ಅರಿವೆನ ಗುಡಿ ಮುಂದೆ ಗುರುವಿನ ಸಿರಿಕಂಡೆ,
ಗುರು ಅರಿವ ಗುಡಿ ಸಿರಿಯ ಘನ ಘೋರ ಗದ್ದಲವು ಗರಿಗೆದರ ಹೊರಡಲಿದೆ
ಮೂಢ ಅರಿವನೋ ಮನವ?
ತಿರುಳು ತತ್ವದ ಕೊರಳು, ತಳವ ತಟ್ಟದೆ ಇರುಳು, ತರ್ಕ ತೆಕ್ಕೆಗೆ ಸಿಗದ ತಡೆವ ತೊಕ್ಕೊಂದಿರಲು ಮೂಢ ಅರಿವನೋ ಮನವ?
ಸಹನೆ ಸತ್ಯಕೆ ಸಿಂಧೂರ,
ತಾಳ್ಮೆ ತತ್ವಕೂ ಮುಂದು,
ಸಹನೆ ತಾಳ್ಮೆಯ ಸತ್ಯ ತತ್ವವೆ
ಮೂಢ ಅರಿವನೋ ಹಂ ಮನವ?
ಮುಕ್ತ ಯತ್ನಕು ಮುಂದು ಯುಕ್ತ ಶಕ್ತಿಯ ತಂದು: ಮುಕ್ತ ಯುಕ್ತಿಗೆ ಯತ್ನ ಶಕ್ತಿಯೋ ಮನವೆ ಅರಿತೆಯಾ ಮೂಢ?
ಬರೆದವರು:--ಅಶೋಕ.ಕೆ
e-mail: ashoktejasvi.557@gmail.com