“ನ್ಯಾಯದ ದಾರಿಯಲ್ಲಿದ್ದುಕೊಂಡು ಲೋಕಾನುಬವವನ್ನು ಸ್ವಾನುಬವವಾಗಿಸಿಕೊಂಡು ಸ್ವಾನುಬವಗೊಂಡ ಲೋಕಾನುಬವವನ್ನು ಲೋಕಕ್ಕೆ ಬೇಕಾಗಿಸಿ ಲೋಕವಾಗುವುದು.” mobile-ನಡೆ ಉಲಿ: 9035911023
ಗಾಂದಿ ಕೇಳೋರಿಲ್ಲ; ಸೇಂದಿ ಮಾತಾಡೋರೇ ಎಲ್ಲ
(k.s ಪುಟ್ಟಣ್ಣಯ್ಯನವರು ವಿದಾನಸಬೆಯಲ್ಲಿ ಒಂದು ದಿನ ಹೇಳಿದ ಕೆಲವು ಹೇಳಿಕೆಯನ್ನು ಆದರಿಸಿ ಬರೆದ ಹಾಡು)
ಡಾಕ್ಟ್ರು ಪ್ರತಿಬಟನೆ ನಡ್ಸುದ್ರೆ ಕರ್ದು ಮಾತಾಡ್ತೀರಿ
ಹೆಂಡುದ್ ಅಂಗ್ಡಿ ಬಾಗ್ಲು ಹಾಕಿದ್ರೆ ಏನ್ ಸಮಸ್ಯೆ ಅಂತೀರಿ
ಗಾಂದಿ ಪೋಟೊ ಇಟ್ಕೊಂಡು ಕೂರೋ ರಯ್ತ್ರು ನಿಮ್ ಕಣ್ಗೆ ಬೀಳೋದೇ ಇಲ್ಲ
ಗಾಂದೀನ್ ಮಾತಾಡ್ಸೋರು ಯಾರೂ ಇಲ್ಲ; ಸೇಂದೀಯಲ್ ಮಾತಾಡೋರೇ ಎಲ್ಲ
ಸ್ವಾಮಿ ಮೇಲ್ ಆಣೆ, ದಿಟನೇ ಹೇಳ್ತೀವ್ನಿ
ಗಾಂದೀನ್ ಮಾತಾಡ್ಸೋರು ಯಾರೂ ಇಲ್ಲ; ಸೇಂದೀಯಲ್ ಮಾತಾಡೋರೇ ಎಲ್ಲ
ಸೂಟು ಹಾಕ್ಕೊಂಡು ಬರೋ ಅಮೇರಿಕ್ದೋರ್ಗೆ ಕರ್ದು ನಮ್ ನೆಲಾನ್ ಕೊಡ್ತೀರಿ.
ರಾಜ್ಯುದ್ ಹಳ್ಳಿಗಳ್ಗೆ ಕಂದಾಯ ಗ್ರಾಮ್ದ ಸ್ತಾನ್ಮಾನ ನೀಡ್ರಿ ಅಂದ್ರೆ, ಇಲ್ದ ನೆಪ ಹೇಳ್ತೀರಿ
ಗುಡ್ಸ್ಲೇ ಇರದ ಕರ್ನಾಟಕುದ್ ಬಗ್ಗೆ ಮಾತಾಡ್ತೀರಿ
ನಾನೂರ್ ಮನೆ ಕೇಳುದ್ರೆ ನಾಲ್ಕು ಮನೆ ಕೊಡ್ತೀರಿ
ಸ್ವಾಮಿ ಮೇಲ್ ಆಣೆ, ದಿಟನೇ ಹೇಳ್ತೀವ್ನಿ
ನಾನೂರ್ ಮನೆ ಕೇಳುದ್ರೆ ನಾಲ್ಕು ಮನೆ ಕೊಡ್ತೀರಿ
ಪಟ್ಟಣದ ಜನಕ್ಕೆ ದಿನ್ದಿನಾಲು ತಲ್ತಲೆಗು ನೂರ್ಮೂವತ್ತಯ್ದ್ ಲೀಟ್ರು ನೀರು ಕೊಡ್ತೀವಿ ಅಂತೀರಿ
ನಮ್ ಹಳ್ಳಿ ಜನಕ್ಕೆ ಯಾಕೆ ದಿನ್ದಿನಾಲು ತಲ್ತಲೆಗೆ 85 ಲೀಟ್ರು ನೀರ್ನ ಕೊಡ್ತೀರಿ
ಹಾಲು-ನೀರು ಎಲ್ಲಾ ಲೀಟ್ರುಗಟ್ಲೆ ಪಟ್ಣುದೋರ್ಗೇ ನೋಡ್ರಿ
ನಮ್ ಹಳ್ಳಿಗಳಿಂದ್ ಎಲ್ಲಾ ಕೀಳ್ತಾವ್ರೇ ನೋಡ್ರಿ
ಸ್ವಾಮಿ ಮೇಲ್ ಆಣೆ, ದಿಟನೇ ಹೇಳ್ತೀವ್ನಿ
ನಮ್ ಹಳ್ಳಿಗಳಿಂದ್ ಎಲ್ಲಾ ಕೀಳ್ತಾವ್ರೇ ನೋಡ್ರಿ
ಹಳ್ಳಿಗಳಲ್ಲಿ ಚರಂಡಿ ಮಾಡೋದು ತಾಲ್ಲೂಕು ಪಂಚಾಯ್ತಿ.
