಾಗಿದೆ.
ಎ) ಸರಳ ಯಾದೃಚ್ಛಿಕ ನಮೂನೆ :
ಈ ಪದ್ಧತಿಯಲ್ಲಿ ನಮೂನೆಯ ಒಂದು ದೊಡ್ಡ ಸಂಗ್ರಹವನ್ನು ಪಡೆದು ಆಯ್ಕೆ ಮಾಡುವುದನ್ನು ಅಂದರೆ ಮಾಹಿತಿಯ ದೊಡ್ಡ ವೃತ್ತದಿಂದ ಚಿಕ್ಕ ವೃತ್ತವನ್ನು ರಚಿಸುವಂತೆ ಹೇಳಬಹುದು. ಇದನ್ನು ಸರಳ ಸಗಟು ನಮೂನೆ ಎಂದು ಕರೆಯುತ್ತೇವೆ. ಇದು ಅತಿ ದೊಡ್ಡ ಸಮುದಾಯಕ್ಕೆ ಉಪಯುಕ್ತವಾಗಿದೆ.
ಬಿ) ವಿಭಾಗಿತ ಯಾದೃಚ್ಛಿಕ ನಮೂನೆ :
ಈ ನಮೂನೆಯಲ್ಲಿ ದೊಡ್ಡ ಪ್ರಮಾಣದ ಆಯ್ಕೆ ಮಾಡಲಾದ ಘಟಕಗಳಾಗಿ ವಿಂಗಡಿಸಬಹುದು. ಪ್ರತಿಯೊಂದು ವಿಂಗಡಿಸಿದ ಚಿಕ್ಕ ಗುಂಪಿನಿಂದ ಪ್ರತ್ಯೇಕವಾಗಿಯೇ ನಮೂನೆಯಾಗಿ ಘಟಕಗಳನ್ನು ಆಯ್ದುಕೊಂಡರೆ ಇದು ವಿಭಾಗಿತ ನಮೂನೆಯಾಗುತ್ತದೆ.
ಸಿ) ಗುಚ್ಛ ನಮೂನೆ :
ಸಂಶೋಧನಾ ಕ್ಷೇತ್ರವು ಬಹಳ ವಿಸ್ತಾರವಾಗಿದ್ದು ಹೆಚ್ಚಿನ ಹಣ, ಸಮಯವನ್ನು ನಿರೀಕ್ಷಿಸುವುದರಿಂದ ಅಧ್ಯಯನ ಮಾಡಿದ ಬಿಡಿ ಭಾಗಗಳನ್ನು ಒಟ್ಟುಗೂಡಿಸಿ ಅಧ್ಯಯನವನ್ನು ಕೈಗೊಳ್ಳುವ ವಿಧಾನಕ್ಕೆ ಗುಚ್ಛ ನಮೂನೆ ಎನ್ನುವರು.
ಡಿ) ಬಹುಸ್ಥರ ನಮೂನೆ :
ಆಯ್ಕೆ ಮಾಡಿದ ಸಂಶೋಧನಾ ಕ್ಷೇತ್ರವನ್ನು ಅನೇಕ ಘಟಕಗಳನ್ನಾಗಿ ವಿಂಗಡಿಸಿದ ಘಟ್ಟಗಳಿಂದ ಮಾದರಿಯನ್ನು ಆಯ್ಕೆ ಮಾಡುವ ಕ್ರಮಕ್ಕೆ ಬಹುಸ್ಥರ ನಮೂನೆ ಎನ್ನುವರು.

೨. ಅಸಂಭವನೀಯ ವಿಧಾನ :
ಅಸಂಭವನೀಯತೆಯ ನಮೂನೆಯನ್ನು ನಿರ್ದಿಷ್ಟ ನಮೂನೆಯಂತಲೂ ನಿಕರವಾದ ನಮೂನೆ ಎಂತಲೂ ಕರೆಯುವರು. ಉದ್ದೇಶಿತ ನ್ಯಾಯ ನಿರ್ಧಾರಿತ ಯುಕ್ತ ನಿರ್ಧರಿಸಬಲ್ಲ ಪ್ರಾತಿನಿಧ್ಯದಿಂದ ಕೂಡಿದ ಒಂದು ಸರಿಯಾದ ಅಸಂಭವನೀಯತೆಯ ಪದ್ಧತಿಯಲ್ಲಿ ಪ್ರಮುಖವಾಗಿ ೫ ವಿಧಗಳಿವೆ. ಅವು ಈ ಕೆಳಕಂಡಂತೆ ವಿವರಿಸಲಾಗಿದೆ.
ಎ) ಉದ್ದೇಶಪೂರಿತ ನಮೂನೆ :
ಈ ನಮೂನೆಯನ್ನು ಉದ್ದೇಶಪೂರಿತವಾಗಿ ರಚಿಸಲಾಗಿರುವುದರಿಂದ ಉದ್ದೇಶಪೂರಿತ ನಮೂನೆ ಎನ್ನುವರು.
ಬಿ) ಪಾಲು ನಮೂನೆ :
ಈ ವಿಧಾನದಲ್ಲಿ ಸಂಶೋಧಕನಿಗೆ ಸ್ವಾತಂತ್ರ್ಯವಿರುತ್ತದೆ. ಇಲ್ಲಿ ನಮೂನೆಯನ್ನು ಪಡೆಯಲು ಇಡೀ ಜನಸಮುದಾಯಕ್ಕೆ ಅನೇಕ ಪದರುಗಳಲ್ಲಿ ವಿಂಗಡಿಸಲಾಗುತ್ತದೆ. ಪ್ರತಿಯೊಂದು ಪದರಿಂದಲೂ ಈ ನಮೂನೆಗಾಗಿ ಇಂತಿಷ್ಟು ಘಟಕಗಳನ್ನು ಅಥವಾ ಪಾಲನ್ನು ತೆಗೆದುಕೊಳ್ಳಬೇಕೆಂದು ಮೊದಲೇ ನಿರ್ಧರಿಸಲಾಗುವುದು.
ಸಿ) ಪ್ರಾತಿನಿಧಕ ನಮೂನೆ :
ಪ್ರಾತಿನಿಧಕ ನಮೂನೆ ಎಂದರೆ ಸಂಶೋಧಕನು ತನ್ನ ಸ್ವಯಂ ಪ್ರತಿಭೆಯಿಂದ ಮತ್ತು ವ್ಯವಹಾರಿಕ ಬುದ್ಧಿಮತ್ತೆಯಿಂದ ಒಂದು ಜನ ಸಮುದಾಯವನ್ನು ಆಯ್ಕೆ ಮಾಡಿಕೊಳ್ಳುವುದಾಗಿದೆ.
ಡಿ) ಯುಕ್ತಾ ಯುಕ್ತಾ ಪರಿಜ್ಞಾನ ನಮೂನೆ :
ಈ ವಿಧಾನದಲ್ಲಿ ಸಮೀಕ್ಷಕರು ಅಥವಾ ಸಂಶೋಧಕರು ಒಂದು ಜನ ಸಮುದಾಯದಿಂದ ಬೇರೆ ಬೇರೆ ಘಟಕಗಳನ್ನು ಅಂದರೆ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ಳುವರು. ಆಯ್ದ ಘಟಕಗಳಲ್ಲಿ ಅವುಗಳ ಯುಕ್ತಾ ಯುಕ್ತಗಳನ್ನು ಸರಿಯಾಗಿ ಪರಿಶೀಲಿಸಿ ಈ ಆಯ್ದ ಘಟಕಗಳಲ್ಲಿ ಯುವ ಘಟಕಗಳಿಗೆ ನಮಗೆ ಯೋಗ್ಯವಾಗಿದೆ ಎಂಬುದನ್ನು ಪರೀಕ್ಷಿಸುವರು. ಈ ರೀತಿ ಸಿದ್ಧಪಡಿಸಿದ ನಮೂನೆಗೆ ಯುಕ್ತಾ ಯುಕ್ತ ಪರಿಜ್ಞಾನ ನಮೂನೆ ಎಂದು ಕರೆಯುತ್ತಾರೆ.
ಇ) ಆಕಸ್ಮಿಕ ನಮೂನೆ :
ಈ ಆಕಸ್ಮಿಕ ವಿಧಾನದಲ್ಲಿ ಸಂಶೋಧಕನು ನಮೂನೆಗಳಿಗೆ ಘಟಕಗಳನ್ನು ಆರಿಸುವಾಗ ತಾನು ನೋಡಿದ ಪ್ರತ್ಯಕ್ಷ, ಘಟನೆಗಳ ಸಾಕ್ಷಾಧಾರಗಳನ್ನು ಪ್ರತ್ಯಕ್ಷದರ್ಶಿಗಳಿಂದ ನೇರವಾಗಿ ಪಡೆದು ನಮೂನೆಗಾಗಿ ಘಟಕಗಳನ್ನು ಹುಟ್ಟುಹಾಕುತ್ತಿರುವಾಗ ಆಕಸ್ಮಿಕವಾಗಿ ಬಂದರೆ ತಮ್ಮ ವಿಷಯಕ್ಕೆ ಸಂಬಂಧಿಸಿದ ಸಂಗತಿಗಳು ಕಂಡುಬಂದರೆ ಅದನ್ನೇ ತೆಗೆದುಕೊಳ್ಳುವರು.
ಪ್ರಸ್ತುತ ಅಧ್ಯಯನದಲ್ಲಿ ಸಂಶೋಧಕನು ಸರಳ ಯಾದೃಚ್ಛಿಕ ನಮೂನೆಯನ್ನು ಬಳಸಿಕೊಂಡಿದ್ದಾನೆ. ಅಂದರೆ ತನ್ನ ಸಂಶೋಧನೆಗೆ ಸಂಬಂಧಪಟ್ಟಂತೆ ಕೃಷಿ ಕಾರ್ಮಿಕರಲ್ಲಿ ೩೦ ಪ್ರತಿವಾದಿಗಳನ್ನು ಆಯ್ಕೆ ಮಾಡಿಕೊಂಡು ಪ್ರಸ್ತುತ ಅಧ್ಯಯನ ನಡೆಸಲಾಗಿದೆ.
ಪ್ರಸ್ತುತ ಅಧ್ಯಯನದಲ್ಲಿ ಸಂಶೋಧಕನು ಸರಳ ಯಾದೃಚ್ಛಿಕ ವಿಧಾನವನ್ನು ಬಳಸಿಕೊಂಡಿದ್ದಾನೆ. ಪ್ರಸ್ತುತ ಅಧ್ಯಯನದಲ್ಲಿ ಕೃಷಿ ಕಾರ್ಮಿಕರ ಪೂರ್ವ ಚಿತ್ರಣ ಇರುವುದನ್ನು ಸ್ಮರಿಸಬಹುದು.

ಮಾಹಿತಿ ಸಂಗ್ರಹಣೆಯ ಮೂಲಗಳು :
ಮಾಹಿತಿ ಸಂಗ್ರಹಣೆಯಲ್ಲಿ ಪ್ರಮುಖವಾಗಿ ೨ ವಿಧ ಅವುಗಳೆಂದರೆ;
೧.ಪ್ರಾಥಮಿಕ ಮಾಹಿತಿ ಸಂಗ್ರಹಣೆ
೨.ಮಾಧ್ಯಮಿಕ ಮಾಹಿತಿ ಸಂಗ್ರಹಣೆ

ಸಂದರ್ಶನ ವಿಧಾನ :
ಸಂದರ್ಶನ ಎಂಬುದು ಮುಖಾ ಮುಖಿಯಾದ ಒಂದು ಸಂಭಾಷಣೆ. ಇದರಲ್ಲಿ ಸಂದರ್ಶಕನು ಮಾಹಿತಿದಾರರಿಂದ ಯಾವುದೇ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಪಡೆಯುವ ಪ್ರಯತ್ನವಿರುತ್ತದೆ. ಅಕ್ಷರಸ್ಥರಲ್ಲದೆ ಅನಕ್ಷರಸ್ಥರಿಂದಲೂ ಮಾಹಿತಿಯನ್ನು ಸಂಗ್ರಹಿಸಲು ಹಾಗೂ ಕೆಲವು ಪ್ರಚಲಿತ ಸಮಸ್ಯೆಗಳ ಬಗ್ಗೆ ಜನರ ಪ್ರತಿಕ್ರಿಯೆಗಳನ್ನು ತಿಳಿದುಕೊಳ್ಳಲು ವ್ಯಕ್ತಿಯೊಬ್ಬನಿಗೆ ಸಂಬಂಧಿಸಿದ ಗತಕಾಲದ ಘಟನೆಗಳನ್ನು ಹಾಗೂ ಅನುಭವಗಳನ್ನು ತಿಳಿದುಕೊಳ್ಳಲು ಸಂದರ್ಶನ ವಿಧಾನ ಬಳಸಿಕೊಳ್ಳಲಾಗುತ್ತದೆ.
ಅವಲೋಕನ :
ಪಿ.ವಿ.ಯಂಗ್ ಪ್ರಕಾರ ತಾನೇತಾನಾಗಿ ಸಂಭವಿಸುವ ಘಟನೆಗಳನ್ನು ಅವು ಘಟಿಸುವ ಸಮಯದಲ್ಲಿಯೇ ನೇರವಾಗಿ ತಮ್ಮ ಕಣ್ಣುಗಳ ಮೂಲಕ ವೀಕ್ಷಿಸುವ ಕ್ರಮಬದ್ಧವಾಗಿ ಹಾಗೂ ಉದ್ದೇಪೂರ್ವಕವಾಗಿ ಅಧ್ಯಯನ ಮಾಡುವ ಕ್ರಮವನ್ನು ಅವಲೋಕನ ಎನ್ನಬಹುದು. ಸಾಮಾನ್ಯವಾಗಿ ಪ್ರತ್ಯೇಕವಾಗಿ ಪರಿಶೀಲನೆ ಮಾಡುವುದರ ಮೂಲಕ ಮಾಹಿತಿ ಸಂಗ್ರಹಿಸುವುದಕ್ಕೆ ಅವಲೋಕನ ಎಂದು ಕರೆಯುತ್ತಾರೆ.
ಸಹಭಾಗಿತ್ವ :
ತೀವ್ರವಾದ, ತೀಕ್ಷ್ಣವಾದ ಸಾಮಾಜಿಕ ವಿಷಯಗಳ ಕ್ರಿಯೆ ಮತ್ತು ಅಂತರ ಕ್ರಿಯೆಗಳನ್ನು ಸಂಶೋಧಿಸಿ ಪರಿಶೋಧಕರನ್ನು ಆ ಸಮಾಜದ ಒಳಹೊಕ್ಕು ಅದರ ಸದಸ್ಯನಾಗಿದ್ದುಕೊಂಡು ಅಂಕಿ-ಅಂಶಗಳನ್ನು ಕಲೆ ಹಾಕುವುದಕ್ಕೆ ಸಂಪೂರ್ಣವಾಗಿ ಪಾಲ್ಗೊಂಡು ವೀಕ್ಷಿಷಿಸುವುದು ಎನ್ನುತ್ತಾರೆ.
ಪ್ರಸ್ತುತ ಅಧ್ಯಯನದಲ್ಲಿ ಪ್ರತಿವಾದಿಗಳಿಂದ ನಡೆದ ಅನುಸೂಚಿಯ ಉತ್ತರಗಳನ್ನು ಕೋಡಿಂಗ್ / ಡಿಕೋಡಿಂಗ್ ಮಾಡಿ ಅದನ್ನೆಲ್ಲಾ ಮಾಸ್ಟರ್ ಷೀಟ್‌ನಲ್ಲಿ ಕ್ರೋಢಿಕರಿಸಿ ಒಟ್ಟು ಉತ್ತರಗಳನ್ನು ಕಂಡು ದತ್ತಾಂಶ ವಿಶ್ಲೇಷಣೆ ಮಾಡಲಾಗಿದೆ.
೨. ಮಾಧ್ಯಮಿಕ ಮಾಹಿತಿ ಸಂಗ್ರಹಣೆ :
ಮಾಧ್ಯಮಿಕ ಮಾಹಿತಿ ಸಂಗ್ರಹಣೆ ಎಂದರೆ ಗ್ರಂಥಾಲಯಗಳಲ್ಲಿ ಲಭ್ಯವಿರುವ ಪುಸ್ತಕಗಳು, ದಿನಪತ್ರಿಕೆಗಳು, ವಾರ ಮತ್ತು ಮಾಸ ಪತ್ರಿಕೆಗಳು ಕೃಷಿ ಕಛೇರಿಗಳಲ್ಲಿ ಲಭ್ಯವಿರುವ ಅಂಕಿ ಅಂಶಗಳು ಇಲ್ಲಿ ಬರುತ್ತದೆ.

ಅಧ್ಯಯನದ ಇತಿಮಿತಿಗಳು :
ಪ್ರತಿಯೊಂದು ಸಾಮಾಜಿಕ ಸಂಶೋಧನೆಯಲ್ಲಿ ಅನುಕೂಲ ಮತ್ತು ಅನಾನುಕೂಲಗಳು ಇರುವುದು ಸಹಜವಾಗಿದೆ. ಅವುಗಳು ಒಂದೇ ನಾಣ್ಯದ ೨ ಮುಖಗಳಿದ್ದಂತೆ ಎನ್ನಬಹುದು. ಪ್ರಸಕ್ತ ಅಧ್ಯಯನದಲ್ಲಿ ಹಲವಾರು ಇತಿಮಿತಿಗಳಿವೆ.
೧.ಸಂಶೋಧನೆ ಮಾಡಲು ಕೆಲ ಪ್ರತಿವಾದಿಗಳು ಸೂಕ್ತ ಹಾಗೂ ಸರಿಯಾದ ಮಾಹಿತಿ ನೀಡುತ್ತಿರಲಿಲ್ಲ.
೨.ಪ್ರತಿವಾದಿಗಳಲ್ಲಿ ಕೆಲವರು ಸ್ಪಷ್ಟ ಮಾಹಿತಿ ನೀಡದಿರುವುದು ಉದಾಸೀನವಾಗಿ ಉತ್ತರಿಸಿದ್ದರಿಂದ ಹೆಚ್ಚಿನ ವಿವರಗಳು ಪಡೆಯಲು ಸಾಧ್ಯವಾಗಿಲ್ಲ.
೩.ಸಂಶೋಧಕನು ವಿದ್ಯಾರ್ಥಿ ಆಗಿರುವುದರಿಂದ ಹೆಚ್ಚಿನ ವಿಷಯದ ಸಂಗ್ರಹಣೆಗೆ ಅನುಭವದ ಕೊರತೆ ಇತ್ತು.
೪.ಸಂಶೋಧಕನು ಕಡಿಮೆ ಅವಧಿಯಲ್ಲಿ ಮಾಹಿತಿ ಸಂಗ್ರಹಿಸಿದ್ದು ಅವಸರದ ಅಣಿಯಾಗಿದೆ.

ಅಧ್ಯಾಯ - ೪. ಮಾಹಿತಿ ವಿಶ್ಲೇಷಣೆ ಮತ್ತು ದತ್ತಾಂಶ ವರ್ಗೀಕರಣ
ಸಂಶೋಧನೆಯಲ್ಲಿ ಪ್ರಸ್ತಾವನೆ, ಅಧ್ಯಯನದ ವಿಧಾನ ಎಷ್ಟು ಮುಖ್ಯವೋ ಅದೇ ರೀತಿಯಾಗಿ ಮಾಹಿತಿ ವರ್ಗೀಕರಣ ಮತ್ತು ದತ್ತಾಂಶ ವಿಶ್ಲೇಷಣೆ ಸಂಶೋಧನೆಯಲ್ಲಿ ಅಷ್ಟೇ ಪ್ರಾಮುಖ್ಯತೆಯನ್ನು ಹೊಂದಿದೆ. ಪ್ರಸ್ತುತ ಅಧ್ಯಯನದಲ್ಲಿ ಫಲಾನುಭವಿಗಳಿಂದ ಹೊಂದಿದೆ. ಪ್ರಸ್ತುತ ಅಧ್ಯಯನದಲ್ಲಿ ಫಲಾನುಭವಿಗಳಿಂದ ಸಂಗ್ರಹಿಸಲಾದ ಮಾಹಿತಿ ದತ್ತಾಂಶಗಳನ್ನು ಅಧ್ಯಯನ ಸಮಯದಲ್ಲಿ ಅವಲೋಕಿಸಿದಂತಹ ವಿಷಯಗಳನ್ನು ಪಟ್ಟಿಗಳಿಂದ ವಿವರಿಸಲಾಗಿದೆ.
ವಿಶ್ಲೇಷಣೆ ಎಂಬುದಕ್ಕೆ ವಿಭಜನೆ ಅಥವಾ ವಿಂಗಡಿಸುವಿಕೆ ಎಂದು ಅರ್ಥ. ಸಂಶೋಧಕನು ಸಂಶೋಧನಾ ವಿಷಯಕ್ಕೆ ಸಂಬಂಧಿಸಿದಂತೆ ದೊರೆತ ಎಲ್ಲಾ ಮಾಹಿತಿಗಳನ್ನು ಕಲೆ ಹಾಕುತ್ತಾ ಬರುವನು. ಈ ಕ್ರೂಢೀಕೃತವಾದ ಎಲ್ಲಾ ಅಂಶಗಳನ್ನು ಕ್ರಮಬದ್ಧವಾಗಿ ಮತ್ತು ಕಾರ್ಯಕಾರಣಗಳನ್ನು ಪರಸ್ಪರ ಸಂಬಂಧ ವಿಶ್ಲೇಷಣೆಯಾಗಿದೆ.
ಅಂಕಿ ಅಂಶಗಳನ್ನು ಸರಿಯಾಗಿ ವಿಶ್ಲೇಷಿಸುವುದು ಮತ್ತು ವಿಶ್ಲೇಷಣೆಯಿಂದ ಬಂದ ಪರಿಣಾಮಗಳನ್ನು ಅರ್ಥೈಸುವುದು ಸಂಶೋಧನೆಯಲ್ಲಿ ಅತ್ಯಂತ ಪ್ರಮುಖ ಕಾರ್ಯವಾಗಿದೆ. ಆದುದರಿಂದ ಅಂಕಿ ಅಂಶಗಳ ವಿಶ್ಲೇಷಣೆ ಮತ್ತು ಅರ್ಥೈಸುವಿಕೆ ಇವುಗಳು ಒಂದೇ ನಾಣ್ಯದ ೨ ಮುಖಗಳಿದ್ದಂತೆ ಎಂದು ಹೇಳಿದರೆ ತಪ್ಪಾಗಲಾರದು.

