“ನ್ಯಾಯದ ದಾರಿಯಲ್ಲಿದ್ದುಕೊಂಡು ಲೋಕಾನುಬವವನ್ನು ಸ್ವಾನುಬವವಾಗಿಸಿಕೊಂಡು ಸ್ವಾನುಬವಗೊಂಡ ಲೋಕಾನುಬವವನ್ನು ಲೋಕಕ್ಕೆ ಬೇಕಾಗಿಸಿ ಲೋಕವಾಗುವುದು.” mobile-ನಡೆ ಉಲಿ: 9035911023
ಈ ಕಟುಸತ್ಯವ ಮರೆಯಬಾರದು ಅಣ್ಣ
ಕೆಟ್ಟವರ ಸಂಗಡ ಬೆರೆತರೆ
ಬಾಳ ಪಯಣವು ಬಗ್ಗಡದ ಹೆಗ್ಗುರುತು
ಈ ಕಟುಸತ್ಯವ ಮರೆಯಬಾರದು ಅಣ್ಣ
|
ಅವರೆಸೆವ ಕಶ್ಟವು ನೆಮ್ಮದಿಯ ನುಂಗುವುದು
ನಗೆಗಡಲು ಬತ್ತುವುದು
ಒಳಿತೆಲ್ಲವು ಮೋಸದ ಅಂಚಿನಲಿ ಕೊಳೆವುದು
ತೆರೆಮರೆಯ ಆಟದ ಕಾಟಕೆ ಜೀವ ಮಣಿಯುವುದು
ಸೇರದಿರು ಅಣ್ಣ, ಸೇರಿ ಸೆರೆಯಾಗದಿರು ಅಣ್ಣ
|
ಬಾಳ ಗುಲಾಬಿಗೆ ಬೇನೆ ಸಿಂಚಕರು, ಆ ವಂಚಕರು
ನೋಟವೆಲ್ಲ ಮಾಟವಾಗಿ ಕುಣಿವುದು
ಬಾಳ ನಾವೆ ತೂತುಗಳ ಸೆರೆಯಾಗುವುದು
ಅನುಬವದ ಮಾತನ್ನು ಕಡೆಗಣಿಸಬಾರದು
ಬೆರೆಯದಿರು ಅಣ್ಣ, ಬೆರೆತು ಬೇರೆಯಾಗದಿರು ಅಣ್ಣ
Subscribe to:
Posts (Atom)