ಬೆಂಗಳೂರಿನಲ್ಲಿರುವ ನಿರಾಶ್ರಿತರ ಪುನರ್ವಸತಿ ಕೇಂದ್ರದಲ್ಲಿನ ಸಮಲೋಚಕರಿಂದ ಪಡೆದ ಹೇಳ್ವಿಗಳನ್ನು ಈ ಕೆಳಗೆ ಬರೆಯಲಾಗಿದೆ.
೧. ಮಹಿಳೆಯರು ಹಾಗೂ ಪುರುಶರು ಯಾವಯಾವ ಕಾರಣಗಳಿಗಾಗಿ ಬಿಕ್ಶಾಟನೆಯನ್ನು ಅವಲಂಬಿಸುತ್ತಾರೆಂದು ನಿಮಗೆ ಅನಿಸಿದೆ? ಮತ್ತು ಸಮಾಜಕಾರ್ಯದ ಹಿನ್ನಲೆಯಲ್ಲಿ ಹೇಗೆ ಇಂತಹ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುತ್ತಿದ್ದೀರಿ?
ಉ: ಮಹಿಳೆಯರು ಹೆಚ್ಚಾಗಿ ಪುರುಶರ ದವ್ರ್ಜನ್ಯದಿಂದ, ರೋಗ ಗ್ರಸ್ತಳಾದಾಗ ಮತ್ತು ಮಕ್ಕಳ ಅಸಡ್ಡೆತನದಿಂದ ಬಿಕ್ಶಾಟನೆಯನ್ನು ಅವಲಂಬಿಸುತ್ತಿದ್ದಾರೆಂದು ತಿಳಿದುಕೊಂಡಿದ್ದೇನೆ.
ಇನ್ನು ಪುರುಶರು ಕುಡಿಯುವ ಚಟ, ಮಯ್ಗಳ್ಳತನ
ಮತ್ತು ಇತರೆ ಕಾರಣಗಳಿಂದ ಬಿಕ್ಶಾಟನೆಯನ್ನು ಅವಲಂಬಿಸುತ್ತಾರೆ.
ಸಮಾಜಕಾರ್ಯದಲ್ಲಿನ ಆಪ್ತಸಮಾಲೋಚನೆ ಮತ್ತು ಪುನರ್ವಸತಿಯ ಸಯ್ದಾಂತಿಕ ಮಾರ್ಗದ ಮೂಲಕ ಪರಿಹಾರವನ್ನು ಪಡೆದುಕೊಳ್ಳಬಹುದು. ಇದರ ಜೊತೆಗೆ ನಯ್ತಿಕ ಮಾತುಗಳನ್ನು ಹೇಳುವುದರೊಂದಿಗೆ ಅವರು ಮತ್ತೆ ಬಿಕ್ಶೆ ಬೇಡದಂತೆ ಮಾಡಬಹುದು.
೨. ಎಂತಹ ಬಿಕ್ಶಕರಿಗೆ ಕಡಿಮೆ ಅವದಿಯಲ್ಲಿ ಆಪ್ತಸಮಲೋಚನೆಯನ್ನು ಮಾಡುವ ಮೂಲಕ ಪುನರ್ವಸತಿಯನ್ನು ಕಲ್ಪಿಸಬಹುದು? ವ್ರುತ್ತಿಪರ ಬಿಕ್ಶಕರಿಗೋ ಅತವಾ ಪರಿಸ್ತಿತಿಯ ಕಯ್ಗೊಂಬೆಯಾದವರಿಗೋ?
ಉ: ಸಮಾಜಕಾರ್ಯ ಕರ್ತ ಬಿಕ್ಶಕರೊಂದಿಗೆ ಕಾರ್ಯನಿರ್ವಹಿಸಬೇಕಾದರೆ ಈ ವ್ರುತ್ತಿಪರ ಬಿಕ್ಶಕರನ್ನು ಮನವಲಿಸುವುದೇ ಒಂದು ಸವಾಲಿನ ಕೆಲಸವಾಗಿದೆ. ಹೆಚ್ಚಾಗಿ ಯಾರು ಪರಿಸ್ತಿತಿಯ ಕಯ್ಗೊಂಬೆಯಾಗಿ ಅಂದರೆ, ಅನಿವಾರ್ಯವಾಗಿ ಬಿಕ್ಶೆ ಬೇಡುತ್ತಿರುತ್ತಾರೋ ಅವರಿಗೆ ಕಡಿಮೆ ಅವದಿಯಲ್ಲಿ ಆಪ್ತಸಮಾಲೋಚನೆಯನ್ನು ನೀಡುವ ಮೂಲಕ ಪುನರ್ವಸತಿಯನ್ನು ಕಲ್ಪಿಸಬಹುದು.