ಸಂಶೋಧನಾ ಫಲ ಮತ್ತು ಸಲಹೆಗಳು
ಗ್ರಾಮೀಣ ಪ್ರದೇಶದಲ್ಲಿನ ದಿನಗೂಲಿ ಕೃಷಿ ಕಾರ್ಮಿಕರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಒಂದು ಕಿರು ಅಧ್ಯಯನ ಈ ವಿಷಯ ಕುರಿತು ಬೆಂಗಳೂರು ದಕ್ಷಿಣ ವಲಯದ ಸೋಮನಹಳ್ಳಿ ಗ್ರಾಮ ಪಂಚಾಯಿತಿ ಅಡಿಯಲ್ಲಿನ ರಾವುಗೋಡ್ಲು ಗ್ರಾಮದಲ್ಲಿ ಕೃಷಿ ಕಾರ್ಮಿಕರು ೫೦ ಪ್ರತಿವಾದಿಗಳನ್ನಾಗಿಸಿಕೊಂಡು ಪ್ರಸ್ತುತ ಅಧ್ಯಯನದಿಂದ ಹೊರ ಬಂದಿರುವ ಫಲಿತಾಂಶಗಳು ಈ ಮುಂದಿನಂತಿವೆ.
೧.ಮಹಿಳೆಯರಿಗಿಂತ ಪುರುಷರು ಕೃಷಿಯಲ್ಲಿ ತೊಡಗಿಕೊಂಡಿರುವುದು ಕಂಡು ಬರುತ್ತದೆ.
೨.ಕೃಷಿ ಕಾರ್ಮಿಕರು ಹೆಚ್ಚಿನವರು ಅವಿದ್ಯಾವಂತರಾಗಿದ್ದಾರೆ ಎಂದು ತಿಳಿದು ಬಂದಿದೆ.
೩.ಪ್ರತಿವಾದಿಗಳು ಹೆಚ್ಚಿನವರು ೪೬ರಿಂದ ೬೦ವಯಸ್ಸಿನವರು ಕೃಷಿ ಕಾರ್ಮಿಕರಾಗಿರುವುದು ಕಂಡು ಬರುತ್ತದೆ.
೪.ಪ್ರತಿವಾದಿಗಳು ಹೆಚ್ಚಿನವರು ಒಕ್ಕಲಿಗ ಜಾತಿಯವರು ಎಂದು ತಿಳಿದು ಬಂದಿದೆ.
೫.ದಿನಗೂಲಿ ಕೆಲಸದಲ್ಲಿ ಹೆಚ್ಚಿನ ಪ್ರತಿವಾದಿಗಳು ವಿವಾಹಿತರು ಎಂದು ತಿಳಿದು ಬಂದಿದೆ.
೬.ದಿನಗೂಲಿ ಕೆಲಸದಲ್ಲಿ ತೊಡಗಿಕೊಂಡಿರುವವರು ಹೆಚ್ಚಿನವರು ಅವಿಭಕ್ತ ಕುಟುಂಬದವರಾಗಿದ್ದಾರೆ.
೭.ಬಹುತೇಕ ದಿನಗೂಲಿ ಕೃಷಿ ಕಾರ್ಮಿಕರ ವಾರ್ಷಿಕ ವರಮಾನವು ೯,೦೦೦ ರಿಂದ ೧೦,೦೦೦ರೂ.ಗಳಾಗಿವೆ ಎಂದು ತಿಳಿದು ಬಂದಿದೆ.
೮.ಶೇ.೧೦೦ರಷ್ಟು ಪ್ರತಿವಾದಿಗಳು ಮನೆಯನ್ನು ಹೊಂದಿರುವುದು ವ್ಯಕ್ತವಾಗಿದೆ.
೯.ಪ್ರತಿವಾದಿಗಳು ಹೆಚ್ಚಿನವರು ಸ್ವಂತ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
೧೦.ಶೇ.೫೪ರಷ್ಟು ಪ್ರತಿವಾದಿಗಳು ಗುಡಿಸಲು ಮನೆಯಲ್ಲಿ ವಾಸಮಾಡುತ್ತಿರುವುದು ತಿಳಿದು ಬಂದಿದೆ.
೧೧.ಪ್ರತಿವಾದಿಗಳು ಹೆಚ್ಚಿನವರು ಸರ್ಕಾರದ ವಸತಿ ಸೌಲಭ್ಯವನ್ನು ಪಡೆದುಕೊಂಡಿಲ್ಲ ಎಂಬುದು ವ್ಯಕ್ತವಾಗಿದೆ.
೧೨.ಕೃಷಿ ಕಾರ್ಮಿಕರ ಮನೆಯಲ್ಲಿ ಮೂಲ ಸೌಕರ್ಯವು ಚೆನ್ನಾಗಿರುವುದು ತಿಳಿದು ಬಂದಿದೆ.
೧೩.ಹೆಚ್ಚಿನ ಪ್ರತಿವಾದಿಗಳು ಯಾವುದೇ ರೀತಿಯಾದ ದುಶ್ಚಟಗಳಿಗೆ ದಾಸರಾಗಿರುವುದಿಲ್ಲ.
೧೪.ಮಧ್ಯಪಾನ ಮಾಡುವ ಹೆಚ್ಚಿನ ಪ್ರತಿವಾದಿಗಳು ಮಧ್ಯಪಾನ ಮಾಡುವುದರ ಕಾರಣ ರೂಢಿಯಾಗಿರುವುದಾಗಿದೆ.
೧೫.ಬಹುಪಾಲು ಪ್ರತಿವಾದಿಗಳು ಸ್ವಂತ ಭೂಮಿಯನ್ನು ಹೊಂದಿರುವುದು ತಿಳಿದು ಬಂದಿದೆ.
೧೬.ಹೆಚ್ಚಿನ ಪ್ರತಿವಾದಿಗಳು ಕೃಷಿ ಕೂಲಿ ಸಮಯ ಹೆಚ್ಚಿಗೆ ಇರುವುದನ್ನು ಸೂಚಿಸುತ್ತದೆ.
೧೭.ಪ್ರತಿವಾದಿಗಳಿಗೆ ನೀಡುವ ಕೂಲಿಯು ಕಡಿಮೆಯಾಗಿದ್ದು ಆದರೆ ಹೆಚ್ಚು ಕಾಲ ದುಡಿಮೆ ಮಾಡಿಸಿಕೊಳ್ಳುತ್ತಿದ್ದಾರೆ ಎಂಬುದು ತಿಳಿದು ಬಂದಿದೆ.
೧೮.ಪ್ರತಿವಾದಿಗಳ ಮನೆಯ ಸದಸ್ಯರು ಹೆಚ್ಚಿನವರು ಬೇರೆ ಯಾವುದೇ ಕೆಲಸಕ್ಕೆ ಹೋಗುತ್ತಿಲ್ಲ ಎಂಬುದು ತಿಳಿದು ಬಂದಿದೆ.
೧೯.ಬಹುತೇಕ ಪ್ರತಿವಾದಿಗಳಿಗೆ ದಿನಗೂಲಿ ಕೆಲಸವು ತೃಪ್ತಿಯನ್ನು ತಂದುಕೊಟ್ಟಿಲ್ಲ ಎಂಬುದನ್ನು ವ್ಯಕ್ತಪಡಿಸಿದ್ದಾರೆ.
೨೦.ಪ್ರತಿವಾದಿಗಳು ಹೆಚ್ಚಿನವರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ ಎಂಬುದು ತಿಳಿದು ಬಂದಿದೆ.
೨೧.ಪ್ರತಿವಾದಿಗಳು ಜಾತಿ ವ್ಯವಸ್ಥೆಯನ್ನು ಮುಂದುವರೆಸುತ್ತಿರುವುದು ಕಂಡುಬರುತ್ತದೆ.
೨೨.ಪ್ರತಿವಾದಿಗಳ ಕೂಲಿ ನಿರ್ಧಾರಗಳಲ್ಲಿ ಪ್ರತಿವಾದಿಗಳ ಯಾವುದೇ ಮನ್ನಣೆ ಇಲ್ಲ ಎಂಬುದು ತಿಳಿದು ಬರುತ್ತದೆ.
೨೩.ಪ್ರತಿವಾದಿಗಳ ಸಮಸ್ಯೆಗಳ ನಿವಾರಣೆಗೆ ಸರ್ಕಾರ ತೆಗೆದುಕೊಂಡ ಕ್ರಮಗಳು ಸಮರ್ಪಕ ರೀತಿಯಲ್ಲಿ ಇಲ್ಲ ಎಂಬುದು ವ್ಯಕ್ತವಾಗಿದೆ.
೨೪.ಸಾಮಾಜಿಕ, ಸಮಾನತೆ, ಸಾಮಾಜಿಕ ನ್ಯಾಯ, ಪುರುಷರಿಗೆ ಸಮನಾಗಿ ಮಹಿಳೆಯರು ದುಡಿದರು ಅವರಿಗೆ ಕಡಿಮೆ ಕೂಲಿ ವಿತರಿಸಲಾಗುತ್ತಿದೆ ಎಂಬುದು ಪ್ರತಿವಾದಿಗಳ ಅಭಿಮತ.
೨೫.ಪ್ರತಿವಾದಿಗಳಿಗೆ ಸಮಾಜದಲ್ಲಿ ಸಮಾನ ಸ್ಥಾನಮಾನ ದೊರೆತಿಲ್ಲ ಎಂಬುದು ವ್ಯಕ್ತವಾಗಿದೆ.
೨೬.ಪ್ರತಿವಾದಿಗಳ ಕೆಲಸವು ಋತುಮಾನದ ಕಸುಬು ಆಗಿರುವುದರಿಂದ ಅವರಿಗೆ ವರ್ಷದಲ್ಲಿ ಕೆಲವೇ ತಿಂಗಳು ಕೆಲಸ ಸಿಗುತ್ತದೆ ಎಂಬುದು ತಿಳಿದು ಬರುತ್ತದೆ.
ಈ ಮೇಲಿನ ಎಲ್ಲಾ ಅಂಶಗಳು ಸಂಶೋಧಕನ ಅಧ್ಯಯನದಿಂದ ಹೊರಬಂದ ಅಂಶವಾಗಿದೆ. ಇದರಿಂದ ದಿನಗೂಲಿ ಕೃಷಿ ಕಾರ್ಮಿಕರ ಸಾಮಾಜಿಕ ಆರ್ಥಿಕ ಸ್ಥಿತಿಗತಿಗಳು ಮತ್ತು ಕೂಲಿ ತಾರತಮ್ಯ ಹೆಚ್ಚಾಗಿ ಕಂಡು ಬರುತ್ತದೆ. ಈ ಎಲ್ಲಾ ಸಮಸ್ಯೆಗೆ ಸರ್ಕಾರದ ಕಾರ್ಯಕ್ರಮಗಳು ಯೋಜನೆಗಳು ಸರಿಯಾದ ರೀತಿಯಲ್ಲಿ ರೂಪಿಸಬೇಕು ಮತ್ತು ಕಾರ್ಯರೂಪಕ್ಕೆ ಬರಬೇಕು ಎಂಬುದನ್ನು ತಿಳಿಸುತ್ತದೆ.

ಸಲಹೆಗಳು :
ಭಾರತ ಒಂದು ಕೃಷಿ ಪ್ರಧಾನ ರಾಷ್ಟ್ರವಾಗಿದೆ ಬಹುಪಾಲು ಜನರು ಕೃಷಿಯನ್ನೇ ಅವಲಂಭಿಸಿದ್ದಾರೆ. ಕೃಷಿ ಕೆಲಸದಲ್ಲಿ ತೊಡಗಿರುವವರನ್ನು ಕೃಷಿ ಕಾರ್ಮಿಕರು ಎಂದು ಕರೆಯಲಾಗುತ್ತದೆ. ಅವರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು ಅವುಗಳ ನಿವಾರಣೆಗೆ ಅನೇಕ ಸಲಹೆಗಳನ್ನು ನೀಡಬಹುದಾಗಿದೆ.
೧.ಕೃಷಿ ಕಾರ್ಮಿಕರು ಮಾಡುವ ಕೆಲಸಕ್ಕೆ ಸರಿಯಾದ ಕೂಲಿಯನ್ನು ವಿತರಿಸಬೇಕು
೨.ಕೃಷಿ ಕೂಲಿ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು
೩.ಕೃಷಿಯ ಮೇಲಿನ ಅವಲಂಬನೆ ಮಾಡಲು ಗೃಹ ಮತ್ತು ಸಣ್ಣ ಕೈಗಾರಿಕೆಗಳನ್ನು ಹೆಚ್ಚಿಸುವುದು.
೪.ಭೂ ರಹಿತ ಕೃಷಿ ಕಾರ್ಮಿಕರಿಗೆ ಪುನರ್ವಸತಿ ಸೌಲಭ್ಯ ಒದಗಿಸಬೇಕು
೫.ಸರ್ಕಾರದ ಕಾರ್ಯಕ್ರಮಗಳನ್ನು ಸಮರ್ಪಕ ರೀತಿಯಲ್ಲಿ ಜಾರಿಗೆ ತರಬೇಕು
೬.ಕೂಲಿ ವಿತರಣೆಯಲ್ಲಿ ಲಿಂಗ ತಾರತಮ್ಯ ಇಲ್ಲದಂತೆ ನೋಡಿಕೊಳ್ಳಬೇಕು
೭.ಹಣಕಾಸು ಸೌಲಭ್ಯಗಳನ್ನು ವಿಸ್ತರಿಸಿ ಕೃಷಿ ಕಾರ್ಮಿಕರಿಗೆ ಕಡಿಮೆ ದರದಲ್ಲಿ ಸಾಲದ ಸೌಲಭ್ಯಗಳನ್ನು ನೀಡಬೇಕು.
೮.ಕೃಷಿ ಕಾರ್ಮಿಕರು ಹಕ್ಕು ಬಾಧ್ಯತೆಗಳ ಬಗ್ಗೆ ಅವರಿಗೆ ಸರಿಯಾದ ಮಾಹಿತಿ ನೀಡಬೇಕು.
೯.ಕೃಷಿ ಕಾರ್ಮಿಕರ ದುಡಿಮೆಯ ಅವಧಿಯನ್ನು ೮ ಗಂಟೆಗಳಿಗೆ ಸೀಮಿತಗೊಳಿಸಬೇಕು.
೧೦.ಕೃಷಿ ಕಾರ್ಮಿಕರು ಹೆಚ್ಚಾಗಿ ಅವಿದ್ಯಾವಂತರಾಗಿರುವುದರಿಂದ ಅವರಿಗೆ ತಾಂತ್ರಿಕ ಮತ್ತು ವೃತ್ತಿ ಪರ ಶಿಕ್ಷಣ ನೀಡಬೇಕು.
೧೧.ಕೃಷಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಗಳನ್ನು ಒದಗಿಸಬೇಕು
೧೨.ಕೃಷಿಯಲ್ಲಿ ಬಾಲ ಕಾರ್ಮಿಕರು ಇರದಂತೆ ನೋಡಿಕೊಳ್ಳಬೇಕು.
೧೩.ಕೃಷಿ ಬದಲಾಗಿ ಪರ್ಯಾಯ ಉದ್ಯೋಗವನ್ನು ಕಲ್ಪಿಸಬೇಕು.
೧೪.ಸಹಕಾರಿ ಕೃಷಿ ಕ್ರಮವನ್ನು ಜಾರಿಗೆ ತರುಬೇಕು.

ಉಪಸಂಹಾರ :
ಕೃಷಿ ಕಾರ್ಮಿಕರು ಎಂಬ ಆರ್ಥಿಕ ಪರಿಕಲ್ಪನೆ ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಜಗತ್ತಿನ ಅಭಿವೃದ್ಧಿ ಹೊಂದಿದ ರಾಷ್ಟ್ರವಾದ ಅಮೇರಿಕವು ಈ ಸಮಸ್ಯೆಯಿಂದ ಹೊರತಾಗಿಲ್ಲ. ಇಂದು ಶೇ.೮೫ರಷ್ಟು ಜನತೆ ಭೂ ರಹಿತರಾಗಿದ್ದಾರೆ. ಭಾರತದಲ್ಲಿ ಕೃಷಿ ಕಾರ್ಮಿಕರು ಆರ್ಥಿಕವಾಗಿ, ಸಾಮಾಜಿಕವಾಗಿ, ತುಂಬಾ ಹಿಂದುಳಿದಿದ್ದು ಅವರು ತುಂಬಾ ನಿಕೃಷ್ಟವಾದ ಜೀವನ ಮಟ್ಟವನ್ನು ಸಾಗಿಸುತ್ತಿದ್ದಾರೆ. ಭಾರತದಲ್ಲಿ ಕೃಷಿ ಕಾರ್ಮಿಕರು ಮೂಲೆ ಗುಂಪಾಗಿದ್ದು ಸಂಘಟನೆ ಎಂಬ ಪರಿಕಲ್ಪನೆಯ ಅರ್ಥವೇ ತಿಳಿಯದ ಈ ಜನ ಭಾರತದ ಅರ್ಥ ವ್ಯವಸ್ಥೆಗೆ ಸ್ಥಿತಿಯಲ್ಲಿ ಇವರ ಪಾಲು ಶೋಷಿತರ ಪಾಲಿಗಿಂತ ಹೊರತಾಗಿಲ್ಲ ಹಸಿವು ಬಡತನ ಕಿತ್ತು ತಿನ್ನುವ ಇಂದಿನ ಸಮಾಜದ ಆಡಂಬರದ ಬದುಕಿನಲ್ಲಿ ಕೃಷಿ ಕಾರ್ಮಿಕರು ಯಾವ ವರ್ಗಕ್ಕೆ ಬರುತ್ತಾರೆಂಬುದೇ ವಿವಾದವಾಗಿದೆ. ಭಾರತ ಸರ್ಕಾರ ಕನಿಷ್ಠ ಕೂಲಿ ಕಾಯಿದೆಯನ್ನು ಜಾರಿಗೆ ತಂದಿದ್ದರು. ಅದು ಸರಿಯಾದ ರೀತಿಯಲ್ಲಿ ಅನುಷ್ಠಾನಕ್ಕೆ ಬಾರದಿರುವುದು ಇಲ್ಲಿ ಕಂಡು ಬರುತ್ತದೆ. ಭಾರತ ಸರ್ಕಾರದ ಯೋಜನೆಗಳು ಸರ್ಕಾರದ ಕಾನೂನು ಕಾಯಿದೆಗಳು ಜಮೀನ್ದಾರ ಕೃಷಿಕರಿಗೆ ಹೊರತು ಕೃಷಿಯನ್ನು ಮಾಡುವ ಕೃಷಿ ಕಾರ್ಮಿಕರಿಗಲ್ಲ. ಇವರಿಗೆ ಭದ್ರತೆಯಿಲ್ಲದ ಬಂಗಲೆಯಲ್ಲಿ ಬಂಜರಾಗಿ ನಿಂತಿದ್ದಾನೆ. ಕೃಷಿ ಕಾರ್ಮಿಕರು ಭಾರತದಲ್ಲಿ ಒಂದು ಪ್ರಮಾಣ ಸಂಪನ್ಮೂಲ ಇವರು ಸಮರ್ಪಕವಾಗಿ ಕೃಷಿ ಚಟುವಟಿಕೆಗಳನ್ನು ಕೈಗೊಂಡಾಗ ಮಾತ್ರ ದೇಶದ ಆದಾಯದ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗುತ್ತದೆ. ಕೃಷಿ ಕಾರ್ಮಿಕರ ಸಂಖ್ಯೆ ತೀವ್ರ ಗತಿಯಲ್ಲಿ ಬೆಳೆಯುತ್ತಿದೆ. ಅವರ ಸಂಖ್ಯೆ ಹೆಚ್ಚಾದಂತೆಲ್ಲಾ ಹೆಚ್ಚು ಸಮಸ್ಯೆಗಳು ಇರುವುದು ಕಂಡು ಬರುತ್ತದೆ. ಅವರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಉತ್ತಮವಾದ ಸೌಲಭ್ಯವನ್ನು ಕಲ್ಪಿಸಬೇಕಾಗಿದೆ. ಕೃಷಿ ಕಾರ್ಮಿಕರು ತಮ್ಮ ದಿನನಿತ್ಯದ ಬದುಕಿನಲ್ಲಿ ಕನಿಷ್ಟ ಅವಶ್ಯಕತೆಗಳನ್ನು ತಾವೇ ಅಲೆಮಾರಿಗಳಾಗಿ ಪಡೆಯುತ್ತಿರುವುದರಿಂದ ಜನ್ಮ ನೀಡಿದ ಈ ಭೂಮಿಯ ಋಣ ತೀರಿಸಲೆಂದೇ ಹುಟ್ಟಿದ್ದೇವೆ ಎಂಬ ನಿರ್ಧಾರಕ್ಕೆ ಬಂದಿರುವುದು ಕೃಷಿಯಿಂದ ವಲಸೆ ಹೋಗುವುದು ನಿಂತು ನೆಲೆಯಾಗಲು ಪ್ರಯತ್ನಿಸುತ್ತಿದ್ದಾರೆ.

ಆಧಾರ ಗ್ರಂಥಗಳು
೧. ಡಿ. ವೆಂಕಟರಾವ್: ಕೃಷಿ ಅರ್ಥಶಾಸ್ತ್ರ, ಲಕ್ಷ್ಮಿ ಪ್ರಿಂಟಿಂಗ್ ಅಂಡ್ ಪಬ್ಲಿಷಿಂಗ್
 ಹೌಸ್, ಮೈಸೂರು, ಪ್ರಥಮ ಮುದ್ರಣ ೨೦೦೦.
 ಪು. ಸಂ. ೨೨೦
೨. ಎಂ.ಎಸ್. ಕಲ್ಲೂರು: ಕೃಷಿ ಅರ್ಥಶಾಸ್ತ್ರ, ಕಲಾ ಪ್ರಕಾಶನ, ಬೆಂಗಳೂರು
 ಪ್ರಥಮ ಮುದ್ರಣ ೨೦೦೦, ಪು.ಸಂ. ೫೩೬
೩. ಹೆಚ್. ಆರ್. ಕೃಷ್ಣಯ್ಯ ಗೌಡ: ಭಾರತದ ಆರ್ಥಿಕ ವ್ಯವಸ್ಥೆ ಸಮಸ್ಯ,
 ಲಕ್ಷ್ಮಿ ಪ್ರಿಂಟಿಂಗ್ ಅಂಡ್ ಪಬ್ಲಿಕೇಷನ್ ಹೌಸ್, ಮೈಸೂರು
 ಪ್ರಥಮ ಮುದ್ರಣ ೧೯೯೯, ಪು.ಸಂ ೨೪೦
೪. ಹೆಚ್. ಆರ್. ಕೃಷ್ಣಯ್ಯ ಗೌಡ: ಭಾರತದ ಆರ್ಥಿಕ ವ್ಯವಸ್ಥೆ ಸಮಸ್ಯ,
 ಚೇತನ್ ಬುಕ್ ಹೌಸ್,
 ಪ್ರಥಮ ಮುದ್ರಣ ೧೯೯೫, ಪು.ಸಂ ೪೪೨
೫. ಕೆ.ಡಿ. ಬಸವ: ಭಾರತದ ಅರ್ಥವ್ಯವಸ್ಥೆಯ ಪರಿಚಯ
೬. ಶರಣಪ್ಪ: ಭಾರತದ ಆರ್ಥಿಕ ಸಮಸ್ಯೆಗಳು,
ಚೇತನ್ ಬುಕ್ ಹೌಸ್, ಪು.ಸಂ. ೧೯೮
೭. ಪ್ರಭಾಕರ ಶಿಶಿಲ: ಆಧುನಿಕ ಬಾರತದ ಆರ್ಥಿಕ ಸಮಸ್ಯೆಗಳು
 ಸುಧಾ ಪಬ್ಲಿಕೇಷನ್ಸ್, ಬೆಂಗಳೂರು.
೮. ಕರ್ನಾಟಕ ರಾಜ್ಯ ಕೃಷಿ: ರೈತ ಸಂಜೀವಿನಿ ಅಪಘಾತ, ವಿಮಾ ಯೋಜನೆ,
 ಮಾರಾಟ ಮಂಡಳಿ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ
 ಮುದ್ರಣಾಲಯ, ವಿದ್ಯಾನಗರ, ಹುಬ್ಬಳ್ಳಿ.
೯. ನಾರಾಯಣ ಎಂ.: ಸಾಮಾಜಿಕ ಸಂಶೋಧನೆ,
 ಲಕ್ಷ್ಮಿ ಪ್ರಿಂಟಿಂಗ್ ಪಬ್ಲಿಷಿಂಗ್ ಹೌಸ್, ಮೈಸೂರು.

