ನಾಡ ನಾಡಿಯಾಗಿ ಕಾರ್ಯನಿರ್ವಹಿಸಲು ಪ್ರಕೃತಿಯ ಭಾಗವಾಗಿರುವ ಎಲ್ಲಾ ಮನುಜರೂ ಶಕ್ತರೆ. ಆದರೆ, ಬಹುತೇಕ ಪಕ್ಷಗಳು ಇದನ್ನರಿಯದೆ ಅಧಿಕಾರದ ಆಸೆಗಾಗಿ ಅಂಧರನ್ನೂ ಸಹ ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ. ಜಾನ್ಮಿಲ್ಟನ್ ರವರು ಜಗತ್ತಿನಲ್ಲಿಯೇ ಮೊದಲ ಸಲ ಸಾರ್ವಜನಿಕವಾಗಿ "ಜನತೆಗೆ ತಮ್ಮ ಅಭಿಪ್ರಾಯವನ್ನು ಹೇಳಿಕೊಳ್ಳಲು ಸ್ವಾತಂತ್ರ ತುಂಬಾ ಅವಶ್ಯಕ" ಎಂದು ಹೇಳಿದ್ದು ನಿಮಗೂ ತಿಳಿದಿರಬಹುದು. ಅಂಥ ವ್ಯಕ್ತಿಯೇ ಜನರ ಪರವಾಗಿ ನಿಂತ ಮೇಲೆ ಅವರ ಹಾಗೆ ಜನರ ಒಳಿತಿಗಾಗಿ ಕಾರ್ಯನಿರ್ವಹಿಸಲೇಬೇಕು ಎಂದು ಅಂಧರಿಗೂ ಅನಿಸುವುದಿಲ್ಲವೆ?
ಸಮಾಜಮುಖಿಯಾಗಿರುವ ಪಕ್ಷ ಯಾವುದೆಂದು ಇಂದು ಗುರುತಿಸಲು ಯಾರಿಗೂ ಒಂದು ಸುಳಿವೂ ಸಹ ಸಿಗುತ್ತಿಲ್ಲ. ಹಣ ಮತ್ತು ಅಧಿಕಾರಕ್ಕಾಗಿ ವಿವಿಧ ದಾರಿಗಳನ್ನು ಕಂಡುಕೊಂಡು ಎಲ್ಲವನ್ನು ಸಾಧಿಸಿದ ಬಳಿಕ ತಮ್ಮ ಹಿಡನ್ ಅಜೆಂಡವನ್ನು ಜನರ ಬದುಕಿನ ಮೇಲೆ ಒತ್ತಿಬಿಡುತ್ತಾರೆ. ರಾಜಕೀಯ ಕ್ಷೇತ್ರಕ್ಕೆ ಹಣವಿರದ ಯುಕ್ತಿ ಇರುವ ಅಂಗವಿಕಲರೇನು ಸಾಮಾನ್ಯರೂ ಸಹ ಬರಲು ಸಾಧ್ಯವಾಗುತ್ತಿಲ್ಲ. ಚುನಾವಣೆಯಲ್ಲಿ ನಿಲ್ಲಲು ಮನಸ್ಸು ಮಾಡುವ ಅಂಧರು ರಾಜಕೀಯ ಪಕ್ಷದವರನ್ನು ಭೇಟಿ ಮಾಡಿ ಅವಕಾಶವನ್ನು ಕೇಳಿದಾಗ ಅವರು "ನಾವೆ ನಿಂತು ಗೆಲ್ಲಲು ಕಷ್ಟವಾಗಿರುವುದರಿಂದ ನಿಮಗೆ ಆಗುತ್ತದೆಯೇ? ನಿನ್ನ ಬಳಿ ಎಷ್ಟು ಹಣವಿದೆ? ನೀನು ಎಷ್ಟು ಜನರನ್ನು ಹೊಂದಿದ್ದೀಯೇ?" ಎಂದು ಹೀಗೆಳೆಯುವವರು ಇದ್ದಾಗ್ಯೂ , ಜೇ.ಡಿ.ಎಸ್ ಬೀದರ್ ಜಿಲ್ಲೆ, ಮಂದಕನಳ್ಳಿ ತಾಲೂಕು, ಕಾಡವಾದ ಗ್ರಾಮದ ದಿಲೀಪ್ ಕಾಡವಾದ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೇಟ್ ನೀಡಿತ್ತು. ಇನ್ನು ಕೋಲ್ಕತ್ತಾದಿಂದ ಒಂದು ಸಲ ಸಿ.