೩. ಹಿರಿಯರಿಗೆ ತಿಳುವಳಿಕೆಯನ್ನು ಹೇಳುವ ಸಂದರ್ಬದಲ್ಲಿನ ಮುಜುಗರಕ್ಕೆ ಪರಿಹಾರ?
ಉ: ಮೊದಮೊದಲು ಎಂತಹ ವ್ರುತ್ತಿಪರ ಸಮಾಜಕಾರ್ಯಕರ್ತರಿಗೆ ತನಗಿಂತ ಹಿರಿಯರಿಗೆ ತಿಳುವಳಿಕೆಯನ್ನು ಹೇಳುವಾಗ ಮುಜುಗರವಾಗುತ್ತಿರುತ್ತದೆ. ವ್ರುತ್ತಿಯಲ್ಲಿನ ಅನುಬವವು ಇದಕ್ಕೆ ಪರಿಹಾರ.
೪. ಬಿಕ್ಶಾಟನೆಯು ಬೂಗತ ದೊರೆಗಳಿಗೆ ಆದಾಯವನ್ನು ತರುವ ಉದ್ಯಮವಾಗಿರುತ್ತಿರುವ ಈ ಸನ್ನಿವೇಶದಲ್ಲಿ ಸಮಾಜಕಾರ್ಯಕರ್ತರು ಎದರಿಸಬಹುದಾದ ಸಂದಿಗ್ದತೆಯನ್ನು ಮತ್ತು ಇದಕ್ಕೆ ಪರಿಹಾರಕವಾಗಿ ಸಮಾಜಕಾರ್ಯದ ಆಚರಣೆಯಲ್ಲಿನ ಹೊಸ ಸಾದ್ಯತೆಯನ್ನು ಗುರುತಿಸಿ.
ಉ: ಬೂಗತ ದೊರೆಗಳಿಗೆ ಇದು ಒಂದು ಆದಾಯ ಮೂಲ. ಸಮಾಜಕಾರ್ಯಕರ್ತರಿಗೆ ಇಂತವರು ಕೊಲೆ ಬೆದರಿಕೆಯನ್ನು ಹಾಕುವ ಸಾದ್ಯತೆ ಇರುತ್ತದೆ. ಇದೆ ಹೆಚ್ಚಾಗಿ ಸಮಾಜಕಾರ್ಯಕರ್ತರನ್ನು ಸಂದಿಗ್ದತೆಗೆ ಈಡು ಮಾಡುವಂತದ್ದು ಆಗುತ್ತಿದೆ.
ಸಮಾಜಕಾರ್ಯ ವಿಶಯದಲ್ಲಿರುವ ವ್ಯಕ್ತಿಗತ ಕಾರ್ಯದ ವಿದಾನದಲ್ಲಿ ಅಪರಾದಶಾಸ್ತ್ರದ ಕೆಲವು ಸಾರವನ್ನು ಸೇರ್ಪಡೆ ಮಾಡಿದರೆ ಸಮಾಜಕಾರ್ಯದ ಆಚರಣೆಯನ್ನು ಇನ್ನು ಪರಿಣಾಮಕಾರಿಯಾಗಿ ಮಾಡಬಹುದಾಗಿದೆ. ಇಂತಹ ಸಂದಿಗ್ದತೆಯ ಮುಕ್ತತೆಗೆ ಇದು ಒಂದು ಉತ್ತಮ ಪರಿಹಾರವಾಗುತ್ತದೆ.
೫. ಬಿಕ್ಶಕರೊಂದಿಗೆ ವ್ಯವಹರಿಸುವಾಗ ಕಂಡುಬರುವ ಸಮಾಜಕಾರ್ಯದ ಆಚರಣೆಯಲ್ಲಿನ ಮೂರು ಲೋಪವನ್ನು ಗುರುತಿಸಿ.