ಪ್ರಶ್ನಾವಳಿ
ಗ್ರಾಮೀಣ ಪ್ರದೇಶದಲ್ಲಿನ ದಿನಗೂಲಿ ಕೃಷಿ ಕಾರ್ಮಿಕರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಒಂದು ಕಿರು ಅಧ್ಯಯನ
೧.ಪ್ರತಿವಾದಿಗಳ ವೈಯಕ್ತಿಕ ಮಾಹಿತಿ
೧. ಹೆಸರು:
೨. ಲಿಂಗ: ಎ) ಸ್ತ್ರೀ ಬಿ) ಪುರುಷ
೩. ವಯಸ್ಸು: ಎ) ೨೫ರಿಂದ ೩೫ ಬಿ) ೩೬ ರಿಂದ ೪೫
 ಸಿ) ೪೬ ರಿಂದ ೬೦ ಡಿ) ೬೧ಕ್ಕೂ ಮೇಲ್ಪಟ್ಟು
೪.ವಿದ್ಯಾರ್ಹತೆ: ಎ) ಅನಕ್ಷರಸ್ಥರು ಬಿ) ಪ್ರಾಥಮಿಕ ಸಿ) ಪ್ರೌಢ ಡಿ) ಪದವಿ
೫.ಜಾತಿ: ಎ) ಒಕ್ಕಲಿಗ ಬಿ) ಎಸ್.ಸಿ. ಸಿ) ಎಸ್.ಟಿ. ಡಿ) ಇತರೆ
೬.ವೈವಾಹಿಕ ಸ್ಥಿತಿ: ಎ) ಅವಿವಾಹಿತ ಬಿ) ವಿವಾಹಿತ ಸಿ) ವಿಧುರ/ ವಿಧವೆ
 ಡಿ) ವಿಚ್ಛೇದನ
೭.ಧರ್ಮ: ಎ) ಹಿಂದೂ ಬಿ) ಮುಸ್ಲಿಂ ಸಿ) ಕ್ರೈಸ್ತ ಡಿ) ಇತರೆ
೮.ಕುಟುಂಬದ ಸ್ವರೂಪ ಎ) ಅವಿಭಕ್ತ ಕುಟುಂಬ () ಬಿ) ವಿಭಕ್ತ ಕುಟುಂಬ()
೯.ಉದ್ಯೋಗ ಎ) ಕೃಷಿ ಕೂಲಿ ಕಾರ್ಮಿಕರು () ಬಿ) ವ್ಯವಸಾಯ ಸಿ) ಇತರೆ()
೧೦.ವೈಯಕ್ತಿಕ ವಾರ್ಷಿಕ ವರಮಾನ ಎ) ೭೦೦೦ -೮೦೦೦ ಬಿ) ೯೦೦೦ ೧೦೦೦೦ (ಸಿ) ೧೧೦೦೦ ೧೨೦೦೦ () ಡಿ)೧೨೦೦೦ಕ್ಕೂ ಮೇಲ್ಪಟ್ಟು ()

ಕುಟುಂಬದಲ್ಲಿನ ಸದಸ್ಯರ ವಿವರ
 ಕ್ರ.ಸಂಹೆಸರುಸಂಬಂಧಲಿಂಗವಯಸ್ಸುವಿದ್ಯಾರ್ಯತೆವೃತ್ತಿ

 ೨.ಕೃಷಿ ಕಾರ್ಮಿಕರ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿ
೧೧.ನೀವು ಮನೆಯನ್ನು ಹೊಂದಿರುವಿರಾ? ಎ) ಹೌದು () ಬಿ) ಇಲ್ಲ()
೧೨.ಹೌದು ಎನ್ನುವುದಾದರೆ ಯಾವ ರೀತಿಯ ಮನೆಯನ್ನು ಹೊಂದಿದ್ದೀರಿ? ಎ) ಸ್ವಂತ ಮನೆ ಬಿ) ಬಾಡಿಗೆ ಮನೆ()
೧೩.ನೀವು ಸ್ವಂತ ಮನೆಯಲ್ಲಿ ವಾಸಿಸುತ್ತಿದ್ದರೆ ಮನೆಯ ವಿಧ ಯಾವುದು? ಎ) ಗುಡಿಸಲು ಬಿ) ಹೆಂಚಿನ ಮನೆ () ಸಿ) ಶೀಟಿನ ಮನೆ (ಡಿ) ಆರ್.ಸಿ.ಸಿ. ಕಟ್ಟಡ ಇ) ಇತರೆ()
೧೪.ಈ ಕೆಳಕಂಡ ಸರ್ಕಾರದ ಯಾವುದಾದರೂ ಯೋಜನೆಯಡಿಯಲ್ಲಿ ವಸತಿ ಸೌಲಭ್ಯವನ್ನು ಹೊಂದಿದ್ದೀರಾ? ಎ) ಆಶ್ರಯ ಯೋಜನೆ () ಬಿ) ಇಂದಿರಾ ಆವಾಸ್ ಯೋಜನೆ() ಸಿ) ಅಂಬೇಡ್ಕರ್ ವಸತಿ ಯೋಜನೆಡಿ) ಬಸವ ಯೋಜನೆ()
೧೫.ನಿಮ್ಮ ಮನೆಯಲ್ಲಿ ಈ ಕೆಳಕಂಡ ಯಾವುದಾದರೂ ವಸ್ತುಗಳನ್ನು ಹೊಂದಿರುವಿರಾ? ಎ) ಹೌದು () ಬಿ) ಇಲ್ಲ()
೧.ಟೆಲಿಫೋನ್
 ೨.ದೂರದರ್ಶನ
೩.ರೇಡಿಯೋ
೪.ಸಿ.ಡಿ., ಡಿ.ವಿ.ಡಿ., ವಿ.ಸಿ.ಆರ್.
೫.ಮೋಟಾರು ವಾಹನಗಳು
೧೬. ನಿಮ್ಮ ಮನೆಯಲ್ಲಿ ಈ ಕೆಳಕಂಡ ಮೂಲ ಸೌಕರ್ಯಗಳನ್ನು ಹೊಂದಿದ್ದೀರಾ? ಎ) ಅಡುಗೆ ಕೋಣೆ () ಬಿ) ಮಲಗುವ ಕೋಣೆ (ಸಿ) ಸ್ನಾನದ ಗೃಹ/ ಶೌಚಾಲಯ() ಡಿ) ಮೇಲಿನ ಎಲ್ಲವೂ
೧೭.ನೀವು ಈ ಕೆಳಕಂಡ ಯಾವುದಾದರೂ ದುಶ್ಚಟಗಳಿಗೆ ದಾಸರಾಗಿದ್ದೀರಾ? ಎ) ಮಧ್ಯಪಾನ ಬಿ) ದೂಮಪಾನ () ಸಿ) ತಂಬಾಕು () ಡಿ) ಯಾವುದು ಇಲ್ಲ
೧೮.ನೀವು ಮಧ್ಯಪಾನ ಅಥವಾ ಧೂಮಪಾನ ಮಾಡುತ್ತೀರಾ? ಎ) ಹೌದು ಬಿ) ಇಲ್ಲ
೧೯.ಮಧ್ಯಪಾನ ಮಾಡುವುದಾದರೆ ಕಾರಣ ಎ) ಕೆಲಸದ ಆಯಾಸ (ಬಿ) ರೂಢಿಯಾಗಿರುವುದು ಸಿ) ಇತರೆ()
೨೦.ಸ್ವಂತ ಭೂಮಿಯನ್ನು ಹೊಂದಿರುವಿರಾ? ಎ) ಹೌದು () ಬಿ) ಇಲ್ಲ()
೨೧.ದಿನದಲ್ಲಿ ಎಷ್ಟು ಘಂಟೆ ಕೂಲಿ ಕೆಲಸ ಮಾಡುತ್ತೀರಾ? ಎ) ೫ (ಬಿ) ೬ ಸಿ) ೮ () ಡಿ) ೧೦ ()
೨೨. ನೀವು ದಿನವೊಂದಕ್ಕೆ ಪಡೆಯುವ ಕೂಲಿ ಎಷ್ಟು ಎ) ೧೦೦ ಬಿ) ೧೨೫ ಸಿ) ೧೫೦ ಡಿ) ೨೦೦
೨೩.ನಿಮ್ಮ ಮನೆಯ ಇತರೆ ಸಧಸ್ಯರು ಬೇರೆ ಯಾವುದಾದರೆ ಕೆಲಸಕ್ಕೆ ಹೋಗುತಿದ್ಧಾರಾ? ಎ) ಹೌದು ಬಿ) ಇಲ್ಲ
೨೪.ನೀವು ಮಾಡುತ್ತಿರುವ ಕೆಲಸವು ನಿಮಗೆ ತೃಪ್ತಿಯನ್ನು ನೀಡುತ್ತಿದೆಯೇ? ಎ) ಹೌದು ಬಿ) ಇಲ್ಲ
೨೫. ನೀವು ಈ ಕೆಳಕಂಡ ಯಾವ ಸ್ಥಳಗಳಲ್ಲಿ ಆರೋಗ್ಯ ಚಿಕಿತ್ಸೆ ಪಡೆಯುತ್ತೀರಿ?
ಎ) ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಸರ್ಕಾರಿ ಆಸ್ಪತ್ರೆ() ಬಿ) ಖಾಸಗಿ ಆಸ್ಪತ್ರೆಸಿ) ಮನೆ ಮದ್ದು ಅಥವಾ ಮಾಟ ಮಂತ್ರಾ() ಡಿ) ಕ್ಲೀನಿಕ್ (ಇ) ಆಯುರ್ವೇದಿಕ್()
೨೬. ನಿಮ್ಮ ಊರಿನಲ್ಲಿ ಸಾಮಾನ್ಯವಾಗಿ ಆಚರಿಸುವ ಹಬ್ಬ ಯಾವುದು?
 ಎ) ಯುಗಾದಿ ಬಿ) ಸಂಕ್ರಾಂತಿ ಸಿ) ಗಣೇಶ ಚತುರ್ಥಿ ಡಿ) ಎಲ್ಲಾ ಹಬ್ಬಗಳು
೨೭. ನೀವು ಹಬ್ಬ ಹರಿದಿನಗಳಲ್ಲಿ ಅಥವಾ ಜಾತ್ರೆಯಲ್ಲಿ ಬೇರೆ ಜಾತಿಯವರೊಡನೆ ಬೆರೆಯುತ್ತೀರಾ? ಎ) ಹೌದು ಬಿ) ಇಲ್ಲ
೨೮. ಕೂಲಿ ನಿರ್ಧಾರದಲ್ಲಿ ನಿಮ್ಮ ತೀರ್ಮಾನಕ್ಕೆ ಮನ್ನಣೆ ಇದೆಯೇ? ಎ) ಹೌದು ಬಿ) ಇಲ್ಲ
೨೯. ಸರ್ಕಾರ ನಿಮ್ಮ ಸಮಸ್ಯೆಗಳ ನಿವಾರಣೆಗೆ ಯಾವುದಾದರೂ ಕ್ರಮ ಕೈಗೊಂಡಿದೆಯೇ? (ಎ) ಹೌದು ಬಿ) ಇಲ್ಲ
೩೦. ಹೌದು ಆಗಿದ್ದಲ್ಲಿ ಯಾವ ಕ್ರಮಗಳನ್ನು ಕೈಗೊಂಡಿದೆ? ಎ) ಕೂಲಿಗಾಗಿ ಕಾಳು ಯೋಜನೆ ಬಿ) ಉದ್ಯೋಗ ಖಾತರಿ ಯೋಜನೆ (ಸಿ) ಕನಿಷ್ಠ ಕೂಲಿ()ಡಿ) ಭೂ ಸುಧಾರಣೆ ಕ್ರಮಗಳು()
೩೧. ಸಮಸ್ಯೆಗಳ ನಿವಾರಣೆಗೆ ನೀವು ಸ್ವ-ಸಹಾಯ ಗುಂಪಿನ ರಚನೆ ಮಾಡಿಕೊಂಡಿದ್ದೀರಾ? ಎ) ಹೌದು ಬಿ) ಇಲ್ಲ
೩೨. ನೀವು ಮಾಡಿಕೊಂಡಿರುವ ಸ್ವ-ಸಹಾಯ ಗುಂಪಿನಿಂದ ನಿಮ್ಮ ಸಮಸ್ಯೆಗೆ ಪರಿಹಾರ ದೊರಕಿದೆಯೇ? ಎ) ಹೌದು ಬಿ) ಇಲ್ಲ
೩೩. ದಿನಗೂಲಿ ಕೆಲಸವನ್ನು ಬಿಟ್ಟು ನೀವು ಬೇರೆಯಾವುದಾದರೂ ಕುಲ ಕಸುಬನ್ನು ಮಾಡುತ್ತಿದ್ದೀರಾ? ಎ) ಹೌದು ಬಿ) ಇಲ್ಲ

ಕರ್ನಾಟಕ ರಾಜ್ಯದ ಸಕಾಲ ಕಾರ್ಯಕ್ರಮದ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯರಿಗೆ ಇರುವ ಅರಿವನ್ನು ಕುರಿತು ಒಂದು ಅಧ್ಯಯನ


ವಿಶೇಷವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಸಾಧಲಿ ಹೋಬಳಿಯ ಗ್ರಾಮ ಪಂಚಾಯ್ತಿಗಳಿಗೆ ಸಂಬಂಧಿಸಿದಂತೆ.

-ನಾರಾಯಣ ಸ್ವಾಮಿ, ಪ್ರಶಿಕ್ಶಣಾರ್ಥಿ, ಸಮಾಜಕಾರ್ಯ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ.

ಅಧ್ಯಾಯ-೧. ಪ್ರಸ್ತಾವನೆ
ಸರ್ಕಾರದ ಆಡಳಿತದಲ್ಲಿ ಸುಧಾರಣೆ ಅಥವಾ ಆಡಳಿತದಲ್ಲಿ ದಕ್ಷತೆ, ಪಾರದರ್ಶಕತೆ, ಪ್ರಾಮಾಣಿಕತೆ ಮತ್ತು ಸೇವಾ ನಿಷ್ಠೆ ಹೆಚ್ಚಿಸುವುದರ ಜೊತೆಗೆ ನಾಗರಿಕರಿಗೆ ನಿಗದಿತ ಸಮಯದಲ್ಲಿ ನಾಗರಿಕ ಸೇವೆಗಳನ್ನು ಒದಗಿಸಿಕೊಡುವುದಕ್ಕಾಗಿ ರಾಜ್ಯ ಸರ್ಕಾರವು ದಿನಾಂಕ:-೦೨ ಏಪ್ರಿಲ್ ೨೦೧೨ರಂದು ಮಹಾತ್ವಾಕಾಂಷೆಯ ನಾಗರಿಕ ಸೇವಾ ಖಾತರಿ ಕಾಯಿದೆ ರಾಜ್ಯದೆಲ್ಲೆಡೆ ಪ್ರಾಮಾಣಿಕವಾಗಿ ಅನುಷ್ಠಾನಗೊಂಡಲ್ಲಿ ನಾಗರಿಕರ ಜೀವನದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ನಾಂದಿಯಾಗುತ್ತದೆ.
 ಕರ್ನಾಟಕ ನಾಗರಿಕ ಸೇವೆಗಳ ಖಾತರಿ ಅಧಿನಿಯಮ-೨೦೧೧, ಇದು ನಾಗರಿಕರಿಗೆ ಮೂಲಭೂತ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ದಕ್ಷತೆ ಪಾರದರ್ಶಕತೆ ಕಾಲಬದ್ದತೆ ಮತ್ತು ಜವಾಬ್ದಾರಿಯನ್ನು ಖಚಿತಪಡಿಸುವ ದೃಡ ಬದ್ದತೆಯನ್ನು ಸೂಚಿಸುತ್ತದೆ. ಈ ಅದ್ಯಯನ ಕೈಗೊಳ್ಳುವಾಗ ಸದರಿ ಕಾಯ್ದೆಯಲ್ಲಿ ೩೦ ಇಲಾಖೆಗಳು ೨೬೫ ಸೇವೆಗಳು ಒಳಪಟ್ಟಿದ್ದು ರಾಜ್ಯದಾದ್ಯಂತ ಈ ಕಾಯಿದೆಯನ್ನು ಸೂಚಿತ ಎಲ್ಲಾ ಇಲಾಖೆಗಳಲ್ಲಿಯು ಜಾರಿಗೆ ತರಲಾಗಿದೆ. ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ಸಕಾಲದಲ್ಲಿ ದೊರೆಯಬೇಕು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಪ್ರಯೋಜನ ದೊರೆಯಬೇಕು.ಅಭಿವೃದ್ದಿಯ ವೇಗ ಹೆಚ್ಚಿಸುವುದರ ಜೊತೆಗೆ ಎಲ್ಲಾರನ್ನೂ ಒಳಗೊಂಡ ಅಭಿವೃದ್ಧಿ ಸಾಧ್ಯವಾಗಬೇಕು ಅಭಿವೃದ್ಧಿ ಕೇಂದ್ರಿತ ಆಡಳಿತದ ಜೊತೆಗೆ ಕೆಂಪು ಪಟ್ಟಿಗೆ ಅವಕಾಶವಿಲ್ಲದ ಪಾರದರ್ಶಕ ಆಡಳಿತ ನಮ್ಮ ಗುರಿಯಾಗಿದೆ.ನಮ್ಮ ಈ ಧ್ಯೇಯವನ್ನು ಸಾಕಾರಗೊಳಿಸಲು ಆಡಳಿತ ಶೈಲಿಯಲ್ಲಿ ಬದಲಾವಣೆ ಅನಿವಾರ್ಯ ಸರ್ಕಾರದ ಯಾವುದೇ ಒಂದು ಜನಪರ ಯೋಜನೆ ಯಶಸ್ಸು ಸಾಧಿಸಬೇಕಾದರೆ ಸರ್ಕಾರಿ ನೌಕರರು ಪ್ರಾಮಾಣಿಕವಾಗಿ ಸ್ವಂದಿಸಬೇಕಾಗಿರುವುದು ಮೊದಲು ಅವಶ್ಯಕತೆ ಅಂತೆಯೇ ನಾಗರಿಕರು ಅಂದರೆ ಸಾಮಾನ್ಯ ಜನರು ನಾಗರಿಕ ಸೇವಾ ಖಾತರಿ ಕಾಯಿದೆಯನ್ನು ಸರಿಯಾಗಿ ತಿಳಿದುಕೊಂಡು ಕಾನೂನಿನ ಉಪಯೋಗ ಪಡೆದುಕೊಳ್ಳಬೇಕಾದುದು ಅಷ್ಟೇ ಅವಶ್ಯಕವಾದ ಹೆಜ್ಜೆಯಾಗಿದೆ.
ನಾಗರಿಕರು ಏನು ಮಾಡುವ ಪರಿಸ್ಥಿತಿಯಲ್ಲಿರಲಿಲ್ಲ ನಿಸ್ಸಹಾಯಕರಾಗಿ ನೌಕರರು ಕೆಲಸ ಮಾಡಿಕೊಡುವವರೆಗೆ ಕಾಯಬೇಕಿತ್ತು ಆದರೆ ಈಗ ಅದೆಲ್ಲಾ ಬದಲಾಗಿದೆ. ಸರ್ಕಾರಿ ಕಛೇರಿಗಳಿಗೆ ಭೇಟಿ ನೀಡುವ ಸಾರ್ವಜನಿಕರಿಗೆ ಯಾವುದೇ ಸರ್ಕಾರಿ ಅಧಿಕಾರಿ ಅಥವಾ ಸಿಬ್ಬಂದಿ ಇಂದು ನಾಳೆ ಎನ್ನುವಂತಿಲ್ಲ.ಃಏಳಿದ ಸಮಯಕ್ಕೆ ಸೇವೆ ಮತ್ತು ಸವಲತ್ತುಗಳನ್ನು ಒದಗಿಸುವುದು ಕಡ್ಡಾಯವಾಗಿರುತ್ತದೆ.

ಸಕಾಲ ಕಾರ್ಯಕ್ರಮದ ಅರ್ಥ:-
ಒಟ್ಟಾರೆಯಾಗಿ ನಾಗರಿಕರ ಸೇವೆಗಳ ಖಾತರಿ ಕಾಯಿದೆಯನ್ನು ಹಾಗೂ ಅದರ ಪ್ರಕ್ರಿಯೆಯನ್ನು ಪರಿಗಣಿಸಿದರೆ ಒಂದು ನಿರ್ಧಿಷ್ಟ ಕಾಲಮಿತಿಯಲ್ಲಿ ಸೇವೆಯನ್ನು ಒದಗಿಸಲು ಒತ್ತು ಕೊಡಲಾಗಿದೆ.ಅಂದರೆ ನಾಗರಿಕರಿಗೆ ಸಕಾಲದಲ್ಲಿ ಸೇವೆ ಪಡೆದುಕೊಳ್ಳವುದು ನಾಗರಿಕರ ಹಕ್ಕು ಆಗಿರುತ್ತದೆ ಎಂಬುದು ಸರ್ಕಾರದ ಆಶಯ ಮತ್ತು ನೀತಿಯಾಗಿರುತ್ತದೆ.ಆದ್ದರಿಂದ ಕರ್ನಾಟಕ ಸರ್ಕಾರ ಈ ಕಾಯ್ದೆಯನ್ವಯ ಸೇವಾ ಯೋಜನೆಯನ್ನು ಸಕಾಲ ಎಂದು ಹೆಸರಿಸಿದೆ.
ಸರ್ಕಾರ ಅಂಗೀಕರಿಸಿರುವ ಯೋಜನೆಯ ಲಾಂಛನ ಮತ್ತು ಘೋಷ ವಾಕ್ಯಗಳು ನಾಗರಿಕರ ಸೇವೆಗಳ ಖಾತರಿ ಯೋಜನೆಯನ್ನು ಹಿಡಿದಿಟ್ಟಿವೆ.ಲಾಂಛನ ಗಡಿಯಾರ (ಸಮಯ)ವನ್ನು ಪ್ರತಿನಿಧಿಸುತ್ತದೆ.
ಇಂದು ನಾಳೆ ಇನ್ನಿಲ್ಲ ಹೇಳಿದ ಸಮಯಕ್ಕೆ ತಪ್ಪೀಲ್ಲ ಎಂಬುದು ಧ್ಯೇಯ(ಘೋಷ) ವಾಕ್ಯಗಳಾಗಿವೆ.

