“ನ್ಯಾಯದ ದಾರಿಯಲ್ಲಿದ್ದುಕೊಂಡು ಲೋಕಾನುಬವವನ್ನು ಸ್ವಾನುಬವವಾಗಿಸಿಕೊಂಡು ಸ್ವಾನುಬವಗೊಂಡ ಲೋಕಾನುಬವವನ್ನು ಲೋಕಕ್ಕೆ ಬೇಕಾಗಿಸಿ ಲೋಕವಾಗುವುದು.” mobile-ನಡೆ ಉಲಿ: 9035911023
ಆರು ವೃತ್ತಗಳಲ್ಲಿ ನಾ ಬರೆದ ನಾಲ್ಕು ಸಾಲುಗಳ ಪದ್ಯಗಳು
1. ಮತ್ತೇಭವಿಕ್ರೀಡಿತ ವೃತ್ತ:
(ಕೂಡಿಸಿದ ಪದ್ಯ)
ಮನಸನ್ ನಿನ್ನೊಳು ಸೇರಿಸಲ್ ಕನಸು ನನ್ಮನ್ಸನ್ ಹಿಡೀದಪ್ಪಿತೇ
ಕನಸಿಂದ್ ಮನ್ಸನು ದೂರಿಡಲ್ ನನಸು ನಿನ್ನಿನ್ದಾಗದೇ ಹೋಯಿತೇ
ಬದುಕಲ್ ನೀನಿರದೇ ಸಲಕ್ ಸಲಕು ಹ್ರುದಯ್ ಪಟ್ಟನೇ ಇಂಗಿತೇ
ಬರದಿರ್ ನನ್ನೊಳು ನೀನು ನನ್ ಕೊರೆದು ನೆಲ್ದಲ್ ಹೂತು ಕುಶ್ಕುಶ್ನೆ ಬಾಳ್
ಗಣ: ಸ, ಭ, ರ, ನ, ಮ, ಯ, ಲ, ಗು
--
2. ಚಂಪಕಮಾಲಾ ವೃತ್ತ:
(ಕೂಡಿಸಿದ ಪದ್ಯ)
ಕಲಿಯುಗದಲ್ಲಿ ಯುಕ್ತಿಯನು ದುಡ್ಡಿಗೆ ಮಾರಿದ ನಾವು ಎದ್ದೆವಯ್
ಕಮುಸನ ಕೊಂದ ಕೌರವಿಗಳನ್ನು ಅಳಿಸ್ದ ಕಿಶೋರ ಬಿದ್ದನಯ್
ಕಟುಹಗೆಯಲ್ಲಿ ನಿನ್ನನು ಅಸೂಹೆ ಅದರ್ಮ ಗಳಿಂದ ಕೊಂದೆವೋ
ಕರಿವಡಲೋನೆ ನಮ್ಮಯ ಅಹಿಂಸೆ ಇರುಳ್ಗೆ ಗತೀಯ ಕಾಣಿಸಯ್
ಗಣ: ನ, ಜ, ಭ, ಜ, ಜ, ಜ, ರ
--
3. ಶಾರ್ದೂಲ ವಿಕ್ರೀಡಿತ ವೃತ್ತ:
(ಕೂಡಿಸಿದ ಪದ್ಯ)
ಅಂಬೇಡ್ಕರ್ ನಮಗಾಗಿ ಕಟ್ಳೆಯನು ಮಾಡ್ದಾಗಿಂದ ಎಲ್ಲಾರ್ಗು ಕುಶ್
ಕಾನೂನನ್ ಅಳಿಸೋರ ಕೈಗೆ ಮೊಳೆಯನ್ ಹಾಕ್ಬಿಟ್ಟು ನಿಲ್ಲಿಸ್ಬಿಡೋಣ್
ಏನೇಆಗಲಿ ನಾವ್ ಕಟುಕ್ರನು ಅಳಿಸ್ ನಾಡಲ್ಲಿ ಇದ್ದೇಬಿಡೋಣ್