ಉ: ಸಮಾಜಕಾರ್ಯದ ಆಚರಣೆಯಲ್ಲಿನ ಲೋಪವೆಂದರೆ, ೧. ವ್ಯವಸ್ತೆಯ ವಿರುದ್ದ ಹೋಗದಂತೆ ಇರುವ ಮಾರ್ಗದರ್ಶನ. ೨. ವ್ಯಕ್ತಿಯು ತನ್ನದೇ ಆದ ಸಿದ್ದಾಂತಕ್ಕೆ ಅಂಟಿಕೊಂಡಿರುವುದರಿಂದ ಸಮಾಜಕಾರ್ಯದ ಮೂಲಕ ಅತವಾ ಇನ್ಯಾವ ವಿದಾನದ ಮೂಲಕ ಆತನಿಗೆ ತಿಳುವಳಿಕೆಯ ಮಾತನ್ನು ಹೇಳಿದರೂ ಆತನನ್ನು ಬದಲಾಯಿಸಲು ಸಾದ್ಯವಾಗದಿರೋದು. ೩. ಸಮುದಾಯದವರ ಅಸಹಕಾರವಿದ್ದರೆ ಸಮಾಜಕಾರ್ಯವು ಅಸ್ತಿತ್ವದಲ್ಲಿರುವುದಿಲ್ಲ.
೬. ಬಿಕ್ಶಕರೊಡನೆ ಸಮಾಜಕಾರ್ಯವನ್ನು ಪರಿಣಾಮಕಾರಿಯಾಗಿ ಆಚರಿಸಲು ಪ್ರಶಿಕ್ಶಣಾರ್ತಿಗಳಿಗೆ ಕೆಲವು ಸಲಹೆಗಳನ್ನು ನೀಡಿ.
ಉ: ೧. ಪರಿಸ್ತಿತಿಯನ್ನು ವಿವಿದ ದ್ರುಶ್ಟಿಕೋನದ ಮೂಲಕ ವಿಶ್ಲೇಶಣೆ ಮಾಡುವ ಕವ್ಶಲ್ಯವನ್ನು ರೂಡಿಸಿಕೊಳ್ಳಬೇಕು. ೨. ಸಮಾಜಕ್ಕೆ ತನ್ನ ಕಾಣಿಕೆ ಹೇಗಿರಬೇಕು ಮತ್ತು ಅದರಿಂದ ಸಮಸ್ಯೆಯು ನಿವಾರಣೆ ಆಗುತ್ತದೆಯೇ ಎಂಬುವುದನ್ನು ಅರಿತು ಕಾರ್ಯ ಯೋಜನೆಯನ್ನು ಹಾಕಿಕೊಳ್ಳಬೇಕು. ೩. ಕೇವಲ ಸಮಾಜಕಾರ್ಯದ ವಿಶಯಕ್ಕೆ ಅಂಟುಕೊಳ್ಳದೆ ಸಾಮಾಜಿಕ ವಿಜ್ನಾನಗಳ ಅರಿವನ್ನು ಹೊಂದಬೇಕು. ೪. ಚಿಕ್ಕವರಿರಲಿ ದೊಡ್ಡವರಿರಲಿ ಅವರು ನೀಡುವ ಉತ್ತಮ ಸಲಹೆಗಳನ್ನು ಸ್ವೀಕರಿಸಿ ಅವುಗಳ ಸಾದಕ ಬಾದಕವನ್ನು ವಿಶ್ಲೇಶಿಸಿ ಮುಂದಿನ ಹೆಜ್ಜೆಯನ್ನು ಇಡಬೇಕು.
೭. ಇಶ್ಟು ದಿನದ ವ್ರುತ್ತಿ ಅನುಬವದ ಮೂಲಕ ನಿಮ್ಮಲ್ಲಾದ ಪರಿವರ್ತನೆ?
ಉ: ೧. ತಾಳ್ಮೆಯ ಮೂಲಕ ಕೆಟ್ಟ ವ್ಯವಸ್ತೆಗೆ ಬಾಹ್ಯವಾಗಿ ಹೊಂದಿಕೊಂಡು ವ್ಯವಸ್ತೆಯನ್ನು ತಳಮಟ್ಟದಿಂದ ಸುದಾರಿಸುವ ಕವ್ಶಲ್ಯವು ಸಮಾಜಕಾರ್ಯಕರ್ತರದಾಗಿರಬೇಕು ಎಂಬುವುದನ್ನು ತಿಳಿದುಕೊಂಡು ಕಾರ್ಯನಿರ್ವಹಿಸುತ್ತಿರುವುದು. ೨. ಸಮಾಜಕಾರ್ಯಕರ್ತ ತನ್ನ ಕಾರ್ಯಕ್ಕೆ ಸೀಮಿತನಾಗದೆ ಅವಶ್ಯವೆನಿಸಿದಾಗ ಇತರೆ ಕಾರ್ಯವನ್ನು ಕಯ್ಗೊಳ್ಳಬೇಕು ಎಂಬುವುದನ್ನು ತಿಳಿದು ಅದರಂತೆ ಕಾರ್ಯನಿರ್ವಹಿಸುತ್ತಿರುವುದು.