ಸಕಾಲ : ಹಿನ್ನೆಲೆ ಮತ್ತು ಉದ್ದೇಶ :-
 ಭಾರತದ ಸಂವಿಧಾನ ಪ್ರಜಾಪ್ರಭುತ್ವ ವ್ಯವಸ್ಥೆಯ ಜೀವಾಳವಾಗಿದು, ಎಲ್ಲವೂ ಸಂವಿಧಾನ ಸೂಚಿಸಿದಂತೆ ನಡೆಯಬೇಕು. ಎಲ್ಲಾ ಸಂಸ್ಥೆಗಳು ಎಲ್ಲಾ ಪ್ರಜೆಗಳು ಸಂವಿಧಾನಕ್ಕೆ ಬದ್ದರಾಗಿರಬೇಕು. ಈ ನಿಟ್ಟಿನಲ್ಲಿ ದೇಶದ ವ್ಯವಹಾರಗಳನ್ನು ನಿಭಾಯಿಸಲು ಸಂವಿಧಾನ ನಿರ್ದೇಶಿಸಿದಂತೆ ಶಾಸಕಾಂಗ ಕಾರ್ಯಾಂಗ ಮತ್ತು ನ್ಯಾಯಾಂಗ ವ್ಯವಸ್ಥೆಗಳು ಜಾರಿಯಲ್ಲಿವೆ.
 ಪ್ರಜಾಪ್ರಭುತ್ವ ವ್ಯವಸ್ಥೆ ತನ್ನ ಮೂಲಭೂತ ಆಶಯ ಮತ್ತು ತತ್ವಗಳಿಗನುಗುಣವಾಗಿ ಕೆಲಸ ಮಾಡಿದರೆ ಎಲ್ಲವೂ ಸುಲಲಿತ ಮತ್ತು ಸುಮಧುರವಾಗಿರುತ್ತದೆ. ಆದರೆ ಸಮಸ್ಯೆ ಪ್ರಾರಂಭವಾಗುವುದು ಚುನಾವಣೆಗಳ ನಂತರವೇ! ಸರ್ಕಾರ ರಚನೆಯಾಗಿ ಆಡಳಿತ ಕೈಗೆ ಬರುತ್ತಿದ್ದಂತೆ ಜನ ಪ್ರತಿನಿಧಿಗಳ ವರ್ತನೆ ಬದಲಾಗಿ ಬಿಡುತ್ತದೆ ಅವರು ಪ್ರಭುಗಳಾಗಿ ಬಿಡುತ್ತಾರೆ ಅವರು ಆಳಿ ದ ಹಾಗೆ ಜನ ಆಳಿಸಿ ಕೊಳ್ಳಬೇಕಾಗುತ್ತದೆ ಸರ್ಕಾರವನ್ನು ರಚಿಸುವ (ಪರೋಷವಾಗಿ) ಅಧಿಕಾರ ಜನರಿಗಿದ್ದರೂ, ಸರ್ಕಾರದ ಮಂತ್ರಿ/ನೌಕರರ ಮೇಲೆ ಜನರಿಗೆ ಯಾವುದೇ ನಿಯಂತ್ರಣ ಇರುವುದಿಲ್ಲ ಹಾಗಾಗಿ ದಿನನಿತ್ಯದ ವ್ಯವಹಾರಗಳಲ್ಲಿ ಸರ್ಕಾರಿ ಆಡಳಿತದಲ್ಲಿ ಸಾಮಾನ್ಯ ಜನರು ದಿನಗಟ್ಟಲೆ ಕಛೇರಿಗಳಿಗೆ ಅಲೆದಾಡಬೇಕಾದ , ಸರ್ಕಾರಿ ನೌಕರರ ಮರ್ಜಿಗೆ ಕಾಯಬೇಕಾಗಿ ಬಂದಿರುವ ಪರಿಸ್ಥಿತಿ ಉದ್ಭವವಾಗಿದೆ.
ಅದಕ್ಷ ಹಾಗೂ ಭ್ರಷ್ಟ ಆಡಳಿತ ಏರ್ಪಟ್ಟಾಗ ಜನರಿಗೆ ಕಷ್ಟ ನಷ್ಟ ಕಟ್ಟಿಟ್ಟ ಬುತ್ತಿ ಇದು ಅಸಹನೆ, ಅಸಮಧಾನ ಹಾಗೂ ಅಂತಿಮವಾಗಿ ಜನರ ಪ್ರತಿರೋದಕ್ಕೆ ದಾರಿಮಾಡಿಕೊಡುತ್ತದೆ. ಈ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಎಚ್ಚೆತ್ತು ಕೆಲವು ರಚನಾತ್ಮಕ ಕ್ರಮಗಳನ್ನು ತೆಗೆದುಕೊಂಡಿದೆ. ಅದರಲ್ಲಿ ಬಹಳ ಮುಖ್ಯವಾದ್ದು ನಾಗರಿಕ ಸನ್ನದು ಅಥವಾ ನಾಗರಿಕ ಸೇವೆಗಳ ಖಾತರಿ ಎಂಬ ಜನಪರ ಸುಧಾರಣೆ ಅಗತ್ಯವಾದ ನಾಗರಿಕ ಸೇವೆಗಳನ್ನು ಜನರಿಗೆ ಸಕಾಲದಲ್ಲಿ ಒದಗಿಸುವುದು ಈ ಸುಧಾರಣೆಯ ಸರಳ ಉದ್ದೇಶ ಬಿಹಾರ ಮಧ್ಯಪ್ರದೇಶ ದೆಹಲಿ ಸೇರಿದಂತೆ ಕೆಲವು ರಾಜ್ಯಗಳು ಮೊದಲ ಹೆಜ್ಜೆ ತೆಗೆದು ಕಾಯಿದೆ ರೂಪದಲ್ಲಿ ನಾಗರಿಕ ಸೇವೆಗಳ ಸುಧಾರಣೆಯನ್ನು ಜಾರಿಗೆ ತಂದವು ಈಗ ಕರ್ನಾಟಕ ಸರ್ಕಾರ ನಾಗರಿಕರಿಗೆ ಸೇವೆಗಳ ಖಾತರಿ ಕಾಯಿದೆ ಜಾರಿಗೊಳಿಸಿ ರಾಜ್ಯದ ಜನತೆಗೆ ಉತ್ತಮವಾದ ಸೇವೆ ಸಲ್ಲಿಸಲು ಮುಂದಾಗಿದೆ.
ನಾಗರಿಕರಿಗೆ ಸೇವೆಗಳ ಖಾತರಿ ಕಾಯಿದೆಯ ಪ್ರಮುಖ ಅಂಶಗಳು:-
ಈ ಕಾಯಿದೆ ಅನ್ವಯ ಸರ್ಕಾರ ೩೦ ಇಲಾಖೆಗಳನ್ನು ಗುರುತಿಸಿದ್ದು ಈ ೩೦ ಇಲಾಖೆಗಳೂ ಒದಗಿಸುವ ಸೇವೆಗಳ ಪೈಕಿ ಒಟ್ಟು ೨೬೫ ಸೇವೆಗಳನ್ನು ಖಾತ್ರಿಗೊಳಿಸಿದೆ.
    ಈ ಕಾಯಿದೆಯನ್ವಯ ನಾಗರಿಕರು ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.
    ಪ್ರತಿ ಇಲಾಖೆಯಲ್ಲಿ ಯಾವ ಅಧಿಕಾರಿಗೆ ಅರ್ಜಿ ಸಲ್ಲಿಸಬೇಕು ಮತ್ತು ಅರ್ಜಿ ಸ್ವೀಕರಿಸಿದೆ ಎಷ್ಟು ಕಲಾವಧಿಯಲ್ಲಿ (ದಿನಗಳಲ್ಲಿ) ಸೇವೆಯನ್ನು ಒದಗಿಸಬೇಕು ಎಂಬುದನ್ನು ನಿಗದಿಪಡಿಸಲಾಗಿದೆ(ಅರ್ಜಿಯನ್ನು ತಿರಸ್ಕರಿಸುವ ಸಂದರ್ಭಗಳಲ್ಲಿ ನಿಯೋಜಿತ ಅಧಿಕಾರಿಯು ತಿರಸ್ಕಾರಕ್ಕೆ ಕಾರಣಗಳನ್ನು ಬರವಣಿಗೆಯಲ್ಲಿ ಕೊಡಬೇಕಾಗುತ್ತದೆ)
    ಅರ್ಜಿದಾರ ನಾಗರಿಕನಿಂದ ಅರ್ಜಿ ಸ್ವೀಕರಿಸಿದ್ದಕ್ಕೆ ಸ್ವೀಕೃತಿಯನ್ನು ಕೊಡಬೇಕಾಗುತ್ತದೆ.
    ನಿರ್ದಿಷ್ಟ ಕಲಾವಧಿಯಲ್ಲಿ ಸೇವೆಯನ್ನು ಒದಗಿಸಬೇಕಾದ ಅಧಿಕಾರಿಯು ಸೇವೆಯನ್ನು ಒದಗಿಸದಿದ್ದರೆ ಅರ್ಜಿದಾರರು ಮೊದಲ ಮನವಿ ಸಲ್ಲಿಸಬಹುದು.
    ಅರ್ಜಿದಾರರು ಮೊದಲ ಮನವಿ ಸಲ್ಲಿಸಬೇಕಾದ ಅಧಿಕಾರಿಯನ್ನು ನಿಗದಿಪಡಿಸಲಾಗಿದ್ದು ಹೀಗೆ ನಿಗದಿತವಾದ ಅಧಿಕಾರಿಗೆ ಅರ್ಜಿದಾರರು ಮೊದಲ ಮನವಿ ಸಲ್ಲಿಸಬೇಕಾಗುತ್ತದೆ.
    ಮೊದಲ ಮನವಿಯಲ್ಲಿ ಅರ್ಜಿದರರಿಗೆ ಸೋಲುಂಟಾದರೆ ಮೇಲ್ಮನವಿ ಸಲ್ಲಿಸಬುದಾಗಿದೆ. ಯಾವ ಅಧಿಕಾರಿಗೆ ಮೇಲ್ಮನವಿ ಸಲ್ಲಿಸಬೇಕಾಗುತ್ತದೆ ಎಂಬುದನ್ನು ಸೂಚಿಸಲಾಗಿರುತ್ತದೆ. ಮೊದಲ ಹಾಗೂ ಮೇಲ್ಮನವಿಗಳನ್ನು ಇಂತಿಷ್ಟು ದಿನಗಳಲ್ಲಿ ವಿಲೇವಾರಿ ಮಾಡಬೇಕೆಂದು ಕಾಲಮಿತಿ ನಿಗದಿಪಡಿಸಲಾಗಿದೆ.
    ನಿಗದಿತ ಕಾಲಾವಧಿಯಲ್ಲಿ ಅರ್ಜಿದಾರ ನಾಗರಿಕರಿಗೆ ಖಾತ್ರಿಗೊಳಿಸಿದ ಸೇವೆಯನ್ನು ಒದಗಿಸಲಾಗಿದಿದ್ದ ಪಕ್ಷದಲ್ಲಿ ಅರ್ಜಿದಾರರಿಗೆ ಸರ್ಕಾರ ನಿಗದಿಗೊಳಿಸಿರುವ ಪರಿಹಾರ ಮೊತ್ತವನ್ನು ಕೊಡಬೇಕಾಗುತ್ತದೆ.
    ಕಾಲಮಿತಿಯೊಳಗೆ ಸೇವೆ ಸಲ್ಲಿಸಲು ವಿಫಲವಾದ ಅಧಿಕಾರಿ ಅಥವಾ ನೌಕರರಿಗೆ ಸರ್ಕಾರ ದಂಡ ವಿಧಿಸಬಹುದು ಮತ್ತು ಪ್ರಕರಣವನ್ನು ಕಪ್ಪು ಚುಕ್ಕೆಯಾಗಿ ಅಧಿಕಾರಿ/ನೌಕರನ ಸೇವಾ ದಾಖಲೆಗಳಲ್ಲಿ ನಮೂದಿಸಬಹುದು.

ಯೋಜನೆಯ ಸಂಕ್ಷಿಪ್ತ ಇತಿಹಾಸ:-
ನಾಗರಿಕ ಸನ್ನದು ಅಂದರೆ ನಾಗರಿಕರು ಪಡೆಯಬೇಕಾದ ಸೇವೆ ಮತ್ತು ಹಕ್ಕು ಈ ಪರಿಕಲ್ಪನೆ ಮೊದಲು ಮೂಡಿ ಬಂದಿದ್ದು ಬ್ರಿಟನ್ ದೇಶದಲ್ಲಿ ಇದು ಸಹಜವೂ ಆಗಿತ್ತು. ಏಕೆಂದರೆ ವಿಶ್ವದ ಮೊತ್ತ ಮೊದಲ ಪ್ರಜಾಪ್ರಭುತ್ವ ವ್ಯವಸ್ಥೆ ರೂಪು ತಾಳಿದ್ದು ಬ್ರಿಟನ್ನಿನಲ್ಲೇ ಪ್ರಜಾಪ್ರಭುತ್ವದಲ್ಲಿ ಸರ್ಕಾರದ ಆಡಳಿತ ತೆರೆದ ಪುಸ್ತಕವಾಗಿರಬೇಕು. ಅಂದರೆ ಸಂಪೂರ್ಣ ಪಾರದರ್ಶಕತೆ ಹೊಣೆಗಾರಿಕೆ (ಉತ್ತರದಾಯಿತ್ವ) ಹಾಗೂ ಸಹ್ನದಯ ಸ್ವಂದನ ಆಡಳಿತದಲ್ಲಿ ಹಾಸು ಹೊಕ್ಕಾಗಿರಬೇಕು ಎಂಬುದು ಜಗತ್ತು ಒಪ್ಪಿರುವ ಸಿದ್ದಾಂತವಾಗಿದೆ ೧೯೯೧ ರಲ್ಲಿ ಅಂದಿನ ಬ್ರಿಟಿಷ್ ಪ್ರಧಾನಮಂತ್ರಿ ಜಾನ್ ಮೇಜರ್ ರವರು ಪ್ರಪ್ರಥಮವಾಗಿ ಇಂತಹ ಒಂದು ನಾಗರಿಕ ಸನ್ನದನ್ನು ಜಾರಿಗೊಳಿಸಿದರು. ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ಕಾಲಕಾಲಕ್ಕೆ ತಕ್ಕಂತೆ ಯೋಜನೆಯನ್ನು ಪರಿಶ್ಕರಿಸಿ ಅನುಶ್ಟಾನಗೊಳಿಸುತ್ತಿವೆ.
ಬ್ರಿಟನ್ ದೇಶದ ನಾಗರಿಕ ಸನ್ನದು ಪರಿಕಲ್ಪನೆ ಕ್ರಮೇಣ ವಿಶ್ವದಲ್ಲಿ ವ್ಯಾಪಿಸಿಕೊಂಡಿತು.ಕಾಮನ್ ವೆಲ್ತ್ ರಾಷ್ಟ್ರಗಳು ತಮ್ಮ ಸನ್ನಿವೇಶಕ್ಕೆನುಗುಣವಾಗಿ ನಾಗರಿಕ ಸನ್ನದು ಯೋಜನೆಗಳನ್ನು ಜಾರಿಗೊಳಿಸಿದವು.ಭಾರತವೂ ಹಿಂದೆ ಬೀಳಲಿಲ್ಲ ! ೧೯೯೭ ರಮೇ ತಿಂಗಳನಲ್ಲಿ ಅಂದಿನ ಪ್ರಧಾನ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಮುಖ್ಯಮಂತ್ರಿಗಳ ಸಮ್ಮೇಳನದಲ್ಲಿ ಪರಿಣಾಮಕಾರಿ ಹಾಗೂ ಸಂವೇದನಾಶೀಲ ಸರ್ಕಾರ ಎಂಬ ಕಾರ‍್ಯ ಯೋಜನೆಯನ್ನು ಸಿದ್ದಪಡಿಸಲು ತೀರ್ಮಾನಿಸಲಾಯಿತು. ಹೆಸರು ಬದಲಾಗಿದ್ದರೂ ಇದು ಕೊಡ ನಾಗರಿಕರಿಗೆ ಉತ್ತಮ ಸೇವೆ ಒದಗಿಸುವ ನಾಗರಿಕ ಸನ್ನದು.ಕಾರ್ಯಕ್ರಮವಾಗಿತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನೇಕ ಇಲಾಖೆಗಳು ಹಾಗೂ ಸರ್ಕಾರಿ ಸಂಸ್ಥೆಗಳು ನಾಗರಿಕ ಸನ್ನದು ಬಿಡುಗಡೆಗೊಳಿಸಿದವು.ಆದರೆ ಇದು ಯಾವುದೂ ಜನಕ ಗಮನ ಸೆಳೆಯಲಿಲ್ಲ ನಾಗರಿಕ ಸನ್ನದು ಕಾರ್ಯಕ್ರಮ ಒಂದು ಕಾಟಚಾರದ ಪ್ರಕ್ರಿಯೆಯಾಗಿ ವ್ಯರ್ಥವಾಯಿತು. ಇದೆಲ್ಲ ನಡೆದದ್ದು ಸುಮಾರು ೧೫ ವರ್ಷಗಳ ಹಿಂದೆ,ಆದರೆ ಈಗ ಹಾಗಿಲ್ಲ ಈ ಅವಧಿಯಲ್ಲಿ ಕಾಲ ಬದಲಾಗಿದೆ.ಜನ ಜಾಗ್ನತಿಯ ಪ್ರಮಾಣ ಮತ್ತು ವೇಗ ಪ್ರತಿ ವರ್ಷವೂ ಹೆಚ್ಚಾಗುತ್ತಿದೆ. ಮೌನವಾಗಿ ಸಹಿಸಿಕೊಂಡು ಆಳಿಸಿಕೊಳ್ಳಲು ಈಗ ಜನ ಸಿದ್ದರಿಲ್ಲ ಎಂಬುದು ರಾಜಕಾರಣಿಗಳಿಗೆ ಮತ್ತು ಅಧಿಕಾರಿಗಳಗೆ ಮನವರಿಕೆಯಾಗಿದೆ.

 ಆದ್ದರಿಂದ ಸರ್ಕಾರಗಳು ನಾಗರಿಕ ಸೇವೆಗಳ ಪಟ್ಟಿ ಮಾಡಿ ಪ್ರಚಾರಕ್ಕಾಗಿ ಬಿಡುಗಡೆ ಮಾಡುತ್ತಿಲ್ಲ ಬದಲಾಗಿ ಸಂವಿಧಾನಕ್ಕೆನುಗುಣವಾಗಿ ಕಾನೂನು ರಚಿಸಿ ಅನುಪ್ಠಾನಗೊಳಿಸುತ್ತಿವೆ. ಈನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಜಾರಿಗೊಳಿಸಿರುವ ನಾಗರಿಕರ ಸೇವೆಗಳ ಖಾತರಿ ಯೋಜನೆ ಸದುದ್ದೇಶದಿಂದ ಕೊಡಿದೆ ಮತ್ತು ಪರಿಣಾಮಕಾರಿಯಾಗಿದೆ.ನಾಗರಿಕರು (ಜನತೆ) ಮಾಡಬೇಕಾದ್ದು ಇಷ್ಠೆ.ಕಾನೂನಿನ ಅಂಶಗಳನ್ನು ಸರಿಯಾಗಿ ತಿಳಿದುಕೊಂಡು ಅದರಂತೆ ಸೇವೆ ಪಡೆದುಕೊಳ್ಳಲು ಕಾರ್ಯೋನ್ಮುಖರಾಗುವುದು.

 ೨೦೧೧ ರಲ್ಲಿ ಜನಲೋಕಪಾಲ ಪರ ಹೋರಾಟ ನಡೆಸಿದ್ದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರ ಬೇಡಿಕೆಗಳಲ್ಲಿ ನಾಗರಿಕ ಸನ್ನದು ಕೊಡ ಒಂದಾಗಿತ್ತು. ಬಿಹಾರ ಮಧ್ಯಪ್ರದೇಶ ಮುಂತಾದ ರಾಜ್ಯಗಳು ಕೇಂದ್ರಕ್ಕಿಂತಲೂ ಮೊದಲೇ ನಾಗರಿಕ ಸನ್ನದು ಅಳವಡಿಸಿಕೊಂಡಿದ್ದವು.ವಿವಿಧ ರಾಜ್ಯಗಳ ಮಾದರಿ ಬಗ್ಗೆ ಅಧ್ಯಯನ ನಡೆಸಿದ್ದ ಡಿ.ವಿ.ಸದಾನಂದಗೌಡರ ನೇತ್ನತ್ವದ ಸರ್ಕಾರ ೨೦೧೨ ಏಪ್ರಿಲ್ ೦೨ ರಂದು ಸಕಾಲ ಯೋಜನೆ ಜಾರಿಗೆ ತಂದರು ಇದು ಯಶಸ್ವಿಯಾಗಿ ಮುಂದುವರಿಯುತ್ತಿದೆ.

 ಮಸೂದೆ ವಿಶೇಷ:-
    ಎಲ್ಲ ರಾಜ್ಯಗಳೂ ಇಂಥ ಸೌಲಭ್ಯ ಜಾರಿಗೊಳಿಸುವುದು ಕಡ್ಡಾಯ.
    ಈ ಮಸೂದೆಯಿಂದ ರಾಜ್ಯಗಳ ಅಧಿಕಾರಕ್ಕೆ ದಕ್ಕೆ ಬಿಜೆ.ಪಿ. ವಿರೋಧ.
    ಕಾಲಮಿತಿಯೊಳಗೆ ಸರ್ಕಾರಿ ಸೇವೆ ಒದಗಿಸುವ ಕಲ್ಪನೆ ಬ್ರಿಟನ್ ದು ೧೯೧೯ ರಲ್ಲಿ ಮೊದಲಬಾರಿಗೆ ಅಲ್ಲಿ ಇದು ಜಾರಿಗೆ ಬಂದಿತ್ತು.
    ವಿಧೇಯಕ ಕಾಯ್ದೆಯಾದ ಬಳಿಕ ಕೇಂದ್ರ ಸರ್ಕಾರದ ನಾಗರಿಕ ಸನ್ನದಿನಲ್ಲಿರುವಂತೆ ಎಲ್ಲ ರಾಜ್ಯಗಳೂ ವಿವಿಧ ಸರ್ಕಾರಿ ಸೇವೆಗಳನ್ನು ಕಾಲಮಿತಿಯೊಳಗೆ ಒದಗಿಸಬೇಕಾಗುತ್ತದೆ.
    ಪಾಸ್ ಪೋರ್ಟ್,ಪಿಂಚಣಿ,ಜನನ-ಮರಣ ಪ್ರಮಾಣ ಪತ್ರ, ತೆರಿಗೆ ರೀಫಂಡ್, ಜಾತಿ ಪ್ರಮಾಣಪತ್ರ ಮುಂತಾದ ಸರ್ಕಾರಿ ಸೇವೆಗಳು ಇದರಡಿ ಬರುತ್ತವೆ.
    ಸೇವೆ ನೀಡಲು ಉದ್ದೇಶ ಪೂರ್ವಕವಾಗಿ ವಿಳಂಬ ಮಾಡುವ ಅಧಿಕಾರಿಗೆ ದಿನಕ್ಕೆ ೨೫೦ ರೂ ಅಥವಾ ಗರಿಷ್ಠ ೫೦ ಸಾವಿರರೂವರೆಗೂ ದಂಡ ವಿಧಿಸುವ ಅವಕಾಶವುಂಟು ಅಲ್ಲದೇ, ಭ್ರಷ್ಟಾಚಾರ ಕುರಿತು ತನಿಖೆ ಹಾಗೂ ಶಿಸ್ತು ಕ್ರಮ ಜರುಗಿಸುವ ಅವಕಾಶವಿದೆ.
    ವಿಧೇಯಕ ಕಾಯ್ದುಯಾದ ಬಳಿಕ ಕೇಂದ್ರ ಮಟ್ಟದಿಂದ ಪಂಚಾಯಿತಿವರೆಗೂ ದೂರು ಇತ್ಯರ್ಥ ಅಧಿಕಾರಿಗಳನ್ನು ನೇಮಿಸಬೇಕಾಗುತ್ತದೆ.
    ಕಾಲಮಿತಿಯೊಳಗೆ ಸೇವೆ ಒದಗಿಸಬೇಕಾದಾದ ಸಾರ್ವಜನಿಕ ಸಂಸ್ಥೆಗಳ ಪಟ್ಟಿಯಲ್ಲಿ ಸಚಿವಾಲಯಗಳು, ಖಾಸಗಿ, ಸಾರ್ವಜನಿಕ ಸಹಭಾಗಿತ್ವದ ಯೋಜನೆಗಳು ಸರ್ಕಾರದ ಅನುದಾನ ಪಡೆದಿರುವ (ಎನ್.ಜಿ.ಓ) ಸರ್ಕಾರಕ್ಕೆ ಹೊರಗುತ್ತಿಗೆ ಸೇವೆ ಒದಗಿಸುತ್ತಿರುವ ಖಾಸಗಿ ಕಂಪನಿಗಳು ಸೇರಿವೆ.
    ಅಣ್ಣಾ ಹಜಾರೆ ಅವರ ಪ್ರಮುಖ ಬೇಡಿಕೆಗಳಲ್ಲಿ ಕಾಲಮಿತಿಯ ಸೇವೆಯೂ ಒಂದಾಗಿತ್ತು.
    ಲೋಕ ಸಭೆಯಲ್ಲಿ ೨೦೧೧ ರ ಡಿಸೆಂಬರ್ ನಲ್ಲಿ ಈ ಮಸೂದೆ ಮಂಡನೆಯಾಗಿತ್ತು. ಇದೀಗ ೧೫ ತಿಂಗಳ ಬಳಿಕ ಸಂಪುಟದ ಮುಂದಿಟ್ಟು ಅನುಮತಿ ಪಡೆಯಲಾಗಿದೆ.