ಅದ್ರ ಮೇಲೆ ದಾರಿ ಮಾಡೋದು ಜಿಲ್ಲಾ ಪಂಚಾಯ್ತಿ.
ಚರಂಡಿಗೆ ನೀರು ಬಿಡೋದು ಗ್ರಾಮ್ ಪಂಚಾಯ್ತಿ.
ವರ್ಶ್ದಿಂದ ಪಂಚಾಯ್ತಿಗಳ್ ಕೆಲ್ಸ ನಿಂತಲ್ಲೇ ನಿಂತವೆ
ಮರಿ ಕದ್ದು ಪಾಲು ಹಕ್ಕೊಂಡ್ರಂತೆ. ಹಂಗ್ ಆಗಯ್ತೆ ನೋಡ್ರಪ್ಪೋ ಇವ್ರ್ ಕೆಲ್ಸ
ಸ್ವಾಮಿ ಮೇಲ್ ಆಣೆ, ದಿಟನೇ ಹೇಳ್ತೀವ್ನಿ
ಮರಿ ಕದ್ದು ಪಾಲು ಹಕ್ಕೊಂಡ್ರಂತೆ. ಹಂಗ್ ಆಗಯ್ತೆ ನೋಡ್ರಪ್ಪೋ ಇವ್ರು ಮಾಡೋ ಕೆಲ್ಸ
ಕನ್ನಡ ಭಾಷೆನ್ ಉಳಿಸಿ ಅನ್ನೋದು, ಕಾನ್ವೆಂಟ್ ಶಾಲೆಗೆ ಪರ್ಮಿಶನ್ ಕೊಡೋದು,
ಮದ್ಯಪಾನ ಆರೋಗ್ಯಕ್ಕೆ ಕೆಟ್ಟುದ್ದು ಅನ್ನೋದು, ಹೆಂಡ ಮಾರೋಕೆ ಲೈಸೆನ್ಸ್ ಕೊಡೋದು
ಹವ್ದ್ ಅಲ್ವೆ ಸರ್ಕಾರುದ್ ನೀತಿ?
ದಿಟನೇ ತಾನೆ ನಾ ಹೇಳಿದ್ದು?
ಭೂಮಿ ಜ್ಞಾನ ಇಲ್ದೋರು ಬೂಮ್ಗೆ ಬೆಲೆ ಕಟ್ತಾರೆ
ಆ ಪಕ್ಶುದ್ ಸರ್ಕಾರ ರಯ್ತರನ್ ಬಿಸ್ಲುಗೆ ತಳ್ತು
ಈ ಪಕ್ಶುದ್ ಸರ್ಕಾರ ಸುಗ್ರೀವಾಜ್ಞೆಯಿಂದ ರಯ್ತರನ್ ಬೆಂಕಿಗೆ ನೂಕ್ತು
ಯಾರ್ ಹತ್ರ ಹೇಳೋಣ ನಮ್ ಸಮಸ್ಯೆಯ?
ನೀವೇ ಹೇಳಿ
ಯಾರ್ ಹತ್ರ ಹೇಳೋಣ ನಮ್ ಸಮಸ್ಯೆಯ?
ಬನ್ನಿರಿ ಬನ್ನಿರಿ ನಾಡ ನಾಡಿಗಳೆ
ಒಗ್ಗಟ್ಟಲ್ಲಿ ಹೆಜ್ಜೆ ಹಾಕೋಣ,
ಎಡ ಬಲ ಬಿಡೋಣ,
ನೇರ ದಾರಿಯಲ್ಲಿ ಸಾಗೋಣ,
ಏಳಿಗೆಯ ಹೊಂದೋಣ
Subscribe to:
Post Comments (Atom)
No comments:
Post a Comment