ಪಿ.ಎಂ ಪಕ್ಷದವರೂ ಸಹ ಅಂಧರೊಬ್ಬರಿಗೆ ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೇಟ್ ನೀಡಿ ಅವರನ್ನು ಗೆಲ್ಲಿಸಲು ಯತ್ನಿಸಿ ಯಶ ಕಂಡಿತು. ಈ ಎರಡೂ ಪಕ್ಷಗಳು ಕಾಳಜಿ ಪೂರ್ವಕ ಪ್ರಯತ್ನವನ್ನು ಮಾಡಿವೆ. ಹೀಗೆ ಕೆಲವೇ ಪಕ್ಷಗಳು ಅಂಧರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದರೂ ಅಂಧರು ಪಕ್ಷೇತರರಾಗಿ ನಿಂತು ತಮ್ಮ ಪ್ರಯತ್ನವನ್ನು ಮುಂದುವರಿಸುತ್ತಿರುವುದು ಸಂತೋಷವೇ ಆಗಿದೆ.
ಅಂತರರಾಷ್ಟ್ರೀಯದ ಮಟ್ಟದಲ್ಲಿ ಹೇಳುವುದಾದರೆ, ಜಮೈಕ ವು ತನ್ನ ಸೆನೆಟ್ಗೆ ಅಂಧರೊಬ್ಬರನ್ನು ಆಯ್ಕೆ ಮಾಡಿ ಅವರಿಗೆ ಸೆನೆಟ್ನ ಅಧ್ಯಕ್ಷ ಸ್ಥಾನವನ್ನು ನೀಡಿದೆ. ಅವರ ಹೆಸರು Floyd Morris ಎಂದು. ಇನ್ನು ಜಾನ್ಮಿಲ್ಟನ್ ರವರ ನಾಡಿನಲ್ಲಂತೂ ಒಳ್ಳೆಯ ಪದವಿಯನ್ನು ಅಲಂಕರಿಸಿದವರ ಪಟ್ಟಿಯೇ ಇದೆ. ಅವರಲ್ಲಿ
Gordon Brown ಮಾಜಿ ಪ್ರಧಾನಿಯಾಗಿದ್ದರೆ, ಹುಟ್ಟು ಅಂಧರಾದ David Blunkett ಗೃಹ ಖಾತೆಯ ಕಾರ್ಯದರ್ಶಿಯಾಗಿದ್ದರು. ಇನ್ನು ಅಮೇರಿಕಾದಲ್ಲೂ ಸಹ ನ್ಯೂಯಾರ್ಕ್ಗೆ David Paterson ಮಾಜಿ ರಾಜ್ಯಪಾಲರಾಗಿದ್ದರು. ಹೀಗೆ ಕಾಲೆಳೆವರ ನಡುವೆಯೂ ಅಂಧರಾದ ಕೆಲ ವ್ಯಕ್ತಿಗಳು ಸಮಾಜಕ್ಕಾಗಿ ಸಾಧನೆ ಮಾಡಿರುವುದು ಭಾರತದಲ್ಲಿನ ನಮಗೆ ಯಾವುದು ಅಸಾಧ್ಯ ಹೇಳಿ? ಭಾರತದಲ್ಲಿ ಬಹುತೇಕ ರಾಜಕೀಯ ಮಂದಿಗಳು ಕಾಲನ್ನು ಎಳೆಯುತ್ತಾ ಕಾಲವನ್ನು ಹರಣ ಮಾಡುತ್ತಿದ್ದಾರೆ. ನಾವು ಇದಕ್ಕೆ ತಲೆಯನ್ನು ಕೆಡಿಸಿಕೊಳ್ಳದೆ ನಾಡನಾಡಿಯಾಗಿದ್ದುಕೊಂಡು ಕಾಲೆಳೆವರ ನಡುವೆಯೂ ನಾವು ದೇಶವನ್ನು ಕಟ್ಟಲು ಅರಳೋಣ.