ಅಧ್ಯಾಯ-೦೨     ಸಾಹಿತ್ಯ ಪರಾಮರ್ಶೆ
೧)    ವೇದ ಮೂರ್ತಿ :- ನಾಗರಿಕ ಸೇವೆಗಳ ಖಾತರಿ ಕಾಯದೆಯನ್ನು ಹಾಗೂ ಅದರ ಪ್ರಕ್ರಿಯೆಯನ್ನುಪರಿಗಣಿಸಿದರೆ ಒಂದು ನಿರ್ದಿಷ್ಟ ಕಾಲಮಿತಿಯಲ್ಲಿ ಸೇವೆಯನ್ನು ಒದಗಿಸಲು ಇತ್ತು ಕೊಡಲಾಗಿದೆ.ಅಂದರೆ ನಾಗರಿಕರಿಗೆ ಸಕಾಲದಲ್ಲಿ ಸೇವೆ ಪಡೆದುಕೊಳ್ಳವುದು ನಾಗರಿಕ ಹಕ್ಕು ಆಗಿರುತ್ತದೆ ಎಂಬುದು ಸರ್ಕಾರದ ಆಶಯ ಮತ್ತು ನೀತಾಯಾಗಿರುತ್ತದೆ,ಆದ್ದರಿಂದ ಕರ್ನಾಟಕ ಸರ್ಕಾರ ಈ ಕಾಯ್ದೆಯನ್ವಯ ಸೇವಾ ಯೋಜನೆಯನ್ನು ಸಕಾಲ ಎಂದು ಹೆಸರಿಸಿದೆ.
೨)    ಬಿ.ವಿ. ಚಂದ್ರಖೇಖರ್ .ಎಂ.ಎ.ಎಲ್.ಎಲ್.ಎಂ :- ನಿವೃತ್ತ ನ್ಯಾಯಾಧೀಶರು (ಸುಪ್ರೀಂಕೋರ್ಟ್) ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ನಾಗರಿಕ ಸೇವಾ ಖಾತರಿ ಕಾಯಿದೆ ರಾಜ್ಯಾದ್ಯಂತ ಜಾರಿಗೆ ಬಂದಿದ್ದು ಸರ್ಕಾರದ ಆಡಳಿತದಲ್ಲಿ ಸುಧಾರಣೆ ಮತ್ತು ನಾಗರಿಕರ ಜೀವನದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ನಾಂದಿಯಾಗಿದೆ.ಈ ಕಾಯಿದೆ ರಾಜ್ಯದೆಲ್ಲೆಡೆ ಪ್ರಾಮಾಣಿಕವಾಗಿ ಅನುಷ್ಠಾನಗೊಂಡಲ್ಲಿ ಸಾರ್ವಜನಿಕ ಜೀವನದಲ್ಲಿ ಒಂದು ಕ್ರಾಂತಿ ಜರುಗಿ ಆಡಳಿತದಲ್ಲಿ ದಕ್ಷತೆ,ಪಾರದರ್ಶಕತೆ.ಪ್ರಾಮಾಣಿಕತೆ ಮತ್ತು ಸೇವಾ ನಿಷ್ಠೆ ಹೆಚ್ಚಾಗುವುದರಲ್ಲಿ ಎರಡು ಮಾತಿಲ್ಲ.
೩)    ಡಿ.ವಿ. ಸದಾನಂದಗೌಡ:- ಮಾಜಿ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ಸರ್ಕಾರಿ ಯೋಜನೆಗಳ ಫಲ ಫಲಾನುಭವಿಗಳಿಗೆ ವ್ಯಕ್ತಿಗೆ ಪ್ರಯೋಜನ ದೊರೆಯಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಪ್ರಯೋಜನ ದೊರೆಯಬೇಕು.ಅಭಿವೃದ್ಧಿಯ ವೇಗ ಹೆಚ್ಚಿಸುವುದರ ಜೊತೆಗೆ ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ಸಾಧ್ಯಾವಾಗಬೇಕು ನಮ್ಮ ಈ ಧ್ಯೇಯವನ್ನು ಸಾಕಾರಗೊಳಿಸಲು ಆಡಳಿತ ಶೈಲಿಯಲ್ಲಿ ಬದಲಾವಣೆ ಅನಿವಾರ್ಯ ಆದ್ದರಿಂದ ಕರ್ನಾಟಕ ಸರ್ಕಾರ ನಾಗರಿಕ ಸೇವಾ ಖಾತರಿ ಕಾಯಿದೆಯನ್ನು ಜಾರಿಗೆ ತರಲಾಗಿದೆ ಇದರಿಂದ ಸರ್ಕಾರಿ ಕಛೇರಿಗಳಿಗೆ ಭೇಟಿ ನೀಡುವ ಸಾರ್ವಜನಿಕರಿಗೆ ಯಾವುದೇ ಸರ್ಕಾರಿ ಅಧಿಕಾರಿ ಆಥವಾ ಸಿಬ್ಬಂದಿ ಇಂದು ನಾಳೆ ಎನ್ನುವಂತಿಲ್ಲ.ಹೇಳಿದ ಸಮಕ್ಕೆ ಸೇವೆ ಮತ್ತು ಸವಲತ್ತುಗಳನ್ನು ಒದಗಿಸುವುದು ಕಡ್ಡಾಯ
೪)     ಸ್ವರ್ಧಾ ಸ್ವೂರ್ತಿ :- ಏಪ್ರಿಲ್ -೨೦೧೩
ಕರ್ನಾಟಕದಲ್ಲಿ ಭರ್ಜರಿ ಯಶಸ್ಸುಗಳಿಸಿರುವ ಸಕಾಲ ಮಾದರಿ ಯೋಜನೆಯನ್ನು ಇದೀಗ ಕೇಂದ್ರ ಸರ್ಕಾರವು ಜಾರಿಗೆ ತರಲು ಮುಂದಾಗಿದೆ.

ಅಧ್ಯಾಯ-೦೩. ಸಂಶೋಧನ ವಿಧಾನ:-
 ಪೀಠಿಕೆ
ಯಾವುದೇ ವಿಷಯ ಅಥವಾ ವಸ್ತುವಿನ ಬಗ್ಗೆ ವಿಮಶ್ಮಾತ್ಮಕವಾಗಿ ವಿಚಾರಣೆ ಮಾಡುವುದು. ಹೊಸ ಸಿದ್ದಾಂತಗಳನ್ನು ಬೆಳಕಿಗೆ ತರುವಂತಹ ಪ್ರಕ್ರಿಯೆಯೇ ಸಂಶೋಧನೆ ಅಧ್ಯಯನಕ್ಕಾಗಿ ಆಯ್ಕೆ ಮಾಡಿದ ವಿಷಯದ ಬಗ್ಗೆ ಪ್ರತಿಯೊಂದು ಮೂಲದಿಂದಲೂ ದೊರೆಯತಕ್ಕಂತಹ ಮಾಹಿತಿಯನ್ನು ಸಂಗ್ರಹಿಸುವುದು. ಸಂಶೋಧನೆಯ ಮೊದಲ ಧ್ಯೇಯವಾಗಬೇಕು ಚಲನೆಯಲ್ಲಿರುವ ಸಿದ್ಧಾಂತಗಳನ್ನು ಪ್ರಾಯೋಗಿಕವಾಗಿ ಗುರಿಗಳಲ್ಲಿ ಮುಖ್ಯವಾದವು.

ಸಂಶೋಧನೆ ಎಂಬ ಪದದ ಸೂಕ್ತ ಅರ್ಥ:-
    ಪೆಂಡ್ಲಟನ್ ಹೆರಿಂಗ್ ರವರ ಪ್ರಕಾರ ಸಂಶೋಧನೆಯು ಸ್ಪಷ್ಟವಾದ ಕ್ರಿಯೆ ಈಗಾಗಲೇ ಇರುವ ಜ್ಞಾನ ಭಂಡಾರಕ್ಕೆ ಹೆಚ್ಚು ಜ್ಞಾನವನ್ನು ಕೊಡಿಸುವುದೇನೂ ಸರಿ ಆದರೆ,ನಮ್ಮ ಮನಸ್ಸು ಆವರಿಸಿರುವ ಮತ್ತು ಉಪಯುಕ್ತವಲ್ಲದ ಸಿದ್ಧಾಂತಗಳನ್ನು ಶುದ್ಧಿ ಆಡಲು ಸಂಶೋಧನೆಯು ಒಂದು ಒಗ್ಗೂಡಿಸುವ ಪ್ರಕ್ರಿಯೆಯಾಗಿದ್ದು ನಿರಾಕರಿಸುವ ಪ್ರಕ್ರಿಯೆಯು ಹೌದು ಎಂದು ವಿವರಿಸಿದ್ದಾರೆ.
    ರೆಡೆ ಮೆನ್ ಮತ್ತು ಮಾರೆರವರ ಪ್ರಕಾರ ಹೊಸ ಜ್ಞಾನವನ್ನು ಪಡೆಯಲು ಕೈಗೊಂಡ ವ್ಯವಸ್ಥಿತ ಪ್ರಯತ್ನವೇ ಸಂಶೋಧನೆ ಎಂದಿದ್ದಾರೆ.

ಸಾಮಾಜಿಕ ಜೀವನದ ವಿವಿಧ ಮುಖಗಳು ಮಾನವ ಸಮಾಜದಲ್ಲಿ ಆಗಿರುತಕ್ಕಂತಹ ಆಗುತ್ತಿರುವ ಅಭಿವೃದ್ಧಿ ಕಾರ್ಯಗಳ ಸಮಾಜದ ವಿವಿಧ ಸಂಸ್ಥೆಗಳಲ್ಲಿ ನಡೆಯುವ ಕಾರ್ಯಚಟುವಟಿಕೆಗಳು ಸಮಾಜದಲ್ಲಿರುವ ಸಮಸ್ಯೆಗಳಿಗೆ ಕಾರಣಗಳನ್ನು ಕಂಡು ಹಿಡಿಯುವುದು. ಅವುಗಳಿಗೆ ಸೂಕ್ತ ಪರಿಹಾರಗಳನ್ನು ಹುಡುಕುವುದು ಇನ್ನು ಮುಂತಾದವು ಸಾಮಾಜಿಕ ಸಂಶೋಧನೆಯ ವಿಷಯಗಳಾಗಿರುತ್ತವೆ.

ಸಂಶೋಧನೆಯ ವಿಶ್ವ:-
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಹೋಬಳಿಯ ಗ್ರಾಮ ಪಂಚಾಯಿತಿಗಳು ಪ್ರಸುತ್ತ ಸಂಶೋಧನೆಯ ಆಧ್ಯಯನ ಜಗತ್ತಾಗಿದೆ.

 ಭೌಗೋಳಿಕ ವಿವರ:-
ಸಾದಲಿ ಹೋಬಳಿ ಶಿಡ್ಲಘಟ್ಟ ತಾಲ್ಲೂಕಿ ಕೇಂದ್ರಕ್ಕೆ ಸುಮಾರು ೨೬ ಕಿ.ಮೀ.ಅಂತರದಲ್ಲಿದೆ ಸಾದಲಿ ಹೋಬಖಳಿ ರಾಜ್ಯದ ರಾಜಧಾನಿ ಬೆಂಗಳೂರು ನಗರದಿಂದ ಸುಮಾರು ೮೬ ಕಿ.ಮೀ ದೂರದಲ್ಲಿದೆ.ಭೌಗೋಳಿಕ ಹೋಬಳಿಯು ಸುಮಾರು ೧೯೦೯೫ ಹೆಕ್ಟೇರ್ ವಿಸ್ತೀರ್ಣದಲ್ಲಿ ವ್ಯಾಪಿಸಿದ್ದು ಹೆಚ್ಚಾಗಿ ಬೆಟ್ಟ ಗುಡ್ಡಗಳಿಂದ ಕೂಡಿದೆ.

ಸಾಮಾಜಿಕ ವಿವರ:-
ಸಾದಲಿ ಹೋಬಳಿಯಲ್ಲಿ ೦೪ ಗ್ರಾಮ ಪಂಚಾಯಿತಿಗಳು ಕಾರ್ಯೊಚರಣೆಯಲ್ಲಿದೆ ೦೪ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗೆ ಸುಮಾರು ೬೦ ಗ್ರಾಮ ಸಮುದಾಯಗಳು ಸೇರುತ್ತವೆ ಪ್ರತಿಯೊಂದು ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿರುವ ಗ್ರಾಮಗಳು ಮತ್ತು ವಿಸ್ತೀರ್ಣತೆ ಹಾಗೂ ಸಾಂಸ್ಕತಿಕವಾಗಿ ಭಿನ್ನತೆಯಿಂದ ಕೂಡಿದರೂ ಕೆಲವುಗಳಲ್ಲಿ ಸ್ವಾಮ್ಯತೆಯನ್ನು ಕಾಣಬಹುದಾಗಿದೆ. ಬೆಟ್ಟಗುಡ್ಡಗಳಿಂದ ಮಳೆಗಾಲದಲ್ಲಿ ನೀರು ಹರಿದು ಕೆರೆಗಳಲ್ಲಿ ನೀರು ಶೇಖರಣೆಯಾಗುತ್ತದೆ.ಈ ಭಾಗದ ಮರುಳು ಮತ್ತು ಬಂಡೆಗಳು ಜನತೆಗೆ ಹೆಚ್ಚು ಆರ್ಥಿಕವಾಗಿ ಲಾಭ ದೊರೆಯುವುದು.ವ್ಯವಸಾಯದಿಂದ ಇಲ್ಲ ರೇಷ್ಮ ಬಾಳೆ ತರಕಾರಿ ಬೆಳೆಗಳು ಹೆಚ್ಚಾಗಿ ಬೆಳೆಯುವರು ಗ್ರಾಮ ಸಮುದಾಯದಲಿ ಪ್ರತಿ ವಾರಕೋಮ್ಮ ಒಂದು ದಿನ (ಶನಿವಾರ ) ಸಂತೆ ನಡೆಯುತ್ತದೆ. ಶೈಕಷಣಿಕವಾಗಿಯೂ ಸ್ವಲ್ಪ ಮಟ್ಟಿಗೆ ಹೋಬಳಿಯೂ ಪ್ರಸಿದ್ದಿ ಪಡೆದಿದೆ.
 ಸಾದಲಿ ಹೋಬಳಿಯ ಜನತೆಯು ಕನ್ನಡವನ್ನು ಮಾತೃಭಾಷಯಾಗಿ ಬಳಸುತ್ತಿದದ್ದರೂ ಅಲ್ಪಸ್ವಲ್ಪ ತೆಲುಗು ,ಉರ್ದು, ಭಾಷಯಾಗಿ ಮಾಎನಾಡುತ್ತಾರೆ ಇದರಲ್ಲಿ ತೆಲುಗು ಭಾಷೆ ಹೆಚ್ಚಾಗಿ ಮಾತನಾಡುತ್ತಾರೆ ಎಲ್ಲಾ ಜಾತಿಯ ಜನರು ಸಹ ಇದ್ದು ಸೌಹಾರ್ದಯುತವಾಗಿ ಬಾಳುತ್ತಿದ್ದು ಅಭಿವೃದ್ದಿ ಕಾರ್ಯಗಳಲ್ಲಿ ಪ್ರಗತಿಪರವಾಗಿ ಭಾಗವಹಿಸುತ್ತಿದ್ದಾರೆ.

ಸಾಮಾಜಿಕ ಸಂಶೋಧನೆಯ ಮುಖ್ಯ ಗುರಿಗಳು :-
ವ್ಯವಸ್ಥಿತ ಸಮಾಜವು ಸಾಮಾಜಿಕ ಸಂಸ್ಥೆಗಳ ರಚನೆ ಹಾಗೂ ಕಾರ್ಯಗಳ, ಸಾಮಾಜಿಕ ಜೀವನ-ಗುರಿ ಹಾಗೂ ಸಾಮಾಜಿಕ ಗುಂಪುಗಳ ನಡುವೆ ಇರುವ ಸಂಬಂಧಗಳ ಬಗ್ಗೆ ಮೂಲ ಸಾಮಾಜಿಕ ಸಿದ್ಧಾಂತಗಳನ್ನು ರಚಿಸಿರುವುದರ ಮೂಲಕ ವ್ಯವಸ್ಥಿತ ಜ್ಞಾನವನ್ನು ವೃದ್ಧಿಸುವುದು.ಸಮಾಜವನ್ನು ಕಾಡುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ವೈಜ್ಞಾನಿಕ ಅಧ್ಯಯನವನ್ನು ಕೈಗೊಂಡು ಅಧ್ಯಯನಗಳ ಆಧಾರದ ಮೇಲೆ ಸಾಮಾಜಿಕ ಸಮಸ್ಯೆಗಳ ನಿವಾರಣೆಗೆ ಕ್ರಿಯಾತ್ಮಕವಾದ ಸಿದ್ಧಾಂತಗಳನ್ನು ನವ್ಯ ಸಿದ್ಧಾಂತಗಳ ಸಹಾಯದಿಂದ ಪರೀಕ್ಷಿಸುವುದು.ಪರಿಶೀಲಿಸುವುದು ಹೊಸ ಹೊಸ ಸಂಶೋಧನಾ ತಂತ್ರಗಳನ್ನು, ಭಾವನೆಗಳನ್ನು ರೂಪಿಸುವುದು ಮತ್ತು ಮುಂದಿನ ಸಂಶೋಧಕರ ಪೀಳಿಗೆಗೆ ಮಾರ್ಗದರ್ಶನ ನೀಡುವುದು.
ಯಾವುದೇ ಸಂಶೋಧನಾ ಕಾರ್ಯವು ಒಂದು ಕ್ರಮಬದ್ದ ರೀತಿಯಲ್ಲಿ ಕೈಗೊಳ್ಳಬೇಕಾದಾಗ ಅದನ್ನು ಅನೇಕ ಹಂತಗಳನ್ನಾಗಿ ವಿಂಗಡಿಸಿ.ಪ್ರತಿಯಾಂದು ಹಂತದಲ್ಲಿಯೂ ವಿಶಿಷ್ಟವಾದ ಶ್ರಮ ಹಾಗೂ ಶ್ರದ್ದೆಯನ್ನು ವಹಿಸಿ ಸಂಶೋಧಕರು ಕಾರ್ಯನಿರ್ವಹಿಸಬೇಕಾಗುತ್ತದೆ.
ಸಮಾಜ ಕಾರ್ಯ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿಯಾದ ನಾನು ಸಾಮಾಜಿಕ ಅಭ್ಯುದಯ ಕ್ಷೇತ್ರವನ್ನು ಅಧ್ಯಾಯನ ಮಾಡುತ್ತಿರುವ ವಿದ್ಯಾರ್ಥಿಯಾಗಿರುತ್ತೇನೆ.ಸಾಮಾಜಿಕ ಸಂಶೋಧನೆ ಕೈಗೊಳ್ಳಲು ಯಾವುದಾದರೂ ಒಂದು ಸಾಮಾಜಿಕ ಸಮಸ್ಯೆಗಳನ್ನು ಅಧ್ಯಯನ ಮಾಡುವ ಕುರಿತು ಪ್ರಥಮವಾಗಿ ನನ್ನ ಮನಸ್ಸಿಗೆ ಬಂದಿತು. ಆದರೆ ನಾನು ಸಮಾಜ ಕಾರ್ಯ ವಿಭಾಗದಲ್ಲಿ ಪ್ರಥಮ ಮತ್ತು ದ್ವಿತೀಯ ವರ್ಷದಲ್ಲಿ ಸಮುದಾಯದಲ್ಲಿ ಕ್ಷೇತ್ರ ಕಾರ್ಯ ನಿರ್ವಹಿಸಿರುವುದರಿಂದ ಸಮುದಾಯದ ಜನರ ಸಮಸ್ಯೆಗಳ ಬಗ್ಗೆ ನಮ್ಮಗೆ ಅರಿವುವಾಯಿತು. ಇಂತಹ ಸಮಸ್ಯೆಗಳನ್ನು ಸರ್ಕಾರದ ಅಧಿಕಾರಿಗಳು ಪರಿಹಾರ ನೀಡುತ್ತಿಲ್ಲ ಇದರಿಂದ ಜನರು ಹೆಚ್ಚು ತೊಂದರೆಗೆ ಒಳಗಾಗಿದ್ದಾರೆ.ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಸಕಾಲ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತಂದು ಜನರ ಸಮಸ್ಯೆಗಳಿಗೆ ಅಥವಾ ನಾಗರಿಕ ಸೇವೆಗಳನ್ನು ನಿಗಧಿತ ಸಮುಯದಲ್ಲಿ ಒದಗಿಸಲಾಗುತ್ತದೆ.ಆದರಿಂದಾಗಿ ಸರ್ಕಾರದ ಸಕಾಲ ಕಾರ್ಯಕ್ರಮದ ಬಗ್ಗೆ ಗ್ರಾಮೀಣ ಜನರಿಗೆ ಅರಿವು ಇದೆಯೇ ಎಂಬುವುದರ ಬಗ್ಗೆ ತಿಳಿಯಲು ಸಂಶೋಧನೆಯನ್ನು ಕೈಗೊಳ್ಳಲಾಗಿದೆ.
ಸಾಮಾಜಿಕ ಸಂಶೋಧನೆ ಮೊದಲ ಹಂತವೇ ಅಧ್ಯಯನಕ್ಕೆ ವಿಷಯದ ಆಯ್ಕೆ ಮಾಡುವುದು.ಈ ಅಧ್ಯಯನಕ್ಕೆ ಕೆಲವು ಗುರಿಗಳು ಮತ್ತು ಉದ್ದೇಶಗಳನ್ನು ಸಂಶೋಧನೆಗೆ ಆಧಾರ ಕಲ್ಪನೆಗಳು ಅಥವಾ ಪೂರ್ವ ಸಿದ್ಧಾಂತ, ಸಂಶೋಧನೆಯ ವಿಶ್ವ ಸಂಶೋಧನೆಯ ವಿನ್ಯಾಸ .ಮಾಹಿತಿ ಸಂಗ್ರಹ ಮತ್ತು ವಿಧಾನ-ತಂತ್ರಗಳನ್ನು ಬಳಸಿ ಕೊಳ್ಳುವುದು ಉಪಯುಕ್ತವೆನಿಸುತ್ತದೆ.ಆದ್ದರಿಂದ ಪ್ರಧಮವಾಗಿ ಅಧ್ಯಯನ ಅಧ್ಯಯನ ವಿಷಯವನ್ನು ಆಯ್ಕೆ ಮಾಡಿಕೊಂಡು ಧ್ಯೇಯೋದ್ದೇಶಗಳನ್ನು ಇಟ್ಟುಕೊಂಡು ಸಂಶೋಧನೆಯ ವಿಶ್ವ ಮತ್ತು ಸಂಶೋಧನೆಯ ವಿನ್ಯಾಸವನ್ನುಇ ರಚಿಸಿ ಕೆಲವು ಪ್ರಮೇಯಗಳನ್ನು ಅಥವಾ ಪೂರ್ವ ಸಿದ್ಧಾಂತ ಆಯ್ಕೆ ಮಾಡಿಕೊಂಡು ಪ್ರಶ್ನಾವಳಿಯನ್ನು ರಚಿತ ಸಂಶೋಧನಾ ಕಾರ್ಯದಲ್ಲಿ ಅನುಸರಿಸಿ ಮತ್ತು ಸಂದರ್ಶನದ ತಂತ್ರವನ್ನು ಬಳಸಿಕೊಂಡು ಮಾಹಿತಿ ಸಂಗ್ರಹಿಸಿದೆನು.