ಎಲ್ಲರ್ಗಾಗಿ ಇದನ್ ಬರೆದ್ ಕೊಡುಗೆನೀಡ್ ದಂತೋರ್ಗೆ ನಾವ್ ಅರ್ಪಿತಮ್
ಗಣ: ಮ, ಸ, ಜ, ಸ, ತ, ತ, ಗು
--
4. ಉತ್ಪಲಮಾಲಾವೃತ್ತ:
(ಕೂಡಿಸಿದ ಪದ್ಯ)
ಆಗಸದಲ್ಲಿ ಸೂರ್ಯನಿಗೆ ಅಡ್ವಿರೊ ದಾರಿಯ ಕಂಡು ಹೇಳಿರೋ
ಬೂಮಿಯೊಳಕ್ಕೆ ನೀ ತೆರಳಿ ಮಾಗುವೆಯೋ ನರನೇ ತಿಳಿಸ್ಬಿಡೋ
ಗಾಳಿಯ ಹಿಡ್ದು ನಾವ್ ಉಸಿರು ಇಲ್ಲದೆ ಬಾಳಲು ಬಿಡ್ಸಿ ಹೇಳಿರೋ
ಹೂವು ನಗೋದ ಹೇಳಿಕೊಡು ಮಾನವ ಬೇಡದ ಜಾಣ್ಮೆ ಬೇಡವೋ
ಗಣ: ಭ, ರ, ನ, ಭ, ಭ, ರ, ಲ, ಗು
---
5. ಮಹಾಸ್ರಗ್ಧರಾವೃತ್ತ:
(ಕೂಡಿಸಿದ ಪದ್ಯ)
ಮನುವಿನ್ ಬುರ್ಡೇಲಿ ಕೇಡಂತೆ ವಿಕಲರುಗಳನ್ ಬಿಂಬಿಸಿದ್ ಚಂದವೇನ್ ಹೇಳ್
ಹೆಳವರ್ ಬೀದ್ಯಾಗೆ ಬಾಳೋದು ನರನು ದಿಟವಲ್ಲದ್ ಬದುಕ್ ಬಾಳಿದಂಗ್ ನೋಡ್
ನೆಲದವ್ಳಿಂದ್ ನಮ್ಮ ಬಾಳೆಂದು ನರಮನುಶ ತಿಳ್ಕೊಂಡುಬಿಟ್ ಬಾಳ್ವೆಮಾಡ್ಲೋ
ಎಲೆಯಂತ್ ನಾವೆಲ್ರು ಇರ್ವಾಗ ಕೊಳೆಯ ಬದುಕನ್ಬಿಟ್ ಒಳಿತ್ ಒಳ್ಗೆ ಬಾಳೋಣ್
ಗಣ: ಸ, ತ, ತ, ನ, ಸ, ರ, ರ, ಗು
--
6. ಸ್ರಗ್ಧರಾವೃತ್ತ:
(ಕೂಡಿಸಿದ ಪದ್ಯ)
ರಾಜ್ಕಾರ್ನೀನ್ ನಂಬಿ ಸೋತಾಯ್ತು ಕೊಲೆಗೆಡುಕರಿಂದ್ ಪಾಟ ಕಲ್ತಾಯ್ತು ಬಿಡ್ರೋ
ನೆಲ್ದವ್ಗೂ ಬಾನಿಗೂ ಈ ನರ ಹೊಣೆಯವನಾಗಿದ್ದು ತಪ್ಪಲ್ಲವೇನಯ್
ಹುಡ್ಕಾಡ್ದ್ರೂ ಸಾವಿಗಿಂದೂ ಸಹ ಗುಳುಗೆಯ ಕಾಣ್ಲಿಲ್ಲ ಸೋಲ್ನಲ್ಲಿ ಕುಂತ್ಯೋ
ಎಡ್ ಬಲ್ ಬಿಟ್ ದೇಶವನ್ ಕಟ್ಟಲು ತೊಡಗಿ ಮರುಳ್ಯೋಜನೇನ್ ಬಿಟ್ಟು ಆಳಯ್
ಗಣ: ಮ, ರ, ಭ, ನ, ಯ, ಯ, ಯ
Subscribe to:
Posts (Atom)