ಅಧ್ಯಯನ ಪ್ರೇರಣೆ:-
ಸಂಶೋಧನೆಯ ಪ್ರಸ್ತುತ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿಯಾಗಿದ್ದು ; ಸಾಮಾಜಿಕ ಅಭ್ಯುದಯ ಕ್ಷೇತ್ರದಲ್ಲಿ ವಿಶೇಷ ಆಸಕ್ತನಾಗಿದ್ದು ಸಮುದಾಯ ಅಭಿವೃದ್ಧಿ ಮತ್ತು ಸಾಮಾಜಿಕ ಅಭ್ಯುದಯಕ್ಕೆ ಸಂಬಂಧಿಸಿದಂತೆ ವಿಶೇಷ ವಿಷಯವನ್ನಾಗಿ ಅಭ್ಯಾಸ ಮಾಡುತ್ತಿರುವುದು. ಗ್ರಾಮ ಸಮುದಾಯ ಪ್ರದೇಶದಲ್ಲಿ ಹುಟ್ಟಿ ಪ್ರಾಥಮಿಕ, ಪೌಢ್ರಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿ,ನಂತರ ಹೆಚ್ಚಿನ ವ್ಯಾಸಂಗ ಮಾಡಿದರೂ ಸಹ ಕ್ಟೇತ್ರ ಕಾರ್ಯ ಅಧ್ಯಯನಕ್ಕಾಗಿ ಸಮುದಾಯಗಳನ್ನು ಆಯ್ಕೆ ಮಾಡಿಕೊಂಡು ತಿಳಿದುಕೊಳ್ಳಲಾಯಿತು. ನಾಗರಿಕ ಸೇವೆಗಳನ್ನು ನಾಗರಿಕರಿಗೆ ನಿಗಧಿತ ಸಮಯದಲ್ಲಿ ಒದಗಿಸಿಕೊಡುವುದಕ್ಕಾಗಿ ಕರ್ನಾಟಕ ಸರ್ಕಾರವು ಸಕಾಲ ಕಾರ್ಯಕಜ್ರಮವನ್ನು ಜಾರಿಗೆ ತಂದಿದೆ.ಇದರಿಂದಾಗಿ ನಾಗರಿಕರು ತಮ್ಮ ಸೇವೆಯನ್ನು ಪಡೆಯಲು ಸುಲಭವಾಯಿತು ಹಾಗೂ ಸಮಯ ಉಳಿತಾಯವಾಗುತ್ತದೆ. ಆದರೂ ಸಹ ಈ ಕಾರ್ಯ ಕ್ರಮದ ಬಗ್ಗೆ ಗ್ರಾಮೀಣ ಜನರಿಗೆ ಅರಿವು ಇದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ತಿಳಿಯಲು ಸಂಶೋಧನೆಯನ್ನು ಕೈಗೊಳ್ಳಲಾಯಿತಿ.ಇದರಿಂದಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಹಳ್ಳಿ ಹೋಬಳಿಯ ಗ್ರಾಮ ಪಂಚಾಯ್ತಿಗಳೋಂದಿಗೆ ನಿರಂತರ ಸಂಪರ್ಕ ಹೊಂದಿ ಪಂಚಾಯ್ತಿಯ ಸದಸ್ಯರಿಗೆ ಸಕಾಲ ಕಾರ್ಯಕ್ರಮದ ಬಗ್ಗೆ ಅರಿವು ಇದೆಯೇ ಎಂಬುವುದರ ಬಗ್ಗೆ ತಿಳಿಯಲು ಪ್ರಶ್ನಾವಳಿ ಮುಖಾಂತ ಅವರಿಗೆ ತಿಳಿದ ವಿಚಾರಗಳನ್ನು ಅಧ್ಯಯನ ಮಾಡಲಾಯಿತು. ಬಶೆಟ್ಟಹಳ್ಳಿ ಹೋಬಳಿಯ ಗ್ರಾಮ ಪಂಚಾಯ್ತಿಗಳೊಂದಿಗೆ ನಿರಂತರ ಸಂಪರ್ಕ ಹೊಂದಿರುವುದರಿಂದ ಪ್ರಸ್ತುತ ಅಧ್ಯಯನ ಕೈಗೊಳ್ಳಲು ಪ್ರೇರಣೆ ನೀಡಿದೆ.

ಅಧ್ಯಯನ ಧ್ಯೇಯೋದ್ದೇಶಗಳು:-
ಅಭ್ಯುದಯ:- ಕರ್ನಾಟಕ ರಾಜ್ಯದ ಸಕಾಲ ಕಾರ್ಯಕ್ರಮದ ಬಗ್ಗೆ ಗ್ರಾಮ ಪಂಚಾಯ್ತಿ ಸದಸ್ಯರಿಗೆ ಇರುವ ಅರಿವನ್ನು ಕುರಿತು ಒಂದು ಅಧ್ಯಯನ ವಿಶೇಷವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಹಳ್ಳಿ ಹೋಬಳಿಯ ಗ್ರಾಮ ಪಂಚಾಯ್ತಿ ಸದಸ್ಯರ ಕುರಿತು ಅಧ್ಯಯನದ ಧ್ಯೇಯೋದ್ದೇಶಗಳು.
೧)    ಸಕಾಲ ಕಾರ್ಯಕ್ರಮದ ಬಗ್ಗೆ ಗ್ರಾಮೀಣ ಜನರಿಗೆ ಇರುವ ಅರಿವನ್ನು ತಿಳಿಯುವುದು.
೨)    ಸಕಾಲ ಕಾರ್ಯಕ್ರಮದ ಬಗ್ಗೆ ಇರುವ ಮಾಹಿತಿಯನ್ನು ಗ್ರಾಮೀಣ ಜನರು ಹೇಗೆ ತಿಳಿದುಕೊಂಡಿದ್ದಾರೆ ಎಂಬುವುದರ ಬಗ್ಗೆ ತಿಳಿಯುವುದು.
೩)    ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಗ್ರಾಮೀಣ ಜನರಿಗೆ ಅರಿವುವಿದೆಯೇ ಎಂಬುವುದರ ಬಗ್ಗೆ ತಿಳಿಯುವುದು.
೪)     ಸಕಾಲ ಕಾರ್ಯಕ್ರಮದಿಂದ ಗ್ರಾಮೀಣ ಜನರಿಗೆ ಆಗುವ ಅನುಕೂಲಗಳನ್ನು ತಿಳಿಯುವುದು.
೫)    ನಾಗರಿಕ ಸೇವೆಗಳ ಖಾತರಿ ಅಧಿನಿಯಮಗಳ ಬಗ್ಗೆ ಗ್ರಾಮೀಣ ಜನರಿಗೆ ಇರುವ ಅರಿವುವನ್ನು ತಿಳಿಯುವುದು.
೬)    ಮಾಹಿತಿ ಹಕ್ಕುನ ಕಾಯ್ದೆ ಬಗ್ಗೆ ಗ್ರಾಮೀಣ ಜನರಿಗೆ ಅರಿವು ಇದೆಯೇ ಎಂಬುವುದರ ಬಗ್ಗೆ ತಿಳಿಯುವುದು.
೭)    ವೃತ್ತಿಪರ ಸಮಾಜಕಾರ್ಯದ ಬಗ್ಗೆ ಮಾಹಿತಿದಾರರಿಗೆ ಇರುವ ಅರಿವು ಮತ್ತು ಅನಿಸಿಕೆಗಳನ್ನು ತಿಳಿಯುವುದು.

ಪ್ರಮೇಯ ಅಥವಾ ಪೂರ್ವಸಿದ್ಧಾಂತ:-
 ಸಾಮಾಜಿಕ ಸಂಶೋಧಕರು ಒಮ್ಮೆ ತನ್ನ ಅಧ್ಯಯನ ವಿಷಯ ಆಯ್ಕೆ ಮಾಡಿದ ಮೇಲೆ ಆ ವಿಷಯದ ಬಗ್ಗೆ ತಾತ್ಕಾಲಿಕ ಆಧಾರ ಪರಿಕಲ್ಪನೆಗಳನ್ನು ರಚಿಸುತ್ತಾನೆ.ಪ್ರಮೇಯ ಸಂಶೋಧನೆಯ ದಾರಿ ದೀಪ ಎನ್ನಬಹುದು.

ವ್ಯಾಖ್ಯೆಗಳು:-
೧)    ಲುಂಡ್‌ಬರ್ಗ್ ಅವರು ಸತ್ಯಾಸತ್ಯತೆಯನ್ನು ಪರೀಕ್ಷಿಸಿಕೊಳ್ಳಬೇಕಾಗಿರುವ ತಾತ್ಕಾಲಿಕ ಸಮರ್ಥನೆಯೇ ಪ್ರಾಕ್ ಕಲ್ಪನೆ ಎಂದು ವ್ಯಾಖ್ಯಾನಿಸಿದ್ದಾರೆ.
೨)     ಗೂಡ್ ಅಂಡ್ ಹ್ಯಾಟ್ ಅವರು ಸಾಮಾನ್ಯ ತಿಳುವಳಿಕೆಗೆ ಪೂರಕವಾಗಿ ಅಥವಾ ವಿರುದ್ದಸವಾಗಿರುವ ಮತ್ತು ಸಪ್ರಮಾಣತೆಯನ್ನು ನಿರ್ಧರಿಸಲು ಪರೀಕ್ಷೆಗೊಳಪಡಬೇಕಾದ ಒಂದು ಹೇಳಿಕೆಯೇ ಪ್ರಮೇಯ ಎಂದು ವ್ಯಾಖ್ಯಾನಿಸಿದ್ದಾರೆ.

ಪ್ರಸ್ತುತ ಸಂಶೋಧನೆಯ ಪ್ರಮೇಯಗಳು:
೧)     ಕರ್ನಾಟಕ ಸರ್ಕಾರದ ಸಕಾಲ ಕಾರ್ಯಕ್ರಮ ಬಗ್ಗೆ ಗ್ರಾಮೀಣ ಎಲ್ಲಾ ಜನರಿಗೆ ತಿಳುವಳಿಕೆ ಇರುತ್ತದೆ.
೨)     ಈ ಕಾರ್ಯಕ್ರಮದಿಂದ ಜನರಿಗೆ ಹೆಚ್ಚು ಅನುಕೂಲುಗಳು ಆಗುತ್ತದೆ.
೩)     ಈ ಕಾರ್ಯಕ್ರಮದಿಂದ ನಾಗರಿಕರಿಗೆ ನಾಗರಿಕ ಸೇವೆಗಳು ನಿಗಧಿತ ಕಾಲಾವಧಿಯಲ್ಲಿ ಸೇವೆಗಳು ದೊರಕುತ್ತಿರುತ್ತದೆ.
೪)     ಸಕಾಲ ಕಾರ್ಯಕ್ರಮವು ಜನರಿಗೆ ಸರ್ಕಾರ ತಲುಪಿಸಲು ವಿವಿಧ ರೀತಿಯ ಜಾಹೀರಾತುಗಳು ಮತ್ತು ವೃತ್ತ ಪ್ರತಿಕೆಗಳು ಅಥವಾ ಮಾಧ್ಯಮಗಳು ಮೂಲಕ ಮಾಹಿತಿಯನ್ನು ಹರಡಿಸುತಿದೆ,
೫)     ಈ ಕಾರ್ಯಕ್ರಮದಿಂದ ಸರ್ಕಾರದ ಆಡಳಿತದ ಸುಧಾರಣೆ ಮತ್ತು ಜನರಿಗೆ ನಿಗಧಿತ ಸಮಯದಲ್ಲಿ ಸೇವೆ ಪಡೆಯುತ್ತಿದ್ದಾರೆ.
೬)    ವೃತ್ತಾತ್ಮಕ ಸಮಾಜ ಕಾರ್ಯಕತರ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯರಿಗೆ ಅಲ್ಪಸ್ವಲ್ಪ ತಿಳಿದಿರುತ್ತದೆ.

ಸಂಶೋಧನಾ ವಿನ್ಯಾಸ:-
ಸಂಶೋಧಕರು ತನ್ನ ಸಂಶೋಧನೆಗಾಗಿ ಆಯ್ಕೆ ಮಾಡಲಾಗಿರುವ ಕ್ಷೇತ್ರ ಮತ್ತು ಕ್ಷೇತ್ರಕ್ಕೆ ಅನುಗುಣವಾದ ಮಾದರಿ ಅಥವಾ ನಮೂನೆ ಜೊತೆಗೆ ಮಾಹಿತಿ ಸಂಗ್ರಹಣೆಗಾಗಿ ಬಳಸಲಾಗಿರುವ ಉಪಕರಣಗಳು, ಸಂಶೋಧನೆಗಾಗಿ ಬೇಕಾದ ವೆಚ್ಚ ಮತ್ತು ಸಮಯವನ್ನು ನಿರ್ಧಿರಿಸಿ, ಸಂಶೋಧನಾ ಕಾರ್ಯವನ್ನು ಪ್ರಾರಂಭಿಸಲು ಮಾಡಿಕೊಳ್ಳವ ಯೋಜನೆಯನ್ನು ಸಂಶೋಧನೆ ವಿನ್ಯಾಸ ಎಂದು ಕರೆಯುಲಾಗುವುದು.
 ಯಾವುದೇ ಒಂದು ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಬೇಕಾದರೆ ಅದಕ್ನೊಂದು ಪೂರ್ವಯೋಜನೆ ಅತ್ಯವಶ್ಯ.ಈ ಪೂರ್ವ ಯೋಜನೆಯನ್ನು ಸಂಶೋಧನಾ ವಿನ್ಯಾಸ ಒಳಗೊಂಡಿರುತ್ತದೆ. ಈ ಸಂಶೋಧನಾ ವಿನ್ಯಾಸದ ಮುಖ್ಯ ಉದ್ದೇಶವನ್ನು ಸಾಧಿಸಲು ಸಕ್ರಮವಾಗಿ ಸಂಶೋಧನೆಯನ್ನು ನಡೆಸಬೇಕಾಗುತ್ತದೆ.
ಸಮಗ್ರವಾಗಿ ಪರಿಶೋಧಿಸುವ ಸಂಶೋಧನಾ ವಿನ್ಯಾಸ ಎಂದರೆ ಒಂದು ಅಗೋಚರವಾದ ಸಂಗತಿಯ ಬಗ್ಗೆ ಅಮೂಲ್ಯವಾಗಿ ಶೋಧನೆಯನ್ನು ನಡೆಸಿ ಸೂಕ್ಷ್ಮತೆ ಸೂಕ್ಷ್ಮ ಸಂಗತಿಗಳನ್ನು ಅಧ್ಯಯನ ಮಾಡಿ ಸತ್ಯಾನ್ನೇಷಣೆ ಮಾಡುವುದು.ಇದೇ ಅದರ ಗುರಿಯು ಆಗಿರುತ್ತದೆ ಈ ವಿನ್ಯಾಸದ ಮಾರ್ಗವನ್ನು ಅನುಸರಿಸಿ ಸಂಶೋಧನೆಯ ಹಂತವನ್ನು ಪ್ರಾರಂಭಿಸಲಾಗಿದೆ.

ಮಾದರಿ (ನಮೂನೆ) ವಿಧಾನ:-
ಸಾಮಾಜಿಕ ಸಂಶೋಧನಾ ವಿಧಾನಗಳಲ್ಲಿ ಮಾದರಿ ವಿಧಾನವು ಜನಪ್ರಿಯಾಗೊಳ್ಳತ್ತದೆ.ಇದು ಸಂಶೋಧಕನು ತನ್ನ ಸಂಶೋಧನೆಯಲ್ಲಿ ಅನುಕರಿಸುತ್ತಿರುವ ಮುಖ್ಯ ಕ್ರಮಗಳಲ್ಲೊಂದು ಸಂಶೋಧನೆಯಲ್ಲಿ ಕ್ಷೇತ್ರವು ತುಂಬಾ ವಿಶಾಲವಾದದು.ಅದನ್ನು ಒಂದೇ ಬಾರಿಗೆ ಅಧ್ಯಯನ ಮಾಡಲು ಬಹಳ ಕಷ್ಟ ಆದ್ದರಿಂದ ಆ ಕ್ಷೇತ್ರದ ಸಾಮಾನ್ಯ ಗುಣಗಳನ್ನು ಹೊಂದಿರುವುದರೊಂದಿಗೆ ಅದನ್ನು ಪ್ರತಿನಿಧಿಸಬಹುದಾದಂತಹ ಅದರ ಭಾವೊಂದನ್ನು ಅಧ್ಯಯನ ದೃಷ್ಠಿಯಿಂದ ಆಯ್ದುಕೊಳ್ಳವುದಕ್ಕೆ ಮಾದರಿ ವಿಧಾನ ಎಂದು ಕರೆಯುತ್ತಾರೆ.

ವ್ಯಾಖ್ಯೆಗಳು:-
೧)    ಕಾಲ್ವಿನ್ ಪ್ರಕಾರ ಮಾದರಿಯ ಆಯ್ಕೆ ಮಾಡಿದ ಸಮಗ್ರ ಗುಂಪಿನ ಒಂದು ಕಿರುಚಿತ್ರವೇ ವಿಭಜಿಸಿದ ಭಾಗ
೨)    ಗೂಡ್ ಮತ್ತು ಹ್ಯಾಟ್ ಮಾದರಿಯು ವಿಶಾಲ ಕ್ಷೇತ್ರದ ಪ್ರಾತಿನಿಧಿಕ ಘಟಕ ಎಂದು ವ್ಯಾಖ್ಯಾನಿಸಿದ್ದಾರೆ
೩)    ಸಾಮಾನ್ಯವಾದ ಅರ್ಧದಲ್ಲಿ ಕಠಿಣವಾದ ಕೆಲಸವನ್ನು ಸರಳವಾಗಿ ಸಾಧಿಸುವ ಪ್ರಯತ್ನ ಎನ್ನಬಹುದು

ಮಾದರಿ ವಿಧಾನ :-
ಪ್ರಸ್ತುತ ಸಂಶೋಧನೆಯ ಅಧ್ಯಯನ ಜಗತ್ತು ಸಾದಲಿ ಹೋಬಳಿಯ ಗ್ರಾಮ ಪಂಚಾಯಿತಿಗಳು ಒಟ್ಟು ೦೪ ಗ್ರಾಮ ಪಂಚಾಯಿತಿಗಳಲ್ಲಿ ಚುನಾಯಿತ ಸದಸ್ಯರ ೧೧೦ ಪ್ರತಿಯೊಂದು ಗ್ರಾಮ ಪಂಚಾಯ್ತಿಗಳಿಗೆ ಭೇಟಿ ನೀಡಿ ಸದಸ್ಯರ ಸಂಖ್ಯೆ ಹೆಸರು ಪಡೆದುಕೊಂಡು ಒಟ್ಟಿಗೆ ಸೇರಿಸಲಾಯಿತು.ಈ ೧೧೦ ರಲ್ಲಿ ೫೦ ಸದಸ್ಯರುನ್ನು ಯಾದ್ನಚ್ವಿಕ ಮಾದರಿ ವಿಧಾನವನ್ನು ಅನುಸರಿಸಿ ,ಲಾಟರಿ ವಿಧಾನ ( ಐoಣಣeಡಿಥಿ ಒeಣhoಜ ) ಬಳಸಲಾಯಿತು. ಈ ವಿಧಾನದ ಮೂಲಕ ೪ ಗ್ರಾಮ ಪಂಚಾಯ್ತಿಗೆ ಸೇರಿದ ೧೧೦ ಪ್ರತಿಯೊಬ್ಬ ಸದಸ್ಯರ ಹೆಸರನ್ನ ಮತ್ತು ಸಂಖ್ಯೆಯನ್ನು ಒಂದೇ ಬಣ್ಣದ ಚೀಟಿಯಲ್ಲಿ ಬರೆದು ಒಂದೇ ಆಕಾರದಲ್ಲಿ ಸುತ್ತಿ ಒಂದು ಡಬ್ಬಗೆ ಹಾಕಿ ಚನ್ನಾಗಿ ಕಲಕಲಾಯಿತು. ನಂತರ ಒಂದೊಂದಾಗಿ ತೆಗೆದು ಹೆಸರನ್ನು ಮತ್ತು ಸಂಖ್ಯೆಯನ್ನು ಬರೆದು ಕೊಂಡು ಡಬ್ಬದಿಂದ ಹೊರಗಿಡಲಾಯಿತು. ೦೪ ಗ್ರಾಮ ಪಂಚಾಯ್ತಿ ಚುನಾಇತ್ ಸದಸ್ಯರಲ್ಲಿ ೩೦ ಪುರುಷರು ೨೦ ಮಹಿಳಾ ಸದಸ್ಯರನ್ನು ಮಾಹಿತಿದಾರರಾಗಿ ಮಾದರಿ ರಚಿಸಲಾಯಿತು. ಹೀಗೆ ಒಟ್ಟು ೫೦ ಸದಸ್ಯರನ್ನು ಆಯ್ಕೆ ಮಾಡಿಕೊಳ್ಳಲಾಯಿತು.

ಮಾಹಿತಿ ಸಂಗ್ರಹಣೆಯ ಸಾಧನಗಳು:-
ಸಂಶೋಧನೆಯ ಧ್ಯೇಯೋದ್ದೇಶಗಳ ಮತ್ತು ಪ್ರಮೇಯಗಳನ್ನು ಗಮನದಲ್ಲಿರಿಸಿಕೊಂಡು ಮಾಹಿತಿ ಸಂಗ್ರಹಣೆ ಸಾಧನೆಗಳನ್ನು ರಚಿಸಲಾಯಿತು.
 ಸಂಶೋಧನೆಯಲ್ಲಿ ನಂಬಲಾರ್ಹವಾದ ಮಾಹಿತಿ ಸಂಗ್ರಹಣೆಯ ಅತ್ಯಂತ ತ್ರಾಸದಾಯಕವಾದ ಆದರೆ ಅಷ್ಟೇ ಮಹತ್ವಪೂರ್ಣವಾದ ಕಾರ್ಯವಾಗಿರುತ್ತದೆ.ಕ್ಷೇತ್ರ ಕಾರ್ಯದ ಮೂಲಕ ಸಾಮಾಜಿಕ ಸಂಶೋಧಕನು ಮಾಹಿತಿ ಸಂಗ್ರಹಣೆಗಾಗಿ ಬಳಸಕೊಳ್ಳುವ ತಂತ್ರ ಸಾಧನಗಳಲ್ಲಿ ಬಹಳ ಮುಖ್ಯವಾದವುಗಳೆಂದರೆ.
೧)    ಅವಲೋಕನ
೨)    ಸಂದರ್ಶನ
೩)    ಪ್ರಶ್ನಾವಳಿ
ಇವುಗಳ ಉಪಯೋಗದಿಂದ ಪ್ರಾಥಮಿಕ ಅಕರವನ್ನು ಪಡೆಯಲಾಯಿತು.ಉಳಿದಂತೆ ಲಭ್ಯವಿರುವ ಸಾಹಿತ್ಯ ಸಕಾಲ ಕಾರ್ಯಕ್ರಮದ ವಿಷಯಗಳು ಮತ್ತು ಪ್ರಕಟಣೆಗಳು ಹಾಗೂ ನಾಗರಿಕ ಸೇವಾ ಕಾಯ್ದೆಯ ಅಧಿನಿಯಮಗಳು ಆಕರವೆಂದು ಪರಿಗಣಿಸಲಾಯಿತು.

ಸಂಶೋಧನೆಯ ಮಿತಿಗಳು:-
ಪ್ರಸ್ತುತ ಸಂಶೋಧನೆಯು ವೈಜ್ಞಾನಿಕವಾಗಿ ರೂಪಗೊಂಡು ವ್ಯವಸ್ಥಿತವಾಗಿ ಮುಂದುವರೆದಿದ್ದಗ್ಯೂ ಕೆಲವು ಅನಿವಾರ್ಯ ಮಿತಿಗಳನ್ನು ಸಂಶೋಧನೆಯಲ್ಲಿ ಅನುಭವಿಸಲಾಯಿತು.
ಕೆಲವು ಈ ಕೆಳಗಿನಂತಿವೆ.
೧)    ಸರ್ಕಾರದ ಸಕಾಲ ಕಾರ್ಯಕ್ರಮದ ಬಗ್ಗೆ ಗ್ರಾಮ ಪಂಚಾಯಿ ಸದಸ್ಯರಿಗೆ ಹೆಚ್ಚಿನ ತಿಳುವಳಿಕೆ ಇಲ್ಲ ಆದರು ಸಹ ಸಂಶೋಧನೆ ಕೈಗೊಳ್ಳಲಾಯಿದೆ.
೨)    ಗ್ರಾಮ ಪಂಚಾಯಿತಿ ಸದಸ್ಯರಿಂದ ಸಕಾಲ ಕಾರ‍್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿಲ್ಲ.

 ಅಧ್ಯಾಯ:-೦೪ ಮಾಹಿತಿಯ ವರ್ಗೀಕರಣ ಮತ್ತು ವಿಶ್ಲೇಷಣೆ
ಮುನ್ನುಡಿ:-
 ಸಂಶೋಧನೆಯಲ್ಲಿ ಅಂಕಿ-ಅಂಶಗಳನ್ನು ಕಲೆಹಾಕುವುದರ ಸಲುವಾಗಿ ಯೋಜನೆಯನ್ನು ಸಿದ್ದಪಡಿಸುವುದು ಸಿದ್ದಪಡಿಸಿದ ಯೋಜನೆಗನುಗುಣವಾಗಿ ಅಂಕಿ-ಅಂಶಗಳನ್ನು ಕಲೆಹಾಕಲಾಗುವುದು ಇಷ್ಟರಿಂದಲೇ ನಿರೀಷತ ಉತ್ತರ ದೊರೆಯಲಾರದು. ಆದುದ್ದರಿಂದ ಕಲೆ ಹಾಕಿದ ಅಂಕಿ-ಅಂಶ ಮತ್ತು ಮಾಹಿತಿಯನ್ನು ವಿಶ್ಲೇಷಿಸುವುದು ಅತ್ಯಗತ್ಯವಾಗುತ್ತದೆ. ಸಂಗ್ರಹಿಸಿ ಮಾಹಿತಿಯನ್ನು ಸೂಕ್ತವಾಗಿ ವಿಶ್ಲೇಷಿಸುವುದು ಈ ವಿಶ್ಲೇಷಣೆಯಿಂದ ಬಂದ ಪರಿಣಾಮಗಳನ್ನು ಸರಿಯಾಗಿ ಅರ್ಥೈಸುವಿಕೆ-ಇವುಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.

ವ್ಯಾಖ್ಯೆಗಳು :-
೧)    ಗೂಡ್ ಮತ್ತು ಹ್ಯಾಟ್ ಅವರು ಯಾವ ಸಂಶೋಧಕನು ತನ್ನ ಸಂಶೋಧನೆಯ ವಿಷಯವನ್ನು ಸಾಕಷ್ಟು ತಿಳಿದು ಕೊಂಡಿರುವನ್ನೋ ಅಂತಹ ವ್ಯಕ್ತಿಗೆ ತಾನು ಸ್ವಂತ ಕಲೆಹಾಕಿದ ವಿಷಯವನ್ನು ವಿಶ್ಲೇಷಿಸಲು ಕಠಿಣವೆನಿಸಲಾರದು ಎಂದು ವಿಶ್ಲೇಷಣೆಯ ಬಗ್ಗೆ ವ್ಯಾಖ್ಯಾನಿಸಿದ್ದಾರೆ.
೨)    ಜೆ.ಹೆನ್ರಿ ಪೇನ್ ಕೇರ್ ಅವರು ಪಡೆದ ಸತ್ಯಾಂಶಗಳನ್ನು ಸರಿಯಾಗಿ ವಿಶ್ಲೇಷಿಸುವುದೇ ಸಂಶೋಧನೆ ಎಂದು ಕರೆದಿದ್ದಾರೆ.

ಸಂಶೋಧನೆಗಾಗಿ ಸಂಗ್ರಹಿಸಿದ ಮಾಹಿತಿಯನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿದ ಹೊರತು ಸಂಶೋಧನೆಯ ಧೈಯೋದ್ದೇಶಗಳನ್ನು ಈಡೇರಿಸಲಾಗದು ಮತ್ತು ಸಂಋಓಧನೆಯ ಫಲಿತಾಂಶಗಳು ಹೊರ ಬರುವುದಿಲ್ಲ ಫಲಿತಾಂಶ ಹೊರೆ ಬರದೆಯೇ ಸಲಹೆ -ಸೂಚನೆಗಳನ್ನು ಕೊಡುವುದು ಅಸಾಧ್ಯ ಅಂದರೆ ಸಂಶೋಧನೆಗೆ ಸಂಗ್ರಹಿಸಿದ ಮಾಹಿತಿಯ ವೈಜ್ಞಾನಿಕ ವರ್ಗೀಕರಣ ಮತ್ತು ವಿಶ್ಲೇಷಣೆ ಇಡೀ ಸಂಶೋಧನೆಗೆ ಒಂದು ನಿರ್ಧಿಷ್ಟ ಆಕಾರವನ್ನು ನೀಡುತ್ತಾರೆ.
ಈ ಅಧ್ಯಯನದಲ್ಲಿ ಮಾಹಿತಿದಾರ ಮತ್ತು ಆತನ ಕುಟುಂಬದ ಸದಸ್ಯರು ವಯಕ್ತಿಕ ಮಾಹಿತಿದಾರರ ಕುಟುಂಬ ಹೊಂದಿರುವ ವಸತಿ ಸೌಲಭ್ಯ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ ಪಂಚಾಯಿತಿ ರಾಜ್ ವ್ಯವಸ್ಥ, ಚುನಾವಣೆ ಕರ್ತವ್ಯ ಹಾಗೂ ಜವಾಬ್ದಾರಿ ಸರ್ಕಾರ ಯೋಜನೆಗಳ ಬಗ್ಗೆ ತಿಳುವಳಿಕೆ ಮತ್ತು ರಾಜಕೀಯ ಮಹಾತ್ವಾಕಾಂಕೆಗಳ ಬಗ್ಗೆ ಅರಿಯಲು ಸಂಶೋಧಕರನು ಪ್ರಶ್ನಾವಳಿಯನ್ನು ರಚಿತ ಸಂದರ್ಶನದ ಮೂಲಕ ೫೦ ಮಾಹಿತಿದಾರರಿಂದ ಸಂಗ್ರಹಿಸಿದ ಮಾಹಿತಿಯನ್ನು ವರ್ಗೀಕರಿಸಿ ವಿಶ್ಲೇಷಿಸಲಾಗಿದೆ.

ಸಂಶೋಧನಾ ಫಲ ಮತ್ತು ಸಲಹೆಗಳು ಹಾಗೂ ಉಪಸಂಹಾರ:-
ಸಂಶೋಧನಾ ಫಲ
ಅಭ್ಯುದಯ: ಕರ್ನಾಟಕ ರಾಜ್ಯದ ಸಕಾಲ ಕಾರ್ಯಕ್ರಮದ ಗ್ಗೆ ಗ್ರಾಮ ಪಂಚಾಯಿತಿ ಸದಸ್ಯರಿಗೆ ಇರುವ ಅರಿವನ್ನು ಕುರಿತು ಒಂದು ಅಧ್ಯಯನ ವಿಶೇಷವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲ?ಊಕಿನ ಸಾದಲಿ ಹೋಬಳಿಯ ಗ್ರಾಮ ಪಂಚಾಯಿತಿ ಸದಸ್ಯರನ್ನು ಅನ್ವಯಿಸಿ ಗ್ರಾಮ ಪಂಚಾಯಿತಿ ೫೦ ಚುನಾಯಿತ ಪ್ರತಿನಿಧಿಗಳನ್ನು ಮಾಹಿತಿದಾರರನ್ನಾಗಿಸಿಕೊಂಡು ಕೈಗೊಂಡು ಪ್ರಸ್ತುತ ಅಧ್ಯಾಯನದಿಂದ ಹೊರಬಂದಿರುವ ಫಲತಾಂಶಗಳನ್ನು ಈ ಅಧ್ಯಾಯನದಲ್ಲಿ ನೀಡಲಾಗಿದೆ.

ಮಾಹಿತಿದಾರರು:-
೧)    ಸಂಶೋಧನೆಯಲ್ಲಿ ಮಾಹಿತಿದಾರರಾಗಿ ಪಾಲ್ಗೊಂಡಿರುವ ೫೦-ಗ್ರಾಮ ಪಂಚಾಯಿತ್ ಚುನಾಯಿತ ಪ್ರತಿನಿಧಿಗಳಲ್ಲಿ ಶೇ೬೦ ಪುರುಷರು ಮತ್ತು ಶೇ೪೦ ಮಹಿಳೆಯರು ಸೇರಿದ್ದು ಎಲ್ಲಾ ಮಾಹಿತಿದಾರರು ವಿವಾಹಿತರಾಗಿದ್ದಾರೆ.
೨)    ಶೇ ೨೮.೪೮ಮತು ೨೪ ಮಾಹಿತಿದಾರರು ೨೦,೩೫,೫೦ ಮತ್ತು ೫೧-೬೫ ವರ್ಷಗಳ ವಯಸ್ಸಿನ ಗುಂಪುಗಳಲ್ಲಿ ಹಂಚಿಕೆಯಿದ್ದು ಶೇ ೨೮ ಮಾಹಿತಿದಾರರು ಯುವಕ ಗುಂಪುನ್ನು ಪ್ರತಿನಿಧಿಸಿದ್ದಾರೆ
೩)    ಮಾಹಿತಿದಾರರಲ್ಲಿ ಹೆಚ್ಚಾಗಿ ಅನಕ್ಷರಸ್ಥರು ಪ್ರಾತಿನಿಧ್ಯವಿದಾಗ್ಯೂ ಪ್ರಾಥಮಿಕ ಮಾಧ್ಯಮಿಕ ಪ್ರೌಡ ಮತ್ತು ಶಿಕ್ಷಣಕ್ಕೆ ಮೇಲ್ಪಟ್ಟ ಶಿಕ್ಷಣ ಪಡೆದವರೂ ಸಹ ಚುನಾಯಿತಿ ಪ್ರತಿನಿಧಿಗಳಾಗಿರುವುದು
೪)    ಶೇ ೯೮ ಮಾಹಿತಿದಾದರು ಹಿಂದೂ ಧರ್ಮ ಅನುಯಾಯಿಗಳಾದ್ದು ಶೇ ೦೫ ಮಾಹಿತಿದಾರರು ಇಸ್ಲಾಂ ಧರ್ಮದವರು ಪ್ರತಿನಿಧಿಸಿದ್ದಾರೆ.
೫)    ಶೇ ೮೫ ಮಾಹಿತಿದಾರರ ಮಾತೃಭಾಷೆ ಕನ್ನಡ ಆಗಿದೆ,
೬)    ಮಾಹಿತಿದಾರರಲ್ಲಿ ೧೧ ಜಾತಿಗಳಿಗೆ ಸೇರಿದವರಾಗಿದ್ದು ಪ್ರತಿನಿಧಿಸಿದ್ದು ಶೇ ೧೪ ಮಾಹಿತಿದಾರರು ಪರಿಶಿಷ್ಟ ಪಂಗಡವನ್ನು ಪ್ರತಿನಿಧಿಸಿದ್ದಾರೆ.

ಕೌಟುಂಬಿಕ ವಿವರ :
೧)    ಅವಿಭಕ್ತ ಮತ್ತು ವಿಭಕ್ತ ಮಾದರಿ ಕುಟುಂಬಗಳನ್ನು ಅನುಕ್ರಮವಾಗಿ ಶೇ ೨೨ ಮತ್ತು ಶೇ ೭೮ ಮಾಹಿತಿದಾರರು ಪ್ರತಿನಿಧಿಸಿದ್ದಾರೆ.
೨)    ಶೇ ೫೮ ಮಾಹಿತಿದಾರರು ಕುಟುಂಬದ ಮುಖ್ಯಸ್ಥರಾಗಿದ್ದಾರೆ.
ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿ:-
೧)    ಶೇ ೯೮ ಮಾಹಿತಿದಾರರು ಗ್ರಾಮೀಣ ಪ್ರದೇಶದವರಾಗಿದ್ದು ಗ್ರಾಮ ಪಂಚಾಯಿತ್ ಯ ಸದಸ್ಯರಾಗಿರುವುದು.
೨)    ಶೇ ೯೮ ಮಾಹಿತಿದಾರರು ಸ್ವಂತ ವಾಸದ ಮನೆಯನ್ನು ಹೊಂದಿದ್ದಾರೆ ಶೇ ೮೮ ಮಾಹಿತಿದಾರರ ಕುಟುಂಬದ ಉದ್ಯೋಗ ಕೃಷಿಯನ್ನು ಆಧರಿಸಿದೆ.
೩)    ಮಾಹಿತಿದಾರರು ಕೃಷಿ ಕೂಲಿ ವ್ಯಾಪಾರ ಗ್ರಾಮ ಪಂಚಾಯಿಒತ್ ಕಾಮಗಾರಿ ಗುತ್ತಿಗೆ ಕೃಷಿ ಮತ್ತು ವ್ಯಾಪಾರ ಮತ್ತು ನಿರುದ್ಯೋಗ ಗೃಹಿಣಿ ಇವುಗಳನ್ನು ಅನುಕ್ರಮವಾಗಿ ಶೇ ೫೬,೧೬,೧೨ ಮತ್ತು ೦೨ ರ ಪ್ರಮಾಣದಲ್ಲಿ ಉದ್ಯೋಗಕ್ಕಾಗಿ ಆಶ್ರಯಿಸಿದ್ದಾರೆ.
೪)    ಶೇ ೪೬ ಮಾಹಿತಿದಾರರು ಗ್ರಾಮ ಪಂಚಾಯಿತಿ ಸದಸ್ಯತ್ವ ದೊರೆತ ನಂತರದಲ್ಲಿ ತಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿಯಲ್ಲಿ ಪ್ರಗತಿಯಾಗಿರುವುದುನ್ನು ಗುರುತಿಸಿರುವರಾದರೂ, ಪ್ರಗತಿಗೆ ಕಾರಣಗಳನ್ನು ಪ್ರಗತಿಪರ ಕೃಷಿ ಮತ್ತು ವ್ಯಾಪಾರದಲ್ಲಿ ಮುನ್ನಡೆ ಮತ್ತು ಕಾರಣಗಳನ್ನು ಮುಂದೂ ಮಾಡಿದ್ದಾರೆ.

ಸಕಾಲ ಕಾರ್ಯಕ್ರಮ ಮತ್ತು ಮಾಹಿತಿದಾರ :
೧)    ಕರ್ನಾಟಕ ಸರ್ಕಾರದ ಸಕಾಲ ಕಾರ್ಯಕ್ರಮ ಬಗ್ಗೆ ತಿಳಿದಿರುವವರು ಶೇ ೭೦೧ ರ ಪ್ರಮಾಣದಲ್ಲಿದೆ.
೨)    ಪಂಚಾಯಿತ್ ರಾಜ್ ವ್ಯವಸ್ಥೆಯಲ್ಲಿನ ಮೀಸಲಾತಿಯ ಸವಿವರಗಳನ್ನು ಶೇ ೪೮ ಮಾಹಿತಿದಾರರು ಮಾತ್ರ ತಿಳಿದಿದ್ದಾರೆ.
೩)    ಸಕಾಲ ಕಾರ್ಯಕ್ರಮವು ಜನರಿಗೆ ಹೇಗೆ ಉಪಯೋಗವಾಗುತ್ತದೆ. ಎಂಬುವುದರ ಬಗ್ಗೆ ತಿಳಿದಿವರು ಶೇ ೬೦ ರಷ್ಟು ಸದಸ್ಯರು.
೪)    ನಾಗರಿಕ ಸೇವಾ ಕಾಯಿದೆಗಳ ಬಗ್ಗೆ ತಿಳಿವಳಿಕೆ ಇರುವರು ಶೇ ೪೦ ರಷ್ಟುರಿದ್ದಾರೆ.
೫)    ಈ ಕಾರ್ಯಕ್ರಮವು ಇವರಿಗೆ ಹೆಚ್ಚಿನ ಅನುಕೂಲವಾಗಿದೆ.
೬)    ಸಕಾಲ ಕಾರ್ಯಕ್ರಮದ ಬಗ್ಗೆ ಪಂಚಾಯಿತ್ ಜನರಿಗೆ ತಲುಪಲು ಶೇ ೫೦ ರಷ್ಟು ಸದಸ್ಯರು ಪ್ರಯತ್ನಸಿದ್ದಾರೆ.

ಸಲಹೆ:-
೧)    ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಕಾಲ ಕಾರ್ಯಕ್ರಮದ ಬಗ್ಗೆ ತಿಳುವಳಿಕೆ ನೀಡಬೇಕು.
೨)    ಅಭ್ಯರ್ಥಿಗಳಿಗೆ ಕನಿಷ್ಠಿ ಶಿಕ್ಷಣ ಮಟ್ಟವನ್ನು ನಿಗಧಿಪಡಿಸುವ ಅವಶ್ಯಕತೆ ಇದೆ.
೩)    ಚುನಾಯಿತಿ ಸದಸ್ಯರಿಗೆ ವಿವಿಧ ವಿಚಾರಗಳ್ಲಿ ಆಗಾಗ್ಗೆ ತರಬೇತಿ ಮತ್ತು ಪುನರ್ ಮನನ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಮತ್ತು ಸದಸ್ಯರ ಭಾಗವಹಿಸುವಿಕೆಯನ್ನು ಶಾಸನಬದ್ದವಾಗಿ ಕಡ್ಡಾಯಗೊಳಿಸಬೇಕು
೪)    ಪಂಚಾಯಿತಿಯ ಎಲ್ಲಾ ಸರ್ವಸದಸ್ಯರ ಸಭೆಗಳಲೂ ಹಾಜರಾತಿ ಮತ್ತು ಪೂರ್ಣ ಪ್ರಮಾಣದ ಭಾಗವಹಿಸುವಿಕೆಯನ್ನು ಕಡ್ಡಾಯಗೊಳಿಸಬೇಕು
೫)    ಸರ್ಕಾರಿದಿಂದ ಹೊಸ ಕಾರ್ಯಕ್ರಮಗಳು ಅನುಷ್ಠಾನುವಾದಾಗ ಅದರ ಬಗ್ಗೆ ಪಂಚಾಯಿತಿಯ ಸದಸ್ಯರಿಗೆ ಮತ್ತು ಜನರಿಗೆ ತಿಳುವಳಿಕೆ ನೀಡಬೇಕು ಹಾಗೂ ಅದರ ಬಗೆ ಚರ್ಚಿಸಬೇಕು.
೬)    ಪಂಚಾಯಿತಿಯ ಕಾರ್ಯಕ್ರಮಗಳಲ್ಲಿ ಜನರನ್ನು ಭಾಗವಹಿಸಬೇಕಾಗಿದೆ.
೭)    ಪಂಚಾಯಿತಿಯ ಜನರಿಗೆ ನಾಗರಿಕ ಸೇವೆಗಳನ್ನು ನಿಗಧಿತ ಸಮಯದಲ್ಲಿ ಪೊರೃಸಲು ಪ್ರಯತ್ನಸಬೇಕು
೮)    ಸಕಾಲ ಕಾರ್ಯಕ್ರಮದ ಬಗ್ಗೆ ಜನರಿಗೆ ತಿಳುವಳಿಕೆ ನೀಡುವುದಕ್ಕಾಗಿ ಒಂದು ಸಮತಿಯನ್ನು ಪಂಚಾಯಿತಿಯಲ್ಲಿ ಸೇಮಿಸಬೇಕು.
೯)    ಸಕಾಲ ಕಾರ್ಯಕ್ರಮವು ಯಶಸ್ವಿಗೊಳಿಸಲು ಗ್ರಾಮೀಣ ಮಟ್ಟದಿಂದ ಪ್ರಯತ್ನಸಬೇಕಾಗಿದೆ.
೧೦)    ಮಹಿಳಾ ಸದಸ್ಯರುಗಳು ಕ್ರಮೇಣವಾದರು ಪುರುಷರು ಮುಷ್ಠಿಯಿಂದ ಹೊರಬಂದು ಸ್ವಂತ ಅಭಿಪ್ರಾಯಗಳನ್ನು ವ್ಯಕ್ತಿ ಪಡಿಸುವ ಮತ್ತು ನಿರ್ಧಾರಗಳನ್ನು ಕೈಗೊಳ್ಳವತ್ತ ಮುನ್ನೆಡೆಯಬೇಕು.
೧೧)    ತ್ವರಿತ ಮತ್ತು ಪರಿಣಾಮಕಾರಿಯಾದ ಅಭ್ಯದಯ ಕಾರ್ಯಕ್ರಮ ಗಳ ಅನುಷ್ಠಾನದಲ್ಲಿ ಪಂಚಾಯಿತಿ ಸಂಸ್ಥೆಗಳು ಸ್ವಯಂ ಸೇವಾ ಸಂಸ್ಥೆಗಳೊಡನೆ ಕೈ ಜೋಡಿಸಲು ಮುಂದಾಗಬೇಕು.
೧೨)    ಸಕಾಲ ಕಾರ್ಯಕ್ರಮ ಬಗ್ಗೆ ಗ್ರಾಮೀಣ ಜನರಿಗೆ ತಿಳಿಸುವುದಕ್ಕಾಗಿ ವಿವಿಧ ರೀತಿಯ ವಿಧಾನಗಳನ್ನು ಅನುಸರಿಸಬೇಕಾಗಿದೆ.

ಈ ಅಧ್ಯಯನದಲ್ಲಿ ಮಾಹಿತಿದಾರರಾಗಿ ಪಾಲ್ಗೊಂಡಿರುವ ೫೦ ಗ್ರಾಮ ಪಂಚಾಯ್ತಿ ಸದಸ್ಯರನ್ನು ಅವರ ವಯೋಮಾನಕ್ಕೆ ಅನುಗುಣವಾಗಿ ವಯಸ್ಸಿನ ಗುಂಪುಗಳಾಗಿ ವಿಭಾಗಿಸಲಾಗಿದೆ.ಈ ಮೂರು ವಯಸ್ಸಿನ ಗುಂಪುಗಳೆಂದೆರೆ ೨೦-೩೫,೩೬-೫೦,೫೧-೬೫,ಒಳಗೊಂಡ ಗುಂಪು .ಈ ಮೂರು ವಯಸ್ಸಿನ ಗುಂಪುಗಳಲ್ಲಿ ಮಾಹಿತಿದಾರು ಅನುಕ್ರಮವಾಗಿ ಶೇಕಡಾ ೨೮,೪೮ ಹಾಗೂ ೨೪ ರ ಪ್ರಮಾಣದಲ್ಲಿ ಶೇಕಡಾ ಅನ್ವಯ ಪ್ರಾತಿನಿಧ್ಯ ಪಡೆದಿರುವುದು ಮೇಲಿನ ಪಟ್ಟಿಯಲ್ಲಿ ಕಾಣಬಹುದಾಗಿದೆ. ಬಹು ಸಂಖ್ಯೆಲ್ಲದಿದ್ದರೂ ಹಂಚಿಕೆ ಶೇ ೨೮ ಸದಸ್ಯರು ಕಡಿಮೆ ವಯಸ್ಸಿನ ಗುಂಪುನಲ್ಲಿ ಅಂದರೆ ೨೦-೩೫ ವರ್ಷಗಳ ವಯಸ್ಸಿನ ಗುಂಪುನಲ್ಲಿ ಕಂಡು ಬರುವುದು ಯುವ ಶಕ್ತಿ ರಾಜಕೀಯ ಹಾಗೂ ಅಭ್ಯದಯ ಪ್ರಕ್ರಿಯೆಯಲ್ಲಿ ಮಹತ್ವ ಪೂರ್ಣ ವಹಿಸುತ್ತಿದ್ದಾರೆ.
ಸೂಚಿಸಿರುವಂತೆ ಕರ್ನಾಟಕ ರಾಜ್ಯದ ಸಕಾಲ ಕಾರ್ಯಕ್ರಮದ ಬಗ್ಗೆ ೩೫ (೭೦%) ಪ್ರತಿವಾದಿಗೆ ಈ ಕಾರ್ಯಕ್ರಮದ ಬಗ್ಗೆ ಅರಿವುವಿದೆ ಹಾಗೂ ಈ ಕಾರ್ಯಕ್ರಮದ     ಬಗ್ಗೆ ೧೫ (೩೦) ರಷ್ಟು ಪ್ರತಿವಾದಿಗಳಿಗೆ ಅರಿವುವಿಲ್ಲ ಎಂಬುದಾಗಿ ತಿಳಿದು ಬಂದಿದೆ. ಬಹು ಪ್ರಾತಿವಾದಿಗಳಗೆ ಕರ್ನಾಟಕ ರಾಜ್ಯದ ಸಕಾಲ ಕಾರ್ಯಕ್ರಮದ ಬಗ್ಗೆ ಅರಿವು ವಿದೆ. ಎಂಬುವುದು ಈ ಮೇಲಿನ ಪಟ್ಟಿಯಿಚಿದ ತಿಳಿದು ಬರುತ್ತದೆ.

ಸಕಾಲ ಕಾರ್ಯಕ್ರಮದ ಬಗ್ಗೆ ಮಾಹಿತಿದಾರ ಕುಡುಂಬಗಳಿಗೆ ಸಕಾಲ ಕಾರ್ಯಕ್ರಮದ ಬಗ್ಗೆ ಅರಿವುವಿದೆ ಎಂಬುದಾಗಿ ೩೪% ರಷ್ಟು ಮಾಹಿತಿದಾರು ತಿಳಿಸಿದ್ದಾರೆ. ಅದೇ ರೀತಿ ಈ ಕಾರ್ಯಕ್ರಮದ ಬಗ್ಗೆ ೬೬% ಪ್ರತಿವಾದಿ ಕುಟುಂಬಗಳಿಗೆ ಅರಿವುವಿಲ್ಲ.
ಬಹು ಪ್ರಾತಿವಾದಿಗಳ ಕುಟುಂಬಗಳಿಗೆ ( ೬೦%) ಈ ಸಕಾಲ ಕಾರ್ಯಕ್ರಮದ ಬಗ್ಗೆ ಅರಿವುದಿಲ್ಲ.

 ಬೆಂಗಳೂರು ವಿಶ್ವವಿದ್ಯಾನಿಲಯ ಬೆಂಗಳೂರು ಸಮಾಜ ಕಾರ‍್ಯಯ ವಿಭಾಗ
 ಪ್ರಶ್ನಾವಳಿ:-

 ವಿಷಯ:- ಕರ್ನಾಟಕ ರಾಜ್ಯದ ಸಕಾಲ ಕಾರ್ಯಕ್ರಮದ ಬಗ್ಗೆ ಗ್ರಾಮ ಪಂಚಾಯ್ತಿ ಸದಸ್ಯರಿಗೆ ಇರುವ ಅರಿವನ್ನು ಕುರಿತು ಒಂದು ಅಧ್ಯಯನ ವಿಶೇಷವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಹೋಬಳಿಯ ಗ್ರಾಮ ಪಂಚಾಯಿತಿಗಳಗೆ ಸಂಬಂಧಿಸಿದಂತೆ.
ಸಂಧರ್ಶನದ ಮಾರ್ಗಸೂಚಿ-ಗ್ರಾಮ ಪಂಚಾಯ್ತಿ ಸದಸ್ಯರಿಗೆ
ಸದಸ್ಯರ ವೈಯಕ್ತಿಕ ಮಾಹಿತಿ:-
೧)    ಸದಸ್ಯರ ಹೆಸರು:-
೨)    ಲಿಂಗ ಎ) ಸ್ರ್ತೀ ಬಿ) ಪುರುಷ:-
೩)    ವಯಸ್ಸು:- ಎ) ೨೫ ರಿಂದ ೩೦ ಬಿ) ೩೦ರಿಂದ ೩೫ ಸಿ) ೩೫ ರಿಂದ ೪೦ ಡಿ) ೪೦ ಮೇಲ್ಪಟ್ಟು
೪)    ವಿದ್ಯಾರ್ಹತೆ:- ಎ) ಪ್ರಾಥಮಿಕ ಬಿ )ಮಾಧ್ಯಮಿಕ ಸಿ) ಪ್ರೌಢ ಡಿ) ಉನ್ನತ
೫)    ಧರ್ಮ:- ಎ) ಹಿಂದೂ ಬಿ) ಮುಸ್ಲಿಂ ಸಿ)ಕ್ರೈಸ್ಥ         ಡಿ)ಇತರೆ
೬)    ತಿಳಿದಿರುವ ಭಾಷೆ ಎ) ಕನ್ನಡ ಬಿ) ಹಿಂದಿ ಸಿ) ಇಂಗ್ಲೀಷ್ ಡಿ) ಇತರೆ
೭)     ಉದ್ಯೋಗ:- ಎ)ವ್ಯವಸಾಯ ಬಿ) ವಾಣಿಜ್ಯ ಸಿ)ಖಾಸಿಗಿ ಡಿ) ಇತರೆ
೮)    ವೈವಾಹಿಕ ಸ್ಥಿತಿ:- ಎ) ಅವಿವಾಹಿತ ಬಿ) ವಿವಾಹಿತ ಸಿ) ವಿಧವೆ ಡಿ )ವಿಚ್ಛೇಧನ
೯)    ವಾರ್ಷಿಕ ಆದಾಯ:- ಎ) ೧೦೦೦೦ ಬಿ)೨೦೦೦೦ ಸಿ)೩೦೦೦೦ ಡಿ)೫೦೦೦೦
೧೦)    ಕುಟುಂಬದ ಮಾದರಿ :- ಎ) ಅವಿಭಕ್ತ ಬಿ)ವಿಭಕ್ತ
೧೧)    ಕುಟುಂಬದ ಇತರೇ ಸದಸ್ಯರು ವಿವರ :-

ಕ್ರ.ಸಂ    ಹೆಸರು    ಸಂಬಂಧ    ವಯಸ್ಸು    ವಿದ್ಯಾರ್ಹತೆ    ಉದ್ಯೋಗ   
೦೧                       
೦೨                       
೦೩                       
೦೪                       
೦೫                       
ಸಕಾಲ ಕಾರ‍್ಯಕ್ರಮದ ಬಗ್ಗೆ ಗ್ರಾಮ ಪಂಚಾಯ್ತಿ ಸದಸ್ಯರಿಗೆ ಇರುವ ಅರಿವನ್ನು ತಿಳಿಯುವುದು.   

೧)    ಕರ್ನಾಟಕ ರಾಜ್ಯದ ಸಕಾಲ ಕಾರ್ಯಕ್ರಮದ ಬಗ್ಗೆ ನಿಮಗೆ ಅರಿವಿದೆಯೇ ? ಅ) ಹೌದು         ಬಿ) ಇಲ್ಲ
 ೨) ಈ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದವರು ಯಾರು ?
 ಅ) ಗ್ರಾಮ ಪಂಚಾಯಿತಿಯ ಕಾರ್ಯದರ್ಶಿಗಳು
 ಆ) ಗ್ರಾಮ ಪಂಚಾಯಿತಿಯ ಅಧ್ಯಕ್ಷರು   
 ಇ) ವಾರ್ತಾ ಪತ್ರಿಕೆಗಳು
 ಈ) ಮೇಲಿನ ಎಲ್ಲಾವೂ   
 ೩) ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಕುಟುಂಬದವರಿಗೆ ಅರಿವು ಇದೆಯೇ ?
 ಅ) ಹೌದು ಆ) ಇಲ್ಲ
 ೪) ಸಕಾಲ ಕಾರ್ಯಕ್ರಮದ ಬಗ್ಗೆ ನಿಮ್ಮ ಪಂಚಾಯಿತಿಯ ಜನರಿಗೆ ಅರಿವು ಇದೆಯೇ ?
 ಅ) ಹೌದು ಆ) ಇಲ್ಲ
ಸಕಾಲ ಕಾರ್ಯಕ್ರಮದ ಬಗ್ಗೆ ಇರುವ ಮಾಹಿತಿಯನ್ನು ಜನರು ಹೇಗೆ ತಿಳಿದು ಕೊಂಡಿದ್ದಾರೆ ಎಂಬುದರ ಬಗ್ಗೆ ತಿಳಿಯುವುದು.
೫)     ಸಕಾಲ ಕಾರ್ಯಕ್ರಮದ ಬಗ್ಗೆ ಇರುವ ಮಾಹಿತಿಯನ್ನು ನಿಮ್ಮ ಪಂಚಾಯ್ತಿಯ ಜನರಿಗೆ ತಿಳುವಳಿಕೆ ನೀಡಲು ಪ್ರಯತ್ನಸಿದ್ದಿರ?
 ಅ) ಹೌದು ಆ) ಇಲ್ಲ
 ೬) ಸಕಾಲ ಕಾರ್ಯಕ್ರಮ ಬಗ್ಗೆ ಇರುವ ಮಾಹಿತಿಯನ್ನು ಗ್ರಾಮ ಪಂಚಾಯತ್ ಸೂಚನಾ ಫಲಕದಲ್ಲಿ
 ಹಾಕಿದ್ದೀರ ? ಅ) ಹೌದು ಆ) ಇಲ್ಲ   
 ೭) ಸಕಾಲ ಕಾರ್ಯಕ್ರಮದ ಬಗ್ಗೆ ಇರುವ ಮಾಹಿತಿಯನ್ನು ಜನರು ಹೇಗೆ ತಿಳಿದುಕೊಂಡಿದ್ದಾರೆ ?
 ಅ) ಮಾಧ್ಯiಗಳ ಮೂಲಕ
 ಆ) ಗ್ರಾಮ ಪಂಚಾಯಿತ್ ಸೂಚನ ಫಲಕದ ಮೂಲಕ
 ಇ) ಸರ್ಕಾರದ ಜಾಹೀರಾತುಗಳ ಮೂಲಕ
 ಈ) ಮೇಲಿನ ಎಲ್ಲವೂ
೮) ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಪಂಚಾಯ್ತಿಯ ಜನರಿಗೆ ತಿಳುವಳಿಕೆ ನೀಡಿದ್ದೀರಾ?
 ಅ) ಹೌದು ಆ) ಇಲ್ಲ   
೯) ಸಕಾಲ ಕಾರ್ಯಕ್ರಮದ ಬಗ್ಗೆ ಪಂಚಾಯ್ತಿಯ ಜನರಿಗೆ ತಿಳುವಳಿಕೆ ನೀಡಲು ಪಂಚಾಯಿತ್ ಕಡೆಯಿಂದ
 ಯಾವುದಾದರೂ ಕಾರ್ಯಕ್ರಮ ಹಮ್ಮಿ ಕೊಂಡಿದ್ದೀರಾ ?
 ಅ) ಹೌದು ಆ) ಇಲ್ಲ   
೧೦ ) ಈ ಕಾರ್ಯಕ್ರಮದ ಬಗ್ಗೆ ತಿಳಿಯಲು ಜನರು ಆಸಕ್ತಿ ವಹಿಸುತ್ತಿದ್ದಾರೆಯೇ ?
 ಅ) ಹೌದು ಆ) ಇಲ್ಲ
ಸಕಾಲ ಕಾರ್ಯಕ್ರಮದ ಬಗ್ಗೆ ಪಂಚಾಯಿತ್ ಸದಸ್ಯರಿಗೆ ಯಾವವ ವಿಚಾರಗಳಲ್ಲಿ ತಿಳುವಳಿಕೆವಿದೆ ಎಂಬುವುದರ ಬಗ್ಗೆ ತಿಳಿಯುವುದು
೧೧) ನಿಮ್ಮ ಪಂಚಾಯ್ತಿಯ ವ್ಯಾಪ್ತಿಗೆ ಬರುವ ನಾಗರಿಕ ಸೇವೆಗಳಿಗೆ ಯಾರು ಪರಿಹಾರ ನೀಡುತ್ತಾರೆ ?
 ಅ) ಪಂಚಾಯತ್ ಅಭಿವೃದ್ಧಿ ಅಧಿಕಾರಿ/ ಕಾರ್ಯದರ್ಶಿ
 ಆ) ಪಂಚಾಯತ್ ಅಧ್ಯಕ್ಷರು
 ಇ) ಕಾರ್ಯ ನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ
 ಈ) ಪಂಚಾಯತ್ ಸದಸ್ಯರುಗಳು
೧೨) ಸಕಾಲ ಕಾರ್ಯಕ್ರಮ ವ್ಯಾಪ್ತಿಗೆ ಎಷ್ಟು ಇಲಾಖೆಗಳು ಬರುತ್ತವೆ ?
 ಅ) ೩೦ ಆ) ೨೮ ಇ) ೩೩ ಈ) ೨೬
೧೩ ) ಈ ಕಾರ್ಯಕ್ರಮ ವ್ಯಾಪ್ತಿಗೆ ಎಷ್ಟು ಸೇವೆಗಳು ಬರುತ್ತವೆ?
 ಅ) ೩೦೦ ಆ) ೨೬೫ ಇ) ೨೫೦ ಈ) ೩೫೦
೧೪) ನಿಮ್ಮ ಪಂಚಾಯಿತಿಗೆ ಸಂಬಂಧಪಟ್ಟ ನಾಗರೀಕ ಸೇವೆಗಳ ಬಗ್ಗೆ ನಿಮಗೆ ಅರಿವಿದೆಯೇ ?
 ಅ) ಹೌದು ಆ) ಇಲ್ಲ
೧೫) ಬೇರೆ ಇಲಾಖೆಗಳಲ್ಲಿ ಇರುವ ನಾಗರೀಕ ಸೇವೆಗಳ ಬಗ್ಗೆ ತಿಳುವಳಿಕೆ ಇದೆಯೇ ?
 ಅ) ಹೌದು ಆ) ಇಲ್ಲ
 ೧೬) ನಾಗರಿಕರ ಸೇವೆಗಳನ್ನು ನಿಗಧಿತ ಸಮಯದಲ್ಲಿ ಪೊರೈಸದಿದ್ದಲ್ಲಿ ಪ್ರತಿದಿನಕ್ಕೆ ಎಷ್ಟುರಿಂದ ಮತ್ತು ಎಷ್ಟುರವರೆಗೆ ಪರಿಹಾರ ಧನವನ್ನು ಸಂಬಂಧಪಟ್ಟ ಅಧಿಕಾರಿ ನಾಗರಿಕನಿಗೆ ನೀಡುತ್ತಾರೆ ?
ಅ) ೨೦ ರಿಂದ ೫೦೦
ಆ) ೧೦ ರಿಂದ ೩೦೦
ಇ) ೩೦ ರಿಂದ ೨೬೦
ಈ) ೪೦ ರಿಂದ ೬೦೦
೧೭ ) ಈ ಕಾರ್ಯಕ್ರಮವು ಯಾರಿಗೆ ಅನುಕೂಲವಾಗುತ್ತಿದೆ?
 ಅ) ಬಡವರಿಗೆ      ಆ) ಹಿಂದುಳಿದ ವರ್ಗದವರಿಗೆ
 ಇ) ಶ್ರೀಮಂತರಿಗೆ ಈ) ಮೇಲಿನ ಎಲ್ಲಾರಿಗೂ
೧೮) ಕರ್ನಾಟಕ ನಾಗರಿಕ ಸೇವೆಗಳ ಖಾತರಿ ಅಧಿನಿಯಮದ ಬಗ್ಗೆ ತಿಳುವಳಿಕೆ ಇದೀಯೇ ?
 ಅ) ಹೌದು ಆ) ಇಲ್ಲ
೧೯) ಮಾಹಿತಿ ಹಕ್ಕು ಕಾಯ್ದೆ (ಆರ್.ಟಿ.ಐ) ಬಗ್ಗೆ ತಿಳುವಳಿಕೆ ಇದೆಯೇ ?
 ಅ) ಹೌದು ಆ) ಇಲ್ಲ
೨೦) ಸಕಾಲ ಕಾರ್ಯಕ್ರಮದ ಧ್ಯೇಯ (ಘೋಷ) ವಾಕ್ಯ ಯಾವುದು ?
 ಅ) ಇಂದು ನಾಳೆ ಇನ್ನಿಲ್ಲ ಹೇಳಿದ ಸಮಯಕ್ಕೆ ತಪ್ಪೂಲ್ಲ
 ಆ) ಅತಿ ಬೇಗನೆ ನಾಗರೀಕರಿಗೆ ಸೇವೆ ಒದಗಿಸುವುದು
 ಇ) ನಾಗರಿಕರಿಗೆ ನಿಗಧಿತ ಸಮಯದಲ್ಲಿ ಮಾಹಿತಿ ನೀಡುವುದು
 ಈ) ಮೇಲಿನ ಎಲ್ಲಾವೂ
೨೨) ಸಕಾಲ ಕಾರ್ಯಕ್ರಮ ಯಾವಾಗ ಜಾರಿಗೆ ಬಂದಿತು ?
 ಅ) ೦೨-೦೪-೨೦೧೨ ಆ) ೦೨-೦೩-೨೦೧೨
 ಇ) ೦೨-೦೫-೨೦೧೨ ಈ) ೦೫-೦೪-೨೦೧೨
 ೨೩) ಜಾತಿ ಪ್ರಮಾಣ ಪತ್ರಗಳು ಯಾರು ನೀಡುತ್ತಾರೆ ?
 ಅ) ತಹಿಸೀಲ್ದಾರ್      ಆ) ಜಿಲ್ಲಾಧಿಕಾರಿ ಇ) ಪ್ರಾದೇಶಿಕ ಆಯುಕ್ತರು ಈ) ಪಂಚಾಯಿತಿಯ ಕಾರ್ಯದರ್ಶಿಗ
 ೨೪) ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರಗಳು ಎಷ್ಟು ದಿನಗಳ ಒಳಗೆ
 ಸಂಬಂಧಪಟ್ಟ ಅಧಿಕಾರಿ ನಾಗರಿಕರಿನಿಗೆ ಕೊಡುತ್ತಾರೆ ?   
 ಅ) ೧೫ ದಿನಗಳ ಒಳಗೆ       
 ಆ) ೨೧ ದಿನಗಳ ಒಳಗೆ
 ಇ) ೩೦ ದಿನಗಳ ಒಳಗೆ
 ಈ) ೧೮ ದಿನಗಳ ಒಳಗೆ
೨೫) ನಿರುದ್ಯೋಗ ಪ್ರಮಾಣ ಪತ್ರ ಯಾರು ನೀಡುತ್ತಾರೆ ?
 ಅ) ಗ್ರಾಮ ಲೆಕ್ಕಿಗ
 ಆ) ಪಂಚಾಯ್ತಿ ಕಾರ್ಯದರ್ಶಿಗಳು
 ಇ) ತಹಿಸೀಲ್ದಾರ್
 ಈ) ಜಿಲ್ಲಾಧಿಕಾರಿ
೨೬) ಖಾತಾ ಬದಲಾವಣೆ ಯಾರು ಮಾಡುತ್ತಾರೆ ?
 ಅ) ಗ್ರಾಮ ಲೆಕ್ಕಿಗ
 ಆ) ಪಂಚಾಯ್ತಿ ಕಾರ್ಯದರ್ಶಿಗಳು
 ಇ) ತಹಿಸೀಲ್ದಾರ ಈ) ಜಿಲ್ಲಾಧಿಕಾರಿ
    
೨೭) ಕಟ್ಟಡ ಪರವನಾಗಿ ನೀಡುವರು ಯಾರು ?
 ಅ) ಗ್ರಾಮ ಪಂಚಾಯ್ತಿ ಕಾರ್ಯದರ್ಶಿ
 ಆ) ಗ್ರಾಮ ಲೆಕ್ಕಿಗ
 ಇ) ತಹಿಸೀಲ್ದಾರ್
 ಈ) ಜಿಲ್ಲಾಧಿಕಾರಿ
೨೮) ಕುಡಿಯುವ ನೀರಿನ ನಿರ್ವಹಣೆ ಮತ್ತು ಸಣ್ಣ ಪ್ರಮಾಣದ ರಿಪೇರಿಗಳು ಯಾರು ಹತೋಟಿಗೆ
 ಬರುತ್ತದೆ ?
 ಅ) ಗ್ರಾಮ ಪಂಚಾಯ್ತಿ ಕಾರ್ಯದರ್ಶಿ   
 ಆ) ತಹಿಸೀಲ್ದಾರ್
 ಇ) ಜಿಲ್ಲಾಧಿಕಾರಿ
 ಈ) ಎಲ್ಲಾರು
೨೯) ಮಹಾತ್ಮಾಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕಾಮಗಾರಿಗಳಲ್ಲಿ ಕೆಲಸ ಮಾಡಲು ಅರ್ಜಿ ಸಲ್ಲಿಸಿದ ನಿರುದ್ಯೋಗ ಕಾರ್ಮಿಕರ ನೋಂದಣಿ ಮತ್ತು ಉದ್ಯೋಗ ಚೀಟಿಗಳನ್ನು ನೀಡುವರು ಯಾರು ?
 ಅ) ಪಂಚಾಯಿತ್ ಅಭಿವೃದ್ಧಿ ಅಧಿಕಾರಿ
 ಆ) ಶಾಲೆಯ ಮುಖ್ಯೋಪಾಧ್ಯಾಯರು
 ಇ) ತಹಿಸೀಲ್ದಾರ್     ಈ) ಎಲ್ಲಾರು
   
೩೦) ಅಂಗನವಾಡಿ ಕೇಂದ್ರಗಳಲ್ಲಿ ೦-೦೬ ವಯಸ್ಸಿನ ಮಕ್ಕಳ ನೊಂದಣಿ ಯಾರು ಮಾಡುತ್ತಾರೆ ?   
 ಅ) ಮಕ್ಕಳ ಅಭಿವೃದ್ಧಿ ಕಾರ್ಯಕ್ರಮ ಅಧಿಕಾರಿ
 ಆ) ಉಪ ನಿರ್ದೇಶಕರು
 ಇ) ಶಾಲಾ ಮುಖ್ಯೋಪಾದ್ಯಾರು
 ಈ) ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳ
 ೩೧) ಭೂ ರಹಿತ ಪ್ರಮಾಣ ಪತ್ರ ಯಾರು ನೀಡುತ್ತಾರೆ ?
 ಅ) ತಹಿಸೀಲ್ದಾರ್
 ಆ) ಸಹಾಯಕ ಕಂದಾಯ ಅಧಿಕಾರಿ
 ಇ) ಜಿಲ್ಲಾಧಿಕಾರಿ ಈ) ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು
೩೨) ವಿಧವಾ ವೇತನ ಅರ್ಜಿ ಅನುಮೋದನೆ ಮಾಡುವರು ಯಾರು ?
 ಅ) ಜಿಲ್ಲಾಧಿಕಾರ                 ಆ) ತಹಿಸೀಲ್ದಾರ್       
 ಇ) ಸಹಾಯಕ ಕಂದಾಯ ಅಧಿಕಾರಿ ಈ) ಗ್ರಾಮ ಪಂಚಾಯಿತಿ ಕಾರ್ಯದರ್ಶಿ

ಉಪಸಂಹಾರ
ಅಭ್ಯುದಯ:-
ಕರ್ನಾಟಕ ರಾಜ್ಯದ ಸಕಾಲ ಕಾರ್ಯಕ್ರಮದ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯರಿಗೆ ಇರುವ ಅರಿವನ್ನು ಕುರಿತು ಒಂದು ಅಧ್ಯಯನ ವಿಶೇಷವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಹೋಬಳಿಯ ಗ್ರಾಮ ಪಂಚಾಯಿತಿಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಸಕಾಲ ಕಾರ್ಯಕ್ರಮವು ಯಶಸ್ವಿಯಾಗಿ ಮುಂದುವರಿಯುತ್ತದೆ. ಇದರಿಂದಾಗಿ ಜನ ಸಾಮಾನ್ಯರಿಗೆ ಹೆಚ್ಚು ಅನುಕೂಲವಾಗಿದು ನಾಗರಿಕ ಸೇವೆಗಳನ್ನು ನಿಗಧಿತ ಸಮಯದಲ್ಲಿ ಪಡೆಯುತ್ತಿದ್ದಾರೆ.ಆದರೆ ಗ್ರಾಮೀಣ ಜನರಿಗೆ ಇದರ ಬಗ್ಗೆ ತಿಳುವಳಿಕೆ ಇಲ್ಲದಿರುವುದು ದುರದೃಷ್ಠಕರ ಸಂಗತಿಯಾಗಿದೆ.
ಸಂಶೋಧನೆಯನ್ನು ಕೈಗೊಂಡಾಗ ಗ್ರಾಮೀಣ ಜನರು ಪಂಚಾಯಿತ್ತಿಯಲ್ಲಿ ಯಾವ ರೀತಿಯಲ್ಲಿ ತಮ್ಮ ಅಧಿಕಾರ ಚಲಾಯಿಸುತ್ತಾರೆ ಮತ್ತು ಅವರ ಹಕ್ಕುಗಳು ಕರ್ತವ್ಯಗಳ ಬಗ್ಗೆ ಹಾಗೂ ಸರ್ಕಾರ ಜಾರಿಗೆ ತರುವ ವಿವಿಧ ರೀತಿಯ ಕಾರ್ಯಕ್ರಮಗಳ ಬಗ್ಗೆ ತಿಳುವಳಿಕೆ ಹೊಂದಿರುತ್ತಾರೆ.ಇದರಿಂದಾಗಿ ಗ್ರಾಮೀಣ ಜನರ ಸಮಸ್ಯೆಗಳಿಗೆ ಬೇಗನೇ ಪರಿಹಾರ ನೀಡಲು ಅನುಕೂಲವಾಗುತ್ತದೆ. ಸಕಾಲ ಕಾರ್ಯಕ್ರಮದಿಂದ ಗ್ರಾಮೀಣ ಜನರಿಗೆ ಹೆಚ್ಚು ಅನುಕೂಲವಾಗಿದೆ ಎಂಬುದಾಗಿ ಹೇಳಬಹುದು.